Tag: ರೌಡಿ ಪರೇಡ್

  • ನಿಮ್ಮೆಲ್ಲಾ ಆಟ ನಿಲ್ಲಿಸ್ಬೇಕು ಇಲ್ಲಾಂದ್ರೆ ಪ್ರೊ ಕಬಡ್ಡಿಯಂತೆ ಪೊಲೀಸ್ ಕಬಡ್ಡಿ ಆಡ್ಬೇಕಾಗುತ್ತೆ- ರೌಡಿಗಳ ಚಳಿ ಬಿಡಿಸಿದ ಎಸ್‍ಪಿ

    ನಿಮ್ಮೆಲ್ಲಾ ಆಟ ನಿಲ್ಲಿಸ್ಬೇಕು ಇಲ್ಲಾಂದ್ರೆ ಪ್ರೊ ಕಬಡ್ಡಿಯಂತೆ ಪೊಲೀಸ್ ಕಬಡ್ಡಿ ಆಡ್ಬೇಕಾಗುತ್ತೆ- ರೌಡಿಗಳ ಚಳಿ ಬಿಡಿಸಿದ ಎಸ್‍ಪಿ

    ತುಮಕೂರು: ನಗರದಲ್ಲಿ ಮತ್ತೆ ರೌಡಿಗಳ ಚಟುವಟಿಕೆ ತಲೆ ಎತ್ತಿದ್ದ ಹಿನ್ನೆಲೆಯಲ್ಲಿ ಎಸ್‍ಪಿ ಕೋನವಂಶೀ ಕೃಷ್ಣ ಅವರು ರೌಡಿಗಳ ಚಳಿ ಬಿಡಿಸಿದ್ದಾರೆ.

    ತುಮಕೂರಿನ ಚಿಲುಮೆ ಪೊಲೀಸ್ ಸಮುದಾಯ ಭವನದ ಮೈದಾನದಲ್ಲಿ ಇಂದು ರೌಡಿಗಳ ಪರೇಡ್ ಮಾಡಲಾಗಿದೆ. ಪೊಲೀಸ್ ಸಮುದಾಯ ಭವನದ ಮೈದಾನಕ್ಕೆ ತುಮಕೂರು ನಗರ ಹಾಗೂ ಉಪವಿಭಾಗದ 125 ರೌಡಿಗಳು ಹಾಜರಾಗಿದ್ದರು. ಈ ವೇಳೆ ಮಾತನಾಡಿದ ಎಸ್‍ಪಿ, ಚುನಾವಣೆ ಬರುತ್ತಿದೆ. ನಿಮ್ಮ ಎಲ್ಲಾ ಆಟ ನಿಲ್ಲಿಸಬೇಕು. ಇಲ್ಲಾ ಅಂದರೆ ಪ್ರೊ ಕಬಡ್ಡಿಯಂತೆ ಪೊಲೀಸ್ ಕಬಡ್ಡಿ ಆಡಬೇಕಾಗುತ್ತದೆ. ಜನರು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಕೋನವಂಶೀ ಕೃಷ್ಣ ಅವರು ರೌಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ನಮ್ಮನ್ನು ಹೋಗು ಅನ್ನೋಕೆ ನೀನ್ಯಾರು..?- ಪುಂಡನಿಗೆ ನಡುರಸ್ತೆಯಲ್ಲೇ ಪಿಎಸ್‍ಐ ಡಿಚ್ಚಿ

    ನಾನು ಮತ್ತೆ ಮತ್ತೆ ಕರೆದು ವಾರ್ನಿಂಗ್ ಮಾಡುವುದಿಲ್ಲ. ಇದೇ ಫಸ್ಟ್ ಆ್ಯಂಡ್ ಲಾಸ್ಟ್. ಯಾರಿಗೂ ನಾನು ಸೆಕೆಂಡ್ ಚಾನ್ಸ್ ಕೊಡುವುದಿಲ್ಲ. ಎಲ್ಲಾ ಆಟವನ್ನು ಬಿಟ್ಟು ನಿಮ್ಮ ನಿಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗಬೇಕು. ಇದನ್ನು ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಯಾವ ಸಮಯದಲ್ಲೂ ಕರೆದರೂ ಬರಬೇಕು ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ರೌಡಿಶೀಟರ್ ಕೈನಲ್ಲಿದ್ದ ಟ್ಯಾಟೂ ನೋಡಿ ಎಸ್‍ಪಿ ರಂ

    ಬೆಂಗಳೂರು ಸೇರಿದಂತೆ ಹೊರಗಿನ ಕ್ರಿಮಿನಲ್‍ಗಳಿಗೆ ಆಶ್ರಯ ಕೊಡಬೇಡಿ. ಜೈಲಿನಲ್ಲಿರುವ ಕ್ರಿಮಿನಲ್ ಗಳ ಜೊತೆ ಮೊಬೈಲ್ ಸಂಪರ್ಕ ಇಟ್ಟುಕೊಳ್ಳಬಾರದು. ಒಂದು ವೇಳೆ ಅವರ ಅಣತಿಯಂತೆ ನಡೆದುಕೊಳ್ಳುವುದು ಗೊತ್ತಾದ್ರೆ, ನಿಮ್ ಗಳ ಬಾಲ ಕಟ್ ಮಾಡ್ತೀನಿ ಎಂದು ಎಸ್‍ಪಿ ಖಡಕ್ಕಾಗಿಯೇ ನುಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೌಡಿಗಳಿಗೆ ಹೇರ್ ಕಟ್ ಮಾಡಿಸಿದ ಪೊಲೀಸರು

    ರೌಡಿಗಳಿಗೆ ಹೇರ್ ಕಟ್ ಮಾಡಿಸಿದ ಪೊಲೀಸರು

    ಕಲಬುರಗಿ: ಉದ್ದುದ್ದ ಕೂದಲು ಬಿಟ್ಟು ಜನರಿಗೆ ಭೀಕರ ಲುಕ್ ಕೊಡುತ್ತಿದ್ದ ರೌಡಿಗಳಿಗೆ ಕಲಬುರಗಿ ಪೊಲೀಸರು ಹೇರ್ ಕಟ್ ಮಾಡಿಸಿದ್ದಾರೆ.

    ಕಲಬುರುಗಿ ಜಿಲ್ಲೆ ಹಾಗೂ ತಾಲೂಕು ಪೊಲೀಸ್ ಠಾಣೆಗಳಲ್ಲಿ ಇಂದು ಏಕಕಾಲದಲ್ಲಿ ರೌಡಿ ಪರೇಡ್ ನಡೆಸಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾನೂನು ಬಾಹಿರ, ಆಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಸುಮಾರು 900 ರೌಡಿಗಳು ಈ ಪರೇಡ್‍ಗಳಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿತ್ತು.

    ಪರೇಡ್ ನಲ್ಲಿ ಭಾಗವಹಿಸಿದ್ದ ಹಲವು ರೌಡಿಗಳು ಚಿತ್ರ ವಿಚಿತ್ರವಾಗಿ ಉದ್ದ ಕೂದಲು ಬಿಟ್ಟಿದ್ದರು. ಇದನ್ನು ಕಂಡ ಎಸ್ಪಿ ಎನ್. ಶಶಿಕುಮಾರ್ ಸ್ಥಳದಲ್ಲೇ ಹೇರ್ ಕಟ್ ಮಾಡಿಸಿ ಅಪರಾಧ ಚಟುವಟಿಕೆಗಲ್ಲಿ ಭಾಗಿಯಾದಂತೆ ಎಚ್ಚರಿಕೆ ನೀಡಿದ್ದಾರೆ.

    ನವೆಂಬರ್ 10 ರಂದು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಿಸುವ ಸಲುವಾಗಿ ಸಮಾಜದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ರೌಡಿ ಪರೇಡ್ ನಡೆಸಲಾಗಿದೆ. ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆ ವೇಳೆಯಲ್ಲಿ ಕಲಬುರುಗಿಯ ಅಪಜಲ್‍ಪುರ ಪ್ರದೇಶದಲ್ಲಿ ಗಲಾಟೆ ಸಂಭವಿಸಿತ್ತು. ಸರ್ಕಾರ ಆದೇಶ ಮೇರೆಗೆ ಈ ಬಾರಿಯು ಆಚರಣೆಯನ್ನು ನಡೆಸಲಾಗುತ್ತಿದೆ. ಸಾರ್ವಜನಿಕರು ಶಾಂತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಎಸ್ಪಿ ಎನ್. ಶಶಿಕುಮಾರ್ ತಿಳಿಸಿದರು.

    ಕಲಬುರುಗಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯೊಂದರಲ್ಲೇ ಸುಮಾರು 300ಕ್ಕೂ ಹೆಚ್ಚು ರೌಡಿಗಳು ಪರೇಡ್‍ನಲ್ಲಿ ಭಾಗವಹಿಸಿದ್ದರು. ಕೊಲೆ, ಸುಲಿಗೆ ದರೋಡೆ, ಸರಗಳ್ಳತನ, ಪೊಲೀಸ್ ಮೇಲೆ ಹಲ್ಲೆ ಮುಂತಾದ ಗಂಭೀರ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ರೌಡಿ ಶೀಟರ್ ಪ್ರಕರಣ ದಾಖಲಿಸುತ್ತೇವೆ. ಈ ವರ್ಷ 1990ಕ್ಕೂ ಅಧಿಕ ಜನರ ಮೇಲೆ ರೌಡಿ ಶೀಟರ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೇ ಸುಮಾರು 280 ಹಳೆ ರೌಡಿಗಳ ಮೇಲೆ ದಾಖಲು ಮಾಡಲಾಗಿದ್ದ ಪ್ರಕರಣಗಳನ್ನು ಕೈಬಿಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

    ಪೊಲೀಸರ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ರೌಡಿಗಳ ವೇಷವನ್ನು ಬದಲಿಸುವುದರ ಜೊತೆಗೆ ಅವರ ಮನಸ್ಸನ್ನು ಬದಲಿಸುವ ಕಾರ್ಯ ನಡೆಯಬೇಕಿದೆ ಎಂದು ತಿಳಿಸಿದರು.