Tag: ರಿವ್ಯೂ

  • ‘ಕಾಂತಾರ’ ಸಿನಿಮಾದ ಮೊದಲ ದಿನದ ಗಳಿಕೆ: ಸಿನಿ ಪಂಡಿತರ ಲೆಕ್ಕಾಚಾರ

    ‘ಕಾಂತಾರ’ ಸಿನಿಮಾದ ಮೊದಲ ದಿನದ ಗಳಿಕೆ: ಸಿನಿ ಪಂಡಿತರ ಲೆಕ್ಕಾಚಾರ

    ವಾರ ಕರ್ನಾಟಕದಲ್ಲಿ ನಾಲ್ಕು ಸಿನಿಮಾಗಳು ರಿಲೀಸ್ ಆಗಿದ್ದವು. ಅದರಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ (Kantara) ಸಿನಿಮಾ ಕೂಡ ಒಂದು. ಸಿನಿಮಾದ ಬಗ್ಗೆ ಬಹುತೇಕ ಪಾಸಿಟಿವ್ ರಿವ್ಯು (Review) ಬಂದಿರುವ ಕಾರಣದಿಂದಾಗಿ ಶುಕ್ರವಾರ ಬಿಡುಗಡೆ ಕಂಡ ಬಹುತೇಕ ಚಿತ್ರಮಂದಿರಗಳಲ್ಲಿ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ನೂರಾರು ಚಿತ್ರಮಂದಿರಗಳಲ್ಲಿ ಕಾಂತಾರ ಬಿಡುಗಡೆ ಆಗಿದ್ದು, ಕೋಟಿ ಕೋಟಿ ಹಣವನ್ನು ಬಾಚಿದೆ ಎಂದು ಅಂದಾಜಿಸಲಾಗಿದೆ.

    ಸ್ಯಾಂಡಲ್ ವುಡ್ (Sandalwood) ಸಿನಿ ಪಂಡಿತರ ಲೆಕ್ಕಾಚಾರದಂತೆ ಸಿನಿಮಾದ ಮೊದಲ ದಿನದ ಕಲೆಕ್ಷನ್ (Collection) ಐದರಿಂದ ಆರು ಕೋಟಿ ಎಂದು ಅಂದಾಜಿಸಲಾಗಿದ್ದು, ವೀಕೆಂಡ್ ಮುಗಿಯುವುದರೊಳಗೆ ಕಾಂತಾರ ಹದಿನೈದು ಕೋಟಿ ಬಾಚಲಿದೆ ಎಂದು ಹೇಳಲಾಗುತ್ತಿದೆ. ಮೂರೇ ದಿನಕ್ಕೆ ಕಾಂತಾರದ ಬಜೆಟ್ ವಾಪಸ್ಸಾಗಲಿದೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ಮತ್ತಷ್ಟು ಚಿತ್ರಮಂದಿರಗಳಲ್ಲಿ ಕಾಂತಾರ ಪ್ರದರ್ಶನ ಕಾಣುತ್ತಿರುವುದು ಗಳಿಕೆಯ ವೇಗವನ್ನು ಮತ್ತಷ್ಟು ಹೆಚ್ಚಿಸಲಿದೆ. ಇದನ್ನೂ ಓದಿ:ಖ್ಯಾತ ನಟಿ ಆಶಾ ಪರೇಖ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಕಾಂತಾರ ನೋಡಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಅತ್ಯುತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದರಲ್ಲೂ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡ ಕಥೆ, ಅದನ್ನು ಪ್ರಸೆಂಟ್ ಮಾಡಿದ ರೀತಿ, ಕಲಾವಿದರ ಅಭಿನಯ, ರಿಷಬ್ ಶೆಟ್ಟಿ (Rishabh Shetty) ಅವರ ಆರ್ಭಟ ಎಲ್ಲವನ್ನೂ ಕೊಂಡಾಡಲಾಗುತ್ತಿದೆ. ಹಿನ್ನೆಲೆ ಸಂಗೀತ ಮತ್ತು ಕ್ಯಾಮೆರಾ ಕೆಲಸ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿರುವುದರಿಂದ ಕಾಂತಾರ ಈ ವರ್ಷದ ಹಿಟ್ ಸಿನಿಮಾಗಳ ಲಿಸ್ಟ್ ನಲ್ಲಿ ನೋಡುಗರು ಸೇರಿಸಿಬಿಟ್ಟಿದ್ದಾರೆ.

    ಸಿನಿಮಾ ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇತ್ತು. ಆದರೆ, ಈ ಪ್ರಮಾಣದಲ್ಲಿ ಜನರು ಸಿನಿಮಾವನ್ನು ಸ್ವೀಕಾರ ಮಾಡುತ್ತಾರೆ ಎನ್ನುವ ಅಂದಾಜು ಇರಲಿಲ್ಲ. ಒಳ್ಳೆಯ ಸಿನಿಮಾಗಳನ್ನು ಕೊಟ್ಟರೆ ಜನ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಮತ್ತೊಮ್ಮೆ ಸಾಬೀತಾಗಿದೆ ಎಂದೂ ರಿಷಬ್ ಹೇಳಿದ್ದಾರೆ. ತಮ್ಮ ನೆಲದ ಕಥೆ ಹೇಳಿರುವುದಕ್ಕೆ ಸಹಜವಾಗಿಯೇ ಅವರಿಗೆ ಹೆಮ್ಮೆ ಇದೆ.

    Live Tv
    [brid partner=56869869 player=32851 video=960834 autoplay=true]

  • ರಿಷಬ್ ಶೆಟ್ಟರ ‘ಕಾಂತಾರ’ ಸಿನಿಮಾ ಹೇಗಿದೆ? ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬರೆದ ಸುದೀರ್ಘ ರಿವ್ಯೂ

    ರಿಷಬ್ ಶೆಟ್ಟರ ‘ಕಾಂತಾರ’ ಸಿನಿಮಾ ಹೇಗಿದೆ? ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬರೆದ ಸುದೀರ್ಘ ರಿವ್ಯೂ

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ನಿನ್ನೆ ರಾತ್ರಿಯಿಂದಲೇ ನೋಡುಗರಿಗೆ ಲಭ್ಯವಿದೆ. ಇಂದಿನಿಂದ ಥಿಯೇಟರ್ ನಲ್ಲಿ ಅಬ್ಬರಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಚಿತ್ರಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲ, ಸಿನಿಮಾ ರಂಗದಲ್ಲೇ ಸಾಕಷ್ಟು ಹೆಸರು ಮಾಡಿರುವ, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya)  ಕೂಡ ಸಾಮಾನ್ಯ ನೋಡುಗಳಾಗಿ ಕೂತು ಸಿನಿಮಾ ನೋಡಿ, ಇದೇ ಮೊದಲ ಬಾರಿಗೆ ಚಿತ್ರದ ಬಗ್ಗೆ ಸುದೀರ್ಘವಾಗಿ ವಿಮರ್ಶೆ (Review) ಕೂಡ ಮಾಡಿದ್ದಾರೆ.

    ಸಿನಿಮಾ ನೋಡಿದ ಮೇಲೆ ಕೆಲವು ಚಿತ್ರಗಳ ಬಗ್ಗೆ ಮಾತನಾಡುವುದಕ್ಕೆ ಪದಗಳೇ ಸಿಗುವುದಿಲ್ಲ. ಕೆಲವು ಸಿನಿಮಾಗಳು ಮಾತನಾಡಿಸುವುದಿಲ್ಲ, ಅವುಗಳು ಅಂತರಂಗವನ್ನು ಕಲಿಕೆ, ದಿವ್ಯ ಅನುಭವವನ್ನು ನಮಗೆ ದಾಟಿಸಿರುತ್ತವೆ. ಅಂತಹ ಚಿತ್ರಗಳ ಸಾಲಿಗೆ ಕಾಂತಾರ ಸೇರುತ್ತದೆ. ಸಿನಿಮಾ ನೋಡಿದ ನಂತರವೂ ಇನ್ನೂ ನಾನು ಕಾಂತರದಲ್ಲೇ ಇದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ಸಿನಿಮಾ ಟೀಮ್ ಬಗ್ಗೆಯೂ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ:`ಜೂನಿಯರ್’ ಆಗಿ ಸಿನಿರಸಿಕರನ್ನು ಗೆಲ್ಲಲು ಬಂದ್ರು ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ

    ಈ ಸಿನಿಮಾ ಕೇವಲ ನೋಡುವುದು ಮಾತ್ರವಲ್ಲ, ಅನುಭವಿಸಬೇಕಾದ ಚಿತ್ರ. ಈ ಚಿತ್ರ ನೋಡಿದ ನಂತರ ನಾನು ಭೂತ ಕೋಲ, ದೈವದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ಸಿನಿಮಾಟೋಗ್ರಾಫರ್ ಅರವಿಂದ್ ಕಶ್ಯಪ್ (Arvind Kashyap)  ಅವರ ಕೆಲಸ ಖುಷಿ ಕೊಟ್ಟಿದೆ. ಅವರ ಸಿನಿಮಾಟೋಗ್ರಫಿಯು ನೇರವಾಗಿ ಕಾಂತಾರದೊಳಗೆ ನನ್ನನ್ನು ಕರೆದುಕೊಂಡು ಹೋಯಿತು. ನಾಯಕಿ ಸಪ್ತಮಿ ಗೌಡ (Saptami Gowda) ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.

    ರಿಷಬ್ ಶೆಟ್ಟಿ (Rishabh Shetty)ಯವರನ್ನು ಹಾಡಿಹೊಗಳಿರುವ ರಮ್ಯಾ, ಕೊನೆಯ ಹತ್ತು ನಿಮಿಷಗಳ ಕಾಲ ರಿಷಬ್ ನಟನೆ ಸೂಪರ್ ಎಂದು ಹೇಳಿದ್ದಾರೆ. ಪ್ರೇಕ್ಷಕರು ಸಿನಿಮಾ ನೋಡಿದ ನಂತರ ನನ್ನ ಮಾತುಗಳನ್ನು ಒಪ್ಪಿಕೊಳ್ಳುತ್ತೀರಿ ಎಂದು ರಮ್ಯಾ ಬರೆದುಕೊಂಡಿದ್ದಾರೆ. ಗುರುವಾರ ರಾತ್ರಿ ಸಿನಿಮಾ ನೋಡಿರುವ ರಮ್ಯಾ, ಚಿತ್ರತಂಡದ ಜೊತೆಗೆ ಫೋಟೋ ತಗೆದುಕೊಂಡೂ ಸಂಭ್ರಮಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜರಥ ಸಿನಿಮಾ ವಿರೋಧಿಗಳಿಗೆ 2 ಪುಟ ರಿವ್ಯೂ ಬರೆದು ತರಾಟೆಗೆ ತೆಗೆದುಕೊಂಡ ರಕ್ಷಿತ್ ಶೆಟ್ಟಿ

    ರಾಜರಥ ಸಿನಿಮಾ ವಿರೋಧಿಗಳಿಗೆ 2 ಪುಟ ರಿವ್ಯೂ ಬರೆದು ತರಾಟೆಗೆ ತೆಗೆದುಕೊಂಡ ರಕ್ಷಿತ್ ಶೆಟ್ಟಿ

    ಬೆಂಗಳೂರು: ಅನೂಪ್ ಭಂಡಾರಿ ನಿರ್ದೇಶನದ ‘ರಾಜರಥ’ ಚಿತ್ರ ಕಳೆದ ವಾರ ಬಿಡುಗಡೆಯಾಗಿದೆ. ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದ ಈ ಚಿತ್ರದ ರಿವ್ಯೂ ಮಾತ್ರ ಉತ್ತಮವಾಗಿ ಬಂದಿರಲಿಲ್ಲ.

    ಈ ಚಿತ್ರಕ್ಕೆ ಬಹುತೇಕ ನೆಗಟೀವ್ ರಿವ್ಯೂ ಸಿಕ್ಕಿದ್ದು ಒಂದೆಡೆಯಾದರೆ, ಇನ್ನೊಂದು ಕಡೆ ಟ್ವಿಟರ್ ನಲ್ಲೂ ಬಹಳಷ್ಟು ಮಂದಿ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಇಲ್ಲ ಎಂದಿದ್ದರು. ಇದೆಲ್ಲದರ ಪರಿಣಾಮ ಪ್ರೇಕ್ಷಕರು ಚಿತ್ರಮಂದಿರದ ಕಡೆ ತಲೆ ಹಾಕಿರಲಿಲ್ಲ. ಇದೀಗ ಕನ್ನಡದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿ ‘ರಾಜರಥ’ ಚಿತ್ರವನ್ನು ವೀಕ್ಷಿಸಿದ್ದಾರೆ. ಬಳಿಕ ಸ್ವತಃ ಈ ಚಿತ್ರದ ರಿವ್ಯೂ ಬರೆದು ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ರಕ್ಷಿತ್ ಬರದಿರುವ ರಿವ್ಯೂ:
    ನಾನು ನಿನ್ನೆ ಸಂಜೆ ಚಿತ್ರ ನೋಡಿದ್ದೇನೆ. ಕೆಲವು ದೋಷಗಳ ನಡುವೆಯೂ ಈ ಚಿತ್ರ ಇಷ್ಟವಾಗುತ್ತೆ. ರಿವ್ಯೂಗಳು ಏನು ಹೇಳಿವೆ ಅನ್ನೋದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಹಲವು ಭಾವನೆಗಳ ಮೂಲಕ ಈ ಚಿತ್ರವನ್ನು ನಿರ್ಮಿಸಿರುವ ನಿರ್ದೇಶಕ ಅನೂಪ್ ಭಂಡಾರಿ ಪ್ರತಿಭೆಯನ್ನು ನಾವು ಮೆಚ್ಚಲೇಬೇಕು. ನಾನು ಥಿಯೇಟರ್‍ಗೆ ಎಂಟ್ರಿ ಕೊಟ್ಟಾಗ ನನ್ನ ಮೈಂಡ್‍ನಲ್ಲಿ ಈ ಚಿತ್ರದಲ್ಲಿಯ ತಪ್ಪಗಳೇನು? ಯಾಕೆ ಈ ರೀತಿ ಕೆಟ್ಟ ರಿವ್ಯೂ ಬರೆದಿದ್ದಾರೆ? ಒಬ್ಬ ಫಿಲ್ಮ್ ಮೇಕಿಂಗ್‍ನ ವಿದ್ಯಾರ್ಥಿಯಾಗಿ ಇದನ್ನು ಕಲಿಯಲು ನಾನು ಬಯಸಿದ್ದೆ. ಆದರೆ, ಈ ಚಿತ್ರ ನೋಡಿದ ಮೇಲೆ ಅನೂಪ್ ಭಂಡಾರಿಯ ಟಾಲೆಂಟ್ ಬಗ್ಗೆ ಮೆಚ್ಚುಗೆಯಾಯಿತು ಎಂದಿದ್ದಾರೆ.

    ಅನೂಪ್ ಒಬ್ಬ ಪ್ರತಿಭಾವಂತ ನಿರ್ದೇಶಕ ಅನ್ನೋದರಲ್ಲಿ ಎರಡನೇ ಮಾತು ಬೇಡ. ಬಾಲಿವುಡ್‍ನ ಚಿತ್ರಗಳ ನಿರ್ದೇಶನಕ್ಕೆ ಅವರಿಗೆ ಆಫರ್‍ಗಳು ಬಂದಿದ್ದವು. ಆದರೆ, ಅವುಗಳನ್ನು ತಿರಸ್ಕರಿಸಿ ಕನ್ನಡಕ್ಕಾಗಿ ಅವರು ಇಲ್ಲೆ ಉಳಿದುಕೊಂಡರು. ಕನ್ನಡ ಚಿತ್ರರಂಗ ಬೆಳೆಸಲು ನಮ್ಮ ಜತೆ ನಿಂತರು. ಇದೀಗ ಅವರ ಜತೆ ನಾವು ನಿಲ್ಲಬೇಕಾಗಿದೆ.

    ಒಬ್ಬ ನಿರ್ದೇಶಕ ಸುಂದರವಾದ ಕಲ್ಪನೆಯೊಂದಿಗೆ ಚಿತ್ರ ಮಾಡುತ್ತಾನೆ. ನೀವು ಒಂದು ಚಿತ್ರದ ಬಗ್ಗೆ ಕಳಪೆ ರಿವ್ಯೂ ಬರೆಯಲು ಕೇವಲ 10 ನಿಮಿಷ ತೆಗೆದುಕೊಳ್ಳುತ್ತೀರಿ. ಆದರೆ, ಒಂದು ಚಿತ್ರವನ್ನು ರೆಡಿ ಮಾಡಲು ಒಂದು ವರ್ಷ ಬೇಕಾಗುತ್ತೆ. ನಾನು ಅನೂಪ್ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಅವರು ನನಗೆ ಅಷ್ಟು ಆತ್ಮಿಯರೂ ಅಲ್ಲ. ಆದರೆ, ಅವರ ಟಾಲೆಂಟ್‍ಗೆ ಬಗ್ಗೆ ನಾನು ಮಾತನಾಡುತ್ತಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

    ಅನೂಪ್ ನನ್ನ ಗೆಳೆಯ ಇರಬಹುದು. ಹೆಚ್ಚು ಎಂದರೆ ನಾವು 5 ರಿಂದ 10 ಸಲ ಭೇಟಿಯಾಗಿರುತ್ತೇವೆ. ಇದಕ್ಕಾಗಿ ಅವರನ್ನು ಬೆನ್ನುತಟ್ಟುತ್ತಿದ್ದೇನೆ ಎಂದು ಭಾವಿಸುವುದು ಬೇಡ ಎಂದು ಸ್ಪಷ್ಟಪಡಿಸಿರುವ ರಕ್ಷಿತ್, ರಾಜರಥ ಚಿತ್ರವನ್ನು ಅತ್ಯಂತ ಉತ್ಸಾಹ, ಕಠಿಣ ಪರಿಶ್ರಮದಿಂದ ನಿರ್ಮಿಸಲಾಗಿದೆ. ಚಿತ್ರದ ಬಗ್ಗೆ ಕಾಮೆಂಟ್ ಮಾಡುವುದು ತಪ್ಪಲ್ಲ. ಇದೊಂದು ಕೆಟ್ಟ ಚಿತ್ರ ಎನ್ನುವುದಾದರೆ ಓಕೆ. ಆದರೆ ಅನೂಪ್ ಪ್ರತಿಭೆ ಬಗ್ಗೆ ಕಾಮೆಂಟ್ ಮಾಡುವ ಹಕ್ಕು ನಮಗ್ಯಾರಿಗೂ ಇಲ್ಲ ಎಂದಿದ್ದಾರೆ.

    ಅನೂಪ್ ಸ್ಯಾಂಡಲ್‍ವುಡ್‍ನ ಅಮೂಲ್ಯ ರತ್ನ ಇದ್ದಂತೆ. ಅವರೊಬ್ಬ ಆಸ್ತಿ. ಇಂತಹ ಪ್ರತಿಭೆಗಳನ್ನು ಹುರುದುಂಬಿಸಬೇಕಾಗಿದೆ. ಬಾಲಿವುಡ್ ಚಿತ್ರ ನಿರ್ದೇಶನಕ್ಕೂ ಅವರಿಗೆ ಅವಕಾಶ ಬಂದಿತ್ತು. ಆದರೆ ಅವರ ಒಲವು ಕನ್ನಡ ಚಿತ್ರಗಳ ಕಡೆಗಿತ್ತು. ಅಂದು ಅವರು ನಮ್ಮ ಪರವಾಗಿ ನಿಂತರು, ಇಂದು ನಾವು ಅವರ ಪರವಾಗಿ ನಿಲ್ಲೋಣ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

    https://twitter.com/rakshitshetty/status/979222138837061632