Tag: ಲಲಿತಾ

  • ರಾಷ್ಟ್ರ ಪ್ರಶಸ್ತಿ ವಿಜೇತೆ ಮಲಯಾಳಂ ನಟಿ ಲಲಿತಾ ಇನ್ನಿಲ್ಲ

    ರಾಷ್ಟ್ರ ಪ್ರಶಸ್ತಿ ವಿಜೇತೆ ಮಲಯಾಳಂ ನಟಿ ಲಲಿತಾ ಇನ್ನಿಲ್ಲ

    ರಾಷ್ಟ್ರ ಪ್ರಶಸ್ತಿ ವಿಜೇತೆ, ಮಲಯಾಳಂ ಖ್ಯಾತ ನಟಿ ಲಲಿತಾ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.  ಮಹೇಶ್ವರಿ ಅಮ್ಮ ಹೆಸರಿನಿಂದ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದ ಇವರು, ನಂತರದ ದಿನಗಳಲ್ಲಿ ಲಲಿತಾ ಆಗಿ ಫೇಮಸ್ ಆದರು. ಇದನ್ನೂ ಓದಿ : ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ

    ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ಲಲಿತಾ, ‘ಕೇರಳ ಪೀಪಲ್ಸ್ ಆರ್ಟ್ ಕ್ಲಬ್’ ರಂಗ ತಂಡದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು. . ‘ಕೂಟುಕುಟುಂಬಂ’ ಸಿನಿಮಾದ ಮೂಲಕ 1969ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ಮಲಯಾಳಂನ ಬಹುತೇಕ ಸೂಪರ್ ಸ್ಟಾರ್ ಗಳ ಜತೆ ನಟಿಸಿದ ಹೆಗ್ಗಳಿಕೆ ಇವರದ್ದು. ಸಂದೇಶಂ, ಅಮರಂ, ಆರವಂ, ಗಾಡ್ ಫಾದರ್ ಸೇರಿದಂತೆ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರಿಗೆ ಎರಡು ಬಾರಿ ಅತ್ಯುತ್ತಮ ಪೋಷಕಿ ನಟಿ ರಾಷ್ಟ್ರ ಪ್ರಶಸ್ತಿ ಬಂದಿದೆ. 1991ರಲ್ಲಿ ಅಮರಂ ಚಿತ್ರಕ್ಕಾಗಿ, 2000ನೇ ಇಸವಿಯಲ್ಲಿ ಶಾಂತಂ ಸಿನಿಮಾದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇದನ್ನೂ ಓದಿ: ಒಂದು ಟ್ವೀಟ್‌ ಎಡವಟ್‌ – ನಟ ಚೇತನ್ ಅರೆಸ್ಟ್‌

    ಹಿರಿಯ ನಟಿಯ ನಿಧನಕ್ಕೆ ಇಡೀ ಮಲಯಾಳಂ ಸಿನಿಮಾ ರಂಗವೇ ಕಂಬನಿ ಮಿಡಿದಿದೆ. ನಟಿ ಕೀರ್ತಿ ಸುರೇಶ್, ಮುಮ್ಮುಟ್ಟಿ, ಮೋಹನ್ ಲಾಲ್ ಹಾಗೂ ಮಲಯಾಳಂ ಅನೇಕ ರಾಜಕೀಯ ಮುಖಂಡರು ಸೇರಿದಂತೆ ಸಾಕಷ್ಟು ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

  • 40 ಹಸು, ಬೆಕ್ಕು, 25 ನಾಯಿಗಳಿಗೆ ಆಶ್ರಯ ನೀಡ್ತಿದ್ದಾರೆ ಹೊನ್ನಾವರದ ಲಲಿತಾ

    40 ಹಸು, ಬೆಕ್ಕು, 25 ನಾಯಿಗಳಿಗೆ ಆಶ್ರಯ ನೀಡ್ತಿದ್ದಾರೆ ಹೊನ್ನಾವರದ ಲಲಿತಾ

    ಕಾರವಾರ: ಹೆತ್ತವರನ್ನೇ ಅನಾಥ ಮಾಡೋವರ ಮಧ್ಯೆ ಬೀಡಾಡಿ ಮೂಕ ಪ್ರಾಣಿಗಳಿಗೆ ಆಸರೆಯಾಗಿ ಆರೈಕೆ ಮಾಡುವ ಮೂಲಕ ಲಲಿತಾ ಹುಳಸವಾರ್ ಅವರು ಪಬ್ಲಿಕ್ ಹೀರೋ ಆಗಿದ್ದಾರೆ.

    ಹೌದು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೇ ಅಂಗಡಿಯ ನಿವಾಸಿ ಲಲಿತಾ ಅವರು ದನ, ಬೆಕ್ಕು, ನಾಯಿ ಮುಂತಾದ ಮೂಕ ಪ್ರಾಣಿಗಳಿಗೆ ಆರೈಕೆ ಮಾಡುತ್ತಿದ್ದಾರೆ. ಹೊನ್ನಾವರದ ಸುತ್ತಮುತ್ತಲಲ್ಲಿ ಅಪಘಾತವಾದ ಹಾಗೂ ಯಾರೂ ಸಾಕದೆ ಬೀದಿಯಲ್ಲಿ ಬಿಟ್ಟಿರುವ 40 ಹಸು, 5 ಎಮ್ಮೆ, 40 ಬೆಕ್ಕು, 24 ನಾಯಿಗಳಿಗೆ ಮನೆಯಲ್ಲೇ ಆಶ್ರಯ ನೀಡಿ ಪೋಷಣೆ ಮಾಡುತ್ತಿದ್ದಾರೆ.

    ಅಡಿಕೆ, ಗೋಡಂಬಿ ವ್ಯಾಪಾರ ಮಾಡುತ್ತಿದ್ದು, ಪ್ರತಿದಿನದ ಸಂಪಾದನೆಯನ್ನೇ ಮೂಕ ಪ್ರಾಣಿಗಳಿಗಾಗಿ ಮೀಸಲಿಟ್ಟಿದ್ದೇನೆ. ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಲಕ್ಷಾಂತರ ರೂಪಾಯಿ ಸಾಲ ಮಾಡಿ ಹೊಸ ಮನೆ ಕಟ್ಟಿಸುತ್ತಿರುವುದಾಗಿ ಲಲಿತಾ ಹೇಳಿದ್ದಾರೆ.

    ಅರೇ ಅಂಗಡಿ ಗ್ರಾಮದಲ್ಲಿದ್ದಾಗ ಪ್ರಾಣಿಗಳ ಓಡಾಟಕ್ಕೆ ಗ್ರಾಮಸ್ಥರು ತಕರಾರು ಮಾಡಿದ್ದರು. ಜೊತೆಗೆ ಕೆಲ ಹಸುಗಳನ್ನು ಕಸಾಯಿಖಾನೆಗೆ ಒಯ್ಯಲು ಕಟುಕರು ರಾತ್ರೋ ರಾತ್ರಿ ಮಗೆ ನುಗ್ಗಿದ್ದ ಪ್ರಸಂಗವೂ ನಡೆದಿದೆ. ಹಾಗಾಗಿ ಸಾಲಮಾಡಿ ಗ್ರಾಮದ ಹೊರ ಭಾಗದಲ್ಲಿ ಮನೆ ನಿರ್ಮಿಸುತ್ತಿದ್ದಾರೆ ಎಂದು ಸ್ಥಳೀಯರಾದ ಶೋಭಾ ಭಟ್ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಗಾಯಗೊಂಡಿದ್ದೂ ಸೇರಿದಂತೆ ಎಲ್ಲಾ ಪ್ರಾಣಿಗಳಿಗೆ ಪಶು ವೈದ್ಯಾಧಿಕಾರಿ ವಿನಾಯಕ್ ಉಚಿತವಾಗಿ ಔಷಧಿ, ಚಿಕಿತ್ಸೆ ನೀಡುತ್ತಿದ್ದಾರೆ. ಲಲಿತಾ ಅವರ ಕಾರ್ಯಕ್ಕೆ ಮಗ ಲೋಹಿತ್ ಕೂಡ ಸಾಥ್ ನೀಡಿದ್ದಾರೆ.

  • ಮತ್ತೊಮ್ಮೆ ರೌಡಿಶೀಟರ್ ಯಶಸ್ವಿನಿ ಅಟ್ಟಹಾಸ – ಮಾರ್ಗ ಮಧ್ಯೆ ಅಡ್ಡಗಟ್ಟಿ ಮಹಿಳೆಗೆ ಥಳಿತ

    ಮತ್ತೊಮ್ಮೆ ರೌಡಿಶೀಟರ್ ಯಶಸ್ವಿನಿ ಅಟ್ಟಹಾಸ – ಮಾರ್ಗ ಮಧ್ಯೆ ಅಡ್ಡಗಟ್ಟಿ ಮಹಿಳೆಗೆ ಥಳಿತ

    ಬೆಂಗಳೂರು: ಶ್ರೀರಾಮಸೇನೆಯ ಮಹಿಳಾ ರಾಜ್ಯಾಧ್ಯಕ್ಷೆ ರೌಡಿಶೀಟರ್ ಯಶಸ್ವಿನಿ ಮತ್ತೊಮ್ಮೆ ತನ್ನ ಅಟ್ಟಹಾಸ ಮುಂದುವರಿಸಿದ್ದು, ಇದೀಗ ಲಲಿತಾ ಎಂಬವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

    ಗಂಗಮ್ಮನಗುಡಿ ನೀಲಗಿರಿ ತೊಪ್ಪಿನಲ್ಲಿ ಈ ಘಟನೆ ನಡೆದಿದೆ. ಲಲಿತಾ ಅವರು ದಾರಿಯಲ್ಲಿ ಹೋಗುವಾಗ ಮಾರ್ಗ ಮಧ್ಯೆ ಅಡ್ಡಗಟ್ಟಿ ಯಶಸ್ವಿನಿ ಹಾಗೂ 8 ಜನ ಮಹಿಳೆಯರು ಸೇರಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಪರಿಣಾಮ ಗಾಯಗೊಂಡಿರುವ ಲಲಿತಾ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.

    ಹಲ್ಲೆ ಯಾಕೆ..?
    ಯಶಸ್ವಿನಿ ವಿರುದ್ಧ ಲಲಿತಾ ದೂರು ನೀಡಿದ್ದು, ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣದ ಸಂಬಂಧ ಶುಕ್ರವಾರ ನ್ಯಾಯಾಲಯದಲ್ಲಿ ತೀರ್ಪು ಬರೋದಿತ್ತು. ನ್ಯಾಯಾಲಯಕ್ಕೆ ಲಲಿತಾ ಹಾಜರಾಗಬಾರದೆಂದು ಲಲಿತಾರ ಮೇಲೆ ಯಶಸ್ವಿನಿ & ಟೀಂ ಹಲ್ಲೆ ನಡೆಸಿದೆ ಎನ್ನಲಾಗಿದೆ. ಇದನ್ನೂ ಓದಿ: ನೀವೇ ನನ್ನ ಹೆಂಡ್ತಿಯನ್ನ ಕಂಟ್ರೋಲ್ ಮಾಡ್ಬೇಕು ಸಾರ್ – ರೌಡಿಶೀಟರ್ ಯಶಸ್ವಿನಿ ಪತಿಯಿಂದ ಪೊಲೀಸ್ರಿಗೆ ಮನವಿ

    ಬನಶಂಕರಿ ಠಾಣೆಯ ರೌಡಿಶೀಟರ್ ಆಗಿರುವ ಯಶಸ್ವಿನಿಗಾಗಿ ಗಂಗಮ್ಮನಗುಡಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv