Tag: ರಾಷ್ಟ್ರಿಯ ಹೆದ್ದಾರಿ

  • ನವಿಲು ಡಿಕ್ಕಿ – ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು

    ನವಿಲು ಡಿಕ್ಕಿ – ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು

    ಉಡುಪಿ: ನವಿಲು ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಎರ್ಮಾಳದಲ್ಲಿ ನಡೆದಿದೆ.

    ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬೆಳಪು ಗ್ರಾಮದ ಅಬ್ದುಲ್ಲಾ ಮೃತ ಯುವಕ. ಕಾಪು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದ್ವಿಚಕ್ರ ವಾಹನ ಸವಾರ ಅಬ್ದುಲ್ಲಾ (24) ಬೆಳಕು ಗ್ರಾಮದಿಂದ ಪಡುಬಿದ್ರೆಯ ಕಡೆಗೆ ಹೋಗುತ್ತಿದ್ದರು. ಈ ಸಂದರ್ಭ ಹೆದ್ದಾರಿಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ನವಿಲೊಂದು ಹಾರಿ ದಾಟಲು ಪ್ರಯತ್ನಿಸಿದೆ. ಈ ಸಂದರ್ಭದಲ್ಲಿ ದ್ವಿಚಕ್ರವಾಹನದಲ್ಲಿ ಸಂಚರಿಸುತ್ತಿದ್ದ ಅಬ್ದುಲ್ಲಾ ತಲೆಗೆ ಬಡಿದಿದೆ.

    ದ್ವಿಚಕ್ರವಾಹನ ಕಂಟ್ರೋಲ್ ತಪ್ಪಿ ಡಿವೈಡರ್ ಮೇಲೆ ಬಡಿದಿದೆ. ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಾಹನದ ರಭಸಕ್ಕೆ ನವಿಲು ಕೂಡ ಸಾವಿಗೀಡಾಗಿದೆ. ಪಡುಬಿದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ಅಬ್ದುಲ್ಲಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಾಪು ತಾಲೂಕಿನಲ್ಲಿ ನವಿಲುಗಳ ಹಾವಳಿ ವಿಪರೀತವಾಗಿದೆ. ಗದ್ದೆಗಳಿಗೆ ನವಿಲುಗಳು ಬಂದು ಎಲ್ಲ ಬೆಳೆಗಳನ್ನು ಹಾಳು ಮಾಡುತ್ತಿದೆ. ರಸ್ತೆಗಳಲ್ಲೂ ನವಿಲಿನ ಸಂಚಾರ ಹೆಚ್ಚಾಗಿದೆ. ರಾಷ್ಟ್ರಪ್ರಾಣಿ ನವಿಲುಗಳ ಹಾವಳಿಯನ್ನು ತಪ್ಪಿಸಲು ಅರಣ್ಯ ಇಲಾಖೆ ಸರಕಾರ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಜನಪ್ರತಿನಿಧಿ ಜಹೀರ್ ಬೆಳಪು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪಡಿತರ ಅಕ್ಕಿ ಕಳ್ಳ ಸಾಗಾಣಿಕೆ – ವಾಹನ ಸಮೇತ ಓರ್ವನ ಬಂಧನ

  • ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಷ್ಟು ಕಿ.ಮೀ ಹೋಗ್ತಿರೋ ಅಷ್ಟೇ ದೂರಕ್ಕೆ ಮಾತ್ರ ಟೋಲ್!

    ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಷ್ಟು ಕಿ.ಮೀ ಹೋಗ್ತಿರೋ ಅಷ್ಟೇ ದೂರಕ್ಕೆ ಮಾತ್ರ ಟೋಲ್!

    ನವದೆಹಲಿ: ಇನ್ನು ಮುಂದೆ ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಷ್ಟು ಕಿ.ಮೀ ಪ್ರಯಾಣ ಮಾಡುತ್ತಿರೋ ಅಷ್ಟು ದೂರಕ್ಕೆ ಮಾತ್ರ ಟೋಲ್ ಪಾವತಿಸುವ ನೀತಿ ಜಾರಿಗೆಯಾಗುವ ಸಾಧ್ಯತೆ ಇದೆ.

    ಹೌದು. ಪ್ರಸ್ತುತ ಈಗ ವಾಹನವೊಂದು ಟೋಲ್ ರಸ್ತೆಯನ್ನು ಪ್ರವೇಶಿಸಿದರೆ ಆ ಟೋಲ್ ರಸ್ತೆಗೆ ನಿಗದಿಯಾಗಿರುವ ಸಂಪೂರ್ಣ ಶುಲ್ಕವನ್ನು ಪಾವತಿಸಬೇಕು. ಆದರೆ ಎನ್‍ಡಿಎ ಸರ್ಕಾರ ಈಗ ಸಂಪೂರ್ಣ ಶುಲ್ಕವನ್ನು ಪಾವತಿ ಮಾಡುವ ಬದಲಾಗಿ ಎಷ್ಟು ಕಿ.ಮೀ.ವಾಹನ ಸಂಚರಿಸುತ್ತದೋ ಅಷ್ಟೇ ದೂರಕ್ಕೆ ಟೋಲ್ ಕಟ್ಟುವ ನೀತಿಯನ್ನು ಅನುಷ್ಠಾನಗೊಳಿಸಲು ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ವಾಹನವೊಂದು 60 ಕಿ.ಮೀ ಉದ್ದದ ಟೋಲ್ ರಸ್ತೆಯನ್ನು ಸಂಪೂರ್ಣವಾಗಿ ಬಳಸದೇ ಇದ್ದರೂ ಈಗ ಸಂಪೂರ್ಣವಾಗಿ ಟೋಲ್ ಕಟ್ಟಬೇಕು. ಅಷ್ಟೇ ಅಲ್ಲದೇ ಪ್ರತಿವರ್ಷ ಟೋಲ್ ದರ ಪರಿಷ್ಕರಣೆಯಾಗುತ್ತಿರುವುದರಿಂದ ರಸ್ತೆ ಪ್ರಯಾಣ ಈಗ ದುಬಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನಸ್ನೇಹಿಯಾಗಲು ಸರ್ಕಾರ ಈ ಕ್ರಮವನ್ನು ಕೈಗೊಳ್ಳಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

    ದೆಹಲಿ ಮೂಲಕ ಹಾದು ಹೋಗುವ ಹರ್ಯಾಣ ಮತ್ತು ಉತರ ಪ್ರದೇಶ ಸಂಪರ್ಕ ಕಲ್ಪಿಸುವ 135 ಕಿ.ಮೀ ಉದ್ದದ ಈಸ್ಟರ್ನ್ ಫೆರಿಫೆರಲ್ ರಸ್ತೆಯಲ್ಲಿ ಆರಭಿಕ ಹಂತವಾಗಿ ಪ್ರತಿ ಕಿ.ಮೀ. ಟೋಲ್ ಶುಲ್ಕ ಜಾರಿಗೆ ಬರಲು ಕೇಂದ್ರ ಸಾರಿಗೆ ಸಚಿವಾಲಯ ಮುಂದಾಗಿದೆ ಎನ್ನಲಾಗಿದೆ.

    ಕಳೆದ ವಾರ ನಡೆದ ಇಂಡಿಯಾ ಇಂಟಿಗ್ರೇಟೆಡ್ ಟ್ರಾನ್ಸ್ ಪೋರ್ಟ್ ಆಂಡ್ ಲಾಜಿಸ್ಟಿಕ್ ಸಮ್ಮೇಳನದಲ್ಲಿ ಪ್ರತಿ ಕಿ.ಮೀಗೆ ಟೋಲ್ ಶುಲ್ಕ ವಿಧಿಸುವ ಬಗ್ಗೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸುಳಿವು ನೀಡಿದ್ದರು.

    2015-16ರ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು 362 ಟೋಲ್ ಕೇಂದ್ರಗಳು ಸ್ಥಾಪನೆಯಾಗಿತ್ತು. ಈ ಎಲ್ಲ ಟೋಲ್‍ಗಳಿಂದ ವಾರ್ಷಿಕ ಒಟ್ಟು 17,250 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಕೇಂದ್ರ ಸರ್ಕಾರ ಪ್ರಸ್ತುತ 96 ಸಾವಿರ ಕಿ.ಮೀ ಉದ್ದವಿರುವ ರಾಷ್ಟ್ರೀಯ ಹೆದ್ದಾರಿಯನ್ನು 2019ರ ವೇಳೆ 2 ಲಕ್ಷ ಕಿ.ಮೀಗೆ ಏರಿಸುವ ಗುರಿಯನ್ನು ಹಾಕಿಕೊಂಡಿದೆ.

    ಕಿ.ಮೀಗೆ ಟೋಲ್ ಸಂಗ್ರಹಿಸುವುದು ಕಷ್ಟದ ಕೆಲಸವಾಗಿದ್ದು, ಸರ್ಕಾರದ ಈ ನೀತಿಯನ್ನು ಕಂಪೆನಿಗಳು ಹೇಗೆ ಸ್ವೀಕರಿಸುತ್ತದೆ ಎನ್ನುವುದು ಗೊತ್ತಿಲ್ಲ. ಒಂದೊಂದು ಟೋಲ್‍ನಿಂದ ಪ್ರವೇಶಿಸಿದ ವಾಹನ ರಸ್ತೆಯಲ್ಲಿ ಇಷ್ಟೇ ದೂರವನ್ನು ಕ್ರಮಿಸಿದೆ ಎಂದು ಪತ್ತೆ ಹಚ್ಚುವುದು ಕಷ್ಟದ ಕೆಲಸ. ಆದರೆ ಸ್ಮಾರ್ಟ್ ಐಟಿ, ಡಿಜಿಟಲ್ ಪಾವತಿ ವ್ಯವಸ್ಥೆ ತಂದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.