Tag: ರಾಸಲೀಲೆ

  • ಬೆಳಗಾವಿಯಲ್ಲಿ ವ್ಯಾಪಕ ಪ್ರತಿಭಟನೆ – ರಾಸಲೀಲೆ ಪ್ರಕರಣ ಸಿಐಡಿ ತನಿಖೆಗೆ ಒತ್ತಾಯ

    ಬೆಳಗಾವಿಯಲ್ಲಿ ವ್ಯಾಪಕ ಪ್ರತಿಭಟನೆ – ರಾಸಲೀಲೆ ಪ್ರಕರಣ ಸಿಐಡಿ ತನಿಖೆಗೆ ಒತ್ತಾಯ

    – ಪೆಟ್ರೋಲ್ ಬಂಕ್‍ಗೆ ನುಗ್ಗಿ ಬೆಂಬಲಿಗರಿಂದ ಗೂಂಡಾಗಿರಿ
    – ಕಾರಿಗೆ ಕೈಯಿಂದ ಗುದ್ದಿ, ಕಾಲಿನಿಂದ ಒದ್ದು ಪ್ರತಿಭಟನೆ

    ಬೆಳಗಾವಿ: ರಾಸಲೀಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಿ ಮಾಜಿ ಸಚಿವರ ಬೆಂಬಲಿಗರಿಂದ ರಸ್ತೆ ತಡೆದು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಸಂಬಂಧ ದೂರುದಾರ ದಿನೇಶ್ ಕಲ್ಲಹಳ್ಳಿ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿ ಅವರ ವಿರುದ್ಧ ಗೋಕಾಕ್‍ನಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಮಮದಾಪೂರ ಹಾಗೂ ಹಿರೇನಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯ 11 ಗ್ರಾಮಗಳಿಂದ ಬೆಂಬಲಿಗರು ಬಂದಿದ್ದು, ಪ್ರತಿಭಟನೆ ಮಾಡುತ್ತಿದ್ದಾರೆ. ಸ್ಥಳದಲ್ಲಿ ಬಿಗಿವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೊಬಸ್ತ್ ನೀಡಲಾಗಿದೆ.

    ಮಮದಾಪೂರ ಕ್ರಾಸ್ ಬಳಿ ಬೆಂಬಲಿಗರು ಪೆಟ್ರೋಲ್ ಬಂಕ್‍ಗೆ ನುಗ್ಗಿ ಗೂಂಡಾಗಿರಿ ನಡೆಸಿದ್ದಾರೆ. ಒತ್ತಾಯಪೂರ್ವಕವಾಗಿ ಅವಾಚ್ಯವಾಗಿ ನಿಂದಿಸಿ ಬಂಕ್ ಬಂದ್ ಮಾಡಿಸಿದ್ದಾರೆ. ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಮಹಾರಾಷ್ಟ್ರ ಮೂಲದ ಕಾರ್ ಬರುತ್ತಿದ್ದಂತೆ ಆಕ್ರೋಶಭರಿತರಾದ ಪ್ರತಿಭಟನಾಕಾರರು, ಕಾರಿಗೆ ಕೈಯಿಂದ ಗುದ್ದಿ, ಕಾಲಿನಿಂದ ಒದ್ದಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    ಅಲ್ಲದೆ ಮಾಜಿ ಸಚಿವರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಬೆಂಬಲಿಗರು ದಿನೇಶ್ ಕಲ್ಲಹಳ್ಳಿ ಅವರ ಅಣಕು ಶವಯಾತ್ರೆಯನ್ನು ಮಾಡಿ ಸುಟ್ಟು ಹಾಕಿ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ನಾಯಕರು ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದರು. ಆದರೆ ಅವರ ವಿರುದ್ಧ ಸುಳ್ಳು ಸಿಡಿಯನ್ನು ಸೃಷ್ಟಿಸಿ ರಾಜಕೀಯ ಪೀತೂರಿಯನ್ನು ಮಾಡಿದ್ದಾರೆ. ಸತ್ಯ ಹೊರಬೇಕು ಎಂದರೆ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು. ತನಿಖೆಯಾದ ನಂತರ ಮತ್ತೆ ಅವರ ಖಾತೆಯನ್ನು ಅವರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಈ ಪ್ರಕರಣದಲ್ಲಿ ಕಾಣದ ಕೈಗಳು ಪಿತೂರಿ ಮಾಡುತ್ತಿವೆ. ಹೀಗಾಗಿ ಸಂಬಂಧ ಸಂಪೂರ್ಣ ತನಿಖೆಯಾಗಬೇಕು ಅಲ್ಲಿಯವರೆಗೂ ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

  • ದಿನೇಶ್‌ಗೆ  ರಾಸಲೀಲೆ ಸಿಡಿ ಸಿಕ್ಕಿದ್ದು ಬೆಂಗಳೂರು ಹೋಟೆಲಿನಲ್ಲಿ

    ದಿನೇಶ್‌ಗೆ ರಾಸಲೀಲೆ ಸಿಡಿ ಸಿಕ್ಕಿದ್ದು ಬೆಂಗಳೂರು ಹೋಟೆಲಿನಲ್ಲಿ

    ಬೆಂಗಳೂರು: ರಮೇಶ್‌ ಜಾರಕಿಹೊಳಿ ರಾಸಲೀಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ದೂರುದಾರ ದಿನೇಶ್‌‌ ಕಲ್ಲಹಳ್ಳಿ ಅವರಿಗೆ ಸಿಡಿ ಎಲ್ಲಿ ಸಿಕ್ಕಿದೆ ಎಂಬ ವಿಚಾರ ಈಗ ಪೊಲೀಸ್‌ ತನಿಖೆಯಿಂದ ಲಭ್ಯವಾಗಿದೆ.

    ಮಾರ್ಚ್‌ 1 ರಂದು ದಿನೇಶ್‌ ಕಲ್ಲಹಳ್ಳಿ ಅವರಿಗೆ ಸಿಡಿ ಸಿಕ್ಕಿದೆ. ಬೆಂಗಳೂರಿನ ಗಾಂಧಿನಗರದ ರಾಮಕೃಷ್ಣ ಹೋಟೆಲಿನ ಪಾರ್ಕಿಂಗ್‌ ಜಾಗದಲ್ಲಿ ಸಂತ್ರಸ್ತ ಯುವತಿಯ ಸಂಬಂಧಿಕರು ದಿನೇಶ್‌ ಕಲ್ಲಹಳ್ಳಿಯವರಿಗೆ ನೀಡಿದ್ದಾರೆ. ಸಂಬಂಧಿಕರು ದಿನೇಶ್‌ ಅವರಿಗೆ ಸಿಡಿ ನೀಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಸಂಬಂಧ ಸಿಸಿಬಿ ಪೊಲೀಸರು ಹೋಟೆಲ್‌ಗೆ ಬಂದು ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೇ ಯಾರಿಗೂ ನೀಡಬಾರದು ಎಂದು ಸೂಚಿಸಿದ್ದಾರೆ.

    ಪಬ್ಲಿಕ್‌ ಟಿವಿ ಸ್ಟಿಂಗ್‌ನಲ್ಲಿ ಹೋಟೆಲ್‌ ಮ್ಯಾನೇಜರ್‌ ಪ್ರತಿಕ್ರಿಯಿಸಿ, ನಮ್ಮ ಹೋಟೆಲಿಗೆ ಬಂದು ಸಿಡಿ ನೀಡಿದ್ದಾರೆ ಎಂಬ ವಿಚಾರ ಪೊಲೀಸರು ಬಂದ ನಂತರವಷ್ಟೇ ತಿಳಿಯಿತು. ನಮಗೆ ದಿನೇಶ್‌ ಕಲ್ಲಹಳ್ಳಿ ಯಾರು ಎಂಬುದೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದ ನಂತರ ದಿನೇಶ್‌ ಕಲ್ಲಹಳ್ಳಿ ಯಾರು ಎನ್ನುವುದು ಗೊತ್ತಾಗಿದೆ. ನಮ್ಮ ಹೋಟೆಲಿಗೆ ಪ್ರತಿನಿತ್ಯ ಹಲವು ಮಂದಿ ಬರುತ್ತಿರುತ್ತಾರೆ ಎಂದು ಹೇಳಿದರು.


    ಸಿಸಿಟಿವಿ ದೃಶ್ಯ ತೋರಿಸಬಹುದೇ ಎಂದು ಕೇಳಿದ್ದಕ್ಕೆ ಮ್ಯಾನೇಜರ್‌, ಇಲ್ಲ ಯಾರಿಗೂ ನಾವು ನೀಡುವುದಿಲ್ಲ. ಪೊಲೀಸರು ಯಾರಿಗೂ ಕೊಡಬಾರದು ಎಂದೂ ಸೂಚಿಸಿದ್ದಾರೆ ಎಂದರು.

    ಕೇವಲ ಕಬ್ಬನ್‌ ಪಾರ್ಕ್‌ ಪೊಲೀಸರು ಮಾತ್ರ ಹೋಟೆಲಿಗೆ ಬಂದಿಲ್ಲ. ಸಿಸಿಬಿ ಪೊಲೀಸರು ಸಹ ಹೋಟೆಲಿಗೆ ಬಂದು ಎರಡು ದಿನದ ದೃಶ್ಯಗಳನ್ನು ಪಡೆದುಕೊಂಡಿದ್ದಾರೆ.

  • ಜಾರಕಿಹೊಳಿ ಕೇಸ್‌ – ರಷ್ಯಾದಿಂದ ರಾಸಲೀಲೆ ವಿಡಿಯೋ ಅಪ್ಲೋಡ್‌?

    ಜಾರಕಿಹೊಳಿ ಕೇಸ್‌ – ರಷ್ಯಾದಿಂದ ರಾಸಲೀಲೆ ವಿಡಿಯೋ ಅಪ್ಲೋಡ್‌?

    ಬೆಂಗಳೂರು: ರಮೇಶ್‌ ಜಾರಕಿಹೊಳಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ರಷ್ಯಾದಿಂದ ಅಪ್ಲೋಡ್‌ ಆಗಿದೆ ಎನ್ನಲಾಗುತ್ತಿದೆ.

    ಹೌದು. ಮಂಗಳವಾರ ಮಧ್ಯಾಹ್ನ 2:20ರ ವೇಳೆಗೆ ರಷ್ಯಾದಿಂದ ವಿಡಿಯೋ ಅಪ್ಲೋಡ್‌ ಮಾಡಿರುವ ವಿಚಾರ ಬೆಂಗಳೂರು ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಯೂಟ್ಯೂಬ್‌ಗೆ ಪತ್ರ ಬರೆದು ಮತ್ತಷ್ಟು ವಿವರ ಸಂಗ್ರಹಿಸಲು ಮುಂದಾಗಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ.

    ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ವಿರುದ್ಧ ಪೊಲೀಸರು ಇಲ್ಲಿಯವರೆಗೆ ಎಫ್‍ಐಆರ್ ದಾಖಲಿಸಿಕೊಂಡಿಲ್ಲ. ಸಂತ್ರಸ್ತೆಯನ್ನು ಸಂಪರ್ಕಿಸಲು ಪೊಲೀಸರು ಯತ್ನಿಸುತ್ತಿದ್ದಾರೆ.

    ದೂರುದಾರ ದಿನೇಶ್ ಕಲ್ಲಹಳ್ಳಿ, ಪೊಲೀಸರಿಗೂ ಸಂತ್ರಸ್ತೆಯ ವಿಳಾಸ ಮತ್ತು ಇತರೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ದಿನೇಶ್ ಕಲ್ಲಹಳ್ಳಿಗೆ ನೊಟೀಸ್ ಜಾರಿ ಮಾಡಿದ್ದು, ನಾಳೆ ಬೆಳಗ್ಗೆ 11ಕ್ಕೆ ವಿಚಾರಣೆಗೆ ಬರಲು ಸೂಚಿಸಿದ್ದಾರೆ.

    ದಿನೇಶ್ ಕಲ್ಲಹಳ್ಳಿಗೆ ಈ ವಿಡಿಯೋವನ್ನು ಕೊಟ್ಟಿದ್ದು ಯಾರು? ಯಾವಾಗ ಕೊಟ್ಟಿದ್ದಾರೆ. ದಿನೇಶ್ ಹೇಳುತ್ತಿರುವುದು ನಿಜವೇ ಎಂಬುದನ್ನು ಪೊಲೀಸರು ಕೆದಕುತ್ತಿದ್ದಾರೆ. ದಿನೇಶ್ ಕಾಲ್ ಡಿಟೇಲ್ಸ್ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

    ಪೊಲೀಸರು ಇದುವರೆಗೂ ಎಫ್‍ಐಆರ್ ದಾಖಲಿಸದ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಪಕ್ಷದ ವಕ್ತಾರ ಸಂಕೇತ್ ಏಣಗಿ ಮಾತನಾಡಿ, ಕ್ರಿಮಿನಲ್ ಕಾನೂನಿನ ಪ್ರಕಾರ, ಯಾರು ಬೇಕಾದರೂ ದೂರು ನೀಡಬಹುದು. ಸುಪ್ರೀಂಕೋರ್ಟ್ ಕೂಡಾ ಇದನ್ನು ಹೇಳಿದೆ. ಕೂಡಲೇ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

    ರಾಸಲೀಲೆ ಸಿಡಿ ಬಗ್ಗೆ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ಮಾಡಿಸಬೇಕು ಅಂತಾ ಆಗ್ರಹಿಸಿದ್ದಾರೆ. ಒಂದು ವೇಳೆ ರಮೇಶ್ ಜಾರಕಿಹೊಳಿ ಏನಾದರೂ ದೂರು ನೀಡಿದಲ್ಲಿ, ಇಡೀ ಪ್ರಕರಣಕ್ಕೆ ಬ್ಲಾಕ್‍ಮೇಲ್ ಟ್ವಿಸ್ಟ್ ಸಿಗಲಿದೆ ಎನ್ನಲಾಗುತ್ತಿದೆ.

  • ಸಿಎಂ ಆಗೋವರೆಗೂ ನಂಗೆ ನಿದ್ದೆ ಬರಲ್ಲ, ಸಿದ್ದರಾಮಯ್ಯ ಒಳ್ಳೆಯರು ಯಡಿಯೂರಪ್ಪ ಭ್ರಷ್ಟ – ರಮೇಶ್‌ ಜಾರಕಿಹೊಳಿ

    ಸಿಎಂ ಆಗೋವರೆಗೂ ನಂಗೆ ನಿದ್ದೆ ಬರಲ್ಲ, ಸಿದ್ದರಾಮಯ್ಯ ಒಳ್ಳೆಯರು ಯಡಿಯೂರಪ್ಪ ಭ್ರಷ್ಟ – ರಮೇಶ್‌ ಜಾರಕಿಹೊಳಿ

    ಬೆಂಗಳೂರು: ರಾಜ್ಯದ ಮಾನ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಹರಾಜಾಗಿದೆ. ಸರ್ಕಾರದ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ದೃಶ್ಯ ಸಮೇತ ಬಹಿರಂಗವಾಗಿದೆ. ರಾಸಲೀಲೆ ಸಂಬಂಧ ಈಗಾಗಲೇ ದೂರು ಕೂಡ ಸಲ್ಲಿಕೆಯಾಗಿದೆ. ಕೆಪಿಟಿಸಿಎಲ್‍ನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ ಸಂತ್ರಸ್ತ ಯುವತಿಯನ್ನು ಕಾಮಕ್ರಿಯೆಗೆ ಬಳಸಿಕೊಂಡಿರುವುದಾಗಿ ದೂರು ದಾಖಲಾಗಿದೆ.

    ರಾಸಲೀಲೆಗೆ ಒಳಗಾದ ಯುವತಿ ಜೊತೆ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿರುವ ಆಡಿಯೋ ಫುಲ್ ವೈರಲ್ ಆಗಿದೆ. ಆಡಿಯೋದಲ್ಲಿ ಯುವತಿ ನೆರವು ಕೇಳುವುದು, ಸಚಿವರು ಭರವಸೆ ನೀಡಿರುವುದು ಬಹಿರಂಗವಾಗಿದೆ.

    ಸಂತ್ರಸ್ತೆ ಜೊತೆ ಸರಸದ ವೇಳೆ ರಮೇಶ್ ಜಾರಕಿಹೊಳಿ ಆಡಿರುವ ಮಾತುಗಳು ರಾಜ್ಯದಲ್ಲಿ ರಾಜಕೀಯದಲ್ಲಿ ಇನ್ನೊಂದು ಮಟ್ಟದ ಸಂಚಲನಕ್ಕೆ ಕಾರಣವಾಗಿವೆ. ಯಡಿಯೂರಪ್ಪ ಸರ್ಕಾರ ರಚನೆಗೆ ಕಾರಣರಾದ ರಮೇಶ್ ಜಾರಕಿಹೊಳಿ ಖುದ್ದು ಯಡಿಯೂರಪ್ಪ ವಿರುದ್ಧವೇ ಮಾತನಾಡಿದ್ದಾರೆ. ಸಿದ್ದರಾಮಯ್ಯ ಒಳ್ಳೆಯವರು, ಯಡಿಯೂರಪ್ಪ ಬಹಳ ಭ್ರಷ್ಟ ಎಂದು ರಮೇಶ್ ಜಾರಕಿಹೊಳಿ ಟೀಕಿಸಿದ್ದಾರೆ.

    ಮುಖ್ಯಮಂತ್ರಿ ಆಗೋವರೆಗೂ ನಂಗೆ ನಿದ್ದೆ ಬರಲ್ಲ ಎಂದು ಕೂಡ ರಮೇಶ್ ಜಾರಕಿಹೊಳಿ ಹೇಳಿಕೊಂಡಿದ್ದಾರೆ. ಆ ವಿಡಿಯೋ ಕೂಡ ಈಗ ವೈರಲ್ ಆಗಿದೆ.

    ಎಫ್‌ಐಆರ್‌ ದಾಖಲಾಗಿಲ್ಲ: ಪ್ರಕರಣ ಸಂಬಂಧ ಸಂತ್ರಸ್ತೆ ಪರವಾಗಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮೊದಲು ಪೊಲೀಸ್ ಆಯುಕ್ತ ಕಮಲ್ ಪಂತ್‍ರನ್ನು ಭೇಟಿಯಾಗಿ ದೂರು ನೀಡಲು ಮುಂದಾದರು. ಕೊನೆಗೆ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ದಿನೇಶ್ ಕಲ್ಲಹಳ್ಳು ಮನವಿ ಮಾಡಿದ್ದಾರೆ.

    ಪೊಲೀಸರು ಇನ್ನೂ ಎಫ್‍ಐಆರ್ ದಾಖಲಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ಅನುಚೇತ್, ಸಂತ್ರಸ್ತೆಯ ಹೇಳಿಕೆ ಪಡೆದ ಮೇಲಷ್ಟೇ ಎಫ್‍ಐಆರ್ ದಾಖಲಿಸುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ, ಸಂತ್ರಸ್ತೆ ಸಂಬಂಧಿಕರ ಜೊತೆ ಪೊಲೀಸರು ದೂರವಾಣಿ ಮೂಲಕ ಮಾತನಾಡಿದ್ದು, ಇದೆಲ್ಲಾ ಸತ್ಯ. ತನಿಖೆಗೆ ಸಹಕರಿಸ್ತೀವಿ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

    ದೂರಿನಲ್ಲಿ ಏನಿದೆ?
    ಬೆಂಗಳೂರಿನ ಆರ್.ಟಿ. ನಗರದ ಪಿಜಿಯಲ್ಲಿ ಯುವತಿ ವಾಸವಾಗಿದ್ದು, ಡ್ರೋಣ್ ಮೂಲಕ ಡ್ಯಾಂ ಚಿತ್ರೀಕರಿಸುವ ಯೋಜನೆಯನ್ನು ಯುವತಿ ಹೊಂದಿದ್ದಳು. ಈ ಸಂಬಂಧ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿಯನ್ನು ಆಕೆ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಕೆಪಿಟಿಸಿಎಲ್‍ನಲ್ಲಿ ಉದ್ಯೋಗ ನೀಡುವ ಆಮಿಷವೊಡ್ಡಿ ಜಾರಕಿಹೊಳಿ ರಾಸಲೀಲೆ ನಡೆಸಿದ್ದಾರೆ. ಕೃತ್ಯದ ಬಳಿಕ ಕೆಲಸ ಕೊಡಿಸದೇ ಸಚಿವ ರಮೇಶ್ ಜಾರಕಿಹೊಳಿ ವಂಚನೆ ಮಾಡಿದ್ದಾರೆ. ಇದೀಗ ಸಂತ್ರಸ್ತ ಯುವತಿಗೆ, ಯುವತಿ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು ಸಂತ್ರಸ್ತೆಗೆ ರಕ್ಷಣೆ ಕಲ್ಪಿಸಿಕೊಡುವಂತೆ ದಿನೇಶ್ ಕಲ್ಲಳ್ಳಿ ದೂರು ನೀಡಿದ್ದಾರೆ.

  • ದಯಾನಂದ ಸ್ವಾಮಿ ಜೊತೆ ರಾಸಲೀಲೆ ಪ್ರಕರಣ: ಕೊನೆಗೂ ರಹಸ್ಯ ಬಿಚ್ಚಿಟ್ಟ ನಟಿ ಕಾವ್ಯಾ ಆಚಾರ್ಯ

    ದಯಾನಂದ ಸ್ವಾಮಿ ಜೊತೆ ರಾಸಲೀಲೆ ಪ್ರಕರಣ: ಕೊನೆಗೂ ರಹಸ್ಯ ಬಿಚ್ಚಿಟ್ಟ ನಟಿ ಕಾವ್ಯಾ ಆಚಾರ್ಯ

    ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ಮಠಗಳಲ್ಲೊಂದಾದ ಹುಣಸಮಾರನಹಳ್ಳಿಯ ಜಂಗಮ ಮಠದ ದಯಾನಂದ ಸ್ವಾಮಿ ರಾಸಲೀಲೆಯಲ್ಲಿ ಭಾಗಿಯಾಗಿದ್ದ ನಟಿ ಕಾವ್ಯ ಆಚಾರ್ಯ ಇದೇ ಮೊದಲ ಬಾರಿಗೆ ತನ್ನ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿದ್ದಾರೆ.

    ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದ್ದು, ವಿಡಿಯೋದಲ್ಲಿ ಕಾವ್ಯಾ ಆಚಾರ್ಯ ರಾಸಲೀಲೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಮೊದಲು ಮೀಡಿಯಾದವರಲ್ಲಿ ಕ್ಷಮೆ ಕೇಳಲು ಇಷ್ಟ ಪಡ್ತೀನಿ. ನನಗೆ ಹುಷಾರಿರಲಿಲ್ಲ. ಅಲ್ಲದೇ ನನಗೆ ಬೆದರಿಕೆ ಕೂಡ ಬಂದಿತ್ತು. ಹೀಗಾಗಿ ಘಟನೆಯ ಬಳಿಕ ಮಾಧ್ಯಮದ ಮುಂದೆ ಬರಲು ಆಗಲಿಲ್ಲ ಅಂತ ಹೇಳಿದ್ದಾರೆ.

    ಇನ್ನು 2-3 ದಿನಗಳಲ್ಲೆ ಕೆಲವರ ಮುಖಾಂತರ ಬಂದು ನಾನು ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಪೊಲೀಸರ ಬಳಿ ದೂರು ದಾಖಲಿಸುತ್ತೇನೆ. ಅದರಲ್ಲಿ 10 ಮಂದಿಯ ಹೆಸರು ಬರೆದಿದ್ದೀನಿ. ದೂರು ಕೊಟ್ಟ ಬಳಿಕ ನಾನು ಮಾಧ್ಯಮದ ಮುಂದೆ ಬಂದು ಯಾರ್ಯಾರು ಏನೇನು ಮಾಡಿದ್ದಾರೆ? ಬಲತ್ಕಾರವಾಗಿ ನನ್ನನ್ನು ಬಳಸಿಕೊಂಡಿದ್ದಾರೆ. ಇವುಗಳನ್ನೆಲ್ಲಾ ಬಹಿರಂಗಪಡಿಸುತ್ತೇನೆ ಅಂತ ಹೇಳಿದ್ರು.

    ಇದನ್ನೂ ಓದಿ: ಪ್ರತಿಭಟನೆ ಮಾಡಿದವ್ರಿಂದ್ಲೇ ಡೀಲ್- ಸ್ವಾಮೀಜಿ ರಾಸಲೀಲೆ ಪ್ರಕರಣದ ಇನ್‍ಸೈಡ್ ಸ್ಟೋರಿ

    ಇಂದು ನನ್ನ ಕುಟುಂಬವನ್ನು ಹೊರಗಡೆ ಓಡಾಡದ ಹಾಗೆ ಮಾಡಿಬಿಟ್ಟಿದ್ದಾರೆ. ಆದ್ರೆ ನಾನು ಸಾಯೋ ಸಮಯದಲ್ಲಿ ನನ್ನ ಅಣ್ಣ ಹಾಗೂ ದೊಡ್ಡಮ್ಮ ನನ್ನನ್ನು ಉಳಿಸಿ, ಧೈರ್ಯ ತುಂಬಿದ್ದಾರೆ. ನೀನು ಸಾಯಬಾರದು. ಈ ರೀತಿ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು ನೀಡಲೇಬೇಕು ಅಂತ ಧೈರ್ಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ನಾನು ಧೈರ್ಯವಾಗಿದ್ದೀನಿ. ಈ ರೀತಿ ಯಾವ ಹೆಣ್ಣುಮಕ್ಕಳಿಗೂ ಆಗಬಾರದು ಅಂತ ಕಣ್ಣೀರು ಹಾಕಿದ್ದಾರೆ.

    ಜಂಗಮ ಮಠದ ಪೀಠಾಧ್ಯಕ್ಷನಾಗಲು ಮುಂದಾಗಿದ್ದ ದಯಾನಂದ್ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೊಡಗಿರೋ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಸ್ವಾಮೀಜಿಯ ಜೊತೆ ರಾಸಲೀಲೆಯಲ್ಲಿ ತೊಡಗಿರುವುದು ನಟಿ ಕಾವ್ಯಾ ಆಚಾರ್ಯ ಎಂದು ಹೇಳಲಾಗಿತ್ತು.

    ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ನಟಿ ಕಾವ್ಯಾರನ್ನು ಸಂಪರ್ಕಿಸಿದಾಗ, ನಾನು ಈಗ ತಾನೇ ಈ ಸುದ್ದಿ ಕೇಳಿದೆ. ಆದರೆ ಅದು ನಾನಲ್ಲ. ನಿಮಗೆ ಗೊತ್ತಿದೆ ಯಾರು ಬೇಕಾದರೂ ಹೀಗೆ ಮಾಡ್ತಾರೆ. ಯಾರೋ ಬೇಕಂತಾನೇ ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ಈ ರೀತಿ ಮಾಡುವವರು ಇರುತ್ತಾರೆ. ನನಗೆ ಯಾವ ಸ್ವಾಮೀಜಿಯೂ ಗೊತ್ತಿಲ್ಲ. ನನಗೂ ಇದಕ್ಕೂ ಏನು ಸಂಬಂಧ ಇಲ್ಲ ಎಂದು ಹೇಳಿದ್ದರು.

    ದಯಾನಂದ ಹೇಳಿದ್ದೇನು?: ರಾಸಲೀಲೆ ರಹಸ್ಯ ವಿಡಿಯೋ ಮಾಡಿದ್ದು 2014 ಜನವರಿ 4 ರಂದು. ಇದಾದ ಬಳಿಕ 2014 ಜನವರಿ 6 ರಂದು ನನ್ನ ಬಳಿ ಡೀಲ್‍ಗೆ ಬಂದ್ರು. ನನ್ನ ಬಳಿ 5 ಕೋಟಿ ಕೊಡುವಂತೆ ಡಿಮ್ಯಾಂಡ್ ಮಾಡಿದ್ರು. ಆ ರೀತಿಯ ವಿಡಿಯೋ ಏನು ಇಲ್ಲ ಅಂದಾಗ ಮೊಬೈಲ್‍ನಲ್ಲಿ ವಿಡಿಯೋ ತೋರಿಸಿದ್ರು. ಬಸವರಾಜ್, ಮಹೇಶ್, ಹಿಮಾಚಲಪತಿ, ಸೂರ್ಯ, ಧರ್ಮೇಂದ್ರ ಅಲಿಯಾಸ್ ಶಂಕರ್ ಈ ಐವರೇ ನನ್ನ ಬಳಿ ದುಡ್ಡು ತೆಗೆದುಕೊಂಡಿದ್ದಾರೆ ಅಂತ ಸ್ವಾಮೀಜಿ ಹೇಳಿದ್ದ.

    https://www.youtube.com/watch?v=jzvC69jzdBg

    https://www.youtube.com/watch?v=s_FMyEPUKf4

    https://www.youtube.com/watch?v=9JvRzC7ZT_g

    https://www.youtube.com/watch?v=4hUdbxqu6qw

    https://www.youtube.com/watch?v=Ro8s_y6UJHE

    https://www.youtube.com/watch?v=Wju-SCH4x1s

     

  • ರಾಸಲೀಲೆ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಸಂಕಷ್ಟ

    ರಾಸಲೀಲೆ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಸಂಕಷ್ಟ

    ಬೆಂಗಳೂರು: ಬಿಡದಿ ಧ್ಯಾನಪೀಠ ಮಠದ ನಿತ್ಯಾನಂದ ಸ್ವಾಮಿಗೆ 7 ವರ್ಷ ಹಿಂದಿನ ರಾಸಲೀಲೆ ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ.

    2010ರಲ್ಲಿ ತಮಿಳು ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವುದು ನಿತ್ಯಾನಂದ ಸ್ವಾಮಿಯೇ ಎಂಬುದು ಇದೀಗ ಖಚಿತವಾಗಿದೆ. ಸ್ವಾಮಿ ನಿತ್ಯಾನಂದ ಅವರೇ ರಾಸಲೀಲೆ ಸಿಡಿಯಲ್ಲಿರೋದು ಅನ್ನೋ ವಿಚಾರವನ್ನು ದೆಹಲಿಯ ವಿಧಿವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್) ವರದಿ ದೃಢಪಡಿಸಿದೆ. ಈಗ ಇದೇ ಎಫ್‍ಎಸ್‍ಎಲ್ ವರದಿ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷಿಯಾಗಲಿದೆ.

    2010ರಲ್ಲಿ ಅಂದಿನ ಸಿಐಡಿ ಡಿವೈಎಸ್‍ಪಿ ಚರಣ್ ರೆಡ್ಡಿ ಈ ವರದಿ ಸಲ್ಲಿಕೆ ಮಾಡಿದ್ದರು. ಸಿಐಡಿ ಸಿಡಿಯಲ್ಲಿರುವುದು ನಿತ್ಯಾನಂದ ಎಂದು ಖಚಿತ ಪಡಿಸಿಕೊಳ್ಳಲು ಸಿಡಿಯನ್ನ ದೆಹಲಿಯ ಎಫ್‍ಎಸ್‍ಎಲ್‍ಗೆ ಕಳುಹಿಸಲಾಗಿತ್ತು. ಆ ಸಂದರ್ಭದಲ್ಲಿ ಸಿಡಿಯಲ್ಲಿರುವುದು ನಾನಲ್ಲ ಅಂತ ನಿತ್ಯಾನಂದ ಸ್ವಾಮಿ ವಾದ ಮಂಡಿಸಿದ್ದರು. ಆದರೆ ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿದ್ದು, ಸಿಡಿಯಲ್ಲಿರುವುದು ನಿತ್ಯಾನಂದ ಅವರೇ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಸಿಕ್ಕಿದಂತಾಗಿದೆ.

    ಇದರಿಂದಾಗಿ ಪ್ರಕರಣದಲ್ಲಿ ನಿತ್ಯಾನಂದಗೆ ಶಿಕ್ಷೆಯಾಗುವ ಸಾಧ್ಯತೆ ಹೆಚ್ಚಿದ್ದು, ಇದೀಗ ಸ್ವಾಮೀಜಿ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

    ವಿಶ್ವಾದಾದ್ಯಂತ ಸ್ವಾಮಿ ನಿತ್ಯಾನಂದ ಅವರಿಗೆ ಲಕ್ಷಾಂತರ ಮಂದಿ ಭಕ್ತಾದಿಗಳಿದ್ದು, 2010ರಲ್ಲಿ ಸ್ವಾಮೀಜಿ ತಮಿಳು ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದಾರೆಂಬ ಸುದ್ದಿ ವಿಶ್ವದಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಆ ಬಳಿಕ ಸುಪ್ರೀಂ ಕೋರ್ಟ್ ನಿತ್ಯಾನಂದ ಅವರ ಪುರುಷತ್ವ ಪರೀಕ್ಷೆ ನಡೆಸಲು ಆದೇಶ ನೀಡಿತ್ತು.

  • ಪ್ರತಿಭಟನೆ ಮಾಡಿದವ್ರಿಂದ್ಲೇ ಡೀಲ್- ಸ್ವಾಮೀಜಿ ರಾಸಲೀಲೆ ಪ್ರಕರಣದ ಇನ್‍ಸೈಡ್ ಸ್ಟೋರಿ

    ಪ್ರತಿಭಟನೆ ಮಾಡಿದವ್ರಿಂದ್ಲೇ ಡೀಲ್- ಸ್ವಾಮೀಜಿ ರಾಸಲೀಲೆ ಪ್ರಕರಣದ ಇನ್‍ಸೈಡ್ ಸ್ಟೋರಿ

    ಬೆಂಗಳೂರು: ಇದು ಜಂಗಮ ಮಠ ದಯಾನಂದ ಸ್ವಾಮೀಜಿ ರಾಸಲೀಲೆ ಪ್ರಕರಣದ ಇನ್‍ಸೈಡ್ ಸ್ಟೋರಿ. ಸ್ವಾಮೀಜಿ ಬಳಿ ಡೀಲ್‍ಗೆ ಹೋದವರ ಮಾಹಿತಿ ಬಹಿರಂಗವಾಗಿದೆ. ಖೆಡ್ಡಾಕ್ಕೆ ಬಿದ್ದ ಸ್ವಾಮೀಜಿ ಬಳಿ ಎಷ್ಟು ದುಡ್ಡು ಕಿತ್ತುಕೊಂಡ್ರು ಎಂಬ ಬಗ್ಗೆ ಹಾಗೂ 2014ರಿಂದ ನಡೆಯುತ್ತಿರೋ ಡೀಲ್‍ನ ಮಾಹಿತಿಯನ್ನ ಸ್ವತಃ ದಯಾನಂದ ಸ್ವಾಮೀಜಿ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾನೆ.

    5 ಕೋಟಿಗೆ ಬೇಡಿಕೆ: ದಯಾನಂದ ಸ್ವಾಮೀಜಿಯ ಪ್ರಕಾರ ಪ್ರತಿಭಟನೆಗೆ ಇಳಿದವರಿಂದಲೇ ರಾಸಲೀಲೆಯ ಇಡೀ ಡೀಲ್ ನಡೆದಿದೆ. ರಾಸಲೀಲೆ ರಹಸ್ಯ ವಿಡಿಯೋ ಮಾಡಿದ್ದು 2014 ಜನವರಿ 4 ರಂದು. ಇದಾದ ಬಳಿಕ 2014 ಜನವರಿ 6 ರಂದು ನನ್ನ ಬಳಿ ಡೀಲ್‍ಗೆ ಬಂದ್ರು. ನನ್ನ ಬಳಿ 5 ಕೋಟಿ ಕೊಡುವಂತೆ ಡಿಮ್ಯಾಂಡ್ ಮಾಡಿದ್ರು. ಆ ರೀತಿಯ ವಿಡಿಯೋ ಏನು ಇಲ್ಲ ಅಂದಾಗ ಮೊಬೈಲ್‍ನಲ್ಲಿ ವಿಡಿಯೋ ತೋರಿಸಿದ್ರು. ಬಸವರಾಜ್, ಮಹೇಶ್, ಹಿಮಾಚಲಪತಿ, ಸೂರ್ಯ, ಧರ್ಮೇಂದ್ರ ಅಲಿಯಾಸ್ ಶಂಕರ್ ಈ ಐವರೇ ನನ್ನ ಬಳಿ ದುಡ್ಡು ತೆಗೆದುಕೊಂಡಿದ್ದಾರೆ ಅಂತ ಸ್ವಾಮೀಜಿ ಹೇಳಿದ್ದಾನೆ.

    ಮೊದಲು ನನ್ನ ಬಳಿ ಡೀಲ್‍ಗೆ ಬಂದಿದ್ದು ಧರ್ಮೇಂದ್ರ ಅಲಿಯಾಸ್ ಶಂಕರ್ ಎಂಬ ವ್ಯಕ್ತಿ. ಐದು ಕೋಟಿ ಕೊಡದಿದ್ರೆ ನಾಳೆ ಟಿವಿಯಲ್ಲಿ ನಿಮ್ಮ ಮಾನ ಮರ್ಯಾದೆ ಹರಾಜಾಗುತ್ತೆ ಎಂದು ಹೆದರಿಸಿದ. ಕೊನೆಗೆ 2 ಕೋಟಿ ಎಂದು ಹೇಳಿದ ಶಂಕರ್ ನಂತರ 50 ಲಕ್ಷಕ್ಕೆ ಫೈನಲ್ ಮಾಡಿದ. ಒಂದು ವರ್ಷದ ತನಕ ಆಗಾಗ ಬಂದು 45 ಲಕ್ಷ ಹಣ ತೆಗೆದುಕೊಂಡ್ರು.

    ನಂಗೂ ಹಣ ಕೊಡಿ ಎಂದ ಸೂರ್ಯ: ಮೊದಲ ಡೀಲ್ ಬಳಿಕ ಮತ್ತೆ ಡೀಲ್‍ಗೆ ಬಂದ ವ್ಯಕ್ತಿ ಸೂರ್ಯ ಅಂತ. ಈ ವಿಡಿಯೋ ಮಾಡಿಸಿದ್ದು ನಿಮ್ಮ ಊರಿನವರೇ. ನೀವು ಕೊಟ್ಟಿರೋ ದುಡ್ಡಿನಲ್ಲಿ ನಂಗೆ ನಯಾಪೈಸೆ ಕೊಟ್ಟಿಲ್ಲ. ನನಗೆ 20 ಲಕ್ಷ ಕೊಡಿ ಅಂತ ಡಿಮ್ಯಾಂಡ್ ಮಾಡಿದ್ರು. ಎರಡು ತಿಂಗಳು ಟೈಮ್ ತಗೊಂಡು ನಾನು 10 ಲಕ್ಷ ಸಾಲ ಮಾಡಿ ದುಡ್ಡು ಕೊಟ್ಟೆ ಎಂದು ಹೇಳಿದ್ದಾನೆ.

     

    ಒಟ್ಟು 80 ಲಕ್ಷ ನೀಡಿದ್ದ ಸ್ವಾಮೀಜಿ: ಎರಡು ಡೀಲ್ ಮುಗಿದ ಬಳಿಕವೂ ಮೂರನೇ ಡೀಲ್‍ಗೆ ಮತ್ತೆ ಮಹೇಶ್ ಎಂಬ ವ್ಯಕ್ತಿ ಬಂದ. ಇದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿ ವಿಷ ಸೇವಿಸಿದ್ದೆ. ಪೊಲೀಸರ ಬಳಿ ಏನೂ ಹೇಳ್ಬೇಡಿ ಎಂದು ಹಿಮಾಚಲಪತಿ ಹೇಳಿದ್ದ. ಸಿಡಿ ಮಾಡಿರುವವರ ಜೊತೆ ಮಾತಾಡಿ ಸೆಟ್ಲ್‍ಮೆಂಟ್ ಮಾಡ್ತೀನಿ ಎಂದಿದ್ದ. ಒಬ್ಬೊಬ್ಬರೇ ಬಂದು ಡೀಲ್ ಮಾಡಿಕೊಂಡು ಒಟ್ಟು 80 ಲಕ್ಷ ದುಡ್ಡು ತಗೊಂಡು ಹೋದ್ರು ಅಂತ ಸ್ವಾಮೀಜಿ ವಿವರಿಸಿದ್ದಾನೆ.

    ಹಣ ಪಡೆದ ಮೇಲೂ ಸಿಡಿ ಬಿಡುಗಡೆಗೊಳಿಸಿದ್ದು ಯಾಕೆ?: 184ನೇ ಸರ್ವೇ ನಂಬರ್‍ನಲ್ಲಿ ನಮ್ಮ ಮಠಕ್ಕೆ ಸೇರಿದ 9 ಎಕರೆ ಜಮೀನಿದೆ. ನಾಲ್ಕು ಎಕರೆ ಜಾಗಕ್ಕೆ ಡಿಮ್ಯಾಂಡ್ ಮಾಡಿದ್ರು. ಮಠದ ಆಸ್ತಿಯ ಮೇಲೆ ಕಣ್ಣು ಹಾಕಿದಾಗ ನಾನು ಆಗಲ್ಲ ಎಂದೆ. ಇದೇ ಕಾರಣಕ್ಕೆ ಗ್ಯಾಂಗ್ ಕಟ್ಟಿಕೊಂಡು ಮಾಧ್ಯಮಗಳಿಗೆ ಸಿಡಿ ರಿಲೀಸ್ ಮಾಡಿದ್ರು. ಮೂರ್ನಾಲ್ಕು ದಿನದಲ್ಲಿ ಬಂದು ಪೊಲೀಸ್ ಸ್ಟೇಷನ್‍ಗೆ ದೂರು ಕೊಡುತ್ತೇನೆ ಅಂತ ಪಬ್ಲಿಕ್ ಟಿವಿಗೆ ದಯಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾನೆ.

    https://www.youtube.com/watch?v=s_FMyEPUKf4

    https://www.youtube.com/watch?v=9JvRzC7ZT_g

  • ರಾಸಲೀಲೆ ವೀಡಿಯೋದಲ್ಲಿರೋದು ‘ನಾನವಳಲ್ಲ, ನಾನವಳಲ್ಲ, ನಾನವಳಲ್ಲ’ ಅಂದ್ರು ಕಾವ್ಯಾ ಆಚಾರ್ಯ!

    ರಾಸಲೀಲೆ ವೀಡಿಯೋದಲ್ಲಿರೋದು ‘ನಾನವಳಲ್ಲ, ನಾನವಳಲ್ಲ, ನಾನವಳಲ್ಲ’ ಅಂದ್ರು ಕಾವ್ಯಾ ಆಚಾರ್ಯ!

    ಬೆಂಗಳೂರು: ದಯಾಯನಂದ ಸ್ವಾಮೀಜಿಯ ಜೊತೆ ರಾಸಲೀಲೆಯಲ್ಲಿ ತೊಡಗಿರೋದು ಸ್ಯಾಂಡಲ್ ವುಡ್ ನಟಿ ಕಾವ್ಯ ಆಚಾರ್ಯ ಎಂಬ ವದಂತಿ ವೀಡಿಯೋ ರಿಲೀಸ್ ಆದ ಹೊತ್ತಿನಿಂದಲೂ ಹರಿದಾಡ್ತಿತ್ತು.

    ಆದರೆ ಈ ಬಗ್ಗೆ ನಟಿ ಕಾವ್ಯಾ ಆಚಾರ್ಯ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ನಾನು ಈಗ ತಾನೇ ಈ ಸುದ್ದಿ ಕೇಳಿದೆ. ಆದರೆ ಅದು ನಾನಲ್ಲ. ನಿಮಗೆ ಗೊತ್ತಿದೆ ಯಾರು ಬೇಕಾದರೂ ಹೀಗೆ ಮಾಡ್ತಾರೆ. ಯಾರೋ ಬೇಕಂತಾನೇ ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ಈ ರೀತಿ ಮಾಡುವವರು ಇರುತ್ತಾರೆ. ನನಗೆ ಯಾವ ಸ್ವಾಮೀಜಿಯೂ ಗೊತ್ತಿಲ್ಲ. ನನಗೂ ಇದಕ್ಕೂ ಏನು ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಹುಣಸಮಾರನಹಳ್ಳಿಯ ಜಂಗಮ ಮಠದ ಪೀಠಾಧ್ಯಕ್ಷನಾಗಲು ಮುಂದಾಗಿದ್ದ ದಯಾನಂದ್ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೊಡಗಿರೋ ದೃಶ್ಯ ಇಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಸ್ವಾಮೀಜಿಯ ಜೊತೆ ರಾಸಲೀಲೆಯಲ್ಲಿ ತೊಡಗಿರುವುದು ನಟಿ ಕಾವ್ಯಾ ಆಚಾರ್ಯ ಎಂಬ ವದಂತಿ ಹರಡಿತ್ತು.

     

     

     

  • ರಾಜ್ಯದ ಪ್ರತಿಷ್ಠಿತ ಮಠದಲ್ಲಿ ಸ್ವಾಮೀಜಿಯ ರಾಸಲೀಲೆ -ಪೀಠಾಧಿಪತಿ ಪುತ್ರನ ಕಾಮಕಾಂಡ ಬಯಲು

    ರಾಜ್ಯದ ಪ್ರತಿಷ್ಠಿತ ಮಠದಲ್ಲಿ ಸ್ವಾಮೀಜಿಯ ರಾಸಲೀಲೆ -ಪೀಠಾಧಿಪತಿ ಪುತ್ರನ ಕಾಮಕಾಂಡ ಬಯಲು

    ಬೆಂಗಳೂರು: ಮೇಲ್ನೋಟಕ್ಕೆ ಖಾವಿ ತೊಟ್ಟು ಸಮಾಜವನ್ನ ಉದ್ಧಾರ ಮಾಡೋದಾಗಿ ಪೋಸ್ ಕೊಡುತ್ತಿದ್ದ ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಹುಣಸಮಾರನಹಳ್ಳಿಯ ಜಂಗಮ ಮಠದ ಪೀಠಾಧ್ಯಕ್ಷನಾಗಲು ಮುಂದಾಗಿದ್ದ ಸ್ವಾಮಿಜಿಯೊಬ್ಬ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೋಡಗಿರೋ ದೃಶ್ಯವಿಂದು ಜಗತ್ ಜಾಹಿರಾಗಿದೆ.

    ಬೆಂಗಳೂರು ಉತ್ತರ ತಾಲೂಕು ಯಲಹಂಕ ಬಳಿಯ ಪುರಾತನ ಕಾಲದ ಮದ್ದೇವಣಾಪುರ ದೇವ ಸಿಂಹಾಸನ ಮಹಾ ಸಂಸ್ಥಾನ ಮಠದ 13ನೇ ಪೀಠಾಧ್ಯಕ್ಷರಾದ ಶ್ರೀ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿಯ ಪುತ್ರ ದಯಾನಂದ್ ರಾಸಲೀಲೆಯಲ್ಲಿ ಸಿಕ್ಕಿಬಿದ್ದಿರೋ ಸ್ವಾಮೀಜಿ.

    ಖಾವಿ ತೊಟ್ಟು ಜನ ಸಾಮಾನ್ಯರನ್ನ ಉದ್ಧಾರ ಮಾಡಿ ಸಮಾಜಸೇವೆಗೆ ದುಡಿಯೋದಾಗಿ ರಂಭಾಪುರ ಸ್ವಾಮಿಜಿಗಳ ಜೊತೆಯಲ್ಲಿ ಓಡಾಡುತ್ತಿದ್ದ ಕಳ್ಳ ಸ್ವಾಮೀಜಿ ಬೆಡ್ ರೂಮ್ ಒಳಗೆ ಮಹಿಳೆಯ ಜೊತೆ ಕಾಮದಾಟವಾಡುತ್ತಿರೋ ಹಸಿಬಿಸಿ ದೃಶ್ಯ ಲಭ್ಯವಾಗಿದೆ.

    ಪರ್ವತರಾಜ ಶಿವಾಚಾರ್ಯ ಸ್ವಾಮೀಜಿ ತನ್ನ ಮಗನಾದ ದಯಾನಂದ್ ಗೆ 2011 ರಲ್ಲಿ ಮಠಕ್ಕೆ ನೂತನ ಪೀಠಾಧ್ಯಕ್ಷರಾಗಿ ಮಾಡಲು ಮುಂದಾಗಿದ್ದರು. ಈ ವೇಳೆ ದಯಾನಂದ್‍ಗೆ ಸ್ವಾಮಿಜಿಯಾಗಲು ಅರ್ಹತೆಯಿಲ್ಲ ಅಂತ ಜನ ಸತತ ಹೋರಾಟದ ಮುಖಾಂತರ ದಯಾನಂದ್ ಪೀಠಾಧ್ಯಕ್ಷನಾಗಲು ಅಡ್ಡಿಪಡಿಸಿದ್ರು.

    ಆದ್ರೂ ಸುಮ್ಮನಿರದ ದಯಾನಂದ್ ಹೇಗಾದ್ರು ಪೀಠಾಧ್ಯಕ್ಷನಾಗಿ ಅಂದು ಮೈಸೂರು ಮಹಾರಾಜರು ಮಠಕ್ಕೆ ನೀಡಿದ್ದ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನ ಕಬಳಿಸೂ ಹುನ್ನಾರ ನಡೆಸುತ್ತಿದ್ದ ಎನ್ನಲಾಗಿದೆ. ಇದೀಗ ಈ ಕಳ್ಳ ಸ್ವಾಮಿಯ ರಾಸಲೀಲೆ ಬಹಿರಂಗವಾಗಿದೆ.

    ಯಾವುದೇ ಕಾರಣಕ್ಕೂ ಇಂತಹ ಕಳ್ಳ ಸ್ವಾಮಿಗಳಿಗೆ ಪೀಠಾಧ್ಯಕ್ಷರ ಸ್ಥಾನ ನೀಡಬಾರದು ಅಂತ ಟ್ರಸ್ಟ್ ನ ಸದಸ್ಯರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  • ರಾಸಲೀಲೆ ಕೇಸ್ ನಲ್ಲಿ ಮೇಟಿಗೆ ಕ್ಲೀನ್ ಚಿಟ್: 8 ತಿಂಗಳಿನಿಂದ ಗೈರಾಗಿದ್ದ ಸಂತ್ರಸ್ತೆ ಕೆಲಸಕ್ಕೆ ಹಾಜರ್

    ರಾಸಲೀಲೆ ಕೇಸ್ ನಲ್ಲಿ ಮೇಟಿಗೆ ಕ್ಲೀನ್ ಚಿಟ್: 8 ತಿಂಗಳಿನಿಂದ ಗೈರಾಗಿದ್ದ ಸಂತ್ರಸ್ತೆ ಕೆಲಸಕ್ಕೆ ಹಾಜರ್

    ಬಾಗಲಕೋಟೆ: ಹೆಚ್ ವೈ ಮೇಟಿ ರಾಸಲೀಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಹೊತ್ತು ನಾಪತ್ತೆಯಾಗಿದ್ದ ಸಂತ್ರಸ್ತೆ ದಿಢೀರ್ ಪ್ರತ್ಯಕ್ಷ ವಾಗಿದ್ದಾರೆ.

    26 ನವೆಂಬರ್ 2016 ರಿಂದ ಇಂದಿನ ವರೆಗೆ ಕೆಲಸಕ್ಕೆ ಅನಧಿಕೃತ ಗೈರಾಗಿದ್ದ ಸಂತ್ರಸ್ತೆ, ಇಂದು ದಿಢೀರ್ ಆಗಮಿಸಿ, ಕೆಲಸಕ್ಕೆ ಹಾಜರಾಗಲು ಅನುಮತಿ ನೀಡುವಂತೆ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಮಹೇಶ್ ಗುಗ್ಗರಿಗೆ ಅರ್ಜಿ ಸಲ್ಲಿಸಿದ್ದಾರೆ.

    ಇತ್ತ ಸಂತ್ರಸ್ಥೆ ಎಂಟು ತಿಂಗಳು ಅನಧಿಕೃತ ಗೈರಾದರೂ ಕ್ರಮ ಕೈಗೊಳ್ಳದ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಅವರು ಜಿಲ್ಲಾಧಿಕಾರಿಯವರಿಂದ ಅನುಮತಿ ಪಡೆದು ಬಂದರೆ ಕೆಲಸಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

    ಅನಾರೋಗ್ಯ ಮತ್ತು ಕೌಟುಂಬಿಕ ಕಾರಣಗಳಿಂದಾಗಿ ಕೆಲಸಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಸಂತ್ರಸ್ತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

    ನಡೆದ ಘಟನೆ ಎಲ್ಲ ಮುಗಿದು ಹೋದ ಕಥೆ, ಈಗಾಗಲೇ ನಾನು ಮಾನಸಿಕವಾಗಿ ಸಾಕಷ್ಟು ನೊಂದಿದ್ದೇನೆ. ಅದನ್ನು ಪುನಃ ನೆನಪಿಸೋದು ಬೇಡ. ಸದ್ಯ ಪುನಃ ಕೆಲಸಕ್ಕೆ ಹಾಜರಾಗಲು ಬಂದಿದ್ದೇನೆ. ಮುಂದೆ ಏನಾದರೂ ತೊಂದರೆಯಾದರೆ ನನ್ನ ಸಹಾಯಕ್ಕೆ ಬನ್ನಿ ಎಂದು ಮಾಧ್ಯಮಗಳಲ್ಲಿ ಸಂತ್ರಸ್ತೆ ಮನವಿ ಮಾಡಿದ್ದಾರೆ.

    ಏನಿದು ಪ್ರಕರಣ?
    ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ವೈ. ಮೇಟಿಗೆ ಸಿಐಡಿ ಅಧಿಕಾರಿಗಳು ಕ್ಲೀನ್ ಚಿಟ್ ನೀಡಿದ್ದರು. ಪ್ರಕರಣದ ಸಂತ್ರಸ್ತೆ ದೂರು ನೀಡರಲಿಲ್ಲ. ತನಿಖೆಯ ವೇಳೆ ನನ್ನ ಮತ್ತು ಮೇಟಿ ಅವರದ್ದು ತಂದೆ-ಮಗಳ ಸಂಬಂಧ, ನನ್ನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಸಂತ್ರಸ್ತೆ ತಿಳಿಸಿದ್ದಾರೆ ಎನ್ನುವ ಅಂಶ ವರದಿಯಲ್ಲಿದೆ.