Tag: ರೈಲು ನಿಲ್ದಾಣ

  • ರೈಲಿನಿಂದ ಬೀಳುತ್ತಿದ್ದವರ ರಕ್ಷಣೆಗೆ ತೆರಳಿ ಇಬ್ಬರು ಕೂಲಿಗಳ ದುರ್ಮರಣ!

    ರೈಲಿನಿಂದ ಬೀಳುತ್ತಿದ್ದವರ ರಕ್ಷಣೆಗೆ ತೆರಳಿ ಇಬ್ಬರು ಕೂಲಿಗಳ ದುರ್ಮರಣ!

    ಮುಂಬೈ: ಇಲ್ಲಿನ ವಸಾಯಿ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕರನ್ನು ರಕ್ಷಿಸಲು ತೆರಳಿ ಇಬ್ಬರು ಕೂಲಿಗಳು ಮೃತಪಟ್ಟಿದ್ದಾರೆ.

    ಮಂಗಳವಾರ ರಾತ್ರಿ 8.30ರ ಸುಮಾರಿಗೆ 66 ವರ್ಷದ ಎಸ್ ಪಂಗಟಿ ರಾಜ್ ನಾಯ್ಡು ಎಂಬ ಪ್ರಯಾಣಿಕರೊಬ್ಬರು ತುಂಬಿ ತುಳುಕುತ್ತಿದ್ದ ರೈಲಿನಿಂದ ಹಳಿಗೆ ಬೀಳುವ ಸ್ಥಿತಿಯಲ್ಲಿದ್ದರು. ಈ ಸಂದರ್ಭದಲ್ಲಿ 4 ಮಂದಿ ಕೂಲಿಗಳು, ಡಾಕ್ಟರ್ ಹಾಗೂ ಇಬ್ಬರು ಪೊಲೀಸರು ನಿಲ್ದಾಣಕ್ಕೆ ದೌಡಾಯಿಸಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

    ಇದೇ ವೇಳೆ ಇನ್ನೊಂದು ಹಳಿಯಲ್ಲಿ ಎದುರಿನಿಂದ ರೈಲು ಧಾವಿಸಿದೆ. ಪರಿಣಾಮ 5 ಮಂದಿ ಕೂಡಲೇ ಹಳಿಯಿಂದ ಹೊರಗಡೆ ಹಾರಿದ್ದಾರೆ. ಆದ್ರೆ ಇಬ್ಬರು ಕೂಲಿಗಳಿಗೆ ಮಾತ್ರ ಸಾಧ್ಯವಾಗಲಿಲ್ಲ. ಹೀಗಾಗಿ ಅವರಿಗೆ ರೈಲು ಡಿಕ್ಕಿ ಹೊಡೆದಿದೆ.

    ಮೃತ ಕೂಲಿಗಳನ್ನು 50 ವರ್ಷದ ರಾಮಸತ್ರ ಪಾಸ್ವಾನ್ ಹಾಗೂ 40 ವರ್ಷದ ರಾಜ್ ಭರ್ ಎಂದು ಗುರುತಿಸಲಾಗಿದ್ದು, ಈ ಇಬ್ಬರೂ ಕಳೆದ 40ಕ್ಕೂ ಅಧಿಕ ವರ್ಷಗಳಿಂದ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯ ಬಳಿಕ ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅವರು ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

    ಮತ್ತೊಬ್ಬ ಸಿಬ್ಬಂದಿ ಮನೋಜ್ ಚೌಹಾಣ್ ಅವರ ಕಾಲಿಗೆ ಗಾಯಗಳಾಗಿವೆ. ಇನ್ನು ಘಟನೆ ಸಂಬಂಧ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಅಂತ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ವಿಲಾಸ್ ಚೌಗುಲೆ ತಿಳಿಸಿದ್ದಾರೆ.

  • ಪರಿವರ್ತನಾಯಾತ್ರೆ ಮಾಡೋ ಮೊದ್ಲು ಬಿಜೆಪಿ ನಾಯಕರು ಪರಿವರ್ತನೆಯಾಗಲಿ: ಶರಣಪ್ರಕಾಶ್ ಪಾಟೀಲ್

    ಪರಿವರ್ತನಾಯಾತ್ರೆ ಮಾಡೋ ಮೊದ್ಲು ಬಿಜೆಪಿ ನಾಯಕರು ಪರಿವರ್ತನೆಯಾಗಲಿ: ಶರಣಪ್ರಕಾಶ್ ಪಾಟೀಲ್

    ಬಾಗಲಕೋಟೆ: ಪರಿವರ್ತನಾ ಯಾತ್ರೆ ಮಾಡುವ ಮೊದಲು ಬಿಜೆಪಿ ನಾಯಕರು ತಮ್ಮ ನಡುವಳಿಕೆ ತಿದ್ದುಕೊಳ್ಳಲಿ. ಅವರ ಆಚಾರ-ವಿಚಾರ ಹಾಗೂ ಸಿದ್ಧಾಂತಗಳಲ್ಲಿ ಪರಿವರ್ತನೆಯಾಗಲಿ. ಆಗ ಮಾತ್ರ ರಾಜ್ಯದ ಜನತೆ ಅವರಿಗೆ ಮನ್ನಣೆ ಕೊಡಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.

    ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಮಾತನಾಡಿದ ಶರಣಪ್ರಕಾಶ್, ಹಿಂದೆ 5 ವರ್ಷದ ಬಿಜೆಪಿ ಅಧಿಕಾರಾವಧಿಯಲ್ಲಿ ಹೇಗೆ ನಡೆದುಕೊಂಡಿದ್ದಾರೆಂದು ರಾಜ್ಯದ ಜನತೆ ನೋಡಿದ್ದಾರೆ. ಹೀಗಾಗಿ ಮೊದಲು ಬಿಜೆಪಿ ಮುಖಂಡರು ಪರಿವರ್ತನೆಯಾಗಲಿ ಎಂದು ವ್ಯಂಗ್ಯವಾಡಿದರು. ಅಲ್ಲದೇ ನಾನು ನೆಗೆಟೀವ್ ಹಾಗೂ ಟೀಕೆ ಮಾಡುವುದರಲ್ಲಿ ನನಗೆ ವಿಶ್ವಾಸವಿಲ್ಲ. ಆದರೆ ಬಿಜೆಪಿಯವರು ಬದಲಾಗಬೇಕು ಎಂದು ಹೇಳಿದ್ರು.

    ರಾಜ್ಯದಲ್ಲಿ ಶೀಘ್ರದಲ್ಲೇ ಮೆಡಿಕಲ್ ಕಾಲೇಜುಗಳು ಕಾರ್ಯಾರಂಭ ಮಾಡಲಿವೆ. ಇದರಿಂದ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟುಗಳು ಸಿಗುತ್ತವೆ. ಅಲ್ಲದೇ ರಾಜ್ಯದ ಜನರಿಗೆ ಗುಣಮಟ್ಟದ ಚಿಕಿತ್ಸೆ ಸಿಗಲು ಸಹಕಾರಿಯಾಗುತ್ತೆ. ರಾಜ್ಯದಲ್ಲಿ ತಜ್ಞ ವೈದ್ಯರ ಕೊರತೆ ಇರೋದು ನಿಜ. ಅದೇ ಉದ್ದೇಶದಿಂದಲೇ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ನಿಗದಿಗಾಗಿ ರೈತರೊಂದಿಗೆ ಉಪಸಮತಿ ಸಭೆ ಕರೆಯಲಾಗಿದೆ ಸಭೆಯಲ್ಲಿ ರೈತರ ಜೊತೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

  • ಸಂಸದ ಪ್ರತಾಪ್ ಸಿಂಹ ಬಂಧನ ವಿಚಾರ- ಸಿಎಂ ಗೆ ಎಚ್ಚರಿಕೆ ನೀಡಿದ ಈಶ್ವರಪ್ಪ

    ಸಂಸದ ಪ್ರತಾಪ್ ಸಿಂಹ ಬಂಧನ ವಿಚಾರ- ಸಿಎಂ ಗೆ ಎಚ್ಚರಿಕೆ ನೀಡಿದ ಈಶ್ವರಪ್ಪ

    ಬಾಗಲಕೋಟೆ: ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗುವ ಸ್ಥಿತಿಗೆ ಬಂದಿದೆ. ಇದೇ ರೀತಿ ಹಿಂದೂ-ಮುಸ್ಲಿಮರಿಗೆ ಧೋರಣೆ ಮುಂದುವರಿಸಿ, ಜಾತಿ-ಜಾತಿಗಳ ಮಧ್ಯೆ ಬೆಂಕಿ ಹಚ್ಚಿದ್ರೆ, ಉತ್ತರ ಪ್ರದೇಶದ ಪರಿಸ್ಥಿತಿಯನ್ನು ರಾಜ್ಯದ ಸಿಎಂ ಸಿದ್ದು ಕಾಣಲಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

    ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಸಂಸದ ಪ್ರತಾಪ್ ಸಿಂಹ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದೂಗಳಿಗೊಂದು, ಮುಸ್ಲಿಮರಿಗೊಂದು ನೀತಿ ಅನುಸರಿಸುತ್ತಿರೋ ಸಿಎಂ ಮುಸ್ಲಿಮರ ಕಾರ್ಯಕ್ರಮಕ್ಕೆ ಪ್ರೇರಣೆ ನೀಡಿ, ಹಿಂದೂಗಳ ಹನುಮ ಹಾಗೂ ದತ್ತ ಜಯಂತಿಗೆ ಅಡ್ಡಿ ಮಾಡ್ತಿರೋದ್ಯಾಕೆ ಎಂದು ಪ್ರಶ್ನೆ ಮಾಡಿದ್ರು. ಸಿಎಂ ಕಾನೂನನ್ನು ಮುರಿಸುವ ಪ್ರಯತ್ನ ಮಾಡ್ತಿದ್ದಾರೆಂದು ಆರೋಪಿಸಿದ್ರು.

    ವೀರಶೈವ ಹಾಗೂ ಲಿಂಗಾಯತರನ್ನು ಬೇರ್ಪಡಿಸಿ, ಸಾಧು ಸಂತರನ್ನ ಬೇರೆ ಮಾಡಿ, ಈ ಸಾಧು ಯಾವ ಜಾತಿ ಎಂದು ಮುಖ ನೋಡಿ ಸ್ವಾಮೀಜಿಗಳಿಗೆ ನಮಸ್ಕಾರ ಮಾಡುವ ಸ್ಥಿತಿಗೆ ಸಿಎಂ ತಂದಿದ್ದಾರೆ. ಮುಖ್ಯಮಂತ್ರಿಯವರು ನಾಡಿನ ಹಿಂದೂಗಳ ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ರು.

    ಇನ್ನು ಯೋಗೀಶ್‍ಗೌಡ ಹತ್ಯೆ ಪ್ರಕರಣದ ತನಿಖೆ ಅನುಮಾನಾಸ್ಪದ ರೀತಿಯಲ್ಲಿ ನಡೆಯುತ್ತಿದೆ. ಕೊಲೆಗಡುಕರನ್ನ ಸಿಎಂ ರಕ್ಷಣೆ ಮಾಡ್ತಿರೋದ್ಯಾಕೆ? ರಾಜ್ಯದ ಜನರ ಮುಂದೆ ಸಿಎಂ ಸತ್ಯ ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ರು. ಗೌರಿ ಲಂಕೇಶ್ ಹತ್ಯೆ ಮಾಡಿರುವವರ ಸುಳಿವಿದ್ದರೂ ಗೃಹ ಸಚಿವರು ಪ್ರಕಟ ಮಾಡ್ತಿಲ್ಲ ಅಂತ ಅವರು ಹೇಳಿದ್ರು.

    ಬಿಜೆಪಿ ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಸಣ್ಣ ಪುಟ್ಟ ಗೊಂದಲಗಳಾಗಿರೋದು ನಿಜ. ಪಕ್ಷ ಬೆಳೆಯುತ್ತಿರೋದ್ರಿಂದ ಅಲ್ಲಲ್ಲಿ ಅಶಿಸ್ತು ಗೊಂದಲಗಳಾಗಿವೆ. ಅವುಗಳನ್ನೆಲ್ಲ ಬಗೆಹರಿಸಿಕೊಂಡು ಮುನ್ನಡೆಯುತ್ತೇವೆ. ಇದು ಪಕ್ಷ ಅಧಿಕಾರಕ್ಕೆ ಬರೋ ಮುನ್ಸೂಚನೆ ಎಂದು ಹೇಳಿದ್ರು.

    ಬಿಎಸ್‍ವೈ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿಸುತ್ತೇವೆ. ಚುನಾವಣೆ ವೇಳೆ ಯಾತ್ರೆ ಮಾಡೋದು ಸಹಜ. ಜೆಡಿಎಸ್ ಹಾಗೂ ಕಾಂಗ್ರೆಸ್‍ನವರೂ ಯಾತ್ರೆ ಮಾಡಲಿ. ಆದ್ರೆ ಹೋದಲ್ಲೆಲ್ಲಾ ಸಿಎಂ ಸಿದ್ದರಾಮಯ್ಯ ಉಡಾಫೆ ಉತ್ತರ ನೀಡ್ತಿದ್ದಾರೆ ಎಂದು ಟೀಕಿಸಿದ್ರು.

    https://www.youtube.com/watch?v=f0lk2O1Ndno

     

  • ಪ್ಲಾಟ್ ಫಾರಂ ಮೇಲೆಯೇ ಮಗುವಿಗೆ ಜನ್ಮ ನೀಡಿದ ತಾಯಿ

    ಪ್ಲಾಟ್ ಫಾರಂ ಮೇಲೆಯೇ ಮಗುವಿಗೆ ಜನ್ಮ ನೀಡಿದ ತಾಯಿ

    ಮುಂಬೈ: ಮಹಿಳೆಯೊಬ್ಬರು ಸೋಮವಾರ ರಾತ್ರಿ ನಗರದ ದಾದರ್ ರೈಲ್ವೆ ನಿಲ್ದಾಣದ ಪ್ಲಾಟ್‍ಫಾರಂ ಮೇಲೆಯೇ ಮಗುವಿಗೆ ಜನ್ಮ ನೀಡಿದ್ದಾರೆ.

    26 ವರ್ಷದ ಸಲ್ಮಾ ಶೇಖ್ ಮಗುವಿಗೆ ಜನ್ಮ ನೀಡಿದ ತಾಯಿ. ರೈಲು ಸಿಎಸ್‍ಟಿ ರೈಲ್ವೆ ನಿಲ್ದಾಣದಿಂದ ದಾದರ್ ಮಾರ್ಗವಾಗಿ ಕಲ್ಯಾಣ್ ಗೆ ತೆರಳುತ್ತಿತ್ತು. ರೈಲು ದಾದರ್ ನಿಲ್ದಾಣದ ಮೂರನೇ ಪ್ಲಾಟ್‍ಫಾರಂ ಗೆ ಆಗಮಿಸಿದಾಗ ಸಲ್ಮಾ ಅವರು ಮಗುವಿಗೆ ಜನ್ಮ ನೀಡಿದ್ದಾರೆ.

    ಕೂಡಲೇ ಮಗು ಮತ್ತು ತಾಯಿಯನ್ನು ಸಮೀಪದ ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಸಲ್ಮಾ ಅವರನ್ನು ಮೊದಲಿಗೆ ನಿಲ್ದಾಣದಲ್ಲಿರುವ `ಒನ್ ರೂಪಿ ಕ್ಲಿನಿಕ್’ಗೆ ದಾಖಲಿಸಲಾಗಿತ್ತು. ಈ ಕ್ಲಿನಿಕ್ ನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ತುರ್ತು ಸಂದರ್ಭಕ್ಕಾಗಿ ರೈಲ್ವೆ ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿದೆ.

  • ಕಾರವಾರದಲ್ಲಿ ಹಳಿತಪ್ಪಿತ್ತು ರೇಷನ್ ಹೊತ್ತ ಗೂಡ್ಸ್ ರೈಲು

    ಕಾರವಾರದಲ್ಲಿ ಹಳಿತಪ್ಪಿತ್ತು ರೇಷನ್ ಹೊತ್ತ ಗೂಡ್ಸ್ ರೈಲು

    ಕಾರವಾರ: ಆಂಧ್ರದಿಂದ ಕಾರವಾರಕ್ಕೆ ರೇಷನ್ ತರುತಿದ್ದ ಗೂಡ್ಸ್ ರೈಲೊಂದು ನಿಲ್ದಾಣದ ವಾಕ್ ಪಾತ್ ಗೆ ಡಿಕ್ಕಿ ಹೊಡೆದು ಹಳಿತಪ್ಪಿ ನೆಲಕ್ಕೆ ಕುಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ರೈಲ್ವೇ ನಿಲ್ದಾಣದಲ್ಲಿ ನೆಡೆದಿದೆ.

    ಮಂಗಳವಾರ ಮಧ್ಯರಾತ್ರಿ ವೇಳೆ ಆಂಧ್ರದಿಂದ ಕಾರವಾರ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದ ಗೂಡ್ಸ್ ರೈಲು ನಿಲ್ದಾಣದಲ್ಲಿ ನಿಲ್ಲಿಸುವ ವೇಳೆ ಈ ಘಟನೆ ನೆಡೆದಿದೆ. ಅಪಘಾತದಿಂದ ನಿಲ್ದಾಣದ ವಾಕ್ ಪಾತ್ ಸಂಪೂರ್ಣ ಹಾಳಾಗಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಬೊಗಿ ಹಳಿತಪ್ಪಿ ನೆಲಕ್ಕೆ ಕುಸಿದಿದೆ.

    ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.

  • 6 ತಿಂಗಳ ಮಗುವನ್ನ ರೈಲಿನಲ್ಲಿ ಬಿಟ್ಟು ಹೋದ ತಾಯಿ

    6 ತಿಂಗಳ ಮಗುವನ್ನ ರೈಲಿನಲ್ಲಿ ಬಿಟ್ಟು ಹೋದ ತಾಯಿ

    ಯಾದಗಿರಿ: ತಾಯಿಯೊಬ್ಬಳು ತನ್ನ ಆರು ತಿಂಗಳ ಗಂಡು ಮಗುವನ್ನು ರೈಲಿನಲ್ಲಿಯೇ ಬಿಟ್ಟುಹೋಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಗುಂತಕಲ್-ಗುಲ್ಬರ್ಗಾ ಪ್ಯಾಸೆಂಜರ್ ರೈಲಿನಲ್ಲಿ ಮಗು ಪತ್ತೆಯಾಗಿದೆ. ಮಗು ಅನಾಥವಾಗಿರುವುದು ಯಾದಗಿರಿ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಮಗುವಿನ ಜೊತೆ ಒಂದು ಬ್ಯಾಗ್ ಸಹ ಸಿಕ್ಕಿದೆ. ಬ್ಯಾಗ್‍ನಲ್ಲಿ ರಾಯಚೂರುನಿಂದ ಯಾದಗಿರಿ ವರೆಗಿನ ರೈಲ್ವೆ ಟಿಕೆಟ್, ತಾಯಿಯ ಫೋಟೋ ಮತ್ತು ಒಂದು ಮೊಬೈಲ್ ಪತ್ತೆಯಾಗಿದೆ.

    ಪ್ರಯಾಣಿಕರ ಸಹಾಯದಿಂದ ಮಗುವನ್ನು ಗುಲ್ಬರ್ಗಾ ರೈಲು ನಿಲ್ದಾಣಕ್ಕೆ ತಲುಪಿಸಲಾಗಿದೆ. ಮಗುವನ್ನು ವಶಕ್ಕೆ ಪಡೆದ ಆರ್‍ಪಿಎಫ್ ಪೊಲೀಸರು ಮಕ್ಕಳ ಸಂರಕ್ಷಣ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ. ಪೊಲೀಸರು ತಾಯಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ. ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

     

  • 8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ ಮೋದಿ ಟೀ ಮಾರಿದ್ದ  ರೈಲು ನಿಲ್ದಾಣ

    8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ ಮೋದಿ ಟೀ ಮಾರಿದ್ದ ರೈಲು ನಿಲ್ದಾಣ

    ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಬಾಲ್ಯದಲ್ಲಿ ಚಹಾ ಮಾರಾಟ ಮಾಡಿದ್ದ ರೈಲು ನಿಲ್ದಾಣ 8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ.

    ಉತ್ತರ ಗುಜರಾತಿನ ಮೆಹಸಾನ ಜಿಲ್ಲೆಯಲ್ಲಿರುವ ವಡ್‍ನಗರ ರೈಲು ನಿಲ್ದಾಣದ ಅಭಿವೃದ್ಧಿಗೆ 8 ಕೋಟಿ ರೂ. ಹಣವನ್ನು ಮಂಜೂರು ಮಾಡಲಾಗಿದೆ ಎಂದು ರೈಲ್ವೆ ರಾಜ್ಯ ಸಚಿವ ಮನೋಜ್ ಸಿನ್ಹಾ ತಿಳಿಸಿದ್ದಾರೆ.

    ಅಹಮದಾಬಾದ್‍ನಲ್ಲಿರುವ ರೈಲ್ವೇ ವಿಭಾಗೀಯ ವ್ಯವಸ್ಥಾಪಕ ದಿನೇಶ್ ಕುಮಾರ್ ಮಾತನಾಡಿ, ಪ್ರವಾಸೋದ್ಯಮ ಸಚಿವಾಲಯ ವಡ್‍ನಗರ ನಿಲ್ದಾಣದ ಅಭಿವೃದ್ಧಿಗೆ 8 ಕೋಟಿ ರೂ. ಅನುದಾನ ನೀಡಿದೆ. ರಾಜ್ಯ ಪ್ರವಾಸೋದ್ಯಮ ಸಚಿವಾಲಯ ವಡ್‍ನಗರ- ಪಟನಾ ನಡುವೆ ಟೂರಿಸ್ಟ್ ಸರ್ಕ್ಯೂಟ್ ನಿರ್ಮಿಸಲು 100 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಂಡಿದೆ. ಈ ವರ್ಷದ ಒಳಗಡೆ ಈ ನಿಲ್ದಾಣ ಅಭಿವೃದ್ಧಿಯಾಗಲಿದೆ ಎಂದು ಅವರು ತಿಳಿಸಿದರು.

    ಕಳೆದ ವರ್ಷ ಮೋದಿ ಸರ್ಕಾರ ಜೈನರ ಪವಿತ್ರ ಸ್ಥಳ ತರಂಗ ಬೆಟ್ಟ ಮತ್ತು ಮೆಹಸಾನ ನಡುವಿನ 57.4 ಕಿ.ಮೀ ಉದ್ದದ ಮಾರ್ಗ ಬ್ರಾಡ್ ಗೇಜ್ ಹಳಿ ಪರಿವರ್ತನೆಗೆ 414 ಕೋಟಿ ರೂ. ನೀಡಲು ಅನುಮೋದನೆ ನೀಡಿತ್ತು.

    ಕೂಡಾ ವಡ್‍ನಗರ ಮೋದಿ ಅವರ ಹುಟ್ಟೂರು ಆಗಿದ್ದು, ಬಾಲ್ಯದಲ್ಲಿ ತಮ್ಮ ತಂದೆಯೊಂದಿಗೆ ಈ ರೈಲು ನಿಲ್ದಾಣದಲ್ಲಿ ಟೀ ಮಾರುತ್ತಿದ್ದರು. 2014ರ ಲೋಕಸಭಾ ಚುನಾವಣೆ ವೇಳೆ ಮೋದಿ ಅವರು ತಮ್ಮ ತಂದೆ ಜೊತೆಗೆ ಇಲ್ಲಿ ಟೀ ಮಾರಾಟ ಮಾಡುವ ವಿಚಾರವನ್ನು ಹೇಳಿಕೊಂಡಿದ್ದರು.