Tag: ಲಖನ್ ಜಾರಕಿಹೊಳಿ

  • ರಮೇಶ್ ತಲೆ ಮೊಬೈಲ್ ಇದ್ದಂತೆ, ಯಾವಾಗ ಬೇಕಾದ್ರೂ ಹ್ಯಾಂಗ್ ಆಗುತ್ತೆ: ಸತೀಶ್

    ರಮೇಶ್ ತಲೆ ಮೊಬೈಲ್ ಇದ್ದಂತೆ, ಯಾವಾಗ ಬೇಕಾದ್ರೂ ಹ್ಯಾಂಗ್ ಆಗುತ್ತೆ: ಸತೀಶ್

    – ಸಚಿವನಾಗಲು ಲಕ್ಷ್ಮಿ ಕಾಲು ಹಿಡಿದಿದ್ದ ರಮೇಶ್

    ಬೆಳಗಾವಿ: ಉಪ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಗೋಕಾಕ್ ನಲ್ಲಿ ಸಹೋದರರ ಮುನಿಸು ಜೋರಾಗಿದೆ. ರಮೇಶ್ ಜಾರಕಿಹೊಳಿ ತಲೆ ಮೊಬೈಲ್ ಇದ್ದಹಾಗೆ. ಅದು ಯಾವಾಗ ಬೇಕಾದರೂ ಹ್ಯಾಂಗ್ ಆಗುತ್ತದೆ ಎಂದು ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ರಮೇಶ್ ನ ಮಂತ್ರಿ ಮಾಡಿದರು. ಹೆಬ್ಬಾಳ್ಕರ್ ಕೈಕಾಲು ಬಿದ್ದು, ಅತ್ತು ಮಂತ್ರಿಯಾಗಿದ್ದನು. ಲಕ್ಷ್ಮಿ ಹೆಬ್ಬಾಳ್ಕರ್ ಪವರ್ ಫುಲ್ ಇಲ್ಲ ಎಂದು ಬಹಿರಂಗವಾಗಿ ಹೇಳಲಿ ನೋಡೋಣ. ಈ ಕಾರಣದಿಂದ ನಾನು ಲಕ್ಷ್ಮಿ ಜೊತೆಗೆ ಜಗಳ ಆಡಿದ್ದೆ. ಡಿಕೆಶಿ, ಹೆಬ್ಬಾಳ್ಕರ್ ಗೋಕಾಕ್ ಪ್ರಚಾರಕ್ಕೆ ಬರಲಿದ್ದಾರೆ. ರಮೇಶ್ ಮಂತ್ರಿ ಮಾಡಿದ್ದು ಹೇಗೆ ಎಂದು ಅವರೇ ಹೇಳಲಿದ್ದಾರೆ. ಯಡಿಯೂರಪ್ಪನನ್ನು ರಮೇಶ್ ಯಾವ ಗುಂಡಿಯಲ್ಲಿ ಹಾಕುತ್ತಾನೆ ಗೊತ್ತಿಲ್ಲ ಎಂದು ಹೇಳಿದರು.

    25 ವರ್ಷ ರಮೇಶ್ ಜಾರಕಿಹೊಳಿ ಸಹ ಕೈಚೀಲ ಹಿಡಿದಿದ್ದಾನೆ. ಯಾವುದೇ ಪಕ್ಷದಲ್ಲಿ ಸ್ವಾಮಿನಿಷ್ಠೆ ಬೇಕು. ರಾಜಕೀಯದಲ್ಲಿ ಬೆಳೆಯೋಕೆ ಗಾಡ್ ಫಾದರ್ ಬೇಕೇ ಬೇಕು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ಈ ಸಂಸ್ಕೃತಿ ಇದೆ. ಕೈಚೀಲ ಹಿಡಿಯೋದು ಅಂದರೆ ಚಮಚಾಗಿರಿ ಮಾಡೋದು ಅಂತ ಅಲ್ಲ. ರಮೇಶ್ ಜಾರಕಿಹೊಳಿ ಶಂಕ್ರಾನಂದ್ ಕೈಚೀಲ ಹಿಡಿದು ಓಡಾಡಿದನು. ಹೆಬ್ಬಾಳ್ಕರ್, ಡಿಕೆಶಿ ಹಾಗೂ ರಮೇಶ್ ಜಾರಕಿಹೊಳಿ ಒಂದು ಗ್ರೂಪ್‍ನಲ್ಲಿ ಇದ್ದವರು. ಆ ನಂತರ ಸಮಸ್ಯೆ ಆಗಿ ರಮೇಶ್ ಹೊರ ಬಂದಿದ್ದಾನೆ ಎಂದರು.

    ಷೇರ್ ಮಾರ್ಕೆಟ್ ರೀತಿ ರಮೇಶ್ ಜಾರಕಿಹೊಳಿ ಅಪ್ ಅಂಡ್ ಡೌನ್ ಆಗ್ತಾನೆ. ರಮೇಶ್ ಮೊದಲು ಕೆ.ಎಚ್ ಪಾಟೀಲ್, ಎಸ್ ಎಂ ಕೃಷ್ಣ ನಂತರ ಸಿದ್ದರಾಮಯ್ಯ ನಮ್ಮ ಲೀಡರ್ ಅಂತ ಹೇಳಿದನು. ಎರಡು ವರ್ಷಗಳ ಹಿಂದೆ ಡಿಕೆ ಶಿವಕುಮಾರ್ ನನ್ನು ಸಿಎಂ ಮಾಡಲು ಹೊರಟಿದ್ದನು. ತನಗೆ ಹೇಗೆ ಬೇಕು ಹಾಗೆಯೇ ಬದಲಾವಣೆ ಆಗುತ್ತಾನೆ. ಸುಳ್ಳು ಹೇಳುವುದರಲ್ಲಿ ರಮೇಶ್‍ಗೆ ಪಿಎಚ್‍ಡಿ ಆಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತಾರಕಕ್ಕೇರಿತು ಗೋಕಾಕ್ ಬೈ ಎಲೆಕ್ಷನ್ ಫೈಟ್ – ರಮೇಶ್ ಸೋಲಿಸೋಕೆ ಲಕ್ಷ್ಮಿ ಪಣ

    ಇದೇ ವೇಳೆ ಲಖನ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬ ರಮೇಶ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸತೀಶ್, ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದ ಜನರ ಬೆನ್ನಿಗೆ ರಮೇಶ್ ಚೂರಿ ಹಾಕಿದ್ದಾನೆ. ಲಖನ್ ಕಾಂಗ್ರೆಸ್ಸಿನಲ್ಲಿ ಇದ್ರು ಈಗಲೂ ಕಾಂಗ್ರೆಸ್ಸಿನಲ್ಲಿಯೇ ಇದ್ದಾರೆ. ಕಾಶಿಯಲ್ಲಿ ಅರ್ಧ ತಲೆ ಬೋಳಿಸಿದ ಹಾಗೆಯೇ ರಮೇಶ್ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಸೇರೋ ಹಿಂದಿನ ರಾತ್ರಿ ನಿದ್ದೆಯೇ ಮಾಡಿಲ್ಲ- ಸತ್ಯ ಬಿಚ್ಚಿಟ್ಟ ರಮೇಶ್ ಜಾರಕಿಹೊಳಿ

    ಲಕ್ಷ್ಮಿ ಹೆಬ್ಬಾಳ್ಕರ್ ಮನೆಗೆ ಈ ಹಿಂದೆ ಚಹಾ ಕುಡಿಯಲು ಹೋಗಿದ್ದು ನಿಜ. ಈಗ ಹೋಗಿಲ್ಲ, ಇನ್ನು ಮುಂದೆ ಹೋಗುತ್ತೇನೆ. ಗೋಕಾಕ್ ಉಸ್ತುವಾರಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಇದ್ದಾರೆ. ಹೀಗಾಗಿ ಚಹಾ, ಊಟಕ್ಕೆ ಇನ್ನು ಮುಂದೆ ಹೋಗುತ್ತೇನೆ. ರಮೇಶ್ ನನ್ನು ಸಚಿವನನ್ನಾಗಿ ಮಾಡಿದ್ದಕ್ಕೆ ನಾನು ಲಕ್ಷ್ಮಿಯನ್ನು ವಿರೋಧಿಸಿದೆ. ಲಕ್ಷ್ಮಿ, ಡಿಕೆಶಿ ನನ್ನ ನಡುವೆ ಯಾವುದೇ ಜಗಳ ಇಲ್ಲ. ಹುಚ್ಚನನ್ನು ಮಂತ್ರಿ ಮಾಡಿದರು ಅಂತ ಜಗಳ ಇತ್ತು ಅಷ್ಟೇ. ನಾನು, ಡಿಕೆಶಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಚೆನ್ನಾಗಿಯೇ ಇದ್ದೇವೆ. ಮೊದಲಿನಿಂದಲೂ ರಮೇಶ್ ಜಾರಕಿಹೊಳಿ ಸ್ವಾರ್ಥಿ. ಹೀಗಾಗಿ ಆತನನ್ನು ಮೊದಲಿನಿಂದಲೂ ವಿರೋಧಿಸುತ್ತೇನೆ. ಈಗನೂ ಮಾಡುತ್ತೇನೆ ಮುಂದೆಯೂ ಮಾಡುವುದಾಗಿ ತಿಳಿಸಿದರು. ಇದನ್ನೂ ಓದಿ: ಎಚ್.ವಿಶ್ವನಾಥ್ ನನ್ನ ಗುರು, ಸಿದ್ದರಾಮಯ್ಯ ನಮ್ಮ ಜೂನಿಯರ್: ರಮೇಶ್ ಜಾರಕಿಹೊಳಿ

  • Exclusive: ಬೆಳಗಾವಿ ರಾಜಕಾರಣದಲ್ಲೀಗ ವಿಷಕನ್ಯೆ ರಾಜಕೀಯ..!

    Exclusive: ಬೆಳಗಾವಿ ರಾಜಕಾರಣದಲ್ಲೀಗ ವಿಷಕನ್ಯೆ ರಾಜಕೀಯ..!

    – ಬೈಎಲೆಕ್ಷನ್ ಹೊತ್ತಲ್ಲೇ ಸದ್ದಾಗ್ತಿದೆ ರಕ್ತ ಕಣ್ಣೀರು-2

    ಬೆಂಗಳೂರು/ಬೆಳಗಾವಿ: ಸಹೋದರರ ಸವಾಲಿಗೆ ಸಾಕ್ಷಿ ಆಗಿರುವ ರಾಜಕೀಯ ಅಖಾಡ ಬೆಳಗಾವಿ. ಸಹೋದರರ ನಡುವಿನ ಸವಾಲು ಪ್ರತಿ ಸವಾಲಿನ ಮಧ್ಯೆ ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಅದು ಅಂತಿಂತ ಬಾಂಬ್ ಅಲ್ಲ ಸಹೋದರರ ಸವಾಲನ್ನು ಮೀರಿದ ವಿಷ ಕನ್ಯೆಯ ಕಥೆ. ಶೀಘ್ರವಾಗಿ ಬೆಳ್ಳಿ ಪರದೆ ಮೇಲೆ ವಿಷ ಕನ್ಯೆಯ ರಕ್ತ ಕಣ್ಣೀರಿನ ಕಥೆ ಬರಲಿದೆ.

    ಹೌದು. ರಾಜ್ಯ ರಾಜಕಾರಣದಲ್ಲಿರುವ ವಿಷ ಕನ್ಯೆಯೊಬ್ಬರ ಕುರಿತು ಲಖನ್ ಜಾರಕಿಹೊಳಿ ಚಲನಚಿತ್ರ ನಿರ್ಮಾಣ ಮಾಡಲಿದ್ದಾರೆ. ಬೆಳಗಾವಿ ಜಿಲ್ಲಾ ರಾಜಕಾರಣದ ವಸ್ತು ವಿಷಯ ಇಟ್ಟುಕೊಂಡು ಈ ಚಿತ್ರ ನಿರ್ಮಾಣ ಮಾಡುತ್ತಾರೆ. ಆ ವಿಷ ಕನ್ಯೆಯೊಬ್ಬರ ಕುರಿತ ಚಲನ ಚಿತ್ರಕ್ಕೆ ರಕ್ತ ಕಣ್ಣೀರು ಪಾರ್ಟ್-2 ಎಂದು ನಾಮಕರಣ ಮಾಡಲಿದ್ದಾರೆ.

    ವಿಷ ಕನ್ಯೆಯ ವಿಷ ವರ್ತುಲದಲ್ಲಿ ಸಿಲುಕಿದ ಭಗ್ನ ಪ್ರೇಮಿ ರಾಜಕಾರಣಿಯೊಬ್ಬರ ರಾಜಕೀಯ ಜೀವನದ ಬಗ್ಗೆ ಕಥೆಗೆ ಸ್ಕ್ರಿಪ್ಟ್ ಸಿದ್ಧವಾಗುತ್ತಿದೆಯಂತೆ. ಉಪೇಂದ್ರರ ರಕ್ತ ಕಣ್ಣೀರು ಮಾದರಿಯಲ್ಲೇ ರಕ್ತ ಕಣ್ಣೀರು ಪಾರ್ಟ್ -2 ಚಿತ್ರ ನಿರ್ಮಾಣ ಮಾಡುತ್ತೇನೆ ಅಂತ ಪಬ್ಲಿಕ್ ಟಿವಿಗೆ ಸ್ವತಃ ಲಖನ್ ಜಾರಕಿಹೊಳಿ ಹೇಳಿದ್ದಾರೆ.

    ಗೋಕಾಕ್ ಉಪ ಚುನಾವಣಾ ಅಖಾಡದಲ್ಲಿ ಪರಸ್ಪರ ತೊಡೆ ತಟ್ಟಿರುವ ಜಾರಕಿಹೊಳಿ ಸಹೋದರರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ರಮೇಶ್ ಜಾರಕಿ ಹೊಳಿ ಸಹೋದರ ಲಖನ್ ಜಾರಕಿಹೊಳಿ ಇಂಥದೊಂದು ಬಾಂಬ್ ಸಿಡಿಸಿದ್ದಾರೆ. ರಾಜಕೀಯ ಭಗ್ನ ಪ್ರೇಮಿ ಹಾಗೂ ವಿಷ ಕನ್ಯೆ ಇಬ್ಬರ ಕುರಿತ ಕಥಾ ಹಂದರವಿರುವ ರಕ್ತ ಕಣ್ಣೀರು ಪಾರ್ಟ್-2 ನಿರ್ಮಾಣ ಮಾಡುತ್ತೇನೆ ಚುನಾವಣೆ ಮುಗಿಯಲಿ ಎಂದಿದ್ದಾರೆ.

    ಚಿತ್ರಕ್ಕೆ ರಮೇಶ್ ಶುಭಹಾರೈಕೆ!
    ರಾಜಕೀಯ ಅಗ್ನಿ ಪರೀಕ್ಷೆಗೆ ಇಳಿದಿರುವ ಲಖನ್ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಬಗ್ಗೆ ಎದುರಾಳಿ ರಮೇಶ್ ಜಾರಕಿಹೊಳಿ ಶುಭ ಹಾರೈಸಿದ್ದಾರೆ. ರಕ್ತ ಕಣ್ಣೀರು ಚಿತ್ರ ಮಾಡುವುದಾದರೆ ಮಾಡಲಿ. ವಿಷ ಕನ್ಯೆ ಯಾರೋ ಗೊತ್ತಿಲ್ಲ. ವಿಷ ಕನ್ಯೆಯರು ಇದ್ದರೆ ಮೈಸೂರು ಅಥವಾ ಮಂಗಳೂರಿನ ಕಡೆ ಇರಬೇಕು ಅಂತ ಲಖನ್‍ಗೆ ರಮೇಶ್ ಟಾಂಗ್ ಕೊಟ್ಟಿದ್ದಾರೆ.

    ಹೀಗೆ ರಾಜಕೀಯ ಅಖಾಡದಲ್ಲಿ ಅಗ್ನಿ ಪರೀಕ್ಷೆ ಎದುರಿಸುತ್ತಿರುವ ಲಖನ್ ಜಾರಕಿಹೊಳಿ ರಕ್ತ ಕಣ್ಣೀರು ಪಾರ್ಟ್-2 ಚಿತ್ರ ನಿರ್ಮಾಣ ಮಾಡುವ ಮಾತನಾಡಿದ್ದಾರೆ. ರಾಜಕಾರಣದ ವಿಷ ಕನ್ಯೆ ಒಬ್ಬರ ಕುರಿತ ಆ ಚಿತ್ರ ನಿರ್ಮಾಣಕ್ಕೇನೋ ನಿರ್ಧರಿಸಿದ್ದಾರೆ. ಆದರೆ ಆ ವಿಷ ಕನ್ಯೆ ಯಾರು ಅಂತ ಗೊತ್ತಾಗಬೇಕಾದರೆ ರಕ್ತ ಕಣ್ಣೀರು ಪಾರ್ಟ್2 ಬಿಡುಗಡೆವರೆಗೆ ಕಾಯಲೇಬೇಕು.

  • ಎಚ್.ವಿಶ್ವನಾಥ್ ನನ್ನ ಗುರು, ಸಿದ್ದರಾಮಯ್ಯ ನಮ್ಮ ಜೂನಿಯರ್: ರಮೇಶ್ ಜಾರಕಿಹೊಳಿ

    ಎಚ್.ವಿಶ್ವನಾಥ್ ನನ್ನ ಗುರು, ಸಿದ್ದರಾಮಯ್ಯ ನಮ್ಮ ಜೂನಿಯರ್: ರಮೇಶ್ ಜಾರಕಿಹೊಳಿ

    ಬೆಳಗಾವಿ: ಎಚ್.ವಿಶ್ವನಾಥ್ ನನ್ನ ಗುರು, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ನಮ್ಮ ಜೂನಿಯರ್ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಖನ್ ಜಾರಕಿಹೊಳಿ ಇಂದಿನಿಂದ ನನ್ನ ತಮ್ಮ ಅಲ್ಲ. ಆತ ನನ್ನ ವಿರೋಧಿ. ಡಿಸೆಂಬರ್ 5ರವರೆಗೂ ಅವನು ನನ್ನ ತಮ್ಮ ಅಲ್ಲ 5 ರ ನಂತರ ತಮ್ಮ. ಲಖನ್‍ಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಹೇಳಿದರು.

    ಇದೇ ವೇಳೆ ರಮೇಶ್ ಜಾರಕಿಹೊಳಿ ನನ್ನ ಶಿಷ್ಯ ಅಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳಿರುವುದು ಸತ್ಯವಿದೆ. ಎಚ್.ವಿಶ್ವನಾಥ್ ನನ್ನ ಗುರು, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ನಮ್ಮ ಜೂನಿಯರ್. ಬ್ರಿಟಿಷ್ ಅವರು ಕುತಂತ್ರ ಮಾಡಿದ ಹಾಗೆ ಕಾಂಗ್ರೆಸ್‍ನವರು ಮಾಡಿದ್ದಾರೆ. ಸತೀಶ್ ಕುತಂತ್ರ ಮಾಡಿದ ಲಖನ್ ನನ್ನ ಬೆನ್ನಿಗೆ ಚೂರಿ ಹಾಕಿದ ಎಂದು ಇಬ್ಬರು ಸಹೋದರರ ವಿರುದ್ಧ ಮತ್ತೆ ವಾಗ್ದಾಳಿ ಮಾಡಿದರು.

    ಒಂದೇ ವಿಮಾನದಲ್ಲಿ ಬಂದರೂ ಸಹೋದರರಿಬ್ಬರು ಯಾಕೆ ಮಾತನಾಡಲಿಲ್ಲ ಎಂದು ಕೇಳಿದಾಗ, ಇಬ್ಬರು ವಿಮಾನದಲ್ಲಿ ಬಂದಿರುವುದು ಸಹಜ. ಆದರೆ ಸತೀಶ್ ಜೊತೆಗೆ ನಾನು ಮಾತನಾಡಿಲ್ಲ. ಆತನ ಜೊತೆ ನಾನು ನಲವತ್ತು ವರ್ಷದಿಂದ ಮಾತಾಡಿಲ್ಲ ಮುಂದೆಯೂ ಮಾತನಾಡುವುದಿಲ್ಲ. ಲಖನ್ ಜಾರಕಿಹೊಳಿ ನನಗೆ ಬೆನ್ನಿಗೆ ಚೂರಿ ಹಾಕಿದ್ದಾನೆ. ಸತೀಶ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿಲ್ಲ ಎಂದು ಹೇಳಿದರು.

  • ಗೋಕಾಕ್‌ನಲ್ಲಿ ಯಾರಿಗೆ ಸಿಗುತ್ತೆ ‘ಕೈ’ ಟಿಕೆಟ್-ಶುರುವಾಯ್ತು ಭಾರೀ ಪೈಪೋಟಿ

    ಗೋಕಾಕ್‌ನಲ್ಲಿ ಯಾರಿಗೆ ಸಿಗುತ್ತೆ ‘ಕೈ’ ಟಿಕೆಟ್-ಶುರುವಾಯ್ತು ಭಾರೀ ಪೈಪೋಟಿ

    ಬೆಳಗಾವಿ: ಡಿಸೆಂಬರ್ ೫ರಂದು ಗೋಕಾಕ್ ಕ್ಷೇತ್ರ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. 15 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಸುಪ್ರೀಂಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದಾರೆ. ಆದರೆ ಗೋಕಾಕ್, ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿ ಫೈನಲ್ ಆಗಿಲ್ಲ. ಸದ್ಯ ಮೂರು ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆದಿದೆ.

    ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ದಿನದಿಂದಲೇ ಲಖನ್ ಜಾರಕಿಹೊಳಿ ಮುಂದಿನ ಅಭ್ಯರ್ಥಿ ಎನ್ನುವ ನಿಟ್ಟಿನಲ್ಲಿ ಬಿಂಬಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಒಂದು ಹಂತದಲ್ಲಿ ಸಿದ್ದರಾಮಯ್ಯ ಕೂಡ ಸಹಮತ ಸೂಚಿಸಿದ್ದರು. ಈಗ ಲಖನ್ ಜಾರಕಿಹೊಳಿಗೆ ಟಿಕೆಟ್ ಕೊಡಬೇಕಾ ಅಥವಾ ಬೇಡ್ವಾ ಎಂಬ ಗೊಂದಲದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಕಳೆದ 2 ತಿಂಗಳಿನಿಂದ ಲಖನ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಪ್ರಚಾರ ಕೂಡ ನಡೆಸಿ ಮತದಾರರನ್ನ ಸೆಳೆಯುವ ಕೆಲಸ ಮಾಡಿದ್ದಾರೆ. ಒಂದು ವಾರದ ಹಿಂದೆ ಸಿದ್ದರಾಮಯ್ಯ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ರಾಮದುರ್ಗದ ಅಶೋಕ ಪಟ್ಟಣ ಮತ್ತು ಬೆಳಗಾವಿ ಉತ್ತರ ಕ್ಷೇತ್ರದ ಮಾಜಿ ಶಾಸಕ ಫಿರೋಜ್ ಸೇಠ್ ಇಬ್ಬರು ನಾಯಕರು ಲಖನ್ ಜಾರಕಿಹೊಳಿ ಟಿಕೆಟ್ ನೀಡದಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.

    ಒಂದು ವೇಳೆ ಟಿಕೆಟ್ ನೀಡಿದರೆ ಮುಂದಿನ ದಿನಗಳಲ್ಲಿ ಜಾರಕಿಹೊಳಿ ಸಹೋದರರು ಒಂದಾಗಿ ರಮೇಶ್ ಜಾರಕಿಹೊಳಿಯನ್ನ ಗೆಲ್ಲಿಸುತ್ತಾರೆ. ಈ ರೀತಿ ಹಲವು ಬಾರಿ ಜಿಲ್ಲೆಯಲ್ಲಿ ನಡೆದಿದೆ ಎಂದು ಸಿದ್ದರಾಮಯ್ಯಗೆ ಮನವರಿಕೆ ಮಾಡಿಕೊಟ್ಟಿದ್ದಾರಂತೆ. ಇಬ್ಬರು ಶಾಸಕರು ಟಿಕೆಟ್ ತಪ್ಪಿಸುವ ಕುರಿತು ಖುದ್ದು ಸತೀಶ್ ಜಾರಕಿಹೊಳಿ ಅವರೇ ಹೇಳಿಕೊಂಡಿದ್ದಾರೆ. ಅಲ್ಲದೇ ಹೆಸರು ಹೇಳದೇ ಇಬ್ಬರ ವಿರುದ್ಧ ಕಿಡಿಕಾರಿದ್ದಾರೆ.

    ಈ ಕುರಿತು ಇಬ್ಬರು ಮಾಜಿ ಶಾಸಕರನ್ನ ಕೇಳಿದ್ರೆ ಈ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಸದ್ಯ ಇದರಿಂದ ಸತೀಶ್ ಮತ್ತು ಲಖನ್‌ಗೆ ಒಂದು ಹಂತದಲ್ಲಿ ಶಾಕ್ ಆಗಿದೆ. ಇತ್ತ ಗೋಕಾಕ್‌ನ ಎಲ್ಲಾ ಚುನಾಯಿತ ಪ್ರತಿನಿಧಿಗಳು ಕೈಕೊಟ್ಟಿದ್ದು, ಇದರಿಂದ ಗೋಕಾಕ್‌ನಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ.

    ಗೋಕಾಕ್‌ನಲ್ಲಿ ನಡೆಯಲಿರುವ ಬೈ ಎಲೆಕ್ಷನ್‌ನಲ್ಲಿ ಲಖನ್ ಜಾರಕಿಹೊಳಿಗೆ ಟಿಕೆಟ್ ನೀಡಬಾರದು ಅಂತಾ ಮಾಜಿ ಶಾಸಕರು ಲಾಬಿ ನಡೆಸಿದ್ದಾರೆ. ಮತ್ತೊಂದು ಕಡೆ ಲಖನ್ ಕಣಕ್ಕಿಳಿದರೇ ಸೋಲಿಸಲೇಬೇಕೆಂದುಕೊಂಡು ರಮೇಶ್ ಜಾರಕಿಹೊಳಿ ಮಾಸ್ಟರ್ ಪ್ಲಾನ್ ಮಾಡಿಕೊಂಡು ಗೋಕಾಕ್‌ನ ಚುನಾಯಿತ ಸ್ಥಳೀಯ ಸದಸ್ಯರನ್ನ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಎರಡೆರಡು ಶಾಕ್‌ಗೆ ಒಳಗಾಗಿರುವ ಸಹೋದರರು ಕೈ ಟಿಕೆಟ್ ಹೇಗೆ ಗಿಟ್ಟಿಸಿಕೊಳ್ಳುತ್ತಾರೆ ಎಂಬುವುದನ್ನ ಕಾದುನೋಡಬೇಕಿದೆ.

  • ರಂಗೇರಿದ ಗೋಕಾಕ್ ಉಪಚುನಾವಣಾ ಕಣ- ಜಾರಕಿಹೊಳಿ ಸಹೋದರರ ವಾಕ್ಸಮರ

    ರಂಗೇರಿದ ಗೋಕಾಕ್ ಉಪಚುನಾವಣಾ ಕಣ- ಜಾರಕಿಹೊಳಿ ಸಹೋದರರ ವಾಕ್ಸಮರ

    ಬೆಳಗಾವಿ: ಜಿಲ್ಲೆಯ ಗೋಕಾಕ್ ಉಪಚುನಾವಣೆ ಅಖಾಡ ಮತ್ತಷ್ಟು ರಂಗೇರಿದ್ದು, ಜಾರಕಿಹೊಳಿ ಸಹೋದರ ನಡುವಿನ ವಾಕ್ಸಮರ ಜೋರಾಗಿದೆ. ಅಳಿಯ-ಮಾವನ ವಿರುದ್ಧ ಹೋರಾಟ ನಿರಂತರ, ಗೋಕಾಕ್ ಭ್ರಷ್ಟಾಚಾರದ ವಿಡಿಯೋ ಶೀಘ್ರವೇ ಬಿಡುಗಡೆ ಮಾಡುತ್ತೇನೆ. ಕಳೆದು ಹೋಗಿರುವ ವಸ್ತು ಬಗ್ಗೆ ಹೇಳುತ್ತೇನೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ರಮೇಶ್ ಜಾರಕಿಹೊಳಿ ವಿರುದ್ಧ ಗುಡುಗಿದ್ದಾರೆ.

    ಸಹೋದರ ಸತೀಶ್ ಅವರ ಮಾತಿಗೆ ತಿರುಗೇಟು ನೀಡಿರುವ ರಮೇಶ್, ಸತೀಶನ ಆರೋಪಗಳಿಗೆ ಬಹಿರಂಗವಾಗಿ ಉತ್ತರ ನೀಡುತ್ತೇನೆ. ಸತೀಶ್ ಆಪ್ತರನ್ನು ಕರೆದು ಕೇಳಿದ್ದೇನೆ. ಅವರ ಪ್ರಕಾರ ಸತೀಶ್ ಹೇಳುತ್ತಿರುವ ವಸ್ತು ಮಂಗಳೂರು ಅಥವಾ ಮೈಸೂರಿನದ್ದಾಗಿರಬಹುದು. ಯಾರೇ ಆಗಲಿ ವೈಯಕ್ತಿಕವಾಗಿ ಟೀಕೆ ಟಿಪ್ಪಣಿ ಮಾಡಬಾರದು. ಅವನಿಗೆ ಸ್ವಲ್ಪ ಮೈಂಡ್ ಔಟ್ ಆಗಿದೆ. ಧಾರವಾಡ ಹುಚ್ಚಾಸ್ಪತ್ರೆಗೆ ಕಳಿಸಬೇಕು ಎಂದರು.

    ಇತ್ತ ಸಹೋದರ ಲಖನ್ ಜಾರಕಿಹೊಳಿ ಅವರು ಕೂಡ ರಮೇಶ್ ವಿರುದ್ಧ ಕಿಡಿಕಾರಿದ್ದು, ಅವರ ಗೇಮ್ ಗೊತ್ತಿದೆ. ಅದು ಗಿಮಿಕ್, ನಾಟಕ ಆಡುತ್ತಿದ್ದಾರೆ. ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಮೊನ್ನೆ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಅಳಿಯ ಸೋತಿದ್ದು, ಈ ಬಾರಿ ಜನ ಎದ್ದು ಕುಳಿತ್ತಿದ್ದಾರೆ. ನ.5ರ ವರೆಗೂ ಬಹಳ ನಾಟಕ ಮಾಡುತ್ತಾರೆ. ನನ್ನ ಪ್ರೀತಿಯ ಸಹೋದರನ ಜೊತೆ ಮಾತನಾಡುತ್ತೇನೆ ಎಂದು ಹೇಳಿ ಗಿಮಿಕ್ ಮಾಡುತ್ತಾರೆ. ನಾನೂ 25 ವರ್ಷ ರಮೇಶ್ ಪರವಾಗಿ ಚುನಾವಣೆ ಮಾಡಿದ್ದು, ಈ ರೀತಿಯ ಹೇಳಿಕೆಗಳು ಕೇವಲ ನಾಟಕವಷ್ಟೇ ಎಂದರು.

  • ಗೋಕಾಕ್‍ನಲ್ಲಿ ಸಹೋದರರ ಸವಾಲ್!

    ಗೋಕಾಕ್‍ನಲ್ಲಿ ಸಹೋದರರ ಸವಾಲ್!

    ಬೆಳಗಾವಿ: ಗೋಕಾಕ್ ಉಪಚುನಾವಣೆ ಇದೀಗ ಸಹೋದರತ್ವದ ಮಾತೃ ಪ್ರೇಮವನ್ನು ತೂಗೊಯ್ಯಾಲೆಯಂತಾಗಿಸಿದೆ. 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ಪ್ರತಿನಿಧಿಸಿದ ರಮೇಶ್ ಜಾರಕಿಹೊಳಿ ಅತೃಪ್ತರಾಗಿ ಕೊನೆಗೆ ಅನರ್ಹರಾಗಿದ್ದಾರೆ. ವಿಧಿಯಿಲ್ಲದೇ ಬಿಜೆಪಿಯನ್ನು ಅಪ್ಪಿಕೊಂಡ ಇವರ ನಿರ್ಧಾರವನ್ನ ಜನ ಒಪ್ಪಿಕೊಳ್ಳಲಿ ಎಂದು ಜನಾದೇಶ ಪಡೆಯಲು ಕಾತುರರಾಗಿದ್ದಾರೆ. ಆದರೆ ಅಣ್ಣ ರಮೇಶ್ ನಾಗಾಲೋಟಕ್ಕೆ ಕಾಂಗ್ರೆಸ್ಸಿನಿಂದ ಅಖಾಡಕ್ಕೆ ಇಳಿಯುತ್ತಿರುವ ಕಿರಿಯ ತಮ್ಮ ಲಖನ್ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ.

    10 ವರ್ಷಗಳ ಹಿಂದೆ ರಮೇಶ್ ಸಹೋದರ ಭೀಮಶಿ ಜಾರಕಿಹೊಳಿ ಬಿಜೆಪಿಯಲ್ಲಿ ಸ್ಪರ್ಧಿಸಿ ಸಾವಿರಾರು ಮತಗಳ ಅಂತರದಿಂದ ಪರಾಭವಗೊಂಡಿದ್ದರು. 2008ರ ಚುನಾವಣೆಯಲ್ಲಿ ಬಿರುಸಿನ ಸ್ಪರ್ಧೆ ಏರ್ಪಟ್ಟು 7,700 ಮತಗಳಿಂದ ತಮ್ಮನ ವಿರುದ್ಧವೇ ರಮೇಶ್ ಗೆದ್ದು ಬೀಗಿದ್ದರು. ಇದೀಗ, ಮತ್ತೆ ಸಹೋದರನ ವಿರುದ್ಧವೇ ಅಖಾಡದಲ್ಲಿ ಸೆಣಸಬೇಕಿದೆ.

    ಸತೀಶ್ ಹಾಗೂ ಲಖನ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡರೆ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಕಮಲದ ತೆಕ್ಕೆಯಲ್ಲಿದ್ದಾರೆ. ಇನೋರ್ವ ಸಹೋದರ ಭೀಮಶಿ ಜಾರಕಿಹೊಳಿ ಮಾತ್ರ ತಟಸ್ಥವಾಗಿ ಉಳಿದಿದ್ದು ಗೋಕಾಕ್ ಜನತೆಯಲ್ಲಿ ಕುತೂಹಲ ಕೆರಳಿಸಿದೆ.

  • ಜಾರಕಿಹೊಳಿ ಸಹೋದರರ ಗುದ್ದಾಟ- ಜಾನಪದ ಗೀತೆ ಮೂಲಕ ರಮೇಶ್‍ಗೆ ಸತೀಶ್ ಟಾಂಗ್

    ಜಾರಕಿಹೊಳಿ ಸಹೋದರರ ಗುದ್ದಾಟ- ಜಾನಪದ ಗೀತೆ ಮೂಲಕ ರಮೇಶ್‍ಗೆ ಸತೀಶ್ ಟಾಂಗ್

    -ಚುನಾವಣೆಯಲ್ಲಿ ಅವರು ಅತ್ತು ಉಳಿದ 5 ವರ್ಷ ನಿಮ್ಮನ್ನ ಅಳಿಸ್ತಾರೆ
    -ಯಾರೇ ದುಡ್ಡು ಕೊಟ್ರೂ ತಗೊಳ್ಳಿ, ಮತ ಮಾತ್ರ ನಮ್ಗೇ ಹಾಕಿ

    ಬೆಳಗಾವಿ: ಜಿಲ್ಲೆಯ ಗೋಕಾಕ್ ನಗರಸಭೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಸತೀಶ್ ಜಾರಕಿಹೊಳಿ ಅದನ್ನು ಹಾಡಿನ ಮುಖಾಂತರವೇ ಹೇಳಿ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ.

    ಕಥೆಯ ಕೇಳಿರಣ್ಣ ದ್ರೋಹದ ಕಥೆಯ ಕೇಳಿರಣ್ಣ ಎಂಬ ಹಾಡಿನ ಮೂಲಕ ಸತೀಶ್ ಜಾರಕಿಹೊಳಿ ಗೋಕಾಕ್ ನಗರ ಮತ್ತು ತಾಲೂಕಿನಲ್ಲಿ ನೆರೆ ಬಂದಾಗ ನಡೆದ ಅವ್ಯವಹಾರ ಬಗ್ಗೆ ತಿಳಿಸಿದರು. ಇನ್ನೊಂದೆಡೆ ಮಂಗಳವಾರ ನಡೆದ ಗೋಕಾಕ್ ಪಟ್ಟಣದ ಸ್ವಚ್ಛತಾ ಕಾರ್ಯಕ್ರಮದ ಅಭಿನಂದನಾ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಸಹೋದರ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದಾರೆ. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ, ನಗರ ಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೊತ್ವಾಲ್, ನಾವು ಯಾವ ಹಾಡು ಬಿಡುಗಡೆಗೊಳಿಸಬೇಕು ಎಂಬ ಚಿಂತೆಯಲ್ಲಿದ್ದಾರೆ ಎಂದು ಸತೀಶ್ ಟೀಕಿಸಿದರು.

    ರಮೇಶ್ ಬೆಂಬಲಿಗ ಕೊತ್ವಾಲ ಹೋಸ 500 ರೂ. ನೋಟು ತಗೊಂರು ಬರುತ್ತಾನೆ. ಹಮಾರಾ ಆದ್ಮಿ ಅಂತ ನೀವು ಮೋಸ ಹೋಗದಿರಿ, ಆತ 500 ಕೊಟ್ಟು 500 ಕೋಟಿ ಲೂಟಿ ಮಾಡುತ್ತಾನೆ. ನನಗೆ ನಮ್ಮ ಸಮಸ್ಯೆಗಳನ್ನ ಕೇಳಲು ಶಾಸಕ ಬರಬೇಕು, ಆದರೆ ರಮೇಶ್ ಬೆಂಬಲಿಗರು ಮತ ಕೇಳಲು ಬೇರೆಯೇ ಸೋಗಿನಲ್ಲಿ ಬರುತ್ತಾರೆ. ಯಾರೇ ದುಡ್ಡು ಕೊಟ್ಟರೂ ತೆಗೆದುಕೊಳ್ಳಿ. ಆದರೆ ಮತ ಮಾತ್ರ ನಮಗೇ ಹಾಕಿ ಎಂದು ಲಖನ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದರು.

    ಕೊತ್ವಾಲ, ಅಂಬಿ ಇಬ್ಬರೂ ಗೋಕಾಕ್‍ನಲ್ಲಿ ಪ್ರವಾಹಕ್ಕೆ ಮನೆ ಕಳೆದುಕೊಂಡವರ ಹೆಸರಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ. ಗೋಕಾಕ್ ನಗರವನ್ನು ಸ್ವಚ್ಛ ಮಾಡುವ ಹೆಸರಲ್ಲಿ ಲಕ್ಷ ಲಕ್ಷ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಗೋಕಾಕ್ ತಾಲೂಕಿನಲ್ಲಿ ಹೊರ ಕಾರ್ಖಾನೆ ಬರುತ್ತಿಲ್ಲ, ಕಾರ್ಖಾನೆ ಬಂದರೆ ಅದರಲ್ಲೂ ಪಾಲು ಕೊಡಿ ಅಂತ ರಮೇಶ್ ಬೆಂಬಲಿಗರು ಬಂದು ಕೇಳುತ್ತಾರೆ. ಆದ್ದರಿಂದ ಈ ಬಾರಿ ಉಪಚುಣಾವಣೆಯಲ್ಲಿ ಶಾಸಕರನ್ನ ಬದಲಾವಣೆ ಮಾಡಲೇಬೇಕು. ಸಿಎಂ ಯಡಿಯೂರಪ್ಪ ಅವರನ್ನ ಕರೆಸಿ, ಅವರು ಸ್ಟೇಜ್ ಮೆಲೆ ಕಣ್ಣೀರು ಹಾಕುತ್ತಾರೆ. ರಮೇಶ್ ಜಾರಕಿಹೊಳಿನೂ ಅಳುತ್ತಾನೆ. ಅವರು ಒಂದು ಸಾರಿ ಅತ್ತರೆ ನಿಮ್ಮನ್ನ ಐದು ವರ್ಷ ಕಣ್ಣೀರು ಹಾಕಿಸುತ್ತಾರೆ. ಆದ್ದರಿಂದ ಈ ಬಾರಿ ಲಖನ್ ಅವರನ್ನ ಆರಿಸಿ, ನಗರದ ಅಭಿವೃದ್ಧಿ ಮಾಡಲು ಅವಕಾಶ ನೀಡಿ. ಜನರಿಂದ ನಾವು ಇಷ್ಟೊಂದು ಎತ್ತರಕ್ಕೆ ಬಂದಿದ್ದೆವೆ. ಲಖನ್ ಜಾರಕಿಹೊಳಿ ಮತ್ತು ನಾನು ನಿಮ್ಮ ಪರವಾಗಿದ್ದೇವೆ ಎಂದರು.

    ನಾವೂ ನಿಮ್ಮ ಜೊತೆ ಇದ್ದೇವೆ. ಇಂತಹ 10 ಪ್ರವಾಹ ಬರಲಿ ಗೋಕಾಕ್ ಸ್ವಚ್ಛತೆಗೆ ನಾನೂ ಸದಾ ಸಿದ್ಧ. ಒಂದು ತಿಂಗಳಲ್ಲಿ 40 ಗ್ರಾಮವನ್ನ ಸ್ವಚ್ಛ ಮಾಡಿದ್ದೇವೆ. ಗೋಕಾಕ್ ನಗರದಲ್ಲಿ ಪ್ರವಾಹ ಬಂದ ಬಳಿಕ ಸ್ವಚ್ಛತೆಯನ್ನ ನಾವು ಮಾಡಿದ್ದು. ಆದರೆ ರಮೇಶ್ ಜಾರಕಿಹೊಳಿ ಹಾಗೂ ಅವರ ಬೆಂಬಲಿಗರು ನಗರಸಭೆ ಸ್ವಚ್ಛ ಮಾಡಿದೆ ಎಂದು ಒಂದು ಕೋಟಿ ಲೂಟಿ ಮಾಡಿದ್ದಾರೆ. ಲೂಟಿ ಹಣದಲ್ಲಿ ಅರ್ಧ ಕೊತ್ವಾಲ್ ಗೌಡಾ ಕಿ ಜೆಬ್ ಮೆ, ಅರ್ಧ ಅಂಬಿಗೆ ಎಂದು ಸತೀಶ್ ಮಾರ್ಮಿಕವಾಗಿ ಕಿಡಿಕಾರಿದರು.

    ಮುಂಬರುವ ದಿನಗಳಲ್ಲಿ ನಿಮ್ಮ ಪರವಾಗಿ ಇರುವಂತವರು ಶಾಸಕರಾಗಬೇಕು. ನಮ್ಮನ್ನ ಜನ ಶಾಸಕರನ್ನಾಗಿ ಮಾಡಿದ್ದಾರೆ, ಯಾವುದೇ ಶ್ರೀಮಂತಿಕೆ ನಮ್ಮನ್ನ ಶಾಸಕನನ್ನಾಗಿ ಮಾಡಿಲ್ಲ. ಅದರ ಅರಿವು ನಮಗೆ ಇರಬೇಕು. ಈ ಸ್ಥಾನಕ್ಕೆ ಎಷ್ಟು ಮಹತ್ವ ಇದೆ ಎನ್ನುವುದನ್ನು ಈ ಚುನಾವಣೆಯಲ್ಲಿ ತೋರಿಸಬೇಕು. ಈ ಬಾರಿ ಕೊತ್ವಾಲ್, ಅಂಬಿ, ರಮೇಶ್ ಜಾರಕಿಹೊಳಿ ಮೆರೆ ದರ್ಬಾರ್ ಕಿ ಟೀಮ್ ಎನ್ನುತ್ತಾರೆ. ಇವರು ಗೋಕಾಕ್‍ನ ಮೂರು ಅಮೂಲ್ಯ ರತ್ನಗಳು ಇದ್ದಂಗೆ. ಈ ಮೂರು ರತ್ನ ಹೋಗುವವರೆಗೆ ನಿಮ್ಮನ್ನ ಮಲಗಲಿಕ್ಕೆ ಬಿಡಲ್ಲ. ರಮೇಶ್ ಜಾರಕಿಹೊಳಿ ಕಾಂಗ್ರೆಸ್‍ನಲ್ಲಿ ಇದ್ದರೆ ಮತ್ತೆ ಶಾಸಕ ಆಗುತ್ತಿದ್ದ, ಆದರೆ ಈಗ ಅವರು ಬಿಜೆಪಿಗೆ ಹೋಗಿದ್ದಾರೆ ಟಾಂಗ್ ಕೊಟ್ಟರು.

  • ದೊಡ್ಡಣ್ಣನಾಗಿ ಸ್ಪರ್ಧೆ ಮಾಡದಂತೆ ಹೇಳುವುದು ನನ್ನ ಕರ್ತವ್ಯ: ಲಖನ್‍ಗೆ ರಮೇಶ್ ಟಾಂಗ್

    ದೊಡ್ಡಣ್ಣನಾಗಿ ಸ್ಪರ್ಧೆ ಮಾಡದಂತೆ ಹೇಳುವುದು ನನ್ನ ಕರ್ತವ್ಯ: ಲಖನ್‍ಗೆ ರಮೇಶ್ ಟಾಂಗ್

    ಬೆಳಗಾವಿ: ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಅವರಿಗೆ ಹೇಳಿದ್ದೇನೆ. ದೊಡ್ಡಣ್ಣನಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ಇನ್ನು ಸ್ಪರ್ಧೆ ಮಾಡುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.

    ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಯಾವುದೇ ಕಾರಣಕ್ಕೂ ಸಹೋದರ ರಮೇಶ್ ಕುಮಾರ್ ಅವರನ್ನು ಭೇಟಿಯಾಗಲ್ಲ ಎಂಬ ಲಖನ್ ಜಾರಕಿಹೊಳಿ ಅವರ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅನರ್ಹ ಶಾಸಕರು, ದೊಡ್ಡವನಾಗಿ ತಿಳುವಳಿಕೆ ಹೇಳಿದ್ದೇನೆ. ನಾಮಪತ್ರ ಸಲ್ಲಿಸಿದ ಬಳಿಕ ಸ್ಪರ್ಧೆಯನ್ನ ಎದುರಿಸಲೇ ಬೇಕು. ಅದು ಯಾರೇ ಆಗಿದ್ದರೂ ಸರಿ ಎಂದರು.

    ಸುಪ್ರೀಂಕೋರ್ಟ್ ಅನುಮತಿ ನೀಡಿದರೆ ನಾವು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ. ಸೋಮವಾರ ಸ್ಪರ್ಧೆಯ ಬಗ್ಗೆ ಸ್ಪಷ್ಟನೆ ನೀಡುತ್ತೇವೆ. ತೀರ್ಪು ನಮ್ಮ ಪರವಾಗಿ ಬರುತ್ತದೆ ಎಂಬ ವಿಶ್ವಾಸವಿದೆ. ಉಪ ಚುನಾವಣೆ ಸಂಬಂಧ ಗುರುವಾರ ಕ್ಷೇತ್ರದ ಜನರು ಹಾಗೂ ಬೆಂಬಲಿಗರ ಜೊತೆಗೆ ಸಭೆ ನಡೆಸುತ್ತೇನೆ ಎಂದು ತಿಳಿಸಿದರು.

    ಮಾಜಿ ಸಚಿವ ಸತೀಶ್ ಜಾರಕಿಹೊಳಿ ಎಂದು ಮಾಧ್ಯಮಗಳು ಪ್ರಶ್ನೆ ಕೇಳಲು ಮುಂದಾಗುತ್ತಿದ್ದಂತೆ, ಈಗ ಎನೂ ಹೇಳುವುದಿಲ್ಲ. ಮುಂದೆ ಮಾತನಾಡುತ್ತೇನೆ ಎಂದು ಜಾರಿಕೊಂಡರು.

  • ಬಂಡೆಗೆ ಸವಾಲು ಹಾಕಿದ ಸಾಹುಕಾರನಿಗೆ ಸಂಕಷ್ಟ

    ಬಂಡೆಗೆ ಸವಾಲು ಹಾಕಿದ ಸಾಹುಕಾರನಿಗೆ ಸಂಕಷ್ಟ

    -ಸಿದ್ದರಾಮಯ್ಯಗೆ ಕುಂದಾನಗರಿಯ ಸಾರಥ್ಯ

    ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅನರ್ಹಗೊಂಡಿರುವ ಎಲ್ಲ ಶಾಸಕರನ್ನು ಚುನಾವಣೆಯ ರಣರಂಗದಲ್ಲಿ ಎದುರಾಗುತ್ತೇನೆ. ಅಲ್ಲಿಯೇ ನಮ್ಮ-ನಿಮ್ಮ ಮುಖಾಮುಖಿ ಎಂದು ಸವಾಲು ಹಾಕಿದ್ದರು. ಆದರೆ ಇದೀಗ ತಿಹಾರ್ ಜೈಲು ಸೇರಿರುವ ಡಿಕೆ ಶಿವಕುಮಾರ್ ಉಪ ಚುನಾವಣೆಯಿಂದ ದೂರ ಉಳಿಯುವಂತಾಗಿದೆ. ಡಿ.ಕೆ.ಶಿವಕುಮಾರ್ ಗೆ ಸವಾಲು ಹಾಕಿದ್ದ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿಯನ್ನು ಸೋಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಪಣ ತೊಟ್ಟಿದ್ದಾರೆ. ಹೀಗಾಗಿ ಸಿದ್ದರಾಮಯ್ಯರಿಗೆ ಸತೀಶ್ ಜಾರಕಿಹೊಳಿ ಸಾಥ್ ನೀಡಿದ್ದಾರೆ.

    ಸರ್ಕಾರ ಪತನಕ್ಕೆ ರಮೇಶ್ ಜಾರಕಿಹೊಳಿ ಕಾರಣ ಎಂದು ಡಿಕೆಶಿ ಬಹಿರಂಗವಾಗಿಯೇ ಸವಾಲು ಹಾಕಿದ್ದರು. ಡಿಕೆಶಿ ಅನುಪಸ್ಥಿತಿಯಲ್ಲಿ ಸಿದ್ದರಾಮಯ್ಯ ಗೋಕಾಕ್ ಅಖಾಡದ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಗೋಕಾಕ್ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಿಂದ ಲಖನ್ ಜಾರಕಿಹೊಳಿ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ನಿಟ್ಟಿನಲ್ಲಿ ಲಖನ್ ಜಾರಕಿಹೊಳಿ ಪರ ಕೈ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆ.

    ಪಕ್ಷ ತೊರೆದು ಸರ್ಕಾರ ಬೀಳಿಸಿದ್ದರಿಂದ ಸಹಜವಾಗಿ ರಮೇಶ್ ಜಾರಕಿಹೊಳಿ ಮೇಲೆ ಮುನಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಸೋದರನ ವಿರುದ್ಧ ಬಿರುಸಿನ ಪ್ರಚಾರದ ಪ್ಲಾನ್ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಬಹಿರಂಗ ಸಮಾವೇಶಗಳನ್ನು ಆಯೋಜಿಸುವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಬಾರಿಯ ಉಪ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿಯನ್ನ ಸೋಲಿಸುವ ಜವಾಬ್ದಾರಿ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿ ಹೊಳಿಯವರಿಗೆ ಹೈಕಮಾಂಡ್ ನೀಡಿದೆ ಎಂದು ತಿಳಿದು ಬಂದಿದೆ.

    ಬಂಡೆಗೆ ಸವಾಲ್ ಹಾಕಿದ ಸಾಹುಕಾರನಿಗೆ ಈಗ ಹೊಸ ಸವಾಲು ಎದುರಾಗಿದೆ. ಒಂದು ಕಡೆ ರಾಜಕೀಯ ಗುರು ಮತ್ತೊಂದು ಕಡೆ ಸಹೋದರ ಇಬ್ಬರ ಸವಾಲನ್ನ ಒಟ್ಟೊಟ್ಟಿಗೆ ರಮೇಶ್ ಜಾರಕಿಹೊಳಿ ಎದುರಿಸಬೇಕಾಗಿದೆ. ಎರಡೂ ಸವಾಲನ್ನ ಒಟ್ಟಿಗೆ ಎದುರಿಸಿ ಸಾಹುಕಾರ ಸೈ ಅನ್ನಿಸಿಕೊಳ್ಳುತ್ತಾರಾ ಅಥವಾ ಸೋತು ಕೈ ಚೆಲ್ತಾರಾ ಅನ್ನೋದೇ ಸದ್ಯದ ಕುತೂಹಲವಾಗಿದೆ.