Tag: ಲವ್

  • ಪ್ರೇಮ್ ಕಹಾನಿ: ಹರಿಪ್ರಿಯಾಗೆ ಮೂಗು ಚುಚ್ಚಿಸಿದ್ದೇ ನಟ ವಸಿಷ್ಠ ಸಿಂಹ

    ಪ್ರೇಮ್ ಕಹಾನಿ: ಹರಿಪ್ರಿಯಾಗೆ ಮೂಗು ಚುಚ್ಚಿಸಿದ್ದೇ ನಟ ವಸಿಷ್ಠ ಸಿಂಹ

    ಮೊನ್ನೆಯಷ್ಟೇ ನಟಿ ಹರಿಪ್ರಿಯಾಗೆ ಮೂಗು ಚುಚ್ಚಿಸಿಕೊಂಡಿದ್ದರು. ಆ ಎಕ್ಸಿಪೀರಿಯನ್ಸ್ ಕೂಡ ಹಂಚಿಕೊಂಡಿದ್ದರು. ಸಡನ್ನಾಗಿ ಹರಿಪ್ರಿಯಾ ಮೂಗು ಚುಚ್ಚಿಕೊಳ್ಳಲು ಕಾರಣವೇನು ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಸದ್ಯದಲ್ಲೇ ಹರಿಪ್ರಿಯಾ ಮದುವೆ ಆಗುತ್ತಿದ್ದು, ಮದುವೆಯ ಮುನ್ನ ಹೊಸ ಜೀವನಕ್ಕೆ ಕಾಲಿಡುತ್ತಿರುವ ಹುಡುಗನೇ ಹರಿಪ್ರಿಯಾಗೆ ಮೂಗು ಚುಚ್ಚಿಸಿದ್ದಾರೆ. ಆ ಹುಡುಗ ಬೇರೆ ಯಾರೂ ಅಲ್ಲ, ನಟ ವಸಿಷ್ಠ ಸಿಂಹ ಎನ್ನುವುದು ವಿಶೇಷ.

    ಮೂಗು ಚುಚ್ಚಿಸಿಕೊಂಡ ವಿಡಿಯೋದಲ್ಲಿ ವಸಿಷ್ಠ ಸಿಂಹ ಕೂಡ ಇದ್ದು, ಅವರೇ ಮುಂದೆ ನಿಂತು ತನ್ನ ಹುಡುಗಿಗೆ ಮೂಗು ಚುಚ್ಚಿಸಿದ್ದಾರೆ. ವಿಡಿಯೋ ಹಂಚಿಕೊಂಡ ಸಂದರ್ಭದಲ್ಲಿ ಆ ಹುಡುಗ ಯಾರು ಎಂದು ಗೊತ್ತಾಗಿರಲಿಲ್ಲ. ಇಬ್ಬರ ಮದುವೆ ವಿಚಾರ ಹೊರಬೀಳುತ್ತಿದ್ದಂತೆಯೇ ವಿಡಿಯೋದಲ್ಲಿ ವಸಿಷ್ಠ ಇರುವುದನ್ನು ಪತ್ತೆ ಮಾಡಲಾಗಿದೆ. ಆ ವಿಡಿಯೋ ಮತ್ತೆ ಈಗ ವೈರಲ್ ಕೂಡ ಆಗಿದೆ. ಇದನ್ನೂ ಓದಿ: ಭಾರತೀಯ ಸೈನ್ಯಕ್ಕೆ ಅಪಮಾನ: ನಟಿ ರಿಚಾ ಚಡ್ಡಾ ಕ್ಷಮೆಯಾಚನೆ

    ಹರಿಪ್ರಿಯಾ ಸ್ಯಾಂಡಲ್ ವುಡ್‌ನ ಖ್ಯಾತ ನಟ ವಸಿಷ್ಠ ಸಿಂಹ (Vasishta Simha) ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ವಸಿಷ್ಠ ಮತ್ತು ಹರಿಪ್ರಿಯಾ ಅವರದ್ದು ಲವ್ ಮ್ಯಾರೇಜ್. ಇಬ್ಬರೂ ತುಂಬಾ ಆಪ್ತರಾಗಿದ್ದಾರೆ. ಆಗಾಗ್ಗೆ ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಆದರೆ ಎಲ್ಲಿಯೂ ಪ್ರೀತಿಯ ವಿಚಾರ ಬಿಟ್ಟುಕೊಟ್ಟಿರಲಿಲ್ಲ. ಮೊನ್ನೆಯಷ್ಟೇ ದುಬೈನಲ್ಲಿ ಶಾಪಿಂಗ್‌ ಮಾಡಿದ್ದಾರೆ. ಆದರೀಗ ಇಬ್ಬರ ಪ್ರೀತಿ ವಿಚಾರ ಬಹಿರಂಗವಾಗಿದೆ.

    ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇನ್ನೊಂದು ತಿಂಗಳಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲು ಎಲ್ಲಾ ತಯಾರಿ ಕೂಡ ಮಾಡಿದ್ದಾರಂತೆ. ಅಲ್ಲದೇ ನಿಶ್ಚಿತಾರ್ಥದ ಬಳಿಕ ಅಂದರೆ ಎರಡು ತಿಂಗಳಲ್ಲಿ ಇಬ್ಬರೂ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಆದರೆ ಜೋಡಿ ಹಕ್ಕಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಪ್ರಿಯಾಂಕಾ ಚೋಪ್ರಾ ಪತಿಯಿಂದ ಮಾಜಿ ಲವರ್ ಒಲಿವಿಯಾಗೆ ಮಹಾಮೋಸ

    ಪ್ರಿಯಾಂಕಾ ಚೋಪ್ರಾ ಪತಿಯಿಂದ ಮಾಜಿ ಲವರ್ ಒಲಿವಿಯಾಗೆ ಮಹಾಮೋಸ

    ಬಾಲಿವುಡ್ ಹೆಸರಾಂತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಪತಿ, ಅಮೆರಿಕಾದ ಗಾಯಕ ನಿಕ್ ಜೋಸನ್ ಬಗ್ಗೆ ಗುರುತರ ಆರೋಪವೊಂದು ಕೇಳಿ ಬಂದಿದ್ದು, ನಿಕ್ ಅವರ ಮಾಜಿ ಲವರ್ ಒಲಿವಿಯಾ ಕಲ್ಪೋ ಮೊದಲ ಬಾರಿಗೆ ಈ ಆರೋಪ ಮಾಡಿದ್ದಾರೆ. ಪ್ರಿಯಾಂಕಾ ಮತ್ತು ನಿಕ್ ಮದುವೆಯ ಹೊತ್ತಿನಲ್ಲಿ ಕೆಲ ಹುಡುಗಿಯರು ನಿಕ್ ಬಗ್ಗೆ ಮಾತನಾಡಿದ್ದರು. ತಮ್ಮೊಂದಿಗೆ ಅವರಿಗೆ ಅಫೇರ್ ಇದೆ ಎಂದು ಹೇಳಿಕೊಂಡಿದ್ದರು. ಆ ಲಿಸ್ಟ್ ನಲ್ಲಿ ಒಲಿವಿಯಾ ಕಲ್ಫೋ (Olivia Culfo) ಮೊದಲಿಗರಾಗಿದ್ದರು.

    ಸತತ ಮೂರು ವರ್ಷಗಳ ಕಾಲ ನಿಕ್ ಜೊತೆ ತಾವು ಡೇಟಿಂಗ್ ಮಾಡಿರುವುದಾಗಿ ಒಲಿವಿಯಾ ಹೇಳಿಕೊಂಡಿದ್ದಾರೆ. ತಮ್ಮಿಬ್ಬರ ಸಂಬಂಧ ಎಷ್ಟೊಂದು ಗಾಢವಾಗಿತ್ತು ಎಂದೂ ಅವರು ವಿವರಿಸಿದ್ದಾರೆ. ಅಂದುಕೊಂಡಂತೆ ಆಗಿದ್ದರೆ, ತಾವಿಬ್ಬರೂ ಮದುವೆ ಆಗಬೇಕಿತ್ತು. ಆದರೆ, ನಿಕ್ (Nick Johnson) ಮೋಸದಿಂದಾಗಿ ನಾನು ದೂರವಾದೆ, ಪ್ರಿಯಾಂಕಾ ಮದುವೆ ಆಗಿದ್ದಾರೆ ಎಂದು ನೇರವಾಗಿಯೇ ಮಾಜಿ ಲವರ್ ಬಗ್ಗೆ ಆರೋಪ ಮಾಡಿದ್ದಾರೆ ಒಲವಿಯಾ. ಇದನ್ನೂ ಓದಿ:`ಮಿಸ್ ಯೂ ಸಾನ್ಯ’ ಎಂದು ಬಿಕ್ಕಿ ಬಿಕ್ಕಿ ಅತ್ತ ರೂಪೇಶ್ ಶೆಟ್ಟಿ

    ಗಾಢವಾಗಿ ಪ್ರೀತಿಸುತ್ತಿದ್ದವರು ಮತ್ತು ಮೂರ್ನಾಲ್ಕು ವರ್ಷಗಳ ಕಾಲ ಡೇಟಿಂಗ್ ನಲ್ಲಿದ್ದಾಗ, ಅದೊಂದು ಅದ್ಭುತ ಅನುಭವವಾಗಿತ್ತು ಎಂದು ಹೇಳಿಕೊಂಡಿರುವ ಒಲಿವಿಯಾ, ನಿಕ್ ಬಿಟ್ಟು ಹೋದ ಸಮಯದಲ್ಲಿ ತಮ್ಮೊಂದಿಗೆ ಹಣವಿರಲಿಲ್ಲ. ಬಾಡಿಗೆ ಕಟ್ಟಲೂ ದುಡ್ಡಿರಲಿಲ್ಲ. ರೇಷನ್ ತರಲು ಪರದಾಡಿದ್ದೇನೆ. ಅಷ್ಟೊಂದು ಪ್ರೀತಿಸುತ್ತಿದ್ದ ನಿಕ್, ಸಡನ್ನಾಗಿ ದೂರವಾದರು. ನನ್ನ ಹೆಸರು ಕೂಡ ಎಲ್ಲಿಯೂ ಕೇಳಿ ಬರದಂತೆ ಹತ್ತಿಕ್ಕಿದರು. ಅದೊಂದು ನರಕಯಾತನೆಯ ಸಮಯ ಎಂದು ಅವರು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನು ಪ್ರೀತಿಸಿದ ಮೊದಲ ಹುಡುಗಿ ಸಮಂತಾ: ಟ್ವೀಟ್ ಮಾಡಿದ ವಿಜಯ್ ದೇವರಕೊಂಡ

    ನಾನು ಪ್ರೀತಿಸಿದ ಮೊದಲ ಹುಡುಗಿ ಸಮಂತಾ: ಟ್ವೀಟ್ ಮಾಡಿದ ವಿಜಯ್ ದೇವರಕೊಂಡ

    ವಿಜಯ್ ದೇವರಕೊಂಡ (Vijay Devarakonda) ಅಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು ರಶ್ಮಿಕಾ ಮಂದಣ್ಣ (Rashmika Mandanna) ಅವರದ್ದು. ಇಬ್ಬರೂ ಡೇಟ್ ಮಾಡುತ್ತಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಮೊನ್ನೆಯಷ್ಟೇ ಈ ಜೋಡಿ ವಿದೇಶ ಪ್ರವಾಸಕ್ಕೂ ಹೋಗಿ ಬಂತು. ಅಲ್ಲದೇ, ಈ ಜೋಡಿ ಒಟ್ಟಿಗೆ ನ್ಯೂ ಇಯರ್ ಅನ್ನು ಗೋವಾದಲ್ಲಿ ಆಚರಿಸಿ ಹೆಚ್ಚು ಸದ್ದು ಮಾಡಿದ್ದರು. ಇಬ್ಬರ ನಡುವಿನ ಪ್ರೀತಿ (Love) ಬ್ರೇಕ್ ಆಗಿದೆ ಎನ್ನುವ ಹೊತ್ತಿನಲ್ಲಿ ವಿದೇಶ ಪ್ರವಾಸ ಮಾಡುವ ಮೂಲಕ ನಾವಿಬ್ಬರೂ ಇನ್ನೂ ಜೊತೆಯಾಗಿಯೇ ಇದ್ದೇವೆ ಎಂದು ತೋರಿಸಿದರು.

    ಇಂತಹ ಹೊತ್ತಿನಲ್ಲಿ ವಿಜಯ್ ದೇವರಕೊಂಡ ಮಾಡಿರುವ ಟ್ವೀಟ್ ವೈರಲ್ ಆಗಿದೆ. ವಿಜಯ್ ದೇವರಕೊಂಡ ಬಹಿರಂಗವಾಗಿಯೇ ಸಮಂತಾರನ್ನು ನಾನು ಕಾಲೇಜು ದಿನಗಳಲ್ಲಿ ಇಷ್ಟ ಪಡುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ. ‘ಕಾಲೇಜು ದಿನಗಳಲ್ಲಿ ನಾನು ಮೊದಲು ಇಷ್ಟ ಪಟ್ಟಿರೋ ಹುಡುಗಿ ಸಮಂತಾ. ಅವರನ್ನು ದೊಡ್ಡ ಪರದೆಯ ಮೇಲೆ ನೋಡಿ ಆನಂದಿಸುತ್ತಿದ್ದೆ. ಇದೀಗ ಹತ್ತಿರದಲ್ಲೇ ನೋಡುತ್ತಿರುವೆ. ಅವರು ಹೇಗೆ ಇದ್ದರೂ, ಏನೇ ಇದ್ದರೂ, ನಾನು ಇಷ್ಟಪಡುತ್ತಲೇ ಇರುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಗಂಧದಗುಡಿ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಅನುಭೂತಿ

    ಕಾಲೇಜು ದಿನಗಳಿಂದಲೂ ವಿಜಯ್ ದೇವರಕೊಂಡಗೆ ಸಮಂತಾ (Samantha) ಇಷ್ಟದ ನಟಿಯಂತೆ. ಇದೀಗ ಸಮಂತಾ ನಟನೆಯ ಯಶೋದಾ ಸಿನಿಮಾ ರಿಲೀಸ್ ಆಗುತ್ತಿದೆ. ಈ ಹೊತ್ತಿನಲ್ಲಿ ಸಮಂತಾರನ್ನು ವಿಜಯ್ ನೆನಪಿಸಿಕೊಂಡಿದ್ದಾರೆ. ತಮ್ಮ ಹಳೆಯ ಕ್ರಷ್ ಬಗ್ಗೆ ಮಾತನಾಡಿದ್ದಾರೆ. ಸಮಂತಾ ಕುರಿತಾಗಿ ಟ್ವೀಟ್ ಮಾಡುತ್ತಿದ್ದಂತೆಯೇ ರಶ್ಮಿಕಾ ಮಂದಣ್ಣ ಕಥೆ ಏನು ಎಂದು ಹಲವರು ಕಾಲೆಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾನ್ಯ ಅಯ್ಯರ್ ತಂಟೆಗೆ ಬಂದವರಿಗೆ ರೂಪೇಶ್ ಶೆಟ್ಟಿ ಖಡಕ್ ವಿಲನ್ : ಪ್ರಶಾಂತ್ ಸಂಬರ್ಗಿ ಎಚ್ಚರಿಕೆ

    ಸಾನ್ಯ ಅಯ್ಯರ್ ತಂಟೆಗೆ ಬಂದವರಿಗೆ ರೂಪೇಶ್ ಶೆಟ್ಟಿ ಖಡಕ್ ವಿಲನ್ : ಪ್ರಶಾಂತ್ ಸಂಬರ್ಗಿ ಎಚ್ಚರಿಕೆ

    ಕಿರುತೆರೆಯ ಬಿಗ್ ಶೋ ಬಿಗ್ ಬಾಸ್‌ನ ಲವ್ ಬರ್ಡ್ಸ್ ಆಗಿ ಮಿಂಚುತ್ತಿರುವ ಸಾನ್ಯ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಸಾನ್ಯ ತಂಟೆಗೆ ಬಂದ್ರೆ ರೂಪೇಶ್ ವಿಲನ್ ಆಗುತ್ತಾನೆ ಎಂದು ಸಂಬರ್ಗಿ ಮಾತನಾಡಿರುವ ಮಾತು ಹೈಲೆಟ್ ಆಗಿದೆ.

    ಸಾನ್ಯ ಮತ್ತು ರೂಪೇಶ್ ಲವ್ವಿ ಡವ್ವಿ ವಿಚಾರ ಮನೆಮಂದಿಗೆ ಮಾತ್ರವಲ್ಲ ನೋಡುಗರಿಗೆ ಈ ಜೋಡಿ ಇಷ್ಟವಾಗಿದೆ. ಹಾಗೆಯೇ ಮನೆಯಲ್ಲಿ ಈ ಜೋಡಿಯನ್ನು ಕಂಡ್ರೆ‌ ಉರಿದುಕೊಳ್ಳುವವರು ಇದ್ದಾರೆ. ಸದ್ಯ ರೂಪೇಶ್ ಮತ್ತು ಸಾನ್ಯ ಬಗ್ಗೆ ರಾಕೇಶ್ ಬಳಿ ಸಂಬರ್ಗಿ ಚರ್ಚಿಸಿದ್ದಾರೆ. ಮನೆಮಂದಿಯ ಬಗ್ಗೆ ಈ‌ ಮೊದಲೇ ತಿಳಿದುಕೊಂಡು‌ ಬಂದಿದ್ದೇನೆ. ಅವರ ಪಾಸಿಟಿವ್ & ನೆಗೆಟಿವ್ ಗೊತ್ತು ಎಂದು ರಾಕಿ ಬಳಿ ಪ್ರಶಾಂತ್ ಸಂಬರ್ಗಿ ಚರ್ಚೆ ಮಾಡಿದ್ದಾರೆ. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ

    ಮನೆಮಂದಿಯ ಪಾಸಿಟಿವ್ ಮತ್ತು ನೆಗೆಟಿವ್ ಬಗ್ಗೆ ರಾಕಿ ಮತ್ತು ಸಂಬರ್ಗಿ ಡಿಸ್ಕಸ್ ಮಾಡಿದ್ದಾರೆ. ಈ ವೇಳೆ ಸಾನ್ಯ, ರೂಪೇಶ್ ಬಗ್ಗೆ ಸಂಬರ್ಗಿ ಮಾತನಾಡಿದ್ದಾರೆ. ಸಾನ್ಯ ಒಳ್ಳೆಯ ಹುಡುಗಿ, ರೂಪೇಶ್ ಹಾರ್ಟ್ಲಿ ಒಳ್ಳೆಯ ಹುಡುಗ. ಆದರೆ ಅವನ ಕೆಲವೊಂದು ವೈಯಕ್ತಿಕ ವಿಚಾರಕ್ಕೆ ಕೈ ಹಾಕಿದ್ರೆ ಅವನಿಗೆ ಆಗಲ್ಲ. ಊಟ, ಸ್ನಾನ, ಸಾನ್ಯ ವಿಚಾರಕ್ಕೆ ರೂಪೇಶ್ ವಿಲನ್ ಆಗುತ್ತಾರೆ ಎಂದು ಸಂಬರ್ಗಿ ರಾಕೇಶ್ ಅಡಿಗ ಬಳಿ ಹೇಳಿದ್ದಾರೆ. ಸಾನ್ಯ ತಂಟೆಗೆ ಬಂದ್ರೆ ಶೆಟ್ರು ವಿಲನ್ ಆಗುತ್ತಾರೆ ಎಂಬ ಮಾತನ್ನ ಸಂಬರ್ಗಿ ಮಾತನಾಡಿದ್ದಾರೆ.

    ಕೆಲ ದಿನಗಳ ಹಿಂದೆ ರೂಪೇಶ್ ಯಾವಾಗಲೂ ಶೌಚಾಲಯದಲ್ಲಿಯೇ ಇರುತ್ತಾರೆ ಎಂದು ದೊಡ್ಡ ಚರ್ಚೆ ಆಗಿತ್ತು. ಆಗ ರೂಪೇಶ್ ಖಡಕ್ ಆಗಿಯೇ ಉತ್ತರ ನೀಡಿದ್ದರು. ಹಾಗಾಗಿ ರೂಪೇಶ್ ಆದ್ಯತೆ ಕೊಡುವ ಸ್ಥಾನದಲ್ಲಿ ಸಾನ್ಯ ಕೂಡ ಇದ್ದಾರೆ ಎಂಬ ಮಾತನ್ನ ಸಂಬರ್ಗಿ ಆಡಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಮನೆ ಆಟ ಯಾವ ರೀತಿ ತಿರುವು ಪಡೆಯಲಿದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ವಿಚಾರ : ಫಸ್ಟ್ ಟೈಮ್ ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ

    ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ವಿಚಾರ : ಫಸ್ಟ್ ಟೈಮ್ ಬಾಯ್ಬಿಟ್ಟ ರಶ್ಮಿಕಾ ಮಂದಣ್ಣ

    ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ವಿಚಾರ ಹಲವಾರು ವರ್ಷಗಳಿಂದ ಚರ್ಚೆ ಆಗುತ್ತಲೇ ಇದೆ. ಇಬ್ಬರೂ ಪ್ರೀತಿಸುತ್ತಿದ್ದಾರೆ (Love) ಎನ್ನುವುದರಿಂದ ಹಿಡಿದು ಇನ್ನೇನು ಮದುವೆ ಆಗೇ ಬಿಡ್ತಾರೆ ಎನ್ನುವಲ್ಲಿಗೆ ಗಾಸಿಪ್ ಹರಿದಾಡಿದವು. ಇದಕ್ಕೆ ಪೂರಕ ಎನ್ನುವಂತೆ ಈ ಜೋಡಿಯೇ ಒಟ್ಟೊಟ್ಟಿಗೆ ಓಡಾಡುತ್ತಿತ್ತು. ತಡರಾತ್ರಿ ಪಾರ್ಟಿಗಳಲ್ಲೂ ಹಾಜರಾತಿ ಇರುತ್ತಿತ್ತು. ಹೀಗಾಗಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಆಗಿತ್ತು.

    ಕಾಫಿ ವಿತ್ ಕರಣ್ ಶೋನಲ್ಲೂ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Devarakonda) ಅವರ ಡೇಟಿಂಗ್ ವಿಚಾರ ಹಲವು ಬಾರಿ ಬಂದು ಹೋಗಿದೆ. ರಶ್ಮಿಕಾ ಮಂದಣ್ಣ ಈ ಶೋನಲ್ಲಿ ಭಾಗಿ ಆಗದೇ ಇದ್ದರೂ, ಬೇರೆ ಬೇರೆ ನಟ ನಟಿಯರ ಕಾರಣದಿಂದಾಗಿಯೂ ಇವರ ಡೇಟಿಂಗ್ ವಿಚಾರ ಪ್ರಸ್ತಾವಾಗಿದೆ. ಇಷ್ಟೆಲ್ಲ ಸುದ್ದಿಯಾದರೂ, ಈವರೆಗೂ ರಶ್ಮಿಕಾ ಮಂದಣ್ಣ ಒಂದೇ ಒಂದು ಪ್ರತಿಕ್ರಿಯೆ ಕೂಡ ನೀಡಿರಲಿಲ್ಲ. ಮೊದಲ ಬಾರಿಗೆ ಈ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ:ಆಂಟಿ ಎಂದು ಕರೆದ ಗೊಬ್ಬರಗಾಲ ಮೇಲೆ ʻಮಂಗಳಗೌರಿʼ ಗರಂ

    ತಮ್ಮ ಡೇಟಿಂಗ್ (Dating) ವಿಚಾರದ ಕುರಿತು ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದರು. ನಮ್ಮಿಬ್ಬರ ಮಧ್ಯ ಅಂಥದ್ದೇನೂ ಇಲ್ಲ ಎಂದೇ ವಾದಿಸಿದ್ದರು. ಆಕೆ ಬೆಸ್ಟ್ ಫ್ರೆಂಡ್ ಅನ್ನುವ ಉತ್ತರವನ್ನು ಕೊಟ್ಟಿದ್ದರು. ರಶ್ಮಿಕಾ ಕೂಡ ಅದನ್ನೇ ಹೇಳಿದ್ದಾರೆ. ಸಿನಿಮಾ ರಂಗದಲ್ಲಿ ಇಬ್ಬರೂ ಬೆಳೆಯುತ್ತಿದ್ದೆವು. ಒಟ್ಟೊಟ್ಟಿಗೆ ಸಿನಿಮಾ ಮಾಡಿದೆವು. ಜಾಹೀರಾತಿನಲ್ಲೂ ಕಾಣಿಸಿಕೊಂಡೆವು. ಹಾಗಾಗಿ ಜೊತೆ ಇರಬೇಕಾಗುತ್ತಿತ್ತು. ಅದನ್ನೇ ಕೆಲವರು ಡೇಟಿಂಗ್ ಅಂದುಕೊಂಡರು ಅಂದಿದ್ದಾರೆ.

    ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಬ್ರೇಕ್ ಅಪ್ (Break Up) ಮಾಡಿಕೊಂಡಿರುವುದರಿಂದ ಮತ್ತೆ ಸಿನಿಮಾ ಮಾಡಲಾರರು ಎಂದೂ ಹೇಳಲಾಗಿತ್ತು. ಅದಕ್ಕೂ ಉತ್ತರ ನೀಡಿರುವ ರಶ್ಮಿಕಾ, ‘ನನ್ನ ಮತ್ತು ವಿಜಯ್ ಜೋಡಿಯನ್ನು ಎಲ್ಲರೂ ಮೆಚ್ಚಿದ್ದಾರೆ. ಮತ್ತೆ ಸಿನಿಮಾ ಮಾಡಬೇಕು ಎಂದು ಹಲವರು ಕೇಳಿದ್ದಾರೆ. ವಿಜಯ್ ಮತ್ತು ನಾನು ಮತ್ತೆ ಸಿನಿಮಾ ಮಾಡುತ್ತೇವೆ. ಇಬ್ಬರಿಗೂ ಒಟ್ಟಿಗೆ ಅಭಿನಯಿಸಬೇಕು ಅನ್ನುವ ಆಸೆ ಇದೆ ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ರಶ್ಮಿಕಾ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಲವ್ ಬ್ರೇಕ್ ಅಪ್ ಗೆ ಕಾರಣನಾದ ಕರಣ್ ಜೋಹಾರ್

    ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಲವ್ ಬ್ರೇಕ್ ಅಪ್ ಗೆ ಕಾರಣನಾದ ಕರಣ್ ಜೋಹಾರ್

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ (Dating) ವಿಚಾರ ಹಲವು ವರ್ಷಗಳಿಂದ ಹರಿದಾಡುತ್ತಲೇ ಇದೆ. ಒಟ್ಟೊಟ್ಟಿಗೆ ಹೋಟೆಲ್ ನಲ್ಲಿ ಕಾಣಿಸಿಕೊಳ್ಳುವುದು, ತಡರಾತ್ರಿ ಪಾರ್ಟಿ ಮಾಡುವುದು ಹಾಗೂ ನ್ಯೂ ಯಿಯರ್ ಅನ್ನು ಗೋವಾದಲ್ಲಿ ಆಚರಿಸೋದು ಹೀಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಹಾಗಾಗಿ ಇಬ್ಬರೂ ಡೇಟಿಂಗ್ ಮಾಡುವ ವಿಚಾರ ಆಗಾಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ.

    ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ವಿಚಾರ ಕೇವಲ ಟಾಲಿವುಡ್ ನಲ್ಲಿ ಮಾತ್ರವಲ್ಲ ಬಾಲಿವುಡ್ ವುಡ್ ನಲ್ಲೂ ಸದ್ದು ಮಾಡಿದೆ. ಹೀಗಾಗಿಯೇ ಕರಣ್ ಜೋಹಾರ್ (Karan Johar) ಕೂಡ ಈ ಇಬ್ಬರ ರಿಲೇಶನ್ ಶಿಪ್ ಬಗ್ಗೆ ಮಾತನಾಡಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಇಂಥದ್ದೊಂದು ಚರ್ಚೆ ನಡೆದಿದ್ದು, ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ಕುರಿತಾಗಿ ಕರಣ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಅದು ಕೂಡ ಚರ್ಚೆ ಆಗುತ್ತಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಶೋ ನಡೆಸಲು ಸಲ್ಮಾನ್ ಖಾನ್ ಗೆ 1000 ಕೋಟಿ ಸಂಭಾವನೆ: ಸತ್ಯ ಒಪ್ಪಿಕೊಂಡ ನಟ

    ಕಾಫಿ ವಿತ್ ಕರಣ್ ಶೋಗೆ ಬಾಲಿವುಡ್ ನಟಿ ನಿಹಾರಿಕಾ (Niharika) ಬಂದಿದ್ದರು. ಈ ಸಂದರ್ಭದಲ್ಲಿ ಕರಣ್ ಮಾತನಾಡ್ತಾ ತನ್ನನ್ನು ವಿಕ್ಕಿ ಕೌಶಲ್ ತಮ್ಮ ಮದುವೆಗೆ ಆಹ್ವಾನಿಸಲಿಲ್ಲ. ಅದು ಯಾಕೆ ಅಂತಾನೇ ಗೊತ್ತಾಗಲಿಲ್ಲ ಎನ್ನುತ್ತಾರೆ. ಆಗ ನಿಹಾರಿಕಾ, ನೀವೇನೂ ಬೇಸರ ಮಾಡಿಕೊಳ್ಳಬೇಡಿ. ನನ್ನ ಮದುವೆಗೆ ಕಂಡಿತಾ ಕರೆಯುತ್ತೇನೆ ಅಂತಾರೆ. ನಿಹಾರಿಕಾ ಹೀಗೆ ಆಹ್ವಾನ ನೀಡುತ್ತಿದ್ದಂತೆಯೇ ನಿಹಾರಿಕಾಳ ಮದುವೆ ಯಾರ ಜೊತೆ ಆಗಬೇಕು ಎಂದು ಚರ್ಚಿಸುತ್ತಾರೆ ಕರಣ್.

    ಮೊದಲು ಪ್ರಭಾಸ್ ಹೆಸರು ಸೂಚಿಸುವ ಕರಣ್, ನೀವು ಪ್ರಭಾಸ್ ಜೊತೆ ಮದುವೆ ಆಗಬಹುದು ಎನ್ನುತ್ತಾರೆ. ಪ್ರಭಾಸ್ ವಯಸ್ಸಲ್ಲಿ ದೊಡ್ಡವರು ಅಂತಾಳೆ. ಹಾಗಾದರೆ, ವಿಜಯ್ ದೇವರಕೊಂಡ (Vijay Devarakonda) ಜೊತೆ ಮದುವೆ ಆಗಬಹುದು. ಅವರು ಸಿಂಗಲ್ ಅನ್ನುತ್ತಾರೆ ಕರಣ್. ತಕ್ಷಣವೇ ವಿಜಯ್ ಮತ್ತು ರಶ್ಮಿಕಾ ಡೇಟಿಂಗ್ ವಿಚಾರ ಬರುತ್ತದೆ. ನನ್ನ ಪ್ರಕಾರ ಅವರಿಬ್ಬರ ಮಧ್ಯೆ ಅಂಥದ್ದೂ ಏನೂ ಇಲ್ಲ. ವಿಜಯ್ ಸಿಂಗಲ್ ಎನ್ನುವುದು ನನಗೆ ಗೊತ್ತು ಎಂದು ಹೇಳುವ ಮೂಲಕ ವಿಜಯ್ ಮತ್ತು ರಶ್ಮಿಕಾ ಲವ್ ಅನ್ನು ಬ್ರೇಕ್ ಅಪ್ ಮಾಡುತ್ತಾರೆ ಕರಣ್.

    Live Tv
    [brid partner=56869869 player=32851 video=960834 autoplay=true]

  • ಬ್ರೇಕ್‍ಅಪ್ ಮಾಡಿದ್ದಕ್ಕೆ ಪ್ರಿಯತಮೆಯ ನಗ್ನ ಫೋಟೋ ಲೀಕ್ ಮಾಡ್ದ

    ಬ್ರೇಕ್‍ಅಪ್ ಮಾಡಿದ್ದಕ್ಕೆ ಪ್ರಿಯತಮೆಯ ನಗ್ನ ಫೋಟೋ ಲೀಕ್ ಮಾಡ್ದ

    ನವದೆಹಲಿ: ಬ್ರೇಕ್‍ಅಪ್ ಮಾಡಿದ್ದಕ್ಕೆ ತನ್ನ ಮಾಜಿ ಗೆಳತಿಯ ನಗ್ನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಿದ ಆರೋಪದಡಿ 22 ವರ್ಷದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಜಾರ್ಖಂಡ್‍ನ ರಾಂಚಿಯ ಡೊರಾಂಡಾ ನಿವಾಸಿ ಮೊಹಮ್ಮದ್ ತಂಝೀಮ್ ಅಹ್ಮದ್ ಎಂದು ಗುರುತಿಸಲಾಗಿದೆ. ಈತನೊಬ್ಬ ಸ್ಕೆಚ್ ಆರ್ಟಿಸ್ಟ್ (Sketch Artist) ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಹಿಳಾ ಫಾಲೋವರ್ಸ್‍ಗಳನ್ನು ಹೊಂದಿದ್ದಾನೆ. ಇದೀಗ ಆರೋಪಿ ವಿರುದ್ಧ ದೆಹಲಿ ವಿಶ್ವವಿದ್ಯಾಲಯದ (Delhi University) ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ಸೈಬರ್ ನಾರ್ತ್ ಪೊಲೀಸ್ ಠಾಣೆಯಲ್ಲಿ (Cyber North Police Station) ದೂರು ದಾಖಲಿಸಿದ್ದಾಳೆ. ಇದನ್ನೂ ಓದಿ: ಪೌರ ಕಾರ್ಮಿಕರ ಕೆಲಸ ನೋಡಿದ್ರೆ ಕಣ್ಣೀರು ಬರುತ್ತೆ – ಬೊಮ್ಮಾಯಿ ಭಾವುಕ

    KILLING CRIME

    ಇನ್‍ಸ್ಟಾಗ್ರಾಮ್ ಮೂಲಕ ಫೆಬ್ರವರಿಯಲ್ಲಿ ಪರಿಚಯವಾದ ತಂಝೀಮ್ ಅಹ್ಮದ್ ಜೊತೆ ಚಾಟ್ ಮಾಡಲು ಆರಂಭಿಸಿದ ಯುವತಿ, ನಂತರದ ದಿನಗಳಲ್ಲಿ ಈತನೊಂದಿಗೆ ರಿಲೇಶನ್ ಶಿಪ್‍ನಲ್ಲಿದ್ದಳು. ಈ ವೇಳೆ ಆರೋಪಿ ಒತ್ತಾಯಕ್ಕೆ ಮಣಿದು ತನ್ನ ಖಾಸಗಿ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಆತನೊಂದಿಗೆ ಶೇರ್ ಮಾಡಿಕೊಂಡಿದ್ದಳು. ಕೆಲವು ದಿನಗಳ ಹಿಂದೆಯಷ್ಟೇ ಆರೋಪಿಯನ್ನು ಮೊದಲ ಬಾರಿಗೆ ಭೇಟಿಯಾದ ಯುವತಿ, ಈ ವೇಳೆ ಆಕಸ್ಮಿಕವಾಗಿ ಆರೋಪಿಯ ಮೊಬೈಲ್ ಫೋನ್ ಚೆಕ್ ಮಾಡಿದಾಗ ಅವಳ ನಗ್ನ ಫೋಟೋವನ್ನು ಗೂಗಲ್ ಡ್ರೈವ್‍ನಲ್ಲಿ ಆತ ಉಳಿಸಿಕೊಂಡಿರುವ ವಿಚಾರ ತಿಳಿದು ಬಂದಿದೆ. ಇಷ್ಟೇ ಅಲ್ಲದೇ ಇತರ ಹುಡುಗಿಯರ ಖಾಸಗಿ ಫೋಟೋ ಹಾಗೂ ವೀಡಿಯೋಗಳಿರುವುದನ್ನು ನೋಡಿದ್ದಾಳೆ. ಹೀಗಾಗಿ ಆರೋಪಿ ಜೊತೆಗೆ ಬ್ರೇಕ್‍ಅಪ್ ಮಾಡಿಕೊಂಡಿಕೊಂಡಿದ್ದಾಳೆ.

    ಇದರಿಂದ ಕೋಪಗೊಂಡ ತಂಝೀಮ್ ಅಹ್ಮದ್ ಯುವತಿಯ ನಗ್ನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಿದ್ದಾನೆ. ಇದೀಗ ಈ ಪ್ರಕರಣ ಸಂಬಂಧ ಆರೋಪಿಯ ಸೋಶಿಯಲ್ ಮೀಡಿಯಾ ಅಕೌಂಟ್ ವಿವರ ಸೇರಿದಂತೆ ಇತರೆ ಮಾಹಿತಿಗಳನ್ನು ದೂರುದಾರರಿಂದ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ಉಪ ಆಯುಕ್ತ (ಉತ್ತರ) ಸಾಗರ್ ಸಿಂಗ್ ಕಲ್ಸಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಹಿಂಸಾಚಾರ – PFI ವಿರುದ್ಧ ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ಕೇಸ್‌

    ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಹಾಗೂ ಸಿಮ್ ಕಾರ್ಡ್ ಅನ್ನು ಆತನಿಂದ ವಶಪಡಿಸಿಕೊಂಡಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಮಹಿಳೆಯರಿಂದ ಮೊಬೈಲ್ ಸಂಖ್ಯೆ ಪಡೆದುಕೊಂಡು ಮಹಿಳೆಯರೊಂದಿಗೆ ಆರೋಪಿ ಲಲ್ಲೆ ಹೊಡೆಯುತ್ತಿದ್ದನಲ್ಲದೇ, ಅವರ ಖಾಸಗಿ ಫೋಟೋಗಳನ್ನು ಕಳುಹಿಸುವಂತೆ ಕಿರುಕುಳ ನೀಡುತ್ತಿದ್ದ ಎಂಬ ವಿಚಾರ, ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಸರಿಗಮಪ’ ಹನುಮಂತುಗೆ ಪ್ರಪೋಸ್ ಮಾಡಿದ ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು

    ‘ಸರಿಗಮಪ’ ಹನುಮಂತುಗೆ ಪ್ರಪೋಸ್ ಮಾಡಿದ ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು

    ರಿಗಮಪ (Sarigamapa) ಖ್ಯಾತಿಯ ಹನುಮಂತುಗೆ (Hanumantu) ಮದುವೆ ಯಾವಾಗ ಎನ್ನುವ ಪ್ರಶ್ನೆ ಅನೇಕ ಸಲ ಕೇಳಿ ಬಂದಿದೆ. ಹಲವು ಬಾರಿ ಗಾಸಿಪ್ ಮೂಲಕ ಈ ದೇಸಿ ಗಾಯಕನ ಮದುವೆಯನ್ನು ಕೂಡ ಮಾಡಿದ್ದಾರೆ. ಇಂಥದ್ದೊಂದು ಸುದ್ದಿ ಆದಾಗ ನಾಚೂತ್ತಲೇ ಹನುಮಂತು ನಿರಾಕರಿಸಿದ್ದಾರೆ. ಈ ಹುಡುಗನ ಮದುವೆ ಆಗುವ ಹುಡುಗಿ ಹೇಗಿರಬಹುದು? ಯಾರೆಲ್ಲ ಪ್ರಪೋಸ್ ಮಾಡಬಹುದು ಎನ್ನುವ ಕುತೂಹಲವಂತೂ ಇದ್ದೇ ಇದೆ. ಜೀ ಕನ್ನಡದ ವೇದಿಕೆಯ ಮೇಲೆ ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು ಪ್ರಪೋಸ್ ಮಾಡಿದ್ದಾರೆ.

    ರಿಯಾಲಿಟಿ ಶೋ ನಲ್ಲಿ ನಿಶ್ವಿಕಾ ನಾಯ್ಡು (Nishvika Naidu) ಅತಿಥಿಯಾಗಿ ಬಂದಿದ್ದರು. ಅದೇ ವೇದಿಕೆಯಲ್ಲಿ ಹನುಮಂತು ಕೂಡ ರಾಕಿಭಾಯ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದರು. ಇದೇ ವೇಳೆಯಲ್ಲಿ ನಿರೂಪಕಿ ಶ್ವೇತಾ ಚಂಗಪ್ಪ ಗೆಸ್ಟ್ ಚೇರ್ ಮೇಲೆ ಕೂತಿದ್ದ ನಿಶ್ವಿಕಾನ ತೋರಿಸುತ್ತಾ, ಇಂತಹ ಸುಂದರ  ಹುಡುಗಿ ಕಂಡರೆ ಏನನಿಸುತ್ತದೆ ಎಂದು ಕೇಳಿದರು. ಆಗ ನಿಶ್ವಿಕಾ ಹಾರ್ಟ್ ಸಿಂಬಲ್ ತೋರಿಸುತ್ತಾ, ಪ್ರಪೋಸ್ (Propose) ಮಾಡಿದರು. ಅಲ್ಲದೇ, ನನಗಾಗಿ ಒಂದು ರೋಮ್ಯಾಂಟಿಕ್ ಸಾಂಗ್ ಹಾಡು ಎಂದು ನಿವೇದನೆ ಮಾಡಿದರು. ಅದಕ್ಕೆ ಹನುಮಂತು ನಾಚುತ್ತಲೇ ರಿಯ್ಯಾಕ್ಟ್ ಮಾಡಿದರು.

    ನಿಶ್ವಿಕಾ ನಾಯ್ಡು ರೋಮ್ಯಾಂಟಿಕ್ ಗೀತೆ (Singer) ಹೇಳಲು ಹೇಳಿದರೆ, ಭಜನಿ ಪದ ಹಾಡುತ್ತೇನೆ ಎಂದು ಉತ್ತರಿಸಿದರು ಹನುಮಂತು. ರೋಮ್ಯಾಂಟಿಕ್ ಆಗಿ ಮಾತನಾಡುವುದು ಹೇಗೆ ಗೊತ್ತಾ? ಎಂದು ನಿಶ್ವಿಕಾ ನಾಯ್ಡು ಕೇಳಿದರು. ಹನುಮಂತು ಇಲ್ಲವೆಂದರು. ಹಾಗಾದರೆ, ನಾನು ಹೇಳಿ ಕೊಡಲಾ? ಎಂದು ಮತ್ತೆ ಪ್ರಶ್ನೆ ಮಾಡಿದರು ನಿಶ್ವಿಕಾ. ಹೇಳಿಕೊಡು ‘ಅಕ್ಕಾ’ ಎನ್ನುತ್ತಾ ನಿಶ್ವಿಕಾ ಅವರ ರೋಮ್ಯಾಂಟಿಕ್ ಮೂಡ್ ಅನ್ನೇ ಹಾಳು ಮಾಡಿದರು.

    ಆದರೂ, ನಿಶ್ವಿಕಾಗಾಗಿ ಹನುಮಂತು ಹಾಡುತ್ತಾ, ‘ಸಂಸಾರ’ ಅಷ್ಟೊಂದು ಸಲೀಸಲ್ಲ. ಕೇಳು ಅಕ್ಕ ಎನ್ನುವ ಅರ್ಥದಲ್ಲಿ ಭಜನೆ ಪದವೊಂದನ್ನು ಹೇಳಿದರು. ಈ ಹಾಡು ಕೇಳುತ್ತಲೇ ಕೂತಲ್ಲಿಯೇ ನಿದ್ದೆಗೆ ಜಾರಿದರು ನಿಶ್ವಿಕಾ. ಇದೊಂದು ರೀತಿಯಲ್ಲಿ ಫನ್ನಿ ಫನ್ನಿಯಾಗಿಯೇ ವೇದಿಕೆಯ ಮೇಲೆ ನಡೆಯಿತು. ಆದರೆ, ಅದೇ ಮುಗ್ಧತೆಯಲ್ಲೇ ಹನುಮಂತು ವೇದಿಕೆಯ ಮೇಲಿದ್ದರು.

    Live Tv
    [brid partner=56869869 player=32851 video=960834 autoplay=true]

  • ಯುವತಿ ಮನೆಯವರಿಂದ ಮತಾಂತರಕ್ಕೆ ಒತ್ತಾಯ – ನೇಣುಬಿಗಿದ ಸ್ಥಿತಿಯಲ್ಲಿ ಹಿಂದೂ ಯುವಕನ ಶವ ಪತ್ತೆ

    ಯುವತಿ ಮನೆಯವರಿಂದ ಮತಾಂತರಕ್ಕೆ ಒತ್ತಾಯ – ನೇಣುಬಿಗಿದ ಸ್ಥಿತಿಯಲ್ಲಿ ಹಿಂದೂ ಯುವಕನ ಶವ ಪತ್ತೆ

    ದಿಸ್ಪುರ್: ನೇಣುಬಿಗಿದ ಸ್ಥಿತಿಯಲ್ಲಿ ಹಿಂದೂ ಯುವಕನ (Hindu Youth) ದೇಹ ಪತ್ತೆಯಾಗಿದ್ದು ಅಸ್ಸಾಂನಲ್ಲಿ (Assam) ಈಗ ಪ್ರತಿಭಟನೆ (Protest) ಆರಂಭವಾಗಿದೆ. ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕೆ ಗೆಳತಿ ಮನೆಯವರೇ ಯುವಕನನ್ನು ಹತ್ಯೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಬಂದಿದೆ.

    ಯುವಕನನ್ನು ಗೆಳತಿಯ (Lovers) ಮನೆಗೆ ಕರೆಸಿಕೊಂಡ ಒಂದು ದಿನದ ನಂತರ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ವಿಜೇತ ನಟಿಯನ್ನೇ ಬಿಡಲಿಲ್ಲ ಬಾಡಿ ಶೇಮಿಂಗ್‌ ಭೂತ

    ಬಿಕಿ ಬಿಶಾಲ್ ಮೃತ ಯುವಕ. ಈತನ ಸಾವು ಜಿಲ್ಲೆಯಲ್ಲಿ ಉದ್ವಿಗ್ನತೆ ಸೃಷ್ಟಿಸಿದೆ. ಮೃತ ಯುವಕನ ದೇಹದ ಕಣ್ಣು, ಮೂಗು ಹಾಗೂ ಕಿವಿಯ ಭಾಗಗಳಲ್ಲಿ ರಕ್ತ (Blood) ಬಂದಿರುವ ಗುರುತುಗಳಿತ್ತು. ಅವನು ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕೇ ಗೆಳತಿ ಮನೆಯವರೇ ಹತ್ಯೆ ಮಾಡಿದ್ದಾರೆ ಎಂದು ಯುವಕನ ಕುಟುಂಬಸ್ಥರು (Family) ಆರೋಪಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಚರ್ಚ್ ಅಧಿಕಾರಿಗಳು (Church Officials), ಹುಡುಗಿಯ ತಂದೆ ಹಾಗೂ ಚಿಕ್ಕಪ್ಪ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಬಿಕಿ ಬಿಶಾಲ್‌ನನ್ನು ಮತಾಂತರಗೊಳಿಸುವ ಉದ್ದೇಶದಿಂದ ಹತ್ಯೆ ಮಾಡಲಾಗಿದೆಯೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಬಿಆರ್‌ಟಿಎಸ್ ಬಸ್‌ನಲ್ಲಿ ಬೆಂಕಿ – ಹೊಗೆ ನೋಡಿ ಎದ್ನೋ ಬಿದ್ನೋ ಓಡಿದ ಪ್ರಯಾಣಿಕರು

    ಏನಿದು ಬಿಕಿ ಲವ್ ಸ್ಟೋರಿ?
    ಇದೇ ತಿಂಗಳ ಸೆಪ್ಟೆಂಬರ್ 3 ರಂದು ಬಿಕಿ ಬಿಶಾಲ್ ತನ್ನ ಗೆಳತಿಯೊಂದಿಗೆ ಓಡಿಹೋಗಿದ್ದ. ಒಂದು ವಾರದ ಬಳಿಕ ಮನೆಗೆ ಕರೆದುಕೊಂಡು ಬಂದಿದ್ದ. ಹುಡುಗಿ ಕ್ರಿಶ್ಚಿಯನ್ ಸಮಯದಾಯಕ್ಕೆ ಸೇರಿದವಳಾಗಿದ್ದಳು. ನಂತರ ಹುಡುಗಿ ಮನೆಯವರು ಕೆಲವು ಚರ್ಚ್ ಅಧಿಕಾರಿಗಳೊಂದಿಗೆ ಬಂದು ಬಲವಂತವಾಗಿ ಹುಡುಗಿಯನ್ನು ಕರೆದೊಯ್ದರು. ಕಳೆದ ಸೋಮವಾರ ಬಿಶಾಲ್‌ಗೆ ಹುಡುಗಿ ಮನೆಯವರಿಂದ ಒಂದು ಫೋನ್ ಕರೆ ಬಂದಿತ್ತು. ಬಳಿಕ ಮನೆಯಿಂದ ಹೊರಟ ಬಿಶಾಲ್ ವಾಪಸ್ ಹಿಂದಿರುಗಲಿಲ್ಲ. ಅವನ ಗೆಳತಿ ಮನೆವರಿಂದಲೇ ಕರೆ ಬಂದಿದ್ದು, ಅವರೇ ಹತ್ಯೆ ಮಾಡಿ ಮರಕ್ಕೆ ನೇತು ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಘಟನೆ ಸಂಬಂಧ ಮಾಹಿತಿ ನೀಡಿರುವ ಪೊಲೀಸರು, ಬಿಶಾಲ್ ಹುಡುಗಿಯನ್ನು ಮದುವೆಯಾಗಬೇಕಾದರೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾರೆ. ಇದಕ್ಕೆ ಇಬ್ಬರು ಚರ್ಚ್ ಅಧಿಕಾರಿಗಳ ಸಹಾಯವನ್ನೂ ಪಡೆದಿದ್ದಾರೆ. ಆದರೆ ಅವನು ಒಪ್ಪಲಿಲ್ಲ ಎಂಬ ಆರೋಪಗಳು ಹೇಳಿಬಂದಿವೆ. ನಾವು ಎಲ್ಲಾ ರೀತಿಯಲ್ಲೂ ತನಿಖೆ ಮಾಡುತ್ತಿದ್ದು, ಐವರನ್ನು ಬಂಧಿಸಿದ್ದೇವೆ. ಇನ್ನಷ್ಟು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಆದರೆ ಪ್ರಕರಣದ ಕುರಿತು ಬಾಲಕಿ ಮತ್ತು ಆಕೆಯ ಕುಟುಂಬದವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರಣ್ ಜೋಹಾರ್ ಬಾಳಲ್ಲೂ ಲವ್ ಬ್ರೇಕಪ್: ಇದೇನ್ ಗುರೂ ಹೊಸ ಸುದ್ದಿ ಅಂತಿದೆ ಬಿಟೌನ್

    ಕರಣ್ ಜೋಹಾರ್ ಬಾಳಲ್ಲೂ ಲವ್ ಬ್ರೇಕಪ್: ಇದೇನ್ ಗುರೂ ಹೊಸ ಸುದ್ದಿ ಅಂತಿದೆ ಬಿಟೌನ್

    ಬಾಲಿವುಡ್ ನಲ್ಲಿ ನಡೆಯುವ ಲವ್ (Love), ಬ್ರೇಕ್ ಅಪ್, ಅಫೇರ್ ಇಂತಹ ವಿಷಯಗಳು ಮೊದಲು ತಿಳಿಯುವುದು ಕರಣ್ ಜೋಹಾರ್ (Karan Johar) ಗೆ. ಹಾಗಾಗಿ ಕಾಫಿ ವಿತ್ ಕರಣ್ ಶೋನಲ್ಲಿ (Koffee With Karan) ಬಹುತೇಕ ಇಂತಹ ಪ್ರಶ್ನೆಗಳನ್ನೇ ಅತಿಥಿಗಳಿಗೆ ಕರಣ್ ಕೇಳುತ್ತಾನೆ. ಬಹುತೇಕ ಅವು ನಿಜವೂ ಆಗಿರುವುದರಿಂದ ಅನೇಕ ನಟ ನಟಿಯರು ಅವುಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರು ತೇಲಿಸಿ ಬಿಟ್ಟಿದ್ದಾರೆ. ಆದರೂ, ಕರಣ್ ಸುದ್ದಿ ಪಕ್ಕಾ ಆಗಿರುತ್ತದೆ.

    ಬಿಟೌನ್ (Bollywood) ಟಾ‍ಪ್ ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು ಹೀಗೆ ಅನೇಕರು ಕರಣ್ ಶೋ ಗೆ ಬಂದಿದ್ದಾರೆ. ತಮ್ಮ ಖಾಸಗಿ ಸಂಗತಿಗಳನ್ನು ಬಟಾಬಯಲು ಮಾಡಿಕೊಂಡಿದ್ದಾರೆ. ತಮ್ಮ ಸೆಕ್ಸ್ ಲೈಫ್ ನಿಂದ ಹಿಡಿದು ಮದುವೆ, ಅಫೇರ್, ಡೇಟಿಂಗ್ ಹೀಗೆ ಸೆನ್ಸಾರ್ ಇಲ್ಲದೇ ಮಾತನಾಡಿದ್ದಾರೆ. ಆದರೂ, ಈವರೆಗೂ ಕರಣ್ ವಿಚಾರವನ್ನು ಕೆದಕಲು ಯಾರೂ ಹೋಗಿರಲಿಲ್ಲ. ಅಲ್ಲದೇ, ಕರಣ್ ಜೀವನದ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಇದನ್ನೂ ಓದಿ:ಬಿಗ್ ಬಾಸ್ ಟಿವಿ ಸೀಸನ್‌ನಲ್ಲಿ ಮತ್ತೆ ಪ್ರಶಾಂತ್‌ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್‌

    ಮೊನ್ನೆಯಷ್ಟೇ ಕರಣ್ ಶೋ ಗೆ ಅನಿಲ್ ಕಪೂರ್ ಮತ್ತು ವರುಣ್ ಧವನ್ (Varun Dhawan) ಆಗಮಿಸಿದ್ದರು. ಅನಿಲ್ ಕಪೂರ್ ಕೂಡ ಯಾವುದನ್ನೂ ಮುಚ್ಚಿಟ್ಟುಕೊಳ್ಳದೇ ಎಲ್ಲವನ್ನೂ ಮಾತನಾಡಿದರು. ಈ ವಯಸ್ಸಲ್ಲೂ ಹ್ಯಾಂಡ್ ಸಮ್ ಆಗಿ ಕಾಣುವುದರ ಹಿಂದಿನಿ ಸಿಕ್ರೇಟ್ ಏನು ಅಂತ ಅನಿಲ್ ಕಪೂರ್ ಗೆ ಕೇಳಿದಾಗ, ಕ್ಷಣ ಹೊತ್ತೂ ಯೋಚಿಸಿದೇ ಸೆಕ್ಸ್ ಅಂದರು ಅನಿಲ್. ಹಾಗೆಯೇ ವರಣ್ ಧವನ್ ಅವರನ್ನು ಕೇಳಲಾಯಿತು. ಅದರಲ್ಲೂ ವರಣ್ ಬ್ರೇಕ್ ಅಪ್ ಬಗ್ಗೆ ಕರಣ್ ಕೇಳಿ  ತಾವೇ ತಗಲಕ್ಕೊಂಡಿದ್ದಾರೆ.

    ವರಣ್ ಮದುವೆಗೂ ಮುಂಚೆ ಆದ ಲವ್ ಬ್ರೇಕ್ ಅಪ್ (Breakup) ಬಗ್ಗೆ ಕರಣ್ ಕೇಳಿದಾಗ, ನನ್ನದೇನೂ ಸರಿ ನಿಮ್ಮ ಜೀವನದಲ್ಲೂ ಅದು ನಡೆದಿದೆಯಲ್ಲ ಎಂದು ನೇರವಾಗಿಯೇ ಕೇಳಿದರು. ಕರಣ್ ತಪ್ಪಿಸಿಕೊಳ್ಳುವುದಕ್ಕೆ ನೋಡಿದರು, ಆದರೂ ಧವನ್ ಸುಮ್ಮನೆ ಬಿಡಲಿಲ್ಲ. ಕೊನೆಗೂ ತನ್ನ ಜೀವನದಲ್ಲೂ ಲವ್ ಬ್ರೇಕ್ ಅಪ್ ಆಗಿದೆ. ನಾನು ಹೇಗೆ ಅಂತ ನಿನಗೆ ಗೊತ್ತಲ್ಲ. ಈ ವಿಷಯದಲ್ಲಿ ಸಹಕರಿಸು ಎಂದು ಹೇಳಿ ಟಾಪಿಕ್ ಮುಗಿಸಿಬಿಟ್ಟರು ಕರಣ್. ಅಲ್ಲಿಗೆ ಮೊದಲ ಬಾರಿಗೆ ಕರಣ್ ಲವ್ ಬ್ರೇಕ್ ಅಪ್ ವಿಚಾರ ಆಚೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]