Tag: ಲವ್

  • ಲವ್ವರ್ ತಂದೆ ಬೈದಿದ್ದಕ್ಕೆ ಮನನೊಂದು ರೈಲಿಗೆ ತಲೆಕೊಟ್ಟ ಯುವಕ

    ಲವ್ವರ್ ತಂದೆ ಬೈದಿದ್ದಕ್ಕೆ ಮನನೊಂದು ರೈಲಿಗೆ ತಲೆಕೊಟ್ಟ ಯುವಕ

    ಬೀದರ್: ತಾನು ಪ್ರೀತಿಸುತ್ತಿದ್ದ ಯುವತಿಯ ಪೋಷಕರು ಮನೆಗೆ ಬಂದು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಯುವಕನೋರ್ವ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಭಾಲ್ಕಿ ಪಟ್ಟಣದ ರೈಲ್ವೆ ಗೇಟ್ ಬಳಿ ನಡೆದಿದೆ.

    ಸಚಿನ್ ರಾಮ್‍ರಾವ್ ವಾಂಗೆ (18) ಆತ್ಮಹತ್ಯೆಗೆ ಶರಣಾದ ಯುವಕ. ಭಾಲ್ಕಿ ಪಟ್ಟಣದ ಗುರು ಪ್ರಸನ್ನ ಐಟಿಐ ಕಾಲೇಜಿನ ವ್ಯಾಸಂಗ ಮಾಡುತ್ತಿದ್ದ ಸಚಿನ್ ತನ್ನ ಕ್ಲಾಸ್‍ಮೇಟ್ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ.

    ಸಚಿನ್ ಮತ್ತು ಯುವತಿಯ ನಡುವಿನ ಲವ್ ವಿಷಯ ತಿಳಿದ ಯುವತಿಯ ಪೋಷಕರು ಸಚಿನ್ ಮನಗೆ ಬಂದು ಗಲಾಟೆ ಮಾಡಿದ್ದರು. ಈ ವೇಳೆ ಸಚಿನ್ ಪೋಷಕರಿಗೂ ಬೈದಿದ್ರು. ತನ್ನಿಂದಾಗಿ ಪೋಷಕರಿಗೆ ಸಾರ್ವಜನಿಕವಾಗಿ ಅವಮಾನವಾಯಿತು ಎಂದು ಮನನೊಂದು ಸಚಿನ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಗುಲ್ಬರ್ಗಾ ರೈಲ್ವೆ ವಿಭಾಗದ ಡಿವೈಎಸ್‍ಪಿ ಬಸವರಾಜು ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಘಟನಾ ಸ್ಥಳಕ್ಕೆ ಬೀದರ್ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ಮಂಡ್ಯ ಮತಾಂತರ ಪ್ರಕರಣಕ್ಕೆ ಟ್ವಿಸ್ಟ್: ನನ್ನನ್ನು ಯಾರು ಅಪಹರಿಸಿಲ್ಲ ಎಂದ ಯುವಕ

    ಮಂಡ್ಯ ಮತಾಂತರ ಪ್ರಕರಣಕ್ಕೆ ಟ್ವಿಸ್ಟ್: ನನ್ನನ್ನು ಯಾರು ಅಪಹರಿಸಿಲ್ಲ ಎಂದ ಯುವಕ

    ಮಂಡ್ಯ: ಮಗಳನ್ನು ಪ್ರೀತಿಸಿದ ಹಿಂದೂ ಹುಡುಗನನ್ನು ಇಸ್ಲಾಂ ಧರ್ಮದಂತೆ ಮುಂಜಿ ಮಾಡುವ ಮೂಲಕ ಮತಾಂತರಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ ಎನ್ನುವ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ. ಎರಡು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಚಂದನ್ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬಳಿಕ ಪ್ರತ್ಯಕ್ಷವಾಗಿದ್ದು ನನ್ನನ್ನು ಯಾರು ಅಪಹರಿಸಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ.

    ಎರಡು ದಿನಗಳ ಹಿಂದೆ ನಮ್ಮ ಮನೆಯಲ್ಲಿ ನನ್ನ ಪ್ರೀತಿಯ ವಿಷಯ ಗೊತ್ತಾಗಿತ್ತು. ಇದ್ರಿಂದ ನನಗೆ ತಂದೆ ತಾಯಿಗಳು ಹೊಡೆಯಲಾರಂಭಿಸಿದರು. ಭಯಗೊಂಡ ನಾನು ಎರಡು ದಿನಗಳಿಂದ ನನ್ನ ಗೆಳೆಯನ ಮನೆಯಲ್ಲಿ ಉಳಿದುಕೊಂಡಿದ್ದೆ. ನಾನು ನಾಲ್ಕು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದು, 21 ವರ್ಷವಾದ ಕೂಡಲೇ ಅವಳನ್ನೇ ಮದುವೆಯಾಗುತ್ತೇನೆ. ಮತಾಂತರಗೊಳ್ಳುವಂತೆ ನನಗೆ ಯಾರು ಬಲವಂತ ಮಾಡಿಲ್ಲ. ಇದೆಲ್ಲ ಸುಳ್ಳು ಎಂದು ಚಂದನ್ ಪಬ್ಲಿಕ್ ಟಿವಿ ಗೆ ಹೇಳಿದ್ದಾರೆ.

    ಇತ್ತ ಚಂದನ್ ತಂದೆ ಶ್ರೀನಿವಾಸ್ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ನನ್ನ ಮಗನನ್ನು ಅಪಹರಿಸಿ, ಮುಂಜಿ ಮಾಡಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ನನ್ನ ಮಗನನ್ನು ರಕ್ಷಿಸಿ ಎಂದು ದೂರು ದಾಖಲಿಸಿದ್ದರು. ಅಪ್ರಾಪ್ತ ವಯಸ್ಕನಾದ ನನ್ನ ಮಗನ ಮೈಂಡ್ ವಾಷ್ ಮಾಡಲಾಗಿದೆ ಎಂದು ಶ್ರೀನಿವಾಸ್ ಆರೋಪಿಸಿದ್ದರು.

    ಶ್ರೀನಿವಾಸ್ -ಯುವಕನ ತಂದೆ
    ಯುವಕನ ತಾಯಿ

     

  • ಮಗಳಿಗೆ ಮದುವೆ ಮಾಡಿಸಲು 19ರ ಹಿಂದೂ ಯುವಕನನ್ನ ಅಪಹರಿಸಿ, ಮುಂಜಿ ಮಾಡಿಸಲು ಮುಂದಾದ ತಂದೆ

    ಮಗಳಿಗೆ ಮದುವೆ ಮಾಡಿಸಲು 19ರ ಹಿಂದೂ ಯುವಕನನ್ನ ಅಪಹರಿಸಿ, ಮುಂಜಿ ಮಾಡಿಸಲು ಮುಂದಾದ ತಂದೆ

    ಮಂಡ್ಯ: ನಮ್ಮ ಮಗನನ್ನ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ಮದುವೆ ಮಾಡಲು ಹೊರಟಿದ್ದಾರೆ ಎಂದು ಪೋಷಕರು ಪೊಲೀಸ್ ಠಾಣೆ ಮಟ್ಟಿಲೇರಿರೋ ವಿಚಿತ್ರವಾದ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ ಕೆ.ಶ್ರೀನಿವಾಸ್ ಎಂಬವರ ಮಗ ಚಂದನ್ ಮುಸ್ಲಿಂ ಧರ್ಮದ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದ್ರಿಂದ ಹುಡುಗಿ ಮನೆಯವವರು ಚಂದನ್‍ನನ್ನ ಅಪಹರಿಸಿ ಮುಂಜಿ ಮಾಡವ ಮೂಲಕ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ಮದುವೆ ಮಾಡಲು ಮುಂದಾಗಿದ್ದಾರೆ ಎಂದು ಯುವಕನ ತಂದೆ ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ.

    ಯೂಸಫ್ ಅನ್ನೋ ವ್ಯಕ್ತಿ ತನ್ನ ಮಗಳ ಪ್ರೀತಿ ವಿಚಾರ ಇಟ್ಟುಕೊಂಡು ನನ್ನ ಮಗನಿಗೆ ಬಲವಂತವಾಗಿ ಮುಂಜಿ ಮಾಡಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಲು ಹೊರಟಿದ್ದಾರೆ. ನನ್ನ ಮಗನಿಗಿನ್ನೂ 19 ವರ್ಷ. ಕಾನೂನಿನ ಪ್ರಕಾರ ಆತನಿಗೆ ಮದುವೆ ಮಾಡಲು ಸಾಧ್ಯವಿಲ್ಲ. ಆದ್ರೂ ಕೂಡ ಇದನ್ನು ಲೆಕ್ಕಿಸದೆ ನನ್ನ ಮಗನನ್ನು ಅಪಹರಿಸಿದ್ದಾರೆ. ಆದ್ದರಿಂದ ನನ್ನ ಮಗನನ್ನ ರಕ್ಷಿಸಿ ಎಂದು ಚಂದನ್ ತಂದೆ ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದಾರೆ

     

  • ಮರ್ಯಾದಾ ಹತ್ಯೆ: ಪ್ರೀತಿಯಲ್ಲಿ ಬಿದ್ದ ಮಗಳು ತಾಯಿಯಿಂದ ಕೊಲೆಯಾದ್ಳು!

    ಮರ್ಯಾದಾ ಹತ್ಯೆ: ಪ್ರೀತಿಯಲ್ಲಿ ಬಿದ್ದ ಮಗಳು ತಾಯಿಯಿಂದ ಕೊಲೆಯಾದ್ಳು!

    ಕೋಲಾರ: ಪ್ರೇಮ ವಿಚಾರ ತಿಳಿದು ತಾಯಿಯೇ ತಾನು ಬೆಳಸಿದ್ದ ಮಗಳನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೋಲಾರ ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

    18 ವರ್ಷದ ರಾಜೇಶ್ವರಿ ಕೊಲೆಯಾದ ಯುವತಿ. ತಂದೆಯಿಲ್ಲದ ರಾಜೇಶ್ವರಿಯನ್ನು ತಾಯಿ ವೆಂಕಟಮ್ಮ ಕೂಲಿ ನಾಲಿ ಮಾಡಿ ಸಾಕಿದ್ದರು. ಮಗಳು ಚೆನ್ನಾಗಿರಲಿ ಎಂದು ಪಿಯುಸಿ ಓದಿಸುತ್ತಿದ್ದರು. ಆದರೆ ರಾಜೇಶ್ವರಿ ಅದೇ ಗ್ರಾಮದ ಯುವಕನ ಪ್ರೇಮಪಾಶದಲ್ಲಿ ಸಿಲುಕಿದ್ದಳು.

    ರಾಜೇಶ್ವರಿಯ ಪ್ರೇಮ ವಿಚಾರವನ್ನು ತಿಳಿದ ಗ್ರಾಮಸ್ಥರು ಆಕೆಯ ತಾಯಿಯನ್ನು ನಿಂದಿಸಿದ್ರು. ಇದರಿಂದ ನೊಂದ ತಾಯಿ ಸಾಕಷ್ಟು ಬಾರಿ ಮಗಳಿಗೆ ಬುದ್ದಿ ಮಾತು ಹೇಳಿದ್ರು ಕೇಳಲಿಲ್ಲ. ಸೋಮವಾರ ರಾತ್ರಿ ಮರ್ಯಾದೆಗೆ ಅಂಜಿದ ತಾಯಿ ಮಗಳನ್ನ ಥಳಿಸಿದ್ದಾಳೆ. ಈ ವೇಳೆ ಕಪಾಳಕ್ಕೆ ಜೋರಾಗಿ ಪೆಟ್ಟುಬಿದ್ದ ಪರಿಣಾಮ ರಾಜೇಶ್ವರಿ ಮೃತಪಟ್ಟಿದ್ದಾಳೆ.

    ಇನ್ನೂ ಬೆಳಗ್ಗೆ ಗುಟ್ಟಾಗಿ ಮಗಳ ಅಂತ್ಯಸಂಸ್ಕಾರಕ್ಕೆ ವೆಂಕಟಮ್ಮ ಮುಂದಾಗಿದ್ರು. ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆಯಲ್ಲಿ ವೆಂಕಟಮ್ಮ ಮಗಳ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಲವ್ ಮಾಡು ಅಂತಾ ಬೆನ್ನು ಬಿದ್ದ ಪೊಲೀಸ್ ಪೇದೆ- ಯುವತಿ ಆತ್ಮಹತ್ಯೆ

    ಲವ್ ಮಾಡು ಅಂತಾ ಬೆನ್ನು ಬಿದ್ದ ಪೊಲೀಸ್ ಪೇದೆ- ಯುವತಿ ಆತ್ಮಹತ್ಯೆ

    ಹೈದರಾಬಾದ್: 22 ವರ್ಷದ ಯುವತಿಯೊಬ್ಬಳು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ ಸಮೀಪದ ಎಚರಾಮ್ ಬಳಿ ನಡೆದಿದೆ.

    ಮೃತ ಯುವತಿಯನ್ನು ಎಂ ಶ್ಯಾಮಲಾ ಎಂದು ಗುರುತಿಸಲಾಗಿದೆ. ಈಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಪೊಲೀಸ್ ಪೇದೆಯೊಬ್ಬರು ಲವ್ ಮಾಡು ಅಂತಾ ಶ್ಯಾಮಲಾ ಬೆನ್ನು ಬಿದ್ದಿದ್ದೇ ಆತ್ಮಹತ್ಯೆಗೆ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ. ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಪೊಲೀಸ್ ಪೇದೆ ಎಸ್ ನರಸಿಂಹ ಪೀಡಿಸುತ್ತಿದ್ದರು. ಆದ್ರೆ ಶ್ಯಾಮಾಲಾಳಿಗೆ ಮಾತ್ರ ಇದು ಇಷ್ಟವಿರಲಿಲ್ಲ. ಹೀಗಾಗಿ ಪೇದೆಯ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಯುವತಿಯ ಪೋಷಕರು ಆರೋಪ ಮಾಡಿದ್ದಾರೆ.

    ಯುವತಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡ ನಂತರ ಜೋರಾಗಿ ಕಿರುಚಾಡಿದ್ದು, ಈ ವೇಳೆ ಅಕ್ಕಪಕ್ಕದ ಮನೆಯವರು ತೆರಳಿ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಆಕೆ ಮೃತಪಟ್ಟಿದ್ದಾಳೆ ಅಂತಾ ವೈದ್ಯರು ತಿಳಿಸಿದ್ದಾರೆ.

    ಸದ್ಯ ಯುವತಿಯ ಪೋಷಕರು ಎಚರಾಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೇದೆ ಎಸ್ ನರಸಿಂಹ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ದೂರಿನಲ್ಲಿ ಪೊಲೀಸ್ ಪೇದೆ ತನ್ನ ಲವ್ ಪ್ರಪೋಸಲನ್ನು ಒಪ್ಪಿಕೊಳ್ಳುವಂತೆ ಆಕೆಗೆ ಕಿರುಕುಳ ಕೊಡುತ್ತಿದ್ದನು. ಇದರಿಂದ ಮನನೊಂದು ಶ್ಯಾಮಲಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಉಲ್ಲೇಖಿಸಿರುವುದಾಗಿ ಪೊಲೀಸ್ ಇನ್ಸ್ ಪೆಕ್ಟರ್ ಜೆ ಮದನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.

    ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಗರ್ಭಿಣಿಯನ್ನಾಗಿಸಿ, ಮದುವೆ ಬೇಡ ಎಂದ ಪ್ರಿಯಕರ – ಪ್ರಿಯತಮೆ ಆತ್ಮಹತ್ಯೆ

    ಗರ್ಭಿಣಿಯನ್ನಾಗಿಸಿ, ಮದುವೆ ಬೇಡ ಎಂದ ಪ್ರಿಯಕರ – ಪ್ರಿಯತಮೆ ಆತ್ಮಹತ್ಯೆ

    ಕೊಪ್ಪಳ: ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದಕ್ಕೆ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರ್ಲಾನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಭಾವತಿ ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾಳೆ.

    ಪ್ರಭಾವತಿಗೆ ಅದೇ ಗ್ರಾಮದ ರವಿಕುಮಾರ ಅನ್ನೋ ಯುವಕ ನಂಬಿಸಿ ಮೋಸ ಮಾಡಿದ್ದಾನೆ. ಪ್ರಭಾವತಿ ಹಾಗೂ ರವಿಕುಮಾರ ಇಬ್ಬರು ಮರ್ಲಾನಹಳ್ಳಿ ಗ್ರಾಮದವರಾಗಿದ್ದು, ಇಬ್ಬರು ಪರಸ್ಪರ ಕಳೆದ ಮೂರು ವರ್ಷದಿಂದಲೂ ಪ್ರೀತಿ ಮಾಡುತ್ತಿದ್ರು. ಅಲ್ಲದೇ ಪ್ರಭಾವತಿ ಗರ್ಭವತಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಪ್ರಭಾವತಿ ಮದುವೆ ಮಾಡಿಕೋ ಅಂತ ಪ್ರೀಯಕರನನ್ನ ಕೇಳಿದ್ದಾಳೆ. ಆದ್ರೆ ಇದಕ್ಕೆ ಪ್ರಿಯಕರ ರವಿಕುಮಾರ ನಿರಾಕರಿಸಿದ್ದಾನೆ. ಇದರಿಂದ ಮನನೊಂದ ಪ್ರಭಾವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅವನಿಗೆ ಅವಳ್ಮೇಲೆ, ಅವಳಿಗೆ ಇನ್ನೊಬ್ಬನ್ಮೇಲೆ ಲವ್: ನೀನಿಲ್ಲದ ಬದುಕು ಯಾಕೆಂದು ಸತ್ತೇ ಹೋದ!

    ಅವನಿಗೆ ಅವಳ್ಮೇಲೆ, ಅವಳಿಗೆ ಇನ್ನೊಬ್ಬನ್ಮೇಲೆ ಲವ್: ನೀನಿಲ್ಲದ ಬದುಕು ಯಾಕೆಂದು ಸತ್ತೇ ಹೋದ!

    ಹೈದರಾಬಾದ್: ಪ್ರೀತಿ ಮಾಯೆ ಹುಷಾರು ಎಂದು ನೀವೆಲ್ಲರೂ ಕೇಳಿರುತ್ತೀರಿ. ಅದೇ ಸ್ಟೋರಿ ಇದು. ಪ್ರೀತಿಯ ಹುಚ್ಚುತನಕ್ಕೆ ಸಿಲುಕಿ, ತಾನು ಇಷ್ಟಪಟ್ಟ ಹುಡುಗಿ ತನಗೆ ದಕ್ಕಲಿಲ್ಲ ಎಂದು ಸಾಫ್ಟ್ ವೇರ್ ಎಂಜಿನಿಯರ್ ಒಬ್ಬ ಅಪಾರ್ಟ್ ಮೆಂಟ್ ನಿಂದ ಹಾರಿ ಪ್ರಾಣ ಬಿಟ್ಟಿದ್ದಾನೆ.

    ಮೆಹಬೂಬಾಬಾದ್ ಜಿಲ್ಲೆಯ ದೋರ್ಣಕಲ್ ಮಂಡಲ್‍ನ ಗೊಲ್ಲಚೆಲ್ಲ ಗ್ರಾಮದ ಜಗದೀಶ್ ಮೃತ ಸಾಫ್ಟ್ ವೇರ್ ಎಂಜಿನಿಯರ್. ಈತ ಮಿಯಾಪುರ್ ಎಂಬಲ್ಲಿನ ಜನಪ್ರಿಯ ಅಪಾರ್ಟ್‍ಮೆಂಟ್ ನಲ್ಲಿ ವಾಸವಾಗಿದ್ದ. ಇದೇ ವೇಳೆ ನೆರೆಹೊರೆಯ ಹುಡುಗಿಯೊಬ್ಬಳಿಗೆ ಲವ್ ಪ್ರಪೋಸ್ ಮಾಡಿದ್ದಾನೆ. ಆದರೆ ಇದಕ್ಕೂ ಮೊದಲೇ ಇನ್ನೊಬ್ಬನ ಜೊತೆ ಲವ್ ಆಗಿದ್ದ ಹುಡುಗಿ ಈತನ ಪ್ರೇಮ ನಿವೇದನೆಯನ್ನು ತಿರಸ್ಕರಿಸುತ್ತಾನೆ. ಆದರೂ ಆತ ಮತ್ತೆ ಮತ್ತೆ ಆಕೆಯನ್ನು ಕಾಡುತ್ತಿದ್ದಿದ್ದರಿಂದ ಬೇಸತ್ತ ಆಕೆ ಬೇರೆ ಕಡೆ ವಾಸ ಬದಲಾಯಿಸುತ್ತಾಳೆ.

    ಇದನ್ನೂ ಓದಿ: 2 ವರ್ಷ ಪ್ರೀತಿಸಿದವಳನ್ನ ನದಿಗೆ ತಳ್ಳಿದ ಪ್ರಿಯತಮ – ಕಾರಣ ಕೇಳಿದ್ರೆ ಶಾಕ್ ಆಗ್ತೀರ!

    ಆದರೆ ಆಕೆಯ ಗೆಳೆಯರ ಮೂಲಕ ಆತ ಆಕೆಯ ಫೋನ್ ನಂಬರ್ ಪಡೆದುಕೊಂಡು ಆಕೆಗೆ ಮತ್ತೆ ಕಾಲ್ ಮಾಡುತ್ತಾನೆ. ಫೋನಲ್ಲಿ ಮಾತಾಡ್ತಾ ನೀನಿಲ್ಲದೆ ಈ ಬದುಕೇ ವ್ಯರ್ಥ ಎಂದೆಲ್ಲಾ ಅಂಗಾಲಾಚಿದ್ದಾನೆ. ಈ ವೇಳೆ ಆತ ಏನಾದರೂ ಅನಾಹುತ ಮಾಡಿಕೊಳ್ಳಬಹುದು ಎಂದು ಎಚ್ಚೆತ್ತ ಆಕೆ ಆತನಿಗೆ ವಿಷಯದ ಮನವರಿಕೆ ಮಾಡಲು ಪ್ರಯತ್ನಿಸುತ್ತಾಳೆ. ಆದರೆ ಆತ ನಾನು ಅಪಾರ್ಟ್ ಮೆಂಟ್ ನ 5ನೇ ಅಂತಸ್ತಿನಿಂದ ಹಾರಿ ಸಾಯುತ್ತೇನೆ ಎಂದು ಬೆದರಿಕೆ ಹಾಕಿ ಕಟ್ಟಡದಿಂದ ಹಾರುತ್ತಾನೆ. ತಕ್ಷಣ ಆಕೆ ಸ್ಥಳಕ್ಕೆ ಬಂದರೂ ಆತ ರಕ್ತದ ಮಡುವಿನಲ್ಲಿ ಬಿದ್ದು ನಿಶ್ಚಲವಾಗಿದ್ದ. ಇಲ್ಲಿಗೆ ಹುಚ್ಚು ಪ್ರೇಮಕ್ಕೆ ಆತ ತನ್ನ ಪ್ರಾಣವನ್ನೇ ತ್ಯಜಿಸಿದ್ದಾನೆ.

    ಇದನ್ನೂ ಓದಿ: ಬಾಯ್ ಫ್ರೆಂಡ್ ಮೀಟ್ ಆಗದ್ದಕ್ಕೆ 4ನೇ ಫ್ಲೋರ್‍ನಿಂದ ಹಾರಿ ಟೆಕ್ಕಿ ಆತ್ಮಹತ್ಯೆ

    ಇದೇ ವೇಳೆ ವಿಷಯ ತಿಳಿದ ಜಗದೀಶ್ ಸಂಬಂಧಿಕರು, ಇದು ಆತ್ಮಹತ್ಯೆಯಲ್ಲ ಕೊಲೆ. ಈ ಬಗ್ಗೆ ಸೂಕ್ತ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

    ಇದನ್ನೂ ಓದಿ: ಲವ್ವರ್ ಬಿಟ್ಟು ಆತನ ಸ್ನೇಹಿತನ ಜೊತೆ ಲವ್: ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ

    ಇದನ್ನೂ ಓದಿಪ್ರೀತ್ಸೋ ಎಂದು ಬೆನ್ನು ಬಿದ್ದ ಯುವತಿಯ ಕಾಟಕ್ಕೆ ಸುಸ್ತಾದ ಟೆಕ್ಕಿ!- ಪೊಲೀಸ್ ಠಾಣೆಯಲ್ಲಿ ದೂರು

  • 2 ವರ್ಷ ಪ್ರೀತಿಸಿದವಳನ್ನ ನದಿಗೆ ತಳ್ಳಿದ ಪ್ರಿಯತಮ – ಕಾರಣ ಕೇಳಿದ್ರೆ ಶಾಕ್ ಆಗ್ತೀರ!

    2 ವರ್ಷ ಪ್ರೀತಿಸಿದವಳನ್ನ ನದಿಗೆ ತಳ್ಳಿದ ಪ್ರಿಯತಮ – ಕಾರಣ ಕೇಳಿದ್ರೆ ಶಾಕ್ ಆಗ್ತೀರ!

    ಕಲಬುರಗಿ: ಪ್ರಿಯಕರನೊಬ್ಬ ಎರಡು ವರ್ಷಗಳ ಕಾಲ ಪ್ರೀತಿಸಿದ್ದ ಯುವತಿಯನ್ನು ನದಿಗೆ ತಳ್ಳಿ ಕೊಲೆ ಮಾಡಲು ಪ್ರಯತ್ನಿಸಿದ ಘಟನೆ ಕಲಬುರಗಿ ತಾಲೂಕಿನ ಕುರಿಕೋಟಾ ಬ್ರಿಡ್ಜ್ ಬಳಿ ನಡೆದಿದೆ.

    ಶರಣು ಮತ್ತು ರೇಣುಕಾ ಎಂಬವರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರು ತಡಗಂಚಿಯ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ಪ್ರೇಮದ ಬಲೆಗೆ ಬಿದ್ದಿದ್ರು. ಇವರಿಬ್ಬರ ಪ್ರೀತಿಯ ವಿಷಯ ತಿಳಿದ ಇಬ್ಬರ ಪೋಷಕರು ಜೂನ್ 5ರಂದು ಮದುವೆಯನ್ನ ಸಹ ಫಿಕ್ಸ್ ಮಾಡಿದ್ದರು. ಆದರೆ ಅಷ್ಟರೊಳಗೆ ಶರಣು ಮೇ 26ರಂದು ರೇಣುಕಾಳ ಅಪ್ರಾಪ್ತ ಸಹೋದರಿಯನ್ನು ದೇವಸ್ಥಾನದಲ್ಲಿ ಮದುವೆ ಆಗಿದ್ದಾನೆ.

    ಸಹಜವಾಗಿಯೇ ಕೋಪಗೊಂಡ ರೇಣುಕಾ, ಪ್ರಿಯಕರ ಶರಣು ಜೊತೆ ಜಗಳ ಆರಂಭಿಸಿದ್ದಾರೆ. ರವಿವಾರ ಶರಣು ತನ್ನ ಸ್ನೇಹಿತರೊಂದಿಗೆ ಸೇರಿ ರೇಣುಕಾ ಅವರನ್ನು ಬ್ರಿಡ್ಜ್ ಬಳಿ ಕರೆದುಕೊಂಡು ಹೋಗಿ ನದಿಗೆ ತಳ್ಳಿದ್ದಾನೆ. ನದಿಯಲ್ಲಿ ರೇಣುಕಾ ಮುಳುಗುತ್ತಿದ್ದುದನ್ನು ಗಮಿನಿಸಿದ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಸ್ಥಳೀಯರು ರಕ್ಷಣೆಗೆ ಮುಂದಾಗುತ್ತಿದ್ದಂತೆ ಶರಣು ಸಹ ನದಿಗೆ ಧುಮುಕಿ ರೇಣುಕಾರನ್ನು ಕಾಪಾಡುವಂತೆ ನಾಟಕ ಮಾಡಿದ್ದಾನೆ. ಇದೀಗ ರೇಣುಕಾ ಅವರಿಗೆ ಪ್ರಜ್ಞೆ ಬಂದಿದ್ದು, ಗೆಳಯ ಶರಣು ನಿಜರೂಪ ಬಯಲಾಗಿದೆ.

    ನನಗೂ ಇದಕ್ಕೂ ಸಂಬಂಧವಿಲ್ಲ. ಅವನಿಗೂ ಮತ್ತು ನನ್ನ ಸಂಬಂಧಿಯಾದ ರೇಣುಕಾಳಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಶರಣು ನನ್ನ ಹೆದರಿಸಿ ನನಗೆ ತಾಳಿ ಕಟ್ಟಿ ಫೋಟೋ ತೆಗೆದುಕೊಂಡು ಬ್ಲ್ಯಾಕ್ ಮೇಲ್ ಮಾಡ್ತಾಯಿದ್ದಾನೆ ಎಂದು ಶರಣುನಿಂದ ತಾಳಿ ಕಟ್ಟಿಸಿಕೊಂಡಿರುವ ಅಪ್ರಾಪ್ತೆ ಹೇಳಿದ್ದಾಳೆ.

    ಸದ್ಯ ಶರಣು ಪೋಲಿಸರ ವಶದಲ್ಲಿದ್ದಾನೆ. ಈ ಸಂಬಂಧ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಮೊಬೈಲ್ ಫೋನ್ ಮೂಲಕ ಐಸಿಸ್ ಉಗ್ರನನ್ನು ವರಿಸಿದ ಮೆಡಿಕಲ್ ವಿದ್ಯಾರ್ಥಿನಿ!

    ಮೊಬೈಲ್ ಫೋನ್ ಮೂಲಕ ಐಸಿಸ್ ಉಗ್ರನನ್ನು ವರಿಸಿದ ಮೆಡಿಕಲ್ ವಿದ್ಯಾರ್ಥಿನಿ!

    ನವದೆಹಲಿ: ಉತ್ತರಪ್ರದೇಶದಲ್ಲಿ ಮೆಡಿಕಲ್ ಓದುತ್ತಿದ್ದ 24 ವರ್ಷದ ವಿದ್ಯಾರ್ಥಿನಿಯೊಬ್ಬಳು ಮೊಬೈಲ್ ಫೋನ್ ಮೂಲಕ ಐಸಿಸ್ ಉಗ್ರನನ್ನು ಮದುವೆಯಾಗಿರುವ ವಿಚಾರ ರಾಷ್ಟ್ರೀಯ ತನಿಖಾ ದಳದ(ಎನ್‍ಐಎ) ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    2016ರ ಮೇ ತಿಂಗಳಿನಲ್ಲಿ ಮುಸ್ಲಿಮ್ ಸಂಪ್ರದಾಯದಂತೆ ಐಸಿಸ್ ಉಗ್ರ ಅಮ್ಜಾದ್ ಖಾನ್ ಎಂಬಾತನ್ನು ಅಜಮ್ ಘರ್‍ನ ಜಿಲ್ಲೆಯ ಸರೈ ಮೀರ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಮೊಬೈಲ್ ಫೋನಿನ ಮೂಲಕ ಮದುವೆಯಾಗಿದ್ದಾಳೆ.

    ಅಮ್ಜಾದ್ ಖಾನ್ ಯಾರು?
    ರಾಜಸ್ಥಾನ ಮೂಲದ ಅಮ್ಜಾದ್ ಖಾನ್ 2005ರಲ್ಲಿ ಯುಎಇಗೆ ತೆರಳಿದ್ದ. 2014ರಲ್ಲಿ ಅಲ್ಲಿಂದ ಸೌದಿಗೆ ತೆರಳಿದ್ದ ಈತ ಐಸಿಸ್ ಉಗ್ರ ಸಂಘಟನೆಗೆ ಭಾರತೀಯ ವ್ಯಕ್ತಿಗಳನ್ನು ನೇಮಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ. ಉಗ್ರ ಚಟುವಟಿಕೆ ಪತ್ತೆಯಾದ ಹಿನ್ನೆಲೆಯಲ್ಲಿ ಸೌದಿ ಸರ್ಕಾರ ಈತನನ್ನು ಗಡೀಪಾರು ಮಾಡಿತ್ತು. ಈಗ ಎನ್‍ಐಎ ಈತನನ್ನು ವಿಚಾರಣೆ ನಡೆಸುತ್ತಿದ್ದಾಗ ಈ ಮದುವೆಯ ವಿಚಾರ ಬೆಳಕಿಗೆ ಬಂದಿದೆ.

    ಲವ್ ಆಗಿದ್ದು ಹೇಗೆ?
    ಸಾಮಾಜಿಕ ಜಾಲತಣದಲ್ಲಿ ಸಕ್ರಿಯವಾಗಿದ್ದ ಈತ ಸೌದಿಯಿಂದಲೇ ಭಾರತೀಯರಿಗೆ ಗಾಳ ಹಾಕುತ್ತಿದ್ದ. ಈ ವೇಳೆ ಫೇಸ್‍ಬುಕ್ ಮೂಲಕ ಮೆಡಿಕಲ್ ವಿದ್ಯಾರ್ಥಿನಿ ಪರಿಚಯವಾಗಿದ್ದಾಳೆ. ತನ್ನ ಚಾಟಿಂಗ್ ವೇಳೆ ಈತನ ಧಾರ್ಮಿಕ ಜ್ಞಾನಕ್ಕೆ ಮನಸೋತು ಪ್ರಭಾವಿತಳಾಗಿದ್ದಳು. ನೀನು ಐಸಿಸ್‍ಗೆ ಸೇರ್ಪಡೆಯಾಗಬೇಕು. ಇಸ್ಲಾಮಿಕ್ ಸಂಪ್ರದಾಯದಂತೆ ನೀನು ಸಿರಿಯಾದಲ್ಲಿ ಜೀವನ ಮಾಡಬೇಕು ಎಂದು ಮನವೊಲಿಸಿದ್ದ. ಆದರೆ 2015ರಲ್ಲಿ ಈತ ತನ್ನ ನಿಲುವು ಬದಲಾಯಿಸಿ ನೀನು ಸಿರಿಯಾಗೆ ಹೋಗುವುದು ಬೇಡ, ನನ್ನ ಜೊತೆಗೆ ಸೌದಿಯಲ್ಲಿ ಇದ್ದು ಬಿಡು ಎಂದು ಹೇಳಿದ್ದ.

    ಅಮ್ಜಾದ್ ಹೆಚ್ಚಾಗಿ ಫೇಸ್‍ಬುಕ್ ಮತ್ತು ನಿಂಬುಜ್ ಅಪ್ಲಿಕೇಶನ್ ಮೂಲಕ ಸಂವಹನ ನಡೆಸುತ್ತಿದ್ದ. ಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿನಿ ತನ್ನ ಅಧ್ಯಯನ ಮುಗಿದ ಬಳಿಕ ಸೌದಿಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಳು. ಅಷ್ಟರಲ್ಲಾಗಲೇ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಮ್ಜಾದ್ ಬಂಧನವಾಗಿದ್ದ.

    ಮೆಡಿಕಲ್ ವಿದ್ಯಾರ್ಥಿನಿಯ ಜೊತೆ ಚಾಟ್ ಮಾಡುವ ಮೊದಲೇ ಅಮ್ಜಾದ್ ಖಾನ್‍ಗೆ ಮದುವೆಯಾಗಿತ್ತು. ಎರಡೂ ಮಕ್ಕಳಿದ್ದರೂ ಈತ ವಿದ್ಯಾರ್ಥಿನಿಯನ್ನು ಐಸಿಸ್ ಖೆಡ್ಡಾಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದ.

  • ತನಗೆ ಸಿಗದವನು ಬೇರೊಬ್ಬಳಿಗೂ ಸಿಗಬಾರದೆಂದು ಆ್ಯಸಿಡ್ ಎರಚಿದ್ಳು!

    ತನಗೆ ಸಿಗದವನು ಬೇರೊಬ್ಬಳಿಗೂ ಸಿಗಬಾರದೆಂದು ಆ್ಯಸಿಡ್ ಎರಚಿದ್ಳು!

    ಹೈದ್ರಾಬಾದ: ಗುಂಟೂರು ಜಿಲ್ಲೆಯ ವೆನಿಗ್ಲಾಂಡಾದಲ್ಲಿ ಪ್ರಿಯತಮೆಯೊಬ್ಬಳು ಆಕೆಯ ಮಾಜಿ ಪ್ರೇಮಿ ಮೇಲೆ ಆ್ಯಸಿಡ್ ಎರಚಿ ಹತ್ಯೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

    ಗುಂಟೂರು ಜಿಲ್ಲೆಯ ತಡಿಕೊಂಡ ಪಮುಲಪಡು ಗ್ರಾಮದ ಇಲಿಯಾಸ್ ಮತ್ತು ವೆನಿಗ್ಲಾಂಡದ ಹಿಮಾಬಿಂದು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರು. ಬಿಂದು ಖಾಸಗಿ ಕಾಲೇಜಿನಲ್ಲಿ ಫಾರ್ಮಾಸಿ ಓದುತ್ತಿದ್ದರು. ಕಾಲೇಜು ಪದವಿ ದಿನಗಳಿಂದಲೂ ಇಲಿಯಾಸ್ ಮತ್ತು ಬಿಂದು ಸ್ನೇಹಿತರಾಗಿದ್ದರು.

    ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಯುವತಿಗೆ ಬಾಳುಕೊಟ್ಟಿತ್ತು ರಾಂಗ್ ನಂಬರ್!

    ಇದ್ದಕ್ಕಿದ್ದಂತೆ ಇವರ ಪ್ರೇಮ ಸಂಬಂಧವೂ ಮುರಿದು ಬಿದ್ದಿತ್ತು. ಮಂಗಳವಾರ ಇಲಿಯಾಸ್ ಮತ್ತೊಂದು ಹುಡುಗಿಯನ್ನು ವಿವಾಹವಾಗಿದ್ದಾನೆ. ಇದರಿಂದ ಅವಮಾನವಾದ ಬಿಂದು ಅದಕ್ಕಾಗಿ ಪ್ರತೀಕಾರ ತೀರಿಸಲು ಅದಕ್ಕಾಗಿ ಇಲಿಯಾಸ್‍ನ್ನು ಭೇಟಿಯಾಗಲು ಕರೆದು, ಅವನ ಮೇಲೆ ಆ್ಯಸಿಡ್ ಎರಚಿದ್ದಾಳೆ. ತೀವ್ರವಾಗಿ ಗಾಯಗೊಂಡ ಇಲಿಯಾಸ್ ಗುಂಟೂರು ಜನರಲ್ ಸರ್ಕಾರಿ ಆಸ್ಪತ್ರೆಯಲ್ಲಿ ಮೈತಪಟ್ಟಿದ್ದಾನೆ.

    ಇಲಿಯಾಸ್ ಕುಟುಂಬ ಸದಸ್ಯರು ಬಿಂದುವಿನ ಜೊತೆ ಸಂಬಂಧವಿರುವುದರ ಬಗ್ಗೆ ನಮಗೆ ತಿಳಿದಿರಲಿಲ್ಲ. ಈ ಘಟನೆ ನಡೆದ ಮೇಲೆಯೇ ನಮಗೆ ಅವರಿಬ್ಬರ ಸಂಬಂಧದ ಬಗ್ಗೆ ತಿಳಿದು ಬಂದಿದೆ ಎಂದು ಹೇಳಿದ್ದಾರೆ. ಮಂಗಲಗಿರಿ ಸಿ.ಐ. ಬ್ಯಹ್ಮಯ್ಯ ಅವರು ಬಿಂದು ಮತ್ತು ಆಕೆಯ ಕೃತ್ಯಕ್ಕೆ ಸಹಾಯ ಮಾಡಿದ ಇಬ್ಬರು ಪುರುಷರನ್ನು ಬಂಧಿಸಿದ್ದಾರೆ.