Tag: ರಾಸಾಯನಿಕ ಕಾರ್ಖಾನೆ

  • ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಕಾರ್ಖಾನೆ -ವಾಯುಪಡೆಗೆ ಕರೆ

    ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಕಾರ್ಖಾನೆ -ವಾಯುಪಡೆಗೆ ಕರೆ

    ಶ್ರೀನಗರ: ರಾಸಾಯನಿಕ ಕಾರ್ಖಾನೆಯಲ್ಲಿ ಉಂಟಾದ ಅಗ್ನಿ ಅವಘಡಕ್ಕೆ ಇಡೀ ಕಾರ್ಖಾನೆ ಬೆಂಕಿಯ ಕೆನ್ನಾಲಿಗೆ ಹೊತ್ತಿ ಉರಿದಿರುವ ಘಟನೆ ಉಧಂಪುರ್ ಜಿಲ್ಲೆಯ ಬಟಾಲ್ ಬಲಿಯನ್ ಕೈಗಾರಿಕಾ ಪ್ರದೇಶದಲ್ಲಿ ವರದಿಯಾಗಿದೆ.

    ಧನುಕಾ ಅಗ್ರಿಟೆಕ್ ಲಿಮಿಟೆಡ್ ಕಾರ್ಖಾನೆಯಲ್ಲಿ ಮುಂಜಾನೆ 12.30 ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಆಗಮಿಸಿದರು ಕೂಡ ರಾಸಾಯನಿಕ ಉತ್ಪಾದನೆಯ ಕಾರ್ಖಾನೆ ಆಗಿರುವುದರಿಂದ ಬೆಂಕಿ ಕಾರ್ಖಾನೆ ತುಂಬ ಹರಡಿಕೊಂಡಿಕೊಂಡಿದೆ. ಸ್ಥಳದಲ್ಲಿ 8 ಅಗ್ನಿಶಾಮಕ ದಳದ ವಾಹನಗಳು ಕಾರ್ಯಾಚರಣೆ ಮಾಡುತ್ತಿದೆ. ಆದರೂ ಬೆಂಕಿ ನಂದಿಸಲು ಕಷ್ಟವಾಗುತ್ತಿರುವ ಪರಿಣಾಮ ವಾಯುಪಡೆಗೆ ಬೆಂಕಿ ನಂದಿಸಲು ಕರೆ ಮಾಡಲಾಗಿದೆ.

    ಈ ಕುರಿತು ಸ್ಥಳೀಯ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಅಗ್ನಿಶಾಮಕ ದಳದ ಅಧಿಕಾರಿ, ಕೈಗಾರಿಕಾ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ನಾವು ಬೆಂಕಿ ನಂದಿಸಲು ಪ್ರಯತ್ನ ಪಡುತ್ತಿದ್ದರು ಕೂಡ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

    ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಕಾರ್ಖಾನೆ ಮತ್ತು ಸ್ಥಳದಲ್ಲಿದ್ದ ವಾಹನಗಳು ಪೂರ್ತಿ ಸುಟ್ಟು ಕರಕಲಾಗಿದೆ. ಹತ್ತಿರದ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಳ್ಳದಂತೆ ಕಾರ್ಯಾಚರಣೆ ಮುಂದುವರಿದಿದೆ.

  • ಕೆಮಿಕಲ್ ಫ್ಯಾಕ್ಟರಿಯಲ್ಲಿ ಸರಣಿ ಸ್ಫೋಟವಾಗಿ ಮೂವರ ಸಾವು, 15 ಮಂದಿಗೆ ಗಾಯ- 10 ಕಿ.ಮೀ ವರೆಗೆ ಕೇಳಿಸಿದ ಸ್ಫೋಟದ ಶಬ್ದ

    ಕೆಮಿಕಲ್ ಫ್ಯಾಕ್ಟರಿಯಲ್ಲಿ ಸರಣಿ ಸ್ಫೋಟವಾಗಿ ಮೂವರ ಸಾವು, 15 ಮಂದಿಗೆ ಗಾಯ- 10 ಕಿ.ಮೀ ವರೆಗೆ ಕೇಳಿಸಿದ ಸ್ಫೋಟದ ಶಬ್ದ

    ಮುಂಬೈ: ರಾಸಾಯನಿಕ ಕಾರ್ಖಾನೆಯಲ್ಲಿ ಸರಣಿ ಸ್ಫೋಟ ಸಂಭವಿಸಿದ ಪರಿಣಾಮ 3 ಜನರು ಸಾವನ್ನಪ್ಪಿದ್ದು, 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪಾಲ್‍ಘರ್ ನಲ್ಲಿ ನಡೆದಿದೆ.

    ಗುರುವಾರ ರಾತ್ರಿ ಸುಮಾರು 11.15ಕ್ಕೆ ಬೋಯಿಸರ್ ರಾಸಾಯನಿಕ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಸುತ್ತ-ಮುತ್ತ ಇದ್ದ ಪ್ರದಶಕ್ಕೆಲ್ಲಾ ಭುಕಂಪನದ ಅನುಭವದಂತೆ ನಡುಕ ಹುಟ್ಟಿಸಿತ್ತು. ಇದರಿಂದ ಮನೆಯಲ್ಲಿದ್ದ ಜನರೆಲ್ಲಾ ಭುಕಂಪನವಾಯಿತೆಂದು ಮನೆಯಿಂದ ಹೊರ ಬಂದು ಕುಳಿತಿದ್ದರು. ಸ್ಫೋಟದ ತೀವ್ರತೆಗೆ ಕೆಲವು ಮನೆಗಳ ಕಿಟಿಕಿಯ ಗಾಜುಗಳು ಪುಡಿಯಾಗಿದ್ದು, ಎಲ್ಲರನ್ನು ಆತಂಕಕ್ಕೆ ಎಡೆಮಾಡಿತ್ತು. ಫ್ಯಾಕ್ಟರಿಯ ಬಾಯ್ಲರ್ ರೂಮಿನಲ್ಲಿ ಸ್ಫೋಟ ನಡೆದಿರುವ ಸಾಧ್ಯತೆ ಇದೆ. ಆದರೂ ಸ್ಫೋಟಕ್ಕೆ ಕಾರಣವೇನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

    ಘಟನೆ ನಡೆದ ಸ್ಥಳಕ್ಕೆ ಧಾವಿಸಿದ 25 ದಕ್ಕೂ ಹೆಚ್ಚು ಅಗ್ನಿಶಾಮಕ ಪಡೆಗಳು ಹೊತ್ತಿ ಉರಿಯುತ್ತಿದ್ದ ಕಾರ್ಖಾನೆಯ ಬೆಂಕಿಯನ್ನ ನಂದಿಸಲು ಹರಸಾಹಸ ಪಡಬೇಕಾಯಿತು. ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ನಮಗೆ ಇದ್ದಕ್ಕಿದ್ದಂತೆ ಯಾರೋ ಬಾಂಬ್ ದಾಳಿ ನಡೆಸಿರುವ ಹಾಗೆ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

    ಮುಂಜಾಗ್ರತೆಯ ಕ್ರಮವಾಗಿ ಆ ಮಾರ್ಗದ ರಸ್ತೆ ಸಂಚಾರವನ್ನ ಸ್ಥಗಿತಗೊಳಿಸಿದ್ದು, ಪ್ರದೇಶದ ವಿದ್ಯುತ್ ಪೂರೈಕೆಯನ್ನ ಸ್ಥಗಿತಗೊಳಿಸಲಾಗಿದೆ. ಈ ಅವಘಡ ನಡೆದ ಪ್ರದೇಶದ ನಾಲ್ಕು ರಾಸಾಯನಿಕ ಕೇಂದ್ರಗಳಾದ- ಪ್ರಾಚಿ ಇಂಡಸ್ಟ್ರಿ, ಭಾರತ್ ರಾಸಾಯನ್, ಆರತಿ ಇಂಡಸ್ಟ್ರಿ ಮತ್ತು ಯುನಿಮಾಕ್ಸ್ ಕಾರ್ಖಾನೆಗಳಿಗೂ ಹಾನಿಯಾಗಿದೆ ಎಂದು ಹೇಳಲಾಗಿದೆ.

    ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಪಿ ಸಿಂಗ್, ವಾಸೈನ ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ (ಡಿಐಎಸ್‍ಎಚ್) ನಿರ್ದೇಶಕರು ಈ ಅವಘಡದ ಕಾರಣವನ್ನ ಖಚಿತಪಡಿಸಿಕೊಂಡು ಬೋಯಿಸಾರ್ ಪೊಲೀಸರಿಗೆ ವರದಿ ಮಾಡುವುದಾಗಿ ತಿಳಿಸಿದರು.