Tag: ರಾಮನಾಥ ಕೋವಿಂದ್

  • ಚಾಮರಾಜನಗರಕ್ಕೆ ರಾಷ್ಟ್ರಪತಿ, ಸಿಎಂ ಭೇಟಿ – ಮಧ್ಯಾಹ್ನ ಸಿಮ್ಸ್ ಆಸ್ಪತ್ರೆ ಕಟ್ಟಡ ಉದ್ಘಾಟನೆ

    ಚಾಮರಾಜನಗರಕ್ಕೆ ರಾಷ್ಟ್ರಪತಿ, ಸಿಎಂ ಭೇಟಿ – ಮಧ್ಯಾಹ್ನ ಸಿಮ್ಸ್ ಆಸ್ಪತ್ರೆ ಕಟ್ಟಡ ಉದ್ಘಾಟನೆ

    ಚಾಮರಾಜನಗರ: ಇಂದು ಜಿಲ್ಲೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ.

    ಸಿದ್ದತಾ ಕಾರ್ಯ ಪೂರ್ಣವಾಗಿದ್ದು, ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ತಪ್ಪಲಿನಲ್ಲಿರುವ ವಡ್ಡಗೆರೆ ಬಳಿ 3 ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ:  12 ಲಕ್ಷ ಮೌಲ್ಯದ ಅಕ್ಕಿ, ಲಾರಿಯ ಫೈನಾನ್ಸ್ ಹಣ ವಂಚನೆಗೆ ಸಂಚು ಮಾಡಿದ್ದ ಮಾಲೀಕ ಅರೆಸ್ಟ್

    Karnataka administered 29.5 Lakh covid vaccine doses in a single day CM Bommai Thanks Modi

    ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜು ಬಳಿ 3 ಹೆಲಿಪ್ಯಾಡ್ ನಿರ್ಮಾಣ ಮಾಡಿದ್ದಾರೆ. ಬಿಳಿಗಿರಿರಂಗನ ಬೆಟ್ಟಕ್ಕೆ ಬೆಳಿಗ್ಗೆ 11.40 ಕ್ಕೆ ಭೇಟಿ ನೀಡಲಿರುವ ರಾಮನಾಥ್ ಕೋವಿಂದ್ ಭೇಟಿ ನೀಡಲಿದ್ದಾರೆ. ಇದೇ ವೇಳೆ ಮೈಸೂರಿನಿಂದ ರಸ್ತೆ ಮಾರ್ಗ ಚಾಮರಾಜನಗರಕ್ಕೆ ಆಗಮಿಸಲಿರುವ ಬಸವರಾಜ ಬೊಮ್ಮಾಯಿ ಮಧ್ಯಾಹ್ನ 1.25ಕ್ಕೆ ಯಡಬೆಟ್ಟ ಹೆಲಿಪ್ಯಾಡ್ ಬಳಿ ರಾಷ್ಟ್ರಪತಿ ಗಳನ್ನು ಸ್ವಾಗತಿಸಲಿದ್ದಾರೆ. ಇದನ್ನೂ ಓದಿ:  2023ರಲ್ಲೂ ಬೊಮ್ಮಾಯಿ ಸಿಎಂ ಆಗಿ ದಸರಾ ಉದ್ಘಾಟಿಸಲಿದ್ದಾರೆ: ಪ್ರತಾಪ್ ಸಿಂಹ

    162 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜು ಬೋಧನಾ ಆಸ್ಪತ್ರೆಯನ್ನು ಮಧ್ಯಾಹ್ನ 3.30 ಕ್ಕೆ ರಾಮನಾಥ್ ಕೋವಿಂದ್ ಸರ್ಕಾರಿ ಮೆಡಿಕಲ್ ಕಾಲೇಜು ಬೋಧನಾ ಆಸ್ಪತ್ರೆ ಉದ್ಘಾಟಿಸಲಿದ್ದಾರೆ. ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ 500 ಮಂದಿಗೆ ಮಾತ್ರ ಅವಕಾಶ ನೀಡಿದ್ದಾರೆ. ಬಿಳಿಗಿರಿರಂಗನ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಚಾಮರಾಜನಗರದ ಸರ್ಕಾರಿ ಮೆಡಿಕಲ್ ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

  • ಮೋದಿಯ ಖಾತೆಯನ್ನು ವೈಟ್ ಹೌಸ್ ದಿಢೀರ್ ಅನ್‍ಫಾಲೋ ಮಾಡಿದ್ದು ಯಾಕೆ? – ಪ್ರಶ್ನೆಗೆ ಸಿಕ್ತು ಉತ್ತರ

    ಮೋದಿಯ ಖಾತೆಯನ್ನು ವೈಟ್ ಹೌಸ್ ದಿಢೀರ್ ಅನ್‍ಫಾಲೋ ಮಾಡಿದ್ದು ಯಾಕೆ? – ಪ್ರಶ್ನೆಗೆ ಸಿಕ್ತು ಉತ್ತರ

    ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಖಾತೆಯನ್ನು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತ ಭವನ ಅನ್ ಫಾಲೋ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ಮೂರು ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ, ಕಚೇರಿಯ ಖಾತೆ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಟ್ವಿಟ್ಟರ್ ಖಾತೆಯನ್ನು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ವೈಟ್ ಹೌಸ್ ಫಾಲೋ ಮಾಡಿತ್ತು. ಆದರೆ ಈಗ ಏಕಾಏಕಿ ಟ್ವಿಟ್ಟರ್ ನಲ್ಲಿ ಮೋದಿ ಮತ್ತು ಕೋವಿಂದ್ ಅವರ ಖಾತೆಯನ್ನು ಅನ್ ಫಾಲೋ ಮಾಡಿದೆ.

    ವೈಟ್ ಹೌಸ್ ಅಮೆರಿಕ ಸರ್ಕಾರಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಹೊರತು ಪಡಿಸಿದ ಬೇರೆ ಯಾರ ಖಾತೆಯನ್ನು ಫಾಲೋ ಮಾಡುವುದಿಲ್ಲ. ಆದರೆ ಅಚ್ಚರಿ ಎಂಬಂತೆ ಮೂರು ವಾರಗಳ ಹಿಂದೆ ಮೋದಿ ಮತ್ತು ಕೋವಿಂದ್ ಅವರ ಖಾತೆಯನ್ನು ಫಾಲೋ ಮಾಡಿತ್ತು. ಈ ಎರಡು ಖಾತೆಗಳನ್ನು ಅನ್‍ಫಾಲೋ ಮಾಡುವುರ ಜೊತೆಗೆ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು ವಾಷಿಂಗ್ಟನ್ ನಲ್ಲಿರುವ ಭಾರತ ರಾಯಭಾರ ಕಚೇರಿಯನ್ನು ಅನ್ ಫಾಲೋ ಮಾಡಿದೆ.

    ಗಣ್ಯ ವ್ಯಕ್ತಿಗಳ ಖಾತೆಯನ್ನು ಫಾಲೋ ಮಾಡಿ ವೈಟ್ ಹೈಸ್ ಅನ್‍ಫಾಲೋ ಮಾಡಿದ್ದು ಯಾಕೆ? ದಿಢೀರ್ ಆಗಿ ಈ ನಿರ್ಧಾರ ಯಾಕೆ ಮಾಡಿತು ಎನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು.

    ಈ ಪ್ರಶ್ನೆಗೆ ಹೆಸರು ಪ್ರಕಟಿಸಲು ಇಚ್ಚಿಸದ ವೈಟ್ ಹೌಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ವೈಟ್ ಹೌಸ್ ಟ್ವಿಟ್ಟರ್ ಯಾವಾಗಲೂ ಅಮೆರಿಕ ಸರ್ಕಾರದ ಹಿರಿಯ ವ್ಯಕ್ತಿಗಳ ಖಾತೆಯನ್ನು ಫಾಲೋ ಮಾಡುತ್ತದೆ. ಇದರ ಜೊತೆ ಕೆಲವು ಖಾತೆಗಳನ್ನು ಫಾಲೋ ಮಾಡುತ್ತದೆ. ಸೀಮಿತ ಅವಧಿಗೆ ಒಂದು ದೇಶಕ್ಕೆ ಗೌರವ ಸಲ್ಲಿಸುವ ಸಲುವಾಗಿ ಆ ದೇಶದ ಪ್ರಮುಖ ಖಾತೆಗಳನ್ನು ಫಾಲೋ ಮಾಡುತ್ತದೆ ಎಂದು ಉತ್ತರಿಸಿದ್ದಾರೆ.

    ಪ್ರಸ್ತುತ 13 ಖಾತೆಗಳನ್ನು ವೈಟ್ ಹೌಸ್ ಫಾಲೋ ಮಾಡುತ್ತಿದ್ದು, ಈ ಎಲ್ಲ ಖಾತೆಗಳು ಅಮೆರಿಕ ಸರ್ಕಾರಲ್ಲಿರುವ ವ್ಯಕ್ತಿ/ ಸಂಸ್ಥೆಗಳಾಗಿವೆ. ವೈಟ್ ಹೌಸ್ ಖಾತೆಯನ್ನು 2.2 ಕೋಟಿ ಜನ ಫಾಲೋ ಮಾಡುತ್ತಿದ್ದಾರೆ.

    ಕೋವಿಡ್-19 ಹಿನ್ನೆಲೆಯಲ್ಲಿ ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಸೇರಿದಂತೆ ಹಲವು ಔಷಧಿಗಳ ರಫ್ತನ್ನು ನಿಷೇಧಿಸಿತ್ತು. ಈ ಸಮಯದಲ್ಲಿ ಕೋವಿಡ್-19ಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಪರಿಣಾಮ ಬೀರುತ್ತದೆ ಎಂಬ ಸಲಹೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಕಳುಹಿಸುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಭಾರತ ಅಮೆರಿಕಕ್ಕೆ ಮಾತ್ರೆಗಳನ್ನು ರಫ್ತು ಮಾಡಿತ್ತು. ಇದಾದ ಬಳಿಕ ಟ್ರಂಪ್ ಸಂತೋಷಗೊಂಡು ಮೋದಿ ಅವರನ್ನು ಹೊಗಳಿದ್ದರು. ಟ್ರಂಪ್ ಹೊಗಳಿಕೆಯ ಟ್ವೀಟ್ ಬೆನ್ನಲ್ಲೇ ವೈಟ್ ಹೌಸ್ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಪಿಎಂಓ ಖಾತೆಯನ್ನು ಫಾಲೋ ಮಾಡಿತ್ತು.

  • ಮೋದಿಯನ್ನು ಅನ್‍ಫಾಲೋ ಮಾಡಿದ ವೈಟ್‍ಹೌಸ್

    ಮೋದಿಯನ್ನು ಅನ್‍ಫಾಲೋ ಮಾಡಿದ ವೈಟ್‍ಹೌಸ್

    ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಖಾತೆಯನ್ನು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತ ಭವನ ಅನ್ ಫಾಲೋ ಮಾಡಿದೆ.

    ಮೂರು ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ, ಕಚೇರಿಯ ಖಾತೆ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಟ್ವಿಟ್ಟರ್ ಖಾತೆಯನ್ನು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ವೈಟ್ ಹೌಸ್ ಫಾಲೋ ಮಾಡಿತ್ತು. ಆದರೆ ಈಗ ಏಕಾಏಕಿ ಟ್ವಿಟ್ಟರ್ ನಲ್ಲಿ ಮೋದಿ ಮತ್ತು ಕೋವಿಂದ್ ಅವರ ಖಾತೆಯನ್ನು ಅನ್ ಫಾಲೋ ಮಾಡಿದೆ.

    ವೈಟ್ ಹೌಸ್ ಅಮೆರಿಕ ಸರ್ಕಾರಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಹೊರತು ಪಡಿಸಿದ ಬೇರೆ ಯಾರ ಖಾತೆಯನ್ನು ಫಾಲೋ ಮಾಡುವುದಿಲ್ಲ. ಆದರೆ ಅಚ್ಚರಿ ಎಂಬಂತೆ ಮೂರು ವಾರಗಳ ಹಿಂದೆ ಮೋದಿ ಮತ್ತು ಕೋವಿಂದ್ ಅವರ ಖಾತೆಯನ್ನು ಫಾಲೋ ಮಾಡಿತ್ತು. ಈ ಎರಡು ಖಾತೆಗಳನ್ನು ಅನ್‍ಫಾಲೋ ಮಾಡುವುರ ಜೊತೆಗೆ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು ವಾಷಿಂಗ್ಟನ್ ನಲ್ಲಿರುವ ಭಾರತ ರಾಯಭಾರ ಕಚೇರಿಯನ್ನು ಅನ್ ಫಾಲೋ ಮಾಡಿದೆ.

    ಪ್ರಸ್ತುತ 13 ಖಾತೆಗಳನ್ನು ವೈಟ್ ಹೌಸ್ ಫಾಲೋ ಮಾಡುತ್ತಿದ್ದು, 2.2 ಕೋಟಿ ಜನ ಈ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ.

    ಕೋವಿಡ್-19 ಹಿನ್ನೆಲೆಯಲ್ಲಿ ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಸೇರಿದಂತೆ ಹಲವು ಔಷಧಿಗಳ ರಫ್ತನ್ನು ನಿಷೇಧಿಸಿತ್ತು. ಈ ಸಮಯದಲ್ಲಿ ಕೋವಿಡ್-19ಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಪರಿಣಾಮ ಬೀರುತ್ತದೆ ಎಂಬ ಸಲಹೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಕಳುಹಿಸುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಭಾರತ ಅಮೆರಿಕಕ್ಕೆ ಮಾತ್ರೆಗಳನ್ನು ರಫ್ತು ಮಾಡಿತ್ತು. ಇದಾದ ಬಳಿಕ ಟ್ರಂಪ್ ಸಂತೋಷಗೊಂಡು ಮೋದಿ ಅವರನ್ನು ಹೊಗಳಿದ್ದರು. ಟ್ರಂಪ್ ಹೊಗಳಿಕೆಯ ಟ್ವೀಟ್ ಬೆನ್ನಲ್ಲೇ ವೈಟ್ ಹೌಸ್ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಪಿಎಂಓ ಖಾತೆಯನ್ನು ಫಾಲೋ ಮಾಡಿತ್ತು.

  • ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆಗೆ ರಾಷ್ಟ್ರಪತಿ ಅಂಕಿತ!

    ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆಗೆ ರಾಷ್ಟ್ರಪತಿ ಅಂಕಿತ!

    ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆಗೆ ಆದೇಶ ನೀಡಿದ್ದಾರೆ.

    ಜಮ್ಮು ಕಾಶ್ಮೀರದ ರಾಜ್ಯಪಾಲರಾದ ಎನ್ ಎನ್ ವೋಹ್ರಾರವರು ಕಣಿವೆ ರಾಜ್ಯದಲ್ಲಿ ಆದ ರಾಜಕೀಯ ಬದಲಾವಣೆಗಳಿಂದ ಸರ್ಕಾರ ಅಸ್ತಿತ್ವ ಕಳೆದುಕೊಂಡಿತ್ತು. ಹೀಗಾಗಿ ರಾಜ್ಯದಲ್ಲಿ ಸಂವಿಧಾನದ ಅಧಿನಿಯಮ 92ರ ಪ್ರಕಾರ ರಾಜ್ಯಪಾಲರ ಆಡಳಿತ ಜಾರಿಗೊಳಿಸುವಂತೆ ರಾಷ್ಟ್ರಪತಿಯವರಿಗೆ ವರದಿ ಸಲ್ಲಿಸಿದ್ದರು.

    ವರದಿಯನ್ನು ಆಧರಿಸಿ ಜಮ್ಮು ಕಾಶ್ಮೀರದಲ್ಲಿ ಸರ್ಕಾರ ಅಸ್ತಿತ್ವ ಕಳೆದುಕೊಂಡ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಕಣಿವೆ ರಾಜ್ಯದಲ್ಲಿ ಮುಂದಿನ 24 ಗಂಟೆಗಳೊಳಗೆ ರಾಜ್ಯಪಾಲರ ಆಡಳಿತ ಜಾರಿಗೊಳಿಸುವಂತೆ ಆದೇಶ ನೀಡಿದ್ದಾರೆ.

    ಮಂಗಳವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮಾತನಾಡಿ, “ದೇಶದ ಭದ್ರತೆಯ ದೃಷ್ಟಿಯಿಂದ ಜಮ್ಮು-ಕಾಶ್ಮೀರದ ಪಿಡಿಪಿ ಜೊತೆಗಿನ ಮೈತ್ರಿಯಿಂದ ಬಿಜೆಪಿ ಹಿಂದೆ ಸರಿಯುತ್ತಿದೆ” ಎಂಬ ನಿರ್ಧಾರವನ್ನು ಕೈಗೊಂಡಿದ್ದರು.

    ಈ ಹಿನ್ನೆಲೆಯಲ್ಲಿ ಪಿಡಿಪಿಯ ಮೆಹಬೂಬ ಮುಫ್ತಿ ನೇತೃತ್ವದ ಸರ್ಕಾರ ಅಸ್ತಿತ್ವ ಕಳೆದುಕೊಂಡಿತ್ತು. ಪಿಡಿಪಿಯ ಮುಫ್ತಿ ಹಾಗೂ ಬೆಂಬಲಿಗರು ತಮ್ಮ ರಾಜೀನಾಮೆಯನ್ನು ಮಂಗಳವಾರ ಸಂಜೆ ರಾಜ್ಯಪಾಲ ಎನ್ ಎನ್ ವೋಹ್ರಾರವರಿಗೆ ಸಲ್ಲಿಸಿದ್ದರು. ಇದನ್ನೂ ಓದಿ: ಪಿಡಿಪಿ ಮೈತ್ರಿಯಿಂದ ಹಿಂದೆ ಸರಿದ ಬಿಜೆಪಿ- ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ?

    ಏನಿದು ರಾಜ್ಯಪಾಲರ ಆಳ್ವಿಕೆ?
    ಭಾರತದಾದ್ಯಂತ ಯಾವುದೇ ರಾಜ್ಯಗಳಲ್ಲಿ ಸ್ಥಳೀಯ ಸರ್ಕಾರಗಳು ಆಡಳಿತ ನಡೆಸುವಲ್ಲಿ ಸಾಧ್ಯವಾಗದೇ ಇದ್ದಾಗ, ಸಂವಿಧಾನದ 92ನೇ ಅಧಿನಿಯಮದ ಪ್ರಕಾರ ರಾಷ್ಟ್ರಪತಿಯರ ಆಳ್ವಿಕೆ ಜಾರಿಗೆ ಬರುತ್ತದೆ. ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿಗಳ ಬದಲು ರಾಜ್ಯಪಾಲರು ಆಡಳಿತ ನಡೆಸುತ್ತಾರೆ. ರಾಜ್ಯಪಾಲರ ಆಡಳಿತ ಬಂದ ನಂತರ ಮುಂದಿನ 6 ತಿಂಗಳುಗಳ ಕಾಲ ರಾಜ್ಯಪಾಲರೇ ರಾಷ್ಟ್ರಪತಿಯವರ ನೇತೃತ್ವದಲ್ಲಿ ಆಡಳಿತ ನಡೆಸುತ್ತಾರೆ. ನಂತರ ಚುನಾವಣೆ ನಡೆಸಿ, ಬಹುಮತ ಪಡೆದ ಪಕ್ಷಕ್ಕೆ ಅಧಿಕಾರ ಹಸ್ತಾಂತರಿಸುತ್ತಾರೆ.

    ಭಾರತ ಸಂವಿಧಾನದಲ್ಲಿ ಇತರೇ ರಾಜ್ಯಗಳನ್ನು ಹೋಲಿಸಿದರೆ, ಜಮ್ಮು ಕಾಶ್ಮೀರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಅಲ್ಲದೇ ಕಣಿವೆ ರಾಜ್ಯಕ್ಕೆ ಸೀಮಿತವಾಗುವ ಸಂವಿಧಾನ ಹಾಗೂ ಆಡಳಿತವನ್ನು ಜಾರಿಗೊಳಿಸುವ ನೀತಿಯನ್ನು ರೂಪಿಸಿದೆ. ಇದನ್ನೂ ಓದಿ: ಪಿಡಿಪಿ ಮೈತ್ರಿ ಕಳೆದುಕೊಂಡ ಬಿಜೆಪಿ: ಜಮ್ಮು ಕಾಶ್ಮೀರದಲ್ಲಿ ಮುಂದೇನು?