Tag: ರೇಂಜ್ ರೋವರ್ ಕಾರು

  • ಹೊಸ ಐಷಾರಾಮಿ ಕಾರು ಖರೀದಿಸಿದ ‘ಕೆಜಿಎಫ್’ ಸ್ಟಾರ್ ಯಶ್

    ಹೊಸ ಐಷಾರಾಮಿ ಕಾರು ಖರೀದಿಸಿದ ‘ಕೆಜಿಎಫ್’ ಸ್ಟಾರ್ ಯಶ್

    ಕೆಜಿಎಫ್, ಕೆಜಿಎಫ್ 2 (KGF 2) ಸಿನಿಮಾ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಕನ್ನಡದ ಸಿನಿಮಾಗಳಿಗೆ ಸೀಮಿತವಾಗದೇ ದೇಶದ ಎಲ್ಲೆಡೆ ಸಂಚಲನ ಮೂಡಿಸಿದ್ದಾರೆ. ಇದೀಗ ಯಶ್ (Yash) ಮನೆಗೆ ಹೊಸ ಕಾರು ಎಂಟ್ರಿ ಕೊಟ್ಟಿದೆ. ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಸಿನಿಮಾದ ಸಕ್ಸಸ್ ಬಳಿಕ ಐಷಾರಾಮಿ ಕಾರೊಂದನ್ನ ಖರೀದಿಸಿದ್ದಾರೆ.

    ನ್ಯಾಷನಲ್ ಸ್ಟಾರ್ ಯಶ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಕಪ್ಪು ಬಣ್ಣದ ರೇಂಜ್ ರೋವರ್ (Range Rover Car) ಸ್ಪೆಷಲ್ ಎಡಿಷನ್ ಕಾರನ್ನ ಕೊಂಡುಕೊಂಡಿದ್ದಾರೆ. ಈ ಮೂಲಕ ಯಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

    ಪೂಜೆಯ ಬಳಿಕ ಪತ್ನಿ ರಾಧಿಕಾ (Radhika Pandit) ಮತ್ತು ಮಕ್ಕಳ ಜೊತೆ ಕಾರಿನಲ್ಲಿ ಯಶ್ ಸುತ್ತಾಡಿದ್ದಾರೆ. ಬಳಿಕ ಮಕ್ಕಳೊಂದಿಗೆ ಕಾರಿನ ಜೊತೆ ಯಶ್ ದಂಪತಿ ಪೋಸ್ ನೀಡಿದ್ದಾರೆ. ಯಶ್ ಬ್ರೌನ್ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಟೀ ಶರ್ಟ್ ಧರಿಸಿದ್ದರೆ, ನಟಿ ರಾಧಿಕಾ ಲೈಟ್ ಬಣ್ಣದ ಟಾಪ್ ಧರಿಸಿದ್ದಾರೆ.

    ರಾಕಿಭಾಯ್ ಖರೀದಿಸಿರುವ ಕಾರು ರೇಂಜ್ ರೋವರ್‌ಗೆ 5 ಕೋಟಿ ರೂ. ಬೆಲೆಯದಾಗಿದೆ. ಎಲ್ಲಾ ಸೌಕರ್ಯಗಳಿರುವ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ದುಬಾರಿ ಕಾರಿನ ಜೊತೆಯಿರುವ ಯಶ್ ದಂಪತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಈ ವಿಚಾರಕ್ಕೆ ನಟನೆಗೆ ಗುಡ್ ಬೈ ಹೇಳ್ತಾರಾ ‌’ಮಗಧೀರ’ ನಟಿ ಕಾಜಲ್?‌

    ಇನ್ನೂ ಯಶ್ ನಟನೆಯ ಮುಂದಿನ ಸಿನಿಮಾ ಬಗ್ಗೆ ಯಾವುದು ಅಪ್‌ಡೇಟ್ ಸಿಗದೇ ಫ್ಯಾನ್ಸ್ ಕಂಗಲಾಗಿದ್ದಾರೆ. ರಾಕಿ ಭಾಯ್ 19ನೇ ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಸ್ವತಃ ಯಶ್ ಅನೌನ್ಸ್ ಮಾಡುವವರೆಗೂ ಕಾದುನೋಡಬೇಕಿದೆ.

  • ಲಂಡನ್‍ಗೆ ಕಾರಲ್ಲೇ ಟೂರ್ ಹೊರಟ ಧಾರವಾಡ ಶಾಸಕ!

    ಲಂಡನ್‍ಗೆ ಕಾರಲ್ಲೇ ಟೂರ್ ಹೊರಟ ಧಾರವಾಡ ಶಾಸಕ!

    ಧಾರವಾಡ: ರಾಜ್ಯದಲ್ಲಿ ಈ ಬಾರಿ ಭೀಕರ ಬರಗಾಲ. ಅದೇ ರೀತಿ ಧಾರವಾಡ ಜಿಲ್ಲೆಗೂ ಅದು ಹೊರತಾಗಿಲ್ಲ. ಆದ್ರೆ ಈ ಮಧ್ಯೆ ನಮ್ಮ ಜನಪ್ರತಿನಿಧಿಗಳು ಜನರ ಸೇವೆ ಮಾಡುವುದನ್ನ ಬಿಟ್ಟು ಪ್ರವಾಸಕ್ಕೆ ಹೊರಟಿದ್ದಾರೆ.


    ಹೌದು. ಜಿಲ್ಲೆಯ ಶಾಸಕ ಅರವಿಂದ ಬೆಲ್ಲದ್ ತಮ್ಮ ಕ್ಷೇತ್ರದ ಬಗ್ಗೆ ವಿಚಾರ ಮಾಡೊದನ್ನ ಬಿಟ್ಟು ಯುರೋಪ್ ಪ್ರವಾಸಕ್ಕೆ ಹೋಗಿದ್ದಾರೆ. ಇದೀಗ ಜನರ ಕೆಂಗಣ್ಣಿಗೂ ಗುರಿಯಾಗುವಂತೆ ಆಗಿದೆ. ಆದ್ರೆ ಅರವಿಂದ್ ಬೆಲ್ಲದ್ ಪುತ್ರ ವಿದೇಶದಲ್ಲಿ ಓದುತ್ತಿದ್ದು ಅವರ ಫೀಸ್ ಕಟ್ಟಲು ಹೋಗಿದ್ದಾರೆ ಎನ್ನಲಾಗಿದೆ.

    ಶಾಸಕರು ತಮ್ಮ ರೆಂಜ್ ರೋವರ್ ಕಾರಿನಲ್ಲಿ ಧಾರವಾಡದ ಶಾಲ್ಮಲಾ ನದಿ ತೀರದಿಂದ ಥೇಮ್ಸ್ ನದಿವರೆಗೆ 40 ದಿನದ ಲಂಡನ್ ಟೂರ್ ಆರಂಭಿಸಿದ್ದಾರೆ. ಬರ ಪರಿಸ್ಥಿತಿಯಲ್ಲಿ ಜನರ ಸಮಸ್ಯೆ ಕೇಳಿ ಅಂತಾ ಪ್ರಧಾನಿ ಮೋದಿ ಹೇಳಿದ್ರೆ, ಅವರದೇ ಪಕ್ಷದ ಶಾಸಕರೊಬ್ಬರು ಜಾಮ್‍ಜೂಮ್ ಅಂತಾ ಟೂರ್ ಮಾಡ್ತಿದ್ದಾರೆ. ಇವರು ಇಲ್ಲಿವರೆಗೂ ಸುಮಾರು 130 ಕ್ಕೂ ಹೆಚ್ಚು ಬಾರಿ ವ್ಯವಹಾರ ಉದ್ದೇಶದಿಂದ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಅಂತ ಜೆಡಿಎಸ್ ಮುಖಂಡ ಗುರುರಾಜ್ ಹುಣಶಿಮರದ ಆರೋಪಿಸಿದ್ದಾರೆ.

    ಧಾರವಾಡ ಪಶ್ಚಿಮದಿಂದ ಆರಿಸಿ ಬಂದ ಇವರು ಹುಬ್ಬಳ್ಳಿಯಲ್ಲಿ ವಾಸ ಮಾಡಿಕೊಂಡು ಜನರ ಕಷ್ಟ ಕೇಳೋದನ್ನೇ ಮರೆತಿದ್ದಾರೆ ಅಂತಾ ಜನ ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಈ ರೀತಿ ಪ್ರವಾಸ ಮಾಡ್ತಿರೋದು ನಿಜಕ್ಕೂ ವಿಷಾದನೀಯ.