Tag: ಲಕ್ನೋ. ಪೊಲೀಸ್

  • 6 ವರ್ಷವಾದ್ರೂ ಮಕ್ಕಳಾಗಿಲ್ಲವೆಂದು ಪತ್ನಿಯ ಗುಪ್ತಾಂಗವನ್ನ ಬ್ಲೇಡ್‌ನಿಂದ ಕೊಯ್ದು ವಿಕೃತಿ!

    6 ವರ್ಷವಾದ್ರೂ ಮಕ್ಕಳಾಗಿಲ್ಲವೆಂದು ಪತ್ನಿಯ ಗುಪ್ತಾಂಗವನ್ನ ಬ್ಲೇಡ್‌ನಿಂದ ಕೊಯ್ದು ವಿಕೃತಿ!

    ಲಕ್ನೋ: ಮದುವೆಯಾಗಿ (Marriage) 6 ವರ್ಷ ಕಳೆದರೂ ಮಕ್ಕಳಾಗಿಲ್ಲ ಅಂತಾ ತನ್ನ ಪತ್ನಿಗೆ ಚಿತ್ರಹಿಂಸೆ ಕೊಟ್ಟು ವಿಕೃತಿ ಮೆರೆದಿರುವ ಘಟನೆ ಉತ್ತರಪ್ರದೇಶದ (Uttar Pradesh) ಲಕ್ನೋದಲ್ಲಿ ನಡೆದಿದೆ.

    ಪತ್ನಿಯೊಂದಿಗೆ ಅಸಹಜವಾಗಿ ವರ್ತಿಸಿರುವ ಪತಿ ಆಕೆಯ ಗುಪ್ತಾಂಗವನ್ನು ಬ್ಲೇಡ್‌ನಿಂದ ಕೊಯ್ದು ವಿಕೃತಿ ಮೆರೆದಿದ್ದಾನೆ. ಪತ್ನಿ ತೀವ್ರ ಗಾಯಗೊಂಡ ಬಳಿಕ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಆರೋಪಿ ಪತಿಯನ್ನು ಲಕ್ನೋದ ಮೋಹನ್‌ಲಾಲ್‌ಗಂಜ್ ಪೊಲೀಸರು (Lucknow Police) ಬಂಧಿಸಿದ್ದಾರೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಯುವಕನ ಮೇಲೆ ಗುಂಡೇಟು – ಕ್ಷಣಮಾತ್ರದಲ್ಲಿ ತಪ್ಪಿದ ಅನಾಹುತ

    ಏನಿದು ಘಟನೆ?: ದಂಪತಿಗೆ ಮದುವೆಯಾಗಿ 6 ವರ್ಷಗಳಾದರೂ ಮಕ್ಕಳಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಪತಿ, ಪತ್ನಿಗೆ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ್ದ. ನಿನ್ನೆ ಮದ್ಯದ ಅಮಲಿನಲ್ಲಿದ್ದ ಪತಿ, ಆಕೆಯ ಮೇಲೆ ಅಸ್ವಾಭಾವಿಕವಾಗಿ ವರ್ತಿಸಿದ್ದಾನೆ. ಆಕೆ ವಿರೋಧಿಸಲು ಮುಂದಾದಾಗ ಆಕೆಯ ಗುಪ್ತಾಂಗ ಹಾಗೂ ಎದೆಯ ಭಾಗಕ್ಕೆ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾನೆ. ಪತಿಯ ಚಿತ್ರಹಿಂಸೆ ತಾಳಲಾರದೇ ಆಕೆ ತವರು ಮನೆಗೆ ಹೋಗಿದ್ದಾಳೆ. ಅಲ್ಲಿ ತನ್ನ ತಾಯಿಯೊಂದಿಗೆ ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ಬಳಿಕ ಆಕೆಯನ್ನು ಝಲ್ಕರಿ ಬಾಯಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಪತ್ನಿಯ ಸಹೋದರ ನೀಡಿದ ದೂರಿನ ಮೇರೆಗೆ ಕೇಸ್ (FIR) ದಾಖಲಿಸಿ ಕ್ರೂರಿ ಪತಿಯನ್ನ ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿಯುತ್ತಿದೆ ಎಂದು ದಕ್ಷಿಣ ವಲಯದ ಡಿಸಿಪಿ ರಾಹುಲ್ ರಾಜ್ ತಿಳಿಸಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಹುಲಿವೇಷ: ಕುಣಿದು ಕುಪ್ಪಳಿಸಿದ ರೂಪೇಶ್ ಶೆಟ್ಟಿ

    Live Tv
    [brid partner=56869869 player=32851 video=960834 autoplay=true]

  • ಮದುವೆಯ ದಿನ ವರನಿಂದ ರಕ್ತದಾನ- ಬಾಲಕಿಯ ಪ್ರಾಣ ಉಳಿಸಿದ ಪೊಲೀಸ್

    ಮದುವೆಯ ದಿನ ವರನಿಂದ ರಕ್ತದಾನ- ಬಾಲಕಿಯ ಪ್ರಾಣ ಉಳಿಸಿದ ಪೊಲೀಸ್

    ಲಕ್ನೋ: ನವವಿವಾಹಿತ ಜೋಡಿ ತಮ್ಮ ಮದುವೆಯ ದಿನದಂದೇ ರಕ್ತದಾನ ಮಾಡಿ ಬಾಲಕಿಯ ಜೀವ ಉಳಿಸಿ ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಉತ್ತರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆಶಿಶ್ ಕುಮಾರ್ ಮಿಶ್ರಾ ಮದುವೆಯಾಗಿ ತಕ್ಷಣ ಬಾಲಕಿಗೆ ರಕ್ತದಾನ ಮಾಡಿದ್ದಾರೆ. ನಂತರ ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿಕೊಂಡು ಅಡಿ ಬರಹ ಬರದುಕೊಂಡಿದ್ದಾರೆ.

    ಬಾಲಕಿಗೆ ರಕ್ತದ ಅವಶ್ಯಕತೆ ಇತ್ತು ಆದರೆ ಯಾರು ಕೂಡ ರಕ್ತಾದಾನ ಮಾಡಲು ಮುಂದಾಗಿರಲಿಲ್ಲ. ಹಾಗಾಗಿ ಮದುವೆಯ ದಿನ ಮದುವೆಯ ಉಡುಗೆಯಲ್ಲೇ ತೆರಳಿ ರಕ್ತದಾನ ಮಾಡಿ ಬಾಲಕಿಯ ಜೀವ ಉಳಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.

    ಆಶಿಶ್ ಕುಮಾರ್ ಮಿಶ್ರಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಂತೆ ಹಲವರು ಮದುವೆಯ ಶುಭಾಶಯ ತಿಳಿಸಿ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಉತ್ತರಪ್ರದೇಶದ ಪೊಲೀಸ್ ಇಲಾಖೆ ಈ ಪೋಸ್ಟ್ ನ್ನು ರೀ ಟ್ವೀಟ್ ಮಾಡಿ ಯುವಕರಿಗೆ ರಕ್ತದಾನ ಮಾಡುವಂತೆ ಮನವಿ ಮಾಡಿಕೊಂಡಿದೆ.