Tag: ರೆಬೆಲ್ ಸ್ಟಾರ್ ಅಂಬರೀಶ್

  • `ಮಂಡ್ಯದ ಗಂಡು’ ಸಿನಿಮಾ ನಿರ್ದೇಶಕ, ಬರಹಗಾರ ಎಟಿ ರಘು ನಿಧನ

    `ಮಂಡ್ಯದ ಗಂಡು’ ಸಿನಿಮಾ ನಿರ್ದೇಶಕ, ಬರಹಗಾರ ಎಟಿ ರಘು ನಿಧನ

    – ರೆಬೆಲ್ ಸ್ಟಾರ್ ಅಂಬರೀಶ್ ನಟನೆಯ 27 ಸಿನಿಮಾಗಳ ನಿರ್ದೇಶನ

    ಬೆಂಗಳೂರು: `ಮಂಡ್ಯದ ಗಂಡು’ ಸಿನಿಮಾ ನಿರ್ದೇಶಿಸಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಎಟಿ ರಘು (AT Raghu) ಗುರುವಾರ ರಾತ್ರಿ ನಿಧನರಾಗಿದ್ದಾರೆ.

    76 ವರ್ಷದ ರಘು ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಜೊತೆಗೆ ಡಯಾಲಿಸಿಸ್ ಮಾಡಿಸಿಕೊಳುತ್ತಿದ್ದರು. ಗುರುವಾರ ರಾತ್ರಿ 9:20ರ ಸುಮಾರಿಗೆ ಕೊನೆಯುಸಿರೆಳೆದಿದ್ದು, ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಸದ್ಯ ಆರ್‌ಟಿ ನಗರದ ಮಠದಹಳ್ಳಿಯಲ್ಲಿ ಪಾರ್ಥಿವ ಶರೀರ ಇಡಲಾಗಿದ್ದು, ಇಂದು ಮದ್ಯಾಹ್ನ 2-3 ಗಂಟೆಯೊಳಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.ಇದನ್ನೂ ಓದಿ: ದಿನ ಭವಿಷ್ಯ 21-03-2025

    ಕನ್ನಡ ಚಿತ್ರರಂಗದಲ್ಲಿ ಬರಹಗಾರ ಹಾಗೂ ಖ್ಯಾತ ನಿರ್ದೇಶಕರಾಗಿದ್ದ ಇವರು, ಸಾಹಸ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದರು. `ಮಂಡ್ಯದ ಗಂಡು’ ಸಿನಿಮಾ ಸೇರಿದಂತೆ ಒಟ್ಟು 55 ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇನ್ನೂ ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambarish) ನಟನೆಯ 27 ಸಿನಿಮಾಗಳನ್ನು ನಿರ್ದೇಶಿದ್ದರು.

    ಮಂಡ್ಯದ ಗಂಡು (Mandyada Gandu) ಸಿನಿಮಾ ಸೇರಿದಂತೆ ಕನ್ನಡದ ಮಿಡಿದ ಹೃದಯಗಳು, ಜೈಲರ್ ಜಗನ್ನಾಥ್, ಬೇಟೆಗಾರ, ಧರ್ಮ ಯುದ್ಧ, ನ್ಯಾಯ ನೀತಿ ಧರ್ಮ ಇನ್ನಿತರ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ 21-03-2025

  • ಮಗನಿಗೆ ಬೇಬಿ ರೆಬೆಲ್ ಎಂದ ಅಭಿಷೇಕ್- ನಟನ ಪೋಸ್ಟ್‌ಗೆ ಅಂಬಿ ಫ್ಯಾನ್ಸ್ ದಿಲ್ ಖುಷ್

    ಮಗನಿಗೆ ಬೇಬಿ ರೆಬೆಲ್ ಎಂದ ಅಭಿಷೇಕ್- ನಟನ ಪೋಸ್ಟ್‌ಗೆ ಅಂಬಿ ಫ್ಯಾನ್ಸ್ ದಿಲ್ ಖುಷ್

    ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambareesh) ಮನೆಗೆ ಮುದ್ದು ಕಂದಮ್ಮನ ಆಗಮನವಾಗಿದೆ. ನವೆಂಬರ್ 12ರಂದು ಅಭಿಷೇಕ್ ಪತ್ನಿ ಗಂಡು ಮಗುವಿಗೆ (Baby Boy) ಜನ್ಮ ನೀಡಿದರು. ಇದೀಗ ಈ ಕುರಿತು ವಿಶೇಷ ಪೋಸ್ಟ್‌ವೊಂದನ್ನು ಅಭಿಷೇಕ್ ಹಂಚಿಕೊಂಡಿದ್ದಾರೆ. ಮಗನನ್ನು ಬೇಬಿ ರೆಬೆಲ್ ಎಂದಿದ್ದಾರೆ. ಈ ಪೋಸ್ಟ್ ನೋಡಿ ಅಂಬಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ಡಿ.4ರಂದು ನಾಗಚೈತನ್ಯ, ಶೋಭಿತಾ ಮದುವೆ- ಆಮಂತ್ರಣ ಪತ್ರಿಕೆ ವೈರಲ್

     

    View this post on Instagram

     

    A post shared by Abishek Ambareesh (@abishekambareesh)

    ಎಲ್ಲರಿಗೂ ನಮಸ್ಕಾರ, ನವೆಂಬರ್ 12ರಂದು ನಮ್ಮ ಕುಟುಂಬಕ್ಕೆ ಅತೀವ ಸಂತಸದ ದಿನ. ರೆಬೆಲ್ ಸ್ಟಾರ್ ಅಂಬರೀಶ್ ಅಣ್ಣನ ಆಶೀರ್ವಾದ, ಗುರು-ಹಿರಿಯರ ಆಶೀರ್ವಾದದಿಂದ ಗಂಡು ಮಗು ಜನಿಸಿದ್ದು, ತಾಯಿ- ಮಗು ಆರೋಗ್ಯವಾಗಿದ್ದಾರೆಂದು ಈ ಮೂಲಕ ತಮ್ಮೆಲ್ಲರಿಗೂ ತಿಳಿಸಲು ಇಚ್ಛಿಸುತ್ತೇನೆ ಎಂದು ಅಭಿಷೇಕ್ ಬರೆದುಕೊಂಡಿದ್ದಾರೆ. ಅಂಬರೀಶ್ ಫೋಟೋ ಶೇರ್ ಮಾಡಿ ಮಗನನ್ನು ಬೇಬಿ ರೆಬೆಲ್ ಎಂದು ಬರೆದುಕೊಂಡಿದ್ದಾರೆ. ಆದಷ್ಟು ಬೇಗ ಬೇಬಿ ರೆಬೆಲ್ ಫೋಟೋ ರಿವೀಲ್ ಮಾಡಿ ಎಂದು ಫ್ಯಾನ್ಸ್ ಮನವಿ ಮಾಡಿದ್ದಾರೆ.

    ಅಂದಹಾಗೆ, ಅವಿವ (Aviva Bidapa) ಜೊತೆ ಅಭಿಷೇಕ್ ಅಂಬರೀಶ್ ಕಳೆದ ವರ್ಷ ಜೂನ್ 5ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  • ಇಂದು ಅಂಬರೀಶ್ ಜನ್ಮದಿನ, ಯಾವುದೇ ಸಂಭ್ರಮಾಚರಣೆ ಬೇಡ: ಸುಮಲತಾ

    ಇಂದು ಅಂಬರೀಶ್ ಜನ್ಮದಿನ, ಯಾವುದೇ ಸಂಭ್ರಮಾಚರಣೆ ಬೇಡ: ಸುಮಲತಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಜನ್ಮದಿನ. ಪರಿಸ್ಥಿತಿ ಸರಿಯಿದ್ದು, ಅವರು ನಮ್ಮೊಂದಿಗೆ ಇದ್ದಿದ್ದರೆ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಆದರೆ, ಅಂಬರೀಶ್ ಈಗ ನಮ್ಮೊಂದಿಗಿಲ್ಲ. ಹೀಗಾಗಿ, ಅವರ ಪತ್ನಿ, ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕಂಠೀರವ ಸ್ಟುಡಿಯೋಗೆ ತೆರಳಿ ಅಂಬರೀಶ್ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ.

    ರೆಬೆಲ್ ಸ್ಟಾರ್ ಅಂಬರೀಶ್ ಅವರ 69ನೇ ವರ್ಷದ ಹುಟ್ಟುಹಬ್ಬ ಹಿನ್ನಲೆ ಅಂಬಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಂಸದೆ ಸುಮಲತಾ ಅಂಬರೀಶ್ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಅಂಬರೀಶ್ ಅವರಿದ್ದಾಗ ಪ್ರತಿ ವರ್ಷ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಗಳಿಂದ ಬಂದು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ನಾವೇ ಮಂಡ್ಯಕ್ಕೆ ತೆರಳಿ ಅಲ್ಲಿ ಆಚರಿಸುತ್ತಿದ್ದೇವೆ. ಆದರೆ ಈ ವರ್ಷ ಕೊರೊನಾ ಕಾರಣದಿಂದ ಸಂಭ್ರಮದ ಆಚರಣೆ ಇಲ್ಲ ಎಂದಿದ್ದಾರೆ.

    ಮನೆಯಲ್ಲೇ ಇದ್ದು ಎಲ್ಲರೂ ಆಚರಿಸಿ. ಅವರ ಜೀವನದಿಂದ ಸ್ಫೂರ್ತಿ ಪಡೆದು ಕೆಲಸ ಮಾಡುತ್ತಿದ್ದೇನೆ. ಇಲ್ಲಿಂದ ಈಗ ಮಂಡ್ಯಕ್ಕೆ ತೆರಳಲಿದ್ದೇನೆ. ಅಲ್ಲಿ ಐಸಿಯು ಆನ್ ವೀಲ್ಸ್ ಉದ್ಘಾಟನೆ ಹಾಗೂ ಇತರೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಚಿತ್ರರಂಗಕ್ಕೆ ನೆರವು ಸಂಬಂಧ ಸಿಎಂ ಭೇಟಿ ಮಾಡಿ ಬಂದಿದ್ದೇನೆ, ರಾಜ್ಯ ಸರ್ಕಾರ ಚಿತ್ರರಂಗದ ಸಮಸ್ಯೆಗೆ ಸ್ಪಂದಿಸಬೇಕು ಅನ್ನೋದೆ ನನ್ನ ಮನವಿ ಆಗಿದೆ.

    ರೆಬೆಲ್ ಸ್ಟಾರ್ ಅಂಬರೀಷ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮವಾಗಿದೆ. ಮಂಡ್ಯದ ಗಂಡು ನಮ್ಮನ್ನಗಲಿ ಎರಡುವರೆ ವರ್ಷಗಳಾಗಿವೆ. ಅಂಬಿ ನೆನೆಪು ಮಾತ್ರ ಅಭಿಮಾನಿಗಳ ಮನದಲ್ಲಿ ಸದಾ ಇರುತ್ತಾರೆ. ಕಂಠೀರವ ಸ್ಟುಡಿಯೋದಲ್ಲಿನ ಅಂಬಿ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಕೊರೊನಾ ಇರುವುದರಿಂದ ಅಂಬಿ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳಿ ಸಂಭ್ರಮದಿಂದ ಆಚರಿಸಲು ಅವಕಾಶ ಇರದಿರುವುದು ಅಭಿಮಾನಿಗಳಿಗೆ ಸಖತ್ ಬೇಸರವನ್ನುಂಟು ಮಾಡಿದೆ. ಹೀಗಾಗಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಂಬರೀಶ್ ಅವರ ಫೋಟೋವನ್ನು ಶೇರ್ ಮಾಡುವ ಮೂಲಕವಾಗಿ ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: ಅಪ್ಪಾಜಿಯ ಭಾಷಾಭಿಮಾನ, ಖಡಕ್ ಜೀವನ ಶೈಲಿ ಎಲ್ಲರಿಗೂ ಸ್ಫೂರ್ತಿ: ದರ್ಶನ್

    ನಾಳೆ ನಮ್ಮೆಲ್ಲರ ಪ್ರೀತಿಯ ಅಂಬರೀಶ್ ಅವರ 69ನೇ ಜನ್ಮ ಜಯಂತಿ ಸಂಭ್ರಮದಿಂದ ಆಚರಿಸಲು ನೀವೆಲ್ಲರೂ ಕಾಯುತ್ತಿರುತ್ತೀರಿ. ಆದರೆ ಕೊರೊನಾ ತಡೆಯಲು ದೇಶವೆಲ್ಲ ಶ್ರಮಿಸುತ್ತಿರುವಾಗ ನಾವು ಯಾವುದೇ ಸಾರ್ವಜನಿಕ ಆಚರಣೆ ಅಥವಾ ಸಮಾರಂಭ ಮಾಡುವುದು ಬೇಡವೆಂದು ನನ್ನ ವಿನಮ್ರ ಮನವಿ. ಈ ವರ್ಷ ಅವರನ್ನು ನಮ್ಮ ಮನಸ್ಸು ಮನೆಗಳಲ್ಲೇ ಆಚರಿಸೋಣ ಎಂದು ಅಂಬರೀಶ್ ಪತ್ನಿ, ನಟಿ, ಸಂಸದೆ ಸುಮಲತಾ ಅಂಬರೀಶ್ ಮನವಿ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ನಿನ್ನೆ ಪೋಸ್ಟ್ ಮಾಡಿದ್ದರು.

  • `ದುರಹಂಕಾರಿ ಕುಮಾರಸ್ವಾಮಿ’- ಎಚ್‍ಡಿಕೆ ವಿರುದ್ಧ ಅಂಬಿ ಅಭಿಮಾನಿಗಳ ಆಕ್ರೋಶ

    `ದುರಹಂಕಾರಿ ಕುಮಾರಸ್ವಾಮಿ’- ಎಚ್‍ಡಿಕೆ ವಿರುದ್ಧ ಅಂಬಿ ಅಭಿಮಾನಿಗಳ ಆಕ್ರೋಶ

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಗಳು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಅಂಬಿ ಎದುರು ಎಚ್ ಡಿಕೆ ನಿಂತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಫೋಟೋದೊಂದಿಗೆ `ಅಂಬರೀಶ್ ಕೊಡುಗೆ ಏನೂ ಅನ್ನೋ ದುರಹಂಕಾರಿ ಕುಮಾರಸ್ವಾಮಿಯವರು ಅವತ್ತು ಅಂಬರೀಶ್ ಎದುರು ಕೈ ಕಟ್ಟಿ ನಿಲ್ಲುತ್ತಿದ್ದರು ಎಂದು ಕಿಡಿಕಾರಿದ್ದಾರೆ.

    ಸಿನಿಮಾವೊಂದರ ಶೂಟಿಂಗ್ ವೇಳೆ ಅಂಬರೀಶ್ ಜೊತೆ ಕುಮಾರಸ್ವಾಮಿ, ನಿಖಿಲ್, ತಮ್ಮಣ್ಣ ತೆಗೆಸಿಕೊಂಡಿದ್ದರು. ಇದರಲ್ಲಿ ಅಂಬಿ ಎದುರು ಎಚ್‍ಡಿಕೆ ಕೈ ಕಟ್ಕೊಂಡು ನಿಂತಿದ್ದು, ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಹುಲಿ ಇದ್ದಾಗ ಉಪಯೋಗಿಸಿಕೊಂಡ ಇಲಿಗಳು, ಇವತ್ತು ತಾವೇ ಹುಲಿಗಳು ಅಂದುಕೊಂಡಿವೆ. ಈ ಹಿಂದೆ ಸಚಿವ ಡಿ ಸಿ ತಮ್ಮಣ್ಣ ಪೋಸ್ಟರ್ ಗಳಲ್ಲಿ ಅಂಬರೀಶ್ ಫೋಟೋ ಮಿಂಚುತಿತ್ತು. ಸಂಸದ ಎಲ್ ಆರ್ ಶಿವರಾಮೇಗೌಡ ಅವರು ಅಂಬರೀಶ್‍ರಿಂದ ಆಶೀರ್ವಾದ ಪಡೆದಿದ್ದರು ಎಂದು ಅಭಿಮಾನಿಗಳು ಗರಂ ಆಗಿದ್ದಾರೆ.  ಇದನ್ನೂ ಓದಿ: ಎಷ್ಟು ಜನಕ್ಕೆ ಒಂದು ಲೋಟ ಕುಡಿಯಲು ನೀರು ಕೊಟ್ಟಿದ್ದಾರೆ – ಸುಮಲತಾ ವಿರುದ್ಧ ತಮ್ಮಣ್ಣ ವಾಗ್ದಾಳಿ

    ಡಿನ್ನರ್ ಸಭೆ: ಇತ್ತ ಇಂದು ಸಿಎಂ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪ್ರಮುಖರ ಡಿನ್ನರ್ ಸಭೆ ಕಳೆದ ರಾತ್ರಿ ಬೆಂಗಳೂರಿನ ತಾಜ್‍ವೆಸ್ಟೆಂಡ್ ಹೋಟೆಲ್‍ನಲ್ಲಿ ನಡೆದಿದೆ. ಈ ವೇಳೆ ನಿಖಿಲ್ ಕುಮಾರಸ್ವಾಮಿಯೇ ಮಂಡ್ಯ ಲೋಕಸಭಾ ಅಭ್ಯರ್ಥಿಯಾಗಿದ್ದು, ನಿಖಿಲ್‍ರನ್ನ ಗೆಲ್ಲಿಸಿಕೊಂಡು ಬನ್ನಿ  ಎಂದು ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಭೆಯಲ್ಲಿ ಸಚಿವರಾದ ಸಿ ಎಸ್ ಪುಟ್ಟರಾಜು, ಡಿ ಸಿ ತಮ್ಮಣ್ಣ, ಸಂಸದ ಶಿವರಾಮೇಗೌಡ, ಎಂಎಲ್‍ಸಿ ಶ್ರೀಕಂಠೇಗೌಡ ಭಾಗಿಯಾಗಿದ್ದರು. ನಿಖಿಲ್ ಕುಮಾರಸ್ವಾಮಿಯನ್ನೇ ಪಕ್ಷದ ಅಭ್ಯರ್ಥಿ ಮಾಡಬೇಕು. ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತೀವಿ ಎಂದು ಜೆಡಿಎಸ್ ಮುಖಂಡರು ಸಿಎಂ ಕುಮಾರಸ್ವಾಮಿಗೆ ಮಾತು ಕೊಟ್ಟಿದ್ದಾರೆ. ನಿಖಿಲ್ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ, ಹೀಗಾಗಿ ಕಾಂಗ್ರೆಸ್‍ನಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.

    https://www.youtube.com/watch?v=2n1usFT7t6E

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ನೆನೆದು ಕಣ್ಣೀರಾದ ಅಭಿಮಾನಿಗಳು!

    ಮಂಡ್ಯದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ನೆನೆದು ಕಣ್ಣೀರಾದ ಅಭಿಮಾನಿಗಳು!

    ಮಂಡ್ಯ: ಸಕ್ಕರೆ ನಾಡು ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆದು ಸ್ಯಾಂಡಲ್‍ವುಡ್ ಹಿರಿಯ ನಟ, ನಟಿಯರು, ನಿರ್ದೇಶಕರು, ಕಲಾವಿದರು ಸೇರಿದಂತೆ ಅಭಿಮಾನಿಗಳು ಕಣ್ಣೀರಾದರು.

    ಅಂಬರೀಶ್ ಅಭಿಮಾನಿಗಳ ಬಳಗವು ಅಂಬಿ ಸಾರ್ಥಕ ನುಡಿನಮನ ಹಾಗೂ ಕನಗನಮರಡಿ ಬಸ್ ದುರಂತದಲ್ಲಿ ಮಡಿದವವರ ಕುಟುಂಬಗಳಿಗೆ ಪರಿಹಾರ ವಿತರಣಾ ಕಾರ್ಯಕ್ರಮವು ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆಸಿತು. ಈ ಕಾರ್ಯಕ್ರಮದಲ್ಲಿ ಅಂಬರೀಶ್ ಪತ್ನಿ ಸುಮಲತಾ, ಪುತ್ರ ಅಭಿಷೇಕ್, ನಟ ಶಿವರಾಜ್‍ಕುಮಾರ್, ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಯೋಗರಾಜ್ ಭಟ್, ನಟ ಜಗ್ಗೇಶ್, ಸಾಧುಕೋಕಿಲಾ, ನಿರ್ಮಾಪಕ ರಾಕಲೈನ್ ವೆಂಕಟೇಶ್ ಸೇರಿದಂತೆ ಅನೇಕರು ಭಾಗಿಯಾಗಿ, ಅಂಬರೀಶ್ ಅವರನ್ನು ಸ್ಮರಿಸಿಕೊಂಡರು.

    ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಹುತೇಕರ ಭಾಷಣ ಕೇಳಿ ಸುಮಲತಾ ಅಂಬರೀಶ್ ಅವರು ಭಾವುಕರಾಗಿ ಕಣ್ಣೀರು ಹಾಕಿದರು. ಬಳಿಕ ವೇದಿಕೆಗೆ ಆಗಮಿಸಿದ ಅವರು, ಕನಗನಮರಡಿ ಬಸ್ ದುರಂತದಲ್ಲಿ ಮಡಿದವರ 30 ಜನರ ಕುಟುಂಬಸ್ಥರಿಗೆ ಪರಿಹಾರ ನೀಡಿದರು. ಅದೇ ದಿನ ಅಂಬರೀಶ್ ಕೂಡ ಇಹಲೋಕ ತ್ಯಜಿಸಿದ್ದರು. ಎಲ್ಲವನ್ನೂ ನೆನೆದ ಸುಮಲತಾ  ಕಣ್ಣಲ್ಲಿ ನೀರು ತುಂಬಿ ಬಂತು.

    ರಾಕಿಂಗ್ ಸ್ಟಾರ್ ಯಶ್ ಮಾತನಾಡಿ, ಅಂಬರೀಶ್ ಅಣ್ಣನ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಮಂಡ್ಯ ಇಂಡಿಯಾಗೆ ಗೊತ್ತು ಅಂತಾರೆ. ಅದು ಅಂಬರೀಶ್ ಅಣ್ಣನ ಸ್ವತ್ತು. ಯಾರೇ ಬಂದ್ರು ಅದೇ ಗತ್ತು ಎಂದರು. ಬಳಿಕ ವೇದಿಕೆಯ ಮೇಲೆ ಅಭಿಷೇಕ್ ಅವರನ್ನು ತಬ್ಬಿಕೊಂಡು ಸಾಂತ್ವಾನ ಹೇಳಿದರು.

    ಅಂಬರೀಶ್ ಅಧಿಕಾರಕ್ಕಾಗಿ, ಹಣಕ್ಕಾಗಿ ಎಂದೂ ಆಸೆ ಪಟ್ಟವರಲ್ಲ. ಕಾವೇರಿಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸರಳ ಜೀವಿ, ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಅವರು ಒಂದು ಗತ್ತು ಹೊಂದಿದ್ದರು ಎಂದು ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಹೇಳಿ, ಅಂಬಿ ಜೊತೆಗಿನ ಕ್ಷಣಗಳನ್ನು ಮೆಲುಕು ಹಾಕಿದರು.

    ಅಂಬರೀಶ್ ಅವರನ್ನು ಕರ್ಣನಿಗೆ ಹೋಲಿಸಿದ ಹಿರಿಯ ನಟ ದೊಡ್ಡಣ್ಣ ಅವರು, ಕಲಾವಿದರ ಸಂಘದ ಕಟ್ಟಡ ನಿರ್ಮಾಣಕ್ಕೆ ಅಂಬರೀಶ್ ಹೋರಾಡಿದ್ದನ್ನು ನೆನೆಪಿಸಿಕೊಂಡು ಕಣ್ಣೀರಿಟ್ಟರು. ಅಂಬರೀಶ್ ಅವರು ಕನಗನಮರಡಿ ಬಸ್ ದುರಂತ ಕೇಳಿ ಮಗುವಿನಂತೆ ತೊಳಲಾಡಿದರು. ನಾನು ಘಟನಾ ಸ್ಥಳಕ್ಕೆ ಹೋಗಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ವಿಧಿ ಅವರನ್ನು ಅವತ್ತೇ ರಾತ್ರಿ ಕರೆದುಕೊಂಡುಬಿಟ್ಟಿತು ಎಂದು ಸ್ಮರಿಸಿದರು. ಈ ವೇಳೆ ಸ್ಟೇಡಿಯಂನಲ್ಲಿ ಮೌನ ಮನೆಮಾಡಿ, ಅಂಬಿ ಕುಟುಂಬಸ್ಥರು, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹಾಗೂ ಅಭಿಮಾನಿಗಳು ಭಾವುಕರಾದರು.

    ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ಬೆಂಗಳೂರು ಮೊಬೈಲ್ ಇದ್ದಂತೆ, ಮಂಡ್ಯ ಚಾರ್ಜರ್ ಇದ್ದಂತೆ ಎಂದು ರೆಬೆಲ್ ಸ್ಟಾರ್ ಬಗ್ಗೆ ತಮ್ಮದೇ ಶೈಲಿಯಲ್ಲಿ ಡೈಲಾಗ್ ಹೊಡೆದರು. ರಾಜಾಹುಲಿ ಸಿನಿಮಾದ ‘ಗೊಂಬೆ ಆಡ್ಸೋನು’ ಹಾಡಿ ಶೂಟಿಂಗ್ ಮಾಡುವಾಗ ಮಂಡ್ಯದವರಿಗೊಬ್ಬರಿಗೆ ಕೈಮ ಉಂಡೆ, ಮುದ್ದೆ ತರಲು ಅಂಬರೀಶ್ ಹೇಳಿದ್ದರು. ಆದರೆ ಒಬ್ಬರಲ್ಲ ಇಬ್ಬರಲ್ಲ ಅನೇಕರು ಅಂಬರೀಶ್ ಅವರು ಶೂಟಿಂಗ್‍ಗೆ ಬಂದಿದ್ದನ್ನು ಕೇಳಿ ಊಟ ತಂದಿದ್ದರು ಅಂತ ನೆನಪಿಸಿಕೊಂಡರು.

    ರಕ್ತಕಣ್ಣಿರು ಚಿತ್ರದ ‘ವೇದಾಂತಗಳು, ಸಿದ್ಧಾಂತಗಳು ಯಾರೋ ಬರೆದಿಟ್ಟ ಕಟ್ಟು ಕಥೆ. ಜೀವನದ ರಸ ಸವಿಯೋಕೆ ನಾನೇ ನಿಮಗೆ ದಂತ ಕಥೆ ಎಂಬ ಹಾಡಿನ ಮೂಲಕ ಅಂಬಿ ಏನು ಎಂಬುದನ್ನು ನಟ, ನಿದೇರ್ಶಕ, ಸಂಗೀತ ನಿರ್ದೇಶಕ ಸಾಧುಕೋಕಿಲಾ ಕಟ್ಟಿಕೊಟ್ಟರು.

    ಹಿರಿಯ ನಟಿ ಬಿ.ಸರೋಜಾದೇವಿ ಮಾತನಾಡಿ, ಅಂಬಿ ಏನನ್ನೂ ಬಯಸಿದವನಲ್ಲ. ಎಲ್ಲವೂ ಆತನನ್ನೇ ಹುಡುಕಿಕೊಂಡು ಬಂದಂತಿದ್ದು. ಆದರೆ ಸುಮಲತಾ ಅವರನ್ನು ಹೆಚ್ಚು ಇಷ್ಟಪಟ್ಟ ಅಂಬಿ, ಮಡದಿಯಾಗಿ ಪಡೆದರು. ರಾಜನಾಗಿಯೇ ಬಂದ ರೆಬೆಲ್ ಸ್ಟಾರ್ ರಾಜನಾಗೇ ಹೋದ ಎಂದ ಅವರು, ನನ್ನ ಆಯಸ್ಸು ಕೊಡ್ತೀನಿ ಅಂದ್ರೆ ಯಾರಿಗೆ ಬೇಕು ನಿಮ್ಮ ನೆಕ್ಲೇಸ್ ಕೊಡಿ ಅಂತ ಅಂಬರೀಶ್ ಒಮ್ಮೆ ಹಾಸ್ಯ ಮಾಡಿದ್ದರು ಎಂದು ನೆನೆದು ಕಣ್ಣೀರಾದರು.

    ಅಂಬರೀಶ್ ಪುತ್ರ ಅಭಿಷೇಕ್ ಮಾತನಾಡಿ, ನಮ್ಮಪ್ಪನ ಬಗ್ಗೆ ಹೆಚ್ಚಾಗಿ ನಾನು ಏನು ಹೇಳಲ್ಲ. ಅಂಬರೀಶ್ ಅವರು ಹೇಗಿದ್ದರು, ಹೇಗೆ ಹೋದರು ಅಂತ ನಿಮಗೆ ಗೊತ್ತು. ಹಣ ಮುಖ್ಯ ಅಲ್ಲ ಮಗನೇ ಜನ ಮುಖ್ಯ ಅಂತ ಅಪ್ಪ ಯಾವಾಗ್ಲೂ ಹೇಳುತ್ತಿದ್ದರು. ಅಂತ್ಯಸಂಸ್ಕಾರದಲ್ಲಿಯೂ ಅಭಿಮಾನವನ್ನು ಮಂಡ್ಯ ಜನತೆ ಮೆರೆಯಿತು. ನಿಮಗೆ ನಾನು ಚಿರಋಣಿ ಎಂದರು.

    ಅಭಿಷೇಕ್ ಮಾತನಾಡುವಾಗ ಕೆಲ ಅಭಿಮಾನಿಗಳು ಕೂಗಾಡುತ್ತಿದ್ದರು. ಈ ವೇಳೆ ಅಂಬಿ ಸ್ಟೇಲ್‍ನಲ್ಲಿಯೇ ಅಭಿಷೇಕ್ ಕೂಗಾಡಿ ನಮ್ಮಪ್ಪನಿಗೂ ಕೇಳಲಿ ಎಂದು ಭಾವುಕರಾದರು. ನಮ್ಮ ತಾಯಿ ನಿಮ್ಮ ಪ್ರೀತಿಯಲ್ಲಿ ಒಂದಿಷ್ಟು ಭಾಗ ಮಗ ಅಭಿಷೇಕ್ ಕೊಡಿ ಅಂತ ಕೇಳಿದ್ದಾರೆ. ಅಪ್ಪ ನಡೆದ ದಾರಿಯಲ್ಲಿ ನಡೆದರೆ ಅಷ್ಟೇ ಪ್ರೀತಿ ನಮಗೆ ಕೊಡುತ್ತಾರೆ ಎಂದು ಸುಮಲತಾ ಅವರಿಗೆ ಅಭಿಷೇಕ್ ಇದೇ ವೇಳೆ ಹೇಳಿದರು.

    https://www.youtube.com/watch?v=vRxf0E_5PXE

    https://www.youtube.com/watch?v=tv9fwk6eo9Q

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೃತಿ-ಸರ್ಜಾ ರೆಬಲ್ ಸಂಧಾನ ಸೂತ್ರ: ಫಿಲ್ಮ್ ಚೇಂಬರ್ ಇನ್ ಸೈಡ್ ಸ್ಟೋರಿ

    ಶೃತಿ-ಸರ್ಜಾ ರೆಬಲ್ ಸಂಧಾನ ಸೂತ್ರ: ಫಿಲ್ಮ್ ಚೇಂಬರ್ ಇನ್ ಸೈಡ್ ಸ್ಟೋರಿ

    ಬೆಂಗಳೂರು: ಕಳೆದ ಒಂದು ವಾರದಿಂದ ಸ್ಯಾಂಡಲ್‍ವುಡ್ ನಲ್ಲಿ ಮೀಟೂ ಆರೋಪ ಸಂಚಲನ ಮೂಡಿಸಿದೆ. ಶೃತಿ ಹರಿಹರನ್ ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ನಟ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮೀಟೂ ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಶೃತಿ ಆರೋಪ ಮಾಡುತ್ತಿದ್ದಂತೆ ಕೆಲ ಸಂಘಟನೆಗಳು, ನಟರು, ಕಲಾವಿದರು ನಟಿಯ ಪರ ನಿಂತರೆ, ಬಹುತೇಕ ಹಿರಿಯ ಕಲಾವಿದರು ಅರ್ಜುನ್ ಸರ್ಜಾ ಪರ ಬ್ಯಾಟ್ ಬೀಸಿದ್ದರು. ಇತ್ತ ಅರ್ಜುನ್ ಸರ್ಜಾ ವಿರುದ್ಧ ದೂರು ಕೇಳಿ ಬರುತ್ತಿದ್ದಂತೆ ಮಾವ, ಹಿರಿಯ ನಟ ಕಲಾ ತಪಸ್ವಿ ರಾಜೇಶ್ ಫಿಲ್ಮ್ ಚೇಂಬರ್ ನಲ್ಲಿ ದೂರು ದಾಖಲಿಸಿದ್ದರು.

    ದೂರು ದಾಖಲಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಚಲನಚಿತ್ರ ಮಂಡಳಿ ಸಹ ಶೃತಿ ಹರಿಹರನ್ ನೇರವಾಗಿ ಮಾಧ್ಯಮಗಳ ಮುಂದೆ ಹೋಗಬಾರದಿತ್ತು ಎಂದು ಅಸಮಾಧಾನ ಹೊರಹಾಕಿತ್ತು. ಆದ್ರೆ ರೆಬೆಲ್ ಸ್ಟಾರ್ ಅಂಬರೀಶ್ ಪ್ರವಾಸದಲ್ಲಿದ್ದರಿಂದ ಇಂದು ಸಂಧಾನ ಸಭೆಯನ್ನು ಮುಂದೂಡಿದ್ದರು. ಇಂದು ಸಂಜೆ ಫಿಲ್ಮ್ ಚೇಂಬರ್ ನಲ್ಲಿ ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಮಧ್ಯೆ ಸಂಧಾನ ಸಭೆ ಅಂಬರೀಶ್ ನೇತೃತವದಲ್ಲಿ ನಡೆದಿದೆ. ಹಾಗಾದ್ರೆ ಸಭೆಯಲ್ಲಿ ಏನು? ಏನಾಯ್ತು? ಇಲ್ಲಿದೆ ಇನ್ ಸೈಡ್ ಸ್ಟೋರಿ

    ಅಂಬರೀಶ್: ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಮಾತನಾಡಿ. ನಿಮಗೇ ನ್ಯಾಯ ಸಿಗುವ ಭರವಸೆ ನೀಡುತ್ತೇವೆ. ನಮ್ಮಿಂದ ಯಾರಿಗೂ ಅನ್ಯಾಯ ಆಗಿಲ್ಲ, ಗಂಡು ಹೆಣ್ಣು ಅಂತ ನೋಡಲ್ಲ. ಆದರೆ ನೀವು ಮಾಧ್ಯಮಗಳ ಮುಂದೇ ಹೋಗಿದ್ದು ತಪ್ಪು.

    ಶೃತಿ: ಆ ವೇಳೆ ನನಗೆ ಆಗ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಅದ್ದರಿಂದ ಹಾಗೆ ಮಾಡಿದೆ. ಈಗ ನಿಮ್ಮ ಮುಂದೇ ಬಂದಿದ್ದೇನೆ, ನ್ಯಾಯ ಸಿಗುವಂತೆ ಮಾಡಿ

    ಅಂಬರೀಶ್: ಆದರೆ ಈ ಮಾತಿಗೆ ಸಮಾಧಾನ ವ್ಯಕ್ತಪಡಿಸಿದ ಅಂಬರೀಶ್ ಅವರು ನೀನು ಚಿಕ್ಕ ಹುಡುಗಿ ಅಲ್ಲ. ನಿಮ್ಮ ಈ ರೀತಿಯ ನಡೆಗಳಿಂದ ಇಡೀ ಚಿತ್ರರಂಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಮೊದಲೇ ಇಲ್ಲಿಗೆ ಬಂದಿದ್ದರೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ. ಆದರೆ ನಿಮ್ಮ ಹಠವನ್ನು ಬಿಡುವುದು ಒಳ್ಳೆಯದು ಎಂದು ಸಲಹೆ ನೀಡದರು.

    ಸರ್ಜಾ ತಿರುಗೇಟು: `ವಿಸ್ಮಯ’ ಕುರಿತು ಹೇಳಿಕೆ ನೀಡುವ ವೇಳೆ ಮಧ್ಯ ಪ್ರವೇಶ ಮಾಡಿದ ನಟ ಅರ್ಜುನ ಸರ್ಜಾ ಅವರು, ಸಿನಿಮಾ ವೇಳೆ ನಾನು ಯಾವುದೇ ರೀತಿ ಕೆಟ್ಟದಾಗಿ ವರ್ತನೆ ಮಾಡಿಲ್ಲ. ಅಲ್ಲದೇ ಯಾವುದೇ ಡಿನ್ನರ್, ಹೋಟೆಲ್, ರೆಸಾರ್ಟ್, ರೂಮ್‍ಗೆ ಕರೆದಿಲ್ಲ. 35 ವರ್ಷದಿಂದ ಚಿತ್ರರಂಗದಲ್ಲಿ ಇದ್ದು, ಒಂದು ಕಪ್ಪು ಚುಕ್ಕೆ ನನ್ನ ಮೇಲಿಲ್ಲ. ಆದರೆ ಇಂದು ಇವರು ಮಾಡಿರುವ ಆರೋಪದಿಂದ ನನಗೂ, ನನ್ನ ಕುಟುಂಬಸ್ಥರಿಗೂ ಸಾಕಷ್ಟು ನೋವಾಗಿದೆ. ಈ ವೇಳೆ ಶೃತಿ ಅವರಿಗೆ ಮಾತನಾಡಲು ಅವಕಾಶ ನೀಡುವಂತೆ ಅಂಬರೀಶ್ ತಡೆದಿದ್ದರು.

    ನನಗೆ ಎಷ್ಟು ನೋವಾಗಿದೆ ಎಂದು ನನಗೆ ಮಾತ್ರ ಗೊತ್ತು. 5 ಭಾಷೆಗಳಲ್ಲಿ ನಟನೆ ಮಾಡಿದ್ದೇನೆ. ಹಿರಿಯ ನಟರೊಂದಿಗೆ ಅಭಿನಯ ಮಾಡಿದ್ದೇನೆ. ಯಾರು ಈ ಕುರಿತು ಒಂದು ಮಾತು ಕೆಟ್ಟದಾಗಿ ಮಾತನಾಡಿಲ್ಲ. ಆದರೆ ಇವರು ಇಲ್ಲದ ಆರೋಪ ಮಾಡಿ ನನ್ನ ಹೆಸರಿಗೆ ಧಕ್ಕೆ ತಂದಿದ್ದಾರೆ.

    ಶೃತಿ: ಧ್ರುವ ಸರ್ಜಾ ನಟ ಚೇತನ್ ವಿರುದ್ಧ ನಾಯಿ, ಕ್ರಿಮಿ ಕೀಟ ಎಂದು ಹೇಳಿಕೆ ನೀಡಿದ್ದನ್ನು ಪ್ರಸ್ತಾಪಿಸಿದ ಅವರು, ನನ್ನ ಪರ ನಿಂತ ತಪ್ಪಿಗಾಗಿ ಅವರ ಮೇಲೆ ಈ ರೀತಿ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಂಬರೀಶ್ ಅವರು, ಯುವಕ ಏನೋ ಮಾತನಾಡಿದ್ದಾನೆ ಅದನ್ನು ಸುಮ್ಮನೆ ಅಲ್ಲಿಗೆ ಬಿಟ್ಟರೆ ಒಳ್ಳೆಯದು ಎಂದು ಸುಮ್ಮನಾಗಿಸಿದರು.

    ನನ್ನ ಬಳಿ ಇವರು ಕೆಟ್ಟದಾಗಿ ನಡೆದುಕೊಂಡ ಬಗ್ಗೆ ಸಾಕ್ಷಿ ಇದೆ. ಕಾನೂನು ಮೂಲಕವೇ ಹೋರಾಟ ಮಾಡುತ್ತೇನೆ ಎಂದು ಶೃತಿ ಹರಿಹರನ್ ಹೇಳಿದ್ದು, ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಅರ್ಜುನ್ ಸರ್ಜಾ ಅವರು ಇವರ ಆರೋಪ ರಹಿತ ಹೇಳಿಕೆ ಇಂದ ನನಗೆ ಸಾಕಷ್ಟು ತೊಂದರೆ ಆಗಿದೆ. ಬಹಿರಂಗ ಕ್ಷಮೆ ಕೇಳಲೇಬೇಕು. ಇಲ್ಲವಾದರೆ ಕೋರ್ಟ್ ನಲ್ಲೇ ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದರು. ಬಳಿಕ ಇಬ್ಬರ ಹೇಳಿಕೆ ಪ್ರತ್ಯೇಕವಾಗಿ ಪಡೆಯಲು ಹಿರಿಯ ಮುಖಂಡರು ತೀರ್ಮಾನಿಸಿ ಬೇರೆ ಬೇರೆ ಹೇಳಿಕೆ ಪಡೆಯಲು ಮುಂದಾದರು.

    ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್ ನಡುವಿನ ವಿವಾದ ಚಿತ್ರರಂಗದ ಹಿರಿಯ ನಡುವೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ, ನಿರ್ದೇಶಕರಾದರು ಭಾಗವಹಿಸಿದ್ದರು. ಕೆ ಮುಂಜು, ಹಿರಿಯ ನಟ ಲೋಕನಾಥ್, ನಿರ್ಮಾಪಕ ಟೇಶಿ ವೆಂಕಟೇಶ್, ನಿರ್ಮಾಪಕ ಸುರೇಶ್, ನಿರ್ಮಾಪಕ ಉಮೇಶ್ ಬಣಕರ್, ಮಾಜಿ ಅಧ್ಯಕ್ಷ ಥಾಮಸ್ ಡಿ ಸೋಜಾ, ನಿರ್ಮಾಪಕ ಗಿರೀಶ್, ಕಲಾವಿದರ ಸಂಘದ ದೊಡ್ಡಣ್ಣ, ನಿರ್ಮಾಪಕರದ ರಾಕ್‍ಲೈನ್ ವೆಂಕಟೇಶ ಅವರು ಭಾಗವಹಿಸಿದ್ದರು. ಅಲ್ಲದೇ ನಟಿಯಾರದ ಪೂಜಾಗಾಂಧಿ, ಪ್ರಮೀಳಾ ಜೊಷಾಯ್, ರೂಪ ಅಯ್ಯರ್ ಸೇರಿದಂತೆ ಶೃತಿ ಅವರೊಂದಿಗೆ ಕವಿತಾ ಲಂಕೇಶ್ ಆಗಮಿಸಿದ್ದರು. ಅರ್ಜುನ್ ಸರ್ಜಾ ಅವರೊಂದಿಗೆ ಅವರ ಮಾವ, ನಟ ರಾಜೇಶ್ ಹಾಗೂ ಧ್ರುವ ಸರ್ಜಾ ಆಗಮಿಸಿದ್ದರು.

    ಸಭೆಗೂ ಮುನ್ನವೇ ನಟಿ ಶೃತಿ ಹರಿಹರನ್ ಸಭೆಯನ್ನು ಸಂಧಾನ ಸಭೆ ಅಲ್ಲ. ಸಂಧಾನ ಮಾಡಿಕೊಳ್ಳುವ ಕುರಿತು ಯಾವುದೇ ಯೋಚನೆ ಇಲ್ಲ. ನ್ಯಾಯಾಲಯದ ಮೂಲಕವೇ ಈ ಕುರಿತು ಹೋರಾಟ ನಡೆಸುವುದಾಗಿ ತಿಳಿಸಿದ್ದರು. ಅಲ್ಲದೇ ವಾಣಿಜ್ಯ ಮಂಡಳಿಯ ಕೆ. ಮಂಜು ಅವರು ಸ್ಪಷ್ಟನೆ ನೀಡಿ ಸದ್ಯ ನಡೆಯುತ್ತಿರುವ ಸಭೆ ಕೇವಲ ವಿಚಾರಣೆ ಸಭೆ ಅಷ್ಟೇ. ರಾಜೇಶ್ ಅವರು ವಾಣಿಜ್ಯ ಮಂಡಳಿಗೆ ನೀಡಿದ್ದ ದೂರಿನ ಅನ್ವಯ ವಿಚಾರಣೆ ನಡೆಯುತ್ತದೆ ಎಂದು ತಿಳಿಸಿದ್ದರು.

    ಶೃತಿ ಹರಿಹರನ್ ಆರೋಪಕ್ಕೆ ಈಗಾಗಲೇ ಕಾನೂನು ಹೋರಾಟ ಮಾಡಿರುವ ನಟ ಅರ್ಜುನ್ ಸರ್ಜಾ ಅವರು ದೂರು ನೀಡಿದ್ದು, 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅಲ್ಲದೇ ಸೈಬರ್ ಕ್ರೈಂ ಗೂ ದೂರು ನೀಡಿದ್ದು, ತಮ್ಮ ಇಮೇಲ್ ಹ್ಯಾಕ್ ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ಪ್ರಮುಖವಾಗಿ ಅನಾಮಿಕ ವ್ಯಕ್ತಿಯೊಬ್ಬ ಶ್ರುತಿ ಅವರ ಆರೋಪ ತಣ್ಣಗಾಗುವಂತೆ ಮಾಡಲು 1.5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=vAyM2M2dcHY