Tag: ರೌಡಿ ಶೀಟರ್

  • ನಾನೇ ಸೀನಿಯರ್ ರೌಡಿ, ನನಗೆ ಟಿಕೆಟ್ ಕೊಡಿ: ಕಾಂಗ್ರೆಸ್ ಮುಖಂಡ – ವಿಡಿಯೋ ವೈರಲ್

    ನಾನೇ ಸೀನಿಯರ್ ರೌಡಿ, ನನಗೆ ಟಿಕೆಟ್ ಕೊಡಿ: ಕಾಂಗ್ರೆಸ್ ಮುಖಂಡ – ವಿಡಿಯೋ ವೈರಲ್

    ಹೈದರಾಬಾದ್: ನಾನು ಸೀನಿಯರ್ ರೌಡಿಯಾಗಿದ್ದು, ನನಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ತೆಲಂಗಾಣ ಕಾಂಗ್ರೆಸ್ ಮುಖಂಡ ಪಕ್ಷದ ನಾಯಕರಿಗೆ ಬೇಡಿಕೆ ಇಟ್ಟಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತೆಲಂಗಾಣ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದಂತೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಟಿಕೆಟ್ ಗಾಗಿ ಪೈಟೋಟಿ ಆರಂಭಿಸಿದ್ದಾರೆ. ಇದರ ಪರಿಣಾಮ ಮುಖಂಡರು ಪಕ್ಷದ ನಾಯಕರ ಗಮನ ತಮ್ಮತ್ತ ಸೆಳೆಯಲು, ಟಿಕೆಟ್ ಪಡೆಯುಲು ಒತ್ತಡ ಹಾಕುವ ಕಾರ್ಯತಂತ್ರ ನಡೆಸಿದ್ದಾರೆ. ಇದರ ನಡುವೆ ಕಾಂಗ್ರೆಸ್ ಪಕ್ಷ ತೆಲಂಗಾಣದಲ್ಲೂ ಮೈತ್ರಿ ರಾಜಕೀಯ ಮಾಡುತ್ತಿದ್ದು, ಪಕ್ಷದ ಮುಖಂಡರೊಬ್ಬರು ತಾವು ಕ್ಷೇತ್ರದಲ್ಲಿ ಸೀನಿಯರ್ ರೌಡಿ ಶೀಟರ್ ಆಗಿದ್ದು, ನನಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಮಾಧ್ಯಮಗಳ ಮುಂದೆಯೇ ಬಹಿರಂಗ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ಮುಖಂಡ ಸುಧೀರ್ ರೆಡ್ಡಿ ಎಂಬಾತ, ನಾನು ಪಕ್ಷಕ್ಕಾಗಿ ದುಡಿದ್ದೇನೆ. ಪಕ್ಷಕ್ಕಾಗಿಯೇ ರೌಡಿ ಶೀಟರ್ ಆಗಿದ್ದೇನೆ. ವಾರಂಗಲ್ ಕ್ಷೇತ್ರದಲ್ಲಿ ನಾನೇ ಸೀನಿಯರ್ ಕೂಡ ನಾನೇ ಎಂದು ಹೇಳಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.

    ನಾನು ಯಾವುದೇ ಕಾನೂನು ಬಹಿರ ಕೃತ್ಯಗಳಲ್ಲಿ ತೊಡಗಿಲ್ಲ. ಯಾರ ಭೂಮಿಯನ್ನು ಬಲವಂತವಾಗಿ ವಶಕ್ಕೆ ಪಡೆದಿಲ್ಲ. ಅಲ್ಲದೇ ಆರ್ಥಿಕ ಅವ್ಯವಹಾರದಲ್ಲಿ ತೊಡಗಿಲ್ಲ. ಪಕ್ಷದ ಕಾರ್ಯಗಳನ್ನು ಮಾಡುವುದರಿಂದಲೇ ನನ್ನ ಮೇಲಿನ ದ್ವೇಷದಿಂದ ರೌಡಿ ಶೀಟರ್ ಪಟ್ಟಿಗೆ ನನ್ನ ಹೆಸರನ್ನು ಸೇರ್ಪಡೆ ಮಾಡಲಾಗಿದೆ ಎಂದು ರೆಡ್ಡಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 25ಕ್ಕೂ ಹೆಚ್ಚು ರೌಡಿಗಳ ಪರೇಡ್ – ಪೊಲೀಸರಿಂದ ವಾರ್ನಿಂಗ್

    25ಕ್ಕೂ ಹೆಚ್ಚು ರೌಡಿಗಳ ಪರೇಡ್ – ಪೊಲೀಸರಿಂದ ವಾರ್ನಿಂಗ್

    ಬೆಂಗಳೂರು: ನೆಲಮಂಗಲದಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಪಟ್ಟಣ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

    ಇಂದು ಬೆಳಗ್ಗೆ ನೆಲಮಂಗಲ ಪಟ್ಟಣ ಠಾಣೆಯ ವ್ಯಾಪ್ತಿಯಲ್ಲಿನ 25ಕ್ಕೂ ಹೆಚ್ಚು ರೌಡಿ ಶೀಟರ್ ಗಳನ್ನು ಕರೆಸಿ, ಸಿಪಿಐ ಶಿವಣ್ಣ ಹಾಗೂ ಪಿಎಸ್‍ಐ ಮಂಜುನಾಥ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ದಿನೇ ದಿನೇ ನೆಲಮಂಗಲ ಪಟ್ಟಣ ಬೆಳೆಯುತ್ತಿದ್ದು, ಅಪರಾಧಗಳು ಹೆಚ್ಚಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚರಿಕೆ  ನೀಡಿದ್ದಾರೆ.

    ಅಷ್ಟೇ ಅಲ್ಲದೇ ಹಿಂದಿನ ಪೊಲೀಸ್ ಪರೇಡ್‍ಗೆ ಆಗಮಿಸದವರಿಗೆ ವಾರ್ನಿಂಗ್ ನೀಡಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

  • ರೌಡಿ ಶೀಟರ್ ಸೈಕಲ್ ರವಿಯ ಕೋಟ್ಯಾಂತರ ಆಸ್ತಿಗೆ ಪೊಲೀಸರೇ ಪಾಲುದಾರರು!

    ರೌಡಿ ಶೀಟರ್ ಸೈಕಲ್ ರವಿಯ ಕೋಟ್ಯಾಂತರ ಆಸ್ತಿಗೆ ಪೊಲೀಸರೇ ಪಾಲುದಾರರು!

    ಬೆಂಗಳೂರು: ಬುಧವಾರ ಪೊಲೀಸರ ಗುಂಡಿನ ದಾಳಿಗೆ ಒಳಗಾಗಿರುವ ರೌಡಿ ಶೀಟರ್ ಸೈಕಲ್ ರವಿ ಅಲಿಯಾಸ್ ಎಂ ರವಿಕುಮಾರನ ಕೋಟ್ಯಾಂತರ ಆಸ್ತಿಗೆ ಪೊಲೀಸರೇ ಪಾಲುದಾರರು ಎಂಬ ಅಸಲಿ ಸತ್ಯ ಬಯಲಾಗಿದೆ.

    ಪೊಲೀಸರು ಪ್ರತಿ ತಿಂಗಳು ಸೈಕಲ್ ರವಿ ಬಳಿ ಹಣ ಹೂಡಿಕೆ ಮಾಡುತ್ತಿದ್ದರು. ಇದೇ ಹಣವನ್ನು ಬಂಡವಾಳವಾಗಿ ರವಿ ಜೂಜಾಟದಲ್ಲಿ ತೊಡಗಿಸುತ್ತಿದ್ದನು. ಹೀಗಾಗಿ ಪೊಲೀಸರು ಮತ್ತು ರವಿ ಮಧ್ಯೆ ವ್ಯವಹಾರ ನಡೆಯುತ್ತಿತ್ತು. ಈ ಕಾರಣದಿಂದಲೇ ರವಿ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದ ಎಂಬ ಅಚ್ಚರಿಯ ವಿಷಯ ಸಿಸಿಬಿ ಪೊಲೀಸರ ತನಿಖೆಯಲ್ಲಿ ಹೊರ ಬಂದಿದೆ. ರವಿಯ ಆಸ್ತಿ ಪತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

    ಗುಂಡಿನ ದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ರವಿ ಸ್ಥಿತಿ ಚಿಂತಾಜನಕವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಮೂಲಗಳು ತಿಳಿಸಿವೆ. ರವಿ ಆರು ಕೊಲೆ ಹಾಗೂ ನಾಲ್ಕು ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧ ಬೆಂಗಳೂರಿನ ಸುಮಾರು 13 ಕ್ಕೂ ಹೆಚ್ಚಿನ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಸೈಕಲ್ ರವಿ 20 ವರ್ಷದಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, 1998 ರಲ್ಲಿ ಆತನ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿತ್ತು. ಈಗಲೂ ಸುಪಾರಿ ಕಿಲ್ಲರ್, ಅಪಹರಣ, ದರೋಡೆ ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ಗನ್ ತೋರಿಸಿ ರಾಜಕಾರಣಿಗಳನ್ನ ಬೆದರಿಸಲು ಪ್ಲಾನ್ ಮಾಡಿದ್ದ ಬಿಜೆಪಿ ಕಾರ್ಯಕರ್ತ ಅರೆಸ್ಟ್!

    ಗನ್ ತೋರಿಸಿ ರಾಜಕಾರಣಿಗಳನ್ನ ಬೆದರಿಸಲು ಪ್ಲಾನ್ ಮಾಡಿದ್ದ ಬಿಜೆಪಿ ಕಾರ್ಯಕರ್ತ ಅರೆಸ್ಟ್!

    ಮೈಸೂರು: ಬಿಜೆಪಿ ಕಾರ್ಯಕರ್ತನೋರ್ವ ಅನಧಿಕೃತ ಪಿಸ್ತೂಲ್ ಖರೀದಿಸಿ ರಾಜಕಾರಣಿಗಳ ಬೆದರಿಸಲು ಸ್ಕೆಚ್ ರೆಡಿ ಮಾಡುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

    ಧನರಾಜ್ ಭೊಲಾ ಬಂಧಿತ ಬಿಜೆಪಿ ಕಾರ್ಯಕರ್ತ. ಬಂಧಿತನ ವಿಚಾರಣೆ ನಡೆಸಿದಾಗ ಈ ಪಿಸ್ತೂಲ್ ವ್ಯವಹಾರದ ಕಿಂಗ್ ಪಿನ್ ಮೈಸೂರು ಜೈಲಿನಲ್ಲಿರುವ ಖೈದಿ ಎಂಬುದು ಗೊತ್ತಾಗಿದೆ. ಮೈಸೂರಿನ ಜೈಲಿನಲ್ಲಿರುವ ಅಫ್ಸರ್ ಖಾನ್, ಶಾಹಿನ್ ಮತ್ತು ಸಾಧಿಕ್ ಪಾಷಾ ಎಂಬವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

    ಪಿಸ್ತೂಲಿಗಾಗಿ ಜೈಲಿಗೆ ಎಂಟ್ರಿ ಹಾಕುತ್ತಿದ್ದ ವ್ಯಕ್ತಿಗಳು ಹಣ ಪಾವತಿ ಮಾಡಿದ್ರೆ, ಅಫ್ಸರ್ ಖಾನ್ ಪಿಸ್ತೂಲು ಮಾರಾಟ ಮಾಡುವ ವ್ಯಕ್ತಿಯ ಮೊಬೈಲ್ ನಂಬರ್ ನೀಡುತ್ತಿದ್ದ. ಆ ಹಣವನ್ನು ಪಡೆಯಲು ಮತ್ತೊಬ್ಬ ವ್ಯಕ್ತಿ ಎಂಟ್ರಿ ಹಾಕಿಸಿ ಅವರಿಂದ ನಗದನ್ನು ಸಂಗ್ರಹಿಸುತ್ತಿದ್ದನು. ಜೈಲಿನಿಂದಲೇ ವ್ಯವಹಾರ ಕುದುರಿಸುತ್ತಿದ್ದ ಅಫ್ಸರ್ ಪಾಷಾ ಮಡಿಕೇರಿ ಹಾಗೂ ಚಾಮರಾಜ ನಗರದಲ್ಲಿನ ವ್ಯಕ್ತಿಗಳಿಗೆ 60 ರಿಂದ 70 ಸಾವಿರಕ್ಕೆ ಪಿಸ್ತೂಲ್ ಮಾರಾಟ ಮಾಡಿಸಿದ್ದಾನೆ ಎಂಬ ಮಾಹಿತಿಗಳು ತಿಳಿದು ಬಂದಿವೆ. ಹೀಗೆ ಅಕ್ರಮವಾಗಿ ಖರೀದಿಸಿದ ಪಿಸ್ತೂಲ್‍ನಿಂದ ಧನರಾಜ್ ತಂಡವೊಂದನ್ನು ಕಟ್ಟಿಕೊಂಡು ಶ್ರೀಮಂತರು ಮತ್ತು ರಾಜಕಾರಣಿಗಳನ್ನು ಬೆದರಿಸಿ ಹಣ ಪಡೆಯಲು ಪ್ಲಾನ್ ಮಾಡಿದ್ದನು.

    ಖಚಿತ ಮಾಹಿತಿ ಆಧರಿಸಿ ಇನ್ಸ್ ಪೆಕ್ಟರ್ ಗೋಪಾಲಕೃಷ್ಣ ದಾಳಿ ನಡೆಸಿ ಧನರಾಜ್ ಭೊಲಾ ಹಾಗೂ ಇನ್ನಿಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಿಂಗ್ ಪಿನ್ ಅಫ್ಸರ್ ಖಾನ್ ಪಾತ್ರ ಬೆಳಕಿಗೆ ಬಂದಿದೆ. ಬಂಧಿತರಿಂದ ಒಂದು ಪಿಸ್ತೂಲು ಹಾಗೂ 12 ಗುಂಡುಗಳು ವಶಪಡಿಸಿಕೊಳ್ಳಾಗಿದೆ. ಚುನಾವಣೆ ವೇಳೆ ರಾಜಕಾರಿಣಿಗಳನ್ನೂ ಬೆದರಿಸಲು ಈ ತಂಡ ಸ್ಕೆಚ್ ಹಾಕಿತ್ತು ಅನ್ನೋ ಮಾಹಿತಿ ಪೊಲೀಸರಿಗೆ ಆರೋಪಿಗಳು ತಿಳಿಸಿದ್ದಾರೆ. ಧನರಾಜ್ ಭೋಲಾ ಒಬ್ಬ ರೌಡಿ ಶೀಟರ್ ಕೂಡ ಆಗಿದ್ದಾನೆ.

  • ಉಡುಪಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ – ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ನವೀನ್ ಕೊಲೆ

    ಉಡುಪಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ – ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ನವೀನ್ ಕೊಲೆ

    ಉಡುಪಿ: ರೌಡಿ ಶೀಟರ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ನಡೆದಿದೆ.

    ಪಡುಬಿದ್ರೆಯಲ್ಲಿ ನವೀನ್ ಡಿಸೋಜಾ ಕೊಲೆಯಾದ ರೌಡಿಶೀಟರ್. ಪಡುಬಿದ್ರೆ ಸಮೀಪದ ಇನ್ನಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ಲೋರಿಯಾ ಬಾರ್ ನ ಹೊರಗೆ ನವೀನ್ ಡಿಸೋಜಾನ ಮೇಲೆ ದಾಳಿ ನಡೆದಿದ್ದು, ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಬುಧವಾರ ರಾತ್ರಿ ಸುಮಾರು 8 ಗಂಟೆಗೆ ನವೀನ್ ಬಾರ್ ಗೆ ಬಂದಿದ್ದನು. ಎಂದಿನಂತೆ ಮದ್ಯ ಸೇವಿಸಿದ್ದನು. ನಂತರ ಹೊರ ಬಂದಿದ್ದಾನೆ. ಆದರೆ ನವೀನ್ ಹೊರಗೆ ಬರುವುದನ್ನೇ ಮೂರ್ನಾಲ್ಕು ಜನರ ತಂಡ ಹೊಂಚು ಹಾಕಿ ಕುಳಿತ್ತಿತ್ತು ಎಂಬ ಮಾಹಿತಿ ಪೊಲೀಸರಿಂದ ಸಿಕ್ಕಿದೆ. ನಂತರ ಏಕಾಏಕಿ ಎಲ್ಲರೂ ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದಾರೆ. ಪರಿಣಾಮ ನವೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

    ನವೀನ್ ಡಿಸೋಜಾ ಮೇಲೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಹೊಡೆದಾಟ, ಬೆದರಿಕೆ ಸೇರಿದಂತೆ ಹಲವಾರು ಪ್ರಕರಣಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದು, ಎಸ್.ಪಿ. ಲಕ್ಷ್ಮಣ್ ನಿಂಬರ್ಗಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

    ಈ ಘಟನೆ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೇಲ್ನೋಟಕ್ಕೆ ಹಿಂದಿನ ದ್ವೇಷದ ಕೊಲೆ ಎನ್ನಲಾಗುತ್ತಿದೆ. ನವೀನ್ ಡಿಸೋಜಾ ವಿರೋಧಿಗಳು ಯಾರು? ಎಂಬ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಸ್ಥಳದಲ್ಲಿದ್ದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಅಪ್‍ಡೇಟ್ ಸುದ್ದಿ
    ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಆರೋಪಿಗಳ ಮಹತ್ವದ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಪಡುಬಿದ್ರೆ ಸಮೀಪದ ಇನ್ನಾ ಗ್ರಾಮದಲ್ಲಿರುವ ಗ್ಲೋರಿಯಾ ಬಾರಿನಲ್ಲಿ ನವೀನ್ ಡಿಸೋಜಾ, ಗಿರೀಶ್ ಮತ್ತು ನಾಗೇಶ್ ಡ್ರಿಂಕ್ಸ್ ಮಾಡೋದಕ್ಕೆ ಸಂಜೆಯೇ ಬಂದಿದ್ದರು. ಮದ್ಯಪಾನ ಮಾಡಿ ಮಧ್ಯರಾತ್ರಿ ಹೊರಬಂದ ಮೂರು ಜನ ಬೈಕ್ ಏರಿ ಮನೆಗೆ ಹೊರಟಿದ್ದರು. ಈ ಸಂದರ್ಭ ಕಾರಿನಲ್ಲಿ ಬಂದು ಹೊಂಚು ಹಾಕುತ್ತಿದ್ದ ದುಷ್ಕರ್ಮಿಗಳು ಬೈಕಿಗೆ ಡಿಕ್ಕಿ ಹೊಡೆಸಿದ್ದಾರೆ. ಮೂರು ಜನ ನೆಲಕ್ಕುರುಳಿದ್ದಾರೆ.

    ನವೀನ್ ಮತ್ತು ಗೆಳೆಯರು ಕೆಳಕ್ಕೆ ಬಿದ್ದೊಡನೆ ಕಾರಿನಿಂದ ಇಳಿದ ದುಷ್ಕರ್ಮಿಗಳು ತಲವಾರಿಂದ ದಾಳಿ ನಡೆಸಿದ್ದಾರೆ. ಭಯಗೊಂಡ ಗಿರೀಶ್ – ನಾಗೇಶ್ ಸ್ಥಳದಿಂದ ಭಯಗೊಂಡು ಓಡಿದ್ದಾರೆ. ನವೀನ್ ಡಿಸೋಜಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಉಡುಪಿ ಎಸ್‍ಪಿ ಲಕ್ಷ್ಮಣ್ ನಿಂಬರ್ಗಿ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ತಕ್ಷಣ ಮೂರು ತಂಡಗಳನ್ನು ರಚನೆ ಮಾಡಿ ತನಿಖೆ ನಡೆಸಲಾಗುತ್ತಿದೆ.

    ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ನವೀನ್ ಡಿಸೋಜಾ ಭಾಗಿಯಾಗಿದ್ದು ಹಲವು ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿತ್ತು. ಆರೋಪಿಗಳ ಬಗ್ಗೆ ಕೆಲ ಸಾಕ್ಷ್ಯಗಳು ದೊರೆತಿದ್ದು ಶೀಘ್ರ ಬಂಧಿಸುವುದಾಗಿ ಎಸ್ ಪಿ ಲಕ್ಷ್ಮಣ್ ನಿಂಬರ್ಗಿ ಹೇಳಿದ್ದಾರೆ.

    ಬಿಳಿ ಸ್ವಿಫ್ಟ್ ಕಾರಿನಲ್ಲಿ ದುಷ್ಕರ್ಮಿಗಳು ಬಂದಿದ್ದರು. ಬೈಕ್ ಹತ್ತಿ ಯು ಟರ್ನ್ ಮಾಡಿ ಹೊರಟಾಗ ಕಣ್ಣಿಗೆ ಲೈಟ್ ಹಾಕಿದ್ದಾರೆ. ಕಾರನ್ನು ಬೈಕಿಗೆ ಗುದ್ದಿ ಬೀಳಿಸಿದ್ದಾರೆ. ತಲ್ವಾರ್ ಬಳಸಿಕೊಂಡು ಹಲ್ಲೆ ಮಾಡಿದ್ದಾರೆ. ಹೊಡೆತದಿಂದ ತಪ್ಪಿಸಿಕೊಳ್ಳಲು ನವೀನ್ ಎರಡು ಕೈಗಳನ್ನು ಮುಂದೆ ತಂದಾಗ ಆದಂತಹ ಗಾಯಗಳು ದೇಹದ ಮೇಲೆ ಇದೆ. ತಲೆಗೆ ಗಂಭೀರ ಗಾಯವಾಗಿದೆ. ಮಣಿಪಾಲ ಕೆಎಂಸಿಯಲ್ಲಿ ಶವ ಪರೀಕ್ಷೆ ನಡೆಸಲಾಗಿದೆ. ಆರೋಪಿಗಳನ್ನು ಕೂಡಲೇ ಪತ್ತೆ ಮಾಡುತ್ತೇವೆ ಎಂದು ಎಸ್‍ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದರು.

  • ನಲಪಾಡ್‍ನಿಂದ ಹಲ್ಲೆಗೆ ಒಳಗಾಗಿದ್ದ ರಣಜಿ ಆಟಗಾರ ಯಾರು ಅನ್ನೋದನ್ನು ರಿವಿಲ್ ಮಾಡಿದ್ರು ಶೆಟ್ಟರ್

    ನಲಪಾಡ್‍ನಿಂದ ಹಲ್ಲೆಗೆ ಒಳಗಾಗಿದ್ದ ರಣಜಿ ಆಟಗಾರ ಯಾರು ಅನ್ನೋದನ್ನು ರಿವಿಲ್ ಮಾಡಿದ್ರು ಶೆಟ್ಟರ್

    ಬೆಂಗಳೂರು: ರಣಜಿ ಕ್ರಿಕೆಟ್ ಆಟಗಾರ ಅಯ್ಯಪ್ಪ ಮೇಲೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ರೌಡಿ ನಲಪಾಡ್ ಹಲ್ಲೆ ಮಾಡಿದ್ದಾನೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

    ವಿದ್ವತ್ ಅವರನ್ನು ನೋಡಲು ಮಲ್ಯ ಆಸ್ಪತ್ರೆಗೆ ತೆರೆಳಿದ್ದ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ಸ್ಟಾರ್ ಹೋಟೆಲ್ ಒಂದರಲ್ಲಿ ಪಾರ್ಟಿ ನಡೆಯುತ್ತಿದ್ದಾಗ ಬಿಯರ್ ಬಾಟಲ್‍ನಲ್ಲಿ ರಣಜಿ ಪ್ಲೇಯರ್ ಅಯ್ಯಪ್ಪ ಅವರ ಮೇಲೆ ನಲಪಾಡ್ ಮಾರಣಾಂತಿಕ ಹಲ್ಲೆ ನಡೆಸಿದ್ದ ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರನ್ನು ನೀಡಿರಲಿಲ್ಲ ಎಂದು ತಿಳಿಸಿದರು.

    ವಿದ್ವತ್ ಅವರ ಆರೋಗ್ಯ ಸ್ಥಿತಿ ಈಗ ಸುಧಾರಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಕಾಂಗ್ರೆಸ್‍ನ ಗೂಂಡಾಗಿರಿ ನೋಡುತ್ತಿದ್ದರೆ ನಮಗೆ ಭಯವಾಗುತ್ತೆ. ಹಲವು ವರ್ಷಗಳಿಂದ ಕಾಂಗ್ರೆಸಿಗರಿಂದ ಹಲ್ಲೆ ನಡೆಯುತ್ತಿರುವ ಬಗ್ಗೆ ಹಲವಾರು ಬಾರಿ ವರದಿಗಳು ಬಂದಿದೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಹ್ಯಾರಿಸ್‍ಗೆ ಬೆಂಬಲ ಸೂಚಿಸಿದ ನಟಿ ಸಂಜನಾ

    ನನಗೆ ಅನಿಸಿದ ಪ್ರಕಾರ ಶಾಂತಿನಗರದಲ್ಲಿ ಹಫ್ತಾ ವಸೂಲಿಗೆ ಹಲವಾರು ಹಲ್ಲೆಗಳನ್ನು ನಡೆಸಿರಬಹುದು. ನಲಪಾಡ್ ನಿಂದ ತೊಂದರೆಗೊಳಗಾದವರು ಎಲ್ಲರು ಹೊರ ಬಂದು ಧೈರ್ಯದಿಂದ ದೂರು ಕೊಡಬೇಕು. ಇದರಿಂದ ಹ್ಯಾರಿಸ್ ಮೇಲಿರುವ ಇನ್ನಷ್ಟು ಕ್ರಿಮಿನಲ್ ಪ್ರಕರಣಗಳು ಹೊರ ಬರುತ್ತದೆ. ಇದನ್ನೂ ಓದಿ: ಜೈಲಿಗೆ ಹೋದ ಎರಡೇ ದಿನಕ್ಕೆ ನಲಪಾಡ್ ಕೈಗೆ ಸಿಕ್ತು ಮೊಬೈಲ್ ಫೋನ್!

    ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೇಲೆ ಗೂಂಡಾಗಿರಿ ಸಂಪೂರ್ಣವಾಗಿ ನೆಲಕಚ್ಚಿದೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ನಿಲ್ಲಿಸಬಹುದು. ನಟ ಶಿವರಾಜ್ ಕುಮಾರ್ ಅವರಿಗೂ ಸಹ ಕಾಂಗ್ರೆಸ್‍ನ ಈ ವರ್ತನೆ ಭಯವನ್ನುಂಟು ಮಾಡಿದೆ. ತಂದೆ-ತಾಯಿಯಾದವರು ಯಾವಾಗಲು ಮಕ್ಕಳನ್ನ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

    ರಣಜಿ ಆಟಗಾರನ ಮೇಲೆ 6 ತಿಂಗಳ ಹಿಂದೆ ನಲಪಾಡ್ ಹಲ್ಲೆ ನಡೆಸಿದ್ದ ಎಂದು ಹೋಟೆಲ್ ಒಂದರ ಮ್ಯಾನೇಜರ್ ತಿಳಿಸಿದ್ದರು. ಆದರೆ ಹಲ್ಲೆಗೆ ಒಳಗಾಗಿದ್ದ ಆಟಗಾರ ಯಾರು ಎನ್ನುವುದನ್ನು ತಿಳಿಸಿರಲಿಲ್ಲ.

  • ಹೊಸವರ್ಷದಂದು ರೌಡಿಶೀಟರ್‍ಗಳಿಗೆ ಪೊಲೀಸರಿಂದ ಬುಲಾವ್- ಅಳುಕಿನಿಂದ್ಲೇ ಠಾಣೆಗೆ ಬಂದವ್ರಿಗೆ ಆಶ್ಚರ್ಯ

    ಹೊಸವರ್ಷದಂದು ರೌಡಿಶೀಟರ್‍ಗಳಿಗೆ ಪೊಲೀಸರಿಂದ ಬುಲಾವ್- ಅಳುಕಿನಿಂದ್ಲೇ ಠಾಣೆಗೆ ಬಂದವ್ರಿಗೆ ಆಶ್ಚರ್ಯ

    ಬೆಂಗಳೂರು: ಇಂದು ಬೆಳಗ್ಗೆ ನಗರದ ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗಳಿಗೆ ಠಾಣೆಗೆ ಬರಲು ಪೊಲೀಸರು ಸೂಚಿಸಿದ್ದರು. ಹೊಸ ವರ್ಷದ ದಿನದಂದೇ ಬುಲಾವ್ ಬಂದಿದ್ದಕ್ಕೆ ಅಳುಕಿನಿಂದಲೇ ಠಾಣೆಗೆ ಬಂದವರಿಗೆ ಆಶ್ಚರ್ಯ ಕಾದಿತ್ತು.

    ಠಾಣೆಗೆ ಬಂದವರಿಗೆ ಅತ್ತಿಬೆಲೆ ಠಾಣೆಯ ಪೊಲೀಸರು ಒಂದೊಂದು ಪುಸ್ತಕ ಹಾಗು ಗಿಡಗಳನ್ನು ಕೊಟ್ಟು ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಅತ್ತಿಬೆಲೆ ವೃತ್ತ ನಿರೀಕ್ಷಕರಾದ ಎಲ್.ವೈ.ರಾಜೇಶ್, ಪಿಎಸ್‍ಐ ನವೀನ್ ಗಜೇಂದ್ರ ಹಾಗು ಠಾಣಾ ಸಿಬ್ಬಂದಿ ಇಂದು ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಿದರು. ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿನಿಂದ ರೌಡಿಶೀಟರ್ ಪಟ್ಟ ಕಟ್ಟಿಕೊಂಡವರನ್ನು ಹೊಸ ವರ್ಷದ ಮೊದಲ ದಿನ ಠಾಣೆಗೆ ಕರೆಯಿಸಿ ಶುಭಾಶಯ ಕೋರಿ ಎಲ್ಲರಿಗೂ ಸನ್ಮಾರ್ಗದಲ್ಲಿ ನಡೆಯುವಂತೆ ತಿಳಿಸಿ ಒಬ್ಬಒಬ್ಬರಿಗೂ ‘ಕರುಣಾಳು ಬಾ ಬೆಳಕೇ’ ಎಂಬ ಪುಸ್ತಕ ಹಾಗು ಗಿಡಗಳನ್ನು ನೀಡಿದ್ರು.

    ಈ ಸಂದರ್ಭದಲ್ಲಿ ಸಿಪಿಐ ರಾಜೇಶ್ ಮಾತನಾಡಿ, ಈ ಹಿಂದೆ ಕಾನೂನು ಭಂಗ ಹಾಗು ಕೆಲವು ಅಪಾರಾಧ ಕೃತ್ಯಗಳಿಂದ ರೌಡಿಶೀಟರ್ ಗಳಾಗಿದ್ದು ಇವರ ಬಾಳಲ್ಲಿ ಪರಿವರ್ತನೆಯಾಗಲಿ. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉತ್ತಮರಾಗಿ ಬಾಳಲಿ ಎಂಬ ಉದ್ದೇಶದಿಂದ ಹೊಸ ವರ್ಷದ ಮೊದಲ ದಿನ ಈ ಕೆಲಸ ಮಾಡಲಾಗಿದೆ. ಅವರಿಗೆ ಕೊಟ್ಟಿರುವ ಪ್ರತಿಯೊಂದು ಗಿಡವನ್ನು ನೋಡಿದಾಗ ಅವರು ಪರಿವರ್ತನೆಯಾಗುವುದರ ಜೊತೆಗೆ ಕೊಟ್ಟಿರುವ ಪುಸ್ತಕ ಓದಿ ಅವರ ಬಾಳಲ್ಲಿ ಬಡಲಾವಣೆ ಆಗಬೇಕು. ಈ ನಿಟ್ಟಿನಲ್ಲಿ ಉತ್ತಮವಾಗಿ ಜೀವನ ನಡೆಸಲು ಇನ್ನೂ ಹೆಚ್ಚಿನ ಸಹಕಾರ ನೀಡುವ ಭರವಸೆ ನೀಡಿ ಅವರಿಗೆ ಹೊಸ ವರ್ಷದ ಶುಭಾಶಯ ತಿಳಿಸಲಾಯಿತು ಎಂದರು.

  • ಹಾಡಹಗಲೇ 11 ಮಂದಿ ದಾಳಿ ನಡೆಸಿ, 27 ಬಾರಿ ಕೊಚ್ಚಿ ಕೊಂದೇ ಬಿಟ್ರು!  ಶಾಕಿಂಗ್ ವಿಡಿಯೋ

    ಹಾಡಹಗಲೇ 11 ಮಂದಿ ದಾಳಿ ನಡೆಸಿ, 27 ಬಾರಿ ಕೊಚ್ಚಿ ಕೊಂದೇ ಬಿಟ್ರು! ಶಾಕಿಂಗ್ ವಿಡಿಯೋ

    ಮುಂಬೈ: 11 ಜನರ ಗುಂಪೊಂದು ಹಾಡಹಗಲೇ ವ್ಯಕ್ತಿಯನ್ನು ರಸ್ತೆ ಬದಿಯಲ್ಲೇ 27 ಬಾರಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ಮಂಗಳವಾರ ನಡೆದಿದೆ.

    ಮುಂಬೈಯಿಂದ 280 ಕಿಮೀ ದೂರದಲ್ಲಿರುವ ಧುಲೆ ಎಂಬಲ್ಲಿ ಈ ಘಟನೆ ನಡೆದಿದ್ದು, ಹತ್ಯೆಯ ಭೀಕರ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ರೌಡಿ ಶೀಟರ್ ರಫೀಕುದ್ದೀನ್ ಕೊಲೆಯಾದ ವ್ಯಕ್ತಿ. ಮಂಗಳವಾರ ಬೆಳಗ್ಗೆ ರಸ್ತೆಯ ಬದಿಯಲ್ಲಿನ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ವೇಳೆ 11 ಮಂದಿಯ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ನಡೆಸಿದೆ. ಹತ್ಯೆ ಎಸಗಿದ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

    ರೌಡಿಯಾಗಿದ್ದ ಈತನ ಮೇಲೆ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ದ್ವೇಷದ ಹಿನ್ನೆಲೆಯಲ್ಲಿ ಸ್ಥಳೀಯ ಗೂಂಡಾಗಳೇ ಈತನನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಕೊಲೆಯಾದ ಎರಡು ದಿನಗಳ ನಂತರ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು, ಇದುವರೆಗೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ.

     

    https://youtu.be/TL8BVmg-p9c

     

     

  • ನೆಲಮಂಗಲದಲ್ಲಿ 20ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್

    ನೆಲಮಂಗಲದಲ್ಲಿ 20ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್

    ನೆಲಮಂಗಲ: ಕಾನೂನು ಸುವ್ಯವಸ್ತೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ನೆಲಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ 20ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಲಾಯಿತು.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವಣ್ಣ ನೇತೃತ್ವದಲ್ಲಿ ರೌಡಿಗಳ ಪೆರೇಡ್ ನಡೆಸಲಾಯಿತು.

    ಇನ್ನೂ ಈ ಒಂದು ಪೆರೇಡ್ ನಲ್ಲಿ ಬಂಡೆ ಮಂಜ, ಬಂಡೆ ಮಂಜನ ಸಹೋದರ ಉಮೇಶ್, ಗಣೇಶನ ಗುಡಿ ರಂಗ, ಜಯನಗರದ ಕಾಸೀಮ್, ವಂದಲ್ ರವಿ, ನಾಗರಾಜು, ಕಾಲೋನಿ ಪ್ರವೀಣ್, ಸೇರಿದಂತೆ ಅನೇಕ ರೌಡಿಗಳು ಭಾಗಿಯಾಗಿದ್ದು, ರೌಡಿಗಳಿಗೆ ವೃತ್ತ ನಿರೀಕ್ಷಕ ಶಿವಣ್ಣ ಖಡಕ್ ವಾರ್ನಿಂಗ್ ನೀಡಿದರು.