Tag: ರೋಶನ್ ಬೇಗ್

  • ಸಿಎಂ ಉತ್ತರ ಕರ್ನಾಟಕ ಭಾಗದವರನ್ನು ನೋಡಿದರೆ ಉರಿದು ಬೀಳ್ತಾರೆ: ಶ್ರೀರಾಮುಲು

    ಸಿಎಂ ಉತ್ತರ ಕರ್ನಾಟಕ ಭಾಗದವರನ್ನು ನೋಡಿದರೆ ಉರಿದು ಬೀಳ್ತಾರೆ: ಶ್ರೀರಾಮುಲು

    ವಿಜಯಪುರ: ಮುಖ್ಯಮಂತ್ರಿಗಳು ತಾಳ್ಮೆಯಿಂದ ಇರಬೇಕಾಗಿತ್ತು. ಉತ್ತರ ಕರ್ನಾಟಕ ಭಾಗದವರನ್ನು ನೋಡಿದರೆ ಉರಿದು ಬೀಳುತ್ತಾರೆ. ಕಾವೇರಿ ಹೋರಾಟಗಳಿಗೆ ಬ್ರದರ್ ಎಂದು ಸ್ಪಂದಿಸುವ ಸಿಎಂ ಉತ್ತರ ಕರ್ನಾಟಕ ಭಾಗದ ಕೃಷ್ಣಾ, ತುಂಗಭದ್ರಾ, ಘಟಪ್ರಭಾ ಹೋರಾಟಗಳಿಗೆ ಯಾಕೆ ಸ್ಪಂದಿಸಲ್ಲ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ತಮ್ಮ ತಂದೆ ಹಾಗೂ ಪುತ್ರನ ಸೋಲಿನ ಸಿಟ್ಟನ್ನು ಉತ್ತರ ಕರ್ನಾಟಕ ಜನರ ಮೇಲೆ ಹಾಕುತ್ತಿದ್ದಾರೆ ಎಂದು ಜರಿದರು. ಮಧ್ಯಂತರ ಚುನಾವಣೆ ಹೇಳಿಕೆಗಳು ಕಾಂಗ್ರೆಸ್ ಜೆಡಿಎಸ್ ಜಂಟಿಯಾಗಿ ನಡೆಸುತ್ತಿರುವ ನಾಟಕ. ಸಿದ್ದರಾಮಯ್ಯ ವರ್ಚಸ್ಸು ಕಳೆದುಕೊಂಡಿದ್ದಾರೆ. ಅವರ ತವರು ಜಿಲ್ಲೆ ಹಳೆಯ ಮೈಸೂರಲ್ಲೂ ವರ್ಚಸ್ಸಿಲ್ಲ. ಸಿದ್ದು ಅಂತ್ಯಕಾಲ ಆರಂಭವಾಗಿದೆ ಎಂದರು.

    ಅಲ್ಲದೆ ಸಿದ್ದರಾಮಯ್ಯನವರಿಗಿಂತಲೂ ಹಳೆಯ ಕಾಂಗ್ರೆಸ್ ನಾಯಕರು ರೋಷನ್ ಬೇಗ್ ಅವರಂಥ ಹಿರಿಯ ಕೈ ನಾಯಕರನ್ನು ಉಚ್ಛಾಟಿಸಿದ್ದು ಸಿದ್ದರಾಮಯ್ಯ ಹಠಕ್ಕೆ ಸಾಕ್ಷಿ ಎಂದು ಬೇಗ್ ಪರ ಬ್ಯಾಟಿಂಗ್ ಮಾಡಿದರು. ಕಾಂಗ್ರೆಸ್‍ನಲ್ಲಿ ನಂದೇ ನಡೆಯಬೇಕೆಂಬುದು ಸಿದ್ದರಾಮಯ್ಯ ಹಠ. ಮೈತ್ರಿ ಸರ್ಕಾರ ನಡೆಸಲು ಆಗದಿದ್ದರೆ ಅಧಿಕಾರ ಬಿಟ್ಟು ಕೊಡಿ. ನಾವು ಸರ್ಕಾರ ರಚಿಸಲು ರಾಜ್ಯಪಾಲರನ್ನು ಕೇಳುತ್ತೇವೆ. ಅವರು ಅವಕಾಶ ಕೊಟ್ಟರೆ ಸರ್ಕಾರ ರಚಿಸುತ್ತೇವೆ ಎಂದರು.

    ಪ್ರಸನ್ನಾನಂದಪುರಿ ವಾಲ್ಮೀಕಿ ಸ್ವಾಮೀಜಿ ಸಿಎಂ ಅವರಿಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಪ್ರಸನ್ನಾನಂದಪುರಿ ಸ್ವಾಮಿಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಅದಕ್ಕೆ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದೇವು. ಯಾರನ್ನು ಅಪಮಾನ ಮಾಡುವ ಕೆಲಸ ಸ್ವಾಮೀಜಿ ಮಾಡಿಲ್ಲ ಎಂದು ಸ್ವಾಮಿಜಿಗಳನ್ನು ಸಮರ್ಥಿಸಿಕೊಂಡರು. ಅಲ್ಲದೆ ಅಪ್ಪ ಎಂದರೆ ಉತ್ತರ ಕರ್ನಾಟಕದಲ್ಲಿ ತಂದೆಗೆ ಸಮಾನ ಅಷ್ಟೇ ಎಂದು ಸ್ವಾಮಿಜಿ ಹೇಳಿಕೆಗೆ ಸಮಾಜಾಯಿಸಿ ಕೊಟ್ಟರು.

  • ಸಚಿವ ಸ್ಥಾನ ನೀಡುವಂತೆ ಶಾಸಕ ಹ್ಯಾರಿಸ್ ಪರ ಬ್ಯಾಟ್ ಬೀಸಿದ್ರಾ ರಮ್ಯಾ

    ಸಚಿವ ಸ್ಥಾನ ನೀಡುವಂತೆ ಶಾಸಕ ಹ್ಯಾರಿಸ್ ಪರ ಬ್ಯಾಟ್ ಬೀಸಿದ್ರಾ ರಮ್ಯಾ

    ಬೆಂಗಳೂರು: ವಿಧಾನಸಭಾ ಚುನಾವಣೆಯ ಬಳಿಕ ಸೈಲೆಂಟಾಗಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು ಇದೀಗ ಶಾಸಕ ಹ್ಯಾರಿಸ್ ಪರ ಲಾಬಿ ನಡೆಸಲು ಮುಂದಾಗಿದ್ದಾರೆ.

    ಹೌದು. ಕರ್ನಾಟಕ ವಿಧಾನ ಸಭೆ ಚುನಾವಣೆ ಮತ್ತು ಮೈತ್ರಿ ಸರ್ಕಾರ, ಸಂಪುಟ ರಚನೆಯಿಂದ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅಂತರ ಕಾಯ್ದುಕೊಂಡಿದ್ದರು. ಆದ್ರೆ ಇದೀಗ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ನಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಪುತ್ರ ನಲಪಾಡ್ ಜೈಲು ಸೇರಿರುವ ಹಿನ್ನೆಲೆಯಲ್ಲಿ ಹ್ಯಾರಿಸ್ ಯಾವುದೇ ಮುಖಂಡರಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ರಮ್ಯಾ ಅವರನ್ನ ಮುಂದಿಟ್ಟುಕೊಂಡು ಹೈಕಮಾಂಡ್ ಮಟ್ಟದಲ್ಲಿ ಹ್ಯಾರಿಸ್ ಪರ ಲಾಬಿ ನಡೆಸಲು ಮುಂದಾಗಿದ್ದಾರಂತೆ. ರಮ್ಯಾ ದೆಹಲಿಯಲ್ಲಿ ತಮಗಿರುವ ಸಂಪರ್ಕ ಬಳಸಿ ಅಲ್ಪಸಂಖ್ಯಾತ ಖೋಟಾದಲ್ಲಿ ರೋಶನ್ ಬೇಗ್ ಬದಲು ಹ್ಯಾರಿಸ್‍ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.

    ಹ್ಯಾರಿಸ್ ಪರ ರಮ್ಯಾ ಲಾಬಿ ಯಾಕೆ ಗೊತ್ತೆ?
    ಈ ಹಿಂದೆ ರಮ್ಯಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಶಾಂತಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ರಮ್ಯಾ ಅವರು ಹ್ಯಾರಿಸ್ ಪರವಾಗಿ ರೋಡ್ ಶೋ ನಡೆಸಿದ್ದರು. ಅಲ್ಲದೇ ಶಾಂತಿನಗರ ನಿವಾಸಿಯಾಗಿರುವ ರಮ್ಯಾ ಅವರು ಶಾಸಕ ಹ್ಯಾರಿಸ್ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಸ್ಥಳೀಯ ಶಾಸಕರಾಗಿರುವ ಹ್ಯಾರಿಸ್ ಪರವಾಗಿ ಸಚಿವರಾಗಬೇಕು ಎನ್ನುವ ಉದ್ದೇಶ ಅವರದ್ದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.