Tag: ಲಕ್ಷ್ಮಿ ಮಂಚು

  • ಲಕ್ಷ್ಮಿ ಮಂಚು ಇನ್ಸ್ಟಾಗ್ರಾಂ ಖಾತೆ ಹ್ಯಾಕ್- ಫ್ಯಾನ್ಸ್‌ಗೆ ಎಚ್ಚರಿಸಿದ ನಟಿ

    ಲಕ್ಷ್ಮಿ ಮಂಚು ಇನ್ಸ್ಟಾಗ್ರಾಂ ಖಾತೆ ಹ್ಯಾಕ್- ಫ್ಯಾನ್ಸ್‌ಗೆ ಎಚ್ಚರಿಸಿದ ನಟಿ

    ತೆಲುಗಿನ ನಟಿ ಲಕ್ಷ್ಮಿ ಮಂಚು (Lakshmi Manchu) ಇನ್ಸ್ಟಾಗ್ರಾಂ ಖಾತೆ ಹ್ಯಾಕ್ (Hack) ಆಗಿದೆ. ನಟಿಯ ಖಾತೆಯಿಂದ ಫ್ಯಾನ್ಸ್‌ಗೆ ಕಿಡಿಗೇಡಿಗಳು ಹಣಕ್ಕೆ ಬೇಡಿಕೆ ಇಟ್ಟಿರುವ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಲಕ್ಷ್ಮಿ ಮಂಚು ಸೈಬರ್ ಕ್ರೈಮ್‌ಗೆ ದೂರು ನೀಡಿದ್ದಾರೆ. ಎಕ್ಸ್ ಖಾತೆಯಲ್ಲಿ ಫ್ಯಾನ್ಸ್‌ಗೆ ಸಂದೇಶ ನೀಡಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಮೆಜೆಸ್ಟಿಕ್ 2’ ನಾಯಕಿ ಸಂಹಿತಾ ವಿನ್ಯಾ

    ಇನ್ಸ್ಟಾಗ್ರಾಂ ಹ್ಯಾಕ್‌ ಕುರಿತು ಲಕ್ಷ್ಮಿ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿ, ನನ್ನ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ. ನನಗೆ ಹಣದ ಅಗತ್ಯವಿದ್ದರೆ, ನಾನೇ ನಿಮಗೆ ನೇರವಾಗಿ ಕೇಳುತ್ತೇನೆ. ಅದು ಸಾಮಾಜಿಕ ಜಾಲತಾಣದಲ್ಲಿ ಅಲ್ಲ. ಯಾರೂ ಹಣ ಕಳೆದುಕೊಂಡಿಲ್ಲ ಎಂದು ಭಾವಿಸಿದ್ದೇನೆ. ಎಲ್ಲವನ್ನೂ ಸರಿಪಡಿಸಿದ ಬಳಿಕ ಮತ್ತೆ ಎಕ್ಸ್ ಖಾತೆಯಲ್ಲಿ ತಿಳಿಸುತ್ತೇನೆ ಎಂದು ಲಕ್ಷ್ಮಿ ಮಂಚು ಫ್ಯಾನ್ಸ್‌ಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರಕ್ಕಾಗಿ ಒಂದಾದ ‘ಬ್ಲಿಂಕ್’ ಮತ್ತು ‘ಶಾಖಾಹಾರಿ’ ನಿರ್ಮಾಪಕರು

    ಅಂದಹಾಗೆ, ದಕ್ಷ, ಅಗ್ನಿ ನಕ್ಷತ್ರಂ ಸೇರಿದಂತೆ ತೆಲುಗಿನ ಹಲವು ಸಿನಿಮಾಗಳಲ್ಲಿ ಲಕ್ಷ್ಮಿ ಮಂಚು ಬ್ಯುಸಿಯಾಗಿದ್ದಾರೆ.

  • ಕಾಲಿಗೆ ಬಿದ್ದ ಅಭಿಮಾನಿ ವರ್ತನೆ ಕಂಡು ಶಾಕ್‌ ಆದ ಲಕ್ಷ್ಮಿ ಮಂಚು

    ಕಾಲಿಗೆ ಬಿದ್ದ ಅಭಿಮಾನಿ ವರ್ತನೆ ಕಂಡು ಶಾಕ್‌ ಆದ ಲಕ್ಷ್ಮಿ ಮಂಚು

    ಟಾಲಿವುಡ್ ಬಹುಮುಖ ಪ್ರತಿಭೆ ಲಕ್ಷ್ಮಿ ಮಂಚು (Lakshmi Manchu) ಸದ್ಯ ‘ಆದಿಪರ್ವ’ (Adiparva) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದ ಟ್ರೈಲರ್ ಕೂಡ ಅಭಿಮಾನಿಗಳ ಸೆಳೆದಿದೆ. ಇದೀಗ ಸಿನಿಮಾ ಪ್ರಚಾರ ಕಾರ್ಯಕ್ಕೆ ನಟಿ ಸಾಥ್ ನೀಡುತ್ತಿದ್ದಾರೆ. ಈ ವೇಳೆ, ಏಕಾಏಕಿ ಲಕ್ಷ್ಮಿ ಮಂಚು ಕಾಲಿಗೆ ಅಭಿಮಾನಿಯೊಬ್ಬ ನಮಸ್ಕರಿಸಿದ್ದಾರೆ. ಅಭಿಮಾನಿಯ ವರ್ತನೆ ಕಂಡು ನಟಿ ಶಾಕ್ ಆಗಿದ್ದಾರೆ.

    ಆದಿಪರ್ವ ಸಿನಿಮಾದಲ್ಲಿ ಲಕ್ಷ್ಮಿ ಮಂಚು ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ದೈವಿಕ ಕಥೆ ಇದಾಗಿದ್ದು, ಇಡೀ ಸಿನಿಮಾ ಅವರ ಪಾತ್ರದ ಸುತ್ತ ಸುತ್ತುತ್ತದೆ. ಹೈದರಾಬಾದ್‌ನಲ್ಲಿ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ‘ಆದಿಪರ್ವ’ ಚಿತ್ರದ ಬಗ್ಗೆ ಮಾತನಾಡಲು ನಟಿ ವೇದಿಕೆ ಹತ್ತಿದ್ದಾರೆ. ಇದೇ ಸಮಯದಲ್ಲಿ ಅಲ್ಲಿಯೇ ಇದ್ದ ಅಭಿಮಾನಿ ವೇದಿಕೆಯನ್ನೇರಿದ್ದಾನೆ. ಹಿಂದೆ ಮುಂದೆ ನೋಡದೇ ಸೀದಾ ಲಕ್ಷ್ಮಿ ಮಂಚು ಪಾದಕ್ಕೆ ನಮಸ್ಕಾರ ಮಾಡಿದ್ದಾನೆ. ಈ ವರ್ತನೆಯನ್ನ ನಿರೀಕ್ಷೆ ಮಾಡದ ನಟಿ ಅಭಿಮಾನಿ ಕಾಲಿಗೆ ಬೀಳುತ್ತಿದ್ದಂತೆ ಗಲಿಬಿಲಿಗೊಂಡು ಹಿಂದೆ ಸರಿದಿದ್ದಾರೆ.

    ಆ ನಂತರ ಅವರ ಅಂಗರಕ್ಷಕರು ಬಂದು ಆ ಅಭಿಮಾನಿಯನ್ನ ಮೇಲೆತ್ತಿ ಕೆಳಗಿಳಿಸಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಅಭಿಮಾನಿ ಆ ನಂತರ ಕಣ್ಣೀರನ್ನೂ ಹಾಕಿದ್ದಾನೆ. ಇದನ್ನ ಗಮನಿಸಿರುವ ಮಂಚು ಲಕ್ಷ್ಮೀ ಕಾರ್ಯಕ್ರಮ ಮುಕ್ತಾಯವಾದ ನಂತರ ಅಭಿಮಾನಿಯನ್ನ ಕರೆದು ಫೋಟೋವನ್ನ ಕ್ಲಿಕಿಸಿಕೊಂಡಿದ್ದಾರೆ. ಅಭಿಮಾನಿಯ ವಿವರವನ್ನೂ ಪಡೆದು ಚಿತ್ರದ ವಿಶೇಷ ಪ್ರದರ್ಶನಕ್ಕೆ ಆಹ್ವಾನ ನೀಡೋದಾಗಿ ತಿಳಿಸಿದ್ದಾರೆ.

    ‘ಆದಿಪರ್ವ’ ಚಿತ್ರದ ಲಕ್ಷ್ಮಿ ಮಂಚು ಲುಕ್ ಕೆಲ ದಿನಗಳ ಹಿಂದೆ ರಿವೀಲ್ ಆಗಿತ್ತು. ನಟಿಯನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. ಈ ಚಿತ್ರದ ಪೋಸ್ಟರ್ ನೋಡಿದ್ರೆ ಸಾಕ್ಷಾತ್ ದೇವಿಯಂತೆಯೇ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿರುವ ನಟಿಯ ಲುಕ್ ನೋಡುಗರ ಮನಮುಟ್ಟಿದೆ. ಆದಿಪರ್ವ ಸಿನಿಮಾ 5 ಭಾಷೆಗಳಲ್ಲಿ ಏಪ್ರಿಲ್ 5ರಂದು ರಿಲೀಸ್ ಆಗಲಿದೆ. ಇದನ್ನೂ ಓದಿ:ಡಿವೋರ್ಸ್ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಮಂತಾ- ನಾಗಚೈತನ್ಯ

    ‘ಆದಿಪರ್ವ’ ಸಿನಿಮಾವನ್ನ ಸಂಜೀವ ಕುಮಾರ್ ಮೇಗೋಟಿ ಡೈರೆಕ್ಷನ್ ಮಾಡಿದ್ದಾರೆ. ಸೀರಿಯಲ್, ಸಿನಿಮಾ ಅಂತ ಈಗಾಗಲೇ ಇವರು ಕೆಲಸ ಮಾಡಿದ್ದಾರೆ.

  • ಕನ್ನಡಕ್ಕೆ ಎಂಟ್ರಿ ಕೊಟ್ಟ ತೆಲುಗಿನ ಲಕ್ಷ್ಮಿ ಮಂಚು

    ಕನ್ನಡಕ್ಕೆ ಎಂಟ್ರಿ ಕೊಟ್ಟ ತೆಲುಗಿನ ಲಕ್ಷ್ಮಿ ಮಂಚು

    ತೆಲುಗಿನ ಹೆಸರಾಂತ ನಟ ಮೋಹನ್ ಬಾಬು (Mohan Babu) ಪುತ್ರಿ ಲಕ್ಷ್ಮಿ ಮಂಚು (Lakshmi Manchu) ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಬಹುಭಾಷೆಗಳಲ್ಲಿ ಮೂಡಿ ಬರುವ ‘ಆದಿಪರ್ವ’ (Adiparva) ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಸದ್ಯ ಶಕ್ತಿ ರೂಪ ತಾಳಿರುವ ಲಕ್ಷ್ಮಿ ಮಂಚು ಪೋಸ್ಟರ್ ಲುಕ್ ರಿಲೀಸ್ ಆಗಿದೆ.

    ನಟಿ, ನಿರೂಪಕಿ ಲಕ್ಷ್ಮಿ ಮಂಚು ಸದಾ ಒಂದಲ್ಲಾ ಒಂದು ಹೊಸ ಬಗೆಯ ಪಾತ್ರಗಳ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ವರ್ಷಕ್ಕೆ ಒಂದು ಸಿನಿಮಾ ಮಾಡಿದ್ರು ಜನಕ್ಕೆ ಕನೆಕ್ಟ್ ಆಗುವಂತಹ ಪಾತ್ರಗಳಲ್ಲಿ ನಟಿ ಕಾಣಿಸಿಕೊಳ್ತಾರೆ. ಸದ್ಯ ಶಕ್ತಿದೇವಿಯ ಕಥೆ ಹೇಳೋಕೆ ನಟಿ ಸಜ್ಜಾಗಿದ್ದಾರೆ.

    ‘ಆದಿಪರ್ವ’ ಚಿತ್ರದಲ್ಲಿ ಲಕ್ಷ್ಮಿ ಮಂಚು ಲುಕ್ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರದ ಪೋಸ್ಟರ್ ನೋಡಿದ್ರೆ ಸಾಕ್ಷಾತ್ ದೇವಿಯಂತೆಯೇ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿರುವ ನಟಿಯ ಲುಕ್ ನೋಡುಗರ ಮನಮುಟ್ಟಿದೆ. ಇದನ್ನೂ ಓದಿ:ಪ್ರಶಾಂತ್ ನೀಲ್‌ಗೆ ಕೈ ಮುಗಿದು ಧನ್ಯವಾದ ತಿಳಿಸಿದ ರಿಯಲ್ ಸ್ಟಾರ್

    ‘ಆದಿಪರ್ವ’ ಸಿನಿಮಾವನ್ನ ಸಂಜೀವ ಕುಮಾರ್ ಮೇಗೋಟಿ ಡೈರೆಕ್ಷನ್ ಮಾಡಿದ್ದಾರೆ. ಸೀರಿಯಲ್, ಸಿನಿಮಾ ಅಂತ ಈಗಾಗಲೇ ಇವರು ಕೆಲಸ ಮಾಡಿದ್ದಾರೆ.

  • ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡದಿರುವುದು ದೇಶಕ್ಕೆ ಅವಮಾನ- ಲಕ್ಷ್ಮಿ ಮಂಚು

    ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡದಿರುವುದು ದೇಶಕ್ಕೆ ಅವಮಾನ- ಲಕ್ಷ್ಮಿ ಮಂಚು

    ಲಿಂಗ ವಿವಾಹಕ್ಕೆ (Same Sex Marraige) ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಮಂಗಳವಾರ (ಅ.17) ಸುಪ್ರೀಂ ಕೋರ್ಟ್‌ ಪಂಚಸದಸ್ಯ ಪೀಠ ತೀರ್ಪು ನೀಡಿತ್ತು. ಈ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಹೀಗಿರುವಾಗ ಇದರ ಬಗ್ಗೆ ನಟಿ ಲಕ್ಷ್ಮಿ ಮಂಚು (Lakshmi Manchu) ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ಸಲಿಂಗ ವಿವಾಹಕ್ಕೆ ಕೋರ್ಟ್‌ ತಡೆ ನೀಡಿರುವ ಬಗ್ಗೆ ನಟಿ ಲಕ್ಷ್ಮಿ ಮಂಚು ಟ್ವೀಟ್ ಮಾಡಿದ್ದಾರೆ. ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಲು ಸುಪ್ರೀಂ ಕೋರ್ಟ್ ತೀರ್ಪು ನನಗೆ ನಿರಾಸೆಗೊಳಿಸಿದೆ. ನನ್ನ ಹೃದಯ ಒಡೆದಿದೆ. ಎಲ್ಲಾ ರೀತಿಯ ಪ್ರೀತಿಯನ್ನು ಸ್ವೀಕರಿಸುವ, ಪ್ರಪಂಚದಲ್ಲಿನ ಪ್ರೀತಿಯ ಬಗ್ಗೆ ಬೋಧಿಸಿದ ದೇಶಕ್ಕೆ ಇದು ನಿಜವಾಗಿಯೂ ಅವಮಾನ ಎಂದಿದ್ದಾರೆ.

    ಅವರು ಬೇರೆ ದೇಶಗಳಲ್ಲಿ ಸ್ವತಂತ್ರವಾಗಿ ಬದುಕುತ್ತಾರೆ. ನಮ್ಮ ದೇಶದಲ್ಲಿ ಅವರ ಮದುವೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೇ? ಎಂದು ಬರೆದುಕೊಂಡಿದ್ದಾರೆ. ನಟಿಯ ಈ ಟ್ವೀಟ್ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ರಕ್ಷಕ್‌ ಬುಲೆಟ್‌ಗೆ ಇದ್ಯಂತೆ 5 ಮದುವೆ ಆಗುವ ಯೋಗ

    ಕಳೆದ ವರ್ಷ ‘ಮಾನ್ಸ್ಟರ್’ (Monster) ಎಂಬ ಚಿತ್ರದಲ್ಲಿ ಲಕ್ಷ್ಮಿ ಮಂಚು ಲೆಸ್ಬಿಯನ್ ರೋಲ್ ನಟಿಸಿದ್ದರು. ಚಿತ್ರದಲ್ಲಿನ ಹನಿ ರೋಸ್- ಲಕ್ಷ್ಮಿ ಮಂಚು ಲಿಪ್‌ಲಾಕ್ ದೃಶ್ಯಗಳು ಸಖತ್ ವೈರಲ್ ಆಗಿತ್ತು. ಹಾಗಾಗಿ ಈ ಕುರಿತು ನಟಿಯ ಟ್ವೀಟ್ ಭಾರೀ ವೈರಲ್ ಆಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಕ್ಕಳ ಜಗಳಕ್ಕೆ ಬ್ರೇಕ್‌ ಹಾಕಲು ಆಸ್ತಿ ಹಂಚಿಕೆಗೆ ಮುಂದಾದ ನಟ ಮೋಹನ್‌ ಬಾಬು?

    ಮಕ್ಕಳ ಜಗಳಕ್ಕೆ ಬ್ರೇಕ್‌ ಹಾಕಲು ಆಸ್ತಿ ಹಂಚಿಕೆಗೆ ಮುಂದಾದ ನಟ ಮೋಹನ್‌ ಬಾಬು?

    ಟಾಲಿವುಡ್‌ನ ಈ ಸ್ಟಾರ್‌ಗೆ ಹೆಸರೂ ಇದೆ ಹಣಾನೂ ಇದೆ. ಮೂವರು ಮಕ್ಕಳು, ಮಕ್ಕಳೆಲ್ಲಾ ಸ್ಟಾರ್ಸು. ಇದೀಗ ಆ ಸ್ಟಾರ್‌ಗೆ ಗಳಿಸಿದ ಆಸ್ತಿಯೇ ತಲೆನೋವು ತಂದಿದೆ. ಎದೆಎತ್ತರಕ್ಕೆ ಬೆಳೆದ ಮಕ್ಕಳು ಕಿತ್ತಾಡ್ಕೊಂಡು ಮೂರು ದಿಕ್ಕಲ್ಲಿ ದಾರಿ ಕಂಡುಕೊಂಡಿದ್ದಾರೆ. ಈ ಕಡೆ ತಂದೆ ಇನ್ನೊಂದು ದಾರಿ ಹಿಡಿದು ಹೊರಟಿದ್ದಾರೆ. ಏನಿದು ಟಾಲಿವುಡ್‌ನಲ್ಲಿ ಗುಲ್ಲಾಗಿರೋ ಜ್ಯುಬಲಿಹಿಲ್ಸ್ ಗಲ್ಲಿ ಸಮಾಚಾರ ಗೊತ್ತೇ..?

    ಟಾಲಿವುಡ್‌ನ (Tollywood)  ಶ್ರೀಮಂತ ನಟರಲ್ಲಿ ಇವರೂ ಒಬ್ಬರು. 90ರ ಕಾಲದ ಸೂಪರ್ ಸ್ಟಾರ್. ನಮ್ಮ್ ಅಂಬರೀಶ್ ಅವರ ಆಪ್ತಮಿತ್ರ. ಅವರ ಹೆಸರೇ ಡೈಲಾಗ್ ಕಿಂಗ್ ಮೋಹನ್ ಬಾಬು. ಡಿಫರೆಂಟ್ ಸ್ಟೈಲ್‌ನಿಂದ ಟಾಲಿವುಡ್‌ನಲ್ಲಿ ಭದ್ರನೆಲೆಕಂಡುಕೊಂಡ ಮೋಹನ್‌ಬಾಬುಗೆ ಮೂವರು ಮಕ್ಕಳು. ವಿಷ್ಣು ಮಂಚು(Vishnu Manchu)  ಮತ್ತು ಮನೋಜ್ ಮಂಚು (Manoj Manchu) ಹಾಗೂ ಲಕ್ಷ್ಮಿ ಮಂಚು. ಮೂರೂ ಮಕ್ಕಳು ಸ್ಟಾರೇ. ಆದರೆ ವಿಷ್ಣು ಹಾಗೂ ಮನೋಜ್ ಮಂಚುವಿನ ಪರಸ್ಪರ ಕಿತ್ತಾಟ ವೈಮನಸ್ಸು ನಾಲ್ಕು ಗೋಡೆ ಮಧ್ಯೆ ಉಳಿದಿಲ್ಲ. ಕೈಕೈಮಿಲಾಯಿಸಿಕೊಂಡು ಹೊಡೆದಾಡಿಕೊಂಡ ವೀಡಿಯೋ ವೈರಲ್ ಆಗಿ ಇಳಿವಯಸಿನಲ್ಲಿ ಮೋಹನ್ ಬಾಬು(Mohan Babu) ತಲೆಕೆಡಿಸಿಕೊಳ್ಳುವಂತಾಯ್ತು. ಇನ್ನು ಮಗಳು ಲಕ್ಷ್ಮಿ ಕೂಡ ತಮ್ಮದೇ ಸೆಪರೇಟ್ ಮನೆ ಮಾಡ್ಕೊಂಡು ವಾಸವಿದ್ದಾಳೆ.

    ಮಕ್ಕಳು ಅವರವರ ಪಾಡಿಗೆ ದೂರ ಇದ್ರೂ ಮೋಹನ್ ಬಾಬು ತಲೆ ಕೆಡಿಸಿಕೊಳ್ತಿರಲಿಲ್ಲವೇನೋ ಆದರೆ ಆಗಿರೋದು ಬೇರೆ ಅನ್ನುತ್ತದೆ ಟಾಲಿವುಡ್ ಮೂಲ. ಮಕ್ಕಳ ಜಗಳ ನೋಡಲಾರದೆ ಮೋಹನ್ ಬಾಬು ಆಸ್ತಿ ಪಾಲು ಮಾಡಲು ಅಲೆಯುತ್ತಿದ್ದಾರೆ. ಆಂಧ್ರದ ರಿಜಿಸ್ಟರ್ ಆಫೀಸ್‌ಗೂ ಮೋಹನ್ ಬಾಬು ಕಾಲಿಟ್ಟಿದ್ದು ಮಕ್ಕಳಿಗೆ ಆಸ್ತಿ ಪಾಲು ಮಾಡಿ ಪಾರಾಗುತ್ತಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ನೆಮ್ಮದಿ ಜೀವನ ಕಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದಾರಂತೆ. ಅದಕ್ಕೆ ಹೇಳೋದು ಹಣ ಅತಿಯಾಗಿದ್ದರೂ ಕಷ್ಟವೇ.

    ಸ್ಟಾರ್ ನಟರ ಕುಟುಂಬ, ಕಲಾವಿದರು ಅಂದ ಮೇಲೆ ಅಭಿಮಾನಿಗಳಿಗೆ ಪ್ರೇರಣೆಯಾಗಬೇಕು. ಕೂಡಿ ಬಾಳುವ ಮೂಲಕ ಫ್ಯಾನ್ಸ್ಗೆ ಉದಾಹರಣೆಯಾಗಿ ನಿಲ್ಲಬೇಕು. ಆದರೆ ಮೋಹನ್ ಬಾಬು ಅವರ ಮನೆಯ ಜಗಳ ನೋಡಿ ಆಡಿಕೊಳ್ಳುವವರ ಬಾಯಿಗೆ ಗುರಿಯಾಗಿದ್ದಾರೆ. ಮುಂದೆ ಏನಾಗತ್ತೋ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]