Tag: ರಾಮೇಶ್ವರಂ

  • ದೇಶದ ಮೊದಲ ವರ್ಟಿಕಲ್ ಪಂಬನ್ ರೈಲ್ವೆ ಬ್ರಿಡ್ಜ್ – ಇದರ ವಿಶೇಷತೆಯೇನು?

    ದೇಶದ ಮೊದಲ ವರ್ಟಿಕಲ್ ಪಂಬನ್ ರೈಲ್ವೆ ಬ್ರಿಡ್ಜ್ – ಇದರ ವಿಶೇಷತೆಯೇನು?

    ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆಗೆ ಸಜ್ಜಾಗಿದೆ. ರಾಮೇಶ್ವರಂಗೆ ತೆರಳುವ ಭಕ್ತರಿಗೆ, ಧನುಷ್ಕೋಡಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಪಂಬನ್ ಬ್ರಿಡ್ಜ್‌(Pamban Bridge) ಅನ್ನು ನಿರ್ಮಿಸಲಾಗಿದೆ. ಸಮುದ್ರದಲ್ಲಿ ನಿರ್ಮಿಸಲಾದ ಮೊದಲ ವರ್ಟಿಕಲ್ ಲಿಫ್ಟ್ ಸೇತುವೆ ಇದಾಗಿದ್ದು, ಈ ಸೇತುವೆಯನ್ನು ರಾಮನವಮಿಯಂದು ಪ್ರಧಾನಿ ಮೋದಿಯವರು(Narendra Modi) ಲೋಕಾರ್ಪಣೆ ಮಾಡಲಿದ್ದಾರೆ.

    ಪಂಬನ್ ರೈಲು ಸೇತುವೆಯ ನಿರ್ಮಾಣದ ಕಾರ್ಯವನ್ನು 1870ರಲ್ಲಿ ಬ್ರಿಟಿಷ್ ಸರ್ಕಾರವು ಶ್ರೀಲಂಕಾಕ್ಕೆ ವ್ಯಾಪಾರ ಸಂಪರ್ಕವನ್ನು ವಿಸ್ತರಿಸಲು ನಿರ್ಧರಿಸಿದಾಗ ಪ್ರಾರಂಭಿಸಲಾಯಿತು. ಸುಮಾರು 2.2 ಕಿ.ಮೀ.ಗಳಷ್ಟು ವಿಸ್ತಾರವಿದ್ದ, 143 ಪಿಯರ್‌ಗಳನ್ನು ಹೊಂದಿರುವ ಇದನ್ನು 1914ರಲ್ಲಿ ಅಧಿಕೃತವಾಗಿ ಕಾರ್ಯರೂಪಕ್ಕೆ ತರಲಾಯಿತು.

    ಪಂಬನ್ ರೈಲು ಸೇತುವೆಯು ಶೆರ್ಜರ್ ರೋಲಿಂಗ್ ಲಿಫ್ಟ್ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ದೋಣಿ ಅಥವಾ ಹಡಗು ಚಲಿಸುವಾಗ 90 ಡಿಗ್ರಿ ಕೋನದಲ್ಲಿ ಮೇಲಕ್ಕೆ ತೆರೆಯುತ್ತದೆ. ಸಮುದ್ರದ ಮೇಲೆ ನಿರ್ಮಿಸಲಾದ ಭಾರತದ ಅತಿ ಉದ್ದದ ಸೇತುವೆಯಾಗಿದೆ. ಪಂಬನ್ ರೈಲ್ವೆ ಸೇತುವೆಯು 1988ರವರೆಗೆ ರಾಮೇಶ್ವರಂ ಮತ್ತು ಮುಖ್ಯ ಭೂಭಾಗದ ನಡುವಿನ ಏಕೈಕ ಸಂಪರ್ಕವಾಗಿತ್ತು. ನಂತರ ಅದಕ್ಕೆ ಸಮಾನಾಂತರವಾಗಿ ರಸ್ತೆ ಸೇತುವೆಯನ್ನು ನಿರ್ಮಿಸಲಾಯಿತು.

    78 ಮೀಟರ್ ಉದ್ದ ಮತ್ತು 380 ಟನ್ ತೂಕದ ಸೇತುವೆಯ ಒಂದು ಭಾಗವು ಹಡಗು ಸಂಚಾರಕ್ಕಾಗಿ 17 ಮೀಟರ್ ಎತ್ತರಕ್ಕೆ ಹೋಗುತ್ತದೆ. ತಮಿಳುನಾಡಿನ ಮಂಟಪಂದಿಂದ ರಾಮೇಶ್ವರಂ ದ್ವೀಪವನ್ನು ಸಂಪರ್ಕಿಸಲು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಈ ಸೇತುವೆಯನ್ನು ನಿರ್ಮಿಸಲಾಗಿದೆ. 111 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ್ದ ಹಳೆಯ ಸೇತುವೆ ಶಿಥಿಲಗೊಂಡಿದ್ದರಿಂದ ಅದರ ಪಕ್ಕದಲ್ಲಿಯೇ ಈ ಹೊಸ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆಯಲ್ಲಿ ಟ್ರ್ಯಾಕ್ ಡಬ್ಲಿಂಗ್ ಹಾಗೂ ವಿದ್ಯುತ್ ಕಾಮಗಾರಿ ಕೂಡ ಮಾಡಲಾಗಿದೆ. ರೈಲ್ವೆ ಟ್ರ್ಯಾಕ್ ಸೇರಿದಂತೆ ಈ ಸೇತುವೆಯ ತೂಕ 660 ಮೆಟ್ರಿಕ್ ಟನ್ ಇದೆ.

    ಸಮುದ್ರದಲ್ಲಿ ಸೇತುವೆ ನಿರ್ಮಾಣಕ್ಕೆ ಮರಳು ಹಾಗೂ ಉಪ್ಪು‌ನೀರು ಸವಾಲಾಗಿರುತ್ತದೆ. ಇದರಿಂದ ಬೇಗ ತುಕ್ಕು ಸಹ ಹಿಡಿಯುತ್ತದೆ. ಇದನ್ನು ತಡೆಗಟ್ಟಲು ಸಾಕಷ್ಟು ತಾಂತ್ರಿಕತೆ ಬಳಸಿಕೊಳ್ಳಲಾಗಿದೆ. ಹಳೇ ಬ್ರಿಡ್ಜ್ 1914ರಿಂದ 2021ರವರೆಗೆ ಕಾರ್ಯನಿರ್ವಹಿಸಿದೆ. ಈ ಬಾರಿಯ ನೂತನ ಪಂಬನ್ ಬ್ರಿಡ್ಜ್ ತುಕ್ಕು ಹಿಡಿಯಬಾರದು ಎಂಬ ಕಾರಣಕ್ಕೆ ನಿರಂತರವಾಗಿ ಡಬಲ್ ಕೋಟ್ ಪೇಯಿಂಟ್ ಹಾಕಲಾಗಿದೆ. ಇದು ತುಕ್ಕು ರಹಿತ ಪೇಯಿಂಟ್ ಆಗಿದೆ.

    ಹಳೇ ಬ್ರಿಡ್ಜ್‌ ಮಾನವ ಸಹಿತವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಈ ನೂತನ ಬ್ರಿಡ್ಜ್‌ ಮಾನವ ರಹಿತವಾಗಿ ಕಾರ್ಯನಿರ್ವಹಿಸುತ್ತದೆ. ಇದು ಎಲೆಕ್ಟ್ರಿಕಲ್ ಆಟೋ‌ಮೆಕ್ಯಾನಿಕಲ್ ತಂತ್ರಜ್ಞಾನ ಒಳಗೊಂಡಿದೆ. ಹಳೇ ಬ್ರಿಡ್ಜ್ ತೆರೆದುಕೊಳ್ಳಲು 45 ನಿಮಿಷ ಕಾಲಾವಕಾಶ ತೆಗೆದುಕೊಳ್ಳುತ್ತಿತ್ತು. ಆದರೆ ಹೊಸ ಬ್ರಿಡ್ಜ್ 5.3 ನಿಮಿಷದಲ್ಲಿ ತೆರೆದುಕೊಳ್ಳಲಿದೆ. ಒಂದು ಬಾರಿ ಈ ಸೇತುವೆಯನ್ನು ಮೇಲೆ ಎತ್ತಲು 120 ಕಿಲೋ ವ್ಯಾಟ್ ವಿದ್ಯುತ್ ಬೇಕಾಗುತ್ತದೆ.

    ಇದರ ವಿಶೇಷತೆಯೇನು?
    – 2.5 ಕಿ.ಮೀ ಉದ್ದದ ದೇಶದ ಮೊದಲ ವರ್ಟಿಕಲ್‌ ಲಿಫ್ಟ್‌ ರೈಲು ಸೇತುವೆ
    – ಇದು ಮಾನವ ರಹಿತವಾಗಿ ಕಾರ್ಯನಿರ್ವಹಿಸುತ್ತದೆ
    – ಹಡಗು ಸಂಚಾರ ವೇಳೆ ಮೇಲಕ್ಕೆತ್ತಲ್ಪಟ್ಟು ಮತ್ತೆ ಅದೇ ಸ್ಥಾನಕ್ಕೆ ಮರಳುತ್ತದೆ
    – ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಯಾತ್ರಾರ್ಥಿಗಳಿಗೆ ಅನುಕೂಲ
    – ಮುಖ್ಯಭೂಮಿಯಿಂದ ರಾಮೇಶ್ವರಂಗೆ 5 ನಿಮಿಷದ ಪ್ರಯಾಣ
    – 535 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸೇತುವೆ
    – ಸೇತುವೆಯಲ್ಲಿ ಚಲಿಸುವ ರೈಲಿನ ವೇಗದ ಮಿತಿ ಗಂಟೆಗೆ 75 ಕಿ.ಮೀ
    – ಶೆರ್ಜರ್ ರೋಲಿಂಗ್ ಲಿಫ್ಟ್ ತಂತ್ರಜ್ಞಾನದ ಬಳಕೆ
    – ತುಕ್ಕು ಹಿಡಿಯದಂತೆ ತುಕ್ಕು ರಹಿತ ಡಬಲ್ ಕೋರ್ಟ್ ಪೇಯಿಂಟ್ ಬಳಕೆ
    – ಸೇತುವೆಯನ್ನು ಮೇಲೆ ಎತ್ತಲು 120 ಕಿಲೋ ವ್ಯಾಟ್ ವಿದ್ಯುತ್

    ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(Ashwini Vaishnaw) ಅವರು ಪಂಬನ್ ರೈಲು ಸೇತುವೆಯ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ವೇಗದ ರೈಲುಗಳು ಮತ್ತು ಹೆಚ್ಚಿದ ಜನದಟ್ಟಣೆಯನ್ನು ನಿರ್ವಹಿಸುವಂತೆ ಈ ಸೇತುವೆಯ ನಿರ್ಮಾಣ ಮಾಡಲಾಗಿದೆ. ಹೊಸ ಪಂಬನ್ ಸೇತುವೆ ಕೇವಲ ಕ್ರಿಯಾತ್ಮಕವಾಗಿಲ್ಲ. ಇದು ಪ್ರಗತಿಯ ಸಂಕೇತವಾಗಿದ್ದು, ಈ ಸೇತುವೆ ನಿರ್ಮಾಣಕ್ಕೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಇಂಜಿನಿಯರ್ ಗಳ ಕೈಚಳಕವು ಇಡೀ ಭಾರತ ಹುಬ್ಬೇರಿಸುವಂತೆ ಮಾಡಿದೆ ಎಂದು ಶ್ಲಾಘಿಸಿದ್ದಾರೆ.

    ಭಾರತದ ಮೊದಲ ಲಂಬ ಲಿಫ್ಟ್ ಪಂಬನ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 6 ರಾಮ ನವಮಿಯಂದು ಉದ್ಘಾಟಿಸಲಿದ್ದಾರೆ.

  • ಅಗ್ನಿ ತೀರ್ಥ ಕಡಲತೀರದಲ್ಲಿ ನರೇಂದ್ರ ಮೋದಿ ಪವಿತ್ರ ಸ್ನಾನ

    ಅಗ್ನಿ ತೀರ್ಥ ಕಡಲತೀರದಲ್ಲಿ ನರೇಂದ್ರ ಮೋದಿ ಪವಿತ್ರ ಸ್ನಾನ

    – ರಾಮೇಶ್ವರಂ ದೇಗುಲದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ

    ಚೆನ್ನೈ: ತಮಿಳುನಾಡಿಗೆ (Tamilnadu) 3 ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ರಾಮೇಶ್ವರಂನಲ್ಲಿರುವ ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನಕ್ಕೆ (Sri Arulmigu Ramanathaswamy Temple) ಭೇಟಿ ನೀಡಿ ಪೂಜೆ ಸಲ್ಲಿಸಿದರು.

    ಮಧ್ಯಾಹ್ನ 2.10ಕ್ಕೆ ಹೆಲಿಕಾಪ್ಟರ್ ಮೂಲಕ ರಾಮೇಶ್ವರಂ (Rameshwaram) ಪಕರುಂಬುವಿನ ಅಮೃತಾನಂದ ಶಾಲಾ ಆವರಣಕ್ಕೆ ಪ್ರಧಾನಿ ಮೋದಿ ಆಗಮಿಸಿದರು. ಅಲ್ಲಿಂದ ಮಧ್ಯಾಹ್ನ 3.10ಕ್ಕೆ ಅಗ್ನಿತೀರ್ಥದಲ್ಲಿ ಪುಣ್ಯಸ್ನಾನ ಮಾಡಿದರು. ನಂತರ ದೇವಸ್ಥಾನದಲ್ಲಿ ನಡೆಯುತ್ತಿದ್ದ ರಾಮಾಯಣ ಪಥ ಮತ್ತು ಭಜನಾ ಸಂಧ್ಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

    ಜನವರಿ 22 ರಂದು ಅಯೋಧ್ಯೆಯಲ್ಲಿ (Ayodhya) ನಡೆಯಲಿರುವ ರಾಮಲಲ್ಲಾ ‘ಪ್ರಾಣ ಪ್ರತಿಷ್ಠಾ’ದವರೆಗೆ 11 ದಿನಗಳ ವ್ರತದಲ್ಲಿರುವ ಪ್ರಧಾನಿ ಮೋದಿ ಶನಿವಾರ ತಿರುಚಿರಾಪಳ್ಳಿಗೆ ಆಗಮಿಸಿದರು. ಇದಕ್ಕೂ ಮುನ್ನ ಪ್ರಧಾನಿಯವರು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ ತಮ್ಮ ಭೇಟಿಯ ವೇಳೆ ಮೋದಿ ಅವರು ದೇವಾಲಯದ ಆವರಣದಲ್ಲಿ ‘ಆಂಡಾಳ್’ ಎಂಬ ಆನೆಯ ಬಳಿಯಿಂದ ಆಶೀರ್ವಾದ ಪಡೆದರು.

    ಪ್ರಧಾನಿ ಮೋದಿ ಅವರು ಭಾನುವಾರದಂದು ಧನುಷ್ಕೋಡಿಯ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ದರ್ಶನಕ್ಕೆ ನಿಗದಿಯಾಗಿದ್ದು, ಪೂಜೆ ಸಲ್ಲಿಸಲಿದ್ದಾರೆ. ರಾಮಸೇತು ನಿರ್ಮಿಸಿದ ಸ್ಥಳ ಎಂದು ಹೇಳಲಾಗುವ ಅರಿಚಲ್ ಮುನೈಗೂ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ

    ಒಟ್ಟಿನಲ್ಲಿ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಮುನ್ನ ಪ್ರಧಾನಿ ಮೋದಿ ಅವರು ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕೇರಳದ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.

  • ಇದು ರಾಕಿಭಾಯ್‌ ಇಲ್ಲದ ರಿಯಲ್‌ KGF – ಸಮುದ್ರದಲ್ಲಿ ಸಿಕ್ತು 20 ಕೋಟಿ ಮೌಲ್ಯದ ಚಿನ್ನ..!

    ಇದು ರಾಕಿಭಾಯ್‌ ಇಲ್ಲದ ರಿಯಲ್‌ KGF – ಸಮುದ್ರದಲ್ಲಿ ಸಿಕ್ತು 20 ಕೋಟಿ ಮೌಲ್ಯದ ಚಿನ್ನ..!

    ಚೆನ್ನೈ: ಯಶ್‌ ನಟನೆಯ KGF-2 ಸಿನಿಮಾ ನೀವೆಲ್ಲರೂ ನೋಡಿಯೇ ಇರುತ್ತೀರಾ. ಕೊನೆಯಲ್ಲಿ ರಾಕಿಭಾಯ್‌ ಯಶ್‌ ಇಡೀ ಹಡಗಿನ ತುಂಬಾ ಚಿನ್ನದೊಂದಿಗೆ ಸಮುದ್ರಕ್ಕೆ ಬೀಳುತ್ತಾನೆ. ಎಷ್ಟೇ ಪ್ರಯತ್ನಿಸಿದರೂ ಅಲ್ಲಿಂದ ಚಿನ್ನ ಹೊರತೆಯಲಾಗುವುದಿಲ್ಲ ಎಂದು ಸುಮ್ಮನಾಗಿಬಿಡುತ್ತಾರೆ. ಅದೇ ರೀತಿಯ ಘಟನೆಯೊಂದು ತಮಿಳುನಾಡಿನ (Tamil Nadu) ರಾಮೇಶ್ವರಂನಲ್ಲಿ ನಡೆದಿದ ಸಮುದ್ರದಕ್ಕೆ ಎಸೆದಿದ್ದ 20 ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನ ಹೊತೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ರಾಮೇಶ್ವರಂ ಮಂಟಪ ಪ್ರದೇಶದಿಂದ ಸಮುದ್ರ ಮಾರ್ಗವಾಗಿ ಭಾರೀ ಮೌಲ್ಯದ ಚಿನ್ನವನ್ನ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಅಧಿಕಾರಿಗಳಿಗೆ ಅಪರಿಚಿತ ದೋಣಿ ಹೋಗುತ್ತಿರೋದು ಗಮನಕ್ಕೆ ಬಂದಿತ್ತು. ಖಚಿತ ಮಾಹಿತಿ ಪಡೆದ ಭಾರತೀಯ ಕೋಸ್ಟ್ ಗಾರ್ಡ್ (India Coast Guard) ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (Revenue Intelligence) ಜಂಟಿಯಾಗಿ ದಾಳಿ ನಡೆಸಿತ್ತು. ಅಧಿಕಾರಿಗಳನ್ನು ನೋಡಿದ ದೋಣಿಯಲ್ಲಿದ್ದವರು ತಮ್ಮಲ್ಲಿದ್ದ ಒಂದು ಬಾಕ್ಸನ್ನು ಸಮುದ್ರಕ್ಕೆ ಎಸೆದಿದ್ದರು. ಅಧಿಕಾರಿಗಳು ದೋಣಿಯಲ್ಲಿದ್ದವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಎಲ್ಲರೂ ಅಸ್ಪಷ್ಟ ಉತ್ತರ ನೀಡುತ್ತಿದ್ದರು. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ಕಾರಣ- ಪ್ರಾಥಮಿಕ ವರದಿ

    ಕೊನೆಗೆ ಸಮುದ್ರಕ್ಕೆ ಎಸೆದ ಬಾಕ್ಸ್ ಪತ್ತೆ ಮಾಡಲು ಸ್ಕೂಬಾ ಡೈವರ್‌ಗಳ ತಂಡ ನಿಯೋಜಿಸಲಾಯಿತು. ಜೊತೆಗೆ ಸ್ಥಳೀಯ ಮೀನುಗಾರರ ಸಹಾಯ ಪಡೆದುಕೊಳ್ಳಲಾಗಿತ್ತು. ಶೋಧ ಕಾರ್ಯ ನಡೆದ 2ನೇ ದಿನ ಸಮುದ್ರದಲ್ಲಿ ಎಸೆಯಲಾಗಿದ್ದ ಬಾಕ್ಸ್​ ಪತ್ತೆಯಾಯಿತು. ಸ್ಕೂಬಾ ಡೈವರ್ಸ್​ಗಳು ಬಾಕ್ಸ್​ನ್ನು ಮೇಲೆತ್ತಿದರು. ಅದರಲ್ಲಿ 20 ಕೋಟಿಗೂ ಅಧಿಕ ಮೌಲ್ಯದ ಗೋಲ್ಡ್‌ ಬಿಸ್ಕೆಟ್‌ ಅನ್ನು ನೋಡಿ ಅಧಿಕಾರಿಗಳೇ ಶಾಕ್‌ ಆದರು. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬ, ಗಾಯಾಳುಗಳಿಗೆ ಪರಿಹಾರ ಘೋಷಣೆ

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ಕೆಲ ದಿನಗಳ ಹಿಂದೆಯೂ 17.74 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿತ್ತು.

  • ರಾಮೇಶ್ವರದಲ್ಲಿರುವ ರಾಮನಾಥನಿಗೆ ಪೂಜೆ – ಶೃಂಗೇರಿ ಶ್ರೀಗಳಿಂದ ದೀಕ್ಷೆ

    ರಾಮೇಶ್ವರದಲ್ಲಿರುವ ರಾಮನಾಥನಿಗೆ ಪೂಜೆ – ಶೃಂಗೇರಿ ಶ್ರೀಗಳಿಂದ ದೀಕ್ಷೆ

    ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಮಠದ ಜಗದ್ಗುರು ಶ್ರೀ ಭಾರತೀತೀರ್ಥ ಜಗದ್ಗುರುಗಳು ತಮಿಳುನಾಡಿನ ರಾಮೇಶ್ವರ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಲು ಶ್ರೀ ರಾಮೇಶ್ವರ ದೇವಾಲಯದ ಅರ್ಚಕ ಶರವಣನ್ ರಾನಡೆ ಅವರಿಗೆ ದೀಕ್ಷೆ ನೀಡಿದ್ದಾರೆ.

    ರಾಮೇಶ್ವರದಲ್ಲಿರುವ ಶ್ರೀ ರಾಮನಾಥ ಸ್ವಾಮಿಗೆ ಯಾರು ಪೂಜೆ ಮಾಡಬೇಕು ಎಂದು ಜಗದ್ಗುರು ಶ್ರೀ ಆದಿಶಂಕರಾಚಾರ್ಯರು ಕಟ್ಟುನಿಟ್ಟಿನ ಸಂಪ್ರದಾಯ ಮತ್ತು ನಿರ್ಬಂಧಗಳನ್ನು ಹಾಕಿದ್ದಾರೆ. ಈ ಹಕ್ಕನ್ನು ನೇಪಾಳದ ಮಹಾರಾಜರು ಪಡೆದಿದ್ದು ಶೃಂಗೇರಿ ಮಠದ ಗುರು ಪರಂಪರೆ ಇದನ್ನ ದೈವಿಕವಾಗಿ ಪಡೆದಿದೆ. ಇದನ್ನೂ ಓದಿ: ತುರುವೆಕೆರೆಯಲ್ಲಿ ಮಳೆ ಅಬ್ಬರ- ರೈತರ ಮೊಗದಲ್ಲಿ ಮಂದಹಾಸ

    ನಿರ್ದಿಷ್ಟ ಸಮುದಾಯದಿಂದ ಬರುವ ಅರ್ಚಕರು ಶೃಂಗೇರಿ ಮಠದ ಜಗದ್ಗುರುಗಳಿಂದ ಮಂತ್ರೋಪದೇಶ ದೀಕ್ಷೆ ಸ್ವೀಕರಿಸಿದ ನಂತರವೇ ಶ್ರೀ ರಾಮನಾಥ ಸ್ವಾಮಿಯ ಸೇವೆ ಮಾಡಬಹುದು ನಿಯಮವಿದೆ. ಹಾಗಾಗಿ, ರಾಮೇಶ್ವರಂ ಕ್ಷೇತ್ರದ ಅರ್ಚಕ ಶರವಣನ್ ರಾನಡೆ ಅವರು ಶೃಂಗೇರಿ ಕ್ಷೇತ್ರಕ್ಕೆ ಭೇಟಿ ನೀಡಿ ಭಾರತೀತೀರ್ಥ ಸ್ವಾಮೀಜಿಗಳಿಂದ ಮಂತ್ರೋಪದೇಶ ದೀಕ್ಷೆ ಪಡೆದಿದ್ದಾರೆ.

    ಐತಿಹಾಸಿಕವಾಗಿ ಶೃಂಗೇರಿ ದಕ್ಷಿಣಾಮ್ನಯ ಮಹಾಸಂಸ್ಥಾನ ಪೀಠ ಹಾಗೂ ರಾಮೇಶ್ವರ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಜಗದ್ಗುರು ಶ್ರೀ ಆದಿಶಂಕರಾಯಚಾರ್ಯರು ಮತ್ತು ರಾಮೇಶ್ವರ ದೇವಾಲದಯದ ಧಾರ್ಮಿಕ ಆಚರಣೆ ಮತ್ತು ಸಂವಿಧಾನದ 25ನೇ ಪರಿಚ್ಛೇದದ ಅಡಿಯಲ್ಲಿ ಖಾತ್ರಿಪಡಿಸಿದ ಮೂಲಭೂತ ಹಕ್ಕು ಕೂಡ ಆಗಿದೆ. ಆದ್ದರಿಂದ ಗುರುಭವನದಲ್ಲಿ ನಡೆದ ವಿವಿಧ ಧಾರ್ಮಿಕ ವಿಧಿವಿಧಾನದ ನಂತರ ಶೃಂಗೇರಿ ಪೀಠದ ಜಗದ್ಗುರುಗಳು ರಾಮೇಶ್ವರ ದೇವಾಲಯದ ಅರ್ಚಕರಿಗೆ ದೀಕ್ಷೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ವಿಧುಶೇಖರ ಭಾರತೀತೀರ್ಥ ಸ್ವಾಮೀಜಿಗಳು ಇದ್ದರು.

  • ರಾಮೇಶ್ವರಂನ ಪೂರ್ವ ತೀರದಲ್ಲಿ ಶಿವಲಿಂಗ ಪತ್ತೆ

    ರಾಮೇಶ್ವರಂನ ಪೂರ್ವ ತೀರದಲ್ಲಿ ಶಿವಲಿಂಗ ಪತ್ತೆ

    ಚೆನ್ನೈ: ತಮಿಳುನಾಡಿನ ರಾಮೇಶ್ವರಂನ ಪೂರ್ವ ತೀರದಲ್ಲಿ ಶಿವಲಿಂಗ ಪತ್ತೆಯಾಗಿದೆ. ರಾಮೇಶ್ವರಂ ದೇಗುಲದ ಸಮೀಪವೇ ಸಮುದ್ರ ದಡದಲ್ಲಿ ಪತ್ತೆಯಾಗಿದ್ದು, ಸ್ಥಳೀಯರು ಪೂಜೆ ಸಲ್ಲಿಸುತ್ತಿದ್ದಾರೆ.

    ದೇಶದ ಪುಣ್ಯಕ್ಷೇತ್ರಗಳಲ್ಲಿ ರಾಮೇಶ್ವರಂ ಸಹ ಒಂದಾಗಿದೆ. ಈಗ ಸಮುದ್ರ ದಡದಲ್ಲಿ ಶಿವಲಿಂಗ ಕಂಡು ಭಕ್ತರು ಪುಳಕೀತರಾಗಿದ್ದಾರೆ. ಈ ಪ್ರದೇಶದಲ್ಲಿ ಹಲವು ದೇವಾಲಯಗಳಿವೆ. ವಿಶ್ವದ ಅತಿ ಉದ್ದ ಕಾರಿಡಾರ್ ನ್ನು ರಾಮೇಶ್ವರಂ ದೇವಾಲಯ ಹೊಂದಿದೆ. ಇನ್ನು ದೇವಾಲಯ 1,212 ಕಂಬಗಳನ್ನು ಹೊಂದಿದೆ.

    ಜೂನ್ 16ರಂದು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಸುಮಾರು 200 ವರ್ಷ ಹಳೆಯ ಶಿವ ದೇವಾಲಯ ಪತ್ತೆಯಾಗಿದೆ. ಪೆನ್ನಾ ನದಿ ಪಾತ್ರದಲ್ಲಿ ದೇವಾಲಯ ಪತ್ತೆಯಾಗಿದೆ. ಮರಳು ಗಣಿಗಾರಿಕೆ ವೇಳೆ ಶಿವ ದೇವಾಲಯ ಕಂಡು ಜನರು ಅಚ್ಚರಿಗೆಗೊಳಗಾಗಿದ್ದಾರೆ. ಸುಮಾರು 200 ವರ್ಷ ಹಳೆಯ ದೇಗುಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

  • ರಾಮೇಶ್ವರದಲ್ಲಿ 5 ಸಾವಿರ ಗುಂಡುಗಳು, ಸ್ಫೋಟಕ ವಸ್ತುಗಳು ಪೊಲೀಸ್ ವಶಕ್ಕೆ

    ರಾಮೇಶ್ವರದಲ್ಲಿ 5 ಸಾವಿರ ಗುಂಡುಗಳು, ಸ್ಫೋಟಕ ವಸ್ತುಗಳು ಪೊಲೀಸ್ ವಶಕ್ಕೆ

    ಚೆನ್ನೈ: ತಮಿಳುನಾಡಿನ ಪೊಲೀಸರು ರಾಮೇಶ್ವರಂ ದ್ವೀಪದಲ್ಲಿನ ಕರಾವಳಿ ಹಳ್ಳಿಗಳಲ್ಲಿ ಸೋಮವಾರ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

    ರಾಮೇಶ್ವರಂ ದ್ವೀಪದ ಆಂಥೋನಿಯರ್ಪುರಾಮ್ ನಿವಾಸಿಯೊಬ್ಬರು ಮನೆಯ ಹಿಂಭಾಗದ ಸೆಪ್ಟಿಕ್ ತೊಟ್ಟಿಗಳನ್ನು ನಿರ್ಮಿಸುತ್ತಿರುವಾಗ ಗಂಡುಗಳು ಪತ್ತೆಯಾಗಿದ್ದವು ಎಂದು ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ವರದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗುಂಡು ಮತ್ತು ಸ್ಫೋಟಕ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

    ಸದ್ಯ ಪತ್ತೆಯಾಗಿರುವ ಸ್ಫೋಟಕಗಳು 1980 ರಲ್ಲಿ ಎಲ್‍ಟಿಟಿಇ (ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಲಂ) ಉಗ್ರಗಾಮಿ ಸಂಘಟನೆ ಸಂಗ್ರಹಿಸಿದ್ದ ವಸ್ತುಗಳು ಎಂದು ಶಂಕಿಸಲಾಗಿದೆ. ಎಲ್‍ಟಿಟಿಇ ಉಗ್ರಗಾಮಿಗಳು ಶ್ರೀಲಂಕಾದಲ್ಲಿ ತಮಿಳು ಸಮುದಾಯಕ್ಕೆ ಪ್ರತ್ಯೇಕ ಪ್ರದೇಶ ರೂಪಿಸಲು ಹೋರಾಟ ನಡೆಸಿದ್ದರು. ಇವುಗಳಿಗೆ ತಮಿಳುನಾಡಿನಿಂದ ಕೆಲವರು ಬೆಂಬಲ ವ್ಯಕ್ತಿಪಡಿಸಿ ಸಹಾಯ ಮಾಡುತ್ತಿದ್ದರು. ಅದ್ದರಿಂದ ಉಗ್ರರಿಗೆ ಶಸ್ತ್ರಾಸ್ತ್ರ ಸಹಾಯ ಮಾಡಲು ಇವುಗಳನ್ನು ಸಂಗ್ರಹಿಸುವ ಸಾಧ್ಯತೆ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಸದ್ಯ ಸ್ಫೋಟಗಳು ಪತ್ತೆಯಾಗಿರುವ ಸ್ಥಳದ ಸುತ್ತಲಿನ ಪ್ರದೇಶವನ್ನು ಯಂತ್ರಗಳಿಂದ ಆಗೆದಿರುವ ಪೊಲೀಸರು 50ಕ್ಕೂ ಹೆಚ್ಚು ಮದ್ದು ಗಂಡುಗಳ ಪೆಟ್ಟಿಗೆಯನ್ನು ಸಂಗ್ರಹಿಸಿದ್ದಾರೆ. ಸ್ಥಳದಲ್ಲಿ 22 ಪೆಟ್ಟಿಗೆಗಳ ಮೆಷನ್ ಗನ್ ಬುಲೆಟ್ (ಪ್ರತಿ ಪೆಟ್ಟಿಗೆಯಲ್ಲಿ 7.60 ಮಿಮಿ 250 ಗಂಡುಗಳು), ಮಧ್ಯಮ ಮೆಷಿನ್ ಗನ್ ಗುಂಡುಗಳ ನಾಲ್ಕು ಪೆಟ್ಟಿಗೆಗಳು (ಪ್ರತಿ ಪೆಟ್ಟಿಗೆಯಲ್ಲಿ 100 ಗುಂಡುಗಳು) ಮತ್ತು 25 ಪೆಟ್ಟಿಗೆಯಲ್ಲಿ ಸಣ್ಣ ಮೆಷಿನ್ ಗನ್ ಬುಲೆಟ್ (12.7 ಎಂ.ಎಂ ಗಾತ್ರದ 250 ಬುಲೆಟ್) ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈ ಕುರಿತು ಮಾಹಿತಿ ನೀಡಿರುವ ರಾಮನಾಥಪುರಂ ಡಿಎಸ್ಪಿ ಓ ಪ್ರಕಾಶ್ ಮೀನಾ, ತಮ್ಮ ತಂಡವು ಯಂತ್ರಗಳ ಸಹಾಯದಿಂದ ಸದ್ಯ ಸ್ಫೋಟಕಗಳು ಪತ್ತೆಯಾಗಿರುವ ಸುತ್ತಲಿನ ಮತ್ತಷ್ಟು ಸ್ಥಳವನ್ನು ಅಗೆದು ಅಪಾರ ಪ್ರಮಾಣದ ಸ್ಫೋಟಗಳೊಂದಿಗೆ, ಸ್ವಯಂ ಲೋಡ್ ರೈಪಲ್ ಬುಲೆಟ್ ಗಳು ಪತ್ತೆ ಮಾಡಿದೆ. ಪ್ರಸ್ತುತ ನಾವು ಬುಲೆಟ್ ಗಳ ಸಂಖ್ಯೆಯನ್ನು ಮತ್ತು ಅವುಗಳ ಮೂಲವನ್ನು ಪರಿಶೀಲಿಸುತ್ತಿದ್ದೇವೆ. ಪತ್ತೆಯಾದ ಗುಂಡುಗಳು 25 ವರ್ಷಗಳ ಹಳೆಯದ್ದು ಎಂದು ಸ್ಪಷ್ಟಪಡಿಸಿದ್ದಾರೆ.

  • ಚುನಾವಣೆ ಗೆಲ್ಲಲು ಸಿದ್ದು ಸರ್ಕಾರದ ವಿರುದ್ಧ `ರಾಮ’ ಅಸ್ತ್ರ!

    ಚುನಾವಣೆ ಗೆಲ್ಲಲು ಸಿದ್ದು ಸರ್ಕಾರದ ವಿರುದ್ಧ `ರಾಮ’ ಅಸ್ತ್ರ!

    ನವದೆಹಲಿ: ಕರ್ನಾಟಕ ವಿಧಾನಸಭೆಯ ಚುನಾವಣೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ರಾಮ ರಥ ಸಂಚರಿಸಲಿದೆ. ಈ ಮೂಲಕ ಚುನಾವಣೆ ಗೆಲ್ಲಲು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ ಎಸ್‍ಎಸ್) ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರಾಮ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ.

    ಉತ್ತರಪ್ರದೇಶದಿಂದ ಕರ್ನಾಟಕಕ್ಕೆ ರಾಮರಾಜ್ಯ ರಥಯಾತ್ರೆ ಬರಲಿದ್ದು, 6 ರಾಜ್ಯಗಳಲ್ಲಿ ರಥ ಸಂಚರಿಸಲಿದೆ. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ನಡೆಯಲಿರುವ ಈ ಯಾತ್ರೆ ಉತ್ತರಪ್ರದೇಶದ ಲಕ್ನೋದಿಂದ ಫೆಬ್ರವರಿ 13ರಿಂದ ಹೊರಡಲಿದ್ದು, ಫೆಬ್ರವರಿ 25ಕ್ಕೆ ತಮಿಳುನಾಡಿನ ರಾಮೇಶ್ವರದಲ್ಲಿ ಕೊನೆಗೊಳ್ಳಲಿದೆ.

    ಫೆಬ್ರವರಿ 13 ರಿಂದ ಆರಂಭವಾಗುವ ಯಾತ್ರೆ 39 ದಿನಗಳ ಕಾಲ ನಡೆಯಲಿದೆ. ಈ ವೇಳೆ ಸುಮಾರು 40 ಸಾರ್ವಜನಿಕ ಸಭೆಗಳು ಆಯೋಜನೆ ಮಾಡಲಾಗುತ್ತಿದೆ. ಈ ಸಭೆಗಳಲ್ಲಿ ಪ್ರಮುಖವಾಗಿ ರಾಮಮಂದಿರ ನಿರ್ಮಾಣದ ಕುರಿತು ಚರ್ಚೆ ನಡೆಯಲಿದೆ. ಈ ವರ್ಷ ಕರ್ನಾಟಕದಲ್ಲಿ ನಡೆಯಲಿರುವ ಚುನಾವಣೆ ಸೇರಿದಂತೆ, ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ರಾಮಮಂದಿರ ವಿಚಾರವನ್ನೇ ಪ್ರಮುಖ ಆಸ್ತ್ರವಾಗಿ ಬಿಜೆಪಿ ಬಳಕೆ ಮಾಡುವ ಸಾಧ್ಯತೆಗಳಿವೆ.

    ಯಾತ್ರೆಗೆ ಉತ್ತರಪ್ರದೇಶದ ಕರಸೇವಾಕಪುರ ದಿಂದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರು ಚಾಲನೆ ನೀಡಲಿದ್ದಾರೆ. ಉತ್ತರ ಪ್ರದೇಶದಿಂದ ಆರಂಭವಾಗುವ ಯಾತ್ರೆ ಮಧ್ಯಪ್ರದೇಶ, ಮಹಾರಾಷ್ಟ್ರ ಮೂಲಕ ಕರ್ನಾಟಕ್ಕೆ ಪ್ರವೇಶ ಪಡೆಯಲಿದ್ದು, ನಂತರ ಕೇರಳಕ್ಕೆ ಸಾಗಿ ತಮಿಳುನಾಡಿನ ರಾಮೇಶ್ವರದಲ್ಲಿ ಅಂತ್ಯಗೊಳ್ಳಲಿದೆ.

    1990ರ ಸೆಪ್ಟೆಂಬರ್ ಅಕ್ಟೋಬರ್ ನಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ರಾಮ ರಥ ಯಾತ್ರೆ ನಡೆಸಿದ್ದರು. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಯನ್ನು ಪ್ರಮುಖ ರಾಜಕೀಯ ಪಕ್ಷವಾಗಿ ಬೆಳೆಯುವಂತೆ ಮಾಡಿದ್ದರು.

  • 1000 ಪ್ರಯಾಣಿಕರು ಟಿಕೆಟ್ ಇಲ್ಲದೆ ಫ್ರೀಯಾಗಿ ಪ್ರಯಾಣ ಮಾಡಿದ್ರು!

    1000 ಪ್ರಯಾಣಿಕರು ಟಿಕೆಟ್ ಇಲ್ಲದೆ ಫ್ರೀಯಾಗಿ ಪ್ರಯಾಣ ಮಾಡಿದ್ರು!

    ರಾಮೇಶ್ವರಂ: ಕೆಲವು ಪ್ರಯಾಣಿಕರು ಟಿಕೆಟ್ ಖರೀದಿಸದೆ ರೈಲಿನಲ್ಲಿ ಪ್ರಯಾಣ ಮಾಡಿ ಸಿಕ್ಕಿಬೀಳ್ತಾರೆ. ಆದ್ರೆ ಬರೋಬ್ಬರಿ 1 ಸಾವಿರ ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದ್ದಾರೆ ಅಂದ್ರೆ ನಂಬ್ತೀರಾ?

    ಹೌದು. ಟಿಕೆಟ್ ಕೊಡಲು ರೈಲ್ವೆ ಸ್ಟೇಷನ್‍ವೊಂದರಲ್ಲಿ ಸಿಬ್ಬಂದಿಯೇ ಇರದ ಕಾರಣ ಸುಮಾರು 1 ಸಾವಿರ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡಿರುವ ಘಟನೆ ನಡೆದಿದೆ. ಬುಧವಾರದಂದು ರಾಮೇಶ್ವರಂನಿಂದ ಮಧುರೈಗೆ ಹೊರಟಿದ್ದ ರೈಲಿನಲ್ಲಿ 1000 ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದ್ದಾರೆ.

    ಟಿಕೆಟ್ ಕೌಂಟರ್‍ನ ಸಿಬ್ಬಂದಿ ಅನಾರೋಗ್ಯದ ಕಾರಣ ಕೆಲಸಕ್ಕೆ ಬಂದಿರಲಿಲ್ಲ. ಹೀಗಾಗಿ ಪ್ರಯಾಣಿಕರು ಟಿಕೆಟ್ ಇಲ್ಲದೆ ರಾಮೇಶ್ವರಂ ಮಧುರೈ ಪ್ಯಾಸೆಂಜರ್ ರೈಲನ್ನು ಹತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ರೈಲು ನಿಲ್ದಾಣದಿಂದ ಹೊರಡುವವರೆಗೂ ಟಿಕೆಟ್ ಕೌಂಟರ್‍ನಲ್ಲಿ ಯಾರೂ ಇರದ ಕಾರಣ ಪ್ರಯಾಣಿಕರು ಓಡಿಬಂದು ಬೆಳಗ್ಗೆ 5.30ರ ರೈಲನ್ನು ಹಿಡಿಯಬೇಕಾಯ್ತು. ಈ ಬಗ್ಗೆ ಮಧುರೈನ ವಿಭಾಗೀಯ ರೈಲ್ವೆ ಮ್ಯಾನೇಜರ್‍ಗೆ ದೂರು ಕಳಿಸಲಾಗಿದೆ ಎಂದು ಅವರು ಹೇಳಿದ್ರು .

    ಮಧುರೈ ರಾಮೇಶ್ವರಂನಿಂದ 161 ಕಿ.ಮೀ ದೂರದಲ್ಲಿದೆ.

  • ರಾಮೇಶ್ವರಂನಲ್ಲಿ ಪವಾಡ: ಸಮುದ್ರದ ಮೇಲೆ ಬಸ್ಸಿನ ಎರಡೂ ಚಕ್ರ ನೇತಾಡುತ್ತಿದ್ದರೂ ಯಾತ್ರಿಗಳು ಪಾರಾದ್ರು ವಿಡಿಯೋ ನೋಡಿ

    ರಾಮೇಶ್ವರಂನಲ್ಲಿ ಪವಾಡ: ಸಮುದ್ರದ ಮೇಲೆ ಬಸ್ಸಿನ ಎರಡೂ ಚಕ್ರ ನೇತಾಡುತ್ತಿದ್ದರೂ ಯಾತ್ರಿಗಳು ಪಾರಾದ್ರು ವಿಡಿಯೋ ನೋಡಿ

    ರಾಮೇಶ್ವರಂ: ತಮಿಳುನಾಡಿನ ರಾಮೇಶ್ವರಂ ಸಮುದ್ರದಲ್ಲಿ ಸಂಭವಿಸಬಹುದಾಗಿದ್ದ ಭಾರೀ ಅವಘಡವೊಂದು ತಪ್ಪಿದ್ದು, ಮಿನಿ ಬಸ್ಸಿನಲ್ಲಿದ್ದ ಯಾತ್ರಿಗಳೆಲ್ಲರೂ ಪಾರಾಗಿದ್ದಾರೆ.

    ಭಾನುವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ್ದ ಬಸ್ ಪಂಬನ್ ರಸ್ತೆಯ ಸಮುದ್ರ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದು ಮುಂದಕ್ಕೆ ಸಾಗಿದ್ದಾಗ ಬಸ್ಸಿನ ಎಡಗಡೆಯ ಚಕ್ರಕ್ಕೆ ತಡೆಗೋಡೆ ಅಡ್ಡವಾಗಿ ಸಿಕ್ಕಿದ್ದ ಕಾರಣ ಅಲ್ಲೆ ನಿಂತಿದ್ದು, ಬಸ್‍ನಲ್ಲಿದ್ದ 12 ಮಂದಿ ಯಾತ್ರಿಗಳು ಪಾರಾಗಿದ್ದಾರೆ. ನಿಂತ ಬಳಿಕ ಯಾತ್ರಿಗಳು ಒಬ್ಬೊಬ್ಬರಾಗಿ ಇಳಿದಿದ್ದಾರೆ.

    ಇಂದು ಬೆಳಗ್ಗೆ ರಾಮೇಶ್ವರಂ ನಲ್ಲಿ ತುಂತುರು ಮಳೆ ಇತ್ತು. ಬಸ್ ಒಂದರ ಹಿಂದೆ ಮಿನಿ ಬಸ್ ಸಂಚರಿಸುತಿತ್ತು. ಬಸ್ ನಿಂತಾಗ ಮಿನಿ ಬಸ್ ಚಾಲಕ ಸಡನ್ ಬ್ರೇಕ್ ಹಾಕಿದ್ದಾನೆ. ಈ ವೇಳೆ ಮಿನಿ ಬಸ್ ಸ್ಕಿಡ್ ಆಗಿ ತಡೆಗೋಡೆಗೆ ಡಿಕ್ಕಿ ಹೊಡೆದು ಮುಂದಕ್ಕೆ ಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಸ್‍ನ ಮುಂದುಗಡೆಯ ಎರಡೂ ಚಕ್ರ ಸೇತುವೆಯ ಮೇಲೆ ನೇತಾಡಿ ನಿಂತುಕೊಂಡು, ಪ್ರಯಾಣಿಕರೆಲ್ಲರೂ ಪಾರಾಗಿದ್ದು ನಿಜಕ್ಕೂ ಒಂದು ದೊಡ್ಡ ಪವಾಡ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

    https://www.youtube.com/watch?v=LiQkZ3l_YVQ