Tag: ರಿಷಬ್ ಪಂತ್

  • ರಿಷಬ್​​ ಪಂತ್​ಗೆ ಧೋನಿ ಪುತ್ರಿ ಝೀವಾಳ ಅ, ಆ, ಇ, ಈ ಪಾಠ – ವಿಡಿಯೋ

    ರಿಷಬ್​​ ಪಂತ್​ಗೆ ಧೋನಿ ಪುತ್ರಿ ಝೀವಾಳ ಅ, ಆ, ಇ, ಈ ಪಾಠ – ವಿಡಿಯೋ

    ಚೆನ್ನೈ: ಇತ್ತೀಚೆಗೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಪುತ್ರಿ ಝೀವಾ ಧೋನಿ ಸಾಮಾಜಿಕ ಜಾಲತಾಣದಲ್ಲಿ ತಂದೆಯೊಂದಿಗೆ ಸಖತ್ ಸದ್ದು ಮಾಡುತ್ತಿದ್ದು, ಈ ಬಾರಿ ಪಂತ್‍ರೊಂದಿನ ವಿಡಿಯೋ ವೈರಲ್ ಆಗಿದೆ.

    ಯುವ ಆಟಗಾರ ರಿಷಬ್ ಪಂತ್‍ಗೆ ಝೀವಾ ಹಿಂದಿ ಭಾಷೆಯ ವರ್ಣಮಾಲೆ ಹೇಳಿಕೊಡುತ್ತಿದ್ದು, ಅ, ಆ, ಇ, ಈ ಎಂದು ಪಂತ್‍ಗೆ ಹೇಳಿಕೊಟ್ಟಿದ್ದಾಳೆ. ಇದಕ್ಕೆ ಪಂತ್ ಕೂಡ ಧನ್ಯವಾದ ಮೇಡಂ ಎಂದಿದ್ದಾರೆ. ಈ ವಿಡಿಯೋವನ್ನು ಝೀವಾ ಸಿಂಗ್ ಧೋನಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಲಾಗಿದೆ.

     

    View this post on Instagram

     

    Back to Basics !

    A post shared by ZIVA SINGH DHONI (@ziva_singh_dhoni) on

    2019ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ಪ್ರವೇಶ ಮಾಡಿದ ಒಂದು ದಿನದ ಬಳಿಕ ವಿಡಿಯೋ ಆಪ್‍ಲೋಡ್ ಮಾಡಲಾಗಿದೆ. 8ನೇ ಬಾರಿಗೆ ಫೈನಲ್ ಪ್ರವೇಶ ಮಾಡಿದ ಸಾಧನೆಯನ್ನು ಚೆನ್ನೈ ಮಾಡಿದ್ದು, ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ, ಮುಂಬೈ ತಂಡವನ್ನು ಎದುರಿಸಲಿದೆ. ಇದುವರೆಗೂ ಇತ್ತಂಡಗಳು ಮೂರು ಬಾರಿ ಫೈನಲ್ ಪಂದ್ಯದಲ್ಲಿ ಎದುರಾಗಿದೆ. ಇದರಲ್ಲಿ 2 ಬಾರಿ ಮುಂಬೈ ಗೆಲುವು ಪಡೆದಿದ್ದರೆ, ಚೆನ್ನೈ ಒಮ್ಮೆ ಗೆಲುವು ಪಡೆದಿತ್ತು.

  • ಆನ್‌ಫೀಲ್ಡ್‌ನಲ್ಲಿ ರೈನಾ ನಡೆಗೆ ನೆಟ್ಟಿಗರ ಮೆಚ್ಚುಗೆ

    ಆನ್‌ಫೀಲ್ಡ್‌ನಲ್ಲಿ ರೈನಾ ನಡೆಗೆ ನೆಟ್ಟಿಗರ ಮೆಚ್ಚುಗೆ

    ಹೈದರಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ಡೆಲ್ಲಿ ವಿರುದ್ಧದ ಪಂದ್ಯದ ವೇಳೆ ರಿಷಬ್ ಪಂತ್ ಶೂ ಲೇಸ್ ಕಟ್ಟಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ಟೂರ್ನಿಯಲ್ಲಿ ಡೆಲ್ಲಿ ತಂಡದ ಪರ ಉತ್ತಮ ಪ್ರದರ್ಶನ ತೋರಿದ ರಿಷಬ್ ಎದುರಾಳಿಗಳಿಗೆ ತಮ್ಮ ಬ್ಯಾಟಿಂಗ್‍ನಿಂದ ಕಾಡಿದ್ದರು. ಚೆನ್ನೈ ವಿರುದ್ಧದ ನಿರ್ಣಯಕ ಪಂದ್ಯದಲ್ಲೂ ಕೂಡ ರಿಷಬ್ ಏಕಾಂಗಿ ಹೋರಾಟ ನಡೆಸಿದ್ದರು. ಈ ಹಂತದಲ್ಲಿ ರಿಷಬ್‍ರ ಶೂ ಲೇಸ್ ಕಳಚಿಕೊಂಡಿತ್ತು. ಇದನ್ನು ಕಂಡ ರೈನಾ ಪಂತ್ ಬಳಿ ಬಂದು ಶೂ ಲೇಸ್ ಕಟ್ಟಿದ್ದರು.

    ಈ ವಿಡಿಯೋವನ್ನು ಐಪಿಎಲ್ ಟ್ಟಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದ್ದು, ಕ್ರೀಡಾಸ್ಫೂರ್ತಿಯನ್ನು ಮೆರೆದ ರೈನಾ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಪಂದ್ಯದಲ್ಲೂ ಕ್ರಿಸ್‍ಗೆ ಬರುತ್ತಿದ್ದ ರೈನಾರನ್ನು ಅಡ್ಡಪಡಿಸಿ ಪಂತ್ ಕಾಲೆಳೆದಿದ್ದರು. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಇಬ್ಬರ ಆಟಗಾರರ ನಡುವೆ ಇರುವ ಬಾಂಧವ್ಯವನ್ನು ಮೆಚ್ಚಿ ಹಲವು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

    ಇತ್ತ ಪಂದ್ಯದಲ್ಲಿ ಡೆಲ್ಲಿ ಸೋಲು ಕಂಡರೂ ಕೂಡ ಟೂರ್ನಿಯಲ್ಲಿ ಯುವ ಆಟಗಾರ ರಿಷಬ್ ಪಂತ್‍ರ ಬ್ಯಾಟಿಂಗ್ ಕುರಿತು ಹಲವು ಹಿರಿಯ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿರಿಯ ಆಟಗಾರ ಸಂಜಯ್ ಮಂಜ್ರೇಕರ್ ಅವರು ಪಂತ್‍ರ ಗುಣಗಾನ ಮಾಡಿದ್ದು, ಪ್ರಸಕ್ತ ತಲೆಮಾರಿನ ಸೆಹ್ವಾಗ್ ಎಂದಿದ್ದಾರೆ. ಇತ್ತ ಸೆಹ್ವಾಗ್ ಕೂಡ ಪಂತ್‍ರನ್ನು ಹೊಗಳಿದ್ದು, ‘ಗೇಮ್ ಚೇಂಜಿಂಗ್’ ಆಟಗಾರ ಎಂದು ಕರೆದಿದ್ದಾರೆ.

    https://twitter.com/Rastogi3Sapna/status/1126901981488996353

  • ವಿಶ್ವಕಪ್ ನೋವು ಇನ್ನು ದೂರವಾಗಿಲ್ಲ: ರಿಷಬ್ ಪಂತ್

    ವಿಶ್ವಕಪ್ ನೋವು ಇನ್ನು ದೂರವಾಗಿಲ್ಲ: ರಿಷಬ್ ಪಂತ್

    – ಅಂಕ ಪಟ್ಟಿಯಲ್ಲಿ ಡೆಲ್ಲಿ ನಂ.1

    ಜೈಪುರ: 2019ರ ವಿಶ್ವಕಪ್ ಟೂರ್ನಿಗೆ ತಮ್ಮನ್ನು ಕೈಬಿಟ್ಟ ಪ್ರಕ್ರಿಯೆ ನೋವು ಇನ್ನು ದೂರವಾಗಿಲ್ಲ ಎಂದು ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಹೇಳಿದ್ದಾರೆ.

    ಡೆಲ್ಲಿ ಕ್ಯಾಪಿಟಲ್, ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ 36 ಎಸೆತಗಳಲ್ಲಿ ಸ್ಫೋಟಕ 78 ರನ್ (36 ಎಸೆತ, 8 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡ 6 ವಿಕೆಟ್ ಗೆಲುವು ಪಡೆಯಲು ಪಂತ್ ಕಾರಣರಾಗಿದ್ದರು.

    ಪಂದ್ಯದ ಬಳಿಕ ಮಾತನಾಡಿದ ಪಂತ್, ಇಂದಿನ ಪ್ರದರ್ಶನ ನನಗೆ ಖುಷಿ ತಂದಿದೆ. ತಂಡಕ್ಕೆ ಈ ಪಂದ್ಯ ಬಹುಮುಖ್ಯವಾದದ್ದು ಎಂಬ ಅರಿವು ನನಗಿತ್ತು. ಆದರೆ ನಾನು ಸುಳ್ಳು ಹೇಳಲು ಬಯಸುವುದಿಲ್ಲ. ಈಗಲೂ ವಿಶ್ವಕಪ್ ಆಯ್ಕೆ ಪ್ರಕ್ರಿಯೆಯ ನೋವು ನನ್ನ ಮನಸ್ಸಿನಲ್ಲಿದೆ ಎಂದರು.

    ರಾಜಸ್ಥಾನ್ ರಾಯಲ್ಸ್ ಮಾಜಿ ನಾಯಕ ರಹಾನೆ ಶತಕ (105 ರನ್, 63 ಎಸೆತ, 11 ಬೌಂಡರಿ, 3 ಸಿಕ್ಸರ್)ದ ನೆರವಿನಿಂದ ಡೆಲ್ಲಿಗೆ 192 ರನ್ ಟಾರ್ಗೆಟ್ ನೀಡಿತ್ತು. ಡೆಲ್ಲಿ ಪರ ರಿಷಬ್ ಪಂತ್ 78 ರನ್, ಪೃಥ್ವಿ ಶಾ 42 ರನ್, ಅನುಭವಿ ಆಟಗಾರ ಶಿಖರ್ ಧವನ್ 54 ರನ್‍ಗಳ ಉತ್ತಮ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ 4 ಎಸೆತ ಬಾಕಿ ಇರುವಂತೆಯೇ ಗೆಲುವು ಪಡೆಯಿತು. ರಿಷಬ್ ಪಂತ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಪಡೆದರು.

    ಈ ಬಾರಿಯ ವಿಶ್ವಕಪ್ ಆಯ್ಕೆ ಪ್ರಕ್ರಿಯೆಲ್ಲಿ ರಿಷಬ್ ಪಂತ್ ಕೈ ಬಿಟ್ಟು ದಿನೇಶ್ ಕಾರ್ತಿಕ್‍ರನ್ನು ಆಯ್ಕೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

    https://twitter.com/cricketfeverrr/status/1120396549115338752

    ಡೆಲ್ಲಿ ಸಾಧನೆ: ಇತ್ತ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಡೆಲ್ಲಿ ತಂಡದ ಯುವ ನಾಯಕ ಶ್ರೇಯಸ್ ಅಯ್ಯರ್ ತಂಡದ ಕುರಿತು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಈ ಬಾರಿ ಹೆಸರು ಬದಲಿಸಿಕೊಂಡು ಕಣಕ್ಕೆ ಇಳಿದಿತ್ತು. ಆರಂಭದಿಂದಲೂ ಭರ್ಜರಿಯಾಗಿ ಪ್ರದರ್ಶನ ನೀಡುತ್ತಿರುವ ಯಂಗ್ ಕ್ಯಾಪ್ಟನ್ ನೇತೃತ್ವದ ತಂಡ ಅಂಕಪಟ್ಟಿಯಲ್ಲಿ ಮೊಲದ ಸ್ಥಾನ ಪಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ 10 ಪಂದ್ಯದಲ್ಲಿ 14 ಅಂಕಗಳಿಸಿ 2ನೇ ಸ್ಥಾನ ಪಡೆದಿದ್ದು, 11 ಪಂದ್ಯಗಳಿಂದ ಡೆಲ್ಲಿ 14 ಅಂಕ ಪಡೆದಿದೆ. ಕಳೆದ 11 ಆವೃತ್ತಿ ಗಳಲ್ಲಿ ಡೆಲ್ಲಿ ಮೊದಲ ಸ್ಥಾನವನ್ನು ಪಡೆದಿರಲಿಲ್ಲ.

    ಡೆಲ್ಲಿ ತಂಡದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಬಗ್ಗೆ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದಾರೆ. ಡೆಲ್ಲಿ ನಂ.1 ಸ್ಥಾನ ಪಡೆದಿರುವುದನ್ನು ನಂಬಲು ಆಗುತ್ತಿಲ್ಲ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬ ಅಭಿಮಾನಿ, ಈ ಹಿಂದೆ ಡೆಲ್ಲಿ ವಾಯಮಾಲಿನ್ಯದಲ್ಲಿ ನಂ.1 ಪಟ್ಟ ಪಡೆದಿತ್ತು, ಆದರೆ ಈಗ ಐಪಿಎಲ್ ನಲ್ಲಿ ನಂ.1 ಎಂದರೆ ಅಚ್ಚರಿ ತಂದಿದೆ ಎಂದು ಕಾಲೆಳೆದಿದ್ದಾರೆ.

  • ರಾಯುಡು ‘3ಡಿ ಗ್ಲಾಸ್’ ಟ್ವೀಟ್‍ಗೆ ಬಿಸಿಸಿಐ ಪ್ರತಿಕ್ರಿಯೆ

    ರಾಯುಡು ‘3ಡಿ ಗ್ಲಾಸ್’ ಟ್ವೀಟ್‍ಗೆ ಬಿಸಿಸಿಐ ಪ್ರತಿಕ್ರಿಯೆ

    ಮುಂಬೈ: 2019ರ ವಿಶ್ವಕಪ್ ಟೂರ್ನಿಗೆ ಆಯ್ಕೆಯಾದ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಅಂಬಟಿ ರಾಯುಡು ಅವರು ಆಯ್ಕೆ ಸಮಿತಿ ವಿರುದ್ಧ ವ್ಯಂಗ್ಯವಾಡಿ ಮಾಡಿದ್ದ ಟ್ವೀಟ್‍ಗೆ ಬಿಸಿಸಿಐ ಸಮಿತಿ ಪ್ರತಿಕ್ರಿಯೆ ನೀಡಿದೆ.

    ರಾಯುಡು ವಿಶ್ವಕಪ್ ಆಯ್ಕೆಗೆ ಸಂಬಂಧಿಸಿದಂತೆ ತಮ್ಮ ಸ್ಥಾನ ಖಚಿತವೆಂದೇ ಭಾವಿಸಿದ್ದರು. ಆದರೆ ಆಯ್ಕೆ ಸಮಿತಿ ಅವರನ್ನು ಕೈ ಬಿಟ್ಟು ಶಾಕ್ ನೀಡಿದ್ದು ಎಲ್ಲರಿಗೂ ತಿಳಿದ ಸಂಗತಿ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದ ರಾಯುಡು, ವಿಶ್ವಕಪ್ ನೋಡಲು 3ಡಿ ಗ್ಲಾಸ್ ಬುಕ್ ಮಾಡಿದ್ದಾಗಿ ಟ್ವೀಟ್ ಮಾಡಿ ಪರೋಕ್ಷವಾಗಿ ಆಯ್ಕೆ ಸಮಿತಿಗೆ ಟಾಂಗ್ ನೀಡಿದ್ದರು.

    ರಾಯುಡು ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರೊಬ್ಬರು, ನಮಗೆ ರಾಯುಡು ಅವರ ಭಾವನೆ ಆರ್ಥವಾಗುತ್ತದೆ. ಅವರ ಟ್ವೀಟ್ ಅನ್ನು ನೋಟ್ ಮಾಡಿದ್ದೇವೆ. ಇತಿಮಿತಿಯನ್ನ ಮೀರದೆ ತಮ್ಮ ಭಾವೋದ್ವೇಗವನ್ನು ಹಂಚಿಕೊಳ್ಳುವ ಅನಿವಾರ್ಯತೆ ರಾಯುಡು ಅವರ ಮೇಲಿದೆ. ಇದರಿಂದ ಹೊರಕ್ಕೆ ಬರಲು ಅವರಿಗೆ ಕೆಲ ಸಮಯ ಬೇಕಾಗುತ್ತದೆ. ಈಗಾಗಲೇ ಅವರು ಸ್ಟಾಂಡ್ ಬೈ ಆಟಗಾರರಾಗಿದ್ದು, ತಂಡದಲ್ಲಿ ಆಟಗಾರರು ಗಾಯಗೊಂಡರೆ ಆಡುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ. ಸದ್ಯ ಅವರ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

    ಇತ್ತ ವಿಶ್ವಕಪ್ ತಂಡದಿಂದ ಪಂತ್‍ರನ್ನು ಕೈಬಿಟ್ಟಿರುವ ಬಗ್ಗೆ ಮೊದಲ ಬಾರಿಗೆ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆ ನೀಡಿದ್ದು, 2017 ರಲ್ಲಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡುವ ಮೂಲಕ ನನ್ನ ವಿಶ್ವಕಪ್ ಪ್ರಯಾಣ ಆರಂಭವಾಯಿತು. ಯಾವುದಾದರೂ ಪ್ರತ್ಯೇಕತೆಯನ್ನು ನನ್ನ ಪ್ರದರ್ಶನದಲ್ಲಿ ತೋರುವಂತೆ ಮಾಡಿದರೆ ಮುಂದಿನ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ಇತ್ತು. ಆದರೆ ಇಂದು ನಾವು (ಪಂತ್, ಕಾರ್ತಿಕ್) ಈ ವಿಚಾರವಾಗಿ ಮಾತನಾಡುವುದು ಸಮಂಜಸವಲ್ಲ. ಏಕೆಂದರೆ ಆತನಿಗೂ ಇದರ ನೋವಿರುತ್ತದೆ. ಆದರೆ ಆತನಿಗೆ ದೊರೆಯುವ ಅವಕಾಶಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ. ದೀರ್ಘ ಸಮಯ ಆತನಿಗೆ ಕ್ರಿಕೆಟ್ ಆಡುವ ಅವಕಾಶ ಇದೆ ಎಂದು ನನಗೆ ಅನ್ನಿಸುತ್ತಿದೆ ಎಂದು 33 ವರ್ಷದ ದಿನೇಶ್ ಕಾರ್ತಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ವಿಶ್ವಕಪ್ 2019ರ ಬಾಗಿಲು ರಾಯುಡು, ಪಂತ್‍ಗೆ ತೆರೆಯುತ್ತಾ?

    ವಿಶ್ವಕಪ್ 2019ರ ಬಾಗಿಲು ರಾಯುಡು, ಪಂತ್‍ಗೆ ತೆರೆಯುತ್ತಾ?

    ಮುಂಬೈ: ಇಂಗ್ಲೆಂಡ್‍ನಲ್ಲಿ ನಡೆಯಲಿರುವ 2019 ವಿಶ್ವಕಪ್ ಟೂರ್ನಿಗೆ ಬಿಸಿಸಿಐ 15 ಆಟಗಾರರ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಈ ಹಂತದಲ್ಲಿ ಯುವ ಆಟಗಾರ ರಿಷಬ್ ಪಂತ್, ಅನುಭವಿ ಅಂಬಟಿ ರಾಯುಡುರನ್ನು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಆಯ್ಕೆ ಸಮಿತಿ ಸಾಕಷ್ಟು ಟೀಕೆ ಎದುರಿಸಿತ್ತು. ಇದರ ಬೆನ್ನಲ್ಲೇ ಸದ್ಯ ಸಮಿತಿ ಇಬ್ಬರು ಆಟಗಾರರಿಗೂ ಮತ್ತೊಂದು ಅವಕಾಶ ನೀಡಿದೆ ಎಂದು ಹೇಳಬಹುದು.

    ಹೌದು, ಬಿಸಿಸಿಐ ರಾಯುಡು ಹಾಗೂ ಪಂತ್ ರೊಂದಿಗೆ ನವದೀಪ್ ಸೈನಿರನ್ನು ಸ್ಟಾಂಡ್ ಬೈ ಪ್ಲೇಯರ್ ಗಳಾಗಿ ಆಯ್ಕೆ ಮಾಡಿ ಪ್ರಕಟಿಸಿದೆ.

    ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ ಅನುಸರಿಸಿದ ನಿಯಮಗಳನ್ನೇ ಇಲ್ಲಿಯೂ ಬಿಸಿಸಿಐ ಮುಂದುವರಿಸಿದ್ದು, ರಾಯುಡು, ಪಂತ್, ಸೈನಿರನ್ನು ಸ್ಟಾಂಡ್ ಬೈ ಪ್ಲೆಯರ್ ಗಳಾಗಿ ಆಯ್ಕೆ ಮಾಡಿದ್ದಾಗಿ ತಿಳಿಸಿದೆ. ಅಲ್ಲದೇ ಸದ್ಯ ಪ್ರಕಟವಾಗಿರುವ 15 ತಂಡದ ಆಟಗಾರರಲ್ಲಿ ಯಾರದರು ಆಕಸ್ಮಾತ್ ಗಾಯಗೊಂಡರೆ ಈ ಆಟಗಾರರಿಗೆ ಮೊದಲ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ವಿಶ್ವಕಪ್ ವೀಕ್ಷಣೆಗೆ ಈಗಷ್ಟೇ 3ಡಿ ಕನ್ನಡಕ ಆರ್ಡರ್ ಮಾಡಿದ್ದೇನೆ: ರಾಯುಡು ವ್ಯಂಗ್ಯ

    ಉಳಿದಂತೆ ಟೀಂ ಇಂಡಿಯಾ ಆಟಗಾರರು ತರಬೇತಿ ಪಡೆಯುವ ವೇಳೆ ನೆಟ್ಸ್ ನಲ್ಲಿ ಬೌಲಿಂಗ್ ಮಾಡಲು ಖಲೀಲ್ ಅಹ್ಮದ್, ದೀಪಕ್ ಚಹರ್, ಆವೇಶ್ ಖಾನ್‍ರನ್ನು ನೇಮಕ ಮಾಡಿದೆ. ಟೀಂ ಇಂಡಿಯಾದೊಂದಿಗೆ ಈ ಮೂವರು ಆಟಗಾರರು ಇಂಗ್ಲೆಂಡ್‍ಗೆ ತೆರಳಿದ್ದಾರೆ. ಆದರೆ ಇವರು ಸ್ಟಾಂಡ್ ಬೈ ಪ್ಲೇಯರ್ ಗಳಲ್ಲ ಎಂದು ಬಿಸಿಸಿಐ ಉನ್ನತ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಇತ್ತ ಆಯ್ಕೆ ಸಮಿತಿ ಪ್ರಕಟಿಸಿ ತಂಡದಲ್ಲಿ ರಾಯುಡು ಹೆಸರು ಇಲ್ಲದಿರುವುದು ನನಗೆ ಅಚ್ಚರಿ ತಂದಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಹೇಳಿದ್ದರು. 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಅನುಭವ ಉಳ್ಳ ಆಟಗಾರರು ಇರುವುದು ಅಗತ್ಯ ಎಂದು ಅಭಿಪ್ರಾಯ ಪಟ್ಟಿದ್ದರು. ಅಲ್ಲದೇ ಗೌತಮ್ ಗಂಭೀರ್ ಕೂಡ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಇದನ್ನು ಓದಿ: ಅಂಬಟಿ ರಾಯುಡು ನೋವನ್ನು ನಾನು ಅನುಭವಿಸಿದ್ದೇನೆ: ಗಂಭೀರ್

  • ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್ ಆಯ್ಕೆ ಹಿಂದಿನ ರಹಸ್ಯ ಬಿಚ್ಚಿಟ್ಟ ಎಂಎಸ್‍ಕೆ ಪ್ರಸಾದ್

    ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್ ಆಯ್ಕೆ ಹಿಂದಿನ ರಹಸ್ಯ ಬಿಚ್ಚಿಟ್ಟ ಎಂಎಸ್‍ಕೆ ಪ್ರಸಾದ್

    ಮುಂಬೈ: 2019ರ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ತಂಡ ಈ ಬಾರಿ ಉತ್ತಮ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ. ಇದೇ ವೇಳೆ ತಂಡದಲ್ಲಿ ಸ್ಥಾನ ಪಡೆದಿರುವ ಕೆಎಲ್ ರಾಹುಲ್ ಹಾಗೂ ದಿನೇಶ್ ಕಾರ್ತಿಕ್ ಆಯ್ಕೆ ಹಿಂದಿನ ಬಗ್ಗೆ ಬಿಸಿಸಿಐ ಆಯ್ಕೆ ಸಮತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.

    ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿ ಮಾಧ್ಯಮ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಅವರು, ತಂಡದಲ್ಲಿ ನಂ.4 ಆಟಗಾರರ ಆಯ್ಕೆಗೆ ಹೆಚ್ಚಿನ ಚರ್ಚೆ ನಡೆಸಲಾಯಿತು. ಅಲ್ಲದೇ ಶಿಖರ್ ಧವನ್ ಒಬ್ಬರನ್ನೇ ಆರಂಭಿಕರಾಗಿ ಇರುವುದು ಅಂಶವನ್ನು ಕೂಡ ಚರ್ಚೆಯಲ್ಲಿ ಪ್ರಸ್ತಾಪಿಸಲಾಯಿತು. ಈ ಎರಡು ಸ್ಥಾನದಲ್ಲಿ ಆಡಬಲ್ಲ ವಿಶ್ವಾಸರ್ಹ ಆಟಗಾರ ಕೆಎಲ್ ರಾಹುಲ್ ಅವರಿಗೆ ಅವಕಾಶ ನೀಡಲಾಗಿದೆ. ರಾಹುಲ್ ನಮಗೆ ಆರಂಭಿಕರಾಗಿ ಹೆಚ್ಚಿನ ಆಯ್ಕೆಯಲ್ಲಿ ಇರುತ್ತಾರೆ. ಅಲ್ಲದೇ ನಂ.4 ಸ್ಥಾನದಲ್ಲಿ ಆಡುವುದರ ಬಗ್ಗೆ ತಂಡ ಮ್ಯಾನೇಜ್ ಮೆಂಟ್ ತೀರ್ಮಾನ ಕೈಗೊಳ್ಳುತ್ತದೆ ಎಂದರು.

    2017ರ ಚಾಂಪಿಯನ್ಸ್ ಟ್ರೋಫಿ ಬಳಿಕ ಹೆಚ್ಚಿನ ಆಟಗಾರರನ್ನು ಪರೀಕ್ಷೆ ಒಳಪಡಿಸಲು ಅವಕಾಶಗಳನ್ನು ನೀಡಲಾಗಿತ್ತು. ಇದರಲ್ಲಿ ದಿನೇಶ್ ಕಾರ್ತಿಕ್, ಶ್ರೇಯಸ್, ಮನೀಸ್ ಪಾಂಡೆ, ವಿಜಯ್ ಶಂಕರ್, ಅಂಬಟಿ ರಾಯುಡು ಕೂಡ ಅವಕಾಶ ಪಡೆದಿದ್ದರು. ಆದರೆ ಅಂತಿಮವಾಗಿ ವಿಜಯ್ ಶಂಕರ್‍ಗೆ ಸ್ಥಾನ ನೀಡಲಾಗಿದ್ದು, ಬ್ಯಾಟಿಂಗ್ ಹಾಗೂ ಅನಿವಾರ್ಯ ಸಂದರ್ಭದಲ್ಲಿ ಶಂಕರ್ ಬೌಲಿಂಗ್ ಸಹ ಮಾಡುವ ಸಾಮಥ್ರ್ಯ ಹೊಂದಿದ್ದಾರೆ. ಅಲ್ಲದೇ ಅವರು ಉತ್ತಮ ಫೀಲ್ಡರ್ ಕೂಡ ಆಗಿದ್ದಾರೆ ಎಂದು ತಿಳಿಸಿದರು.

    ಇದೇ ವೇಳೆ ಪಂತ್ ನಮಗೇ ಉತ್ತಮ ಆಯ್ಕೆ ಆಗಿದ್ದರು ಸಹ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡಲಾಗಿದೆ. ಏಕೆಂದರೆ ವಿಶ್ವಕಪ್ ಟೂರ್ನಿಯಲ್ಲಿ ಪ್ರತಿಯೊಂದು ಪಂದ್ಯವೂ ಪ್ರಮುಖವಾಗಿದ್ದು, ಧೋನಿ ಅನುಪಸ್ಥಿತಿಯಲ್ಲಿ ಆಡುವ ಉತ್ತಮ ವಿಕೆಟ್ ಕೀಪರ್ ರನ್ನ ಆಯ್ಕೆ ಮಾಡಲಾಗಿದೆ. ಅನಿವಾರ್ಯವಾಗಿ ಪಂತ್ ಅವರನ್ನು ಕೈ ಬಿಡಲಾಗಿದೆ ಎಂದರು. ಉಳಿದಂತೆ ಎಲ್ಲಾ ಆಟಗಾರರನ್ನು ಅವರ ಸಾಮಥ್ರ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

  • ಧವನ್ ಪುತ್ರನಿಗೆ ‘ಬೇಬಿ ಸಿಟ್ಟರ್’ ಆದ ರಿಷಬ್ ಪಂತ್!

    ಧವನ್ ಪುತ್ರನಿಗೆ ‘ಬೇಬಿ ಸಿಟ್ಟರ್’ ಆದ ರಿಷಬ್ ಪಂತ್!

    ಕೋಲ್ಕತ್ತಾ: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಬೇಬಿ ಸಿಟ್ಟರ್ ಆಗಿ ಉತ್ತಮ ಹೆಸರಿದೆ. ಕಳೆದ ಆಸೀಸ್ ಸರಣಿಯ ವೇಳೆ ಆಸ್ಟ್ರೇಲಿಯಾ ತಂಡ ನಾಯಕ ಟೀಮ್ ಪೈನ್ ಅವರನ್ನು ರಿಷಬ್ ಪಂತ್ ಕಾಲೆಳೆದು ಬೇಬಿ ಸಿಟ್ಟರ್ ಆಗುವಂತೆ ಸಲಹೆ ನೀಡಿದ್ದ ಬಳಿಕ ಈ ಮಾತು ಪಂತ್ ಹೆಸರಿನೊಂದಿಗೆ ಸೇರಿಕೊಂಡಿತ್ತು.

    ಸದ್ಯ ರಿಷಬ್ ಮಗುವಿನೊಂದಿಗೆ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ರಿಷಬ್ ಕಾಲೆಳೆದಿದ್ದಾರೆ. ಡೆಲ್ಲಿ, ಕೋಲ್ಕತ್ತಾ ಪಂದ್ಯದ ವೇಳೆ ಧವನ್‍ರ ಮಗನೊಂದಿಗೆ ರಿಷಬ್ ಪಂತ್ ಆಡಿದ ಆಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಧವನ್ ಪುತ್ರ ಜೊರಾವರ್ ರೊಂದಿಗೆ ಸಮಯ ಕಳೆದಿದ್ದರು. ಟವೆಲ್ ಹಿಡಿದುಕೊಂಡು ಪಂತ್ ಧವನ್ ಪತ್ರನ್ನು ಮೇಲಕ್ಕೆತ್ತಿ ತಿರುಗಿಸಿ ಮುದ್ದು ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

     

    View this post on Instagram

     

    Proof that @RishabPant’s babysitting skills have reached another level ???? #KKRvDC #ThisIsNewDelhi #DelhiCapitals

    A post shared by Delhi Capitals (@delhicapitals) on

    ಪಂತ್ ಜೊರಾವರ್ ನನ್ನು ಎತ್ತಿ ಸುತ್ತಾಡಿಸಿದ್ದ ಬಗ್ಗೆ ಕೆಲ ಟ್ವಿಟ್ಟರ್ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅಕಸ್ಮಾತ್ ಹೆಚ್ಚು ಕಮ್ಮಿ ಆಗಿದ್ದರೆ ಏನಾಗುತ್ತಿತ್ತು ಎಂದು ಬರೆದುಕೊಂಡಿದ್ದಾರೆ. ಮಕ್ಕಳೊಂದಿಗೆ ಅಪಾಯಕಾರಿ ಆಟ ಆಡುವುದು ಅಷ್ಟು ಉತ್ತಮವಲ್ಲ ಎಂಬ ಸಲಹೆಗಳನ್ನ ಕೂಡ ಪಂತ್‍ಗೆ ನೀಡಿದ್ದಾರೆ. ಮತ್ತು ಕೆಲವರು ಪಂತ್ ಒಬ್ಬ ಉತ್ತಮ ಬೇಬಿ ಸಿಟ್ಟರ್ ಎಂದು ಈ ಮೂಲಕ ಪ್ರೂವ್ ಮಾಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

  • ರಿಷಬ್ ಪಂತ್ ಮೇಲಿನ ಫಿಕ್ಸಿಂಗ್ ಆರೋಪಕ್ಕೆ ಬಿಸಿಸಿಐ ಸ್ಪಷ್ಟನೆ

    ರಿಷಬ್ ಪಂತ್ ಮೇಲಿನ ಫಿಕ್ಸಿಂಗ್ ಆರೋಪಕ್ಕೆ ಬಿಸಿಸಿಐ ಸ್ಪಷ್ಟನೆ

    ಮುಂಬೈ: ಐಪಿಎಲ್ ಟೂರ್ನಿಯ ಡೆಲ್ಲಿ, ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಗೆಲುವು ಪಡೆದಿದ್ದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಪಂದ್ಯದ ವೇಳೆ ಡೆಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಆಡಿದ್ದ ಮಾತುಗಳು ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿದೆ.

    ಪಂದ್ಯದ ವೇಳೆ ರಿಷಬ್ ಆಡಿದ ಮಾತು ಸ್ಟಂಪ್ ಮೈಕಿನಲ್ಲಿ ದಾಖಲಾಗಿದ್ದು, ಈ ಮಾತು ಕೇಳಿದ ಹಲವು ನೋಡುಗರು ಪಂದ್ಯ ಫಿಕ್ಸ್ ಆಗಿತ್ತಾ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪಂದ್ಯದ ವೇಳೆ ರಬಿನ್ ಉತ್ತಪ್ಪ ಬ್ಯಾಟ್ ಮಾಡುತ್ತಿದ್ದ ಸಂದರ್ಭದಲ್ಲಿ ರಿಷಬ್ ‘ಈ ಎಸೆತ ಖಚಿತವಾಗಿ ಬೌಂಡರಿ ಗೆರೆ ದಾಟುತ್ತದೆ’ ಎಂದು ತಿಳಿಸಿದ್ದರು. ಕಾಕತಾಳೀಯ ಎಂಬಂತೆ ಆ ಎಸೆತದಲ್ಲಿ ಉತ್ತಪ್ಪ ಬೌಂಡರಿ ಸಿಡಿಸಿದರು.

    ರಿಷಬ್ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆ ಹಲವರು ಈ ಬಗ್ಗೆ ಪ್ರಶ್ನೆ ಮಾಡಿದ್ದು. ಬೌಲರ್ ಚೆಂಡು ಎಸೆಯುವ ಮುನ್ನವೇ ರಿಷಬ್ ಬೌಂಡರಿ ಸಿಡಿಸಲಿದ್ದಾರೆ ಎಂದು ಹೇಳಿದ್ದು ಹೇಗೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅಲ್ಲದೇ ಐಪಿಎಲ್ ಎಂದರೆ ಮ್ಯಾಚ್ ಫಿಕ್ಸಿಂಗ್ ಅಲ್ವಾ ಎಂಬ ಹಲವು ಟೀಕೆಗಳು ಕೂಡ ಕೇಳಿ ಬಂದಿತ್ತು.

    ಇದರ ನಡುವೆ ರಿಷಬ್ ಮಾತಿಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ವಕ್ತಾರರು, ರಿಷಬ್ ಮಾತನ್ನು ತಪ್ಪಾಗಿ ಆರ್ಥೈಸಲಾಗಿದೆ. ಆತನ ಹೇಳಿಗೂ ಮುನ್ನ ರಿಷಬ್ ಏನು ಮಾತನಾಡಿದ್ದರು ಎಂಬುವುದು ಯಾರಿಗೂ ತಿಳಿದಿಲ್ಲ. ರಿಷಬ್ ತಂಡದ ನಾಯಕನಿಗೆ ಆಫ್ ಸೈಡ್ ಭಾಗದಲ್ಲಿ ಆಟಗಾರರ ಸಂಖ್ಯೆಯನ್ನು ಹೆಚ್ಚಿಸುವಂತೆ ಸಲಹೆ ನೀಡಿದ್ದರು. ಈ ಸಂದರ್ಭದಲ್ಲಿಯೇ ಮಾತನಾಡಿದ್ದಾರೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ.

  • ರಿಷಬ್ ಪಂತ್ ಭವಿಷ್ಯದ ಸ್ಟಾರ್ ಆಟಗಾರ : ಯುವಿ

    ರಿಷಬ್ ಪಂತ್ ಭವಿಷ್ಯದ ಸ್ಟಾರ್ ಆಟಗಾರ : ಯುವಿ

    ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಸ್ಫೋಟಕ ಪ್ರದರ್ಶನ ನೀಡಿದ ಯುವ ಆಟಗಾರ ರಿಷಬ್ ಪಂತ್ ಕುರಿತು ಯುವರಾಜ್ ಸಿಂಗ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದು, ಭವಿಷ್ಯದ ಸ್ಟಾರ್ ಆಟಗಾರ ಎಂದಿದ್ದಾರೆ.

    ಮುಂಬೈ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಪಂತ್ 27 ಎಸೆತಗಳಲ್ಲಿ 78 ರನ್ ಸಿಡಿಸಿ ಮಿಂಚಿದ್ದರು. ಅಲ್ಲದೇ 7 ಸಿಕ್ಸರ್, 7 ಬೌಂಡರಿ ಸಿಡಿಸಿದ್ದರು. ಪಂದ್ಯದ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ 2011ರ ವಿಶ್ವಕಪ್ ಹೀರೋ ಯುವಿ, ರಿಷನ್ ಪಂತ್ ವಿಶ್ವಕಪ್ ಆಯ್ಕೆ ಬಗ್ಗೆ ನಾನು ಏನು ಹೇಳಲು ಸಾಧ್ಯವಿಲ್ಲ. ಆದರೆ ಕಳೆದ ವರ್ಷ ಪಂತ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ಲದೇ ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದು, ಮುಂದಿನ ದಿನಗಳಲ್ಲಿ ಸ್ಟಾರ್ ಆಟಗಾರ ಆಗುವ ವಿಶ್ವಾಸ ಇದೆ ಎಂದಿದ್ದಾರೆ.

    ಇತ್ತ ಟೂರ್ನಿಯ ಆರಂಭದ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ ಯುವಿ ಕೂಡ ಈ ಬಾರಿ ಮುಂಬೈ ಮಿಂಚುವ ಸೂಚನೆ ನೀಡಿದ್ದಾರೆ. ಆದರೆ ಯುವಿ ಅರ್ಧ ಶತಕದ ನಡುವೆಯೂ ಮುಂಬೈ ಸೋಲುಂಡಿತು. 35 ಎಸೆತಗಳಲ್ಲಿ ಯುವಿ 53 ರನ್ ಗಳಿಸಿದ್ದರು.

    ಕಳೆದ ಎರಡು ವರ್ಷಗಳ ಪ್ರದರ್ಶನದಲ್ಲಿ ಸಾಕಷ್ಟು ವ್ಯತ್ಯಾಸ ಉಂಟಾಯಿತು. ಆದರೆ ನಾನು ಕ್ರಿಕೆಟ್ ಮೇಲಿನ ಪ್ರೀತಿಯಿಂದಲೇ ಆಡುತ್ತಿದ್ದೇನೆ. ದೇಶ ಪರ ಸದ್ಯ ಆಡಲು ಸಾಧ್ಯವಾಗದಿದ್ದರೂ ಕೂಡ ಈ ಹಿಂದೆ ಅಂಡರ್ 16, 14 ತಂಡದ ಪರ ಆಡಿದಂತೆಯೇ ಸಂತಸದಿಂದ ಆಡುತ್ತಿದ್ದೇನೆ. ಸಚಿನ್ ಅವರೊಂದಿಗೆ ಕಳೆದ ಸಮಯ, ನನ್ನ ಪ್ರದರ್ಶನ ಉತ್ತಮ ಪಡಿಸಲು ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.

  • ಕೊಹ್ಲಿ ಕೋಪ ನೋಡಿದ್ರೆ ಭಯವಾಗುತ್ತೆ: ರಿಷಬ್ ಪಂತ್

    ಕೊಹ್ಲಿ ಕೋಪ ನೋಡಿದ್ರೆ ಭಯವಾಗುತ್ತೆ: ರಿಷಬ್ ಪಂತ್

    ನವದೆಹಲಿ: ಕ್ರಿಕೆಟ್ ಟೀಂ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಕೋಪ ನೋಡಿದ್ರೆ ನನಗೆ ಭಯವಾಗುತ್ತದೆ ಎಂದು ಕ್ರಿಕೆಟಿಗ, ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಹೇಳಿದ್ದಾರೆ.

    ಐಪಿಎಲ್ ದೆಹಲಿ ಕ್ಯಾಪ್ಟಿಲ್ ತಂಡದಲ್ಲಿ ರಿಷಬ್ ಪಂತ್ ಆಡುತ್ತಿದ್ದಾರೆ. ದೆಹಲಿ ಕ್ಯಾಪ್ಟಿಲ್ ವೆಬ್‍ಸೈಟ್ ನ ಸಂದರ್ಶನದ ವೇಳೆ ಮಾತನಾಡುತ್ತಾ, ವಿರಾಟ್ ಕೊಹ್ಲಿ ಅವರ ಕೋಪದ ಬಗ್ಗೆ ತಿಳಿಸಿದ್ದಾರೆ.

    ಮೈದಾನದಲ್ಲಿ ಮತ್ತು ಹೊರಗೆ ನಾನು ಯಾರಿಗೂ ಹೆದರಲ್ಲ. ಆದ್ರೆ ಮೈದಾನದಲ್ಲಿ ವಿರಾಟ್ ಕೊಹ್ಲಿ ಕೋಪ ಮಾಡಿಕೊಂಡ್ರೆ ಭಯವಾಗುತ್ತದೆ. ನಾವು ಸರಿಯಾಗಿ ಆಡಿದರೆ ಕೊಹ್ಲಿ ಕೋಪಗೊಳ್ಳುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ತಿಳಿಸಿದ್ದಾರೆ.

    ಕೆಲ ಬಾರಿ ತಪ್ಪು ಮಾಡಿದಾಗ ಇತರೆ ಆಟಗಾರರು ನಮ್ಮ ಮೇಲೆ ಮುನಿಸಿಕೊಳ್ಳುತ್ತಾರೆ. ತಪ್ಪುಗಳಾದಾಗ ನಾಯಕನಾದವರು ಹೇಳಿದಾಗ ಅರ್ಥವಾಗುತ್ತದೆ. ಈ ವೇಳೆ ನಾವು ಮಾಡಿದ ತಪ್ಪಿನ ಅರಿವು ನಮಗಾಗುತ್ತದೆ ಎಂದು ರಿಷಬ್ ಹೇಳಿದ್ದಾರೆ.

    ಮೂರು ಫಾರ್ಮೆಟ್ ಗಳಲ್ಲಿ ರಿಷಬ್ ಪಂತ್ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಳಿಕ ರಿಷಬ್ ಪಂತ್ ಒಳ್ಳೆಯ ವಿಕೆಟ್ ಕೀಪರ್ ಆಗಲಿದ್ದಾರೆ ಎಂಬ ಭರವಸೆಯನ್ನು ಮೂಡಿಸಿದ್ದಾರೆ. 21 ವರ್ಷದ ರಿಷಬ್ ಪಂತ್ ವಿಕೆಟ್ ಕೀಪಿಂಗ್ ವೇಳೆ ಕೆಲವೊಮ್ಮೆ ನಿರಾಸೆ ಮೂಡಿಸುತ್ತಾರೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಧೋನಿ ರೀತಿ ಸ್ಟಂಪಿಂಗ್ ಮಾಡಲು ಪ್ರಯತ್ನಿಸಿ ಹೆಚ್ಚುವರಿ ರನ್ ನೀಡಿದ್ದರು. ಈ ವೇಳೆ ನಾಯಕ ವಿರಾಟ್ ಕೊಹ್ಲಿ ಕೋಪಗೊಂಡಿದ್ದರು.