Tag: ರಿಯಲ್ ಎಸ್ಟೇಟ್

  • ಹಚ್ಚಹಸಿರಿನ ಪರಿಸರದಲ್ಲಿ ಸುಂದರ ಪೀಸ್‍ವುಡ್ ಇಕೋ ಫಾರಂ ಲ್ಯಾಂಡ್

    ಹಚ್ಚಹಸಿರಿನ ಪರಿಸರದಲ್ಲಿ ಸುಂದರ ಪೀಸ್‍ವುಡ್ ಇಕೋ ಫಾರಂ ಲ್ಯಾಂಡ್

    ಪ್ರಕೃತಿಯ ಮಡಿಲಲ್ಲಿ ಪೀಸ್‍ವುಡ್ ಇಕೋ ಫಾರಂ ಲ್ಯಾಂಡ್ ನಿರ್ಮಾಣವಾಗಿದೆ. ಸಾವಯವ ಕೃಷಿ ಪದ್ಧತಿ ಅಳವಡಿಸಿದ್ದು ತರಕಾರಿ ಹಾಗೂ ಹಣ್ಣಿನ ಪಾರ್ಕ್ ಇದಾಗಿದೆ.

    ಕೊರೊನಾ ಕಾಲದ ಸಂಕಷ್ಟದಿಂದ ದೂರ ಇರಲು ಪೀಸ್‍ವುಡ್ ಫಾರಂ ಲ್ಯಾಂಡ್‍ನಲ್ಲಿ ತಮ್ಮ ಸುಂದರ ಮನೆ ನಿರ್ಮಿಸಬಹುದು. ಇದಕ್ಕೆ ಬೇಕಾದ ಎಲ್ಲ ಅನುಕೂಲಗಳನ್ನು ಕಲ್ಪಿಸಲಾಗಿದೆ. ಪ್ರತಿ ಕೃಷಿಭೂಮಿಗೆ ನೀರಿನ ವ್ಯವಸ್ಥೆ, ಹನಿ ನೀರಾವರಿ, 24/7 ಭದ್ರತೆ, ಸಿಸಿ ಕ್ಯಾಮೆರಾ, ಕ್ಲಬ್ ಹೌಸ್, ಈಜುಕೊಳ, ಗೇಟ್‍ಡೇಟ್ ಕಮ್ಯುನಿಟಿ, ಕ್ರೀಡಾ ಸೌಲಭ್ಯ ಸೇರಿ ಇನ್ನೂ ಅನೇಕ ಸೌಲಭ್ಯ ಒದಗಿಸಲಾಗಿದೆ.

    ಈ ಪೀಸ್‍ವುಡ್ ಇಕೋ ಫಾರಂ ಲ್ಯಾಂಡ್‍ನಲ್ಲಿ ಹಲವು ಬಗೆಯ ಹಣ್ಣುಗಳು, ತರಕಾರಿಗಳು, ಶ್ರೀಗಂಧ, ತೇಗ, ಅಡಿಕೆ, ತೆಂಗು ಹಾಗೂ ಮಾವಿನಮರಗಳೂ ಇವೆ. ಸುಮಾರು 5 ಗುಂಟೆಯಿಂದ 12 ಗುಂಟೆಯವರೆಗೆ ಭೂಮಿಯನ್ನು ವಿಂಗಡಿಸಲಾಗಿದೆ. ಪೀಸ್‍ವುಡ್ ಇಕೋ ಫಾರಂ ಲ್ಯಾಂಡ್ ಅತ್ಯಂತ ಕಡಿಮೆ ದರದಲ್ಲಿ ಮಾಡಲಾಗುತ್ತಿದ್ದ ಪ್ರತಿ ಚದರ ಅಡಿಗೆ 199 ರೂ. ನಿಗದಿಗೊಳಿಸಲಾಗಿದೆ. ಆಸಕ್ತರು ಆದಷ್ಟು ಬೇಗ ಕೊಂಡುಕೊಳ್ಳಬಹುದು. ಇನ್ನು ಕೆಲವೇ ಕೆಲವು ಪ್ಲಾಟ್‍ಗಳು ಮಾತ್ರ ಲಭ್ಯವಿದೆ. ನಿಮ್ಮ ಬಂಡವಾಳಕ್ಕೆ ಉತ್ತಮ ಲಾಭವನ್ನೂ ತಂದುಕೊಡುತ್ತದೆ.

    ಪೀಸ್‍ವುಡ್ ಇಕೋ ಫಾರಂ ಲ್ಯಾಂಡ್ ಕನಕಪುರ ಹತ್ತಿರ, ನೈಸ್ ರಸ್ತೆಯಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿದೆ.

    ಕೊರೋನಾದಿಂದ ದೂರವಿರಿ, ಪ್ರಕೃತಿಯ ಮಡಿಲಲ್ಲಿ ನೆಲೆಸಿ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ. www.peacewood.in 9880564557, 8073961925

  • ರಮಣೀಯ ಪರಿಸರದಲ್ಲಿ ಫಾರಂ ಲ್ಯಾಂಡ್‌

    ರಮಣೀಯ ಪರಿಸರದಲ್ಲಿ ಫಾರಂ ಲ್ಯಾಂಡ್‌

    – ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಸಂಸ್ಥೆಯ ಪರಿಸರ ಸ್ನೇಹಿ ಫಾರಂ

    ಬೆಂಗಳೂರು: ಹಸಿರಿನಿಂದ ಕಂಗೊಳಿಸುತ್ತಿರುವ ರಮಣೀಯ ಪರಿಸರದಲ್ಲಿ ಮನೆ ನಿರ್ಮಿಸುವ ಆಸೆ ಹಲವರಿಗಿರುತ್ತದೆ. ಆದರೆ ಆ ಕನಸಿನ ಮನೆ ಕಟ್ಟಲು ಭೂಮಿ ಬೇಕು. ಅದು ಬೆಂಗಳೂರಿನ ಕೂಗಳತೆ ದೂರದಲ್ಲಿ ಸಿಕ್ಕರೆ ಮತ್ತಷ್ಟು  ಖುಷಿ.

    ರಾಮನಗರ ಜಿಲ್ಲೆಯ ಕನಕಪುರ ಬಳಿಯ ಗೇರುಹಳ್ಳಿಯ ಪರಿಸರ ಸ್ನೇಹಿ ವಾತಾವರಣದಲ್ಲಿ ʼಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಸಂಸ್ಥೆʼ ಪರಿಸರ ಸ್ನೇಹಿ ಫಾರಂ ಲ್ಯಾಂಡ್‌ ಅನ್ನು ಸಿದ್ಧಪಡಿಸಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಭೂಮಿಯನ್ನು ಅಭಿವೃದ್ಧಿಪಡಿಸಲಾಗಿದೆ.

    ಬೆಂಗಳೂರು ಸಮೀಪವೇ ಕನಕಪುರ ಜಂಕ್ಷನ್‌ ನೈಸ್‌ ರಸ್ತೆಯಿಂದ ಕೇವಲ 50 ಕಿ.ಮೀ. ದೂರದಲ್ಲಿ ಈ ಜಾಗವಿದೆ. ಕನಕಪುರ-ಕಬ್ಬಾಳ ರಸ್ತೆಯ ಸಮೀಪದಲ್ಲಿ ಫಾರಂ ಲ್ಯಾಂಡ್‌ ನಿರ್ಮಾಣವಾಗಿದ್ದು, ಕನಕಪುರದಿಂದ ಕೇವಲ 9 ಕಿ.ಮೀ ದೂರದಲ್ಲಿದೆ.

    ಗೇರುಹಳ್ಳಿ ಹಸಿರು ಪ್ರದೇಶದಲ್ಲಿ ಜಾಗವನ್ನು ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಖರೀದಿಸಿದೆ. ಇಲ್ಲಿ ಮಾವು, ಹಲಸು, ನೇರಳೆ, ಕಿತ್ತಳೆ ಸೇರಿದಂತೆ ಹಲವು ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಭೂಮಿ ಖರೀದಿಸುವ ಗ್ರಾಹಕರಿಗೆ ಭವಿಷ್ಯದಲ್ಲಿ ಸಹಾಯವಾಗಲೆಂದು ಶ್ರೀಗಂಧ, ತೇಗದ ಜೊತೆಗೆ ರಕ್ತ ಚಂದನ, ಅಡಿಕೆ, ತೆಂಗಿನ ಗಿಡಗಳನ್ನು ನೆಡಲಾಗಿದೆ. ಈಗಾಗಲೇ ಸುಮಾರು 20 ಜಾತಿಯ ವಿವಿಧ ಹಣ್ಣಿನ ಗಿಡಗಳು ತಲೆ ಎತ್ತಿವೆ. ಇಷ್ಟೇ ಅಲ್ಲದೇ 20 ವರ್ಷದಷ್ಟು ಹಳೆಯಾದಾದ ಮಾವಿನ ಮರಗಳು ಈ ಜಾಗದಲ್ಲಿದೆ.

    ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಮಾಲೀಕ ಜಿ.ಆರ್‌. ತಿರುಮಲೇಶ್‌(ಭಾಸ್ಕರ್‌) ಮಾತನಾಡಿ, ಹಸಿರು ಪರಿಸರದಲ್ಲಿ ಮನೆ ಕಟ್ಟಬೇಕೆಂದು ಕನಸು ಕಾಣುತ್ತಿರುವ ಜನರಿಗಾಗಿ ಈ ಭೂಮಿಯನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಶಿಂಷಾ, ಮುತ್ತತ್ತಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳು ಈ ಪ್ರದೇಶಕ್ಕೆ ಹತ್ತಿರದಲ್ಲಿವೆ ಎಂದಿದ್ದಾರೆ.

    ಹನಿ ನೀರಾವರಿ ವ್ಯವಸ್ಥೆ
    ಈ ಜಾಗದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ಖರೀದಿದಾರರು ತಮಗೆ ಬೇಕಾದ ತರಕಾರಿಗಳನ್ನು ಮನೆಯ ಮುಂಭಾಗದಲ್ಲಿ ಬೆಳೆಸಬಹುದು. ಈ ಕಾರಣಕ್ಕೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಕೆ ಮಾಡಲಾಗಿದೆ. ಸುರಕ್ಷತೆಗಾಗಿ 24*7 ಭದ್ರತೆ, ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಕ್ರೀಡಾ ಚಟುವಟಿಕೆಗಳಿಗೆ ಜಾಗ ಮೀಸಲಿಡಲಾಗಿದೆ.

    ದರ ಎಷ್ಟು?
    ಪ್ರತಿ ಚದುರ ಮೀಟರ್‌ಗೆ 199 ರೂ. ದರ ನಿಗದಿ ಮಾಡಲಾಗಿದೆ. 5 ಗುಂಟೆ ಮತ್ತು 12 ಗುಂಟೆ ಪ್ಲಾಟ್‌ಗಳು ಕೂಡ ಖರೀದಿಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 98805 64557 ನಂಬರ್‌ ಸಂಪರ್ಕಿಸಬಹುದು ಅಥವಾ www.peacewood.in ವೆಬ್‌ಸೈಟಿಗೆ ಭೇಟಿ ನೀಡಬಹುದು.

    ಏಕೆ ಹೂಡಿಕೆ ಮಾಡಬೇಕು?
    ಭೂಮಿ ಒಂದು ಚರಾಸ್ತಿ ಆಗಿದ್ದು, ಬಹಳ ಬೇಡಿಕೆ ಇರುತ್ತದೆ. ವರ್ಷದಿಂದ ವರ್ಷಕ್ಕೆ ಇದರ ಮೌಲ್ಯ ಹೆಚ್ಚಾಗುತ್ತಿರುತ್ತದೆ.

    ದೀರ್ಘಾವಧಿಯ ಹೂಡಿಕೆ
    ಪ್ಲಾಟ್‌ಗಳು ದೀರ್ಘಕಾಲದವರೆಗೆ ಇರುತ್ತದೆ. ಭೂಮಿಯಲ್ಲಿ ಹೂಡಿಕೆ ಮಾಡಿದರೆ ಅದು ದೀರ್ಘಕಾಲದ ಹೂಡಿಕೆ ಆಗಿರುತ್ತದೆ.

    ಹೊಂದಿಕೊಳ್ಳುವಿಕೆ ಮತ್ತು ಗ್ರಾಹಕೀಕರಣ
    ವಸತಿ ಪ್ಲಾಟ್‌ಗಳ ಸಂಪೂರ್ಣ ನಿಯಂತ್ರಣ ಗ್ರಾಹಕರ ಕೈಯಲ್ಲೇ ಇರುತ್ತದೆ. ಇಲ್ಲಿ ನಿಮ್ಮ ಸ್ವಂತ ಮನೆಯನ್ನು ನಿಮಗೆ ಇಷ್ಟ ಬಂದ ರೀತಿಯಲ್ಲಿ ವಿನ್ಯಾಸ ಮಾಡಬಹುದು.

    ವಿಶ್ವಾಸಾರ್ಹತೆ ಮತ್ತು ಸಾಗಣೆ
    ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ (ರೇರಾ) ಜಾರಿಯಲ್ಲಿರುವುದರಿಂದ ಪ್ರತಿ ಕನಿಷ್ಠ ದಾಖಲಾತಿಗಳು ಮತ್ತು ನಿಯಂತ್ರಕ ನೀತಿಗಳಿಂದಾಗಿ ಭೂ ಹೂಡಿಕೆಗಳ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಿವೆ.

    ಹಣಕಾಸು ಸುರಕ್ಷತೆ
    ಭೂಮಿ ಮೇಲೆ ಹೂಡಿಕೆ ಮಾಡುವುದರಿಂದ ಹಣಕ್ಕೂ ಭದ್ರತೆ ಸಿಗುತ್ತದೆ. ಇದು ನಿಮ್ಮ ಹಣವನ್ನು ಸುರಕ್ಷಿತಗೊಳಿಸಲು ಮತ್ತು ಆರ್ಥಿಕ ಪರಿಪಕ್ವತೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಬೇರೆ ಕಡೆ ಹಣವನ್ನು ಹೂಡಿಕೆ ಮಾಡಿದರೆ ಅದಕ್ಕೆ ಭದ್ರತೆ ಇರುವುದಿಲ್ಲ. ಆದರೆ ಭೂಮಿಯಲ್ಲಿ ಹೂಡಿಕೆ ಮಾಡಿದರೆ ಹಣ ಸುರಕ್ಷಿತವಾಗಿರುತ್ತದೆ. ಇದು ನಿಮ್ಮ ಆಸ್ತಿಯೇ ಆಗಿರುವ ಕಾರಣ ಭಯಪಡುವ ಅಗತ್ಯವಿಲ್ಲ.

    ಕನಕಪುರ ರಸ್ತೆಯಲ್ಲಿ ಯಾಕೆ?
    ಪ್ರಕೃತಿಯ ಸೌಂದರ್ಯ ಇರುವ ಕನಕಪುರ ಮುಖ್ಯ ರಸ್ತೆಯಲ್ಲಿ ಈ ಭೂಮಿ ಇದ್ದು, ಮಂದಿನ ದಿನಗಳಲ್ಲಿ ಹತ್ತಿರದ ಪ್ರದೇಶಗಳು ಬೆಳವಣಿಗೆಯಾಗಲಿದೆ. ಅಲ್ಲದೇ ಹತ್ತಿರದ ಪ್ರದೇಶಗಳಿಗೆ ಕಡಿಮೆ ಸಮಯದಲ್ಲಿ ತೆರಳಬಹುದಾಗಿದೆ.

  • ರಮಣೀಯ ಪರಿಸರದಲ್ಲಿ ಮನೆ ನಿರ್ಮಿಸಿ

    ರಮಣೀಯ ಪರಿಸರದಲ್ಲಿ ಮನೆ ನಿರ್ಮಿಸಿ

    ಬೆಂಗಳೂರು: ಹಸಿರಿನಿಂದ ಕಂಗೊಳಿಸುತ್ತಿರುವ ರಮಣೀಯ ಪರಿಸರದಲ್ಲಿ ಮನೆ ನಿರ್ಮಿಸುವ ಆಸೆಯನ್ನು ನೀವು ಹೊಂದಿದ್ದೀರಾ? ಬೆಂಗಳೂರಿನ ಕೂಗಳತೆ ದೂರದಲ್ಲಿ ಜಾಗ ಬೇಕೇ? ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಎಂಬಂತೆ ಪೀಸ್‌ವುಡ್‌ ಇಕೋ ಫಾರಂ ಸಂಸ್ಥೆ ಜಾಗ ಅಭಿವೃದ್ಧಿ ಪಡಿಸಿದೆ.

    ರಾಮನಗರ ಜಿಲ್ಲೆಯ ಕನಕಪುರ ಬಳಿಯ ಗೇರುಹಳ್ಳಿಯ ಪರಿಸರ ಸ್ನೇಹಿ ವಾತಾವರಣದಲ್ಲಿ ಪೀಸ್‌ವುಡ್‌ ಇಕೋ ಫಾರಂ ಸಂಸ್ಥೆ ಪರಿಸರ ಸ್ನೇಹಿ ಫಾರಂ ಲ್ಯಾಂಡ್‌ ಅನ್ನು ಸಿದ್ಧಪಡಿಸಿದೆ.

    ಕನಕಪುರ ಜಂಕ್ಷನ್‌ ನೈಸ್‌ ರಸ್ತೆಯಿಂದ ಕೇವಲ 50 ಕಿ.ಮೀ. ದೂರದಲ್ಲಿ ಈ ಜಾಗವಿದೆ. ಕನಕಪುರ-ಕಬ್ಬಾಳ ರಸ್ತೆಯ ಸಮೀಪದಲ್ಲಿ ಫಾರಂ ಲ್ಯಾಂಡ್‌ ನಿರ್ಮಾಣವಾಗಿದ್ದು, ಕನಕಪುರದಿಂದ ಕೇವಲ 9 ಕಿ.ಮೀ ದೂರದಲ್ಲಿದೆ.

    ಈ ಜಾಗದಲ್ಲಿ ಮಾವು, ಹಲಸು, ನೇರಳೆ, ಕಿತ್ತಳೆ ಸೇರಿದಂತೆ ಹಲವು ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಭೂಮಿ ಖರೀದಿಸುವ ಗ್ರಾಹಕರಿಗೆ ಭವಿಷ್ಯದಲ್ಲಿ ಸಹಾಯವಾಗಲೆಂದು ಶ್ರೀಗಂಧ, ತೇಗದ ಜೊತೆಗೆ ರಕ್ತ ಚಂದನ, ಅಡಿಕೆ, ತೆಂಗಿನ ಗಿಡಗಳನ್ನು ನೆಡಲಾಗಿದೆ. ಈಗಾಗಲೇ ಸುಮಾರು 20 ಜಾತಿಯ ವಿವಿಧ ಹಣ್ಣಿನ ಗಿಡಗಳು ತಲೆ ಎತ್ತಿವೆ. ಇಷ್ಟೇ ಅಲ್ಲದೇ 20 ವರ್ಷದಷ್ಟು ಹಳೆಯಾದಾದ ಮಾವಿನ ಮರಗಳು ಈ ಜಾಗದಲ್ಲಿರುವುದು ವಿಶೇಷ.

    ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಮಾಲೀಕ ಜಿ.ಆರ್‌. ತಿರುಮಲೇಶ್‌(ಭಾಸ್ಕರ್‌) ಮಾತನಾಡಿ,ಹಸಿರು ಪರಿಸರದಲ್ಲಿ ಮನೆ ಕಟ್ಟಬೇಕೆಂದು ಕನಸು ಕಾಣುತ್ತಿರುವ ಜನರಿಗಾಗಿ ಈ ಭೂಮಿಯನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಜಾಗದ ಹತ್ತಿರದಲ್ಲೇ ಪ್ರವಾಸ ಯೋಗ್ಯ ಸ್ಥಳಗಳು ಇದೆ. ಶಿಂಷಾ, ಮುತ್ತತ್ತಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳು ಈ ಪ್ರದೇಶಕ್ಕೆ ಹತ್ತಿರದಲ್ಲಿವೆ ಎಂದಿದ್ದಾರೆ.

    ಹನಿ ನೀರಾವರಿ ವ್ಯವಸ್ಥೆ
    ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಇಲ್ಲಿ ಅವಕಾಶವಿದೆ. ಖರೀದಿದಾರರು ತಮಗೆ ಬೇಕಾದ ತರಕಾರಿಗಳನ್ನು ಮನೆಯ ಮುಂಭಾಗದಲ್ಲಿ ಬೆಳೆಸಬಹುದು. ಈ ಕಾರಣಕ್ಕೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಕೆ ಮಾಡಲಾಗಿದೆ. ಸುರಕ್ಷತೆಗಾಗಿ 24*7 ಭದ್ರತೆ, ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಕ್ರೀಡಾ ಚಟುವಟಿಕೆಗಳಿಗೆ ಜಾಗ ಮೀಸಲಿಡಲಾಗಿದೆ.

    ದರ ಎಷ್ಟು?
    ಪ್ರತಿ ಚದುರ ಮೀಟರ್‌ಗೆ 199 ರೂ. ದರ ನಿಗದಿ ಮಾಡಲಾಗಿದೆ. 5 ಗುಂಟೆ ಮತ್ತು 12 ಗುಂಟೆ ಪ್ಲಾಟ್‌ಗಳು ಕೂಡ ಖರೀದಿಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 98805 64557 ನಂಬರ್‌ ಸಂಪರ್ಕಿಸಬಹುದು ಅಥವಾ www.peacewood.in ವೆಬ್‌ಸೈಟಿಗೆ ಭೇಟಿ ನೀಡಬಹುದು.

  • ಜಾಗ ನೀಡದ್ದಕ್ಕೆ ವ್ಯಕ್ತಿಯ ಹತ್ಯೆಗೆ ಯತ್ನ – ಆಸಿಡ್ ದಾಳಿ, ಕಾರಿಗೆ ಬೆಂಕಿ

    ಜಾಗ ನೀಡದ್ದಕ್ಕೆ ವ್ಯಕ್ತಿಯ ಹತ್ಯೆಗೆ ಯತ್ನ – ಆಸಿಡ್ ದಾಳಿ, ಕಾರಿಗೆ ಬೆಂಕಿ

    ಚಿತ್ರದುರ್ಗ: ವ್ಯಕ್ತಿಯೊಬ್ಬರ ಕಾರಿಗೆ ಆಸಿಡ್ ದಾಳಿ ನಡೆಸಿ ಬೆಂಕಿ ಹಚ್ಚಿರುವ ಘಟನೆ ಮೊಳಕಾಲ್ಮೂರು ತಾಲೂಕಿನ ಸೂಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿರುವ ಜಮೀನನ್ನು ರಿಯಲ್ ಎಸ್ಟೇಟ್ ಉದ್ಯಮಿಯಾದ ಸುರೇಶ್‍ಗೆ ಮಾರಾಟ ಮಾಡಲು ವೇಣುಗೋಪಾಲ್ ಅವರ ತಂದೆ ಮುಂದಾಗಿದ್ದರು. ಆದರೆ ತಂದೆಯ ನಿರ್ಧಾರವನ್ನು ವಿರೋಧಿಸಿದ್ದರು. ಹೀಗೆ ಕೆಲಸದ ಮೇಲೆ ಅನ್ಯ ಕಾರ್ಯನಿಮಿತ್ತ ಚಳ್ಳಕೆರೆಗೆ ವೇಣುಗೋಪಾಲ್ ಬಂದಿದ್ದರು. ಈ ವೇಳೆ ಆಂಧ್ರ ಪ್ರದೇಶದಿಂದ ಹಿಂಬಾಲಿಸಿಕೊಂಡು ಬಂದಿರುವ ಸುರೇಶ್ ಅಂಡ್ ಟೀಂ, ಮೊಳಕಾಲ್ಮೂರಿನ ಸೂಕೆನಹಳ್ಳಿ ಬಳಿ ಏಕಾಏಕಿ ವೇಣುಗೋಪಾಲ್ ಕಾರಿಗೆ ಬೆಂಕಿ ಹಾಕಿ, ಆಸಿಡ್ ದಾಳಿಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಕೃತ್ಯವೆಸಗಲು ಮೊದಲೇ ಪೂರ್ವಸಿದ್ಧತೆ ಮಾಡಿಕೊಂಡಿರುವ ದುಷ್ಕರ್ಮಿಗಳು ಮೊಳಕಾಲ್ಮೂರಿನಿಂದ ವಾಪಾಸ್ ಹೊರಟ ವೇಣುಗೋಪಾಲ್ ಕಾರನ್ನು ಅಡ್ಡಗಟ್ಟಿ ಹತ್ಯೆಗೆ ಯತ್ನ ಮಾಡಲಾಗಿದೆ. ಆಂಧ್ರಪ್ರದೇಶ ರಾಜ್ಯದ ಹಿಂದುಪುರ ಮೂಲದ ಸುರೇಶ ಹಾಗೂ ಆತನ ಸಹಚರರಾದ ಆಂಜನೇಯ, ಚೌಡಪ್ಪ ಸೇರಿದಂತೆ ಐವರು ಈ ಕೃತ್ಯ ನಡೆಸಿದ್ದಾರೆಂಬ ಎಂದು ಹೇಳಲಾಗುತ್ತಿದೆ.

    ದುಷ್ಕøತ್ಯದಿಂದಾಗಿ ವೇಣುಗೋಪಾಲ್ ಕಾರು ಸುಟ್ಟು ಸಂಪೂರ್ಣ ಭಸ್ಮವಾಗಿದ್ದು, ಗಂಭೀರವಾಗಿ ಗಾಯಗೊಂಡ ವೇಣುಗೋಪಾಲ್‍ರನ್ನು ಬಳ್ಳಾರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಕೃತ್ಯದ ಸ್ಥಳದಿಂದ ಪರಾರಿಯಾಗಿದ್ದಾರೆ.

    ಸದ್ಯ ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೃತ್ಯದ ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.

  • ರಮಣೀಯ ಪರಿಸರದಲ್ಲಿ ಫಾರಂ ಲ್ಯಾಂಡ್‌

    ರಮಣೀಯ ಪರಿಸರದಲ್ಲಿ ಫಾರಂ ಲ್ಯಾಂಡ್‌

    – ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಸಂಸ್ಥೆಯ ಪರಿಸರ ಸ್ನೇಹಿ ಫಾರಂ

    ಬೆಂಗಳೂರು: ಹಸಿರಿನಿಂದ ಕಂಗೊಳಿಸುತ್ತಿರುವ ರಮಣೀಯ ಪರಿಸರದಲ್ಲಿ ಮನೆ ನಿರ್ಮಿಸುವ ಆಸೆ ಹಲವರಿಗಿರುತ್ತದೆ. ಆದರೆ ಆ ಕನಸಿನ ಮನೆ ಕಟ್ಟಲು ಭೂಮಿ ಬೇಕು. ಅದು ಬೆಂಗಳೂರಿನ ಕೂಗಳತೆ ದೂರದಲ್ಲಿ ಸಿಕ್ಕರೆ ಇನ್ನೂ ಖುಷಿ.

    ರಾಮನಗರ ಜಿಲ್ಲೆಯ ಕನಕಪುರ ಬಳಿಯ ಗೇರುಹಳ್ಳಿಯ ಪರಿಸರ ಸ್ನೇಹಿ ವಾತಾವರಣದಲ್ಲಿ ʼಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಸಂಸ್ಥೆʼ ಪರಿಸರ ಸ್ನೇಹಿ ಫಾರಂ ಲ್ಯಾಂಡ್‌ ಅನ್ನು ಸಿದ್ಧಪಡಿಸಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಭೂಮಿಯನ್ನು ಅಭಿವೃದ್ಧಿಪಡಿಸಲಾಗಿದೆ.

    ಬೆಂಗಳೂರು ಸಮೀಪವೇ ಕನಕಪುರ ಜಂಕ್ಷನ್‌ ನೈಸ್‌ ರಸ್ತೆಯಿಂದ ಕೇವಲ 50 ಕಿ.ಮೀ. ದೂರದಲ್ಲಿ ಈ ಜಾಗವಿದೆ. ಕನಕಪುರ-ಕಬ್ಬಾಳ ರಸ್ತೆಯ ಸಮೀಪದಲ್ಲಿ ಫಾರಂ ಲ್ಯಾಂಡ್‌ ನಿರ್ಮಾಣವಾಗಿದ್ದು, ಕನಕಪುರದಿಂದ ಕೇವಲ 9 ಕಿ.ಮೀ ದೂರದಲ್ಲಿದೆ.

    ಗೇರುಹಳ್ಳಿ ಹಸಿರು ಪ್ರದೇಶದಲ್ಲಿ ಜಾಗವನ್ನು ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಖರೀದಿಸಿದೆ. ಇಲ್ಲಿ ಮಾವು, ಹಲಸು, ನೇರಳೆ, ಕಿತ್ತಳೆ ಸೇರಿದಂತೆ ಹಲವು ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಭೂಮಿ ಖರೀದಿಸುವ ಗ್ರಾಹಕರಿಗೆ ಭವಿಷ್ಯದಲ್ಲಿ ಸಹಾಯವಾಗಲೆಂದು ಶ್ರೀಗಂಧ, ತೇಗದ ಜೊತೆಗೆ ರಕ್ತ ಚಂದನ, ಅಡಿಕೆ, ತೆಂಗಿನ ಗಿಡಗಳನ್ನು ನೆಡಲಾಗಿದೆ. ಈಗಾಗಲೇ ಸುಮಾರು 20 ಜಾತಿಯ ವಿವಿಧ ಹಣ್ಣಿನ ಗಿಡಗಳು ತಲೆ ಎತ್ತಿವೆ. ಇಷ್ಟೇ ಅಲ್ಲದೇ 20 ವರ್ಷದಷ್ಟು ಹಳೆಯಾದಾದ ಮಾವಿನ ಮರಗಳು ಈ ಜಾಗದಲ್ಲಿದೆ.

    ಪೀಸ್‌ ವುಡ್‌ ಇಕೋ ಫಾರಂ ಲ್ಯಾಂಡ್‌ ಮಾಲೀಕ ಜಿ.ಆರ್‌. ತಿರುಮಲೇಶ್‌(ಭಾಸ್ಕರ್‌) ಮಾತನಾಡಿ,ಹಸಿರು ಪರಿಸರದಲ್ಲಿ ಮನೆ ಕಟ್ಟಬೇಕೆಂದು ಕನಸು ಕಾಣುತ್ತಿರುವ ಜನರಿಗಾಗಿ ಈ ಭೂಮಿಯನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಶಿಂಷಾ, ಮುತ್ತತ್ತಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳು ಈ ಪ್ರದೇಶಕ್ಕೆ ಹತ್ತಿರದಲ್ಲಿವೆ ಎಂದಿದ್ದಾರೆ.

    ಹನಿ ನೀರಾವರಿ ವ್ಯವಸ್ಥೆ
    ಈ ಜಾಗದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ಖರೀದಿದಾರರು ತಮಗೆ ಬೇಕಾದ ತರಕಾರಿಗಳನ್ನು ಮನೆಯ ಮುಂಭಾಗದಲ್ಲಿ ಬೆಳೆಸಬಹುದು. ಈ ಕಾರಣಕ್ಕೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಕೆ ಮಾಡಲಾಗಿದೆ. ಸುರಕ್ಷತೆಗಾಗಿ 24*7 ಭದ್ರತೆ, ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಕ್ರೀಡಾ ಚಟುವಟಿಕೆಗಳಿಗೆ ಜಾಗ ಮೀಸಲಿಡಲಾಗಿದೆ.

     

    ದರ ಎಷ್ಟು?
    ಪ್ರತಿ ಚದುರ ಮೀಟರ್‌ಗೆ 199 ರೂ. ದರ ನಿಗದಿ ಮಾಡಲಾಗಿದೆ. 5 ಗುಂಟೆ ಮತ್ತು 12 ಗುಂಟೆ ಪ್ಲಾಟ್‌ಗಳು ಕೂಡ ಖರೀದಿಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 98805 64557 ನಂಬರ್‌ ಸಂಪರ್ಕಿಸಬಹುದು ಅಥವಾ www.peacewood.in ವೆಬ್‌ಸೈಟಿಗೆ ಭೇಟಿ ನೀಡಬಹುದು.

  • ಪ್ರಾಪರ್ಟಿ ಎಕ್ಸ್ ಪೋಗೆ ಬನ್ನಿ – 20×30 ಪ್ಲಾಟ್, ಐಫೋನ್ ಗೆಲ್ಲಿ!

    ಪ್ರಾಪರ್ಟಿ ಎಕ್ಸ್ ಪೋಗೆ ಬನ್ನಿ – 20×30 ಪ್ಲಾಟ್, ಐಫೋನ್ ಗೆಲ್ಲಿ!

    – ಜನವರಿ 23, 24ಕ್ಕೆ ಯೂನಿಕ್ ಪ್ರಾಪರ್ಟಿ ಎಕ್ಸ್ ಪೋ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನೆ ಕಟ್ಟಬೇಕು, ಸೈಟ್ ಖರೀದಿ ಮಾಡಬೇಕು. ಆದರೆ ಯಾವ ಏರಿಯಾ ಚೆನ್ನಾಗಿದೆ. ಎಲ್ಲಿ ಉತ್ತಮ ಸೈಟ್ ಸಿಗುತ್ತದೆ ಎಂಬ ಬಗ್ಗೆ ಯೋಚಿಸಿ ತಲೆ ಕೆಡಿಸಿಕೊಂಡಿದ್ದೀರಾ..? ಹಾಗಾದರೆ ಸದ್ಯಕ್ಕೆ ಆ ಚಿಂತೆ ಬಿಡಿ. ಇದಕ್ಕೆಲ್ಲ ಪರಿಹಾರ ನೀಡಲು ಜೆನೆಟಿಕ್ ಇವೆಂಟ್ಸ್ ರೆಡಿಯಾಗಿದೆ. ನಿಮಗೆ ಸಹಾಯವಾಗಲೆಂದೇ ಪ್ರಾಪರ್ಟಿ ಎಕ್ಸ್ ಪೋ ಆಯೋಜಿಸಿದ್ದಾರೆ.

    ಬೆಂಗಳೂರಿನ ಎರಡು ಭಾಗದಲ್ಲಿ ಎಕ್ಸ್ ಪೋ ಆಯೋಜಿಸಿದ್ದು ಜನವರಿ 23 ಮತ್ತು 24ರಂದು ‘ಯೂನಿಕ್ ಪ್ರಾಪರ್ಟಿ ಎಕ್ಸ್ ಪೋ-2021’ ನಡೆಯಲಿದೆ. ಅಷ್ಟೇ ಅಲ್ಲ ನೀವು ಈ ಎಕ್ಸ್ ಪೋಗೆ ಭೇಟಿ ನೀಡಿ 20*30 ಪ್ಲಾಟ್ ಕೂಡಾ ಗೆಲ್ಲಬಹುದು. ಜೊತೆಗೆ ಐಫೋನ್ 12, 5, 10 ಗ್ರಾಂನ ಗೋಲ್ಡ್ ಕಾಯಿನ್‍ಗಳು ಹಾಗೂ ಮೊಬೈಲ್ ಫೋನನ್ನು ಕೂಡಾ ಗೆಲ್ಲಬಹುದು.

    ಬೆಂಗಳೂರು ಸೌತ್ ಇಷ್ಟಪಡುವ ಜನರಿಗಾಗಿ ಜೆಪಿ ನಗರ 6ನೇ ಹಂತದ ಕೆಆರ್ ಲೇಔಟ್‍ನ ಎಲೈಟ್ ಕನ್ವೆನ್ಷನ್ ಸೆಂಟರ್ ಹಾಗೂ ಬೆಂಗಳೂರು ಉತ್ತರ ಭಾಗದ ಗ್ರಾಹಕರಿಗಾಗಿ ಯಲಹಂಕ ಬೈಪಾಸ್ ರಸ್ತೆಯ ಶಿವನಹಳ್ಳಿಯಲ್ಲಿರುವ ಎಲಾನ್ ಕನ್ವೆನ್ಷನ್ ಸೆಂಟರ್ ನಲ್ಲಿ ಈ ಪ್ರಾಪರ್ಟಿ ಎಕ್ಸ್ ಪೋ ಆಯೋಜಿಸಲಾಗಿದೆ. ಎರಡೂ ದಿನ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಎಕ್ಸ್ ಪೋ ನಡೆಯಲಿದೆ.

    ಇವರಿರುತ್ತಾರೆ!: ಬೆಂಗಳೂರಿನ ಪ್ರಮುಖ ಬಿಲ್ಡರ್ ಗಳು ಈ ಪ್ರಾಪರ್ಟಿ ಎಕ್ಸ್ ಪೋದಲ್ಲಿ ಭಾಗವಹಿಸಲಿದ್ದಾರೆ. ಡಿಎಸ್ ಮ್ಯಾಕ್ಸ್, ಗಾಡ್ರೆಜ್ ಪ್ರಾಪರ್ಟೀಸ್, ಎಸ್‍ಎಂಆರ್ ಹೋಲ್ಡಿಂಗ್ಸ್, ಅರಿಹಂತ್ ಡೆವಲಪರ್ಸ್, ಎಟಿಝೆಡ್ ಪ್ರಾಪರ್ಟೀಸ್, ಅಪರ್ಣ, ಉಪಕಾರ್ ಡೆವಲಪರ್ಸ್, ಫೈವ್ ಎಲಿಮೆಂಟ್ಸ್ ರಿಯಾಲಿಟಿ, ಎಲಿಗೆಂಟ್ ಬಿಲ್ಡರ್ಸ್ & ಡೆವಲಪರ್ಸ್, ಸಾಯಿ ಕಲ್ಯಾಣ್ ಬಿಲ್ಡರ್ಸ್ & ಡೆವಲಪರ್ಸ್, ಗೃಹ, ಸಿಲ್ವರ್ ಟ್ರೀ ಪ್ರಾಜೆಕ್ಟ್ಸ್, ಆರ್ನಾ ಶೆಲ್ಟರ್ಸ್ ಮುಂತಾದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಗಳು ಯೂನಿಕ್ ಪ್ರಾಪರ್ಟಿ ಎಕ್ಸ್ ಪೋದಲ್ಲಿ ಭಾಗವಹಿಸಲಿವೆ.

    ಈ ಎಲ್ಲಾ ಕಂಪನಿಗಳು ಗ್ರಾಹಕರಿಗೆ ತಮ್ಮ ವಸತಿ ಯೋಜನೆಗಳ ಸಂಪೂರ್ಣ ವಿವರಗಳನ್ನು ನೀಡಲಿದೆ. ಈ ಎಕ್ಸ್ ಪೋಗೆ ಆಗಮಿಸಿ ನಿಮ್ಮ ಕನಸಿನ ಮನೆಯನ್ನು ನೀವು ನಿಮ್ಮದಾಗಿಸಿಕೊಳ್ಳಬಹುದು. ನುರಿತ ಮಾರ್ಗದರ್ಶಕರು, ಇಂಟೀರಿಯರ್ ಡಿಸೈನರ್‍ಗಳು ಹಾಗೂ ಸಲಹೆಗಾರರು ಈ ಎಕ್ಸ್ ಪೋದಲ್ಲಿ ನಿಮಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಗ್ರಾಹಕರು ನಿವೇಶನ, ಫ್ಲ್ಯಾಟ್ ಖರೀದಿಸಲು ಬಯಸಿದೆ ಬ್ಯಾಂಕ್‍ಗಳು ನೀಡುವ ಸಾಲದ ಬಗ್ಗೆಯೂ ಇದೇ ಸೂರಿನಲ್ಲಿ ನೀವು ಮಾಹಿತಿ ಪಡೆಯಬಹುದು. ಜನವರಿ 23 ಮತ್ತು 24ರಂದು ಶಿವನಹಳ್ಳಿ ಹಾಗೂ ಜೆಪಿ ನಗರದಲ್ಲಿ ನಡೆಯುವ ಪ್ರಾಪರ್ಟಿ ಎಕ್ಸ್ ಪೋಗೆ ಬಂದು ನಿಮ್ಮ ಕನಸು ನನಸಾಗಿಸಿಕೊಳ್ಳಬಹುದು.

  • ಜನವರಿ 23, 24ಕ್ಕೆ ಯೂನಿಕ್ ಪ್ರಾಪರ್ಟಿ ಎಕ್ಸ್ ಪೋ

    ಜನವರಿ 23, 24ಕ್ಕೆ ಯೂನಿಕ್ ಪ್ರಾಪರ್ಟಿ ಎಕ್ಸ್ ಪೋ

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನಿವೇಶನ ಮಾಡಬೇಕು, ಪ್ರಾಪರ್ಟಿ ಖರೀದಿ ಮಾಡಬೇಕು, ಮನೆ ಕಟ್ಟಬೇಕು ಎಂದು ಕನಸು ಕಾಣ್ತಿದೀರಾ..? ಹಾಗಿದ್ದರೆ ನಿಮಗೆ ಇಲ್ಲಿದೆ ಸದವಕಾಶ. ನಿಮ್ಮ ಕನಸು ನನಸು ಮಾಡಲು ಈ ಬಾರಿ ನಿಮಗೆ ಡಬಲ್ ಧಮಾಕಾ ಸಿಗಲಿದೆ.

    ಜೆನೆಟಿಕ್ ಇವೆಂಟ್ಸ್ ಬೆಂಗಳೂರಿನ ಎರಡು ಭಾಗದಲ್ಲಿ ಎಕ್ಸ್ ಪೋ ಆಯೋಜಿಸಿದ್ದು ಜನವರಿ 23 ಮತ್ತು 24ರಂದು ‘ಯೂನಿಕ್ ಪ್ರಾಪರ್ಟಿ ಎಕ್ಸ್ ಪೋ-2021’ ನಡೆಯಲಿದೆ.

    ಬೆಂಗಳೂರು ದಕ್ಷಿಣ ಭಾಗದ ಗ್ರಾಹಕರಿಗಾಗಿ ಜೆಪಿ ನಗರ 6ನೇ ಹಂತದ ಕೆಆರ್ ಲೇಔಟ್‍ನ ಎಲೈಟ್ ಕನ್ವೆನ್ಷನ್ ಸೆಂಟರ್ ಹಾಗೂ ಬೆಂಗಳೂರು ನಾರ್ತ್ ಭಾಗದ ಗ್ರಾಹಕರಿಗಾಗಿ ಯಲಹಂಕ ಬೈಪಾಸ್ ರಸ್ತೆಯ ಶಿವನಹಳ್ಳಿಯಲ್ಲಿರುವ ಎಲಾನ್ ಕನ್ವೆನ್ಷನ್ ಸೆಂಟರ್ ನಲ್ಲಿ ಈ ಪ್ರಾಪರ್ಟಿ ಎಕ್ಸ್ ಪೋ ಆಯೋಜಿಸಲಾಗಿದೆ.

    ಯಾರೆಲ್ಲಾ ಸಿಗ್ತಾರೆ..?: ಬೆಂಗಳೂರಿನ ಪ್ರಮುಖ ಬಿಲ್ಡರ್ ಗಳು ಈ ಪ್ರಾಪರ್ಟಿ ಎಕ್ಸ್ ಪೋದಲ್ಲಿ ಭಾಗವಹಿಸಲಿದ್ದಾರೆ. ಡಿಎಸ್ ಮ್ಯಾಕ್ಸ್, ಗಾಡ್ರೆಜ್ ಪ್ರಾಪರ್ಟೀಸ್, ಎಸ್‍ಎಂಆರ್ ಹೋಲ್ಡಿಂಗ್ಸ್, ಅರಿಹಂತ್ ಡೆವಲಪರ್ಸ್, ಎಟಿಝೆಡ್ ಪ್ರಾಪರ್ಟೀಸ್, ಅಪರ್ಣ, ಉಪಕಾರ್ ಡೆವಲಪರ್ಸ್, ಫೈವ್ ಎಲಿಮೆಂಟ್ಸ್ ರಿಯಾಲಿಟಿ, ಎಲಿಗೆಂಟ್ ಬಿಲ್ಡರ್ಸ್ & ಡೆವಲಪರ್ಸ್, ಸಾಯಿ ಕಲ್ಯಾಣ್ ಬಿಲ್ಡರ್ಸ್ & ಡೆವಲಪರ್ಸ್, ಗೃಹ, ಸಿಲ್ವರ್ ಟ್ರೀ ಪ್ರಾಜೆಕ್ಟ್ಸ್, ಆರ್ನಾ ಶೆಲ್ಟರ್ಸ್ ಮುಂತಾದ ಪ್ರಮುಖ ರಿಯಲ್ ಎಸ್ಟೇಟ್ ಕಂಪೆನಿಗಳು ಯೂನಿಕ್ ಪ್ರಾಪರ್ಟಿ ಎಕ್ಸ್ ಪೋದಲ್ಲಿ ಭಾಗವಹಿಸಲಿವೆ.

    ಈ ಎಲ್ಲಾ ಕಂಪನಿಗಳು ಗ್ರಾಹಕರಿಗೆ ತಮ್ಮ ವಸತಿ ಯೋಜನೆಗಳ ಸಂಪೂರ್ಣ ವಿವರಗಳನ್ನು ನೀಡಲಿದೆ. ಈ ಎಕ್ಸ್ ಪೋಗೆ ಆಗಮಿಸಿ ನಿಮ್ಮ ಕನಸಿನ ಮನೆಯನ್ನು ನೀವು ನಿಮ್ಮದಾಗಿಸಿಕೊಳ್ಳಬಹುದು. ನುರಿತ ಮಾರ್ಗದರ್ಶಕರು, ಇಂಟೀರಿಯರ್ ಡಿಸೈನರ್‌ಗಳು ಹಾಗೂ ಸಲಹೆಗಾರರು ಈ ಎಕ್ಸ್‌ಪೋದಲ್ಲಿ ನಿಮಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಗ್ರಾಹಕರು ನಿವೇಶನ, ಫ್ಲ್ಯಾಟ್ ಖರೀದಿಸಲು ಬಯಸಿದರೆ ಬ್ಯಾಂಕ್‍ಗಳು ನೀಡುವ ಸಾಲದ ಬಗ್ಗೆಯೂ ಇದೇ ಸೂರಿನಲ್ಲಿ ನೀವು ಮಾಹಿತಿ ಪಡೆಯಬಹುದು. ಜನವರಿ 23 ಮತ್ತು 24ರಂದು ಶಿವನಹಳ್ಳಿ ಹಾಗೂ ಜೆಪಿ ನಗರದಲ್ಲಿ ನಡೆಯುವ ಪ್ರಾಪರ್ಟಿ ಎಕ್ಸ್ ಪೋಗೆ ಬಂದು ನಿಮ್ಮ ಕನಸು ನನಸಾಗಿಸಿಕೊಳ್ಳಬಹುದು.

  • ರಿಯಲ್ ಎಸ್ಟೇಟ್ ಡೀಲ್ ವೇಳೆ ಮಾತಿನ ಚಕಮಕಿ- ಇಬ್ಬರ ಮೇಲೆ ಗುಂಡಿನ ದಾಳಿ

    ರಿಯಲ್ ಎಸ್ಟೇಟ್ ಡೀಲ್ ವೇಳೆ ಮಾತಿನ ಚಕಮಕಿ- ಇಬ್ಬರ ಮೇಲೆ ಗುಂಡಿನ ದಾಳಿ

    ಚಿಕ್ಕಮಗಳೂರು: ರಿಯಲ್ ಎಸ್ಟೇಟ್ ವ್ಯವಹಾರದ ಮಾತುಕತೆ ವೇಳೆ ಮಾತಿನ ಚಕಮಕಿ ನಡೆದು ಇಬ್ಬರ ಮೇಲೆ ಗುಂಡು ಹಾರಿಸಿರೋ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬಾಣೂರು ಗ್ರಾಮದಲ್ಲಿ ನಡೆದಿದೆ.

    ಚಿಕ್ಕಮಗಳೂರು ನಗರದ ಬಿಜೆಪಿ ಮುಖಂಡ ಸಂಬಂಧಿ ಕಲ್ಯಾಣ್ ಕುಮಾರ್ ಹಾಗೂ ಖಾಸಗಿ ಶಾಲೆಯ ಉಪನ್ಯಾಕ ಸುಮಂತ್ ಗೆ ಗುಂಡೇಟು ಬಿದ್ದಿದೆ. ಬೆಂಗಳೂರಿನಿಂದ ಬಂದಿದ್ದ ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ವ್ಯವಹಾರದ ವೇಳೆ ಮಾತಿನ ಚಕಮಕಿ ನಡೆದು ಈ ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ.

    ಗುಂಡೇಟು ಬಿದ್ದ ಇಬ್ಬರಿಗೂ ಚಿಕ್ಕಮಗಳೂರಿನ ಕೆ.ಆರ್.ಎಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿಗೆ ರವಾನಿಸಲಾಗಿದೆ. ಇಬ್ಬರ ಮೇಲೆ ಫೈರಿಂಗ್ ಮಾಡಿದ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿಗಳು ನಾಪತ್ತೆಯಾಗಿದ್ದಾರೆ. ಗುಂಡೇಟು ತಿಂದ ಕಲ್ಯಾಣ್ ಕುಮಾರ್ ಹಾಗೂ ಸುಮಂತ್ ದೇಹದಲ್ಲಿ ಗುಂಡುಗಳು ಹಾಗೇ ಇದ್ದು ಅವುಗಳನ್ನ ತೆಗೆಯಲು ಇಬ್ಬರನ್ನೂ ಬೆಂಗಳೂರಿಗೆ ರವಾನಿಸಲಾಗಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಖರಾಯಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಸ್ಥಳಕ್ಕೆ ಭೇಟಿ ನೀಡಿರೋ ಸಖರಾಯಪಟ್ಟಣ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ರಿಯಲ್ ಎಸ್ಟೇಟ್ ವಿಷಯವಾಗಿ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಪೊಲೀಸರ ತನಿಖೆಯ ಬಳಿಕ ಘಟನೆ ಸ್ಪಷ್ಟವಾದ ಕಾರಣ ತಿಳಿಯಲಿದೆ.

  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬಿಗ್ ರಿಲೀಫ್

    ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬಿಗ್ ರಿಲೀಫ್

    ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬಿಗ್ ರಿಲೀಫ್ ಸಿಕ್ಕಿದ್ದು ನಾಳೆಯಿಂದ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯಲು ಅನುಮತಿ ಸಿಗಲಿದೆ.

    ಕ್ರಷರ್ ವ್ಯವಹಾರ ಓಪನ್ ಮಾಡಲು ಅನುಮತಿ ನೀಡಲಾಗಿದೆ. ಸಬ್‍ರಿಜಿಸ್ಟ್ರಾರ್ ಚೇರಿಗೆ ಬರುವ ಮುನ್ನ ಕಚೇರಿಗೆ ಕರೆ ಮಾಡಿ ಅಧಿಕಾರಿಗಳಿಗೆ ಸಮಯ ಕೇಳಿ ಬರಬೇಕಾಗುತ್ತದೆ.

    ಕಚೇರಿಗೆ ಬರುವವವರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಕಂದಾಯ ಸಚಿವ ಅಶೋಕ್ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಲಾಕ್‍ಡೌನ್ ನಿರ್ಧಾರ ರಾಜ್ಯಗಳಿಗೆ ಬಿಟ್ಟರೆ ಬಿಎಸ್‍ವೈ ಪ್ಲಾನ್ ಏನು?

    ಈಗಾಗಲೇ ಅಗತ್ಯ ಸೇವೆ ಜೊತೆ ಆರ್ಥಿಕ ಚಟುವಟಿಕೆಗಾಗಿ ಕೆಲ ನಿಯಮಗಳನ್ನು ಸಡಿಲ ಮಾಡಲಾಗಿದೆ. ಹೀಗಾಗಿ ಕೆಲ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರದಿಂದ ಅಧಿಕೃತ ಆದೇಶ ಇನ್ನೂ ಪ್ರಕಟವಾಗಿಲ್ಲ. ಇಂದು ಈ ಬಗ್ಗೆ ಆದೇಶ ಪ್ರಕಟವಾಗುವ ಸಾಧ್ಯತೆಯಿದೆ.

  • ನಿವೇಶನ ಕೊಡಿಸೋದಾಗಿ ವಂಚನೆ – ನಕಲಿ ಪತ್ರಕರ್ತ ಸೇರಿದಂತೆ ನಾಲ್ವರ ಬಂಧನ

    ನಿವೇಶನ ಕೊಡಿಸೋದಾಗಿ ವಂಚನೆ – ನಕಲಿ ಪತ್ರಕರ್ತ ಸೇರಿದಂತೆ ನಾಲ್ವರ ಬಂಧನ

    ಹುಬ್ಬಳ್ಳಿ: ನಿವೇಶನ ನೀಡುವುದಾಗಿ ನಂಬಿಸಿ ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು, ನಿವೇಶನ ಕೊಡಿಸದೇ ವಂಚನೆ ಮಾಡುತ್ತಿದ್ದ ನಾಲ್ವರು ರಿಯಲ್ ಎಸ್ಟೇಟ್ ಉದ್ಯಮಿಗಳನ್ನ ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶ್ವಸಿಯಾಗಿದ್ದಾರೆ.

    ನಿಸರ್ಗ ರಿಯಲ್ ವೆಲ್ತ್ ಸಲ್ಯೂಷನ್, ಸ್ವೀಲರ್ ಟೌನ್, ಗ್ರೀನ್ ವ್ಯಾಲಿ ಹೆಸರಿನಲ್ಲಿ ಲೇಔಟ್‍ಗಳನ್ನ ಮಾಡಿರುವುದಾಗಿ ಆಕರ್ಷಕ ಜಾಹೀರಾತುಗಳನ್ನ ನೀಡಿ ನಿವೇಶನ ಕೊಡಿಸುವುದಾಗಿ ವಂಚಿಸುತ್ತಿದ್ದ ಮಲ್ಲಿಕಾರ್ಜುನ ಸರ್ವಿ, ನಾಗರಾಜ ಶ್ಯಾವಿ, ದಾದಾಪೀರ ಬಳ್ಳಾರಿ, ಸಂತೋಷ ಶಲವಡಿ ಬಂಧಿತ ಆರೋಪಿಗಳು.

    ಆರೋಪಿಗಳು ಹುಬ್ಬಳ್ಳಿಯ ಗಿರಿನಗರದ ಮೋಹನ್ ಎಳ್ಳುಮಗ್ಗದ ಅವರಿಗೆ 30-40 ಸೈಜ್ ನಿವೇಶನ ಕೊಡಿಸುವುದಾಗಿ 5.32 ಲಕ್ಷ ರೂಪಾಯಿ ಹಣವನ್ನ ಪಡೆದುಕೊಂಡಿದ್ದರು. ಆದರೆ ನಿವೇಶನವನ್ನೂ ಕೊಡಿಸದೆ, ಹಣವನ್ನ ಮರಳಿ ನೀಡದೇ ಮೋಸ ಮಾಡಿದ್ದರು. ಹಣ ವಾಪಸ್ ಕೇಳಲು ಆರೋಪಿಗಳ ಕಚೇರಿಗೆ ತೆರಳಿದ ವೇಳೆ ಆರೋಪಿಗಳು ಮೋಹನ್‍ಗೆ ಜೀವಬೆದರಿಕೆ ಹಾಕಿ, ಅವ್ಯಾಚ ಶಬ್ದಗಳಿಂದ ನಿಂದಿಸಿದ ಬಗ್ಗೆ ಮೋಹನ್ ಹುಬ್ಬಳ್ಳಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ದಾದಾಪೀರ ಬಳ್ಳಾರಿ, ಸಂತೋಷ ಶಲವಡಿರನ್ನ ಬಂಧಿಸಿದ್ದರು. ಇದೀಗ ಪ್ರಮುಖ ಆರೋಪಿಯಾಗಿರುವ ನಾಗರಾಜ ಶ್ಯಾವಿಯನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಜಮೀನಿಗೆ ಸಂಬಧಿಸಿದ ಕೆಲ ದಾಖಲೆಗಳು ಹಾಗೂ ಪ್ರೇಸ್ ಎಂದು ಹೆಸರಿರುವ ಕಾರನ್ನ ಜಪ್ತಿ ಮಾಡಿಕೊಂಡಿದ್ದಾರೆ. ಹೀಗಾಗಿ ಬಂಧಿತ ಆರೋಪಿ ನಕಲಿ ಪತ್ರಕರ್ತನೋ ಅಸಲಿ ಪತ್ರಕರ್ತನೋ ಅನ್ನೋ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಇನೋರ್ವ ಆರೋಪಿ ಮಲ್ಲಿಕಾರ್ಜುನ ಸರ್ವಿ ಪರಾರಿಯಾಗಿದ್ದು, ಆತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ದಿಲೀಪ್ ಅವರು ನಿಸರ್ಗ ವೆಲ್ತ್ ಸಲ್ಯೂಷನ್ ಮತ್ತು ಓಂಕಾರ ಡೆವಲಪರ್ಸ್ ಆಂಡ್ ಬಿಲ್ಡರ್ಸ್ ಹೆಸರಿನ ರಿಯಲ್ ಎಸ್ಟೇಟ್ ಕಂಪನಿಯ ಜೊತೆ ವ್ಯವಹರಿಸುವಾಗ ಜಾಗರೂಕತೆಯಿಂದ ಇರುವಂತೆ ತಿಳಿಸಿದ್ದಾರೆ. ವಂಚನೆಯ ಕುರಿತು ಹುಬ್ಬಳ್ಳಿಯ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ಹುಬ್ಬಳ್ಳಿ ಧಾರವಾಡ ಅವಳಿ ನಗರ ದಿನೇ ದಿನೇ ಬೆಳೆಯುತ್ತಿದ್ದಂತೆ ಈ ರೀತಿಯ ಹಲವು ನಕಲಿ ರಿಯಲ್ ಎಸ್ಟೇಟ್ ಕಂಪನಿಗಳು ನಿವೇಶನ ಕೊಡಿಸುವುದಾಗಿ ಗ್ರಾಹಕರನ್ನ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ.