Tag: ಲವ್ ಫೇಲ್ಯೂರ್

  • ಚಲಿಸ್ತಿದ್ದ ರೈಲಿನ ಮುಂದೆ ಹಾರಿ ಯುವಕ ಆತ್ಮಹತ್ಯೆ- ಸಾಯೋ ಮುನ್ನ ವಿಡಿಯೋ ರೆಕಾರ್ಡ್

    ಚಲಿಸ್ತಿದ್ದ ರೈಲಿನ ಮುಂದೆ ಹಾರಿ ಯುವಕ ಆತ್ಮಹತ್ಯೆ- ಸಾಯೋ ಮುನ್ನ ವಿಡಿಯೋ ರೆಕಾರ್ಡ್

    – ಯಾರನ್ನೂ ಹೃದಯದಿಂದ ಪ್ರೀತಿಸ್ಬೇಡಿ ಎಂದ

    ಭುವನೇಶ್ವರ: ಲವ್ ಫೇಲ್ಯೂರ್ ಆಗಿದ್ದಕ್ಕೆ ಯುವಕನೊಬ್ಬ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದ ಕಟಕ್‍ನಲ್ಲಿ ನಡೆದಿದೆ.

    ಮೃತ ಯುವಕನನ್ನು ರೌಸಾ ಪಾಟ್ನಾ ನಿವಾಸಿ ಮನೋಜ್ ಸ್ವೈನ್ ಎಂದು ಗುರುತಿಸಲಾಗಿದೆ. ಯುವಕ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಮೊಬೈಲ್ ಫೋನಿನಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ವಿಡಿಯೋದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣ ಏನೆಂಬುದನ್ನು ತಿಳಿಸಿದ್ದಾನೆ.

    ಮೃತ ಮನೋಜ್ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾನೆ. ಮನೋಜ್ ಸುಮಾರು ಮೂರು ವರ್ಷಗಳಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಇತ್ತೀಚೆಗೆ ಆಕೆ ಬೇರೆ ಯುವಕನನ್ನು ಪ್ರೀತಿಸುತ್ತಿದ್ದು, ಕಳೆದ ವರ್ಷ ಡಿಸೆಂಬರ್ ನಲ್ಲಿ ಆತನೊಂದಿಗೆ ಮದುವೆ ಕೂಡ ನಿಗದಿಪಡಿಸಲಾಗಿದೆ ಎಂದು ತಿಳಿದು ಬಂದಿದೆ.

    “ನಾನು ಅವಳ ಜೊತೆ ಮಾತನಾಡಲು ಕರೆದೆ. ಆದರೆ ಆಕೆ, ನನಗೆ ನಮ್ಮ ಜಾತಿಯ ಹುಡುಗನ ಜೊತೆ ಮದುವೆ ಫಿಕ್ಸ್ ಆಗಿದೆ. ಹೀಗಾಗಿ ನೀನು ನನ್ನನ್ನು ಮರೆಯಬೇಕು ಎಂದು ಕೇಳಿಕೊಂಡಳು. ಅಷ್ಟೇ ಅಲ್ಲದೇ ನೀನು ಯಾರು ಎಂದು ನನಗೆ ಗೊತ್ತಿಲ್ಲ. ನನ್ನ ಜೀವನದಿಂದ ದೂರ ಹೋಗು ಎಂದು ನನ್ನನ್ನು ಕೇಳಿಕೊಂಡಳು. ಅದಕ್ಕಾಗಿಯೇ ನಾನು ನನ್ನ ಜೀವನವನ್ನು ಮುಗಿಸುತ್ತಿದ್ದೇನೆ” ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

    ಕೊನೆಗೆ “ಯಾರನ್ನೂ ಹೃದಯದಿಂದ ತುಂಬಾ ಪ್ರೀತಿಸಬೇಡಿ” ಎಂದು ಮನೋಜ್ ಮನವಿ ಮಾಡಿಕೊಂಡಿದ್ದಾನೆ. ನಂತರ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಯ ಬಗ್ಗೆ ಮಾಹಿತಿ ಪಡೆದ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಅಧಿಕಾರಿಗಳು ಆತ್ಮಹತ್ಯೆ ಸ್ಥಳದಲ್ಲಿ ಒಂದು ಪತ್ರವನ್ನು ಸಹ ವಶಪಡಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

  • ಲವ್ ಫೇಲ್ಯೂರಿಗೆ ಮದ್ದರೆಯಲು ಗೋವಾಕ್ಕೆ ಹೊರಟ ಭಟ್ರು!

    ಲವ್ ಫೇಲ್ಯೂರಿಗೆ ಮದ್ದರೆಯಲು ಗೋವಾಕ್ಕೆ ಹೊರಟ ಭಟ್ರು!

    ಬೆಂಗಳೂರು: ನಿರ್ದೇಶಕ ಯೋಗರಾಜ ಭಟ್ ಈಗ ಪಂಚತಂತ್ರ ಚಿತ್ರವನ್ನ ಬೇಗನೆ ಮುಗಿಸಿಕೊಳ್ಳೋದರತ್ತ ಗಮನ ನೆಟ್ಟಿದ್ದಾರೆ. ತಮ್ಮ ತಂಡದೊಂದಿಗೆ ಊರು ತುಂಬಾ ಸುತ್ತುತ್ತಾ ಬಿಡುವಿರದೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಯೋಗರಾಜ್ ಭಟ್ ಇದೀಗ ಗೋವಾದತ್ತ ತೆರಳಿದ್ದಾರೆ.

    ಆರಂಭದಿಂದ ಇದುವರೆಗೂ ಅವ್ಯಾಹತವಾಗಿ ಚಿತ್ರೀಕರಣ ನಡೆಸುತ್ತಿರೋ ಭಟ್ಟರೀಗ ಪಂಚತಂತ್ರವನ್ನು ಅಂತಿಮ ಘಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. ಈಗ ಉಳಿದುಕೊಂಡಿರೋದು ಒಂದು ಹಾಡು ಮಾತ್ರ. ಇದಕ್ಕಾಗಿ ಒಂದೊಳ್ಳೆ ಲೊಕೇಷನ್ ಆಯ್ಕೆ ಮಾಡಿಕೊಂಡು ಗೋವಾಗೆ ತೆರಳಿದ್ದಾರೆ. ಅಲ್ಲಿ ಲವ್ ಡಿಸೆಪಾಯಿಂಟಾಗಿ ಕಂಗಾಲಾದ ನಾಯಕನನ್ನು ಸಮಾಧಾನಿಸುವ, ಕಿಚಾಯಿಸುವ ಗೆಳೆಯರ ಹಾಡೊಂದು ಚಿತ್ರೀಕರಿಸಲ್ಪಡಲಿದೆ.

    ಈ ವಿಶೇಷವಾದ ಹಾಡಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಟೀಸರ್ ಮೂಲಕವೂ ಭಾರೀ ಸದ್ದು ಮಾಡಿರೋ ಈ ಚಿತ್ರವನ್ನು ನವೆಂಬರ್ ಮಧ್ಯ ಭಾಗದಲ್ಲಿ ತೆರೆಗಾಣಿಸಲು ಯೋಗರಾಜ ಭಟ್ಟರು ನಿರ್ಧರಿಸಿದ್ದಾರಂತೆ. ಈಗ ಗೋವಾದಲ್ಲಿ ಚಿತ್ರೀಕರಣ ನಡೆಸುತ್ತಿರೋ ಈ ಹಾಡೂ ಇಡೀ ಚಿತ್ರದ ಮುಖ್ಯ ಆಕರ್ಷಣೆಯಾಗಿರಲಿದೆಯಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv