Tag: ರಾಡರ್ ಯಂತ್ರ

  • ಸರ್ಕಾರಿ ಜಮೀನಿನಲ್ಲಿ ನಿಧಿ ಶೋಧನೆಯಲ್ಲಿ ತೊಡಗಿದ್ದ ನಿಧಿಗಳ್ಳರ ಅರೆಸ್ಟ್

    ಸರ್ಕಾರಿ ಜಮೀನಿನಲ್ಲಿ ನಿಧಿ ಶೋಧನೆಯಲ್ಲಿ ತೊಡಗಿದ್ದ ನಿಧಿಗಳ್ಳರ ಅರೆಸ್ಟ್

    ಚಿಕ್ಕಬಳ್ಳಾಪುರ: ನಿಧಿಗಳ್ಳರು ಸರ್ಕಾರಿ ಜಮೀನೊಂದರಲ್ಲಿ ನಿಧಿ ಶೋಧನೆಯಲ್ಲಿ ತೊಡಗಿದ್ದು, ಬಟ್ಲಹಳ್ಳಿ ಪೊಲೀಸರು 8 ಮಂದಿ ನಿಧಿ ಶೋಧಕರನ್ನ ಬಂಧಿಸಿದ ಘಟನೆ ಜಿಲ್ಲೆ ಚಿಂತಾಮಣಿ ತಾಲೂಕು ಯರಕೋಟೆ ಬಳಿ ನಡೆದಿದೆ.

    ಆಂಧ್ರಪ್ರದೇಶದ ಆಯುರ್ವೇದ ವೈದ್ಯ ಶ್ರೀನಿವಾಸ್, ರಮಣಾರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೂದಿಗೆರೆಯ ಅನಿಲ್ ಕುಮಾರ್, ಕೃಷ್ಣ, ಚಿಂತಾಮಣಿಯ ಕೆಂಚಾರ್ಲಹಳ್ಳಿ ಗ್ರಾಮದ ಚಾಂದ್ ಪಾಷ, ಜಬೀವುಲ್ಲಾ, ನಂದಿಗಾನಹಳ್ಳಿಯ ಜನಾರ್ಧನ್, ಕೃಷ್ಣಾರೆಡ್ಡಿ ಬಂಧಿತ ನಿಧಿ ಶೋಧಕರು. ಪೊಲೀಸರಿಂದ ಈಗಾಗಲೇ ಬಂಧಿತರು ಕೃತ್ಯಕ್ಕೆ ಬಳಸಿದ ಅತ್ಯಾಧುನಿಕ ರಾಡರ್ ಯಂತ್ರ, 5 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.  ಇದನ್ನೂ ಓದಿ: ತಂಗಿ ಆರೋಗ್ಯ ಸರಿಯಿಲ್ಲವೆಂದು ಕ್ಯಾಬ್ ದರೋಡೆ ಮಾಡಿದ ಸಹೋದರರು..!

    ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.