Tag: ರಿಲಾಯನ್ಸ್

  • ಹಬ್ಬದ ಸಂಭ್ರಮಕ್ಕೆ ರಿಲಯನ್ಸ್ ಜ್ಯುವೆಲ್ಸ್‌ನ ‘ಉತ್ಕಲಾ’ ಅನಾವರಣ

    ಹಬ್ಬದ ಸಂಭ್ರಮಕ್ಕೆ ರಿಲಯನ್ಸ್ ಜ್ಯುವೆಲ್ಸ್‌ನ ‘ಉತ್ಕಲಾ’ ಅನಾವರಣ

    – ಒಡಿಶಾದ ಸಾಂಸ್ಕೃತಿಕ ಸಂಪ್ರದಾಯಗಳಿಂದ ಸ್ಫೂರ್ತಿ

    ಮುಂಬೈ: ಭಾರತದ ಅತ್ಯಂತ ವಿಶ್ವಸನೀಯ ಆಭರಣಗಳ ಬ್ರ್ಯಾಂಡ್ ರಿಲಯನ್ಸ್ ಜ್ಯುವೆಲ್ಸ್ ಈ ಹಬ್ಬದ ಋತುವಿನ ಆರಂಭವನ್ನು ಇನ್ನಷ್ಟು ಚೆಂದವಾಗಿಸಲು ‘ಉತ್ಕಲಾ’ ಹೆಸರಿನಲ್ಲಿ ಉತ್ಕೃಷ್ಟ ಆಭರಣಗಳ ಶ್ರೇಣಿಯನ್ನು ಪರಿಚಯಿಸುತ್ತಿದೆ. ಈ ಸಂಗ್ರಹವು ಒಡಿಶಾದ ಸಾಂಸ್ಕೃತಿಕ ಸಂಪ್ರದಾಯಗಳಿಂದ ಸ್ಫೂರ್ತಿ ಪಡೆದಿದ್ದು, ಈ ರಾಜ್ಯದ ಕಲೆ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಅದ್ಭುತವಾಗಿ ಮೇಳೈಸಿದ ಅನನ್ಯವಾದ ಚಿತ್ರಕಲೆ, ಕಲಾಕೃತಿಗಳು ಮತ್ತು ವಿನ್ಯಾಸಗಳ ನೈಜ ಸಂಗಮವಾಗಿದೆ.

    ಈ ಉತ್ಕೃಷ್ಟವಾದ ಸಂಗ್ರಹವು ಅದ್ಭುತವಾದ ವಿನ್ಯಾಸಗಳನ್ನು ಹೊಂದಿದ್ದು, ಗ್ರಾಹಕರು ವೈವಿಧ್ಯಮಯವಾದ ಸೂಕ್ಷ್ಮವಾಗಿ ಮತ್ತು ಕಲಾತ್ಮಕವಾಗಿ ರಚಿಸಲಾದ ಆಭರಣಗಳನ್ನು ಕಾಣಬಹುದು. ಈ ಸುಗಮವಾದ ಕಲೆಗೆ ಕೋನಾರ್ಕ್ ಸೂರ್ಯ ದೇವಾಲಯ, ಮುಕ್ತೇಶ್ವರ ದೇವಾಲಯ, ಪುರಿ ಜಗನ್ನಾಥ ದೇವಾಲಯದ, ಸೀಂತಿ ನಾಟ್ಯದ, ವಿನೂತನವಾದ ಪಟ್ಟಚಿತ್ರ ಕಲಾಕೃತಿಗಳು ಮತ್ತು ಬಾಯ್ತಾ ಬಂಧನ ಕಡಲ ಪರಂಪರೆಗಳು ಸ್ಫೂರ್ತಿ ನೀಡಿವೆ.

    ಚೋಕರ್ ಸೆಟ್ ನಿಂದ ಚಿಕ್ಕ ನೆಕ್ಲೇಸ್ ಮತ್ತು ಉದ್ದನೆಯ ಸೂಕ್ಷ್ಮವಾದ ಮತ್ತು ಉತ್ಕೃಷ್ಟವಾದ ನೆಕ್ಲೇಸ್ ಸೆಟ್ ವರೆಗೆ, ಇಲ್ಲಿ ಎಲ್ಲಾ ಸಂದರ್ಭಗಳಿಗೂ ಒದಗುವ ಮತ್ತು ಎಲ್ಲರಿಗೂ ಎಟಕುವ ದರಗಳಲ್ಲಿ ಆಭರಣಗಳಿವೆ. ಚಿನ್ನದ ಸಂಗ್ರಹದ ವಿನ್ಯಾಸಗಳನ್ನು 22 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದ್ದು, ಪ್ರಾಚೀನ ಮತ್ತು ಹಳದಿ ಚಿನ್ನದ ಫಿನಿಶ್‍ಗಳ ಅದ್ಭುತವಾದ ಸಾಂಪ್ರದಾಯಿಕ ಶೈಲಿಯ ಆಭರಣಗಳನ್ನು ಹೊಂದಿದ್ದು, ಹಳದಿ ಚಿನ್ನ ಮತ್ತು ಪ್ರಾಚೀನ ಫಿನಿಶ್ ನಲ್ಲಿ ಸೂಕ್ಷ್ಮವಾದ ಫಿಲಿಗ್ರಿ ಮಾದರಿಯ ಆಭರಣಗಳೂ ಇವೆ. 18 ಕೆಟಿ ಚಿನ್ನದಲ್ಲಿ ಡೈಮಂಡ್ ಅನ್ನು ಪೋಣಿಸಲಾಗಿದ್ದು ಹಬ್ಬದ ಸಂದರ್ಭದಲ್ಲಿ ಮತ್ತು ಸಮಕಾಲೀನ ನೋಟಕ್ಕೆ ಇದು ಹೆಚ್ಚು ಸೂಕ್ತವಾಗಿದೆ.

    ಈ ಕುರಿತು ಮಾತನಾಡಿದ ರಿಲಯನ್ಸ್ ಜ್ಯುವೆಲ್ಸ್ ವಕ್ತಾರರು, ಭಾರತದಲ್ಲಿ ಸಂಭ್ರಮಿಸಲಾಗುವ ಅತ್ಯಂತ ಮುಖ್ಯವಾದ ಹಬ್ಬಗಳಲ್ಲಿ ದೀಪಾವಳಿ ಒಂದು. ಧನ್‌ತೇರಾಸ್‌ಗೆ ಚಿನ್ನದ ಆಭರಣಗಳನ್ನು ಕೊಳ್ಳುವುದು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಉತ್ಕಲಾವನ್ನು ಪರಿಚಯಿಸಲು ನಮಗೆ ಖುಷಿಯಾಗುತ್ತಿದೆ. ನಮ್ಮ ದೇವಾಲಯಗಳ ಆಭರಣದ ವಿನ್ಯಾಸದ ಪರಂಪರೆಯನ್ನು ಮುಂದುವರೆಸುವ ಅದ್ಭುತವಾದ ವಿನ್ಯಾಸದ ಸಂಗ್ರಹವಿದು. ಪ್ರತಿ ಚಿನ್ನದ ಮತ್ತು ವಜ್ರದ ನೆಕ್ಲೇಸ್, ಓಲೆಗಳು ಮತ್ತು ಸೆಟ್‌ಗಳು ಅನನ್ಯವಾಗಿದ್ದು, ಒಡಿಶಾದ ವಿಭಿನ್ನವಾದ ಕಲೆ ಮತ್ತು ಇತಿಹಾಸವನ್ನು ಪ್ರತಿನಿಧಿಸುತ್ತದೆ. ಧನ್‌ತೇರಾಸ್‌ ಹಬ್ಬದ ಶುಭ ಸಮಯದಲ್ಲಿ ಈ ಸಂಗ್ರಹವನ್ನು ನೀಡುವುದರಿಂದ ಇದು ಮತ್ತೂ ವಿಶೇಷವಾಗಿದೆ, ಮತ್ತು ನಮ್ಮ ಅಭಿಮಾನಿಗಳು ಇದನ್ನು ಧರಿಸಿ, ಎಲ್ಲರಿಗೂ ಸ್ಮರಣೀಯರಾಗಿತ್ತಾರೆಂದು ಆಶಿಸುತ್ತೇವೆ ಎಂದರು.

    ಉತ್ಕಲಾ ಸಂಗ್ರಹದಲ್ಲಿ ಪ್ರತಿ ಆಭರಣವೂ ಒಂದು ನಿಪುಣ ಕಲಾಚಾತುರ್ಯದ ಗುರುತಾಗಿದ್ದು, ರಿಲಯನ್ಸ್ ಜ್ಯುವೆಲ್ಸ್ ಬ್ರ್ಯಾಂಡ್ ನ ನಿರಂತರ ಗುಣಮಟ್ಟ ಮತ್ತು ವಿಶ್ವಾಸದ ಪ್ರತೀಕವಾಗಿದೆ. ಉತ್ಕಲಾ ಸಂಗ್ರಹವು ಭಾರತದಾದ್ಯಂತ ರಿಲಯನ್ಸ್ ಜ್ಯುವೆಲ್ಸ್ ಮಳಿಗೆಗಳಲ್ಲಿ 17 ಅಕ್ಟೋಬರ್ ನಿಂದ ಲಭ್ಯವಿರುತ್ತದೆ. ಇದಲ್ಲದೆ, 16 ನವೆಂಬರ್ 2020ವರೆಗೆ, ಚಿನ್ನಾಭರಣಗಳು ಮತ್ತು ಚಿನ್ನದ ನಾಣ್ಯಗಳ ತಯಾರಿಕೆ ವೆಚ್ಚಗಳ ಮೇಲೆ 30% ರಷ್ಟು ರಿಯಾಯಿತಿಯನ್ನು ಮತ್ತು ವಜ್ರಾಭರಣಗಳ ಬಿಲ್‌ ಮೌಲ್ಯದ ಮೇಲೆ 30%ವರೆಗೆ ರಿಯಾಯಿತಿಯನ್ನು, ಎಲ್ಲಾ ಗ್ರಾಹಕರಿಗೂ ನೀಡಲಾಗುತ್ತಿದೆ. ಇದಕ್ಕೆ ಷರತ್ತುಗಳು, ನಿಯಮ ಅನ್ವಯಿಸುತ್ತವೆ.

  • ಸರ್ಕಾರ ಸಹಾಯ ಮಾಡದಿದ್ದರೆ ವೊಡಾಫೋನ್, ಐಡಿಯಾ ಮುಚ್ಚುತ್ತೇವೆ- ಬಿರ್ಲಾ

    ಸರ್ಕಾರ ಸಹಾಯ ಮಾಡದಿದ್ದರೆ ವೊಡಾಫೋನ್, ಐಡಿಯಾ ಮುಚ್ಚುತ್ತೇವೆ- ಬಿರ್ಲಾ

    ನವದೆಹಲಿ: ಕೇಂದ್ರ ಸರ್ಕಾರ ನಮಗೆ ಪರಿಹಾರೋಪಾಯಗಳನ್ನು ಕಲ್ಪಿಸದಿದ್ದಲ್ಲಿ ವೊಡಾಫೋನ್ ಹಾಗೂ ಐಡಿಯಾ ಕಂಪನಿಗಳನ್ನು ಮುಚ್ಚುತ್ತೇವೆ ಎಂದು ಸಂಸ್ಥೆಯ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಹೇಳಿದ್ದಾರೆ.

    ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನವರಿ ಅಂತ್ಯದ ವೇಳೆಗೆ ಕಂಪನಿಯು ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಹಣವನ್ನು ಪಾವತಿಸಬೇಕಿದ್ದು, ಈ ಕುರಿತು ಕೇಂದ್ರ ಸರ್ಕಾರದ ನಮಗೆ ಏನಾದರೂ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ವೊಡಾಫೋನ್, ಐಡಿಯಾದ ಅಧ್ಯಾಯ ಮುಕ್ತಾಯವಾಗಲಿದೆ. ದಿವಾಳಿಯಾದ ನಂತರವೂ ನಾವು ಹಣ ಹೂಡುವುದರಲ್ಲಿ ಅರ್ಥವಿಲ್ಲ ಹೀಗಾಗಿ ನಾವು ಮಳಿಗೆಗಳನ್ನು ಮುಚ್ಚುತ್ತೇವೆ ಎಂದು ಬಿರ್ಲಾ ಸ್ಪಷ್ಟಪಡಿಸಿದ್ದಾರೆ.

    ಮುಖೇಶ್ ಅಂಬಾನಿಯವರ ರಿಲಾಯನ್ಸ್ ಜಿಯೋ ಕಡಿಮೆ ಬೆಲೆಯ ಡೇಟಾ ಹಾಗೂ ಕರೆಯ ಸೌಲಭ್ಯ ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಹೀಗಾಗಿ ಜಿಯೋಗೆ ಸ್ಪರ್ಧೆಯೊಡ್ಡಲು ಇತರೆ ಕಂಪನಿಗಳು ಸಹ ದರ ಕಡಿಮೆ ಮಾಡಬೇಕಾಯಿತು. ಇದರ ಭಾಗವಾಗಿ ಬಿರ್ಲಾ ಅವರ ಐಡಿಯಾ ಹಾಗೂ ಬ್ರಿಟಿಷ್ ಮೂಲದ ಟೆಲಿಕಾಂ ಕಂಪನಿ ವೊಡಾಫೋನ್ ಕಳೆದ ವರ್ಷ ವಿಲೀನಗೊಂಡಿತ್ತು. ನಂತರ ಕರೆ ಹಾಗೂ ಡೇಟಾ ದರಗಳನ್ನು ಕಡಿಮೆ ಮಾಡಿದ್ದವು. ಇದನ್ನೂ ಓದಿ: ಯಾವುದೇ ದಿನದಲ್ಲಿ ಭಾರತವನ್ನು ತೊರೆಯಬಹುದು ವೊಡಾಫೋನ್

    ಈ ವೇಳೆ ಕಂಪನಿಗೆ 1.17 ಲಕ್ಷ ರೂ. ನಷ್ಟ ಉಂಟಾಗಿತ್ತು. ಈ ಮಧ್ಯೆ 14 ವರ್ಷಗಳಿಂದ ತೆರಿಗೆ ಹಾಗೂ ಸ್ಪೆಕ್ಟ್ರಂ ಶುಲ್ಕವನ್ನು ಬಾಕಿ ಉಳಿಸಿಕೊಂಡಿರುವುದನ್ನು ಕಂಪನಿಗಳು ಪಾವತಿಸಬೇಕೆಂಬ ಸರ್ಕಾರದ ನಿಲುವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ನಂತರ ಸರ್ಕಾರಕ್ಕೆ ಹಣ ಪಾವತಿಸುವಂತೆ ಸುಪ್ರೀಂ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ಕೆಲವು ವಾರಗಳ ಹಿಂದೆ ಟೆಲಿಕಾಂ ವಲಯ ಅತಿ ಹೆಚ್ಚು ನಷ್ಟವನ್ನು ದಾಖಲಿಸಿದೆ. ಹೀಗಾಗಿ ಇಷ್ಟು ಪ್ರಮಾಣದ ಮೊತ್ತವನ್ನು ಗಡುವಿನೊಳಗೆ ಸರ್ಕಾರಕ್ಕೆ ಹೇಗೆ ಪಾವತಿಸುವುದು ಎಂಬುದು ಕಂಪನಿಗಳ ಮುಖ್ಯಸ್ಥರನ್ನು ಚಿಂತೆಗೀಡು ಮಾಡಿದೆ.

    ಭಾರೀ ನಷ್ಟದ ನಡುವೆಯೂ ಇಷ್ಟೊಂದು ಮೊತ್ತದ ಹಣವನ್ನು ನಮ್ಮಿಂದ ಪಾವತಿಸಲು ಸಾಧ್ಯವಿಲ್ಲ. ಹೀಗಾಗಿ ದಂಡ ಹಾಗೂ ಬಡ್ಡಿಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕೆಂದು ಟೆಲಿಕಾಂ ಸಂಸ್ಥೆಗಳಾದ ಏರ್‍ಟೆಲ್ ಹಾಗೂ ವೊಡಾಫೊನ್ ಕೋರ್ಟ್ ಮೊರೆ ಹೋಗಿವೆ. ಅಲ್ಲದೆ ಸುಪ್ರೀಂ ಕೋರ್ಟ್‍ನಲ್ಲಿ ಮರು ಪರಿಶೀಲನಾ ಅರ್ಜಿಯನ್ನು ಸಹ ಸಲ್ಲಿಸಿವೆ. ಇದನ್ನೂ ಓದಿ: ಕೇಂದ್ರದಿಂದ ಟೆಲಿಕಾಂ ಕಂಪನಿಗಳಿಗೆ ಬಿಗ್ ರಿಲೀಫ್

    ಎಜಿಆರ್ ಪ್ರಕರಣದಲ್ಲಿ ಅಕ್ಟೋಬರ್ 26 ರಂದು ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ 92 ಸಾವಿರ ಕೋಟಿ ರೂ. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. ಅಷ್ಟೇ ಅಲ್ಲದೇ ಕೋರ್ಟ್ 3 ತಿಂಗಳ ಒಳಗಡೆ ಈ ಹಣವನ್ನು ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಗಡುವು ನೀಡಿತ್ತು.

    ಏನಿದು ಎಜಿಆರ್?:
    ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

    ಭಾರತಿ ಏರ್ಟೆಲ್ 21,682 ಕೋಟಿ ರೂ., ವೊಡಾಫೋನ್ ಜೊತೆ ಐಡಿಯಾ ವಿಲೀನಗೊಂಡಿದ್ದರಿಂದ 28,300 ಕೋಟಿ ರೂ., ರಿಲಯನ್ಸ್ ಕಮ್ಯೂನಿಕೇಷನ್ಸ್ 16,456 ಕೋಟಿ ರೂ., ಬಿಎಸ್‍ಎನ್‍ಎಲ್ 2,098 ಕೋಟಿ ರೂ. ಹಾಗೂ ಎಂಟಿಎನ್‍ಎಲ್ 2,537 ಕೋಟಿ ರೂ. ಪಾವತಿಸಬೇಕಾಗಿದೆ.