Tag: ರೈಲ್ವೇ ಬ್ರಿಡ್ಜ್

  • ಉಡುಪಿ ರೈಲ್ವೇ ಬ್ರಿಡ್ಜ್‌ನಲ್ಲಿ ನಿತ್ಯಾನಂದ ಬಾಬಾ ಉರುಳುಸೇವೆ

    ಉಡುಪಿ ರೈಲ್ವೇ ಬ್ರಿಡ್ಜ್‌ನಲ್ಲಿ ನಿತ್ಯಾನಂದ ಬಾಬಾ ಉರುಳುಸೇವೆ

    ಉಡುಪಿ: ಜಿಲ್ಲೆಯ ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಇಂದ್ರಾಳಿ ಬ್ರಿಡ್ಜ್ ಬಳಿಯ ರಸ್ತೆ ಅವ್ಯವಸ್ಥೆಯನ್ನು ಖಂಡಿಸಿ ಇಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಅವರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

    ಇಂದ್ರಾಳಿ ಬ್ರಿಡ್ಜ್‌ನ ಹೊಂಡ ಗುಂಡಿ ರಸ್ತೆಗೆ ಆರತಿ ಎತ್ತಿ, ತೆಂಗಿನಕಾಯಿ ಒಡೆದು ಗುಂಡಿ ರಸ್ತೆ ಮೇಲೆ ಉರುಳು ಸೇವೆ ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸಲು ಮುಂದಾದರು. ಈ ರಸ್ತೆಗೆ ಟೆಂಡರ್ ಆಗಿ ಮೂರು ವರ್ಷಗಳಿಂದ ರಸ್ತೆ ಹಾಳಾದರೂ ಯಾರೂ ಪ್ರಶ್ನೆ ಮಾಡುತ್ತಿಲ್ಲ. ಪ್ರತಿನಿತ್ಯ ಸಾವಿರಾರು ಜನರು ಈ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ. ಸ್ವತಃ ಮುಖ್ಯಮಂತ್ರಿಗಳೇ ಈ ರಸ್ತೆಯಲ್ಲಿ ಸಂಚಾರ ಮಾಡಿದರೂ ಕೂಡಾ ಅವರ ಕಣ್ಣಿಗೂ ಈ ರಸ್ತೆಯ ಸಮಸ್ಯೆ ಕಂಡು ಬಂದಿಲ್ಲ. ಇಲ್ಲಿನ ಹೊಂಡಗಳನ್ನು ರಿಪೇರಿ ಮಾಡಲು ಸ್ವತಃ ಮೋದಿ ಮತ್ತು ನಿತಿನ್ ಗಡ್ಕರಿ ಬರಬೇಕಾದ ಅನಿವಾರ್ಯತೆ ಇದೆ.

    ಉಡುಪಿ ಜನರು ಮುಗ್ಧರು, ಯಾರೂ ಪ್ರಶ್ನೆ ಮಾಡುವುದಿಲ್ಲ. ಮಾನ್ಯ ಪ್ರಧಾನ ಮಂತ್ರಿಗಳು ಉಡುಪಿಗೆ ಬಂದು ಜನರ ಸಮಸ್ಯೆ ಬಗೆಹರಿಸಲಿ. ಈ ರಸ್ತೆಯಲ್ಲಿ ಬೀದಿ ದೀಪ ಕೂಡಾ ಇಲ್ಲ. ಇದರಿಂದಾಗಿ ದನ ಕರುಗಳು ಸಾಯುತ್ತವೆ. ದನ ಕರುಗಳ ಹೆಸರಿನಲ್ಲಿ ವೋಟ್ ತೆಗೆದುಕೊಳ್ಳುವ ಇವರಿಗೆ ಇದು ಕಾಣುವುದಿಲ್ಲವಾ. ಮೊನ್ನೆ ಮುಖ್ಯಮಂತ್ರಿಯವರು ಬರುವ ಸಂದರ್ಭದಲ್ಲಿ ಹಾಕಿದ ಡಾಂಬಾರ್ ಒಂದೇ ದಿನದಲ್ಲಿ ಕಿತ್ತು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನಲಪಾಡ್‌ ಅಕಾಡೆಮಿಯಿಂದ ರಾಜಕಾಲುವೆ ಒತ್ತುವರಿ – ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ BBMP ಹಿಂದೇಟು!

    ಇಂದ್ರಾಳಿಯ ಈ ಭಾಗದಲ್ಕಿ ಪ್ರತಿನಿತ್ಯ ವಾಹನ ಸವಾರರು ಓಡಾಟಮಾಡಲು ಪರದಾಡುತ್ತಾರೆ. ದ್ವಿಚಕ್ರ ಮತ್ತು ಇತರ ವಾಹನಗಳ ಸವಾರರು ನಿರಂತರವಾಗಿ ಸಂಕಷ್ಟ ಅನುಭವಿಸುತಿದ್ದಾರೆ. ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು ಇದೇ ರಸ್ತೆಯಲ್ಲಿ ಓಡಾಟ ನಡೆಸುತ್ತಿದ್ದು ಸಮಸ್ಯೆ ಅರಿತಿರುವವರು ಈ ಬಗ್ಗೆ ಕೂಡಲೇ ಗಮನ ಕೊಡಬೇಕು ಎಂದು ಒತ್ತಾಯಿಸಲಾಯಿತು. ಇದನ್ನೂ ಓದಿ: ನೀವು ಹಿಂದೂ ಆಗಿರುವವರೆಗೂ ಅಸ್ಪೃಶ್ಯರಾಗಿರುತ್ತೀರಾ – ಡಿಎಂಕೆ ಸಂಸದನ ಹೇಳಿಕೆಗೆ ಬಿಜೆಪಿ ಕಿಡಿ

    Live Tv
    [brid partner=56869869 player=32851 video=960834 autoplay=true]

  • ರಾತ್ರೋ ರಾತ್ರಿ ಕಾಣೆಯಾಯ್ತು 23 ಮೀ. ಉದ್ದದ, 56 ಟನ್ ತೂಕದ ರೈಲ್ವೇ ಬ್ರಿಡ್ಜ್

    ರಾತ್ರೋ ರಾತ್ರಿ ಕಾಣೆಯಾಯ್ತು 23 ಮೀ. ಉದ್ದದ, 56 ಟನ್ ತೂಕದ ರೈಲ್ವೇ ಬ್ರಿಡ್ಜ್

    ಮಾಸ್ಕೋ: ಇಷ್ಟು ದಿನ ಮೊಬೈಲ್, ಅಂಗಡಿ, ಮನೆ ಕಳ್ಳತನ ನಡೆದಿರೋದನ್ನು ಕೇಳಿರುತ್ತವೆ. ರಷ್ಯಾದಲ್ಲಿ ರಾತ್ರೋ ರಾತ್ರಿ ಬರೋಬ್ಬರಿ 23 ಮೀಟರ್ ಉದ್ದದ ಮತ್ತು 56 ಟನ್ ತೂಕದ ರೈಲ್ವೇ ಬ್ರಿಡ್ಜ್ ಕಾಣೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ರೈಲ್ವೇ ಬ್ರಿಡ್ಜ್ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರು ಆಶ್ವರ್ಯ ವ್ಯಕ್ತಪಡಿಸುತ್ತಿದ್ದಾರೆ.

    ರಷ್ಯಾದ ಮುರಮ್ನೆಸಕ್ ಎಂಬಲ್ಲಿ ಈ ಕಳ್ಳತನ ನಡೆದಿದೆ. ಮುರಮ್ನೆಸಕ್ ಪಟ್ಟಣದ ಸಮೀಪ ಉಮಬಾ ನದಿಗೆ ಅಡ್ಡಲಾಗಿ ಲೋಹದ ಬ್ರಿಡ್ಜ್ ಕಟ್ಟಲಾಗಿತ್ತು. ಈ ಪ್ರದೇಶ ರಷ್ಯಾ ಮತ್ತು ಫಿನ್ ಲ್ಯಾಂಡ್ ನಡುವಿನ ಗಡಿಭಾಗವಾಗಿದೆ. ಮೇ 16ರಂದು ಬ್ರಿಡ್ಜ್ ಮಧ್ಯಭಾಗ ಕಳ್ಳತನವಾಗಿದ್ದು, ಅಧಿಕಾರಿಗಳು ಸ್ಥಳೀಯ ಕಿರೋವಸ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನದಿಯ ಮಧ್ಯಭಾಗದಲ್ಲಿ ಸೇತುವೆಯನ್ನು ಸಂಪೂರ್ಣ ಲೋಹದಿಂದ ನಿರ್ಮಿಸಲಾಗಿತ್ತು.

    ಸೇತುವೆಯ ಮಧ್ಯಭಾಗದ ಸಂಪೂರ್ಣ ಲೋಹವನ್ನು ಕೆಳಗಡೆ ಎಳೆಯಲಾಗಿದೆ. ಎಲ್ಲ ಲೋಹ ನದಿಯಲ್ಲಿ ಬಿದ್ದ ಕೂಡಲೇ ಬಿಡಿ ಭಾಗಗಳನ್ನು ವಿಂಗಡಿಸಿ ಎಲ್ಲವನ್ನು ವಾಹನಗಳ ಮೂಲಕ ಕಳ್ಳರು ಸಾಗಣೆ ಮಾಡಿದ್ದಾರೆ ಎಂದು ವರದಿಯಾಗಿದೆ.

  • ಲಕ್ಷಾಂತರ ಜನ ಓಡಾಡುವ ರೈಲ್ವೇ ಬ್ರಿಡ್ಜ್ ರೋಡ್‍ನಲ್ಲಿ ಮಹಾ ಬಿರುಕು!

    ಲಕ್ಷಾಂತರ ಜನ ಓಡಾಡುವ ರೈಲ್ವೇ ಬ್ರಿಡ್ಜ್ ರೋಡ್‍ನಲ್ಲಿ ಮಹಾ ಬಿರುಕು!

    ಬೆಂಗಳೂರು: ಚೋಳರಪಾಳ್ಯ ಪಾದರಾಯನಪುರದ ರೈಲ್ವೇ ಸೇತುವೆಯಲ್ಲಿ ದೊಡ್ಡ ಬಿರುಕು ಮೂಡಿದ್ದು, ಸಂಪೂರ್ಣವಾಗಿ ಕುಸಿಯುವ ಹಂತದಲ್ಲಿದೆ.

    ದಿನಕ್ಕೆ ಲಕ್ಷಾಂತರ ಜನರು ವಾಹನದ ಮೂಲಕ ಮೆಜೆಸ್ಟಿಕ್, ಮೈಸೂರು ರೋಡ್, ವಿಜಯನಗರ ಪೈಪ್‍ಲೈನ್, ಹೊಸಹಳ್ಳಿ, ಜೆಜೆಆರ್ ನಗರ, ಕೆಪಿ ಅಗ್ರಹಾರಕ್ಕೆ ಈಗ ಮಾರ್ಗವಾಗಿಯೇ ಸಾಗುತ್ತಿದ್ದಾರೆ.

    ಹಳೆಯ ಕಾಲದ ಸೇತುವೆ ಇದಾಗಿದ್ದು, ಈಗ ಕೆಳಭಾಗದಿಂದ ಸಂಪೂರ್ಣ ಶಿಥಿಲಗೊಂಡು ದೊಡ್ಡ ಕ್ರ್ಯಾಕ್ ಮೂಡಿದೆ. ಒಂದು ಮಳೆ ಬಂದರೆ ರಸ್ತೆ ಸಂಪೂರ್ಣ ಕುಸಿಯುವ ಹಂತದಲ್ಲಿದೆ. ಟ್ರಾಫಿಕ್ ಪೊಲೀಸರು ಈ ಮೇಲ್ಸೆತುವೆ ಬಳಿ ಈ ಬ್ರಿಡ್ಜ್ ಬಿರುಕು ಬಿಟ್ಟಿದ್ದು ಭಾರೀ ವಾಹನಗಳು, 4 ಚಕ್ರದ ವಾಹನಗಳು ಹೋಗುವಂತಿಲ್ಲ ಎಂದು ಬೋರ್ಡ್ ಹಾಕಿದ್ದಾರೆ. ಆದರೂ ವಾಹನಸವಾರರು ಇದನ್ನು ಗಮನಿಸದೇ ಸಾಗುತ್ತಿದ್ದಾರೆ.

    ಇದರಿಂದ ಸ್ಥಳೀಯರು ಆತಂಕಗೊಂಡಿದ್ದು, ಬೋರ್ಡ್ ಹಾಕುವ ಬದಲು ರಿಪೇರಿ ಮಾಡಬೇಕು. ಒಂದು ಮಳೆ ಬಂದರೆ ಎತ್ತರದಲ್ಲಿರುವ ಈ ರಸ್ತೆ ಕುಸಿಯುತ್ತದೆ ಎಂದು ಆತಂಕ ತೋಡಿಕೊಂಡಿದ್ದಾರೆ.