Tag: ರುಸ್ತುಂ

  • ಮೈಸೂರಿನಲ್ಲಿ ‘ರುಸ್ತುಂ’ ಚಿತ್ರ ವೀಕ್ಷಿಸಿದ ಶಿವಣ್ಣ

    ಮೈಸೂರಿನಲ್ಲಿ ‘ರುಸ್ತುಂ’ ಚಿತ್ರ ವೀಕ್ಷಿಸಿದ ಶಿವಣ್ಣ

    ಮೈಸೂರು: ಅರಮನೆ ನಗರಿ ಮೈಸೂರಿನ ಶಾಂತಲಾ ಚಿತ್ರಮಂದಿರದಲ್ಲಿ ನಟ ಶಿವರಾಜ್ ಕುಮಾರ್ ಅವರು ತಾವು ಅಭಿನಯಸಿದ್ದ ‘ರುಸ್ತುಂ’ ಚಿತ್ರವನ್ನು ಪತ್ನಿ ಗೀತಾ ಅವರೊಂದಿಗೆ ವೀಕ್ಷಿಸಿದ್ದಾರೆ.

    ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಇದ್ದ ಕಾರಣ ಶುಕ್ರವಾರ ಸಿನಿಮಾ ತೆರೆ ಕಂಡರೂ ಶಿವರಾಜ್ ಕುಮಾರ್ ಅವರಿಗೆ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಶನಿವಾರ ಮೈಸೂರಿನ ಶಾಂತಲಾ ಚಿತ್ರಮಂದಿರದಲ್ಲಿ ಪತ್ನಿ ಗೀತಾ ಜೊತೆ ಶಿವಣ್ಣ ಸಿನಿಮಾ ವೀಕ್ಷಿಸಿದರು.

    ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶಿವರಾಜ್ ಕುಮಾರ್, ‘ರುಸ್ತುಂ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಸ್ಕ್ರೀನ್ ಪ್ಲೇ ವೇಗವಾಗಿ ಇರುವುದು ಜನರಿಗೆ ಇಷ್ಟವಾಗಿದೆ. ಇದು ರವಿವರ್ಮಾ ಅವರ ಮೊದಲ ನಿರ್ದೇಶನದ ಚಿತ್ರ ಎಂದು ಅನ್ನಿಸುತ್ತಿಲ್ಲ. ಅಷ್ಟು ಚೆನ್ನಾಗಿ ಚಿತ್ರದ ವೇಗವಿದೆ ಎಂದರು.

    ಇದೇ ವೇಳೆ ತಮ್ಮ ಚಿತ್ರಗಳು ಪರಭಾಷೆಗೆ ರಿಮೇಕ್ ಆಗುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಶಿವರಾಜ್ ಕುಮಾರ್, ನನ್ನ ಹಲವು ಚಿತ್ರಗಳು ಪರಭಾಷೆಗೆ ರಿಮೇಕ್ ಆಗಿವೆ. ಈಗ ‘ರುಸ್ತುಂ’ ಚಿತ್ರವೂ ರಿಮೇಕ್ ಆಗುತ್ತದೆ. ಇದು ಸಂತೋಷ ತರುವ ವಿಚಾರವಾಗಿದೆ. ಅಭಿಮಾನಿಗಳ ಜೋಶ್‍ನಿಂದ ನನಗೆ ಸದಾ ಎನರ್ಜಿ ಬರುತ್ತಿದೆ. ಅದೇ ಶಕ್ತಿ ಚಿತ್ರದ ಪಾತ್ರದಲ್ಲಿ ಕಾಣುತ್ತದೆ ಎಂದು ಹೇಳಿದ್ದಾರೆ.

  • ಅಲ್ಲಿ ರೌಡಿ ಬೇಬಿ, ಇಲ್ಲಿ ಪೊಲೀಸ್ ಬೇಬಿ!

    ಅಲ್ಲಿ ರೌಡಿ ಬೇಬಿ, ಇಲ್ಲಿ ಪೊಲೀಸ್ ಬೇಬಿ!

    ತಮಿಳಿನ ಮಾರಿ-2 ಚಿತ್ರದ ರೌಡಿ ಬೇಬಿ ಹಾಡು ಸೃಷ್ಟಿಸಿರುವ ಸಂಚಲನವೇನು ಸಣ್ಣ ಮಟ್ಟದ್ದಲ್ಲ. ರಾಜ್ಯ ಭಾಷೆಗಳ ಗಡಿರೇಖೆ ಮೀರಿಕೊಂಡು ಈ ಹಾಡು ಎಲ್ಲ ಪ್ರೇಕ್ಷಕರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ದಾಖಲೆ ಮಟ್ಟದ ವೀಕ್ಷಣೆಗೂ ಈ ಹಾಡು ಭಾಜನವಾಗಿದೆ. ಇದೀಗ ಕನ್ನಡದಲ್ಲಿಯೂ ಅದೇ ಧಾಟಿಯದ್ದೊಂದು ಹಾಡು ತಯಾರಾಗಿ ನಿಂತಿದೆ. ಇಂದು ಮೇ 14ರ ಮಂಗಳವಾರ ರುಸ್ತುಂ ಚಿತ್ರದ ಪೊಲೀಸ್ ಬೇಬಿ ಎಂಬ ಹಾಡು ಬಿಡುಗಡೆಯಾಗಲಿದೆ.

    ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ರುಸ್ತುಂ ಚಿತ್ರವೀಗ ಪ್ರೇಕ್ಷಕರ ಆಸಕ್ತಿಯ ಕೇಂದ್ರ ಬಿಂದು. ಯಾಕೆಂದರೆ ಈ ಸಿನಿಮಾ ಶಿವಣ್ಣನ ವೃತ್ತಿ ಜೀವನದಲ್ಲಿಯೇ ಮೈಲಿಗಲ್ಲಾಗುವಂಥಾ ಹೂರಣ ಹೊಂದಿದೆಯೆಂಬ ಮಾತು ಎಲ್ಲೆಡೆ ಕೇಳಿ ಬರಲಾರಂಭಿಸಿದೆ. ಸೂಪರ್ ಕಾಪ್ ಆಗಿ ಅಬ್ಬರಿಸಿರೋ ಶಿವಣ್ಣನ ಫೋಟೋಗಳು ಈಗಾಗಲೇ ಟ್ರೆಂಡ್ ಸೆಟ್ ಮಾಡಿವೆ.

    ಇನ್ನೇನು ಬಿಡುಗಡೆಗೆ ಅಣಿಗೊಳ್ಳುತ್ತಿರುವ ಈ ಚಿತ್ರದ ವಿಶೇಷವಾದ ಹಾಡೊಂದನ್ನು ಸಿದ್ಧಗೊಳಿಸಲಾಗಿದೆ. ಪೊಲೀಸ್ ಬೇಬಿ ಎಂಬ ಈ ಹಾಡು ತಮಿಳಿನ ರೌಡಿ ಬೇಬಿ ಸಾಂಗಿನ ಧಾಟಿಯಲ್ಲಿಯೇ ಇರಲಿದೆಯಂತೆ. ತಮಿಳಿನಲ್ಲಿ ರೌಡಿ ಬೇಬಿ ಹಾಡು ಸಾಹಿತ್ಯ, ಟಪ್ಪಾಂಗುಚ್ಚಿ ಶೈಲಿಯ ಸಂಗೀತ ಮತ್ತು ಎಂಥವರನ್ನೂ ಎದ್ದು ಕುಣಿಯುವಂತೆ ಮಾಡುವಂಥಾ ಕೊರಿಯೋಗ್ರಫಿ ಮೂಲಕವೇ ಪ್ರಸಿದ್ಧಿ ಪಡೆದಿತ್ತು.

    ರುಸ್ತುಂ ಚಿತ್ರದ ರೌಡಿ ಬೇಬಿ ಹಾಡನ್ನೂ ಕೂಡಾ ಇಂಥಾದ್ದೇ ಸಮ್ಮೋಹಕ ಶೈಲಿಯಲ್ಲಿ ರೂಪಿಸಲಾಗಿದೆಯಂತೆ. ಹೇಳಿಕೇಳಿ ಶಿವರಾಜ್ ಕುಮಾರ್ ಡ್ಯಾನ್ಸ್ ಮಾಡೋದರಲ್ಲಿ ಎತ್ತಿದ ಕೈ. ಅವರಿಲ್ಲಿ ಯುವಕರೂ ನಾಚುವಂಥಾ ಸ್ಟೆಪ್ಸ್ ಹಾಕಿದ್ದಾರಂತೆ. ಇವರಿಗೆ ಶ್ರದ್ಧಾ ಶ್ರೀನಾಥ್ ಕೂಡಾ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡು ಇಂದೇ ಪ್ರೇಕ್ಷಕರನ್ನು ತಲುಪಲಿದೆ.

  • ಸಮಂತಾ ಸ್ಥಾನ ಆಕ್ರಮಿಸಿಕೊಂಡರಾ ಕನ್ನಡತಿ ಶ್ರದ್ಧಾ?

    ಸಮಂತಾ ಸ್ಥಾನ ಆಕ್ರಮಿಸಿಕೊಂಡರಾ ಕನ್ನಡತಿ ಶ್ರದ್ಧಾ?

    ನ್ನಡ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದುಕೊಂಡ ನಟಿಯರು ಪರಭಾಷೆಗಳಿಗೆ ಹೋದ ಸುದ್ದಿಗಳು ಆಗಾಗ ಹೊರ ಬೀಳುತ್ತಲೇ ಇರುತ್ತವೆ. ಆದರೆ ಹಾಗೆ ಬೇರೆ ಭಾಷೆಗಳಿಗೆ ಹೋಗಿ ನೆಲೆ ನಿಂತು ಆ ಮೂಲಕವೇ ಸುದ್ದಿ ಮಾಡುವವರು ಕೊಂಚ ವಿರಳ. ಇದೀಗ ಕನ್ನಡದಲ್ಲಿ ಪ್ರತಿಭಾವಂತ ನಟಿಯಾಗಿ ಹೆಸರು ಮಾಡಿರೋ ಶ್ರದ್ಧಾ ಶ್ರೀನಾಥ್ ಆ ವಿರಳರ ಸಾಲಿಗೆ ಸೇರಿಕೊಂಡಂಥಾ ಸುದ್ದಿಯೊಂದು ಹರಿದಾಡಲು ಶುರುವಿಟ್ಟಿದೆ!

    ಶ್ರದ್ಧಾ ಶ್ರೀನಾಥ್ ಇದೀಗ ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದಾರೆ. ಶ್ರದ್ಧಾ ನಾಯಕಿಯಾಗಿ ಅಭಿನಯಿಸಿದ್ದ ಜೆರ್ಸಿ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರಲ್ಲಿನ ಪಾತ್ರ, ನಟನೆ ಕಂಡು ತೆಲುಗು ಪ್ರೇಕ್ಷಕರೂ ಶ್ರದ್ಧಾ ಅವರನ್ನು ಮೆಚ್ಚಿ ಒಪ್ಪಿಕೊಂಡಿದ್ದಾರೆ.

    ಹೀಗೆ ಜೆರ್ಸಿ ಚಿತ್ರ ಗೆಲುವಿನತ್ತ ನಾಗಾಲೋಟ ಆರಂಭಿಸಿರುವ ಘಳಿಗೆಯಲ್ಲಿಯೇ ಶ್ರದ್ಧಾ ತೆಲುಗಿನಲ್ಲಿ ಮತ್ತಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಈಗ ಹರಿದಾಡುತ್ತಿರೋ ಸುದ್ದಿಯೊಂದನ್ನು ಆಧರಿಸಿ ಹೇಳೋದಾದರೆ ಶ್ರದ್ಧಾ ವಿಶಾಲ್ ನಟನೆಯ ಚಿತ್ರವೊಂದಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿಶಾಲ್ ಈ ಹಿಂದೆ ಅಭಿಮನ್ಯುಡು ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಅಭಿಮನ್ಯುಡು ಎಂಬ ಆ ಚಿತ್ರ ಹಿಟ್ ಆಗಿತ್ತು.

    ಇದೀಗ ಆ ಚಿತ್ರದ ಎರಡನೇ ಭಾಗಕ್ಕೆ ತಯಾರಿ ಆರಂಭವಾಗಿದೆ. ಮೊದಲ ಭಾಗದಲ್ಲಿ ವಿಶಾಲ್ ಗೆ ಜೋಡಿಯಾಗಿ ಸಮಂತಾ ನಟಿಸಿದ್ದರು. ಆದರೆ ಈಗ ಶ್ರದ್ಧಾ ಸಮಂತಾ ಜಾಗವನ್ನು ಆವರಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಶ್ರದ್ಧಾ ಸಮಂತಾ ವಿರುದ್ಧ ಅದೇನೋ ಮಾತಾಡಿದ್ದಾರೆಂದು ಅಭಿಮಾನಿಗಳು ಕೆಂಡ ಕಾರಿದ್ದರು. ಈಗ ನೋಡಿದರೆ ಸಮಂತಾ ಸ್ಥಾನವನ್ನೇ ಶ್ರದ್ಧಾ ಆವರಿಸಿಕೊಂಡಿದ್ದಾರೆ.

    ಒಟ್ಟಾರೆಯಾಗಿ ಶ್ರದ್ಧಾ ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ಏಕಕಾಲದಲ್ಲಿಯೇ ಬ್ಯುಸಿಯಾಗಿದ್ದಾರೆ. ಅವರು ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಅದಾಗಲೇ ಕನ್ನಡದಲ್ಲಿ ಮತ್ತೊಂದಷ್ಟು ಅವಕಾಶಗಳನ್ನು ಪಡೆದುಕೊಂಡಿರೋ ಶ್ರದ್ಧಾ ತೆಲುಗಿನಲ್ಲಿಯೂ ಬಿಡುವಿಲ್ಲದಂತಾಗಿದ್ದಾರೆ.

  • ಉಪ್ಪಿ, ಶಿವಣ್ಣ ಸಿನೆಮಾ ಒಂದೇ ದಿನ ರಿಲೀಸ್?

    ಉಪ್ಪಿ, ಶಿವಣ್ಣ ಸಿನೆಮಾ ಒಂದೇ ದಿನ ರಿಲೀಸ್?

    ಬೆಂಗಳೂರು: ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ತೆರೆ ಕಾಣುವಂಥಾ ಅಪರೂಪದ ವಾತಾವರಣ ಆಗಾಗ ಸೃಷ್ಟಿಯಾಗುತ್ತಿರುತ್ತದೆ. ಕೆಲ ಸಂದರ್ಭದಲ್ಲಿದ್ದು ಸ್ಟಾರ್ ವಾರ್ ಸ್ವರೂಪ ಪಡೆದುಕೊಂಡರೆ, ಮತ್ತೆ ಕೆಲ ಘಳಿಗೆಗಳಲ್ಲಿ ಆರೋಗ್ಯವಂತ ಸ್ಪರ್ಧೆಗೂ ಅನುವು ಮಾಡಿ ಕೊಡುತ್ತದೆ. ಅಂಥಾದ್ದೇ ಒಂದು ಆರೋಗ್ಯಕರ ಕದನಕ್ಕೆ ಜೂನ್ 14ರಂದು ಮುಹೂರ್ತ ನಿಗದಿಯಾಗಿದೆ!

    ಜೂನ್ ಹದಿನಾಲಕ್ಕರಂದು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರ ಬಿಡುಗಡೆಯಾಗುತ್ತಿರೋದು ಗೊತ್ತೇ ಇದೆ. ಆರ್ ಚಂದ್ರು ನಿರ್ದೇಶನದ ಈ ಚಿತ್ರ ಈಗಾಗಲೇ ಒಂದಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಇದನ್ನು ಕಣ್ತುಂಬಿಕೊಳ್ಳಲು ಉಪ್ಪಿ ಅಭಿಮಾನಿಗಳೆಲ್ಲ ಕಾತರರಾಗಿದ್ದಾರೆ. ಇದೀಗ ಅದೇ ದಿನ ಶಿವಣ್ಣನ ರುಸ್ತುಂ ಚಿತ್ರವೂ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಅಷ್ಟಕ್ಕೂ ರುಸ್ತುಂ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಗಳೇ ಇವೆ. ಸಾಹಸ ನಿರ್ದೇಶಕರಾಗಿದ್ದ ರವಿವರ್ಮ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದರಲ್ಲಿ ಶಿವಣ್ಣನ ಪಾತ್ರ, ಉಳಿಕೆ ತಾರಾಗಣವೆಲ್ಲವೂ ಡಿಫರೆಂಟಾಗಿಯೇ ಇದೆ. ರಚಿತಾ ರಾಮ್, ಮಯೂರಿ, ಸೋನು ಗೌಡ ನಾಯಕಿಯರಾಗಿ ನಟಿಸಿದ್ದಾರೆ. ಶಿವಣ್ಣನ ವೃತ್ತಿಜೀವನದ ವಿಶಿಷ್ಟವಾದ ಚಿತ್ರವಾಗಿ ರುಸ್ತುಂ ನೆಲೆಯಾಗಲಿದೆ ಎಂಬ ಮಾತುಗಳೂ ಇವೆ. ಹೀಗೆ ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ ಎಂದರೆ ಯಾರಿಗಾದರೂ ಕುತೂಹಲ ಇದ್ದೇ ಇರುತ್ತೆ.

    ಉಪೇಂದ್ರ ಮತ್ತು ಶಿವಣ್ಣ ಸ್ಯಾಂಡಲ್ ವುಡ್‍ನ ಜೀವದ ಗೆಳೆಯರು. ಉಪೇಂದ್ರ ಅವರಂತೂ ಶಿವಣ್ಣ ಏನಾದರೂ ಹುಡುಗಿಯಾಗಿದ್ದರೆ ಪ್ರಪೋಸ್ ಮಾಡಿ ಮದುವೆಯಾಗಿ ಬಿಡುವಂಥಾ ಮಾತುಗಳನ್ನು ಬಹಿರಂಗವಾಗಿಯೇ ಹೇಳಿದ್ದರು. ಶಿವಣ್ಣನ ಮೇಲೆ ಅಂಥಾ ಪ್ರೀತಿ ಇಟ್ಟುಕೊಂಡಿರೋ ಉಪ್ಪಿ ಅವರ ಚಿತ್ರದೊಟ್ಟಿಗೇ ತಮ್ಮ ಚಿತ್ರವೂ ಬಿಡುಗಡೆಯಾಗುತ್ತಿರೋದರ ಬಗ್ಗೆ ಥ್ರಿಲ್ ಆಗಿದ್ದಾರಂತೆ.

  • ಹ್ಯಾಟ್ರಿಕ್ ಹೀರೋ ಜತೆ ಸೂಪರ್ ಸ್ಟಾರ್ ನಾಗಾರ್ಜುನ್ ನಟಿಸಲ್ವಂತೆ..!

    ಹ್ಯಾಟ್ರಿಕ್ ಹೀರೋ ಜತೆ ಸೂಪರ್ ಸ್ಟಾರ್ ನಾಗಾರ್ಜುನ್ ನಟಿಸಲ್ವಂತೆ..!

    ಬೆಂಗಳೂರು: ಸೂರಿ ನಿರ್ದೇಶನದ ಟಗರು ಚಿತ್ರದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೆ ಖಡಕ್ ಪೊಲೀಸ್ ಅಧಿಕಾರಿಯಾಗಿ ರುಸ್ತುಂ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಗೊತ್ತಿರದ ವಿಚಾರವೇನಲ್ಲ. ಟಗರು ಚಿತ್ರದಲ್ಲಿ ಶಿವಣ್ಣನಿಗೆ ಡಾಲಿ ಧನಂಜಯ್, ಚಿಟ್ಟೆ ವಸಿಷ್ಠ ಸಿಂಹ ವಿಲನ್ ಗಳಾಗಿ ಠಕ್ಕರ್ ಕೊಟ್ಟಿದ್ರು. ರುಸ್ತುಂ ಚಿತ್ರದಲ್ಲಿಯೂ ವಿಲನ್ ಗಳದ್ದೇ ಹಾವಳಿಯಿದ್ದು ಶಿವಣ್ಣನಿಗೆ ಎದುರಾಳಿಯಾಗಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ನಟಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತಾಗಿದ್ದರೆ ತೆಲುಗಿನ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ್ ಹಾಗೂ ಶಿವಣ್ಣನ ನಡುವಿನ ಕಾಳಗವನ್ನೇ ನೋಡಬಹುದಾಗಿತ್ತು. ಆದ್ರೆ ಅಕ್ಕಿನೇನಿ ನಾಗಾರ್ಜುನ್ ಶಿವರಾಜ್ ಕುಮಾರ್ ಜತೆ ನಟಿಸೋದಿಲ್ಲ ಅಂತಾ ಹೇಳಿದ್ದಾರಂತೆ..!

    ಅಕ್ಕಿನೇನಿ ರಿಜೆಕ್ಟ್ ಮಾಡೋದಕ್ಕೆ ಕಾರಣವೇನು?
    ಶಿವಣ್ಣ ಮೊದಲೇ ಮಾಸ್ ಹೀರೋ. ಅಲ್ಲದೇ ರುಸ್ತುಂ ಹೇಳಿ ಕೇಳಿ ಮಾಸ್ ಎಂಟರ್ ಟೈನಿಂಗ್ ಸಿನಿಮಾ. ಆಕ್ಷನ್ ಓರಿಯೆಂಟೆಡ್ ಸಿನಿಮಾ ಕೂಡ. ಶಿವಣ್ಣ ಖಡಕ್ಕಾಗಿ ತಮ್ಮ ಖದರ್ ತೋರಿಸ್ತಾರೆ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ಹಾಗಿರೋವಾಗ ಅವರ ಎದುರಿಗೆ ತೊಡೆ ತಟ್ಟಿ ನಿಲ್ಲೋ ವಿಲನ್ ಅವರಿಗೆ ಸರಿ ಸಮನಾಗಿ ಇರಬೇಕಲ್ವಾ. ಯಾರೋ ನಟಿಸಿದ್ರೆ ಆ ಪಾತ್ರಕ್ಕೆ ತೂಕ ಇರೋದಿಲ್ಲ ಅಂದರಂತೆ.

    ನಿರ್ದೇಶಕ ರವಿ ವರ್ಮ ಏನ್ ಹೇಳ್ತಾರೆ..?
    ಈ ಮೊದಲು ರುಸ್ತುಂ ನಿರ್ದೇಶಕ ರವಿ ವರ್ಮ ಶಿವಣ್ಣನಿಗೆ ಎದುರಾಳಿಯಾಗಿ ನಾಗಾರ್ಜುನ ಮ್ಯಾಚ್ ಆಗ್ತಾರೆ ಅಂತ ಯೋಚಿಸಿ ಅವರನ್ನು ಅಪ್ರೋಚ್ ಮಾಡಿದ್ದಂತೆ. ಪ್ರಾರಂಭದಲ್ಲಿ ಖಂಡಿತಾ ಮಾಡ್ತೀನಿ ಅಂತ ನಾಗಾರ್ಜುನ್, ಆಮೇಲೆ ಪಾತ್ರದ ಆಳ ತಿಳಿದ ಮೇಲೆ ನಟಿಸಲು ನೋ ಎಂದಿದ್ದಾರಂತೆ. ಆಮೇಲೆ ಅನಿಲ್ ಕಪೂರ್ ಸೆಲೆಕ್ಟ್ ಮಾಡಿದ್ರೂ ಕಾರಣಾಂತರಗಳಿಂದ ಅವರೂ ರಿಜೆಕ್ಟ್ ಆಗಿ ಅಂತಿಮವಾಗಿ ವಿವೇಕ್ ಒಬೇರಾಯ್ ಅವರನ್ನು ಫೈನಲ್ ಮಾಡಲಾಗಿದೆಯಂತೆ.

  • ವಿವೇಕ್ ಒಬೆರಾಯ್ ಜೊತೆಗಿನ ಫೋಟೋ ರಚಿತಾ ಫೇವರಿಟ್!

    ವಿವೇಕ್ ಒಬೆರಾಯ್ ಜೊತೆಗಿನ ಫೋಟೋ ರಚಿತಾ ಫೇವರಿಟ್!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಯಶಸ್ಸಿನ ನಾಗಾಲೋಟದಲ್ಲಿರೋ ನಟಿ ರಚಿತಾ ರಾಮ್. ಕಮರ್ಶಿಯಲ್ ಚಿತ್ರಗಳಲ್ಲಿಯೂ ಭಾರೀ ಬೇಡಿಕೆ ಹಿಂದಿರೋ ಘಳಿಗೆಯಲ್ಲಿಯೇ ಭಿನ್ನ ಬಗೆಯ ಚಿತ್ರಗಳಲ್ಲಿಯೂ ನಟಿಸುತ್ತಿರುವ ರಚಿತಾ ರಾಮ್‍ಗೆ ಇದೀಗ ತಾವೇ ನಟಿಸಿರೋ ಚಿತ್ರವೊಂದರ ಸೀನು ಮತ್ತು ಫೋಟೋವೊಂದು ತುಂಬಾ ಫೇವರಿಟ್ ಆಗಿದೆ. ಮತ್ತದನ್ನು ರಚಿತಾ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

    ಬಹುಶಃ ಡಬ್ಬಿಂಗ್ ಹಂತದಲ್ಲಿ ಸೆರೆ ಹಿಡಿದ ಚಿತ್ರವೊಂದನ್ನು ರಚಿತಾ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಿದ್ದಾರೆ. ಜೊತೆಗೆ ಇದು ತುಂಬಾ ಮುದ್ದು ಮುದ್ದಾಗಿರುವ, ತನಗೆ ತುಂಬಾ ಇಷ್ಟವಾದ ಫೋಟೋ ಅಂತಲೂ ರಚಿತಾ ಹೇಳಿಕೊಂಡಿದ್ದಾರೆ.

    ಇದು ರಚಿತಾ ರಾಮ್ ನಟಿಸಿರೋ ರುಸ್ತುಂ ಚಿತ್ರದ ದೃಶ್ಯ. ಡಬ್ಬಿಂಗ್ ಹಂತದಲ್ಲಿ ರಚಿತಾ ಸೆರೆ ಹಿಡಿದಿರೋ ಈ ಚಿತ್ರದಲ್ಲಿ ವಿವೇಕ್ ಒಬೆರಾಯ್ ರಚಿತಾ ಕೆನ್ನೆ ಸವರಿ ಮುದ್ದು ಮಾಡುತ್ತಿರೋವಂಥಾ ರೊಮ್ಯಾಂಟಿಕ್ ಸೀನಿದೆ. ಇದು ಇದುವರೆಗಿನ ಅಷ್ಟೂ ಚಿತ್ರಗಳಲ್ಲಿ ರಚಿತಾಗೆ ತುಂಬಾ ಹಿಡಿಸಿರೋ ಚಿತ್ರವಂತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿವರಾಜ್ ಕುಮಾರ್ ಚಿತ್ರಕ್ಕೆ ರಚಿತಾ ರಾಮ್ ನಾಯಕಿ?

    ಶಿವರಾಜ್ ಕುಮಾರ್ ಚಿತ್ರಕ್ಕೆ ರಚಿತಾ ರಾಮ್ ನಾಯಕಿ?

    ಅಯೋಗ್ಯ ಚಿತ್ರದ ಭರ್ಜರಿ ಯಶಸ್ಸಿನ ಖುಷಿಯಲ್ಲಿರುವ ರಚಿತಾ ರಾಮ್ ಅವರಿಗೆ ಇನ್ನೊಂದಷ್ಟು ಒಳ್ಳೆಯ ಅವಕಾಶಗಳು ಹುಡುಕಿ ಬರಲಾರಂಭಿಸಿವೆ. ಅತ್ತ ಸೀತಾರಾಮ ಕಲ್ಯಾಣ, ಮತ್ತೊಂದೆಡೆ ರುಸ್ತುಂ ಚಿತ್ರದಲ್ಲಿನ ಪಾತ್ರದಲ್ಲಿ ತೊಡಗಿಸಿಕೊಂಡಿರೋ ರಚಿತಾ ಇದೀಗ ಶಿವಣ್ಣನ ಚಿತ್ರವೊಂದಕ್ಕೆ ನಾಯಕಿಯಾಗಿದ್ದಾರೆ.

    ಶಿವರಾಜ್ ಕುಮಾರ್ ಈಗ ಸಣ್ಣ ವಿರಾಮವೂ ಇಲ್ಲದಷ್ಟು ಬ್ಯುಸಿಯಾಗಿದ್ದಾರೆ. ರುಸ್ತುಂ, ದ್ರೋಣ ಸೇರಿದಂತೆ ಅವರ ಕೈಲಿರೋ ಚಿತ್ರಗಳ ಪಟ್ಟಿ ದೊಡ್ಡದಿದೆ. ಅದಾಗಲೇ ಅವರು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ದ್ವಾರಕೀಶ್ ಚಿತ್ರ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರವನ್ನು ಪಿ ವಾಸು ನಿರ್ದೇಶನ ಮಾಡಲಿದ್ದಾರೆ.

    ಈ ಚಿತ್ರಕ್ಕೆ ಇದೀಗ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ. ಶಿವಣ್ಣನ ಜೊತೆ ನಟಿಸಲು ಥ್ರಿಲ್ ಆಗಿಯೇ ಒಪ್ಪಿಕೊಂಡಿರೋ ರಚಿತಾ ಈ ಬಗ್ಗೆ ಹೊರ ಬೀಳಲಿರೋ ಅಧಿಕೃತ ಸುದ್ದಿಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಈ ಚಿತ್ರ ಈ ವರ್ಷವೇ ಆರಂಭವಾಗೋದಿಲ್ಲ. ಶಿವರಾಜ್ ಕುಮಾರ್ ಈಗ ಒಪ್ಪಿಕೊಂಡಿರೋ ಚಿತ್ರಗಳನ್ನು ಮುಗಿಸಿಕೊಂಡ ನಂತರ ಹೊಸ ವರ್ಷದ ಆರಂಭದಲ್ಲಿಯೇ ಇನ್ನೂ ಹೆಸರಿಡದ ಈ ಚಿತ್ರ ಚಿತ್ರೀಕರಣ ಆರಂಭಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿವಣ್ಣನ ಬಗ್ಗೆ ವಿವೇಕ್ ಒಬೇರಾಯ್ ಹೇಳಿದ್ದೇನು?

    ಶಿವಣ್ಣನ ಬಗ್ಗೆ ವಿವೇಕ್ ಒಬೇರಾಯ್ ಹೇಳಿದ್ದೇನು?

    ಬೆಂಗಳೂರು: ಶಿವರಾಜ್‍ಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ನಟಿಸಿದ್ದಾರೆ. ಇದು ಕೆಲ ದಿನಗಳ ಹಿಂದೆಯೇ ಜಾಹೀರಾಗಿರುವ ವಿಚಾರ. ಇದೀಗ ಅತಿಥಿ ಪಾತ್ರದಲ್ಲಿ ವಿವೇಕ್ ತಮ್ಮ ಭಾಗದ ಚಿತ್ರೀಕರಣವನ್ನೂ ಮುಗಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಮತ್ತು ತಮ್ಮ ವರ್ಷಾಂತರಗಳ ನಂಟಿನ ಬಗ್ಗೆ ಇಂಟರೆಸ್ಟಿಂಗ್ ಆದ ವಿಚಾರವನ್ನೂ ಅವರು ಹೇಳಿಕೊಂಡಿದ್ದಾರೆ!

    ರುಸ್ತುಂ ಚಿತ್ರದ ಮೂಲಕ ಮೊದಲ ಸಲ ವಿವೇಕ್ ಒಬೇರಾಯ್ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಶಿವರಾಜ್ ಕುಮಾರ್ ಅವರ ಜೊತೆ ನಟಿಸೋ ಆಫರ್ ಅವರಿಗೆ ಸಿಕ್ಕಿದ್ದದ್ದು ಇದೇ ಮೊದಲ ಸಲವಲ್ಲ. ಯಾಕೆಂದರೆ ದಶಕಗಳ ಹಿಂದೆಯೇ ಅಂಥಾದ್ದೊಂದು ಆಫರ್ ಖುದ್ದು ಶಿವಣ್ಣನ ಕಡೆಯಿಂದಲೇ ಅವರಿಗೆ ಬಂದಿತ್ತಂತೆ.

    ಶಿವರಾಜ್ ಕುಮಾರ್ ಅವರನ್ನು ವಿವೇಕ್ ಒಬೇರಾಯ್ ಮುಂಬೈನ ಫ್ಯಾಮಿಲಿ ಪ್ರೋಗ್ರಾಂ ಒಂದರಲ್ಲಿ ಭೇಟಿ ಮಾಡಿದ್ದು ವರ್ಷಾಂತರಗಳ ಹಿಂದೆ. ಆಗ ವಿವೇಕ್ ಗೆ ಹದಿನೇಳು ವರ್ಷ. ಆಗ ವಿವೇಕ್ ಅವರನ್ನು ಶಿವಣ್ಣನ ಜೊತೆ ಯಾರೋ ಮಾತಾಡಿಸಿದ್ದರಂತೆ. ಚೂಟಿಯಾಗಿದ್ದ ಇವರನ್ನು ತಮ್ಮ ಚಿತ್ರದಲ್ಲಿ ನಟಿಸುವಂತೆ ಖುದ್ದು ಶಿವಣ್ಣನೇ ಹೇಳಿದ್ದರಂತೆ. ಅದಾದ ನಂತರ ವಿವೇಕ್ ಒಬೇರಾಯ್ ನಾಯಕ ನಟನಾಗಿ ಬಾಲಿವುಡ್‍ನಲ್ಲಿಯೂ ಮಿಂಚಿದ್ದರು. ಅವರು ಕನ್ನಡ ಚಿತ್ರಗಳಲ್ಲಿ ನಟಿಸೋ ಬಗ್ಗೆ ಆಗಾಗ ಗುಲ್ಲೇಳುತ್ತಿದ್ದವಾದರೂ ಅದಕ್ಕೆ ಅವಕಾಶ ಕೂಡಿ ಬಂದಿರಲಿಲ್ಲ.

    ಆದರೆ ಇದೀಗ ದಶಕಗಳ ಹಿಂದೆ ತಮ್ಮೊಂದಿಗೆ ನಟಿಸುವಂತೆ ಹೇಳಿದ್ದ ಅದೇ ಶಿವಣ್ಣನ ಜೊತೆ ನಟಿಸೋ ಮೂಲಕವೇ ವಿವೇಕ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ರುಸ್ತುಂ ಸೆಟ್ಟಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನೂ ಭೇಟಿಯಾದ ಸಂದರ್ಭದಲ್ಲಿ ವಿವೇಕ್ ಒಬೇರಾಯ್ ಈ ರಸವತ್ತಾದ ವಿಚಾರವನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹರಿಕೃಷ್ಣ ನಾರಾಯಣಿ ಮಯೂರಿ!

    ಹರಿಕೃಷ್ಣ ನಾರಾಯಣಿ ಮಯೂರಿ!

    ಬೆಂಗಳೂರು: ಕೃಷ್ಣಲೀಲಾ ಚಿತ್ರದ ನಟನೆಯ ಮೂಲಕವೇ ಪ್ರೇಕ್ಷಕರ ಮನಗೆದ್ದಿರುವ ಮಯೂರಿಯ ಮುಂದೀಗ ಅವಕಾಶಗಳ ಒಡ್ಡೋಲಗ. ಮೂರ್ನಾಲ್ಕು ಚಿತ್ರಗಳ ಕೈಲಿರುವಾಗಲೇ ಮಯೂರಿಯೀಗ ಮತ್ತೊಂದು ಚಿತ್ರಕ್ಕೂ ಸಹಿ ಹಾಕಿದ್ದಾರೆ!

    ಇದೀಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರೋ ಮಯೂರಿ ನಟಿಸಲಿರೋ ಹೊಸಾ ಚಿತ್ರ `ಹರಿಕೃಷ್ಣ ನಾರಾಯಣಿ’. ಈ ಚಿತ್ರವನ್ನು ಡಾ. ಗಿರಿಧರ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದಲ್ಲಿ ಮಯೂರಿ ಬಹುಮುಖ್ಯವಾದ, ಎಲ್ಲರನ್ನೂ ಅಚ್ಚರಿಗೀಡು ಮಾಡುವಂಥಾ ಪಾತ್ರದಲ್ಲಿ ನಟಿಸಲಿದ್ದಾರಂತೆ.

    ಈಗಾಗಲೇ ಮಯೂರಿ ರುಸ್ತುಂ, 8 ಎಂಎಂ, ಸಿಗ್ನೇಚರ್ ಮುಂತಾದ ಚಿತ್ರಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರ ಇನ್ನೇನು ಚಿತ್ರೀಕರಣ ಮುಗಿಸಿಕೊಂಡು ತೆರೆ ಕಾಣಲಿದೆ. ಆ ನಂತರ ಮಯೂರಿ ಒಪ್ಪಿಕೊಂಡ ಒಂದೊಂದೇ ಚಿತ್ರವನ್ನು ಮುಗಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ.

    ಹೊಸದಾಗಿ ಒಪ್ಪಿಕೊಂಡಿರುವ ಹರಿಕೃಷ್ಣ ನಾರಾಯಣಿ ಚಿತ್ರ ವರಮಹಾಲಕ್ಷ್ಮಿ ಹಬ್ಬದಂದು ಶುರುವಾಗಲಿದೆ. ಇಷ್ಟಕಾಮ್ಯ, ನಟರಾಜ ಸರ್ವಿಸ್, ಕರಿಯ 2 ಮುಂತಾದ ಚಿತ್ರಗಳ ಮೂಲಕ ಮುಖ್ಯ ನಾಯಕಿಯಾಗಿ ನೆಲೆ ಕಂಡುಕೊಂಡಿರೋ ಮಯೂರಿ ಸದ್ಯದ ಬಹು ಬೇಡಿಕೆಯ ನಟಿಯಾಗಿಯೂ ಹೊರ ಹೊಮ್ಮಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ರುಸ್ತುಂ’ ಚಿತ್ರದ ಫಸ್ಟ್ ಲುಕ್ ರಿಲೀಸ್

    ‘ರುಸ್ತುಂ’ ಚಿತ್ರದ ಫಸ್ಟ್ ಲುಕ್ ರಿಲೀಸ್

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ರುಸ್ತುಂ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ರಾಜ್‍ಕುಮಾರ್ ಜಯಂತಿಯ ಅಂಗವಾಗಿ ಶಿವಣ್ಣ ತಮ್ಮ ರುಸ್ತುಂ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

    ಸಾಹಸ ನಿರ್ದೆಶಕ ರವಿವರ್ಮ ನಿರ್ದೆಶಿಸಿದ ಈ ಚಿತ್ರದಲ್ಲಿ ಶಿವರಾಜ್‍ಕುಮಾರ್ ಮತ್ತೆ ಖಾಕಿ ಧರಿಸಲಿದ್ದು, ಮೀಸೆ ಬಿಟ್ಟ ರೂಪದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಶಿವರಾಜ್ ಗೆ ಜೋಡಿಯಾಗಿ ಶ್ರದ್ಧಾ ಶ್ರೀನಾಥ್ ಹಾಗೂ ಮಯೂರಿ ಅಭಿನಯಿಸುತ್ತಿದ್ದಾರೆ.

    `ರುಸ್ತುಂ’ಗೆ ಖಳ ನಟರಾಗಿ ಬೇರೆ ಭಾಷೆಯಿಂದ ಖ್ಯಾತ ಕಲಾವಿದರನ್ನು ಕರೆತರುವ ಬಗ್ಗೆಯೂ ಚಿತ್ರತಂಡ ಯೋಚಿಸುತ್ತಿದೆ. ಈಗಾಗಲೇ `ರುಸ್ತುಂ’ನಲ್ಲಿ ಬಣ್ಣ ಹಚ್ಚುವಂತೆ ಅನಿಲ್ ಕುಮಾರ್, ಮನೋಜ್ ಬಾಜಪೇಯಿ, ಸಂಜಯ್ ದತ್, ಸುನೀಲ್ ಶೆಟ್ಟಿ ಅವರನ್ನು ಒಪ್ಪಿಸಲು ನಿರ್ದೇಶಕ ರವಿ ವರ್ಮಾ ಮತ್ತು ಚಿತ್ರತಂಡ ಪ್ರಯತ್ನಿಸುತ್ತಿದೆ ಎಂಬ ಮಾತು ಕೂಡ ಕೇಳಿಬಂದಿತ್ತು.

    ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನ ಮಾಡಲಿರುವ ರುಸ್ತಂ ಚಿತ್ರದಲ್ಲಿ ನಟಿ ಮಯೂರಿ ನಟಿಸಲಿದ್ದಾರೆ. ಈಗಾಗಲೇ ಶ್ರದ್ಧಾ ಶ್ರೀನಾಥ್ ಆಯ್ಕೆಯಾಗಿದ್ದು, ಮುಖ್ಯ ಪಾತ್ರವೊಂದಕ್ಕೆ ಮಯೂರಿ ಕೂಡ ರುಸ್ತುಂ ಸೇರಿಕೊಂಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಮಯೂರಿ, ಇದೇ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಯಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದೇನೆ. ನನಗೆ ಈ ಸಿನಿಮಾ ಮೈಲಿಗಲ್ಲಾಗುವುದು ಎಂದು ಸಂತಸ ಹಂಚಿಕೊಂಡಿದ್ದಾರೆ.