Tag: ರಿಸರ್ವ್ ಬ್ಯಾಂಕ್

  • LGBTQ | ಸಮುದಾಯಕ್ಕೆ ಜಂಟಿ ಬ್ಯಾಂಕ್ ಖಾತೆ ತೆರೆಯಲು ಅನುಮತಿ

    LGBTQ | ಸಮುದಾಯಕ್ಕೆ ಜಂಟಿ ಬ್ಯಾಂಕ್ ಖಾತೆ ತೆರೆಯಲು ಅನುಮತಿ

    ನವದೆಹಲಿ: ಎಲ್‌ಜಿಬಿಟಿಕ್ಯು ಸಮುದಾಯಕ್ಕೆ (LGBT Community) ಸೇರಿದ ಜನರಿಗೆ, ಜಂಟಿ ಬ್ಯಾಂಕ್ ಖಾತೆಯನ್ನು ತೆರೆಯಲು ಅಥವಾ ಕ್ವೀರ್ ಸಂಬಂಧದಲ್ಲಿರುವ ವ್ಯಕ್ತಿಯನ್ನು ಫಲಾನುಭವಿಯಾಗಿ ನಾಮನಿರ್ದೇಶನ ಮಾಡಲು ಇನ್ನು ಮುಂದೆ ಯಾವುದೇ ನಿರ್ಬಂಧಗಳಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಸುಪ್ರೀಂಕೋರ್ಟ್ (Supremecourt) ಆದೇಶದ ಬಳಿಕ ಸರ್ಕಾರ ಈ ಆದೇಶ ಹೊರಡಿಸಿದೆ.

    ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳಿಗೆ ಆಗಸ್ಟ್ 21 ರಂದು ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. ತೃತೀಯಲಿಂಗಿಗಳೆಂದು ಗುರುತಿಸಿಕೊಳ್ಳುವ ಜನರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ಲಭ್ಯವಿರುವ ಸೇವೆಗಳನ್ನು ಬಳಸಿಕೊಳ್ಳಲು ಸಹಾಯ ಮಾಡಲು ಎಲ್ಲಾ ಫಾರ್ಮ್ ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ‘ತೃತಿಯ ಲಿಂಗ’ ಎಂಬ ಪ್ರತ್ಯೇಕ ಕಾಲಮ್ ಅನ್ನು ಸೇರಿಸಲು ಆರ್‌ಬಿಐ 2015 ರಲ್ಲಿ ಬ್ಯಾಂಕ್‌ಗಳಿಗೆ  ನಿರ್ದೇಶನ ನೀಡಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಗಣೇಶನನ್ನು ಕೂರಿಸ್ತೀರಾ – ಪೊಲೀಸರ ಮಾರ್ಗಸೂಚಿಯಲ್ಲಿ ಏನಿದೆ?

    2022 ರಲ್ಲಿ ಇಎಸ್‌ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್, ತೃತೀಯಲಿಂಗಿ ಸಮುದಾಯಕ್ಕಾಗಿ ಪ್ರತ್ಯೇಕವಾಗಿ ‘ರೇನ್ಬೋ ಉಳಿತಾಯ ಖಾತೆ’ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯು ಹೆಚ್ಚಿನ ಉಳಿತಾಯ ದರಗಳು ಮತ್ತು ಡೆಬಿಟ್ ಕಾರ್ಡ್ ಕೊಡುಗೆಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ನೀಡಿತು.  ಇದನ್ನೂ ಓದಿ: ಕಿತ್ತೂರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯನ ಕಿಡ್ನ್ಯಾಪ್ – ಕಾಂಗ್ರೆಸ್ ಶಾಸಕನ ಆಪ್ತರ ವಿರುದ್ಧ ದೂರು

  • ವಾರಸುದಾರರಿಲ್ಲದ 35,000 ಕೋಟಿ ರೂ. RBIಗೆ ವರ್ಗಾವಣೆ

    ವಾರಸುದಾರರಿಲ್ಲದ 35,000 ಕೋಟಿ ರೂ. RBIಗೆ ವರ್ಗಾವಣೆ

    ನವದೆಹಲಿ: ವಾರಸುದಾರರಿಲ್ಲದ ಸುಮಾರು 35,000 ಕೋಟಿಗಳಷ್ಟು ಠೇವಣಿಗಳನ್ನು ಸಾರ್ವಜನಿಕ ವಲಯದ ಬ್ಯಾಂಕ್‍ಗಳು ರಿಸರ್ವ್ ಬ್ಯಾಂಕ್‍ಗೆ ವರ್ಗಾಯಿಸಿದೆ ಎಂದು ಸಂಸತ್ತಿಗೆ (Parliament) ತಿಳಿಸಿದೆ.

    ಈ ಬಗ್ಗೆ ಲೋಕಸಭೆಯಲ್ಲಿ ಹಣಕಾಸು ರಾಜ್ಯ ಸಚಿವ ಭಾಗವತ್ ಕರದ್ ಲಿಖಿತ ರೂಪದಲ್ಲಿ ತಿಳಿಸಿದ್ದಾರೆ. 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಕಾರ್ಯನಿರ್ವಹಿಸದ ಠೇವಣಿಗಳನ್ನು 2023ರ ಫೆ. ಅಂತ್ಯದ ವೇಳೆಗೆ 10.24 ಕೋಟಿ ಖಾತೆಗಳಿಂದ RBIಗೆ 35,012 ಕೋಟಿ ರೂ. ಹಣ ವರ್ಗಾಯಿಸಲಾಗಿದೆ.

    ಎಸ್‍ಬಿಐ ಅಗ್ರಸ್ಥಾನದಲ್ಲಿದ್ದು, 8,086 ಕೋಟಿ ವಾರಸುದಾರರಿಲ್ಲದ ಠೇವಣಿಗಳನ್ನು ಹೊಂದಿದೆ. 5,340 ಕೋಟಿ ಕ್ಲೈಮ್ ಮಾಡದ ಠೇವಣಿಗಳೊಂದಿಗೆ (Deposits) ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂತರ ಸ್ಥಾನದಲ್ಲಿದೆ. ಇದರ ನಂತರ ಕೆನರಾ ಬ್ಯಾಂಕ್ 4,558 ಕೋಟಿ ರೂ. ಹಾಗೂ ಬ್ಯಾಂಕ್ ಆಫ್ ಬರೋಡಾ 3,904 ಕೋಟಿ ಕ್ಲೈಮ್ ಮಾಡದ ಠೇವಣಿಯನ್ನು ಹೊಂದಿದೆ. ಇದನ್ನೂ ಓದಿ: ಪ್ರಜಾಪ್ರಭುತ್ವ ಉಳಿಸುವ ಹೋರಾಟದಲ್ಲಿ ಸತ್ಯವೇ ನನ್ನ ಅಸ್ತ್ರ – ರಾಗಾ ಗುಡುಗು

    ಎಸ್‍ಬಿಐ ಗ್ರಾಹಕರ ಅನುಕೂಲಕ್ಕಾಗಿ, ಮೃತರ ಘಟಕಗಳ ಖಾತೆಗಳಿಗೆ ಸಂಬಂಧಿಸಿದಂತೆ ಕಾನೂನು ಪ್ರಾತಿನಿಧ್ಯವಿಲ್ಲದೆ ಕ್ಲೈಮ್‍ಗಳ ಇತ್ಯರ್ಥದ ಪ್ರಕ್ರಿಯೆಯನ್ನು ನಿಗದಿತ ನಮೂನೆಗಳ ಮಾದರಿಯ ಮೂಲಕ ಮತ್ತು ಸುಲಭವಾಗಿ ಅರ್ಥಮಾಡಿಕೊಳ್ಳಲು ಎಸ್‍ಬಿಐ ವೆಬ್‍ಸೈಟ್‍ಗಳಲ್ಲಿ ಅಪ್‍ಲೋಡ್ ಮಾಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಜಾರಕಿಹೊಳಿ – ಸವದಿ ಬಣ ರಾಜಕೀಯಕ್ಕೆ ಬ್ರೇಕ್‌; ಹೈಕಮಾಂಡ್‌ ಸಂದೇಶ ರವಾನಿಸಿದ ಜೋಶಿ

  • ಶೀಘ್ರವೇ ನಿಮ್ಮ ಕೈ ಸೇರಲಿದೆ 10 ರೂ. ಮುಖ ಬೆಲೆ ಹೊಸ ನೋಟು

    ಶೀಘ್ರವೇ ನಿಮ್ಮ ಕೈ ಸೇರಲಿದೆ 10 ರೂ. ಮುಖ ಬೆಲೆ ಹೊಸ ನೋಟು

    ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರವೇ 10 ರೂ. ಮುಖ ಬೆಲೆಯ ಹೊಸ ವಿನ್ಯಾಸದ ನೋಟುಗಳನ್ನು ಬಿಡುಗಡೆಗೊಳಿಸಲಿದೆ ಎಂದು ಮಾಧ್ಯವೊಂದು ವರದಿ ಮಾಡಿದೆ.

    ಮಾಧ್ಯಮ ವರದಿಯ ಪ್ರಕಾರ, ಕಳೆದ ವಾರ ಆರ್ ಬಿಐ ಕೇಂದ್ರ ಸರ್ಕಾರದಿಂದ ಹೊಸ 10 ರೂ ಮುಖ ಬೆಲೆಯ ನೋಟು ಮುದ್ರಣದ ವಿನ್ಯಾಸಕ್ಕೆ ಅನುಮತಿ ಪಡೆದಿದ್ದು, ಈಗಾಗಲೇ ಅಂದಾಜು 100 ಕೋಟಿ 10 ರೂ. ನೋಟುಗಳನ್ನು ಮುದ್ರಣ ಮಾಡಿದೆ ಎನ್ನಲಾಗಿದೆ.

    ನೋಟಿನ ವಿಶೇಷತೆ ಏನು?
    ಹತ್ತು ರೂ. ಹೊಸ ನೋಟಿನಲ್ಲಿ ಗಾಂಧಿ ಭಾವ ಚಿತ್ರ ಇರಲಿದ್ದು, ನೋಟಿನ ಹಿಂಭಾಗದಲ್ಲಿ ಒಡಿಶಾದ ಕೊನಾರ್ಕ್ ಸೂರ್ಯ ದೇವಾಲಯದ ಚಿತ್ರವಿರಲಿದೆ. ಅಲ್ಲದೇ ನೋಟು ಚಾಕೊಲೇಟ್ ಹಳದಿ ಬಣ್ಣವನ್ನು ಹೊಂದಿರಲಿದೆ.

    2016ರ ನವೆಂಬರ್ 8 ರಂದು 1 ಸಾವಿರ ರೂ. ಹಾಗೂ 500 ರೂ. ನೋಟು ನಿಷೇಧದ ಬಳಿಕ ಆರ್ ಬಿಐ ಹೊಸ 500 ರೂ. 2 ಸಾವಿರ ಮುಖ ಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತ್ತು. ನೋಟ್ ಬ್ಯಾನ್ ಬಳಿಕ ಸೃಷ್ಟಿಯಾಗಿದ್ದ ಚಿಲ್ಲರೆ ಸಮಸ್ಯೆಯನ್ನು ಬಗೆ ಹರಿಸಲು ಆಗಸ್ಟ್ ತಿಂಗಳಿನಲ್ಲಿ ಆರ್ ಬಿಐ ಹೊಸ 200 ರೂ. ಹಾಗೂ 50 ರೂ. ಮುಖ ಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತ್ತು. 200 ರೂ. ಮುಖ ಬೆಲೆ ನೋಟಿನಲ್ಲಿ ಭಾರತದ ಸಂಸ್ಕೃತಿ ಪರಂಪರೆ ತಿಳಿಸುವ ಸಲುವಾಗಿ ಸಾಂಚಿ ಸೂಪ್ತವನ್ನು ಮುದ್ರಿಸಿದ್ದರೆ, 50 ರೂ. ನೋಟಿನಲ್ಲಿ ಹಂಪಿಯ ಕಲ್ಲಿನ ರಥದ ಚಿತ್ರವನ್ನು ಮುದ್ರಿಸಲಾಗಿತ್ತು.

    ಈ ಹಿಂದೆ 2005ರಲ್ಲಿ 10 ರೂ. ಮುಖ ಬೆಲೆಯ ಹೊಸ ನೋಟುಗಳನ್ನು ಆರ್‍ ಬಿಐ ಬಿಡುಗಡೆ ಮಾಡಿತ್ತು.

  • ರೇನ್ ಕೋಟ್ ಹಾಕಿ ಸ್ನಾನ ಮಾಡೋದು ಮನಮೋಹನ್ ಸಿಂಗ್‍ಗೆ ಗೊತ್ತು: ಮೋದಿ

    ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆದರಣೀಯ ವ್ಯಕ್ತಿ. ಅಷ್ಟು ಹಗರಣಗಳು ನಡೆದರೂ ಮನಮೋಹನ್ ಸಿಂಗ್ ಮೇಲೆ ಒಂದು ಕಪ್ಪು ಚುಕ್ಕೆಯೂ ಬರಲಿಲ್ಲ. ರೇನ್ ಕೋಟ್ ಹಾಕಿ ಸ್ನಾನ ಮಾಡುವುದು ಮನಮೋಹನ್‍ಗೆ ಚೆನ್ನಾಗಿ ಗೊತ್ತು ಅಂತಾ ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

    ರಾಜ್ಯಸಭೆಯಲ್ಲಿ ಮಾತನಾಡಿದ ಮೋದಿ, ನೋಟ್ ಬ್ಯಾನ್, ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟ ಯಾವುದೇ ರಾಜಕೀಯ ಪಕ್ಷವೊಂದರ ವಿರುದ್ಧದ ಹೋರಾಟವಲ್ಲ ಎಂದು ಹೇಳಿದರು. ಮನಮೋಹನ್ ಸಿಂಗ್ ವಿರುದ್ಧದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಸದಸ್ಯರು ಪ್ರಧಾನಿ ಭಾಷಣದ ನಡುವೆಯೇ ಸಭಾತ್ಯಾಗ ಮಾಡಿದರು.

    ನಿನ್ನೆ ಲೋಕಸಭೆಯಲ್ಲಿ ಮಾಡಿದ ಭಾಷಣದಂತೆಯೇ ಇಂದು ಕೂಡಾ ಮೋದಿ ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು. ವಿಪಕ್ಷಗಳು 70 ವರ್ಷದ ಬಗ್ಗೆ ಟೀಕೆ ಮಾಡುತ್ತಿವೆ. ಆದರೆ ನನ್ನ ಸರ್ಕಾರಕ್ಕೆ ಈಗ ಕೇವಲ ಎರಡೂವರೆ ವರ್ಷ. ನಿಮ್ಮ ಅವಧಿಯ ಟಾಯ್ಲೆಟ್‍ಗಳಿಗೆ ಬೀಗ ಹಾಕಿದ್ನಾ?, ನಿಮ್ಮ ಅವಧಿಯ ರಸ್ತೆ ಕಿತ್ತು ಹಾಕಿದ್ನಾ?. ಎಲ್ಲದಕ್ಕೂ ನಾನೇ ಕಾರಣ ಎಂದು ಯಾಕೆ ಅಂದ್ಕೋತೀರಿ ಎಂದು ಮೋದಿ ಪ್ರಶ್ನಿಸಿದರು.

    1971ರಲ್ಲಿ ಇಂದಿರಾ ಗಾಂಧಿಗೆ ಅಂದಿನ ಹಣಕಾಸು ಸಚಿವರು ನೋಟ್ ಬ್ಯಾನ್‍ಗೆ ಸಲಹೆ ನೀಡಿದ್ದರು. ಆದರೆ ಇಂದಿರಾಗಾಂಧಿ ಅವರು ಇದನ್ನು ತಿರಸ್ಕರಿಸಿದ್ದರು. 1972ರಲ್ಲಿ ಜ್ಯೋತಿ ಬಸು ನೋಟ್ ಬ್ಯಾನ್ ಬಗ್ಗೆ ಮಾತನಾಡಿದರು. 1981ರಲ್ಲಿ ಹರ್‍ಕಿಶನ್ ಸಿಂಗ್ ಸುರ್ಜಿತ್ ಉಲ್ಲೇಖಿಸಿದ್ದರು ಎಂದು ಮೋದಿ ಹೇಳಿದರು.

    ನಾನು ಓಕೆ, ಆರ್‍ಬಿಐಗೆ ವಿರೋಧ ಯಾಕೆ?: ನೋಟ್ ಬ್ಯಾನ್‍ಗೆ ಸಂಬಂಧಪಟ್ಟ ವಿಚಾರದಲ್ಲಿ ನನ್ನ ಹಾಗೂ ಸರ್ಕಾರದ ವಿರುದ್ಧದ ಟೀಕೆಗಳು ನನಗೆ ಅರ್ಥವಾಗುತ್ತದೆ. ಆದರೆ ಆರ್‍ಬಿಐ, ಆರ್‍ಬಿಐ ಗವರ್ನರ್‍ರನ್ನು ವಿವಾದದಲ್ಲಿ ತರಬೇಡಿ. ಅವರಿಗೆ ಅವರದೇ ಆದ ಗೌರವವಿದೆ. ಅದನ್ನು ಹಾಳು ಮಾಡುವುದು ಸರಿಯಲ್ಲ ಎಂದು ವಿಪಕ್ಷಗಳಿಗೆ ಕಿವಿಮಾತು ಹೇಳಿದರು.

    ದೇಶದಲ್ಲಿ ಒಂದೇ ಬಾರಿ ಬದಲಾವಣೆ ಅಸಾಧ್ಯ. ಬದಲಾವಣೆಗೆ ನಾವೆಲ್ಲರೂ ತಯಾರಾಗಬೇಕು. ನಾವೇನಾದರೂ ಬದಲಾವಣೆ ತರಲು ಯತ್ನಿಸಿದರೆ ಟೀಕೆಗಳೇ ಬರುತ್ತವೆ. ದೊಡ್ಡ ನಿರ್ಧಾರಗಳನ್ನು ಜಾರುಗೆ ತರುವಾಗ ತೊಂದರೆ ಸಹಜ. ಯಾವ ಸರ್ಕಾರವೂ ಮಲಗಬೇಕೆಂದು ಬರುವುದಿಲ್ಲ. ಕೆಂಪುಕೋಟೆಯ ಭಾಷಣದಲ್ಲಿ ನಾನು ಇದೇ ಮಾತನ್ನು ನಾನು ಹೇಳಿದ್ದೆ. ನಾನು ಸ್ವಚ್ಛ ಭಾರತದ ಬಗ್ಗೆ ಮಾತನಾಡಿದೆ. ಆದರೆ ಅದರ ಬಗ್ಗೆ ಲೇವಡಿ ಮಾಡುತ್ತಾರೆ. ಸ್ವಚ್ಛತಾ ಆಂದೋಲನದಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು ಎಂದರು.

    ಮಹಿಳೆಯರ ಸುರಕ್ಷತೆಗಾಗಿ 24 ಗಂಟೆಗಳ ಹೆಲ್ಪ್‍ಲೈನ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಡಿಜಿಟಲ್ ಪಾವತಿಗೆ ನಾವೆಲ್ಲರೂ ಒತ್ತು ನೀಡಬೇಕಿದೆ. ನೋಟ್ ಬ್ಯಾನ್ ಮಾಡಿದ 40 ದಿನಗಳಲ್ಲಿ 700 ಮಾವೋವಾದಿಗಳು ಶರಣಾದರು. ಇದು ಮೊದಲ ಬಾರಿಗೆ ಆಯಿತು. ಅಪ್ರಮಾಣಿಕರಿಗೆ ಶಿಕ್ಷೆಯಾಗುವವರೆಗೆ ಪ್ರಾಮಾಣಿಕರಿಗೆ ಬಲ ಬರಲ್ಲ. ಬ್ಯಾಂಕ್‍ಗಳಿಗೆ ನಗದು ಹರಿದು ಬಂದಿದೆ. ಇದರಿಂದಾಗಿ ಬ್ಯಾಂಕ್‍ಗಳ ಬಡ್ಡಿ ದರದಲ್ಲಿ ಕಡಿತವಾಗಿವೆ. ಜನರ ಮೂಡ್ ರಾಜಕಾರಣಿಗಳ ಮೂಡ್‍ಗಿಂತ ತುಂಬಾ ಭಿನ್ನವಾಗಿದೆ ಎಂದು ಮೋದಿ ಹೇಳಿದರು.

    ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಬ್ಯಾಲಟ್ ಪೇಪರ್ ಬದಲು ಬಟನ್ ಒತ್ತಬಹುದು ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ವಿಶ್ವವೇ ಕಾಗದರಹಿತವಾಗಿ ಸಾಗುತ್ತದೆ ಎಂದಾದರೆ ಇದು ನಮಗೇಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.