Tag: ರೆಸ್ಟೊರೆಂಟ್

  • ಅಫ್ಘಾನಿಸ್ತಾನದಲ್ಲಿ ಉದ್ಯಾನವನ, ರೆಸ್ಟೊರೆಂಟ್‌ಗಳಿಗೆ ಕುಟುಂಬ, ಮಹಿಳೆಯರೊಂದಿಗೆ ಹೋಗೋದು ಬ್ಯಾನ್

    ಅಫ್ಘಾನಿಸ್ತಾನದಲ್ಲಿ ಉದ್ಯಾನವನ, ರೆಸ್ಟೊರೆಂಟ್‌ಗಳಿಗೆ ಕುಟುಂಬ, ಮಹಿಳೆಯರೊಂದಿಗೆ ಹೋಗೋದು ಬ್ಯಾನ್

    ಕಾಬೂಲ್: ಅಫ್ಘಾನಿಸ್ತಾನದ (Afghanistan) ಹೆರಾತ್ (Herat) ಪ್ರಾಂತ್ಯದಲ್ಲಿ ಉದ್ಯಾನವನಗಳು (Gardens) ಹಾಗೂ ರೆಸ್ಟೊರೆಂಟ್‌ಗಳಿಗೆ (Restaurant) ಕುಟುಂಬ (Family) ಹಾಗೂ ಮಹಿಳೆಯರು (Women) ಹೋಗುವುದನ್ನು ತಾಲಿಬಾನ್ (Taliban) ನಿಷೇಧಿಸಿದೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ತಾಲಿಬಾನ್ ಮುಖ್ಯವಾಗಿ ಮಹಿಳೆಯರ ಮೇಲೆ ಹಿಡಿತ ಸಾಧಿಸುವುದನ್ನು ಮುಂದುವರಿಸುತ್ತಲೇ ಇದೆ. ಈ ಹಿಂದೆ ಪಾರ್ಕ್, ಜಿಮ್, ವಿಶ್ವವಿದ್ಯಾಲಯಗಳಿಗೆ ಮಹಿಳೆಯರು ಹೋಗುವುದನ್ನು ನಿಷೇಧಿಸಿದ ತಾಲಿಬಾನ್ ಇದೀಗ ಕುಟುಂಬದೊಂದಿಗೂ ಉದ್ಯಾನವನ ಹಾಗೂ ರೆಸ್ಟೊರೆಂಟ್‌ಗಳಿಗೆ ಹೋಗುವುದನ್ನು ನಿಷೇಧಿಸಿದೆ.

    ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರದೇಶದಲ್ಲಿ ತಾಲಿಬಾನ್ ಲಿಂಗ ಪ್ರತ್ಯೇಕತೆಯ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಈಗ ಪುರುಷರು ಫ್ಯಾಮಿಲಿ ರೆಸ್ಟೊರೆಂಟ್‌ಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಊಟ ಮಾಡುವಂತಿಲ್ಲ. ಮಾತ್ರವಲ್ಲದೇ ಪುರುಷರು ಹಾಗೂ ಮಹಿಳೆಯರು ಒಟ್ಟಿಗೆ ಉದ್ಯಾನವನಕ್ಕೂ ಹೋಗುವಂತಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಮುಸ್ಲಿಮರು ಭಾರತದಲ್ಲಿ ಚೆನ್ನಾಗೇ ಇದ್ದಾರೆ: ಪಾಶ್ಚಿಮಾತ್ಯ ದೇಶಗಳ ವಿರುದ್ಧ ಸೀತಾರಾಮನ್ ಕಿಡಿ

    ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರು ಹಿಜಬ್ ಅನ್ನು ಸರಿಯಾಗಿ ಧರಿಸದ ಕಾರಣ ಹಾಗೂ ಇಂತಹ ಪ್ರದೇಶಗಳಲ್ಲಿ ಲಿಂಗ ಮಿಶ್ರಣದ ಕಾರಣದಿಂದಾಗಿ ಈ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೆಸ್ಟೊರೆಂಟ್‌ಗಳಲ್ಲಿ ಊಟಕ್ಕೆ ನಿಷೇಧ ಹೆರಾತ್ ಪ್ರದೇಶದಲ್ಲಿ ಮಾತ್ರವೇ ಅನ್ವಯಿಸುತ್ತದೆ. ಇಂತಹ ಆವರಣಗಳು ಪರುಷರಿಗೆ ತೆರೆದಿರುತ್ತದೆ ಎಂದು ವರದಿಗಳು ತಿಳಿಸಿವೆ.

    ಈ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಪುರುಷರು ಹಾಗೂ ಮಹಿಳೆಯರು ವಿವಿಧ ದಿನಗಳಲ್ಲಿ ಉದ್ಯಾನವನಕ್ಕೆ ಭೇಟಿ ನೀಡಬಹುದು ಎಂದು ತಿಳಿಸಿತ್ತು. ಇದರ ಪ್ರಕಾರ ಗುರುವಾರ, ಶುಕ್ರವಾರ ಮತ್ತು ಶನಿವಾರ ಉದ್ಯಾನವನಗಳಲ್ಲಿ ಮಹಿಳೆಯರಿಗೆ ಹೋಗಲು ಅವಕಾಶವಿದ್ದು, ಭಾನುವಾರ, ಸೋಮವಾರ, ಮಂಗಳವಾರ ಹಾಗೂ ಬುಧವಾರ ಪುರುಷರಿಗೆ ಮಾತ್ರವೇ ತೆರೆಯಲಾಗುತ್ತದೆ ಎಂದು ತಿಳಿಸಲಾಗಿತ್ತು. ಇದನ್ನೂ ಓದಿ: ಉದ್ಯೋಗಿಯಿಂದಲೇ ಬ್ಯಾಂಕ್‌ನಲ್ಲಿ ಗುಂಡಿನ ದಾಳಿ – 5 ಮಂದಿ ಸಾವು, 9 ಮಂದಿಗೆ ಗಾಯ

  • ರೆಸ್ಟೋರೆಂಟ್‍ನಲ್ಲಿದ್ದ  ಯುವತಿಯರನ್ನು ಧರಧರನೇ ಎಳೆದು ಹಲ್ಲೆ ನಡೆಸಿದ ಗ್ಯಾಂಗ್

    ರೆಸ್ಟೋರೆಂಟ್‍ನಲ್ಲಿದ್ದ ಯುವತಿಯರನ್ನು ಧರಧರನೇ ಎಳೆದು ಹಲ್ಲೆ ನಡೆಸಿದ ಗ್ಯಾಂಗ್

    ಬೀಜಿಂಗ್: ಚೀನಾದ ರೆಸ್ಟೋರೆಂಟ್‍ವೊಂದರಲ್ಲಿ ತಮ್ಮ ಪಾಡಿಗೆ ತಾವು ಊಟ ಮಾಡುತ್ತಿದ್ದ ಯುವತಿಯರ ಗುಂಪಿನ ಮೇಲೆ ಏಕಾಏಕಿ ದಾಳಿ ನಡೆಸಿದ ಒಂಬತ್ತು ಮಂದಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

    ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ನಂತರ ವಿರೋಧಿಸಿದ ಯುವತಿಯರ ಮೇಲೆ ದಾಳಿ ಮಾಡಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಯುವತಿಯರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚರಂಡಿ ವಿಷಯಕ್ಕೆ ಜಗಳ – ಯುವಕನ ಕೊಲೆ, 6 ಜನರ ಸ್ಥಿತಿ ಗಂಭೀರ

    ಉತ್ತರ ಚೀನಾದ ಹುಬೆ ಪ್ರಾಂತ್ಯದ ಬಾರ್ಬೆಕ್ಯೂ ರೆಸ್ಟೋರೆಂಟ್‍ನಲ್ಲಿ ಇಬ್ಬರು ಸ್ನೇಹಿತೆಯರೊಂದಿಗೆ ಯುವತಿ ಊಟವನ್ನು ಹಂಚಿಕೊಂಡು ತಿನ್ನುತ್ತಿದ್ದಾಗ ವ್ಯಕ್ತಿಯೋರ್ವ ಆಕೆಯ ಬೆನ್ನ ಮೇಲೆ ಕೈ ಹಾಕುತ್ತಾನೆ. ಇದನ್ನು ನಿರಾಕರಿಸಿದ ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಕೆಳಗೆ ಬಿದ್ದ ಯುವತಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ನಂತರ ಆಕೆಯನ್ನು ಬಿಡಿಸಿಕೊಳ್ಳಲು ಬಂದ ಮತ್ತೋರ್ವ ಯುವತಿಗೆ ಇನ್ನೊಬ್ಬ ವ್ಯಕ್ತಿ ಹೊಡೆದಿದ್ದಾನೆ. ನಂತರ ಇಬ್ಬರನ್ನು ರೆಸ್ಟೋರೆಂಟ್‌ನಿಂದ ಧರಧರನೇ ಹೊರಗೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ.

    ಇದೀಗ ಈ ಕೃತ್ಯವನ್ನು ಎಸಗಿದ 9 ಮಂದಿಯನ್ನು ಬಂಧಿಸಲಾಗಿದ್ದು, ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಟಾಂಗ್ಶಾನ್ ನಗರದ ಪೊಲೀಸರು ತಿಳಿಸಿದ್ದಾರೆ. ಇದೀಗ ಹಲ್ಲೆಗೊಳಗಾದ ಯುವತಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ಯಾವುದೇ ಪ್ರಾಣಾಪಾಯವಿಲ್ಲ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸರಣಿ ಅಪಘಾತ: ಬಿಎಂಟಿಸಿ, ಟೆಂಪೋ ನಡುವೆ ಸಿಲುಕಿದ ಆಟೋ 

  • ಹೊಸ ಉದ್ಯಮದತ್ತ ಮುಖ ಮಾಡಿದ ಪ್ರಿಯಾಂಕಾ ಚೋಪ್ರಾ

    ಹೊಸ ಉದ್ಯಮದತ್ತ ಮುಖ ಮಾಡಿದ ಪ್ರಿಯಾಂಕಾ ಚೋಪ್ರಾ

    ಮುಂಬೈ: ಬಾಲಿವುಡ್‍ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ನಟನೆಯೊಂದಿಗೆ ಇದೀಗ ಹೋಟೆಲ್ ಉದ್ಯಮದತ್ತ ಮುಖ ಮಾಡಿದ್ದಾರೆ. ಪ್ರಿಯಾಂಕಾ ಸೋನಾ ಎಂಬ ನಾಮಂಕಿತ ರೆಸ್ಟೊರೆಂಟ್ ಒಂದನ್ನು ಅಮೆರಿಕಾದಲ್ಲಿ ತೆರೆಯಲು ತಯಾರಿ ನಡೆಸಿದ್ದಾರೆ.

    ಪ್ರಿಯಾಂಕ 2019ರಲ್ಲಿ ತನ್ನ ಪತಿ ಸಿಂಗರ್ ನಿಕ್ ಜೋನಸ್ ಹಾಗೂ ತಾಯಿ ಮಧು ಚೋಪ್ರಾ ಜೊತೆಗೆ ರೆಸ್ಟೊರೆಂಟ್ ಪೂರ್ವ ತಯಾರಿಯ ಭೂಮಿ ಪೂಜೆಯ ಫೋಟೋವನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಇನ್ನು ಕೆಲವೇ ದಿನಗಳಲ್ಲಿ ಸೋನಾ ಎಂಬ ಹೆಸರಿನ ರೆಸ್ಟೊರೆಂಟ್ ಶುಭಾರಂಭಗೊಳ್ಳಲಿದೆ ಎಂದು ಬರೆದುಕೊಂಡಿದ್ದಾರೆ.

    ಅಮೆರಿಕಾದಲ್ಲಿ ಭಾರತೀಯ ಮಾದರಿಯ ಅಡುಗೆ ತಯಾರಿಸಲು ರೆಸ್ಟೊರೆಂಟ್ ನಲ್ಲಿ ಪ್ರಸಿದ್ಧ ಶೆಫ್ ಹರಿ ನಾಯಕ್ ಅವರನ್ನು ಹೆಡ್ ಶೆಫ್ ಆಗಿ ನೇಮಿಸಿಕೊಳ್ಳಲಾಗಿದೆ. ಭಾರತದ ಖಾದ್ಯಗಳನ್ನು ಇಲ್ಲಿ ತಯಾರಿಸಿ ಇಲ್ಲಿನ ಜನರಿಗೆ ಉಣಬಡಿಸಲು ನಾವು ತಯಾರಾಗಿದ್ದೇವೆ. ಹೊಸ ಮಾದರಿಯ ರುಚಿ ಹಾಗೂ ಸ್ವಾದಭರಿತ ನೂತನ ಮೆನು ಕಾರ್ಡ್‍ನ್ನು ನಮ್ಮ ಪ್ರಸಿದ್ಧ ಶೆಫ್ ಹರಿ ನಾಯಕ್ ಅವರು ತಯಾರಿಸಲಿದ್ದಾರೆ ಎಂದು ವಿವರಿಸಿದ್ದಾರೆ.

    ಸೋನಾವನ್ನು ತೆರೆಯಲು ನಾನು ಕಾತರಳಾಗಿದ್ದು ಈ ರೆಸ್ಟೊರೆಂಟ್ ಸಿದ್ಧಗೊಳ್ಳಲು ನನ್ನ ಉತ್ತಮ ಸ್ನೇಹಿತರಾದ ಮನೀಶ್ ಗೋಯಲ್ ಮತ್ತು ಡೇವಿಡ್ ರಾಬಿನ್ ಅವರ ನಾಯಕತ್ವ ಮುಖ್ಯವಾಗಿತ್ತು ಅವರಿಗೆ ಕೃತಜ್ಞತೆಗಳು ಎಂದಿದ್ದಾರೆ.

    ಈ ಹಿಂದೆ ಪ್ರಿಯಾಂಕಾ ಕೊದಲು ಆರೈಕೆ ಗಾಗಿ ಆ್ಯನೋಮಲಿ ಎಂಬ ಬ್ರ್ಯಾಂಡ್ ನ್ನು ಬಿಡುಗಡೆಗೊಳಿಸಿದ್ದರು. ಇದೀಗ ಹೋಟೆಲ್ ಉದ್ಯಮದತ್ತ ಕಣ್ಣಾಯಿಸುತ್ತಿದ್ದಾರೆ.

  • ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

    ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

    ಬೆಂಗಳೂರು: ಇದು ರೌಡಿ ನಲಪಾಡ್ ರಾಕ್ಷಸತ್ವದ ಘೋರ ಕಥನ. ವಿದ್ವತ್ ಮೇಲೆ ಯಾವ್ಯಾವ ರೀತಿ ದಾಳಿ ನಡೆಯಿತು, ಆಸ್ಪತ್ರೆಯಲ್ಲೂ ನಲಪಾಡ್ ಗ್ಯಾಂಗ್ ಅಬ್ಬರಿಸಿದ್ದು ಹೇಗೆ ಹಾಗೂ ನಲಪಾಡ್ ದಾಳಿಯ ಬಗ್ಗೆ ವಿದ್ವತ್ ಪಬ್ಲಿಕ್ ಟಿವಿಗೆ ತಿಳಿಸಿದ ಎಕ್ಸ್ ಕ್ಲೂಸೀವ್ ಮಾತು ಇಲ್ಲಿದೆ. ಇದನ್ನೂ ಓದಿ: Exclusive ಹ್ಯಾರಿಸ್ ಮಗನ ಮತ್ತೊಂದು ಕರ್ಮಕಾಂಡ ಬಿಚ್ಚಿಟ್ಟ ಮಹಿಳೆ

    ಫರ್ಜಿ ಕೆಫೆಯಲ್ಲಿ ಕಾಲು ಚಾಚಿಕೊಂಡು ಕುಳಿತಿದ್ದಕ್ಕೆ ಕ್ಷಮೆ ಕೋರುವಂತೆ ಹೇಳಿದರು. ತಪ್ಪಿಲ್ಲದ ಕಾರಣಕ್ಕೆ ನಾನು ಆರಂಭದಲ್ಲಿ ನಲಪಾಡ್ ಮಾತು ಕೇಳಲಿಲ್ಲ. ಎಂಎಲ್‍ಎ ಹ್ಯಾರಿಸ್ ಮಗನಿಗೇ ಎದುರು ಮಾತನಾಡುತ್ತೀಯಾ ಎನ್ನುತ್ತಾ ಅಬ್ಬರಿಸಿದ್ರು. ಏಕಾಏಕಿ ಹೊಡೆಯಲು ಶುರು ಮಾಡಿದ್ದರಿಂದ sorry.. sorry.. ಎಂದೆ. ಆದರೆ sorry ಎಂದರೂ ಕೂಡ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದರು. ನಲಪಾಡ್ ಜತೆ ಸುಮಾರು 15 ಸ್ನೇಹಿತರು ಇದ್ದರು. ಅವರಲ್ಲಿ ಆರೇಳು ಮಂದಿ ಬೌನ್ಸರ್‍ಗಳು. ಎಲ್ಲರೂ ಸೇರಿಕೊಂಡು ಮನಸೋ ಇಚ್ಛೆ ಹೊಡೆದರು. ಮೈಮೇಲೆ ಕುರ್ಚಿಗಳನ್ನು ಎಸೆದರು, `ಕ್ಷಮೆ ಕೇಳು’ ಎಂದರು. ಕ್ಷಮೆ ಯಾಚಿಸಿದರೂ ಹೊಡೆದರು ಎಂದು ವಿದ್ವತ್ ಹೇಳಿದ್ದಾರೆ. ಇದನ್ನೂ ಓದಿ: ನಲಪಾಡ್ ಬಳಿ ಇವೆ ಪೊಲೀಸರು, ಮಿಲಿಟರಿಯವರು ಬಳಸೋ ಬೋರ್ ಗನ್!

    ನಲಪಾಡ್ ಗ್ಯಾಂಗ್ ಫರ್ಜಿ ಕೆಫೆಯಲ್ಲಿ ಮಾತ್ರ ಅಬ್ಬರಿಸಿರಲಿಲ್ಲ. ಚಿಕಿತ್ಸೆಗಾಗಿ ಮಲ್ಯಾ ಆಸ್ಪತ್ರೆಗೆ ದಾಖಲಾದ್ರೂ ಬಿಟ್ಟಿರಲಿಲ್ಲ ಆ ಗ್ಯಾಂಗ್. ವಿದ್ವತ್‍ಗೆ ನರ್ಸ್‍ವೊಬ್ಬರು ಪ್ರಾಥಮಿಕ ಚಿಕಿತ್ಸೆ ನೀಡುವ ವೇಳೆ ಗ್ಯಾಂಗ್ ಆಸ್ಪತ್ರೆಗೆ ನುಗ್ಗಿತ್ತು. ಎರಡು ಕಾರುಗಳಲ್ಲಿ ಆಸ್ಪತ್ರೆಗೆ ನುಗ್ಗಿದ ರೌಡಿ ನಲಪಾಡ್ ಹಾಗೂ ಸಹಚರರು, ಆಸ್ಪತ್ರೆ ಕೊಠಡಿಯ ಬಾಗಿಲು ಒದ್ದುಕೊಂಡೇ ಒಳನುಗ್ಗಿ ಪುನಃ ವಿದ್ವತ್ ಮೇಲೆ ಹಲ್ಲೆಗೆ ಯತ್ನ ನಡೆಸಿದ್ರು. ಇದನ್ನೂ ಓದಿ: ಶಾಂತಿನಗರದಲ್ಲಿ ರೌಡಿ ನಲಪಾಡ್ ಹೇಳಿದ್ದೇ ಶಾಸನವಂತೆ..!

    ರಕ್ಷಣೆಗೆ ಹೋದ ವಿದ್ವತ್ ಸೋದರನ ಮೇಲೂ ನಲಪಾಡ್ ಹಲ್ಲೆ ನಡೆಸಿ, ಕೊರಳಪಟ್ಟಿ ಹರಿದಿದ್ದ. ಈ ವೇಳೆ ಗುರು ರಾಜ್‍ಕುಮಾರ್ ಅವರನ್ನ ನೋಡಿ ನಲಪಾಡ್ ಆಸ್ಪತ್ರೆಯಿಂದ ಹೊರಹೋಗಿದ್ದ. ಗುರು ರಾಜ್‍ಕುಮಾರ್ ಮಲ್ಯ ಆಸ್ಪತ್ರೆಗೆ ಬರದಿದ್ದರೆ, ನನ್ನ ತಮ್ಮನನ್ನು ಕೊಂದುಬಿಡುತ್ತಿದ್ರು ಎಂದು ಸಾತ್ವಿಕ್ ಹೇಳಿದ್ದಾರೆ. ಇದನ್ನೂ ಓದಿ: ಸ್ವಲ್ಪ ಮಿಸ್ ಆಗಿದ್ರೆ ರೌಡಿ ನಲಪಾಡ್ ಸೌದಿಗೆ ಪರಾರಿ!

    ಇದನ್ನೂ ಓದಿ: ವಿದ್ವತ್ ಆರೋಗ್ಯ ವಿಚಾರಿಸಿ ಕಣ್ಣೀರು ಹಾಕಿದ ನಟ ಪುನೀತ್ ರಾಜ್ ಕುಮಾರ್! ವೀಡಿಯೋ ನೋಡಿ 

    https://www.youtube.com/watch?v=dy5Sl50Qi3k

    https://www.youtube.com/watch?v=IHwUP3mtZXQ

    ಇದನ್ನೂ ಓದಿ: ಯುಬಿ ಸಿಟಿ ಗಲಾಟೆ ಹೇಗಾಯ್ತು? ಯಾವೆಲ್ಲ ಸೆಕ್ಷನ್ ಹಾಕಲಾಗಿದೆ? ಆರೋಪಿಗಳ ಉದ್ಯೋಗ ಏನು? ನಲಪಾಡ್ ರೌಡಿಸಂ ಫುಲ್ ಡಿಟೇಲ್ ಇಲ್ಲಿದೆ

  • ವಿಡಿಯೋ: ಪ್ರವಾಹದ ನೀರು ರೆಸ್ಟೊರೆಂಟ್‍ಗೆ ನುಗ್ಗಿದ್ರೂ ಊಟ ಮುಂದುವರೆಸಿದ್ರು!

    ವಿಡಿಯೋ: ಪ್ರವಾಹದ ನೀರು ರೆಸ್ಟೊರೆಂಟ್‍ಗೆ ನುಗ್ಗಿದ್ರೂ ಊಟ ಮುಂದುವರೆಸಿದ್ರು!

     

    ಬೀಜಿಂಗ್: ಪ್ರವಾಹದ ನೀರು ರೆಸ್ಟೊರೆಂಟ್‍ನೊಳಗೆ ನುಗ್ಗಿದ್ರೂ ಜನ ಆರಾಮಾಗಿ ಊಟ ಮುಂದುವರೆಸಿದ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    ಇಲ್ಲಿನ ಜಿಲಿನ್ ಪ್ರಾಂತ್ಯದ ಚಾಂಗ್‍ಚುನ್‍ನ ರೆಸ್ಟೊರೆಂಟ್‍ವೊಂದರಲ್ಲಿ ಕಳೆದ ಗುರುವಾರ ಈ ಘಟನೆ ನಡೆದಿದೆ. ಪ್ರವಾಹದ ನೀರು ರೆಸ್ಟೊರೆಂಟ್‍ನೊಳಗೆ ನುಗ್ಗಿ ಪುಟ್ಟ ಕೊಳದಂತೆ ಆಗಿದ್ರೂ ಗ್ರಾಹಕರು ತಮ್ಮ ಕಾಲನ್ನ ಮೇಲೆತ್ತಿ ಸೋಫಾ ಮೇಲೆ ಇಟ್ಟುಕೊಂಡು ಊಟ ಮಡೋದನ್ನ ಮುಂದುವರೆಸಿದ್ದಾರೆ. ಇನ್ನೂ ಕೆಲವು ಗ್ರಾಹಕರು ನೀರಿನಲ್ಲೇ ನಡೆದಾಡಿದ್ದಾರೆ.

    ರೆಸ್ಟೊರೆಂಟ್ ಸಿಬ್ಬಂದಿ ನೀರನ್ನ ಹೊರಹಾಕಲು ಬಕೆಟ್‍ನಲ್ಲಿ ನೀರು ತುಂಬಿಸಿಟ್ಟಿರೋದನ್ನ ವಿಡಿಯೋದಲ್ಲಿ ಕಾಣಬಹುದು.

    https://www.youtube.com/watch?v=ogcpwARu63E