Tag: ಲಂಚ

  • ನಾವು ನೀವೆಲ್ಲಾ ಮನೆ ಕಟ್ತಿರೋದು ಫಿಲ್ಟರ್ ಮರಳಲ್ಲೇ – ಖಾಕಿ ಲಂಚಬಾಕತನಕ್ಕೆ ಸಿಕ್ತು ಸಾಕ್ಷಿ

    ನಾವು ನೀವೆಲ್ಲಾ ಮನೆ ಕಟ್ತಿರೋದು ಫಿಲ್ಟರ್ ಮರಳಲ್ಲೇ – ಖಾಕಿ ಲಂಚಬಾಕತನಕ್ಕೆ ಸಿಕ್ತು ಸಾಕ್ಷಿ

    ಕೋಲಾರ: ಖಡಕ್ ರಾಜಕಾರಣಿ ಆರೋಗ್ಯ ಸಚಿವ ರಮೇಶ್ ಕುಮಾರ್ ತವರಲ್ಲೇ ಕೆರೆಗಳ ಕಗ್ಗೊಲೆ ನಡೆಯುತ್ತಿದೆ. ಕೋಲಾರದ ಮಾಲೂರಿನಲ್ಲಿರುವ ಬಹುತೇಕ ಕೆರೆಗಳಲ್ಲಿ ಫಿಲ್ಟರ್ ಮರಳು ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

    ಮುಂಗಾರು ಕೊರತೆಯ ನಡುವೆಯೂ ಕೆರೆಗಳಲ್ಲಿ ಸಂಗ್ರಹವಾಗಿರುವ ಅಲ್ಪಸ್ವಲ್ಪ ನೀರನ್ನು ಫಿಲ್ಟರ್ ದಂಧೆಗೆ ಬಳಸಲಾಗುತ್ತಿದೆ. ಇದೇ ಮರಳನ್ನು ರಾತ್ರೋರಾತ್ರಿ ಮಹಾನಗರಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಸರಬರಾಜು ಮಾಡಲಾಗ್ತಿದೆ. ಮರಳು ದಂಧೆಕೋರ ಪ್ರಭಾಕರ್‍ನಿಂದ ಮಾಲೂರು ಠಾಣೆಗೆ ತಿಂಗಳಿಗೆ 50 ಸಾವಿರ ರೂಪಾಯಿ ಸಂದಾಯವಾಗಿದೆ ಎಂದು ತಿಳಿದುಬಂದಿದೆ.

    ದಂಧೆ ಬಗ್ಗೆ ಪ್ರಶ್ನೆ ಮಾಡಿದವರನ್ನೇ ಪೊಲೀಸರು ಬೆದರಿಸ್ತಿದ್ದಾರಂತೆ. ಯಾವುದಾದರೊಂದು ಕೇಸ್ ಹಾಕಿ ಸಿಲುಕಿಸೋ ಧಮ್ಕಿ ಹಾಕ್ತಿದ್ದಾರೆ ಎನ್ನಲಾಗಿದೆ. ಮಾಲೂರು ಪೊಲೀಸ್ ಠಾಣೆಯ ಮುಖ್ಯಪೇದೆ ವೆಂಕಟರಾಮೇಗೌಡ ಮರಳು ದಂಧೆಯಲ್ಲಿ ಭಾಗಿಯಾಗಿರುವ ಸೋಮಶೇಖರ್ ನಡೆಸಿರುವ ಆಡಿಯೋ ತುಣುಕು ಕೂಡ ಲಭ್ಯವಾಗಿದೆ. ಆದ್ರೆ ಡಿಸಿ ಮಾತ್ರ ಫಿಲ್ಟರ್ ಮರಳು ದಂಧೆಯನ್ನು ಸುತಾರಂ ಒಪ್ಪಿಕೊಳ್ಳುತ್ತಿಲ್ಲ ಎನ್ನಲಾಗಿದೆ.

    https://www.youtube.com/watch?v=yWyalvTLt-E

  • ವಿಡಿಯೋ: ಹೆಲ್ಮೆಟ್, ಲೈಸನ್ಸ್ ಇಲ್ಲದಿದ್ರೂ ಪರ್ವಾಗಿಲ್ಲ 50ರೂ. ಕೊಡಿ- ಬಳ್ಳಾರಿ ಪೊಲೀಸರ ಲಂಚ ಬಯಲು

    ವಿಡಿಯೋ: ಹೆಲ್ಮೆಟ್, ಲೈಸನ್ಸ್ ಇಲ್ಲದಿದ್ರೂ ಪರ್ವಾಗಿಲ್ಲ 50ರೂ. ಕೊಡಿ- ಬಳ್ಳಾರಿ ಪೊಲೀಸರ ಲಂಚ ಬಯಲು

    ಬಳ್ಳಾರಿ: ಹೆಲ್ಮೆಟ್ ಹಾಗೂ ಲೈಸನ್ಸ್ ಇಲ್ಲದಿದ್ದರೂ ಪರವಾಗಿಲ್ಲ. 50 ರೂ. ಲಂಚ ಕೊಟ್ಟರೆ ಸಾಕು ನಿಮ್ಮನ್ನೂ ಬಿಟ್ಟು ಬಿಡ್ತಾರೆ ನಮ್ಮ ಪೊಲೀಸರು.

    ಹೌದು. ಬೈಕ್ ಸವಾರರ ದಾಖಲೆಗಳನ್ನು ಪರಿಶೀಲನೆ ಮಾಡೋ ನೆಪದಲ್ಲಿ ಬಳ್ಳಾರಿ ಪೊಲೀಸರು ಹಣ ವಸೂಲಿಗೆ ಇಳಿದುಬಿಟ್ಟಿರೋ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬೈಕ್ ಸವಾರರೊಬ್ಬರಿಂದ 50 ರೂಪಾಯಿ ಲಂಚ ವಸೂಲಿ ಮಾಡುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

    ಹೊಸಪೇಟೆ ತಾಲೂಕಿನ ಕಮಲಾಪುರ ಪೊಲೀಸ್ ಠಾಣೆಯ ಮುಖ್ಯ ಪೇದೆ ತಿಪ್ಪೇಸ್ವಾಮಿ ದಿನನಿತ್ಯ ಬೈಕ್ ಸವಾರರರಿಂದ ಲಂಚ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದ ಬೈಕ್ ಸವಾರ ತಪ್ಪಾಯ್ತು ಸರ್ ಇನ್ನೂ ಮುಂದೆ ಹಾಗೆ ಮಾಡಲ್ಲ ಅಂದಿದ್ದಾರೆ. ಆದರೂ 50 ರೂ. ಲಂಚ ವಸೂಲಿ ಮಾಡುತ್ತಿರುವುದನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    https://youtu.be/w8VymLlNG6U

  • ಪರಪ್ಪನ ಅಗ್ರಹಾರದಲ್ಲಿ ಶಶಿಕಲಾಗೆ ಅಡುಗೆ ಮನೆ- 2 ಕೋಟಿ ಲಂಚ ಪಡೆದು ಐಷಾರಾಮಿ ಸೌಲಭ್ಯ

    ಪರಪ್ಪನ ಅಗ್ರಹಾರದಲ್ಲಿ ಶಶಿಕಲಾಗೆ ಅಡುಗೆ ಮನೆ- 2 ಕೋಟಿ ಲಂಚ ಪಡೆದು ಐಷಾರಾಮಿ ಸೌಲಭ್ಯ

    ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹ ಅವ್ಯವಹಾರಗಳ ಅಡ್ಡೆ ಆಗಿದ್ದು, ಇದೀಗ ಜೈಲು ಉಪ ನಿರೀಕ್ಷಕಿ ಡಿ. ರೂಪ ಜೈಲಿನ ಅಕ್ರಮಗಳನ್ನು ಬಯಲಿಗೆಳೆದಿದ್ದಾರೆ.

    ಅಕ್ರಮ ಆಸ್ತಿ ಗಳಿಕೆ ಅರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಜಯಲಲಿತಾ ಆಪ್ತೆ ಶಶಿಕಲಾಗೆ ಪರಪ್ಪನ ಅಗ್ರಹಾರದಲ್ಲಿ ರಾಯಲ್ ಟ್ರೀಟ್‍ಮೆಂಟ್ ನೀಡಲಾಗುತ್ತಿದ್ದು, ಇದಕ್ಕಾಗಿ ಕಾರಾಗೃಹ ಮಹಾ ನಿರ್ದೇಶಕ ಸತ್ಯನಾರಾಯಣ್ ಗೆ 2 ಕೋಟಿ ಲಂಚ ನೀಡಿರುವುದಾಗಿ ಆರೋಪಿಸಲಾಗಿದೆ.

    ಲಂಚ ಪಡೆದು ಶಶಿಕಲಾಗೆ ಜೈಲಿನಲ್ಲಿ ರಾಯಲ್ ಟ್ರೀಟ್ಮೆಂಟ್ ನೀಡುವುದರ ಜೊತೆಗೆ ಪ್ರತ್ಯೇಕ ಅಡುಗೆ ಮನೆಯನ್ನು ನಿರ್ಮಿಸಿಕೊಡಲಾಗಿದೆ ಎಂದು ರೂಪ ರವರು ನೀಡಿರುವ ವರದಿಯಲ್ಲಿ ಉಲ್ಲೇಖವಾಗಿದೆ. ಇಷ್ಟೇ ಅಲ್ಲದೆ ಛಾಪಾಕಾಗದ ಹಗರಣದ ಅರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿಗೆ ಸೇವೆ ಮಾಡಲು ಕೈಗೊಬ್ಬ, ಕಾಲಿಗೊಬ್ಬ ಕೈದಿಗಳನ್ನು ಇರಿಸಲಾಗಿದೆ.

    ಇದರ ಜೊತೆಗೆ ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಸೇರಿದಂತೆ ಎಲ್ಲಾ ತರಹದ ಮಾದಕ ವಸ್ತುಗಳು ಸಪ್ಲೈ ಆಗುತ್ತಿದ್ದು ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ 18 ಕೈದಿಗಳನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟೀವ್ ರಿಪೋರ್ಟ್ ಬಂದಿದೆ.

    ಈ ವೇಳೆ ವಿಚಾರಣಧೀನ ಕೈದಿಯೊರ್ವ ನರ್ಸ್ ಜೊತೆ ಅನುಚಿತ ವರ್ತನೆ ನಡೆಸಿದ್ದಾನೆ ಎನ್ನಲಾಗಿದೆ. ಜೈಲು ಉಪ ನಿರೀಕ್ಷಕಿ ರೂಪರವರು ಇದೇ ತಿಂಗಳ 10ರಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಎಲ್ಲಾ ಅವ್ಯವಹಾರಗಳು ಬೆಳಕಿಗೆ ಬಂದಿವೆ. ರೂಪ ರವರು ಹಿರಿಯ ಅಧಿಕಾರಿಗಳಿಗೆ ನೀಡಿರುವ ವರದಿಯಿಂದ ಈ ಎಲ್ಲಾ ಅಕ್ರಮಗಳು ಬಹಿರಂಗವಾಗಿವೆ.

     

  • ತುಮಕೂರು: ಮಾಮೂಲಿ ಕೊಡ್ಲಿಲ್ಲವೆಂದು ಬಡ ಟೀ ವ್ಯಾಪಾರಿ ಮೇಲೆ ಪಿಎಸ್‍ಐ ಹಲ್ಲೆ

    ತುಮಕೂರು: ಮಾಮೂಲಿ ಕೊಡ್ಲಿಲ್ಲವೆಂದು ಬಡ ಟೀ ವ್ಯಾಪಾರಿ ಮೇಲೆ ಪಿಎಸ್‍ಐ ಹಲ್ಲೆ

    ತುಮಕೂರು: ಇತ್ತೀಚೆಗಷ್ಟೆ ಕ್ರಷರ್ ಮಾಲೀಕರಿಂದ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ ತುಮಕೂರು ಜಿಲ್ಲೆ ತಿಪಟೂರು ಗ್ರಾಮಾಂತರ ಪಿಎಸ್‍ಐ ಶ್ರೀಕಾಂತ್ ಅವರ ಇನ್ನೊಂದು ದರ್ಪ ಬಯಲಾಗಿದೆ. ಮಾಮೂಲಿ ಕೊಡ್ಲಿಲ್ಲ ಅಂತಾ ಅಮಾಯಕ, ಬಡ ಟೀ ಅಂಗಡಿ ಮಾಲೀಕನ ಮೇಲೆ ಪಿಎಸ್‍ಐ ದರ್ಪ ತೋರಿದ್ದಾರೆ.

    ಬಿದರೆಗುಡಿಯ ಅಂಗಡಿ ಮಾಲೀಕ ನಾರಾಯಣ್ ಕುಮಾರ್‍ಗೆ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇವರ ಜೊತೆ ಟೀ ಕುಡಿಯುತ್ತಿದ್ದ ಇಬ್ಬರು ಗ್ರಾಹಕರಿಗೂ ಥಳಿಸಿದ್ದಾರೆ. ಈ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಕಳೆದ 15 ವರ್ಷಗಳಿಂದ ನಾರಾಯಣ ಕುಮಾರ್ ರಾತ್ರಿ ವೇಳೆ ಟೀ ಅಂಗಡಿ ನಡೆಸಿಕೊಂಡು ಬಂದಿದ್ದಾರೆ. ಇನ್ಮುಂದೆ ರಾತ್ರಿ ವ್ಯಾಪಾರ ಮಾಡೋದಾದ್ರೆ ತಿಂಗಳಿಗೆ ಐದು ಸಾವಿರ ರೂಪಾಯಿ ಲಂಚ ಕೊಡಬೇಕು ಎಂದು ಪಿಎಸ್‍ಐ ಬೇಡಿಕೆ ಇಟ್ಟಿದ್ರು ಎನ್ನಲಾಗಿದೆ. ಲಂಚ ನೀಡಲು ನಿರಾಕರಿಸಿದಾಗ ಸಿಬ್ಬಂದಿಯೊಂದಿಗೆ ಬಂದು ದರ್ಪ ತೋರಿದ್ದಾರೆ.

    https://www.youtube.com/watch?v=MZF1PSuVnDA&feature=youtu.be

  • ರಾಜ್ಯದ ಈ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಹಣ ಕೊಡಲಿಲ್ಲ ಅಂದ್ರೆ ಶವ ಕೊಡಲ್ಲ

    ರಾಜ್ಯದ ಈ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಹಣ ಕೊಡಲಿಲ್ಲ ಅಂದ್ರೆ ಶವ ಕೊಡಲ್ಲ

    ವಿಜಯಪುರ: ಹಣ ಅಂದ್ರೆ ಹೆಣವೂ ಬಾಯ್ಬಿಡುತ್ತೆ ಅನ್ನೋ ಮಾತಿದೆ. ಪ್ರಭಾವಿ ಸಚಿವರಾಗಿರುವ ಎಂಬಿ ಪಾಟೀಲ್ ಜಿಲ್ಲೆಯಲ್ಲಿ ಹಣ ಇಲ್ಲಾಂದ್ರೆ ಏನೂ ಆಗಲ್ಲ. ಆಸ್ಪತ್ರೆಯಲ್ಲಿ ಸತ್ತಿರುವ ಶವನೂ ಹೊರಗೆ ಹೋಗಲ್ಲ.

    ಹೌದು. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿರುವ ಶವಾಗಾರದ ಸಹಾಯಕ ಈರಣ್ಣನ ಕೈಬಿಸಿ ಮಾಡಿಲ್ಲ ಅಂದ್ರೆ ಸರ್ಕಾರಿ ಶವಗಾರದಿಂದ ಒಂದೇ ಒಂದು ಹೆಣವೂ ಹೊರಗೆ ಹೋಗಲ್ಲ. ದುಡ್ಡು ಕೊಡಿ ಸ್ವಾಮಿ ಅಂತಾ ನಾಚಿಕೆ ಮಾನ-ಮರ್ಯಾದೆ ಇಲ್ಲದೇ ಬಾಯ್ಬಿಟ್ಟು ಕೇಳ್ತಾನೆ. ಒಂದು ಹೆಣಕ್ಕೆ ಕಮ್ಮಿಯಂದ್ರೂ ಎರಡರಿಂದ ನಾಲ್ಕು ಸಾವಿರ ರೂ. ಕೊಡ್ಲೇಬೇಕು.

    ಈರಣ್ಣ ಸೊಲ್ಹಾಪುರ ಮೂಲದವರಿಂದ ಲಂಚ ಪೀಕ್ತಿರುವ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮೃತನ ಕುಟುಂಬಸ್ಥರು ಸಾವಿನ ಶೋಕದಲ್ಲಿ ಕಣ್ಣೀರು ಹಾಕ್ತಿದ್ರೆ ಅತ್ತ ಹೇಗೋ ನನ್ನ ಜೇಬು ತುಂಬ್ತಲ್ಲ ಬಿಡಿ ಅನ್ನೋ ಖುಷಿ ಈರಣ್ಣನದ್ದು.

    ಯಾವಾಗ ಈರಣ್ಣನ ಭ್ರಷ್ಟಾಚಾರದ ವೀಡಿಯೋದಲ್ಲಿ ಸೆರೆ ಆಯ್ತೋ ಈಗ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಚಾವ್ಹಾಣ್ ಸಮಜಾಯಿಷಿ ಕೊಟ್ಟಿದ್ದಾರೆ.

  • 5 ಲಕ್ಷ ಹಣಕ್ಕೆ ಹೊಸಪೇಟೆ ಸಿಪಿಐ ಬ್ಲಾಕ್‍ಮೇಲ್- ವಿಷ ಸೇವಿಸಿ ದಂಪತಿ ಆತ್ಮಹತ್ಯೆಗೆ ಯತ್ನ

    5 ಲಕ್ಷ ಹಣಕ್ಕೆ ಹೊಸಪೇಟೆ ಸಿಪಿಐ ಬ್ಲಾಕ್‍ಮೇಲ್- ವಿಷ ಸೇವಿಸಿ ದಂಪತಿ ಆತ್ಮಹತ್ಯೆಗೆ ಯತ್ನ

    ಬಳ್ಳಾರಿ: ಹೊಸಪೇಟೆ ಶಹರ ಠಾಣೆಯ ಸಿಪಿಐ ಗಾಂಜಾ ಕೇಸಿನಲ್ಲಿ ದಂಪತಿಯನ್ನ ಬೆದರಿಸಿ 5 ಲಕ್ಷ ರೂ. ಹಣಕ್ಕೆ ಬೇಡಕೆಯಿಟ್ಟ ಪ್ರಕರಣ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೇ ಸಿಪಿಐ ಕಿರುಕುಳಕ್ಕೆ ಬೇಸತ್ತ ದಂಪತಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೊಸಪೇಟೆ ಪಟ್ಟಣದಲ್ಲಿ ನಡೆದಿದೆ.

    ಹೊಸಪೇಟೆ ನಿವಾಸಿಗಳಾದ ಸರೋಜಮ್ಮ, ಮೈಲಾರಪ್ಪ ದಂಪತಿಯ ಸಂಬಂಧಿಕರೊಬ್ಬರ ಮನೆಯಲ್ಲಿ ಇತ್ತೀಚಿಗೆ ಗಾಂಜಾ ಪತ್ತೆಯಾಗಿತ್ತು. ಇದೇ ಪ್ರಕರಣದಲ್ಲಿ ದಂಪತಿಯನ್ನು ಬಂಧಿಸುವುದಾಗಿ ಬೆದರಿಸಿ ಹೊಸಪೇಟೆ ಟೌನ್ ಪೊಲೀಸ್ ಠಾಣೆಯ ಸಿಪಿಐ ಲಿಂಗನಗೌಡ ನೆಗಳೂರ 5 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಸಿಪಿಐ ಕಿರುಕುಳ ತಾಳಲಾರದೇ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿಯ ಪರಿಸ್ಥಿತಿ ಗಂಭಿರವಾಗಿದ್ದು, ಇದೀಗ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಅಕ್ರಮ ಮರಳು ಸಾಗಾಣಿಕೆ- ಪಿಎಸ್‍ಐ ಲಂಚ ಸ್ವೀಕರಿಸಿದ ವಿಡಿಯೋ ವೈರಲ್

    ಅಕ್ರಮ ಮರಳು ಸಾಗಾಣಿಕೆ- ಪಿಎಸ್‍ಐ ಲಂಚ ಸ್ವೀಕರಿಸಿದ ವಿಡಿಯೋ ವೈರಲ್

    ಕಾರವಾರ: ಅಕ್ರಮವಾಗಿ ಮರಳು ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಠಾಣೆಯ ಪಿಎಸ್‍ಐ ಲಂಚ ಸ್ವೀಕರಿಸಿ ಮತ್ತೆ ಬೇಡಿಕೆ ಇಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಬನವಾಸಿ ಠಾಣಾ ಪಿಎಸ್‍ಐ ಸುರೇಖಾ ಬಾಡ್ಕರ್ ನಾಲ್ಕು ದಿನಗಳ ಹಿಂದೆ ಅಕ್ರಮ ಮರಳು ಸಾಗಿಸುತಿದ್ದ ಲಾರಿಯನ್ನು ಹಿಡಿದು ಲಾರಿ ಮಾಲೀಕನಿಂದ 10 ಸಾವಿರ ರೂ. ಡಿಮ್ಯಾಂಡ್ ಮಾಡಿದ್ದರು. ಲಾರಿ ಮಾಲೀಕ 4 ಸಾವಿರ ಹಣ ನೀಡಿ ಉಳಿದ 6 ಸಾವಿರ ಹಣವನ್ನು ಠಾಣೆಯಲ್ಲಿ ನೀಡಿದ್ದಾನೆ.

    ಠಾಣೆಯಲ್ಲಿ ಲಂಚ ನೀಡುವಾಗ ತನ್ನ ಮೊಬೈಲ್‍ನಲ್ಲಿ ದೃಶ್ಯಾವಳಿಯನ್ನು ಸೆರೆ ಹಿಡಿದು ವಾಟ್ಸಪ್ ಮೂಲಕ ಹರಿಬಿಟ್ಟಿದ್ದಾನೆ. ಈಗ ಜಿಲ್ಲೆಯಾದ್ಯಾಂತ ಈ ವಿಡಿಯೋ ವೈರಲ್ ಆಗಿದೆ.

    https://www.youtube.com/watch?v=v8rNFVfckHk&feature=youtu.be

  • ಎಸಿಬಿ ಬಲೆಗೆ ಬಿದ್ದ ಲೋಕಾಯುಕ್ತ ಜಡ್ಜ್ ಮೆಂಟ್ ರೈಟರ್- ಲಂಚಕ್ಕೆ ಧಮ್ಕಿ ಹಾಕಿದ ಆಡಿಯೋ ಕೇಳಿ

    ಎಸಿಬಿ ಬಲೆಗೆ ಬಿದ್ದ ಲೋಕಾಯುಕ್ತ ಜಡ್ಜ್ ಮೆಂಟ್ ರೈಟರ್- ಲಂಚಕ್ಕೆ ಧಮ್ಕಿ ಹಾಕಿದ ಆಡಿಯೋ ಕೇಳಿ

    ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ಎಸಿಬಿ ಸಿಕ್ಕಿಬಿದ್ದಿರುವ ಲೋಕಾಯುಕ್ತದ ಜಡ್ಜ್ ಮೆಂಟ್ ರೈಟರ್ ಸುಂಕಣ್ಣ ಪುರಾಣ ಬಗೆದಷ್ಟು ಬಯಲಾಗ್ತಿದೆ.

    ಕಾನ್ಸ್ ಟೇಬಲ್ ಕಲ್ಲೇಶ್‍ಗೆ ಇಟ್ಟ ಲಂಚದ ಡಿಮ್ಯಾಂಡ್ ಹಾಗೂ ಧಮ್ಕಿ ಹಾಕುವ ಆಡಿಯೋ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಎಸಿಬಿ ಖೆಡ್ಡಾಕ್ಕೆ ಬಿದ್ದಿರುವ ಸುಂಕಣ್ಣ, ಕಲ್ಲೇಶ್‍ರನ್ನು ಲಂಚಕ್ಕಾಗಿ ಯಾವ ರೀತಿ ಪೀಡಿಸುತ್ತಿದ್ದು ಅನ್ನೊದು ಈ ಆಡಿಯೋದಲ್ಲಿದೆ.

    ಲೋಕಾಯುಕ್ತ ಸಂಸ್ಥೆಯಲ್ಲಿ ಜಡ್ಜ್ ಮೆಂಟ್ ರೈಟರ್ ಆಗಿದ್ದ ಸುಂಕಣ್ಣ ಗುರುವಾರದಂದು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಸಿಕ್ಕಿಬಿದ್ದಿದ್ದರು. ಅತ್ತ, ಬಳ್ಳಾರಿಯಲ್ಲಿ ಸುಂಕಣ್ಣನ ಸೂಚನೆ ಮೇರೆಗೆ ಹಣ ಸ್ವೀಕರಿಸುತ್ತಿದ್ದ ಎಪಿಎಂಸಿ ಠಾಣೆ ಪೊಲೀಸ್ ಪೇದೆ ಸುಧಾಕರ್‍ನನ್ನು ಎಸಿಬಿ ಟ್ರ್ಯಾಪ್ ಮಾಡಿದೆ. 2011ರಲ್ಲಿ ಬಳ್ಳಾರಿಯ ಎಪಿಎಂಸಿ ಯಾರ್ಡ್ ಠಾಣೆಯ ಪೇದೆ ಕಲ್ಲೇಶಪ್ಪನನ್ನು ಲೋಕಾಯುಕ್ತ ಟ್ರಾಪ್ ಮಾಡಿತ್ತು. ಬಳ್ಳಾರಿ ಸೆಷನ್ಸ್ ಕೋರ್ಟ್‍ನಲ್ಲಿ ವಿಚಾರಣೆ ನಡೆದು 2015ರಲ್ಲಿ ಕಲ್ಲೇಶಪ್ಪ ಆರೋಪ ಮುಕ್ತರಾಗಿದ್ರು.

    ಈ ಪ್ರಕರಣ ಮೇಲ್ಮನವಿ ಸಲ್ಲಿಸಲು ಸಹ ಅರ್ಹವಲ್ಲ ಎಂದು ಲೋಕಾಯುಕ್ತ ಸಂಸ್ಥೆ ಸಹ ವರದಿ ನೀಡಿತ್ತು. ಈ ವರದಿ ನೀಡಲು ತಾನೇ ಕಾರಣ, ಇದಕ್ಕೆ 34 ಸಾವಿರ ಲಂಚ ನೀಡಬೇಕೆಂದು ಜಡ್ಜ್ ಮೆಂಟ್ ರೈಟರ್ ಸುಂಕಣ್ಣ ಬೇಡಿಕೆ ಇಟ್ಟಿದ್ರು. ಕೊನೆಗೆ ಅದು 25 ಸಾವಿರಕ್ಕೆ ಬಂದು ನಿಂತಿತ್ತು. ಈ ಸಂಬಂಧ ಕಲ್ಲೇಶಪ್ಪ ಎಸಿಬಿಗೆ ದೂರು ನೀಡಿದ್ರು. ಸುಂಕಣ್ಣನ ಸೂಚನೆ ಮೇರೆಗೆ ಕಲ್ಲೇಶಪ್ಪನಿಂದ ಎಪಿಎಂಸಿ ಠಾಣೆಯ ಪೇದೆ ಸುಧಾಕರ್ ಲಂಚ ಸ್ವೀಕರಿಸ್ತಿದ್ರು. ಈ ವೇಳೆ, ಎರಡೂ ಕಡೆ ಎಸಿಬಿ ದಾಳಿ ನಡೆಸಿ ಇಬ್ಬರನ್ನು ಖೆಡ್ಡಾಗೆ ಕೆಡವಿದೆ.

    https://www.youtube.com/watch?v=K2ou8gRsDC8

  • ಬೆಳೆಹಾನಿ ಪರಿಹಾರ ಬೇಕಂದ್ರೆ ಅಧಿಕಾರಿಗೆ ರೈತರು ಲಂಚ ಕೊಡ್ಬೇಕು!

    ಬೆಳೆಹಾನಿ ಪರಿಹಾರ ಬೇಕಂದ್ರೆ ಅಧಿಕಾರಿಗೆ ರೈತರು ಲಂಚ ಕೊಡ್ಬೇಕು!

    ರಾಯಚೂರು: ಮುಂಗಾರು ಬೆಳೆಹಾನಿ ಪರಿಹಾರದ ಅರ್ಜಿ ತೆಗೆದುಕೊಳ್ಳಲು ಗ್ರಾಮ ಲೆಕ್ಕಾಧಿಕಾರಿಯೊಬ್ಬ ರೈತರಿಂದ ಹಣ ವಸೂಲಿ ಮಾಡುವುದನ್ನ ರೈತರೇ ವಿಡಿಯೋ ಚಿತ್ರಿಕರಿಸಿ ಬಯಲು ಮಾಡಿದ್ದಾರೆ.

    ರಾಯಚೂರಿನ ಲಿಂಗಸುಗೂರು ತಾಲೂಕಿನ ಚಿತ್ತಾಪೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಾವೂರು, ಚಿತ್ತಾಪೂರ, ರೋಡಲಬಂಡಾ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿ ಶಿವಪ್ಪ ಸೋಮನಾಳ ಮೇಲೆ ಲಂಚದ ಆರೋಪ ಕೇಳಿ ಬಂದಿದೆ.

    ಪ್ರತಿಯೊಬ್ಬ ರೈತರಿಂದ 200, 300 ರೂಪಾಯಿಗಳನ್ನ ವಸೂಲಿ ಮಾಡಿ ಅರ್ಜಿಯನ್ನು ಮುಂದಕ್ಕೆ ಕಳುಹಿಸುವುದಾಗಿ ಹೇಳುತ್ತಿದ್ದಾನೆ. ಇದುವರೆಗೂ 120 ಕ್ಕೂ ಹೆಚ್ಚು ಜನರಿಂದ ಹಣ ವಸೂಲಿ ಮಾಡಿದ್ದಾನೆ ಅಂತ ರೈತರು ಆರೋಪಿಸಿದ್ದಾರೆ.

    ಆದ್ರೆ ಅರ್ಜಿಯನ್ನು ಆನ್ ಲೈನ್ ಮೂಲಕವೇ ತುಂಬಿ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಬೇಕು. ಅರ್ಜಿಯೊಂದಿಗೆ ಆಧಾರ ಕಾರ್ಡ್‍ನ್ನೂ ಲಿಂಕಮಾಡಬೇಕು. ಬೆಳೆಪರಿಹಾರಕ್ಕೆ ಅರ್ಜಿ ಹಾಕುವ ಪ್ರಕ್ರೀಯೆ ಈಗಾಗಲೇ ಎರಡು ತಿಂಗಳ ಹಿಂದೆಯೇ ಮುಗಿದ್ದಿದ್ದರೂ, ಆಫ್‍ಲೈನ್ ಅರ್ಜಿ ತುಂಬಬೇಕು ಅಂತ ಶಿವಪ್ಪ ಹಣ ವಸೂಲಿಗೆ ಇಳಿದಿದ್ದಾನೆ ಅಂತ ರೈತರು ಹೇಳಿದ್ದಾರೆ.

    ಈ ಬಗ್ಗೆ ಲಿಂಗಸುಗೂರು ತಹಶೀಲ್ದಾರ್ ಶಿವಾನಂದ್ ಸಾಗರ್‍ಗೂ ದೂರು ನೀಡಿದ್ದಾರೆ. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಶಿವಾನಂದ್ ಸಾಗರ್ ತಿಳಿಸಿದ್ದಾರೆ.

    https://www.youtube.com/watch?v=x-eozmX-iNE

  • ಲಂಚ ಕೊಟ್ರೆ ಮಾತ್ರ ವ್ಹೀಲ್ ಚೇರ್: ಮಗನ ಆಟಿಕೆ ಸೈಕಲ್‍ನಲ್ಲೇ ಆಸ್ಪತ್ರೆಯೊಳಗೆ ಹೋದ ವ್ಯಕ್ತಿ

    ಲಂಚ ಕೊಟ್ರೆ ಮಾತ್ರ ವ್ಹೀಲ್ ಚೇರ್: ಮಗನ ಆಟಿಕೆ ಸೈಕಲ್‍ನಲ್ಲೇ ಆಸ್ಪತ್ರೆಯೊಳಗೆ ಹೋದ ವ್ಯಕ್ತಿ

    ಹೈದರಾಬಾದ್: ವ್ಹೀಲ್ ಚೇರ್ ಬೇಕಾದ್ರೆ 100 ರೂ. ಲಂಚ ಕೊಡಬೇಕು ಎಂದು ಸರ್ಕಾರಿ ಆಸ್ಪತ್ರೆಯ ಅಟೆಂಡರ್ ಹೇಳಿದ್ದರಿಂದ ಹಣವಿಲ್ಲದೆ ವ್ಯಕ್ತಿಯೊಬ್ಬರು ತಮ್ಮ ಮಗನ ಆಟಿಕೆ ಸೈಕಲ್‍ನಲ್ಲೇ ಆಸ್ಪತ್ರೆಯೊಳಗೆ ಹೋದ ಹೃದಯವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ.

    38 ವರ್ಷದ ದಸ್ವ ರಾಜು, 2016ರ ಅಗಸ್ಟ್‍ನಲ್ಲಿ ಟ್ರಾನ್ಸ್ ಫಾರ್ಮರ್ ಮೇಲೆ ಬಿದ್ದು ಕಾಲಿನ ಸ್ವಾಧೀನ ಕಳೆದುಕೊಂಡಿದ್ರು. ದಸ್ವ ರಾಜು ಅವರನ್ನ ಗುರುವಾರದಂದು ಚೆಕಪ್‍ಗಾಗಿ ಗಾಂಧಿ ಆಸ್ಪತ್ರೆಯ 5ನೇ ಮಹಡಿಯಲ್ಲಿದ್ದ ವಾರ್ಡ್‍ಗೆ ಕರೆದುಕೊಂಡು ಹೋಗಬೇಕಿತ್ತು. ಈ ಲಂಚ ಕೊಡದಿದ್ದಕ್ಕೆ ನನ್ನ ಮೊಬೈಲ್ ಕಿತ್ತುಕೊಂಡಿದ್ರು ಎಂದು ಸಂತೋಷಿ ಹೇಳಿದ್ದಾರೆ. ಹೀಗಾಗಿ ದಸ್ವ ರಾಜು ತಮ್ಮ ಮಗನ ಆಟಿಕೆ ಸೈಕಲ್‍ನಲ್ಲೇ ಆಸ್ಪತ್ರೆಗೆ ಹೋಗಿದ್ದಾರೆ.

                                                         

    ಗುರುವಾರ ಬೆಳಿಗ್ಗೆ ನಾವು ಚೆಕಪ್‍ಗಾಗಿ ಆಟೋದಲ್ಲಿ ಆಸ್ಪತ್ರೆಗೆ ಬಂದೆವು. ಇಲ್ಲಿ ವ್ಹೀಲ್ ಚೇರ್ ಬೇಕಾದ್ರೆ ಅಟೆಂಡರ್‍ಗೆ 100 ರೂ. ಲಂಚ ಕೊಡ್ಬೇಕು. ಕೆಲವೊಮ್ಮೆ ಅಷ್ಟು ಹಣ ಕೊಡಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಆದ್ದರಿಂದ ನಮ್ಮ ಮಗನ ತ್ರಿಚಕ್ರ ಸೈಕಲ್ ತಂದೆವು ಅಂತ ಸಂತೋಷಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ನಮ್ಮ ಬಳಿ 100 ರೂ. ಹಣ ಇಲ್ಲವಾದ್ರೆ ಅಟೆಂಡರ್ ನನ್ನ ಮೊಬೈಲ್ ಕಿತ್ತಿಟ್ಟುಕೊಳ್ತಾರೆ. ಆಗ ನಾನು ನನ್ನ ಪರವಾಗಿ 100 ರೂ. ಕೊಡುವಂತೆ ಬೇರೆ ರೋಗಿಗಳ ಬಳಿ ಬೇಡಿಕೊಳ್ಬೇಕು ಅಂತ ಹೇಳಿದ್ದಾರೆ.

    ರಾಜು ಅವರಿಗೆ 4 ಜನ ಮಕ್ಕಳಿದ್ದು, ಸದ್ಯ ಕೆಲಸ ಮಾಡಲಾರದ ಸ್ಥಿತಿಯಲ್ಲಿದ್ದಾರೆ. ಇವರ ಕುಟುಂಬವನ್ನು ಸದ್ಯಕ್ಕೆ ನೆರೆಮನೆಯವರಾದ ಆಟೋ ಚಾಲಕ ಮೊಹಮ್ಮದ್ ಸಾಫಿ ಎಂಬವರು ನೋಡಿಕೊಳ್ತಿದ್ದಾರೆ. ಸಾಧ್ಯವಾದಾಗಲೆಲ್ಲಾ ಅವರ ಅಟೋದಲ್ಲೇ ರಾಜು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ.

    ಇವರಿಗೆ ನಡೆಯಲು ಕೂಡ ಆಗುವುದಿಲ್ಲ. ಹೀಗಿದ್ದರೂ ಇವರ ಪತ್ನಿ ಬಳಿ ಅಟೆಂಡರ್‍ಗಳು ವ್ಹೀಲ್‍ಚೇರ್‍ಗಾಗಿ 100 ರೂ. ಕೇಳ್ತಾರೆ. ಅವರು ಸೈಕಲ್ ತಳ್ಳಿಕೊಂಡು ಹೋಗೋದನ್ನು ನೋಡಿ ನನಗೆ ಕಣ್ಣೀರು ಬಂತು. ಇದರ ಬಗ್ಗೆ ದೂರು ಕೊಟ್ರೆ ಒಂದು ಬಾರಿ ಮಾತ್ರ ಅಟೆಂಡರ್ ಸಹಾಯ ಮಾಡ್ತಾನೆ. ಅನಂತರ ಮತ್ತೆ ಲಂಚ ಕೇಳ್ತಾರೆ ಅಂತ ಸಾಫಿ ಹೇಳಿದ್ದಾರೆ.

    ರಾಜು ಅವರು ಸೈಕಲ್ ತಳ್ಳಿಕೊಂಡು ಹೋಗುತ್ತಿರುವುದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ವೀಡಿಯೋವನ್ನ ನೋಡಿದ್ದೇವೆ. ಇದು ನಿಜಕ್ಕೂ ಅಸಹನೀಯ. ಈ ಬಗ್ಗೆ ತನಿಖೆ ನಡೆಯುತ್ತಿದೆ ಅಂತ ಗಾಂಧಿ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಕಿ ಡಾ. ಬಿಎಸ್‍ವಿ ಮಂಜುಳಾ ಹೇಳಿದ್ದಾರೆ.

    ರಾಜು ಸುಮಾರು 3 ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು. ನಮ್ಮ ಸಲಹೆಯನ್ನೂ ಮೀರಿ ಆಗಾಗ ಚೆಕಪ್‍ಗೆ ಬರುವುದಾಗಿ ಹೇಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡರು. ಅವರ ಕೊನೆಯ ಅಪಾಯಿಂಟ್‍ಮೆಂಟ್ ಇದ್ದಿದ್ದು ಸೋಮವಾರದಂದು. ಆಗ ಅವರಿಗೆ ವ್ಹೀಲ್ ಚೇರ್ ನೀಡಲಾಗಿತ್ತು. ಆದ್ರೆ ಅವರು ಮತ್ತೆ ಗುರುವಾರದಂದು ಯಾಕೆ ಬಂದ್ರು ಅಂತ ನಮಗೆ ಗೊತ್ತಿಲ್ಲ ಎಂದು ಮಂಜುಳಾ ಹೇಳಿದ್ದಾರೆ.

    https://www.youtube.com/watch?v=7nI4cTkcINE