Tag: ರಿಷಬ್ ಪಂತ್

  • ‘ವಿರಾಟ್ ನೀನು ಕೂಡ ಧೋನಿ ರೀತಿಯೇ?’- ಕೊಹ್ಲಿ ವಿರುದ್ಧ ಸೆಹ್ವಾಗ್ ಫೈರ್

    ‘ವಿರಾಟ್ ನೀನು ಕೂಡ ಧೋನಿ ರೀತಿಯೇ?’- ಕೊಹ್ಲಿ ವಿರುದ್ಧ ಸೆಹ್ವಾಗ್ ಫೈರ್

    ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ 4 ಪಂದ್ಯಗಳು ಪೂರ್ಣಗೊಂಡಿದ್ದು, ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಯಾವುದೇ ಅವಕಾಶವನ್ನು ಪಡೆಯಲಿಲ್ಲ. ಕೆಎಲ್ ರಾಹುಲ್ ಆರಂಭಿಕರಾಗಿ ಮಾತ್ರವಲ್ಲದೇ ವಿಕೆಟ್ ಹಿಂದೆಯೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಿಷಬ್ ಪಂತ್ ಸ್ಥಾನಕ್ಕೆ ಮನೀಶ್ ಪಾಂಡೆರನ್ನು ಆಯ್ಕೆ ಮಾಡಲಾಗಿದೆ. ಆದರೆ ರಿಷಬ್ ಪಂತ್ ಕೈಬಿಡುವ ಮುನ್ನ ಆತನೊಂದಿಗೆ ಮಾತನಾಡಿದ್ದೀರಾ ಎಂದು ಸೆಹ್ವಾಗ್ ಕೊಹ್ಲಿಗೆ ಪ್ರಶ್ನೆ ಮಾಡಿದ್ದಾರೆ.

    2011-12ರಲ್ಲಿ ಆಸೀಸ್ ಟೂರ್ನಿಯ ವೇಳೆ ನಿಧಾನಗತಿಯ ಫೀಲ್ಡಿಂಗ್ ಮಾಡುತ್ತಾರೆ ಎಂದು ಸೆಹ್ವಾಗ್, ಸಚಿನ್, ಗೌತಮ್ ಗಂಭೀರ್ ಅವರನ್ನು ತಂಡದ ನಾಯಕರಾಗಿದ್ದ ಧೋನಿ ರೋಟೆಶನ್ ಮಾಡಿದ್ದರು. ಆದರೆ ಈ ಬಗ್ಗೆ ಒಮ್ಮೆಯೂ ಧೋನಿ ತಂಡದ ಆಟಗಾರರ ಚರ್ಚೆಯ ಸಂದರ್ಭದಲ್ಲಿ ಧೋನಿ ಪ್ರಸ್ತಾಪ ಮಾಡಿರಲಿಲ್ಲ. ಅಲ್ಲದೇ ನೇರ ಈ ವಿಚಾರವನ್ನು ಮಾಧ್ಯಮ ಎದುರು ಹೇಳಿದ್ದರು. ಮಾಧ್ಯಮಗಳಿಂದ ಅಂದು ನಾವು ಈ ವಿಚಾರವನ್ನು ತಿಳಿದುಕೊಂಡಿದ್ದೇವು ಎಂದು ಸೆಹ್ವಾಗ್ ಹೇಳಿದ್ದಾರೆ.

    ಅಂದು ತಂಡದಲ್ಲಿ ಕೇವಲ ರೊಟೇಷನ್ ಬಗ್ಗೆ ಮಾತ್ರ ಚರ್ಚೆ ನಡೆಸಿ ರೋಹಿತ್ ಶರ್ಮಾಗೆ ಅವಕಾಶ ನೀಡುವ ಬಗ್ಗೆ ಮಾತನಾಡಿದ್ದರು. ಆದರೆ ನಿಧಾನಗತಿ ಫೀಲ್ಡಿಂಗ್ ಬಗ್ಗೆ ಅಲ್ಲಿಯೇ ತಿಳಿಸಿದ್ದರೆ ಉತ್ತಮವಾಗಿ ಇರುತ್ತಿತ್ತು. ಸದ್ಯದ ಪರಿಸ್ಥಿತಿಯಲ್ಲಿ ರಿಷಬ್ ಪಂತ್ ಹಾಗೂ ನಾಯಕ ಕೊಹ್ಲಿ ನಡುವೆ ಕಮ್ಯುನಿಕೇಷನ್ ಗ್ಯಾಪ್ ಇರುವಂತಿದ್ದು. ಖಂಡಿತ ಇದು ತಪ್ಪಾಗುತ್ತದೆ. ಧೋನಿ ರೀತಿಯಂತೆಯೇ ಕೊಹ್ಲಿ ಕೂಡ ನಡೆದುಕೊಳ್ಳುತ್ತಿದ್ದರಾ ಎಂಬುವುದು ನನಗೆ ತಿಳಿದಿಲ್ಲ. ಆದರೆ ರೋಹಿತ್ ಶರ್ಮಾ ನಾಯಕರಾಗಿದ್ದ ಸಂದರ್ಭದಲ್ಲಿ ಮಾತ್ರ ಆಟಗಾರರೊಂದಿಗೆ ಹೆಚ್ಚಿನ ಮಾತುಕತೆ ನಡೆಸುತ್ತಿದ್ದರು ಎಂದು ಸೆಹ್ವಾಗ್ ಅಭಿಪ್ರಾಯ ಪಟ್ಟಿದ್ದಾರೆ.

  • ಬಾಲಿವುಡ್ ನಟಿಯನ್ನು ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ ರಿಷಬ್ ಪಂತ್

    ಬಾಲಿವುಡ್ ನಟಿಯನ್ನು ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ ರಿಷಬ್ ಪಂತ್

    ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಆಟಗಾರರು ಹಾಗೂ ಬಾಲಿವುಡ್ ನಟಿಯರು ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇದೇ ವೇಳೆ ಹಲವು ಆಟಗಾರರ ಹೆಸರು ಕೂಡ ನಟಿಯರೊಂದಿಗೆ ಕೇಳಿ ಬರುತ್ತದೆ. ಸದ್ಯ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಗೆಳತಿ, ನಟಿ ಊರ್ವಶಿ ರೌಟೇಲಾ ಅವರ ಮೊಬೈಲ್ ನಂಬರನ್ನು ತಮ್ಮ ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಇತ್ತೀಚೆಗಷ್ಟೇ ರಿಷಬ್ ಪಂತ್ ಹೊಸ ವರ್ಷದ ಸಂಭ್ರಮದಲ್ಲಿ ತಮ್ಮ ಪ್ರೇಯಸಿ ಇಶಾ ನೇಗಿ ಅವರೊಂದಿಗೆ ಇರುವ ಫೋಟೋವನ್ನು ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಾವಿಬ್ಬರೂ ಕಳೆದ 5 ವರ್ಷಗಳಿಂದ ಪ್ರೀತಿಯಲ್ಲಿರುವುದಾಗಿ ತಿಳಿಸಿದ್ದರು. ಆದರೆ ಇದಾದ ಬಳಿಕ ರಿಷಬ್ ಪಂತ್ ಅವರ ಮಾಜಿ ಗೆಳತಿ, ನಟಿ ಊರ್ವಶಿ ರೌಟೇಲಾ ಮತ್ತೆ ರಿಷಬ್‍ರನ್ನು ಸಂಪರ್ಕ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.

    ಊರ್ವಶಿ ರೌಟೇಲಾರೊಂದಿಗೆ ಮಾತನಾಡಲು ಇಷ್ಟಪಡದ ರಿಷಬ್, ತಮ್ಮ ಮೊಬೈಲ್‍ನಲ್ಲಿ ನಟಿಯ ಮೊಬೈಲ್ ಸಂಖ್ಯೆಯನ್ನು ವಾಟ್ಸಪ್‍ನಲ್ಲಿ ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಇಬ್ಬರು ಪರಸ್ಪರ ಚರ್ಚೆ ನಡೆಸಿಕೊಂಡ ಬಳಿಕವೇ ತಮ್ಮ ಮೊಬೈಲ್ ನಂಬರ್ ಗಳನ್ನು ಬ್ಲಾಕ್ ಮಾಡಿಕೊಂಡಿದ್ದಾರೆ ಎಂದು ಊರ್ವಶಿ ರೌಟೇಲಾ ಸ್ನೇಹಿತರು ಪ್ರತಿಕ್ರಿಯೆ ನೀಡಿದ್ದಾರೆ.

     

    View this post on Instagram

     

    I like me better when I’m with you ????????????‍♂

    A post shared by Rishabh Pant (@rishabpant) on

  • ಪ್ರೇಯಸಿ ಇಶಾ ನೇಗಿ ಜೊತೆ ರಿಷಬ್ ಪಂತ್ ಹೊಸ ವರ್ಷದ ಸಂಭ್ರಮ

    ಪ್ರೇಯಸಿ ಇಶಾ ನೇಗಿ ಜೊತೆ ರಿಷಬ್ ಪಂತ್ ಹೊಸ ವರ್ಷದ ಸಂಭ್ರಮ

    ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಟೂರ್ನಿಯ ಬಳಿಕ ತಮ್ಮ ಪ್ರೇಯಸಿಯನ್ನು ಪರಿಚಯಿಸಿದ್ದ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್, ಸದ್ಯ ಹೊಸ ಸಂಭ್ರಮವನ್ನು ಪ್ರೇಯಸಿ ಇಶಾ ನೇಗಿ ಜೊತೆ ಆಚರಿಸಿಕೊಂಡಿದ್ದಾರೆ.

    ಹೊಸ ವರ್ಷದ ಸಂಭ್ರಮವನ್ನು ಮಂಜಿನ ಬೆಟ್ಟದ ಪ್ರದೇಶವೊಂದರಲ್ಲಿ ಆಚರಿಸುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಿಷಬ್, ‘ಯಾವಾಗ ನಾನು ನಿನ್ನೊಂದಿಗೆ ಇರುತ್ತೇನೋ, ಆಗ ನನ್ನನ್ನು ನಾನು ಹೆಚ್ಚು ಇಷ್ಟ ಪಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಇತ್ತ ಇಶಾ ನೇಗಿ ತಮ್ಮ ಇನ್‍ಸ್ಟಾ ಖಾತೆಯಲ್ಲಿ ಫೋಟೋ ಶೇರ್ ಮಾಡಿ, ‘5 ಇಯರ್ ಅಂಡ್ ಕೌಂಟಿಂಗ್…. ಲವ್ ಯು ಸ್ಕೈ ಬಿಗ್ ಬೇಬಿ’ ಎಂದು ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಇಬ್ಬರು ನಡುವಿನ ಪ್ರೀತಿ ಆರಂಭವಾಗಿ 5 ವರ್ಷವಾಗಿದೆ ಎಂಬರ್ಥವನ್ನು ನೀಡುತ್ತಿದೆ.

     

    View this post on Instagram

     

    5th year and counting…love you sky big bubbie ????

    A post shared by Isha Negi (@ishanegi_) on

    ಕ್ರಿಕೆಟ್ ಪಂದ್ಯಗಳಿಂದ ಲಭಿಸಿದ ವಿರಾಮದ ಸಮಯವನ್ನು ಗೆಳತಿಯೊಂದಿಗೆ ಕಳೆಯುತ್ತಿರುವ ರಿಷಬ್, ಆಗಾಗ ಇಬ್ಬರ ವಿಶೇಷ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತ ಅಭಿಮಾನಿಗಳು ಕೂಡ ಜೋಡಿಗೆ ಶುಭ ಕೋರಿ ಕಮೆಂಟ್ ಮಾಡುತ್ತಿದ್ದಾರೆ.

    ಮೊದಲ ಬಾರಿಗೆ ಇಶಾ ನೇಗಿ ಜೊತೆಗಿರುವ ಫೋಟೋ ಶೇರ್ ಮಾಡಿದ್ದ ರಿಷಬ್, ‘ನಾನು ನಿನ್ನನ್ನು ಸಂತೋಷ ಪಡಿಸುತ್ತೇನೆ. ಯಾಕೆಂದರೆ ನನ್ನ ಸಂತೋಷಕ್ಕೆ ನೀನು ಕಾರಣ’ ಎಂದು ಬರೆದುಕೊಂಡಿದ್ದರು.

     

    View this post on Instagram

     

    I like me better when I’m with you ????????????‍♂

    A post shared by Rishabh Pant (@rishabpant) on

  • ಧೋನಿ ಜಪ ಬಿಟ್ಟು, ಪಂತ್‍ಗೆ ದಯೆ ತೋರಿ ಎಂದ ಕೊಹ್ಲಿ

    ಧೋನಿ ಜಪ ಬಿಟ್ಟು, ಪಂತ್‍ಗೆ ದಯೆ ತೋರಿ ಎಂದ ಕೊಹ್ಲಿ

    ಹೈದರಾಬಾದ್: ಕಳಪೆ ಫಾರ್ಮ್ ನಿಂದ ಸತತ ವೈಫಲ್ಯ ಅನುಭವಿಸುತ್ತಿರುವ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಬೆಂಬಲಕ್ಕೆ ನಾಯಕ ಕೊಹ್ಲಿ ಆಗಮಿಸಿದ್ದು, ತಂಡದ ಆಯ್ಕೆ ಸಮಿತಿ ಪಂತ್ ಮೇಲೆ ಭರವಸೆಯಿಟ್ಟು, ವಿಶ್ವಾಸದಿಂದ ಅವಕಾಶ ನೀಡಿದೆ. ಅಭಿಮಾನಿಗಳು ಕೂಡ ಪಂತ್ ಕುರಿತು ದಯೆ ತೋರಬೇಕಿದೆ ಎಂದಿದ್ದಾರೆ.

    ನಾಳೆ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೊಹ್ಲಿ, ಪಂತ್ ವೈಫಲ್ಯಗಳ ಕುರಿತು ಪ್ರಸ್ತಾಪಿಸಿದರು. ತಂಡದ ಆಯ್ಕೆ ಸಮಿತಿ ಪಂತ್ ಮೇಲೆ ವಿಶ್ವಾಸ ಹೊಂದಿದೆ. ಅಭಿಮಾನಿಗಳು ಕೂಡ ಪಂತ್ ವಿಫಲರಾದ ಸಂದರ್ಭದಲ್ಲಿ ಧೋನಿ ಎಂದು ಘೋಷಣೆ ಕೂಗದೆ ಅವರಿಗೆ ಬೆಂಬಲ ನೀಡಬೇಕು ಎಂದರು.

    ಪಂತ್ ಸಾಮರ್ಥ್ಯದ ಕುರಿತು ತಮಗೆ ಪೂರ್ತಿ ವಿಶ್ವಾಸವಿದೆ. ಆತ ಮ್ಯಾಚ್ ವಿನ್ನರ್ ಆಟಗಾರನಾಗಿದ್ದು, ಆದರೆ ಕೆಲ ಸಂದರ್ಭದಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಧೋನಿ ಎಂದು ಜಪ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ದೇಶಕ್ಕಾಗಿ ಆಡುವ ಪ್ರತಿಯೊಬ್ಬ ಆಟಗಾರನೂ ಕೂಡ ಜವಾಬ್ದಾರಿಯಿಂದ ಆಡುತ್ತಾನೆ. ದೇಶಕ್ಕಾಗಿ ಗೆಲುವು ಸಾಧಿಸಿಬೇಕು ಎಂಬ ಯೋಚನೆ ಇರುತ್ತದೆ. ಯಾವುದೇ ಆಟಗಾರ ಕೂಡ ಬೇಕು ಎಂದು ಅಂತಹ ಪರಿಸ್ಥಿತಿಯನ್ನು ಎದುರಿಸುವುದಿಲ್ಲ. ಈ ವೇಳೆ ಆಟಗಾರರಿಗೆ ಅಭಿಮಾನಿಗಳು ಬೆಂಬಲವಾಗಿ ನಿಲ್ಲಬೇಕು ಎಂದರು.

    ಇದೇ ವೇಳೆ ರಿಷಬ್ ಪಂತ್ ಅವರು ಆರಂಭಿಕರಾಗಿ ಕಣಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ನನ್ನ ಬಳಿ ಈ ಪ್ರಶ್ನೆಗೆ ಉತ್ತರವಿಲ್ಲ ಎಂದರು. ಏಕೆಂದರೆ ತಂಡದಲ್ಲಿರುವ ಆರಂಭಿಕ 4 ಬ್ಯಾಟ್ಸ್ ಮನ್‍ಗಳು ಯಾವ ಕ್ರಮಾಂಕದಲ್ಲಿಯಾದರೂ ಆಡಲು ಶಕ್ತರಾಗಿದ್ದಾರೆ. ಉದಾಹರಣೆಗೆ ವೃದ್ಧಿಮಾನ್ ಸಹಾ ಐಪಿಎಲ್ ನಲ್ಲಿ ಎಲ್ಲಾ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಅಲ್ಲದೇ ಆಯ್ಕೆ ಸಂದರ್ಭದಲ್ಲಿ ಎಲ್ಲಾ ಕ್ರಮಾಂಕದಲ್ಲಿಯೂ ಆಡಲು ಸಿದ್ಧರಾಗಲು ಸೂಚಿಸಿದ್ದೇವೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಸಿದ್ಧವಾಗಿದ್ದು, ಟಿ20 ಮಾದರಿಯಲ್ಲಿ ಯಾವುದೇ ತಂಡವನ್ನು ನಿರ್ಲಕ್ಷ್ಯ ಮಾಡುವುದಿಲ್ಲ ಎಂದರು.

    ವಿಶ್ವಕಪ್ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಯಾವುದೇ ಸರಣಿಯಲ್ಲಿ ಆಡಿಲ್ಲ. ಪರಿಣಾಮ ಪಂತ್ ಹೆಚ್ಚಿನ ಅವಕಾಶ ಪಡೆದರೂ ಕಳಪೆ ಫಾರ್ಮ್ ಸಮಸ್ಯೆಯಿಂದ ಟೀಕೆಗೆ ಗುರಿಯಾಗಿದ್ದಾರೆ. ಅಲ್ಲದೇ ಹಲವು ಮಾಜಿ ಆಟಗಾರರು ಪಂತ್ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡುವಂತೆ ಬಹಿರಂಗ ಹೇಳಿಕೆ ನೀಡಿದ್ದಾರೆ. 2020ರ ಟಿ20 ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾ ಆಯ್ಕೆ ಸಮಿತಿ ಬಲಿಷ್ಠ ತಂಡದ ನಿರ್ಮಿಸುವ ಉದ್ದೇಶವನ್ನು ಹೊಂದಿದ್ದು, ಯುವ ಆಟಗಾರರಿಗೆ ಅವಕಾಶ ನೀಡಿ ಹಲವು ಪ್ರಯೋಗಗಳನ್ನು ನಡೆಸುತ್ತಿದೆ.

  • ರಿಷಬ್ ಪಂತ್ ಬೆಂಬಲಕ್ಕೆ ನಿಂತ ‘ದಾದಾ’

    ರಿಷಬ್ ಪಂತ್ ಬೆಂಬಲಕ್ಕೆ ನಿಂತ ‘ದಾದಾ’

    ನವದೆಹಲಿ: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟಿ20 ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‍ನಲ್ಲಿ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ವಿರುದ್ಧ ಹಲವು ಟೀಕೆಗಳು ಕೇಳಿ ಬಂದಿತ್ತು. ಅಲ್ಲದೇ ಹಲವು ಕ್ರಿಕೆಟ್ ವಿಶ್ಲೇಷಕರು ಕೆಲ ಪಂದ್ಯಗಳಿಗೆ ರಿಷಬ್‍ಗೆ ವಿಶ್ರಾಂತಿ ನೀಡಿದರೆ ಒಳಿತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪಂತ್ ಬೆಂಬಲಕ್ಕೆ ನಿಂತಿದ್ದು. ಪಂತ್ ಸೂಪರ್ ಪ್ಲೇಯರ್ ಎಂದಿದ್ದಾರೆ. ಇದನ್ನು ಓದಿ: ‘ಶಾಲೆಗೆ ಹೋದ್ರೆ ಧೋನಿ, ಆ್ಯಪ್ ಮೂಲಕ ಶಿಕ್ಷಣ ಪಡೆದ್ರೆ ಪಂತ್ ಆಗ್ತಾರೆ’

    ರಿಷಬ್ ಪಂತ್‍ಗೆ ಕೆಲ ಸಮಯಾವಕಾಶ ನೀಡಬೇಕಿದೆ. ಸದ್ಯ ಆತ ಒತ್ತಡದಲ್ಲಿರುವುದು ಸ್ಪಷ್ಟವಾಗಿ ಆರ್ಥವಾಗುತ್ತಿದೆ. ಆದ್ದರಿಂದಲೇ ಆತನ ಮೇಲೆ ಯಾವುದೇ ರೀತಿಯ ಒತ್ತಡ ಬೀಳದಂತೆ ಎಚ್ಚರಿಕೆ ವಹಿಸಬೇಕಿದೆ. ಪಂತ್ ಸೂಪರ್ ಪ್ಲೇಯರ್ ಆಗಿದ್ದು, ಟೀಂ ಇಂಡಿಯಾ ಬಾಂಗ್ಲಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದೆ ಎಂದು ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇತ್ತ 2ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ರಿಷಬ್ ಪಂತ್‍ಗೆ ಲಭಿಸಲಿಲ್ಲ. ಆದರೆ ವಿಕೆಟ್ ಹಿಂದೆ ಮಾತ್ರ ರಿಷಬ್ ವಿಫಲರಾಗಿದ್ದರು. ಬೌಂಡರಿ ಗೆರೆ ಬಳಿಯಿಂದ ಆಟಗಾರರು ಎಸೆಯುವ ಚೆಂಡನ್ನು ಪಡೆಯುವಲ್ಲಿಯೂ ಪಂತ್ ವಿಫಲರಾದ ಕಾರಣ ಎದುರಾಳಿ ತಂಡಕ್ಕೆ ಹೆಚ್ಚುವರಿ ರನ್ ಕೂಡ ಲಭಿಸಿತ್ತು. ಅಲ್ಲದೇ ಲಿಟಾನ್ ದಾಸ್ ಸ್ಟಂಪ್ ಔಟ್ ಮಾಡುವಲ್ಲಿ ಎಡವಟ್ಟು ಮಾಡಿ ಅವಕಾಶವನ್ನು ಕೈಚೆಲ್ಲಿದ್ದರು. ಅಲ್ಲದೇ ಬಾಂಗ್ಲಾದ ಮತ್ತೊಬ್ಬ ಆಟಗಾರನ ಸ್ಟಂಪ್ ಔಟ್ ವಿಚಾರದಲ್ಲೂ ಅದೃಷ್ಟವಶಾತ್ ಪಾರಾಗಿದ್ದರು. ಸದ್ಯ ಭಾನುವಾರ ನಡೆಯಲಿರುವ 3ನೇ ಅಂತಿಮ ಟಿ20 ಪಂದ್ಯದಲ್ಲಿ ರಿಷಬ್ ಪಂತ್ ಪ್ರದರ್ಶನದ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ.

  • `ಶಾಲೆಗೆ ಹೋದ್ರೆ ಧೋನಿ, ಆ್ಯಪ್ ಮೂಲಕ ಶಿಕ್ಷಣ ಪಡೆದ್ರೆ ಪಂತ್ ಆಗ್ತಾರೆ’

    `ಶಾಲೆಗೆ ಹೋದ್ರೆ ಧೋನಿ, ಆ್ಯಪ್ ಮೂಲಕ ಶಿಕ್ಷಣ ಪಡೆದ್ರೆ ಪಂತ್ ಆಗ್ತಾರೆ’

    – ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗ್ತಿದ್ದಾರೆ ಪಂತ್
    – ಸ್ಟಂಪಿಂಗ್ ವೇಳೆ ಪಂತ್ ಎಡವಟ್ಟು

    ರಾಜ್‍ಕೋಟ್: ಕೀಪರ್ ರಿಷಬ್ ಪಂತ್ ಬಾಂಗ್ಲಾದೇಶದ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಸ್ಟಂಪಿಂಗ್ ವೇಳೆ ಮಾಡಿದ ಎಡವಟ್ಟಿನಿಂದ ಈಗ ಫುಲ್ ಟ್ರೋಲ್ ಆಗುತ್ತಿದ್ದು ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ.

    ಯಜುವೇಂದ್ರ ಚಹಲ್ ಎಸೆದ 6ನೇ ಓವರಿನ ಮೂರನೇ ಎಸೆತವನ್ನು ಬಲವಾಗಿ ಹೊಡೆಯಲು ಲಿಟನ್ ದಾಸ್ ಕ್ರೀಸ್ ಬಿಟ್ಟು ಮುನ್ನುಗ್ಗಿದ್ದರು. ಆದರೆ ಬಾಲ್ ಬ್ಯಾಟಿಗೆ ಸಿಗದ ಕಾರಣ ಕೀಪರ್ ಕೈ ಸೇರಿತು. ಬಾಲ್ ಸಿಕ್ಕಿದ ಕೂಡಲೇ ರಿಷಬ್ ಪಂತ್ ಸ್ಟಂಪ್ ಮಾಡಿದ್ದಾರೆ.

    ನಿಯಮಗಳ ಪ್ರಕಾರ ಕೀಪರ್ ವಿಕೆಟ್ ಹಿಂದುಗಡೆ ಬಾಲ್ ಹಿಡಿದು ಸ್ಟಂಪ್ ಮಾಡಬೇಕು. ಆದರೆ ರಿಷಬ್ ಪಂತ್ ಔಟ್ ಮಾಡಲು ಮುನ್ನುಗ್ಗಿ ವಿಕೆಟ್ ಮುಂದುಗಡೆ ಬಾಲ್ ಹಿಡಿದು ಸ್ಟಂಪ್ ಮಾಡಿದ್ದರು. ರಿಷಬ್ ಪಂತ್ ಜೀವದಾನ ನೀಡಿದ್ರೂ ಕೊನೆಗೆ ಅವರಿಂದಲೇ ಲಿಟನ್ ದಾಸ್ ರನೌಟ್ ಆದರು.

    ಸುಲಭದ ಸ್ಟಂಪ್ ಔಟ್ ವೇಳೆ ಕ್ರಿಕೆಟಿನ ಮೂಲ ನಿಯಮ ಪಾಲಿಸದ್ದಕ್ಕೆ ಚಹಲ್ ಕೆಟ್ಟ ಪದಗಳಿಂದ ನಿಂದಿಸಿದರೆ ರೋಹಿತ್ ಶರ್ಮಾ ಸಹ ಪಂತ್ ವಿರುದ್ಧ ಗರಂ ಆಗಿದ್ದು ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರೋ’ಹಿಟ್’ ಸಿಕ್ಸರ್, ಬೌಂಡರಿಗಳ ಸುರಿಮಳೆ – ಭಾರತಕ್ಕೆ ಭರ್ಜರಿ ಜಯ

    https://twitter.com/barainishant/status/1192446051493597184

    ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐ ರಿಷಬ್ ಪಂತ್‍ಗೆ ಅವಕಾಶ ನೀಡುವುದು ಜಾಸ್ತಿಯಾಗಿದೆ. ಅವಕಾಶ ನೀಡಿದರೂ ಬ್ಯಾಟಿಂಗ್ ಮತ್ತು ಕೀಪಿಂಗ್‍ನಲ್ಲಿ ಪಂತ್ ವಿಫಲರಾಗಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

    ಧೋನಿ ಮತ್ತು ಪಂತ್ ಸ್ಟಂಪ್ ಮಾಡುತ್ತಿರುವ ಫೋಟೋ ಹಾಕಿ ಶಾಲೆಗೆ ಹೋಗಿ ಕಲಿತರೆ ಧೋನಿಯಂತಾಗುತ್ತಾರೆ. ಆದರೆ ಆ್ಯಪ್ ಮೂಲಕ ಶಿಕ್ಷಣ ಪಡೆದರೆ ಪಂತ್ ರೀತಿ ಆಗುತ್ತಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

    ಸಚಿನ್ ಜಾಗದಲ್ಲಿ ಈಗ ಕೊಹ್ಲಿ ಇದ್ದಾರೆ. ಆದರೆ ಧೋನಿ ಜಾಗದಲ್ಲಿ ಈಗ ಯಾರು ಎಂದು ಅಭಿಮಾನಿಗಳು ಪ್ರಶ್ನೆ ಮಾಡಿ ಪಂತ್ ವಿರುದ್ಧ ಅಸಮಾಧಾನ ಪ್ರಕಟಿಸಿದ್ದಾರೆ.

  • ರಿಷಬ್ ಪಂತ್‍ಗೆ ‘ಸೀರಿಯಸ್’ ವಾರ್ನಿಂಗ್ ಕೊಟ್ಟ ಗೌತಮ್ ಗಂಭೀರ್

    ರಿಷಬ್ ಪಂತ್‍ಗೆ ‘ಸೀರಿಯಸ್’ ವಾರ್ನಿಂಗ್ ಕೊಟ್ಟ ಗೌತಮ್ ಗಂಭೀರ್

    ನವದೆಹಲಿ: ಟೀಂ ಇಂಡಿಯಾದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ಯತ್ನಿಸುತ್ತಿರುವ ಯುವ ಆಟಗಾರ ರಿಷಬ್ ಪಂತ್‍ಗೆ ಗೌತಮ್ ಗಂಭೀರ್ ‘ಸೀರಿಯಸ್’ ವಾರ್ನಿಂಗ್ ನೀಡಿದ್ದಾರೆ.

    ಟೀಂ ಇಂಡಿಯಾದಲ್ಲಿ ಸತತ ಅವಕಾಶಗಳನ್ನು ಪಡೆಯುತ್ತಿರುವ ರಿಷಬ್ ಪಂತ್ ಒಮ್ಮೆ ತನ್ನ ಪ್ರದರ್ಶನದ ಕುರಿತು ಪರಿಶೀಲನೆ ನಡೆಸಿಕೊಂಡರೆ ಒಳ್ಳೆಯದು ಎಂದು ಗೌತಮ್ ಗಂಭೀರ್ ಹೇಳಿದ್ದು, ಪಂತ್‍ಗೆ ಉತ್ತಮ ಸಾಮರ್ಥ್ಯವಿದ್ದು, ಈ ಕುರಿತು ಯಾವುದೇ ಸಂದೇಹವಿಲ್ಲ. ಆದರೆ ತಂಡದಲ್ಲಿ ಸ್ಥಾನ ಪಡೆಯಲು ಮತ್ತೊಬ್ಬ ಯುವ ಆಟಗಾರ ಸಂಜು ಸ್ಯಾಮ್ಸನ್ ಸವಾಲು ನೀಡುತ್ತಿದ್ದಾರೆ. ನನ್ನ ನೆಚ್ಚಿನ ಆಟಗಾರ ಸ್ಯಾಮ್ಸನ್ ಖಂಡಿತ ರಿಷಬ್‍ಗೆ ಸವಾಲಾಗಲಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.

    ಧೋನಿ ಸ್ಥಾನವನ್ನು ತುಂಬುವಂತಹ ಆಟಗಾರರ ಆಯ್ಕೆಯಲ್ಲಿ ಪಂತ್ ಅವರಿಗೆ ಆಯ್ಕೆ ಸಮಿತಿ ಮೊದಲ ಅವಕಾಶ ನೀಡಿದೆ, ಆದರೆ ಪಂತ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಇತ್ತ ಸ್ಯಾಮ್ಸನ್ ಐಪಿಎಲ್ ಹಾಗೂ ಟೀಂ ಇಂಡಿಯಾ ಎ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯವ ನಿರೀಕ್ಷೆಯಲ್ಲಿದ್ದಾರೆ.

    ಇದೇ ವೇಳೆ ಟೀಂ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್ ಕುರಿತು ಗಂಭೀರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಈ ಆಟಗಾರರಿಗೆ ಉತ್ತಮ ಪ್ರದರರ್ಶನ ನೀಡುವ ಅವಕಾಶವಿದೆ. ಸರಣಿಯಲ್ಲಿ ಟೀಂ ಇಂಡಿಯಾ ಫೇವರೆಟಾಗಿದ್ದು, ದಕ್ಷಿಣ ಆಫ್ರಿಕಾ ತಂಡ ಅನುಭವಿ ಆಟಗಾರರ ಕೊರತೆ ಎದುರಿಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

  • ಧೋನಿಯನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ಹಿಂದಿಕ್ಕಿದ ಪಂತ್

    ಧೋನಿಯನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ಹಿಂದಿಕ್ಕಿದ ಪಂತ್

    ನವದೆಹಲಿ: ಭಾರತದ ಮಾಜಿ ನಾಯಕ ಎಂ.ಎಸ್ ಧೋನಿಯನ್ನು ಯುವ ಆಟಗಾರ ರಿಷಬ್ ಪಂತ್ ಟೆಸ್ಟ್ ವಿಕೆಟ್ ಕೀಪಿಂಗ್‍ನಲ್ಲಿ ಹಿಂದಿಕ್ಕಿದ್ದಾರೆ.

    ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ರಿಷಬ್ ಪಂತ್ ಆಡುತ್ತಿದ್ದಾರೆ. ಭಾರತದ ವಿಕೆಟ್ ಕೀಪರ್‍ ಗಳಲ್ಲಿ ಟೆಸ್ಟ್ ಪಂದ್ಯದಲ್ಲಿ ಅತಿ ಬೇಗ 50 ಬ್ಯಾಟ್ಸ್ ಮನ್‍ಗಳನ್ನು ಔಟ್ ಮಾಡಿದ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಮೂಲಕ ಎಂ.ಎಸ್ ಧೋನಿ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ.

    ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಲ್ಲಿ ವಿಂಡೀಸ್ ಆಟಗಾರ ಕ್ರೈಗ್ ಬ್ರಾಥ್‍ವೈಟ್ ಅವರನ್ನು ಕ್ಯಾಚ್ ಹಿಡಿದು ಔಟ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ ಎಂ.ಎಸ್ ಧೋನಿ 15 ಟೆಸ್ಟ್ ಪಂದ್ಯಗಳಲ್ಲಿ 50 ಬ್ಯಾಟ್ಸ್ ಮನ್‍ಗಳನ್ನು ಔಟ್ ಮಾಡಿದ್ದರು. ಆದರೆ ಆಡಿದ 11 ಪಂದ್ಯಗಳಲ್ಲೇ 50 ಬ್ಯಾಟ್ಸ್ ಮನ್ ಗಳನ್ನು ಬಲಿ ಪಡೆದಿರುವ ಪಂತ್, ಧೋನಿ ಅವರ ಸಾಧನೆಯನ್ನು ಹಿಂದಿಕ್ಕಿದ್ದಾರೆ.

    ಈ ಸಾಧನೆ ಮಾಡಿದ ವಿಶ್ವದ ಟಾಪ್ ವಿಕೆಟ್ ಕೀಪರ್‍ ಗಳಲ್ಲಿ ಪಂತ್ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್‍ಕ್ರಿಸ್ಟ್ ಅವರ ಜೊತೆ ಎರಡನೇ ಸ್ಥಾನದಲ್ಲಿದ್ದಾರೆ. ಇದರ ಜೊತೆಗೆ 10 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾದ ಮಾಜಿ ಕೀಪರ್ ಮಾರ್ಕ್ ಬೌಚರ್, ಇಂಗ್ಲೆಂಡ್‍ನ ಜೋಸ್ ಬಟ್ಲರ್ ಮತ್ತು ಆಸ್ಟ್ರೇಲಿಯಾದ ಟಿಮ್ ಪೈನ್ ಮೊದಲ ಸ್ಥಾನದಲ್ಲಿ ಇದ್ದಾರೆ.

    ದೆಹಲಿಯ ರಿಷಬ್ ಪಂತ್ ಅವರನ್ನು ಎಂ.ಎಸ್ ಧೋನಿಯ ನಂತರ ಭಾರತದ ಭವಿಷ್ಯದ ವಿಕೆಟ್ ಕೀಪರ್ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಮುಂದಿನ ಟೂರ್ನಿಗೆ ಸಿದ್ಧ ಮಾಡಲು ಈಗ ಅವರಿಗೆ ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿ ಹೆಚ್ಚು ಅವಕಾಶ ನೀಡುತ್ತಿದ್ದೇವೆ ಎಂದು ಭಾರತದ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಹೇಳಿದ್ದರು.

    ಎಡಗೈ ಬ್ಯಾಟ್ಸ್ ಮನ್ ಆಗಿರುವ ಈ ಯುವ ಪ್ರತಿಭೆಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಬೆಂಬಲ ನೀಡಿದ್ದು, ರಿಷಬ್ ಪಂತ್ ಅವರಲ್ಲಿ ನಾವು ಭವಿಷ್ಯವನ್ನು ನೋಡುತ್ತಿದ್ದೇವೆ. ಖಂಡಿತವಾಗಿಯೂ ಅವರು ಒಬ್ಬ ಒಳ್ಳೆಯ ಪ್ರತಿಭೆ ಇರುವಂತ ಆಟಗಾರ ಎಂದು ಹೇಳಿದ್ದರು.

  • ಧೋನಿ ದಾಖಲೆ ಮುರಿದ ಯುವ ವಿಕೆಟ್ ಕೀಪರ್ ರಿಷಬ್ ಪಂತ್

    ಧೋನಿ ದಾಖಲೆ ಮುರಿದ ಯುವ ವಿಕೆಟ್ ಕೀಪರ್ ರಿಷಬ್ ಪಂತ್

    ನವದೆಹಲಿ: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ವೆಸ್ಟ್ ಇಂಡೀಸ್ ವಿರುದ್ಧ 3ನೇ ಹಾಗೂ ಅಂತಿಮ ಟಿ20 ಕ್ರಿಕೆಟ್ ಪಂದ್ಯದಲ್ಲಿ 65 ರನ್ ಸಿಡಿಸುವ ಮೂಲಕ ಧೋನಿ ದಾಖಲೆಯನ್ನು ಮುರಿದಿದ್ದಾರೆ.

    ವಿಂಡೀಸ್ ವಿರುದ್ಧ ಮಂಗಳವಾರ ನಡೆದ ಟಿ20 ಪಂದ್ಯದಲ್ಲಿ ರಿಷಬ್ ಪಂತ್ ಈ ಸಾಧನೆ ಮಾಡಿದ್ದು, ಟೀಂ ಇಂಡಿಯಾ ಪರ ಟಿ20 ಅಂತರಾಷ್ಟ್ರೀಯ ಪಂದ್ಯವೊಂದರಲ್ಲಿ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್ ಎಂಬ ದಾಖಲೆಯನ್ನ ಬರೆದರು. ಈ ಹಿಂದೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅತಿ ಹೆಚ್ಚು ಅಂದರೆ 56 ರನ್ ಗಳಿಸಿದ್ದರು. 2017 ರಲ್ಲಿ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ 56 ರನ್ ಸಿಡಿಸಿದ್ದರು.

    ಧೋನಿ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ರಿಷಬ್ ಪಂತ್ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರು ಮಾದರಿಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡುತ್ತಿದ್ದಾರೆ. ಪಂತ್ 3ನೇ ಟಿ20 ಪಂದ್ಯದಲ್ಲಿ ನಾಯಕ ಕೊಹ್ಲಿರೊಂದಿಗೆ ಕೂಡಿ 106 ರನ್ ಜೊತೆಯಾಟ ನೀಡಿದ್ದರು. ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗೆಲುವು ಪಡೆದು 3 ಪಂದ್ಯಗಳ ಟಿ20 ಸರಣಿಯಲ್ಲಿ ಗೆದ್ದು ಬೀಗಿದೆ.

    ವಿಂಡೀಸ್ ವಿರುದ್ಧ ಮೊದಲ 2 ಟಿ20 ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದ ಪಂತ್ ಮೊದಲ ಪಂದ್ಯದಲ್ಲಿ ಶೂನ್ಯ ಸಾಧನೆ ಮಾಡಿದ್ದರೆ, 2ನೇ ಪಂದ್ಯದಲ್ಲಿ 4 ರನ್ ಗಳಿಸಿದ್ದರು. ಪರಿಣಾಮ ಅಂತಿಮ ಟಿ20 ಪಂದ್ಯಕ್ಕೆ ಅವರನ್ನು ಕೈಬಿಡಲಾಗುತ್ತದೆ ಎನ್ನಲಾಗಿತ್ತು. ಆದರೆ ನಾಯಕ ಕೊಹ್ಲಿ ನೀಡಿದ 3ನೇ ಅವಕಾಶವನ್ನು ಬಳಿಸಿಕೊಂಡ ಪಂತ್ ಅರ್ಧ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಂತ್ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ 42 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಿಡಿಸಿ 65 ರನ್ ಗಳಿಸಿದ್ದರು. ಇತ್ತ 45 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 59 ರನ್ ಗಳಿಸಿದ ಕೊಹ್ಲಿ, ಭಾರತದ ಪರ ಟಿ20 ಕ್ರಿಕೆಟ್ ಅತಿ ಹೆಚ್ಚು ಅರ್ಧ ಶತಕ ಗಳಿಸಿದ್ದ ರೋಹಿತ್ ಶರ್ಮಾರ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಟೀಂ ಇಂಡಿಯಾ ನಾಳೆ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಲಿದ್ದು, ಒಟ್ಟು 3 ಏಕದಿನ ಪಂದ್ಯಗಳನ್ನು ಟೂರ್ನಿಯಲ್ಲಿ ಆಡಲಿದೆ. ಆ ಬಳಿಕ ಬಹು ನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಜರ್ನಿಯನ್ನು ವೆಸ್ಟ್ ಇಂಡೀಸ್ ತಂಡದ ವಿರುದ್ಧವೇ ಆರಂಭಿಸಲಿದೆ.

  • ಪಿಆರ್‌ಎಸ್‌ ಯುಗ ಆರಂಭ – ಅಭಿಮಾನಿಗಳ ಮನ ಗೆದ್ದ ರಿಷಬ್ ಪಂತ್

    ಪಿಆರ್‌ಎಸ್‌ ಯುಗ ಆರಂಭ – ಅಭಿಮಾನಿಗಳ ಮನ ಗೆದ್ದ ರಿಷಬ್ ಪಂತ್

    ಫ್ಲೋರಿಡಾ : ಮೊದಲ ಟಿ 20 ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಭಾರತ 4 ವಿಕೆಟ್ ಗಳಿಂದ ಗೆದ್ದರೂ ರಿಷಬ್ ಪಂತ್ ಅವರು ಟೀಂ ಇಂಡಿಯಾ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ಇನ್ನಿಂಗ್ಸ್ ಕೊನೆಯ ಓವರ್ ನಲ್ಲಿ ಪೊಲಾರ್ಡ್ 49 ರನ್(49 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿ ಸ್ಟ್ರೈಕ್ ನಲ್ಲಿದ್ದರು. ನವದೀಪ್ ಸೈನಿಯ ಮೂರನೇ ಫುಲ್ ಟಾಸ್ ಎಸೆತ ನೇರವಾಗಿ ಪೊಲಾರ್ಡ್ ತೊಡೆಗೆ ಬಡಿಯಿತು. ಸೈನಿ ಎಲ್‍ಬಿಗೆ ಮನವಿ ಮಾಡಿದ್ರೂ ಅಂಪೈರ್ ತಿರಸ್ಕರಿಸಿದರು.

    ಅಂಪೈರ್ ಮನವಿ ತಿರಸ್ಕರಿಸಿದ್ದನ್ನು ನೋಡಿ ಕೀಪರ್ ರಿಷಬ್ ಪಂತ್ ಕೂಡಲೇ ಕೊಹ್ಲಿಗೆ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಪಂತ್ ಮಾತನ್ನು ಕೇಳಿ ಕೊಹ್ಲಿ ಡಿಆರ್‌ಎಸ್ ಮನವಿ ಮಾಡಿದರು. ಟಿವಿ ರಿಪ್ಲೇಯಲ್ಲಿ ಬಾಲ್ ಬ್ಯಾಟಿಗೆ ತಾಗದೇ ನೇರವಾಗಿ ತೊಡೆಗೆ ಬಡಿಯುತ್ತಿರುವುದು ಸ್ಪಷ್ಟವಾಗಿ ಕಾಣುತಿತ್ತು. ಕೊನೆಗೆ ರಿವ್ಯೂ ಪರಾಮರ್ಶಿಸಿ ಅಂಪೈರ್ ಔಟ್ ತೀರ್ಪು ನೀಡಿದರು.

    ಈ ಹಿಂದೆ ಧೋನಿ ಕೀಪರ್ ಆಗಿದ್ದಾಗಲೂ ಹಲವು ಬಾರಿ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಕೊಹ್ಲಿ ಸಲಹೆ ನೀಡುತ್ತಿದ್ದರು. ವಿಶೇಷವಾಗಿ ಎಲ್‍ಬಿ ಬಂದಾಗ ಬಾಲ್ ಬ್ಯಾಟಿಗೆ ತಾಗಿದೆಯೋ ಇಲ್ಲವೋ ಎನ್ನುವುದು ಕೀಪರ್‌ಗೆ  ಸಾಧಾರಣವಾಗಿ ಕೇಳಿಸುತ್ತದೆ. ಅದರಲ್ಲೂ ಸ್ಪಿನ್ ಬೌಲಿಂಗ್ ವೇಳೆ ಕೀಪರ್ ವಿಕೆಟ್ ಹತ್ತಿರದಲ್ಲೇ ಇರುವ ಕಾರಣ ಬಾಲ್ ಬ್ಯಾಟಿಗೆ ತಾಗಿದೆಯೋ? ಇಲ್ಲವೋ ಎನ್ನುವುದು ಸ್ಪಷ್ಟವಾಗಿ ಕೇಳುತ್ತದೆ. ವೇಗದ ಬೌಲಿಂಗ್ ವೇಳೆ ಕೀಪರ್ ದೂರದಲ್ಲಿ ಕೀಪಿಂಗ್ ಮಾಡುವ ಕಾರಣ ಅಷ್ಟು ನಿಖರವಾಗಿ ಧ್ವನಿಯನ್ನು ಗ್ರಹಿಸಲು ಆಗುವುದಿಲ್ಲ.

    ಪಂತ್ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದನ್ನು ನೋಡಿದ ನೆಟ್ಟಿಗರು, ಇನ್ನು ಮುಂದೆ ಡಿಆರ್‌ಎಸ್ ಅನ್ನು ಪಿಆರ್‌ಎಸ್‌(ಪಂತ್ ರಿವ್ಯೂ ಸಿಸ್ಟಂ) ಎಂಬುದಾಗಿ ಬದಲಾಯಿಸಬೇಕು. ಪಿಆರ್‌ಎಸ್‌ ಯುಗ ಆರಂಭವಾಗಿದೆ ಎಂದು ಶ್ಲಾಘಿಸಿ ಕಮೆಂಟ್ ಮಾಡುತ್ತಿದ್ದಾರೆ. ಇನ್ನೊಬ್ಬರು, ಧೋನಿಯಿಂದ ಪಂತ್ ಉತ್ತಮ ಪಾಠವನ್ನು ಕಲಿತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

    ಈ ಪಂದ್ಯದಲ್ಲಿ ಭಾರತದ ಪರ ನವದೀಪ್ ಸೈನಿ ವಿಶೇಷ ದಾಖಲೆ ಬರೆದರು. ಟಿ 20 ಮಾದರಿಯ ಕ್ರಿಕೆಟಿನಲ್ಲಿ ಭಾರತದ ಪರ ತಾನು ಆಡಿದ ಮೊದಲ ಪಂದ್ಯದಲ್ಲೇ ಇನ್ನಿಂಗ್ಸಿನ 20ನೇ ಓವರ್ ಮೇಡನ್ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ತಮ್ಮ ಅಂತಿಮ ಓವರಿನಲ್ಲಿ ಸೈನಿ ಯಾವುದೇ ರನ್ ಬಿಟ್ಟುಕೊಡದೇ 1 ವಿಕೆಟ್ ಕಿತ್ತಿದ್ದರು. ಅಂತಿಮವಾಗಿ 4 ಓವರ್ ನಲ್ಲಿ 1 ಮೇಡನ್ ಹಾಕಿ 17 ರನ್ ನೀಡಿ 3 ವಿಕೆಟ್ ಕಿತ್ತ ಸೈನಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ವಿಂಡೀಸ್ 9 ವಿಕೆಟ್ ಕಳೆದುಕೊಂಡು 95 ರನ್ ಗಳಿಸಿದರೆ ಭಾರತ 17.6 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿ 4 ವಿಕೆಟ್‍ಗಳ ಜಯ ಸಾಧಿಸಿತು. ಎರಡನೇ ಟಿ 20 ಪಂದ್ಯ ಇಂದು ನಡೆಯಲಿದೆ. ಮೂರನೇ ಪಂದ್ಯ ಮಂಗಳವಾರ ನಡೆಯಲಿದೆ.