Tag: ಲಾಂಗ್ ಡ್ರೈವ್

  • ಪ್ರೇಯಸಿ ಜೊತೆ ಲಾಂಗ್‌ಡ್ರೈವ್‌ಗಾಗಿ ಕಾರಿಲ್ಲದೇ ಪ್ರಿಯಕರನ ಪರದಾಟ – ಕಾರು ಕದ್ದು ಸ್ನೇಹಿತರಿಂದ ಸಹಾಯ

    ಪ್ರೇಯಸಿ ಜೊತೆ ಲಾಂಗ್‌ಡ್ರೈವ್‌ಗಾಗಿ ಕಾರಿಲ್ಲದೇ ಪ್ರಿಯಕರನ ಪರದಾಟ – ಕಾರು ಕದ್ದು ಸ್ನೇಹಿತರಿಂದ ಸಹಾಯ

    ಲಕ್ನೋ: ಪ್ರೇಯಸಿ ಜೊತೆ ಲಾಂಗ್‌ಡ್ರೈವ್‌ ಹೋಗಲು ಕಾರಿಲ್ಲದೇ ಪರದಾಡುತ್ತಿದ್ದ ಸ್ನೇಹಿತನಿಗಾಗಿ, ಕಾರು ಕಳ್ಳತನ ಮಾಡಿ ಫ್ರೆಂಡ್ಸ್ ಸಹಾಯ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ (Noida) ನಡೆದಿದೆ.

    ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಶ್ರೇಯ್, ಅನಿಕೇತ್ ನಗರ್ ಹಾಗೂ ದೀಪಾಂಶು ಭಾಟಿ ಎಂದು ಗುರುತಿಸಲಾಗಿದೆ. ಆದರೆ ಈ ಮೂವರ ಪೈಕಿ ಕಾರು ಕಳ್ಳತನಕ್ಕೆ ಯೋಜನೆ ರೂಪಿಸಿದ್ದವರು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಕಳ್ಳತನದ ಕೆಲವು ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.ಇದನ್ನೂ ಓದಿ: ಕೋರಮಂಗಲದಲ್ಲಿ ರಿಲಯನ್ಸ್ ರಿಟೇಲ್ ‘ಯೂಸ್ಟಾ’ ಸ್ಟೋರ್ ಓಪನ್ – ಯುವಜನರ ಫ್ಯಾಷನ್‌ ಬ್ರ್ಯಾಂಡ್‌

    ಇಬ್ಬರು ಕಾಲೇಜು ವಿದ್ಯಾರ್ಥಿಗಳು ಅವರ ಸ್ನೇಹಿತ ಹಾಗೂ ಆತನ ಪ್ರೇಯಸಿಯೊಟ್ಟಿಗೆ ಲಾಂಗ್‌ಡ್ರೈವ್‌ ತೆರಳಲು ಕಾರಿಲ್ಲದೇ ಇದ್ದಾಗ ಸಹಾಯ ಮಾಡಲು ಮುಂದಾಗಿದ್ದರು. ಗ್ರೇಟರ್ ನೋಯ್ಡಾದ ಶೋರೂಮ್ ಒಂದರಲ್ಲಿ ಕಾರನ್ನು ಕಳ್ಳತನ ಮಾಡುವ ಯೋಜನೆ ಹಾಕಿದ್ದರು.

    ಸೆ.26 ರಂದು ಇಬ್ಬರು ಆರೋಪಿಗಳು ಗ್ರೇಟರ್ ನೋಯ್ಡಾದ ಕಾರ್ ಬಜಾರ್‌ನಲ್ಲಿ ನಿಲ್ಲಿಸಿದ್ದ ಹುಂಡೈ ವೆನ್ಯೂ (Hundai Venue) ಕಾರನ್ನು ಟೆಸ್ಟ್ ಡ್ರೈವ್ ಮಾಡಲು ಕೇಳಿದ್ದಾರೆ. ಈ ವೇಳೆ ಕಾರ್ ಡೀಲರ್ ನಿಲ್ಲಿಸಿದ್ದ ಕಾರನ್ನು ಪಾರ್ಕಿಂಗ್‌ನಿಂದ ಹೊರತೆಗೆದು ಇಬ್ಬರನ್ನು ಕಾರಿಗೆ ಹತ್ತಿಸಿಕೊಂಡಿದ್ದಾನೆ. ಕಾರ್ ಡೀಲರ್ ಕಾರನ್ನು ಓಡಿಸುತ್ತಿದ್ದ. ಇಬ್ಬರಲ್ಲಿ ಒಬ್ಬ ಮುಂದೆ ಹಾಗೂ ಇನ್ನೊಬ್ಬ ಕಾರಿನ ಹಿಂಬದಿ ಸೀಟಿನಲ್ಲಿ ಕೂತಿದ್ದ. ಬಳಿಕ ಕಾರು ಅಲ್ಲಿಂದ ತೆರಳಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಅಲ್ಲಿಂದ ಕಾರು ಹೊರಟ ಬಳಿಕ ಇಬ್ಬರು ಆರೋಪಿಗಳು ಕಾರ್ ಡೀಲರ್‌ನನ್ನು ಹೊರಗೆ ತಳ್ಳಿ, ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಮಾಹಿತಿ ಪ್ರಕಾರ, ಪ್ರಕರಣ ನಡೆದ ಬಳಿಕ 100ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರೀಕ್ಷಿಸಲಾಗಿದ್ದು, ಆರೋಪಿಯನ್ನು ಪತ್ತೆ ಹಚ್ಚಲು ಹರಸಾಹಸಪಟ್ಟಿರುವುದಾಗಿ ತಿಳಿಸಿದ್ದಾರೆ. ಸದ್ಯ ಟಿಂಟೆಡ್ ಗ್ಲಾಸ್ ಮತ್ತು ನಗರ ಎಂದು ಬರೆದಿದ್ದ ಕಾರನ್ನು ಪೊಲೀಸರು ಪತ್ತೆ ಮಾಡಿದ್ದು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಟೇಕಾಫ್‌ ಆಗಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ – ಸತತ 2 ಗಂಟೆ ಆಕಾಶದಲ್ಲೇ ಗಿರಕಿ ಹೊಡೆದ ಏರ್‌ ಇಂಡಿಯಾ ಫ್ಲೈಟ್‌

  • ಲಾಂಗ್ ಡ್ರೈವ್ ಹೋಗಲು ಹಣಕ್ಕಾಗಿ ಕಳ್ಳತನಕ್ಕಿಳಿದಿದ್ದ ಲವ್ವರ್ಸ್ ಅರೆಸ್ಟ್

    ಲಾಂಗ್ ಡ್ರೈವ್ ಹೋಗಲು ಹಣಕ್ಕಾಗಿ ಕಳ್ಳತನಕ್ಕಿಳಿದಿದ್ದ ಲವ್ವರ್ಸ್ ಅರೆಸ್ಟ್

    – ಬಾಡಿಗೆ ನೆಪದಲ್ಲಿ ಮನೆಗೆ ಹೋಗಿ ಸಿಕ್ಕಿದ್ದು ಕಳವು

    ಬೆಂಗಳೂರು: ಲಾಂಗ್ ಡ್ರೈವ್ ಹೋಗಲು ಹಣವಿಲ್ಲ ಎಂದು ಕಳ್ಳತನಕ್ಕೆ ಇಳಿದ ಜೋಡಿಯೊಂದನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ವಿನಯ್ ಹಾಗೂ ಕೀರ್ತನಾ ಎಂದು ಗುರುತಿಸಲಾಗಿದ್ದು, ಇವರನ್ನು ಚಂದ್ರಾಲೇಔಟ್ ಠಾಣೆಯ ಪೊಲೀಸರು ಲಾಕ್ ಮಾಡಿದ್ದಾರೆ.

    ವಿನಯ್ ರಾಜಾಜಿನಗರದ ರೌಡಿಶೀಟರ್ ಆಗಿದ್ದು, ಈತ ಕೀರ್ತನಾಳನ್ನು ಲವ್ ಮಾಡುತ್ತಿದ್ದ. ಅಂತೆಯೇ ಕೀರ್ತನಾ ತನ್ನ ಪ್ರಿಯಕರನ ಬಳಿ ಲಾಂಗ್ ಡ್ರೈವ್ ಹಾಗೂ ಗೋಲ್ಡ್ ಗಿಫ್ಟ್ ಬೇಡಿಕೆಯಿಟ್ಟಿದ್ದಾಳೆ. ಆಗ ವಿನಯ್, ನಾನೇ ಕಳ್ಳ. ನಿನಗೇನೆ ಗಿಫ್ಟ್ ಕೊಡಿಸ್ಲಿ. ನಾನೊಬ್ಬ ರೌಡಿಶೀಟರ್ ಅಂತ ಕೀರ್ತನಾಳನ್ನ ಕಿಚಾಯಿಸುತ್ತಿದ್ದ. ಇತ್ತ ನೀನ್ ರೌಡಿ ಆದರೂ ನಿನ್ನನ್ನು ಲವ್ ಮಾಡಿದ್ದೀನಿ. ನಿನ್ನ ಜೊತೆ ಜೈಲಿಗೆ ಬರೋದಕ್ಕೂ ನಾನು ರೆಡಿ ಇದ್ದೀನಿ ಅಂತ ಕೀರ್ತನಾ, ವಿನಯ್ ಬಳಿ ಹೇಳಿದ್ದಳು. ಅದರಂತೆ ಲವ್ವರ್ ರೌಡಿಶೀಟರ್ ವಿನಯ್ ಜೊತೆ ಕಳ್ಳತನಕ್ಕೆ ಕೀರ್ತನಾ ಕೂಡ ಕೈ ಜೋಡಿಸಿದ್ದಾಳೆ. ಗಂಡ-ಹೆಂಡತಿಯಂತೆ ಬಾಡಿಗೆ ಮನೆ ಕೇಳಲು ಹೋಗುವ ನೆಪದಲ್ಲಿ ಈ ಖರ್ತನಾಕ್ ಲವ್ವರ್ಸ್ ಮನೆಗಳವು ಮಾಡ್ತಿದ್ದರು.

    ಮಾರುತಿ ನಗರದ ಕುಲಶೇಖರ್ ಎಂಬವರ ಮನೆಗೆ ಬಾಡಿಗೆಗೆ ಕೇಳುವ ನೆಪದಲ್ಲಿ ಹೋಗಿ ಕಳ್ಳತನ ಮಾಡಿದ್ದಾರೆ. ಮನೆ ಮಾಲೀಕನ ಮನೆಯಲ್ಲಿ ಬಾಡಿಗೆ ಮಾತಾಡುವ ನೆಪದಲ್ಲಿ ವಿನಯ್ ಮಾತಿಗಿಳಿತಿದ್ದ. ಈ ವೇಳೆ ಮಾಲೀಕರ ಮನೆ ತುಂಬಾ ಚೆನ್ನಾಗಿದೆ ಅಂತ ಮನೆ ನೋಡಲು ಕೀರ್ತನಾ ಮುಂದಾಗುತ್ತಿದ್ದಳು. ವಿನಯ್ ಮಾತಾಡಿಸುತ್ತಾ ಮೈಂಡ್ ಡೈವರ್ಟ್ ಮಾಡ್ತಿದ್ರೆ, ಇತ್ತ ಕೈಗೆ ಸಿಕ್ಕ ವಸ್ತುಗಳನ್ನ ಕೀರ್ತನಾ ಎಗರಿಸ್ತಿದ್ದಳು. ಇದನ್ನೂ ಓದಿ: ಕೆರೆ ನೋಡಲು ಬಂದವರಿಗೆ ಕೊರೊನಾ ವ್ಯಾಕ್ಸಿನ್

    ಕಳೆದ ಅಕ್ಟೋಬರ್ 4 ರಂದು ಕುಲಶೇಖರ್ ಮನೆಯಲ್ಲಿ 1 ಮೊಬೈಲ್ 1 ಲ್ಯಾಪ್ ಟಾಪ್ ಹಾಗೂ 15 ಸಾವಿರ ಹಣ ಎಗರಿಸಿದ್ರು. ಸದ್ಯ ಮನೆ ಮಾಲೀಕ ಕುಲಶೇಖರ್ ಕೊಟ್ಟ ದೂರಿನನ್ವಯ ಕಳ್ಳ ಲವ್ವರ್ಸ್ ಅರೆಸ್ಟ್ ಆಗಿದ್ದಾರೆ. ಸದ್ಯ ರೌಡಿ ಲವ್ವರ್ ಜೊತೆ ಕಳ್ಳತನಕ್ಕೆ ಹೋಗಿ ಪ್ರಿಯತಮೆ ಕೀರ್ತನಾ ಕೂಡ ಜೈಲು ಪಾಲಾಗಿದ್ದಾಳೆ.

  • ಸೆಕ್ಸ್ ಫೋಟೋ ನೋಡಿ ಪತ್ನಿಯನ್ನು ಗುಂಡಿಕ್ಕಿ ಕೊಂದ

    ಸೆಕ್ಸ್ ಫೋಟೋ ನೋಡಿ ಪತ್ನಿಯನ್ನು ಗುಂಡಿಕ್ಕಿ ಕೊಂದ

    – ಲಾಂಗ್ ಡ್ರೈವ್ ಕೊಲೆ ಪ್ರಕರಣಕ್ಕೆ ಟ್ವಿಸ್ಟ್

    ನವದೆಹಲಿ: ಲಾಂಗ್ ಡ್ರೈವ್ ಕೆರದುಕೊಂಡು ಹೊಗಿ ಪತ್ನಿಯನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪತ್ನಿಯ ಮೊಬೈಲಿನಲ್ಲಿ ಸೆಕ್ಸ್ ಫೋಟೋ ನೋಡಿ ಪತಿ ಆಕೆಯನ್ನು ಕೊಲೆ ಮಾಡಿದ್ದಾರೆ ಎಂಬ ಸತ್ಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

    ಲಾಂಗ್‍ ಡ್ರೈವ್ ಕರೆದುಕೊಂಡು ಹೋಗಿ ಪತ್ನಿ ನ್ಯಾನ್ಸಿ ಶರ್ಮಾಳನ್ನು ಕೊಲೆ ಮಾಡಿದ ಪತಿ ಸಾಹಿಲ್ ಚೋಪ್ರಾನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಸಾಹಿಲ್ ಕೊಲೆ ಮಾಡಿದ ಕಾರಣವನ್ನು ತಿಳಿಸಿದ್ದಾನೆ. ಇದನ್ನೂ ಓದಿ: ಲಾಂಗ್ ಡ್ರೈವ್‍ಗೆ ಕರೆದುಕೊಂಡು ಹೋಗಿ ಪತ್ನಿಯನ್ನು ಗುಂಡಿಕ್ಕಿ ಕೊಂದ

    ಮದುವೆಗೂ ಮೊದಲು ನ್ಯಾನ್ಸಿ ಹಾಗೂ ನಾನು ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿ ಇದ್ದೆವು. ಈ ವೇಳೆ ನ್ಯಾನ್ಸಿ ನನಗೆ ಆಕೆಯ ಸ್ನೇಹಿತರ ಬಗ್ಗೆ ಏನೂ ಹೇಳಿರಲಿಲ್ಲ. ಆಕೆ ಯಾವಾಗಲೂ ಫೋನಿನಲ್ಲಿ ಮಾತನಾಡುತ್ತಿದ್ದಳು. ಅಲ್ಲದೆ ಆಕೆಯ ಫೋನಿನಲ್ಲಿ ನಾನು ಸೆಕ್ಸ್ ಫೋಟೋಗಳನ್ನು ನೋಡಿದೆ. ಆಗ ನ್ಯಾನ್ಸಿ ನನಗೆ ಮೋಸ ಮಾಡುತ್ತಿದ್ದಾಳೆ ತಿಳಿಯಿತು. ಅಲ್ಲದೆ ಆಕೆಯ ಮೇಲೆ ಅನುಮಾನ ಮೂಡಲು ಶುರುವಾಯಿತು ಎಂದು ಪೊಲೀಸರ ಬಳಿ ಹೇಳಿದ್ದಾನೆ.

    ಅಲ್ಲದೆ ನ್ಯಾನ್ಸಿ ತುಂಬಾ ದಿನ ಮನೆಯಲ್ಲಿ ಇರುತ್ತಿರಲಿಲ್ಲ. ಇದರಿಂದ ನನ್ನ ಅನುಮಾನ ಮತ್ತಷ್ಟು ಹೆಚ್ಚಾಯಿತು. ನ್ಯಾನ್ಸಿ ಯಾವಾಗಲೂ ನನ್ನ ಬಳಿ ಹಣ ಕೇಳುತ್ತಿದ್ದಳು. ಖರ್ಚು ಹೆಚ್ಚಾಗುತ್ತಿದ್ದಂತೆಯೇ ನನ್ನ ಸಂಪಾದನೆ ಕಡಿಮೆ ಆಗುತ್ತಿತ್ತು. ನನ್ನ ಕಾರಿನ ವ್ಯವಹಾರ ಕೂಡ ಚೆನ್ನಾಗಿ ನಡೆಯುತ್ತಿರಲಿಲ್ಲ. ಈ ಕಾರಣದಿಂದಾಗಿ ನಮ್ಮಿಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಜಗಳವಾಡುವ ವೇಳೆ ನ್ಯಾನ್ಸಿ ನನ್ನ ಮೇಲೆ ವರದಕ್ಷಿಣೆ ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಳು ಎಂದು ಸಾಹಿಲ್ ತಿಳಿಸಿದ್ದಾನೆ.

    ಹಿರಿಯ ಪೊಲೀಸ್ ಅಧಿಕಾರಿ ಪ್ರಕಾರ, ಎರಡೂವರೆ ವರ್ಷಗಳ ಹಿಂದೆ ದೆಹಲಿಯ ರೋಹಿಣಿಯಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿಯೊಂದರಲ್ಲಿ ಇಬ್ಬರು ಭೇಟಿಯಾಗಿದ್ದರು. ಆಗ ನ್ಯಾನ್ಸಿ ಅಲ್ಲಿ ಇವೆಂಟ್ ಮ್ಯಾನೇಜ್‍ಮೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಇಬ್ಬರ ನಡುವೆ ಸ್ನೇಹವಾಗಿ ಅದು ಪ್ರೀತಿಗೆ ತಿರುಗಿತು. ಬಳಿಕ ನ್ಯಾನ್ಸಿ ತನ್ನ ಕುಟುಂಬಸ್ಥರನ್ನು ಬಿಟ್ಟು ಸಾಹಿಲ್ ಜೊತೆ ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿದ್ದಳು. ಮದುವೆಯಾಗುವಂತೆ ಇಬ್ಬರ ಕುಟುಂಬಸ್ಥರು ಒತ್ತಾಯಿಸಿದಕ್ಕೆ ಮಾರ್ಚ್ 27ರಂದು ಇಬ್ಬರು ವಿವಾಹವಾಗಿದ್ದರು.

    ಮದುವೆಯಾದ ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಯಿತು. ಜಗಳ ಹೆಚ್ಚಾಗಿ ನ್ಯಾನ್ಸಿ ಹಾಗೂ ಸಾಹಿಲ್ ಬೇರೆ ಬೇರೆ ವಾಸಿಸುತ್ತಿದ್ದರು. ಸಾಹಿಲ್, ನ್ಯಾನ್ಸಿ ಮೇಲೆ ಯಾವಾಗಲೂ ಸಂಶಯಪಡುತ್ತಿದ್ದನು. ಇದಲ್ಲದೇ ನ್ಯಾನ್ಸಿಗೆ ಹಣ ಹೆಚ್ಚು ಖರ್ಚು ಮಾಡುವ ಅಭ್ಯಾಸವಿತ್ತು. ಇದರಿಂದ ಬೇಸರಗೊಂಡ ಸಾಹಿಲ್ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನು. ನ್ಯಾನ್ಸಿ ಬಳಿ ಆಕೆಯ ಸ್ನೇಹಿತರು ಉಡುಗೊರೆಯಾಗಿ ನೀಡಿದ ಅಕ್ರಮ ಪಿಸ್ತೂಲ್ ಇತ್ತು. ಆ ಪಿಸ್ತೂಲ್ ಅನ್ನು ಸಾಹಿಲ್ ತೆಗೆದುಕೊಂಡನು.

    ನ. 11ರಂದು ಲಾಂಗ್ ಡ್ರೈವ್ ಹೋಗುವುದಾಗಿ ಹೇಳಿ ಸಾಹಿಲ್ ನ್ಯಾನ್ಸಿಯನ್ನು ಪಾನಿಪತ್‍ಗೆ ಕರೆದುಕೊಂಡು ಹೋಗಿದ್ದನು. ಪಾನಿಪತ್‍ಗೆ ತಲುಪಿದಾಗ ನ್ಯಾನ್ಸಿ ಕಾರ್ ನಿಲ್ಲಿಸಲು ಹೇಳಿದ್ದಳು. ಆಗ ಸಾಹಿಲ್ ಸಾರ್ವಜನಿಕ ಶೌಚಾಲಯದ ಬಳಿ ಕಾರು ನಿಲ್ಲಿಸಿದ್ದನು. ಅದು ನಿರ್ಜನ ಪ್ರದೇಶ ಆಗಿದ್ದ ಕಾರಣ ಸಾಹಿಲ್ ಅಲ್ಲಿಯೇ ನ್ಯಾನ್ಸಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ನ್ಯಾನ್ಸಿ ಮೃತಪಟ್ಟ ನಂತರ ಆಕೆಯ ಮೃತದೇಹವನ್ನು ಪೊದೆಯೊಳಗೆ ಎಸೆದು ಸಾಹಿಲ್ ಮನೆಗೆ ಹಿಂದಿರುಗಿದ್ದಾನೆ.

    ನ್ಯಾನ್ಸಿ ತಂದೆ ಸಂಜಯ್ ಶರ್ಮಾ ತಮ್ಮ ಮಗಳಿಗೆ ಹಲವು ಬಾರಿ ಕರೆ ಮಾಡಿದ್ದರು. ಆದರೆ ಕರೆ ಮಾಡಿದಾಗ ಕಾಲ್ ಕಟ್ ಮಾಡಲಾಗುತ್ತಿತ್ತು. ಸಂಜಯ್ ತಮ್ಮ ಮಗಳಿಗಾಗಿ ಹುಡುಕಾಟ ನಡೆಸಲು ಶುರು ಮಾಡಿದ್ದರು. ಮಗಳು ಎಲ್ಲಿಯೂ ಸಿಗದಿದ್ದಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂದರ್ಭದಲ್ಲಿ ಸಾಹಿಲ್, ನ್ಯಾನ್ಸಿ ಬೇರೊಬ್ಬ ವ್ಯಕ್ತಿ ಜೊತೆ ಮನೆಯಿಂದ ಓಡಿ ಹೋಗಿರಬಹುದು ಎಂದು ಸುಳ್ಳು ಕತೆಯನ್ನು ಸೃಷ್ಟಿಸಿದ್ದನು.

    ನ. 26ರಂದು ಪೊಲೀಸರು ನ್ಯಾನ್ಸಿ ಕಿಡ್ನ್ಯಾಪ್ ಆಗಿದ್ದಾಳೆ ಎಂದು ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಬಳಿಕ ಅವರು ನ್ಯಾನ್ಸಿ ಕಾಣೆಯಾದ ದಿನ ಸಾಹಿಲ್ ಫೋನ್ ಲೋಕೇಶನ್ ಹಾಗೂ ಕಾಲ್ ಡಿಟೇಲ್ಸ್ ಪರಿಶೀಲಿಸಿದ್ದರು. ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡನು. ಇದೇ ವೇಳೆ ಪತ್ನಿಯನ್ನು ಕೊಲೆ ಮಾಡಿದ್ದು ಯಾಕೆ ಎಂಬುದನ್ನು ಸಾಹಿಲ್ ಪೊಲೀಸರ ಬಳಿ ತಿಳಿಸಿದ್ದಾನೆ.

  • ಲಾಂಗ್ ಡ್ರೈವ್‍ಗೆ ಕರೆದುಕೊಂಡು ಹೋಗಿ ಪತ್ನಿಯನ್ನು ಗುಂಡಿಕ್ಕಿ ಕೊಂದ

    ಲಾಂಗ್ ಡ್ರೈವ್‍ಗೆ ಕರೆದುಕೊಂಡು ಹೋಗಿ ಪತ್ನಿಯನ್ನು ಗುಂಡಿಕ್ಕಿ ಕೊಂದ

    ನವದೆಹಲಿ: ಲಾಂಗ್ ಡ್ರೈವ್‍ಗೆ ಕರೆದುಕೊಂಡು ಹೋದ ಪತಿ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದೆ.

    ನ್ಯಾನ್ಸಿ ಶರ್ಮಾ (20) ಕೊಲೆಯಾದ ಪತ್ನಿ. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ನ್ಯಾನ್ಸಿ, 21 ವರ್ಷದ ಸಾಹಿಲ್ ಚೋಪ್ರಾನನ್ನು ಮದುವೆಯಾಗಿದ್ದಳು. ನ್ಯಾನ್ಸಿ ಲೇಟ್ ನೈಟ್ ಪಾರ್ಟಿ ಮಾಡುವುದು ಸಾಹಿಲ್‍ಗೆ ಇಷ್ಟವಿರಲಿಲ್ಲ. ಈ ವಿಷಯಕ್ಕಾಗಿ ಆತ ಪ್ರತಿದಿನ ಜಗಳವಾಡುತ್ತಿದ್ದನು. ಪತ್ನಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇದೆ ಎಂದು ಸಂಶಯಪಡುತ್ತಿದ್ದನು.

    ಪೊಲೀಸರ ಬಳಿ ಸಾಹಿಲ್, ವಿಚ್ಛೇದನಕ್ಕಾಗಿ ನಾನು ನನ್ನ ಪತ್ನಿ ಬಳಿ ಕೇಳಿದೆ. ಬಳಿಕ ಮದುವೆಯಾದ ಒಂದೇ ವರ್ಷಕ್ಕೆ ವಿಚ್ಛೇದನ ಸಾಧ್ಯವಿಲ್ಲ ಎಂಬುದು ನನಗೆ ತಿಳಿಯಿತು. ಹಾಗಾಗಿ ನಾನು ಆಕೆಯ ಕೊಲೆ ಮಾಡಲು ನಿರ್ಧರಿಸಿದೆ ಎಂದು ಹೇಳಿದ್ದಾನೆ.

    ನ. 9ರಂದು ನನ್ನ ಹಾಗೂ ನ್ಯಾನ್ಸಿ ನಡುವೆ ದೊಡ್ಡ ಜಗಳ ನಡೆಯಿತು. ಆಗ ನಾನು ನನ್ನ ಸಹೋದರ ಸಂಬಂಧಿ ಶುಭಂ ಹಾಗೂ ಡ್ರೈವರ್ ಚಾಲಕ ಜೊತೆ ಸೇರಿ ಆಕೆಯ ಕೊಲೆ ಮಾಡಲು ನಿರ್ಧರಿಸಿದೆ. ನ. 10ರಂದು ಅವರು ಅಕ್ರಮ ಪಿಸ್ತೂಲ್ ಮತ್ತು ಕಾಟ್ರ್ರಿಜ್‍ಗಳನ್ನು ನಮ್ಮ ಮನೆಗೆ ತಂದರು. ಬಳಿಕ ನಾನು ನ್ಯಾನ್ಸಿ ಬಳಿ ಹೋಗಿ ಕ್ಷಮೆ ಕೇಳಿ ಆಕೆಯನ್ನು ಲಾಂಗ್ ಡ್ರೈವ್‍ಗೆ ಕರೆದೆ. ಆಕೆ ಲಾಂಗ್ ಡ್ರೈವರ್ ಗೆ ಬರಲು ಒಪ್ಪಿದಾಗ ನಾವು ನಾಲ್ವರು ಹರಿಯಾಣದ ಪಾನಿಪತ್ ಕಡೆ ಹೋದೆವು ಎಂದು ಸಾಹಿಲ್ ತಿಳಿಸಿದ್ದಾನೆ.

    ನಾವು ಪಾನಿಪತ್‍ಗೆ ತಲುಪಿದಾಗ ನ್ಯಾನ್ಸಿ ಕಾರ್ ನಿಲ್ಲಿಸಲು ಹೇಳಿದ್ದಳು. ಆಗ ನಾನು ಸಾರ್ವಜನಿಕ ಶೌಚಾಲಯದ ಬಳಿ ಕಾರು ನಿಲ್ಲಿಸಿದೆ. ಅದು ನಿರ್ಜನ ಪ್ರದೇಶ ಆಗಿದ್ದ ಕಾರಣ ನ್ಯಾನ್ಸಿಯನ್ನು ಅಲ್ಲಿಯೇ ಕೊಲೆ ಮಾಡಲು ನಿರ್ಧರಿಸಿದೆ. ಆಕೆ ಸ್ವಲ್ಪ ಮುಂದೆ ಹೋದ ತಕ್ಷಣ ನಾನು ಹಿಂಬದಿಯಿಂದ ಗುಂಡಿಕ್ಕಿ ಕೊಂದೆ. ಅವಳು ಮೃತಪಡುವ ವೇಳೆ ನಾನು ಆಕೆಯ ಮೇಲೆ ಹಲ್ಲೆ ನಡೆಸಿದೆ. ನ್ಯಾನ್ಸಿ ಮೃತಪಟ್ಟ ನಂತರ ಆಕೆಯ ಮೃತದೇಹವನ್ನು ಪೊದೆಯೊಳಗೆ ಎಸೆದು ಮನೆಗೆ ಹಿಂದಿರುಗಿದ್ದೇವು ಎಂದು ಸಾಹಿಲ್ ಘಟನೆಯನ್ನು ವಿವರಿಸಿದ್ದಾನೆ.

    ನ್ಯಾನ್ಸಿ ತಂದೆ ಸಂಜಯ್ ಶರ್ಮಾ ತಮ್ಮ ಮಗಳಿಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ ಕರೆ ಮಾಡಿದಾಗ ಕಟ್ ಮಾಡಲಾಗುತಿತ್ತು. ಬಳಿಕ ಸಂಜಯ್ ಸಾಹಿಲ್ ಫೋನ್‍ಗೆ ಕರೆ ಮಾಡಿ ನ್ಯಾನ್ಸಿ ಕರೆ ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದಾರೆ. ಬಳಿಕ ಸಂಜಯ್ ತಮ್ಮ ಮಗಳಿಗಾಗಿ ಹುಡುಕಾಟ ನಡೆಸಲು ಶುರು ಮಾಡಿದ್ದರು. ಮಗಳು ಎಲ್ಲಿಯೂ ಸಿಗದಿದ್ದಾಗ ಪೊಲೀಸ್ ಠಾಣೆಗೆ ದೂರು ನೀಡಿದರು. ಈ ಸಂದರ್ಭದಲ್ಲಿ ಸಾಹಿಲ್, ನ್ಯಾನ್ಸಿ ಬೇರೊಬ್ಬ ವ್ಯಕ್ತಿ ಜೊತೆ ಮನೆಯಿಂದ ಓಡಿ ಹೋಗಿರಬಹುದು ಎಂದು ಸುಳ್ಳು ಕತೆಯನ್ನು ಸೃಷ್ಟಿಸಿದ್ದನು.

    ಪೊಲೀಸರು ಮೊದಲು ಈ ಪ್ರಕರಣವನ್ನು ಕಾಣೆಯಾದ ವ್ಯಕ್ತಿಯಂತೆ ಪರಿಗಣಿಸಿದ್ದರು. ಬಳಿಕ ಸಾಹಿಲ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು ಎಂದು ಸಂಜಯ್ ಆರೋಪಿಸಿದಾಗ ಪೊಲೀಸರು ತನಿಖೆ ಶುರು ಮಾಡಿದ್ದರು. ತನಿಖೆ ವೇಳೆ ಸಾಹಿಲ್, ನಾನು ಕಾರ್ ಡೀಲರ್ ಆಗಿದ್ದು, ನನ್ನ ಆರ್ಥಿಕವಾಗಿ ಉತ್ತಮ ಸ್ಥಾನದಲ್ಲಿದ್ದೇನೆ ಎಂದು ಹೇಳುವ ಮೂಲಕ ಸಂಜಯ್ ಮಾಡಿದ್ದ ಆರೋಪಗಳನ್ನು ತಳ್ಳಿ ಹಾಕಿದ್ದ.

    ನ. 26ರಂದು ಪೊಲೀಸರು ನ್ಯಾನ್ಸಿ ಕಿಡ್ನ್ಯಾಪ್ ಆಗಿದ್ದಾಳೆ ಎಂದು ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಬಳಿಕ ಅವರು ನ್ಯಾನ್ಸಿ ಕಾಣೆಯಾದ ದಿನ ಸಾಹಿಲ್ ಫೋನ್ ಲೋಕೇಶನ್ ಹಾಗೂ ಕಾಲ್ ಡಿಟೇಲ್ಸ್ ಪರಿಶೀಲಿಸಿದ್ದಾರೆ. ಬಳಿಕ ಆತನನ್ನು ವಿಚಾರಣೆ ನಡೆಸಿದ್ದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ನ್ಯಾನ್ಸಿಯ ಮೃತದೇಹ ಎಸೆದಿದ್ದ ಜಾಗಕ್ಕೆ ಪೊಲೀಸರನ್ನು ಕರೆದುಕೊಂಡು ಹೋಗಿದ್ದಾನೆ. ಮೂವರು ಆರೋಪಿಗಳನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಯಿತು. ಕೋರ್ಟ್ ಆರೋಪಿಗಳಿಗೆ ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.