Tag: ರೈಲ್ವೆ

  • ಹಾಡು ಕೇಳುತ್ತಾ ಹಳಿ ದಾಟುವಾಗ ರೈಲು ಡಿಕ್ಕಿ- ಯುವಕ ಸಾವು

    ಹಾಡು ಕೇಳುತ್ತಾ ಹಳಿ ದಾಟುವಾಗ ರೈಲು ಡಿಕ್ಕಿ- ಯುವಕ ಸಾವು

    –  ಕೂದಲೆಳೆ ಅಂತರದಲ್ಲಿ ಪೋಷಕರು ಪಾರು

    ರಾಯಚೂರು: ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಮಂತ್ರಾಲಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಕರ್ನೂಲ್ ಜಿಲ್ಲೆ ಕೊಸಗಿ ಮಂಡಲದ ಸಾತನೂರ್ ಗ್ರಾಮದ ಶರಣಬಸವ (18) ಮೃತ ಯುವಕ. ತಂದೆ-ತಾಯಿ ಮತ್ತು ಮಗ ಮೂವರು ಹಳಿ ದಾಟುವಾಗ ಈ ಘಟನೆ ನಡೆದಿದೆ. ಕೂದಲೆಳೆ ಅಂತರದಲ್ಲಿ ತಂದೆ-ತಾಯಿ ಪಾರಾಗಿದ್ದಾರೆ.

    ಮೂವರು ಬೆಂಗಳೂರಿನಿಂದ ಉದ್ಯಾನ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಂದು ಮಂತ್ರಾಲಯ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದು, ಹಳಿ ದಾಟುತ್ತಿದ್ದಾಗ  ಈ ಘಟನೆ ನಡೆದಿದೆ. ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದು ಶರಣಬಸವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

    ಮೃತ ಯುವಕ ಕಿವಿಗೆ ಇಯರ್ ಫೋನ್ ಬಳಸಿ ಹಾಡು ಕೇಳುತ್ತಿದ್ದನು. ಹೀಗಾಗಿ ರೈಲಿನ ಶಬ್ದ ಕೇಳದೆ ಹಳಿ ಮೇಲೆ ಹೋಗಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಅವನ ಹಿಂದೆಯೇ ಇದ್ದ ತಂದೆ ತಾಯಿ ಪಾರಾಗಿದ್ದಾರೆ. ಮಂತ್ರಾಲಯ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಗನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಬೋಗಿಗಳನ್ನ ಬಿಟ್ಟು 10 ಕಿ.ಮೀ ಸಾಗಿದ ಎಂಜಿನ್

    ಬೋಗಿಗಳನ್ನ ಬಿಟ್ಟು 10 ಕಿ.ಮೀ ಸಾಗಿದ ಎಂಜಿನ್

    ಹೈದರಾಬಾದ್: ರೈಲು ಎಂಜಿನ್ ತನ್ನ ಬೋಗಿಗಳಿಂದ ಬೇರ್ಪಟ್ಟು ಸುಮಾರು 10 ಕಿ.ಮೀ. ದೂರದವರೆಗೂ ಹೋಗಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

    ಭುವನೇಶ್ವರ-ಸಿಕಂದರಾಬಾದ್ ನಡುವೆ ಸಂಪರ್ಕ ಕಲ್ಪಿಸುವ ವಿಶಾಖ ಎಕ್ಸ್ ಪ್ರೆಸ್‍ಗೆ ಸೇರಿದ ಎಂಜಿನ್ ಇದಾಗಿದೆ. ಎಂಜಿನ್ ಮತ್ತು ಬೋಗಿಗಳ ನಡುವಿನ ರಾಡ್‍ಗಳು ಮುರಿದುಹೋಗಿದೆ. ಪರಿಣಾಮ ಅದು ನರಸಿಪಟ್ನಮ್ ಮತ್ತು ಟುನಿ ರೈಲ್ವೆ ನಿಲ್ದಾಣಗಳ ನಡುವೆ ಎಂಜಿನ್ ತನ್ನ ಬೋಗಿಯಿಂದ ಬೇರ್ಪಟ್ಟು ಮುಂದೆ ಹೋಗಿದೆ. ತಕ್ಷಣ ಈ ಘಟನೆ ಬಗ್ಗೆ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ರೈಲ್ವೆ ಅಧಿಕಾರಿಗಳು ತಂತ್ರಜ್ಞರ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಇದರಿಂದ ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಇತರ ಕೆಲವು ರೈಲುಗಳು ತಡವಾಗಿದೆ ಹೋಗಿವೆ. ಆದರೆ ಇದರಿಂದ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಎಂದು ರೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಎಂಜಿನ್ ರೈಲು ಬೋಗಿಗಳನ್ನು ಬಿಟ್ಟು ಚಲಿಸುತ್ತಿದ್ದುದ್ದನ್ನು ನೋಡಿ ಸಾರ್ವಜನಿಕರು ವಿಡಿಯೋ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಸದ್ಯಕ್ಕೆ ರೈಲ್ವೆ ಅಧಿಕಾರಿಗಳು ಈ ಕುರಿತು ತನಿಖೆ ಆರಂಭಿಸಿದ್ದಾರೆ.

  • ರೈಲ್ವೆ ತಾಣದಲ್ಲಿ ಅಶ್ಲೀಲ ಜಾಹೀರಾತು ಎಂದು ದೂರು ಕೊಟ್ಟು ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ!

    ರೈಲ್ವೆ ತಾಣದಲ್ಲಿ ಅಶ್ಲೀಲ ಜಾಹೀರಾತು ಎಂದು ದೂರು ಕೊಟ್ಟು ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ!

    ಬೆಂಗಳೂರು: ರೈಲ್ವೆ ಟಿಕೆಟ್ ಬುಕ್ಕಿಂಗ್ ವೇಳೆ ಆಪ್‍ನಲ್ಲಿ ಅಶ್ಲೀಲ ಹಾಗೂ ಅಸಭ್ಯ ಜಾಹೀರಾತು ತೋರಿಸಿದಕ್ಕೆ ವ್ಯಕ್ತಿಯೊಬ್ಬ ರೈಲ್ವೆ ಇಲಾಖೆ ವಿರುದ್ಧ ಟ್ವಿಟ್ಟರಿನಲ್ಲಿ ಕಿಡಿಕಾರಿದ್ದಾನೆ. ಈ ಟ್ವೀಟ್‍ಗೆ ರೈಲ್ವೆ ಇಲಾಖೆ ಪ್ರತಿಕ್ರಿಯಿಸಿದ್ದು, ಸದ್ಯ ಜನರು ವ್ಯಕ್ತಿಯನ್ನೇ ಟ್ರೋಲ್ ಮಾಡಲು ಶುರು ಮಾಡುತ್ತಿದ್ದಾರೆ.

    ಪ್ರಯಾಣಿಕ ಆನಂದ್ ಕುಮಾರ್ ರೈಲ್ವೆ ಆಪ್‍ನಲ್ಲಿ ಟಿಕೆಟ್ ಬುಕ್ ಮಾಡುವಾಗ ಕಾಣಿಸಿಕೊಳ್ಳುವ ಅಶ್ಲೀಲ ಜಾಹೀರಾತುಗಳ ಫೋಟೋ ಸ್ಕ್ರೀನ್‍ಶಾಟ್ ತೆಗೆದು ಅದನ್ನು ತನ್ನ ಟ್ವಿಟ್ಟರಿನಲ್ಲಿ ಹಾಕಿ ಪಿಯೂಷ್ ಗೋಯಲ್, ರೈಲ್ವೆ ಮಂತ್ರಿಗೆ ಟ್ಯಾಗ್ ಮಾಡಿದ್ದಾನೆ.

    ತನ್ನ ಟ್ವಿಟ್ಟರಿನಲ್ಲಿ ಸ್ಕ್ರೀನ್‍ಶಾಟ್ ಫೋಟೋ ಹಾಕಿ ಅದಕ್ಕೆ, “ನಾನು ರೈಲ್ವೆ ಟಿಕೆಟ್ ಬುಕ್ ಮಾಡುವಾಗ ಆಪ್‍ನಲ್ಲಿ ಅಸಭ್ಯ ಹಾಗೂ ಅಶ್ಲೀಲ ಜಾಹೀರಾತುಗಳು ತೋರಿಸುತ್ತದೆ. ಇದರಿಂದ ನನಗೆ ಸಾಕಷ್ಟು ಕಿರಿಕಿರಿ ಹಾಗೂ ಮುಜುಗರ ಆಗುತ್ತಿದೆ. ಈ ವಿಚಾರವನ್ನು ಗಮನಿಸಿ ಎಂದು ಪಿಯೂಷ್ ಗೋಯಲ್, ರೈಲ್ವೆ ಮಂತ್ರಿ ಹಾಗೂ ಐಆರ್ ಸಿಟಿಸಿ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿದ್ದಾನೆ.

    https://twitter.com/anandk2012/status/1133685801655476224?ref_src=twsrc%5Etfw%7Ctwcamp%5Etweetembed%7Ctwterm%5E1133685801655476224&ref_url=https%3A%2F%2Fwww.indiatoday.in%2Ftrending-news%2Fstory%2Fman-trolls-irctc-for-vulgar-ads-on-the-railway-app-their-savage-reply-has-twitter-in-splits-1537801-2019-05-29

    ವ್ಯಕ್ತಿಯ ಟ್ವೀಟ್‍ಗೆ ಐಆರ್ ಸಿಟಿಸಿ, ನಮ್ಮ ವೆಬ್‍ಸೈಟ್ ನಲ್ಲಿ ಜಾಹೀರಾತಿಗಾಗಿ ಗೂಗಲಿನ ಆಡ್ ಸರ್ವಿಸ್ ಬಳಕೆ ಆಗುತ್ತಿದೆ. ಈ ಜಾಹೀರಾತು ಬಳಕೆದಾರರನ್ನು ಟಾರ್ಗೆಟ್ ಮಾಡಲು ಕುಕ್ಕೀಸ್ ಬಳಸುತ್ತದೆ. ಬಳಕೆದಾರನ ಬ್ರೌಸರ್ ಹಿಸ್ಟರಿಯನ್ನು ಗಮನಿಸಿಕೊಂಡು ಅದಕ್ಕೆ ಸಂಬಂಧಪಟ್ಟ ಜಾಹೀರಾತನ್ನು ಮಾತ್ರ ಪ್ರಕಟಿಸುತ್ತದೆ. ಇಂತಹ ಜಾಹೀರಾತು ಬರದೇ ಇರಲು ದಯವಿಟ್ಟು ನಿಮ್ಮ ಬ್ರೌಸರ್ ಹಾಗೂ ಹಿಸ್ಟರಿಯನ್ನು ಡಿಲೀಟ್ ಮಾಡಿ ಎಂದು ಟ್ವೀಟ್ ಮಾಡಿದೆ.

    ಭಾರತೀಯ ರೈಲ್ವೇಯ ಈ ಟ್ವೀಟ್ ಅನ್ನು 20 ಸಾವಿರ ಜನ ಲೈಕ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ತನ್ನ ತಪ್ಪಿಗೆ ಐಆರ್ ಟಿಸಿಯನ್ನು ದೂರಬೇಡ. ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಿಯಾ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

    ಡಿಜಿಟಲ್ ವ್ಯವಹಾರದಲ್ಲಿ ಗ್ರಾಹಕನ ಆಸಕ್ತಿ ಏನು ಎನ್ನುವುದನ್ನು ಕಂಪನಿಗಳೇ ಗುರುತಿಸುತ್ತವೆ. ಬಳಕೆದಾರ ಯಾವೆಲ್ಲ ತಾಣಗಳಿಗೆ ಭೇಟಿ ನೀಡಿದ್ದಾನೆ. ಆತನಿಗೆ ಏನು ಇಷ್ಟ ಇತ್ಯಾದಿ ಮಾಹಿತಿಗಳನ್ನು ಸರ್ಚ್ ಎಂಜಿನ್ ಕಂಪನಿಗಳು ಬ್ರೌಸರ್ ಹಿಸ್ಟರಿ ಮೂಲಕ ಪಡೆದುಕೊಳ್ಳುತ್ತದೆ. ಈ ಮೂಲಕ ಗ್ರಾಹಕನಿಗೆ ಇಷ್ಟ ಇರುವ ವಿಚಾರವನ್ನು ತೋರಿಸುತ್ತದೆ.

  • ಬೆಂಗ್ಳೂರು ಟು ದೆಹಲಿ: ಹೊಸ ರೈಲಿಗೆ ಹಸಿರು ನಿಶಾನೆ ತೋರಿದ ಸದಾನಂದ ಗೌಡ

    ಬೆಂಗ್ಳೂರು ಟು ದೆಹಲಿ: ಹೊಸ ರೈಲಿಗೆ ಹಸಿರು ನಿಶಾನೆ ತೋರಿದ ಸದಾನಂದ ಗೌಡ

    ಬೆಂಗಳೂರು: ಯಶವಂತಪುರ ರೈಲ್ವೇ ನಿಲ್ದಾಣದಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ದೆಹಲಿಗೆ ತೆರಳುವ ಹೊಸ ರೈಲಿಗೆ ಕೇಂದ್ರ ಸಚಿವ ಸದಾನಂದ ಗೌಡರು ಇಂದು ಚಾಲನೆ ನೀಡಿದರು.

    ಈ ವೇಳೆ ಮಾತನಾಡಿದ ಸಚಿವರು, ಬೆಂಗಳೂರಿಗೆ ಇವತ್ತು ಸುದಿನ. ದೆಹಲಿಯಿಂದ ಬೆಂಗಳೂರಿಗೆ ರೈಲಿನ ಅಗತ್ಯ ಇತ್ತು. ಇವತ್ತು ಈ ಕೆಲಸ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಅಲ್ಲದೇ ಮೋದಿ ಸರ್ಕಾರದ ಅವಧಿಯಲ್ಲಿ ರೈಲ್ವೇ ಇಲಾಖೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಸುಮಾರು 2,500 ಕೋಟಿ ರೂ.ಗಳನ್ನು ವಾರ್ಷಿಕವಾಗಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿದೆ. ನಮ್ಮ ಸರ್ಕಾರ ಬರಿ ಘೋಷಣೆಗಳನ್ನ ಮಾಡುತ್ತಿಲ್ಲ. ಅವುಗಳನ್ನ ಜಾರಿಗೆ ತರುವ ಕಾರ್ಯ ಮಾಡಿದೆ ಎಂದರು.

    ರಾಷ್ಟ್ರದ ರಾಜಧಾನಿಗೆ ರಾಜ್ಯದ ರಾಜಧಾನಿಯಿಂದ ಹೊರಡುವ ಹೊಸ ರೈಲು ಯಶವಂತಪುರ ಟು ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ ಇಂದಿನಿಂದ ಆರಂಭವಾಗಿದೆ. ವಾರದಲ್ಲಿ 2 ದಿನಗಳ ಕಾಲ ಹೊಸ ಎಕ್ಸ್ ಪ್ರೆಸ್ ರೈಲು ಪ್ರಯಾಣ ಬೆಳೆಸಲಿದ್ದು, ಪ್ರತಿ ಮಂಗಳವಾರ ಮತ್ತು ಶುಕ್ರವಾರ ಯಶವಂತಪುರದಿಂದ ಮಧ್ಯಾಹ್ನ 12.30ಕ್ಕೆ ಹೊರಡಲಿದ್ದು, 1.38ಕ್ಕೆ ಚಿಕ್ಕಬಳ್ಳಾಪುರ ಮಾರ್ಗವಾಗಿ ದೆಹಲಿಗೆ ಪ್ರಯಾಣ ಬೆಳೆಸಲಿದೆ. ಈ ಹೊಸ ರೈಲ್ವೇ ಸೇವೆ ಲಭ್ಯವಾದ ಪರಿಣಾಮ ಅವಿಭಜಿತ ಕೋಲಾರ ಜಿಲ್ಲೆಯ ಜನತೆಗೆ ಅನುಕೂಲ ಆಗಲಿದ್ದು, ಚಿಕ್ಕಬಳ್ಳಾಪುರ ದಿಂದ ತಿರುಪತಿ ಸೇರಿದಂತೆ ಉತ್ತರ ಭಾಗದ ಅನೇಕ ರಾಜ್ಯಗಳಿಗೆ ಪ್ರಯಾಣಿಸಬಹುದಾಗಿದೆ.

    ಈ ಕಾರ್ಯಕ್ರಮದಲ್ಲಿ ಸಂಸದ ಪಿಸಿ ಮೋಹನ್, ಮಾಜಿ ಕೇಂದ್ರ ರೈಲ್ವೆ ಸಚಿವ ಕೆ.ಹೆಚ್.ಮುನಿಯಪ್ಪ, ಮೇಯರ್ ಗಂಗಾಂಭಿಕಾ ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೈಲ್ವೆ ಗೇಟ್ ದಾಟುವಾಗ ಏಕಾಏಕಿ ಬಂದ ಎಂಜಿನ್- 5 ಸೆಕೆಂಡ್‍ನಲ್ಲಿ ಪ್ರಯಾಣಿಕರ ಜೀವ ಉಳಿಸಿದ ಬಸ್ ಚಾಲಕ

    ರೈಲ್ವೆ ಗೇಟ್ ದಾಟುವಾಗ ಏಕಾಏಕಿ ಬಂದ ಎಂಜಿನ್- 5 ಸೆಕೆಂಡ್‍ನಲ್ಲಿ ಪ್ರಯಾಣಿಕರ ಜೀವ ಉಳಿಸಿದ ಬಸ್ ಚಾಲಕ

    ಧಾರವಾಡ: ಜಿಲ್ಲೆಯ ಹೊರವಲಯದ ಶ್ರೀನಗರ ರೈಲ್ವೆ ಗೇಟಿನಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.

    ಗುರುವಾರ ಬೆಳಗ್ಗಿನ ಜಾವ ಧಾರವಾಡದಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೊರಟಿದ್ದ ಬಸ್, ರೈಲ್ವೆ ಗೇಟ್ ದಾಟುವಾಗ ಏಕಾಏಕಿ ರೈಲಿನ ಎಂಜಿನ್ ಬಂದಿದೆ. ಇದನ್ನು ನೋಡಿದ ಸಾರಿಗೆ ಬಸ್ ಚಾಲಕ 5 ಸೆಕೆಂಡಿನಲ್ಲಿ ಈ ಬಸ್‍ನ್ನು ಬಚಾವ್ ಮಾಡಿದ್ದಾರೆ.

    ಇದು ರೈಲ್ವೆ ಗೇಟಿನ ಗೇಟ್‍ಮ್ಯಾನ್ ಅಜಾರೂಕತೆಯೋ ಅಥವಾ ರೈಲಿನ ಲೋಕೊಪೈಲಟ್‍ನ ಅಜಾರೂಕತೆಯೋ ಗೊತ್ತಿಲ್ಲ. ಆದರೆ ರೈಲಿನ ಎಂಜಿನ್ ಬಸ್ಸಿಗೆ ಡಿಕ್ಕಿ ಹೊಡೆದಿದ್ದರೆ 40ಕ್ಕೂ ಹೆಚ್ಚು ಜನರ ಜೀವ ಹೋಗುತ್ತಿತ್ತು. ಆದರೆ ಈ ಘಟನೆ ತಪ್ಪಿದೆ. ಈ ಘಟನೆಗೆ ಲೋಕೊಪೈಲಟಿನ ತಪ್ಪೇ ಕಾರಣ ಎಂದು ರೈಲ್ವೆ ಗೇಟ್ ಮ್ಯಾನ್ ಹೇಳುತ್ತಾನೆ.ಇದನ್ನೂ ಓದಿ: ಬಸ್ಸನ್ನು ನಿರಂತರವಾಗಿ ತನ್ನ ಲಾರಿಗೆ ಗುದ್ದಿಸಿಕೊಂಡು 70 ಜನರ ಪ್ರಾಣ ಉಳಿಸಿದ ಚಾಣಾಕ್ಷ ಚಾಲಕ

    ನನಗೆ ಸಿಗ್ನಲ್ ಕೂಡಾ ಕೊಡದೇ ರೈಲು ಚಾಲಕ ಬಂದಿದ್ದಾನೆ ಎಂದು ಗೇಟ್ ಮ್ಯಾನ್ ಹೇಳಿದ್ದಾನೆ. ಜನರ ಜೀವ ಉಳಿಸಿ ಬಸ್ ಚಾಲಕ ಕೂಡ ಇದ ನಮ್ಮ ಪುಣ್ಯ, ಟ್ರೈನ್ ನೋಡಿದ ತಕ್ಷಣ ಬಸ್ ಸ್ಪೀಡ್ ಮಾಡಿದ್ದೇ ಪ್ರಯಾಣಿಕರು ಉಳಿಯಲು ಕಾರಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಣ್ಣು ಕೀಳಲು ಹೋದ ಬಾಲಕರಿಂದ ತಪ್ಪಿದ ರೈಲು ದುರಂತ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೈಲ್ವೇ ಹಳಿಯ ಮೇಲೆ ಪಾರ್ಟಿ – ಮೂವರ ಪ್ರಾಣವೇ ಹೋಯ್ತು!

    ರೈಲ್ವೇ ಹಳಿಯ ಮೇಲೆ ಪಾರ್ಟಿ – ಮೂವರ ಪ್ರಾಣವೇ ಹೋಯ್ತು!

    ನವದೆಹಲಿ: ಹಳಿ ಮೇಲೆ ಕುಳಿತಿದ್ದ ಮೂವರು ರೈಲಿಗೆ ಬಲಿಯಾಗಿರುವ ದುರ್ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ಬೆಳಿಗ್ಗೆ ನಂಗ್ಲೋಯಿ ರೈಲ್ವೇ ನಿಲ್ದಾಣದ ಬಳಿ ನಡೆದಿದೆ. ಮೂವರು ಮದ್ಯ ಸೇವನೆ ಮಾಡಿದ್ದರಿಂದ ಈ ಘಟನೆ ನಡೆದಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

    ಮೂವರೂ ಬೆಳಗ್ಗೆ ಸುಮಾರು 7.15 ಕ್ಕೆ ರೈಲ್ವೇ ಹಳಿ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದರು. ಈ ವೇಳೆ ಬಿಕಾನೆರ್-ದೆಹಲಿ ಎಕ್ಸ್ ಪ್ರೆಸ್ ರೈಲು ಬಂದಿದೆ. ಈ ಸಂದರ್ಭದಲ್ಲಿ ರೈಲು ಚಾಲಕ ಹಾರ್ನ್ ಹಾಕಿದ್ದಾನೆ. ಆದರೂ ಅವರು ಹಳಿಯಿಂದ ಕದಲದ ಕಾರಣ ಅವರ ಮೇಲೆ ರೈಲು ಸಂಚರಿಸಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ರೈಲ್ವೇ ಡಿಸಿಪಿ ದಿನೇಶ್ ಗುಪ್ತ ಅವರು ತಿಳಿಸಿದ್ದಾರೆ.

    ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ರೈಲ್ವೇ ರಕ್ಷಣಾ ಪಡೆ ಮತ್ತು ಸಿವಿಲ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯಕ್ಕೆ ಮೃತರ ಬಗ್ಗೆ ಯಾವುದೇ ಗುರುತು ಪತ್ತೆಯಾಗಿಲ್ಲ. ಈ ಕುರಿತು ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

    ವಿಜಯದಶಿಮಿ ಹಿನ್ನೆಲೆಯಲ್ಲಿ ಅಮೃತಸರದ ಜೋದಾ ಪಾಟ್ಕರ್ ನಲ್ಲಿ ರಾವಣನ ಪ್ರತಿಕೃತಿ ಸಂಹರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸಿದ್ದು ಕೆಲವರು ರೈಲು ಹಳಿ ಮೇಲೆ ನಿಂತಿದ್ದರು. ಈ ವೇಳೆ ಹಳಿ ಮೇಲೆ ಜಮಾಯಿಸಿದ್ದ ಜನರ ಮೇಲೆ ಏಕಾಏಕಿ ರೈಲು ಹರಿದಿತ್ತು. ಈ ದುರಂತದಲ್ಲಿ 60ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದೇ ಒಂದು ಟ್ವೀಟ್‍ನಿಂದ 26 ಅಪ್ರಾಪ್ತ ಬಾಲಕಿಯರ ರಕ್ಷಣೆ!

    ಒಂದೇ ಒಂದು ಟ್ವೀಟ್‍ನಿಂದ 26 ಅಪ್ರಾಪ್ತ ಬಾಲಕಿಯರ ರಕ್ಷಣೆ!

    ಲಖ್ನೋ: ಒಂದೇ ಒಂದು ಟ್ವೀಟ್‍ನಿಂದಾಗಿ 26 ಅಪ್ರಾಪ್ತ ಬಾಲಕಿಯರನ್ನು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್​ಪಿ) ಮತ್ತು ರೈಲ್ವೆ ರಕ್ಷಣಾ ದಳ (ಆರ್​ಪಿಎಫ್) ರಕ್ಷಣೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಜುಲೈ 5ರಂದು 26 ಬಾಲಕಿಯರನ್ನು ಮುಜಾಫರ್ ಪುರ-ಬಾಂದ್ರಾ ಔದ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಬಾಲಕಿಯರು ಅಳುತ್ತಿರವುದನ್ನು ಕೇಳಿಸಿಕೊಂಡಿದ್ದ ಪ್ರಯಾಣಿಕರೊಬ್ಬರು ಅಪಹರಣ ಶಂಕೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದನ್ನು ನೋಡಿದ ರೈಲ್ವೆ ಅಧಿಕಾರಿಗಳು, ಕಳ್ಳ ಸಾಗಾಣಿಕೆ ಪತ್ತೆ ಘಟಕಕ್ಕೆ ಬಾಲಕಿಯರನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದರು. ತಕ್ಷಣವೇ ಜಾಗೃತರಾದ ಇಬ್ಬರು ಪೊಲೀಸರು ಕಪತ್ ಗಂಜ್‍ನಿಂದ ಗೋರಖಪುರವರೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು.

    ಗೋರಕ್‍ಪುರಗೆ ರೈಲು ಬರುತ್ತಿದ್ದಂತೆ ಜಿಆರ್​ಪಿ ಮತ್ತು ಆರ್​ಪಿಎಫ್ ಪೊಲೀಸರು ಬಾಲಕಿಯರನ್ನು ರಕ್ಷಣೆ ಮಾಡಿದ್ದು, ಅವರನ್ನು ಕರೆದೊಯ್ಯುತ್ತಿದ್ದ 22 ವರ್ಷದ ಯುವಕ ಹಾಗೂ 55 ವರ್ಷದ ವ್ಯಕ್ತಿಯನ್ನು ವಶಕ್ಕೆ ಪಡಿದಿದ್ದಾರೆ.

    ಬಾಲಕಿಯರು 10 ರಿಂದ 14 ವರ್ಷದವರಾಗಿದ್ದು, ಬಿಹಾರದ ಪಶ್ಚಿಮ ಚಂಪಾರಣ್ ಪ್ರದೇಶದವರು. ಅವರನ್ನು ನರಕ್ತಿಯಾಗಂಜ್ ನಿಂದ ಇದ್ಗಾಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ಕುರಿತು ಸದ್ಯ ಬಾಲಕಿರ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಆರ್‍ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

  • ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕ

    ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕ

    ಮೈಸೂರು: ರೈಲಿಗೆ ತಲೆ ಕೊಟ್ಟು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ನಂಜನಗೂಡಿನ ಮಲ್ಲನಮೂಲೆ ಮಠದ ಸಮೀಪದಲ್ಲಿ ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಹರವೆ ಗ್ರಾಮದ ಕುಮಾರ್ ಎಂಬವರ ಪುತ್ರ ಮನೋಜ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಬುಧವಾರ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

    ಮೃತ ಮನೋಜ್ ತಂದೆಯ ಜೊತೆಗೆ ಶಾಮಿಯಾನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಇಯರ್ ಫೋನ್ ಹಾಕಿ ಡ್ರೈವಿಂಗ್: 13 ಶಾಲಾ ಮಕ್ಕಳ ಬಲಿ ಪಡೆದ ಡ್ರೈವರ್

    ಇಯರ್ ಫೋನ್ ಹಾಕಿ ಡ್ರೈವಿಂಗ್: 13 ಶಾಲಾ ಮಕ್ಕಳ ಬಲಿ ಪಡೆದ ಡ್ರೈವರ್

    ಲಕ್ನೋ: ಉತ್ತರ ಪ್ರದೇಶದ ಖುಷಿ ನಗರದಲ್ಲಿ ನಡೆದ ಶಾಲಾ ಬಸ್ ಹಾಗೂ ರೈಲಿನ ನಡುವಿನ ಅಪಘಾತಕ್ಕೆ ಶಾಲಾ ಬಸ್ ಚಾಲಕ ಇಯರ್ ಫೋನ್ ಧರಿಸಿದ್ದೆ ಕಾರಣ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

    ಅಪಘಾತದಲ್ಲಿ ಇದುವರೆಗೂ 13 ಜನ ಶಾಲಾ ಮಕ್ಕಳು ಸಾವನ್ನಪ್ಪಿದ್ದು, ಘಟನೆಯಲ್ಲಿ ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

    ಶಾಲಾ ವಾಹನಕ್ಕೆ ಥವೆ ಕಪ್ತಗಂಜ್ ನಡುವಿನ ಪ್ಯಾಸೆಂಜರ್ ರೈಲು (55075) ಡಿಕ್ಕಿ ಹೊಡೆದಿದ್ದು, ಮಾನವ ರಹಿತ ರೈಲ್ವೇ ಹಳಿ ಕ್ರಾಸಿಂಗ್ ವೇಳೆ ದುರ್ಘಟನೆ ಸಂಭವಿಸಿದೆ.

    ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ ಯೋಗಿ ಆದಿತ್ಯನಾಥ್ ಘಟನೆಯಲ್ಲಿ ಗಾಯಗೊಂಡ ಅವರನ್ನು ಮಕ್ಕಳ ಚಿಕಿತ್ಸೆಗೆ ಬೇಕಾದ ಎಲ್ಲಾ ಸೌಲಭ್ಯ ನೀಡುವಂತೆ ಆದೇಶಿಸಿದರು. ಅಲ್ಲದೇ ಸರ್ಕಾರದ ವತಿಯಿಂದ ಘಟನೆಯಲ್ಲಿ ಮೃತಪಟ್ಟ ಶಾಲಾ ಮಕ್ಕಳ ಕುಟುಂಬಗಳಿಗೆ ಸಾಂತ್ವನ ಹೇಳಿ 2 ಲಕ್ಷ ರೂ. ಪರಿಹಾರ ಘೋಷಿಸಿದರು. ಅಲ್ಲದೇ ಘಟನೆಯ ಕುರಿತು ತನಿಖೆ ನಡೆಸಲು ರೈಲ್ವೇ ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

    ಘಟನೆ ಕುರಿತು ಸಂಪೂರ್ಣ ತನಿಖೆಯನ್ನು ನಡೆಸಲಾಗುವುದು ಅಲ್ಲದೇ ಶಾಲಾ ಬಸ್ ಚಾಲಕನ ವಯಸ್ಸಿನ ಕುರಿತು ಸಹ ಖಚಿತ ಮಾಹಿತಿ ಇಲ್ಲ. ಘಟನೆಗೆ ಕಾರಣರಾದ ಎಲ್ಲರನ್ನು ಕಠಿಣ ಶಿಕ್ಷೆ ಒಳಪಡಿಸಲಾಗುವುದು. ಈ ಮೂಲಕ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು.

    ಘಟನೆ ನಡೆದ ವೇಳೆ ಶಾಲಾ ವಾಹನದಲ್ಲಿ 25 ಮಂದಿ ಮಕ್ಕಳು ಇದ್ದು, ಎಲ್ಲರು 10 ವರ್ಷಕ್ಕಿಂತ ಕೆಳಗಿನವರು. ಈ ವೇಳೆ 7 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಬಿಆರ್ ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ರೈಲ್ವೇ ವಕ್ತಾರ ತಿಳಿಸಿದ್ದಾರೆ.

  • ರೈಲಿಗೆ ಡಿಕ್ಕಿ ಹೊಡೆದ ಶಾಲಾ ಬಸ್-11 ಮಕ್ಕಳು ದುರ್ಮರಣ

    ರೈಲಿಗೆ ಡಿಕ್ಕಿ ಹೊಡೆದ ಶಾಲಾ ಬಸ್-11 ಮಕ್ಕಳು ದುರ್ಮರಣ

    ಲಕ್ನೋ: ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ರೈಲ್ವೇ ಕ್ರಾಸಿಂಗ್‍ನಲ್ಲಿ ರೈಲಿಗೆ ಡಿಕ್ಕಿಯಾಗಿದ್ದು, 11 ಮಕ್ಕಳು ಸಾವನ್ನಪ್ಪಿದ್ದಾರೆ.

    ಉತ್ತರ ಪ್ರದೇಶ ರಾಜ್ಯದ ಖುಷಿನಗರದಲ್ಲಿ ಈ ಅಪಘಾತ ನಡೆದಿದ್ದು, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗ್ತಿದ್ದ ಸಮಯದಲ್ಲಿ ಬಸ್ ಅಪಘಾತಕ್ಕೆ ಒಳಗಾಗಿದೆ. ಸಾವನ್ನಪ್ಪಿದ ಮಕ್ಕಳು ನಗರದ ಡಿವೈನ್ ಪಬ್ಲಿಕ್ ಶಾಲೆಯವರು ಅಂತಾ ಗುರುತಿಸಲಾಗಿದೆ. ಡಿಕ್ಕಿಯಾದ ರಭಸಕ್ಕೆ ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    ಅಪಘಾತದಲ್ಲಿ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಅಂತಾ ಹೇಳಲಾಗ್ತಿದೆ.

    ಇದೇ ತಿಂಗಳು ಏಪ್ರಿಲ್ 10ರಂದು ಕಾಂಗ್ರಾ ಎಂಬಲ್ಲಿ ಶಾಲಾ ಬಸ್ 100 ಅಡಿ ಆಳದ ಕಂದಕಕ್ಕೆ ಬಿದ್ದು 27 ಮಕ್ಕಳು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿದೆ.