Tag: ರುಕ್ಮಿಣಿ

  • ರಶ್ಮಿಕಾ ಡೀಪ್‌ಫೇಕ್‌ ವಿಡಿಯೋ : ಕನ್ನಡದ ನಟಿಯರ ಆತಂಕ

    ರಶ್ಮಿಕಾ ಡೀಪ್‌ಫೇಕ್‌ ವಿಡಿಯೋ : ಕನ್ನಡದ ನಟಿಯರ ಆತಂಕ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೋ (Deep Fake Video) ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಸ್ವತಃ ಕೇಂದ್ರ ಸರಕಾರವೇ ಈ ಕುರಿತು ಪ್ರತಿಕ್ರಿಯಿಸಿತ್ತು. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೂಡ ಆಕ್ರೋಶ ಹೊರ ಹಾಕಿದ್ದರು. ಇದೀಗ ಕನ್ನಡದ ನಟಿಯರಾದ ಚೈತ್ರಾ ಆಚಾರ್ (Chaitra Achar) ಮತ್ತು ರುಕ್ಮಿಣಿ (Rukmini) ಕೂಡ ಈ ಕುರಿತು ಮಾತನಾಡಿದ್ದಾರೆ. ಈ ನಡೆ ಅಪಾಯಕಾರಿಯಾದದ್ದು ಎಂದಿದ್ದಾರೆ.

    ಇಂತಹ ದುಷ್ಟ ನಡೆಯನ್ನು ಮುಲಾಜಿಲ್ಲದೇ ಎಲ್ಲರೂ ಖಂಡಿಸಬೇಕು. ಮೊದಲು ಇಂತಹ ಆಪ್ ಗಳನ್ನು ನಟಿಯರೇ ಬ್ಯಾನ್ ಮಾಡಬೇಕು. ಎಲ್ಲ ರೀತಿಯಲ್ಲೂ ಇದನ್ನು ನಾವು ವಿರೋಧಿಸಬೇಕು. ಸೆಲೆಬ್ರಿಟಿಗಳಿಗೆ ಹೀಗೆ ಆದರೆ, ಸಾಮಾನ್ಯ ಇನ್ನೆಷ್ಟು ಕಷ್ಟ ಪಡಲ್ಲ ಎಂದು ನಟಿಯರು ಮಾತನಾಡಿದ್ದಾರೆ.

    ವಿಜಯ್ ದೇವರಕೊಂಡ ಆಕ್ರೋಶ

    ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್‌ ವಿಡಿಯೋ ಬಗ್ಗೆ ಇದೀಗ ಎಲ್ಲಾ ಕಡೆ ಚರ್ಚೆಗೆ ಗ್ರಾಸವಾಗಿದೆ. ರಶ್ಮಿಕಾ ಪರ ಬಿಗ್ ಬಿ, ನಾಗಚೈತನ್ಯ, ಮೃಣಾಲ್ ಠಾಕೂರ್ ಸೇರಿದಂತೆ ಅನೇಕರು ಧ್ವನಿಯೆತ್ತಿದ್ದಾರೆ. ಈ ಬೆನ್ನಲ್ಲೇ, ಗೆಳತಿ ರಶ್ಮಿಕಾ ಪರ ವಿಜಯ್ ದೇವರಕೊಂಡ (Vijay Devarakonda) ಕೂಡ ಮಾತನಾಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ವಿಜಯ್ ಕಿಡಿಕಾರಿದ್ದಾರೆ.‌

    ರಶ್ಮಿಕಾ ಡೀಪ್‌ಫೇಕ್‌ ವಿಡಿಯೋ ವೈರಲ್ ಆದ ಬಳಿಕ ಡೀಪ್ ಫೇಕ್‌ರ್ಸ್ ನಿಯಂತ್ರಣಕ್ಕೆ ಮುಂದಾದ ಪೊಲೀಸರು ಎಂದು ಪ್ರಕಟ ಆಗಿರುವ ಸುದ್ದಿಯನ್ನು ವಿಜಯ್ ಶೇರ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ, ಭವಿಷ್ಯಕ್ಕಾಗಿ ಇದು ಮುಖ್ಯವಾದ ಕ್ರಮ. ಇದು ಯಾರಿಗೂ ಆಗಬಾರದು. ಸೈಬರ್ ಕ್ರೈಮ್ ತೆಡೆಯಲು ಸಮರ್ಥವಾದ ಮತ್ತು ಸುಲಭಕ್ಕೆ ಜನರ ಸಂಪರ್ಕಕ್ಕೆ ಸಿಗುವಂತಹ ಸೈಬರ್ ಘಟಕ ಎಲ್ಲರಿಗೂ ಸಿಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾದರೆ ಜನರಿಗೆ ಹೆಚ್ಚು ರಕ್ಷಣೆ ಸಿಗುತ್ತದೆ ಎಂದು ಬರೆದುಕೊಂಡಿದ್ದಾರೆ.

     

    ವಿಜಯ್- ರಶ್ಮಿಕಾ (Rashmika) ತೆಲುಗು ಸಿನಿಮಾರಂಗದಲ್ಲಿ ಬೆಸ್ಟ್ ಜೋಡಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ಇಬ್ಬರ ಬಗ್ಗೆ ಡೇಟಿಂಗ್ ರೂಮರ್ ಇದ್ದರೂ ಕೂಡ ಈ ಜೋಡಿ ಇದನ್ನ ಒಪ್ಪಿಕೊಂಡಿಲ್ಲ. ಆದರೆ ಒಬ್ಬರಿಗೊಬ್ಬರು ಬೆಂಬಲಿಸುತ್ತಲೇ ಬಂದಿದ್ದಾರೆ. ಒಟ್ನಲ್ಲಿ ವಿಜಯ್ ನಡೆ ಫ್ಯಾನ್ಸ್ ಖುಷಿಕೊಟ್ಟಿದೆ.

  • ಕುರುಕ್ಷೇತ್ರದಲ್ಲಿ ಕೃಷ್ಣನ ರುಕ್ಮಿಣಿ ಯಾರು?

    ಕುರುಕ್ಷೇತ್ರದಲ್ಲಿ ಕೃಷ್ಣನ ರುಕ್ಮಿಣಿ ಯಾರು?

    ಬೆಂಗಳೂರು: ಪ್ರೇಮದ ಎಲ್ಲ ಮಗ್ಗುಲುಗಳನ್ನೂ ಎರಕ ಹೊಯ್ದಂಥಾ ಸಿನಿಮಾಗಳು, ಹಾಡುಗಳ ಮೂಲಕವೇ ಕನಸುಗಾರನಾಗಿ ಗುರುತಿಸಿಕೊಂಡಿರುವವರು ಕ್ರೇಜಿಸ್ಟಾರ್ ರವಿಚಂದ್ರನ್. ಅವರೀಗ ಇದೇ ವಾರ ಬಿಡುಗಡೆಯಾಗಲಿರೋ ಕುರುಕ್ಷೇತ್ರ ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರ ಮಾಡಿದ್ದಾರೆ. ಈಗಾಗಲೇ ಅವರ ಲುಕ್‍ಗಳೂ ಕೂಡಾ ಬಿಡುಗಡೆಗೊಂಡಿವೆ. ಅವು ಜನರಿಗಿಷ್ಟವೂ ಆಗಿವೆ. ಆದರೆ ಈ ಕೃಷ್ಣ ಪರಮಾತ್ಮನನ್ನು ಈವರೆಗೆ ಯಾವ ಚಿತ್ರಗಳಲ್ಲಿಯೂ ಸಿಂಗಲ್ ಆಗಿ ಅಭಿಮಾನಿಗಳ್ಯಾರೂ ನೋಡಿಲ್ಲ. ಆದರೆ ಕುರುಕ್ಷೇತ್ರದಲ್ಲಿ ಅವರಿಗೆ ಜೋಡಿಯಿಲ್ಲವೇ ಎಂಬ ಪ್ರಶ್ನೆ ಹಲವರನ್ನು ಕಾಡಿದ್ದಿದೆ.

    ಅಷ್ಟಕ್ಕೂ ಕೃಷ್ಣ ಇದ್ದಾನೆಂದರೆ ಅಲ್ಲಿ ರುಕ್ಮಿಣಿ ಇಲ್ಲದಿದ್ದರೆ ಹೇಗೆ? ಕುರುಕ್ಷೇತ್ರದಲ್ಲಿಯೂ ಕೃಷ್ಣಾವತಾರಿ ರವಿಮಾಮನಿಗೆ ರುಕ್ಮಿಣಿಯೊಬ್ಬಳ ಸಾಥ್ ಸಿಕ್ಕಿದೆ. ಆದರೆ ಈ ಬೃಹತ್ ತಾರಾಗಣದ ನಡುವೆ ಈ ರುಕ್ಮಿಣಿಯತ್ತ ಅಷ್ಟಾಗಿ ಯಾರೂ ಗಮನಹರಿಸಿರಲಿಲ್ಲ. ಒರಿಜಿನಲ್ ಕೃಷ್ಣ ಪರಮಾತ್ಮನಿಗೆ ಹದಿನಾರು ಸಾವಿರ ಸಖಿಯರಿದ್ದರೆಂದು ಹೇಳಲಾಗುತ್ತದೆ. ಹಾಗಿರುವಾಗ ಈ ಕುರುಕ್ಷೇತ್ರದಲ್ಲಿ ಒಬ್ಬರಾದರೂ ಬೇಡವೇ ಅಂತ ಅಭಿಮಾನಿಗಳು ಅಂದುಕೊಂಡಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಖುದ್ದು ರವಿಚಂದ್ರನ್ ಅವರೇ ಪತ್ರಿಕಾಗೋಷ್ಠಿಯೊಂದರಲ್ಲಿ ಈ ಬಗ್ಗೆ ತಮಾಷೆಯಾಗಿ ಹೇಳಿಕೊಂಡಿದ್ದರು. ಇದೆಲ್ಲದರಿಂದ ಕೃಷ್ಣನಿಗೊಬ್ಬಳು ರುಕ್ಮಿಣಿಯನ್ನು ಜೊತೆಯಾಗಿಸಲಾಗಿದೆ.

    ಕುರುಕ್ಷೇತ್ರದಲ್ಲಿ ಕೃಷ್ಣನಿಗೆ ಜೋಡಿಯಾಗಿ ಪ್ರಗ್ಯಾ ಜೈಸ್ವಾಲ್ ನಟಿಸಿದ್ದಾರೆ. ಈಕೆಯ ಪಾತ್ರಕ್ಕೆ ಇಲ್ಲಿ ಹೆಚ್ಚೇನೂ ಮಹತ್ವ ಇಲ್ಲದೇ ಹೋದರೂ ಈ ಬಗ್ಗೆ ಪ್ರಗ್ಯಾ ಖುಷಿ ಹೊಂದಿದ್ದಾರಂತೆ. ಕಡೆಗೂ ತಮ್ಮ ಪಾತ್ರಕ್ಕೊಂದು ಜೋಡಿ ಸಿಕ್ಕ ಬಗ್ಗೆ ರವಿಚಂದ್ರನ್ ಅವರಿಗೂ ಖುಷಿ ಇರೋದು ಸುಳ್ಳೇನಲ್ಲ. ಅಂದಹಾಗೆ ಈ ಪ್ರಗ್ಯಾ ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಬಹಳಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವಾಕೆ. ತೆಲುಗು ಮಾತ್ರವಲ್ಲದೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬೇಡಿಕೆ ಹೊಂದಿರೋ ಈಕೆ ಕುರುಕ್ಷೇತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.