Tag: ರಾಮನಾಥ ರೈ

  • ಹುಲಿ ವೇಷಧಾರಿಗಳ ಜೊತೆ ಸ್ಟೆಪ್ ಹಾಕಿದ ಸಚಿವ ರೈ

    ಹುಲಿ ವೇಷಧಾರಿಗಳ ಜೊತೆ ಸ್ಟೆಪ್ ಹಾಕಿದ ಸಚಿವ ರೈ

    ಬೆಂಗಳೂರು: 63ನೇ ರಾಷ್ಟ್ರೀಯ ವನ್ಯಜೀವಿ ಸಪ್ತಾಹಕ್ಕೆ ಇಂದು ಅರಣ್ಯ ಸಚಿವ ರಮಾನಾಥ ರೈ, ನಟ ಪುನೀತ್ ರಾಜ್ ಕುಮಾರ್, ಪ್ರಕಾಶ್ ರೈ ಚಾಲನೆ ನೀಡಿದರು.

    ದೇಶದಲ್ಲಿ ವನ್ಯ ಸಂಪತ್ತು ಕ್ರಮೇಣವಾಗಿ ಕ್ಷೀಣಿಸುತ್ತಿದೆ. ಪರಿಣಾಮವಾಗಿ ವನ್ಯಜೀವಿಗಳು ತನ್ನ ನೆಲೆಯನ್ನು ಕಳೆದುಕೊಳ್ಳತ್ತಿವೆ. ಹಾಗಾಗಿ ಜನರಲ್ಲಿ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಲು ಸೋಮವಾರ ಕಬ್ಬನ್ ಪಾರ್ಕ್ ನಿಂದ ಲಾಲ್‍ಬಾಗ್ ವರೆಗೂ ವಾಕಥಾನ್ ಆಯೋಜಿಸಲಾಗಿತ್ತು.

    ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಪ್ರಾಣಿ ಪ್ರಿಯರು, ವನ್ಯ ಸಂರಕ್ಷಕರು ಸಾಂಸ್ಕೃತಿಕ ಕಲಾ ತಂಡದೊಂದಿಗೆ ಕುಣಿದು ಕುಪ್ಪಳಿಸಿದ್ರು. ಜೊತೆಗೆ ಸಚಿವ ರಮಾನಾಥ ರೈ ಸಹ ಹುಲಿ ವೇಷಧಾರಿಗಳ ಜೊತೆ ಫುಲ್ ಜೋಶ್‍ನಲ್ಲಿ ಸ್ಟೆಪ್ ಹಾಕಿದ್ರು.

    http://youtube.com/watch?v=23igDB12Xc0

     

     

     

  • ರಮಾನಾಥ ರೈಗೆ ಸಿಗಬೇಕಿದ್ದ ಗೃಹ ಇಲಾಖೆ ಕೊನೆಕ್ಷಣದಲ್ಲಿ ರಾಮಲಿಂಗಾ ರೆಡ್ಡಿಗೆ ಸಿಕ್ಕಿದ್ದು ಹೇಗೆ?

    ರಮಾನಾಥ ರೈಗೆ ಸಿಗಬೇಕಿದ್ದ ಗೃಹ ಇಲಾಖೆ ಕೊನೆಕ್ಷಣದಲ್ಲಿ ರಾಮಲಿಂಗಾ ರೆಡ್ಡಿಗೆ ಸಿಕ್ಕಿದ್ದು ಹೇಗೆ?

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಾಮನಾಥ ರೈ ಅವರಿಗೆ ಗೃಹ ಇಲಾಖೆ ಸಿಗುತ್ತಿದ್ದರೂ ಕೊನೆಯ ಕ್ಷಣದಲ್ಲಿ ರಾಮಲಿಂಗಾ ರೆಡ್ಡಿ ಅವರಿಗೆ ಸಿಎಂ ಈ ಹುದ್ದೆಯ ಜವಾಬ್ದಾರಿಯನ್ನು ನೀಡಿದ್ದಾರೆ.

    ರಮಾನಾಥ ರೈಗೆ ಗೃಹಖಾತೆ ನೀಡಿದರೆ ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ಎಚ್ಚರಿಸಿತ್ತು. ಬಿಜೆಪಿಯ ಬೆದರಿಕೆ ಬಗ್ಗಿ ಸರ್ಕಾರ ಕೊನೇ ಕ್ಷಣದಲ್ಲಿ ರಾಮಲಿಂಗಾರೆಡ್ಡಿ ಅವರಿಗೆ ಗೃಹಖಾತೆ ಜವಾಬ್ದಾರಿ ನೀಡಿದ್ಯಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಇಂದು ಏನಾಯ್ತು?
    ಸ್ವತಃ ರಮಾನಾಥ ರೈ ಗೃಹಖಾತೆ ಬೇಡ ಎಂದಿದ್ದರಂತೆ. ನಾನು ಗೃಹ ಸಚಿವನಾದರೆ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರು ಕರಾವಳಿಯ ಅವಳಿ ಜಿಲ್ಲೆಯಲ್ಲಿ ಮತ್ತಷ್ಟು ಕೊಮು ಗಲಭೆಗೆ ಪ್ರಚೋದನೆ ನೀಡಬಹುದು. ಹೀಗಾಗಿ, ಎರಡು ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವುದೇ ಕೆಲಸವಾಗುತ್ತದೆ ಎಂದು ಸಿಎಂ ಬಳಿ ರಮಾನಾಥ್ ರೈ ಹೇಳಿಕೊಂಡಿದ್ದರಂತೆ. ಹೀಗಾಗಿ ಮಧ್ಯಾಹ್ನವೇ ರಾಮಲಿಂಗಾರೆಡ್ಡಿ ಜೊತೆ ಸಿಎಂ ಒಂದು ಸುತ್ತಿನ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ರಮಾನಾಥ ರೈಗೆ ಗೃಹ ಖಾತೆ: ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದು ಹೀಗೆ