Tag: ರಾಜ್ ಕಪೂರ್

  • ಪಿಎಂ ಮೋದಿರನ್ನು ಭೇಟಿಯಾದ ಕರೀನಾ ಕಪೂರ್ ಕುಟುಂಬ

    ಪಿಎಂ ಮೋದಿರನ್ನು ಭೇಟಿಯಾದ ಕರೀನಾ ಕಪೂರ್ ಕುಟುಂಬ

    ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ (Kareena Kapoor) ಕುಟುಂಬ ಪಿಎಂ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದ್ದಾರೆ. ಈ ಕುರಿತು ಸ್ಪೆಷಲ್ ಪೋಸ್ಟ್‌ವೊಂದನ್ನು ನಟಿ ಹಂಚಿಕೊಂಡಿದ್ದಾರೆ. ರಾಜ್ ಕಪೂರ್ 100ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಮೋದಿಗೆ ಕಪೂರ್‌ ಕುಟುಂಬ ಆಹ್ವಾನ ನೀಡಿದೆ. ಇದನ್ನೂ ಓದಿ:ಯಾರನ್ನೂ ದ್ವೇಷಿಸಲಿಲ್ಲ – ಎಸ್.ಎಂ ಕೃಷ್ಣ ಅಗಲಿಕೆಯ‌ ಕುರಿತು ನೋವು ಹಂಚಿಕೊಂಡ ನಟಿ ರಮ್ಯಾ

    ಇದೇ ಡಿ.14ರಂದು ನಟ, ನಿರ್ಮಾಪಕ ರಾಜ್ ಕಪೂರ್ ಅವರ ಹುಟ್ಟಿದ ದಿನವಾಗಿದ್ದು, 2024ಕ್ಕೆ 100ನೇ ವರ್ಷದ ಬರ್ತ್ಡೇ ಸಂಭ್ರಮ. ರಾಜ್ ಕಪೂರ್ 100ನೇ ವರ್ಷದ ಜನ್ಮ ದಿನದ ಗೌರವಾರ್ಥವಾಗಿ ಅವರ 10 ಸಿನಿಮಾಗಳ ಪ್ರದರ್ಶನ ಮತ್ತು ವಿಶೇಷ ಕಾರ್ಯಕ್ರಮವನ್ನು ಕೂಡ ಕಪೂರ್ ಕುಟುಂಬ ಆಯೋಜಿಸಿದೆ. ಈ ಹಿನ್ನೆಲೆ ದೆಹಲಿಯಲ್ಲಿ ಪಿಎಂ ಕಚೇರಿಯಲ್ಲಿ ಕಪೂರ್ ಫ್ಯಾಮಿಲಿ ಮೋದಿರನ್ನು ಭೇಟಿ ಮಾಡಿ ಆಹ್ವಾನ ನೀಡಿದೆ.

    ಕರೀನಾ ಕಪೂರ್ ದಂಪತಿ, ನೀತು ಕಪೂರ್, ಆಲಿಯಾ- ರಣ್‌ಬೀರ್ ಕಪೂರ್ ಜೋಡಿ, ಕರೀಷ್ಮಾ ಕಪೂರ್ ಕುಟುಂಬಸ್ಥರು ಮೋದಿರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತಾದ ವಿಶೇಷ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕರೀನಾ ಮಕ್ಕಳಾದ ಟಿಮ್ ಮತ್ತು ಜೆಹ್ ಹೆಸರನ್ನು ಬರೆದು ಪಿಎಂ ಆಟೋಗ್ರಾಫ್ ನೀಡಿರೋದು ಎಲ್ಲರ ಗಮನ ಸೆಳೆದಿದೆ. ಜೊತೆಗೆ ಕರೀನಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಮೋದಿರವರ ಸರಳತೆ ಮತ್ತು ಬೆಂಬಲವನ್ನು ಕೊಂಡಾಡಿದ್ದಾರೆ.

    ಅಂದಹಾಗೆ, ರಾಜ್ ಕಪೂರ್ 100ನೇ ವರ್ಷದ ಬರ್ತ್ ಆ್ಯನಿವರ್ಸರಿ ಪ್ರಯುಕ್ತ ಡಿ.13ರಿಂದ 15ರವರೆಗೆ 40 ನಗರಗಳಲ್ಲಿ 10 ಸಿನಿಮಾಗಳು 135 ಚಿತ್ರಮಂದಿರಗಳಲ್ಲಿ ಪ್ರಸಾರವಾಗಲಿದೆ ಎಂದು ನಟಿ ತಿಳಿಸಿದ್ದಾರೆ.

  • ಆಸ್ಕರ್‌ನಲ್ಲಿ ಜ್ಯೂ.ಎನ್‌ಟಿಆರ್-ಚರಣ್ ಡ್ಯಾನ್ಸ್ ಮಾಡಿಲ್ಲ ಯಾಕೆ? ಇಲ್ಲಿದೆ ಅಸಲಿ ಕಾರಣ

    ಆಸ್ಕರ್‌ನಲ್ಲಿ ಜ್ಯೂ.ಎನ್‌ಟಿಆರ್-ಚರಣ್ ಡ್ಯಾನ್ಸ್ ಮಾಡಿಲ್ಲ ಯಾಕೆ? ಇಲ್ಲಿದೆ ಅಸಲಿ ಕಾರಣ

    ತೆಲುಗಿನ (Telagu) ನಟ ಜ್ಯೂ.ಎನ್‌ಟಿಆರ್ (Jr.Ntr) ಮತ್ತು ರಾಮ್ ಚರಣ್ (Ram Charan) ಜಬರ್‌ದಸ್ತ್ ಆಗಿ ಕುಣಿದಿದ್ದ `ನಾಟು ನಾಟು’ (Naatu Naatu) ಹಾಡಿಗೆ ಈ ವರ್ಷ ಆಸ್ಕರ್ ಅವಾರ್ಡ್ (Oscar Award) ಒಲಿದಿದೆ. ವಿಶ್ವದ ಎಲ್ಲೆಡೆ ಈ ಹಾಡು ಈಗ ಸಂಚಲನ ಮೂಡಿಸುತ್ತಿದೆ. ಹೀಗಿರುವಾಗ ಆಸ್ಕರ್ ವೇದಿಕೆಯಲ್ಲಿ ತಾರಕ್- ಚರಣ್ ನಾಟು ನಾಟು ಹಾಡಿಗೆ ಪ್ರದರ್ಶನ ನೀಡಬೇಕಿತ್ತು. ಕೊನೆಯ ಹಂತದಲ್ಲಿ ಪ್ರದರ್ಶನ ಕ್ಯಾನ್ಸಲ್ ಆಗಿದ್ದೇಕೆ ಎಂಬುದನ್ನ ನಿರ್ಮಾಪಕ ರಾಜ್‌ ಕಪೂರ್  ಅಸಲಿ ವಿಚಾರವನ್ನ ಬಿಚ್ಚಿಟ್ಟಿದ್ದಾರೆ.

    `ಆರ್‌ಆರ್‌ಆರ್’ (RRR) ಸಿನಿಮಾಗಾಗಿ ರಾಜಮೌಳಿ ಮತ್ತು ಟೀಮ್ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. `ನಾಟು ನಾಟು’ ಹಾಡನ್ನ ಉಕ್ರೇನ್‌ನಲ್ಲಿ ಅದ್ದೂರಿಯಾಗಿ ಶೂಟಿಂಗ್ ಮಾಡಲಾಗಿತ್ತು. ತೆರೆಯ ಮೇಲೆ ಕಮಾಲ್ ಮಾಡಿದ್ದಂತಹ ನಾಟು ನಾಟು ಸಾಂಗ್‌ಗೆ ಆಸ್ಕರ್ ವೇದಿಕೆಯಲ್ಲೂ ಪ್ರದರ್ಶನ ಮಾಡುವ ಯೋಜನೆ ಇತ್ತು. ಕಡೆಯ ಕ್ಷಣದಲ್ಲಿ ಬದಲಾಗಿದ್ದು ಯಾಕೆ ಎಂಬುದನ್ನ ನಿರ್ಮಾಪಕ ರಾಜ್ ಕಪೂರ್ (Raj Kapoor) ಇದೀಗ ತಿಳಿಸಿದ್ದಾರೆ.

    ರಾಮ್ ಚರಣ್ ಮತ್ತು ತಾರಕ್ ಇಬ್ಬರೂ ಪ್ರತಿಷ್ಠಿತ ವೇದಿಕೆಯಲ್ಲಿ ಡಾನ್ಸ್ ಮಾಡಲು ಆರಾಮದಾಯಕವಾಗಿರದ ಕಾರಣ ಪ್ರದರ್ಶನ ನೀಡಿಲ್ಲ ಎಂದು ರಾಜ್ ಕಪೂರ್ ಬಹಿರಂಗಪಡಿಸಿದ್ದಾರೆ. ವೇದಿಕೆಯ ಮೇಲೆ ಡ್ಯಾನ್ಸ್ ಮಾಡುವ ಮುನ್ನ ಮತ್ತೆ ಕಾರ್ಯಕ್ರಮದ ಸಿದ್ಧತೆ ಸಮಯದ ಅಭಾವವಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ನಮ್ಮ ಭಾರತದ ಹೆಮ್ಮೆ ಎಂದು ಹಾಡಿ ಹೊಗಳಿದ ಕಂಗನಾ

    ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಗಾಯಕರ ಜೊತೆ ಇವರಿಬ್ಬರೂ ಪ್ರದರ್ಶನ ನೀಡಬೇಕಿತ್ತು. ಎಂ.ಎಂ ಕೀರವಾಣಿ ಹೇಳಿದ ಬಳಿಕ ನಾವು ರಾತ್ರೋರಾತ್ರಿ ಭಾರತದ ಮತ್ತು ಲಾಸ್ ಏಂಜಲೀಸ್‌ನಲ್ಲಿರುವ ಕೋರಿಯೋಗ್ರಾಫರ್‌ಗಳಿಗೆ ಕರೆ ಮಾಡಿ ಮಾತನಾಡಿದೆವು. ನಾವು ಕಾಸ್ಟಿಂಗ್ ಆಯ್ಕೆಗಳು, ವಸ್ತ್ರ ವಿನ್ಯಾಸ ಮತ್ತು ಭಾರತದ ತಂಡದೊಂದಿಗೆ ಸ್ಟೇಜ್ ರೆಂಡರಿಂಗ್ ಎಲ್ಲವೂ ಸಿದ್ಧತೆ ಮಾಡಿಕೊಂಡಿದ್ದೇವು. ಆದರೆ ಎಲ್ಲದಕ್ಕೂ ಸಮಯದ ಅಭಾವವಿತ್ತು ಎಂದಿದ್ದಾರೆ. ಪ್ರತಿಷ್ಠಿತ ವೇದಿಕೆಯಲ್ಲಿ ನೃತ್ಯ ಮಾಡೋದಾದ್ರೆ ಅದಕ್ಕೆ ಸಿದ್ಧತೆ ಕೂಡ ಚೆನ್ನಾಗಿರಬೇಕು ಎಂಬ ಕಾರಣಕ್ಕೆ ಪ್ರದರ್ಶನ ನೀಡಲಾಗಲಿಲ್ಲ‌ ಬಳಿಕ ಹಾಲಿವುಡ್‌ ನಟಿ ಲಾರೆನ್‌ ಮತ್ತು ಅವರ ತಂಡ ಅದ್ಭುತವಾಗಿ ಪ್ರದರ್ಶಿಸಿದರು ಎಂದು ನಿರ್ಮಾಪಕ ರಾಜ್ ಕಪೂರ್ ತಿಳಿಸಿದ್ದಾರೆ.

  • ವಿಡಿಯೋ: ಮುಂಬೈನ ಪ್ರಸಿದ್ಧ ಆರ್.ಕೆ.ಸ್ಟುಡಿಯೋದಲ್ಲಿ ಭಾರೀ ಬೆಂಕಿ ಅವಘಡ

    ವಿಡಿಯೋ: ಮುಂಬೈನ ಪ್ರಸಿದ್ಧ ಆರ್.ಕೆ.ಸ್ಟುಡಿಯೋದಲ್ಲಿ ಭಾರೀ ಬೆಂಕಿ ಅವಘಡ

    ಮುಂಬೈ: ನಗರದ ಚೇಂಬುರನಲ್ಲಿರುವ ಪ್ರಸಿದ್ಧ ಆರ್.ಕೆ.ಸ್ಟುಡಿಯೋದಲ್ಲಿ ಇಂದು ಮಧ್ಯಾಹ್ನದ ವೇಳೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸ್ಟುಡಿಯೋದಲ್ಲಿ ಖಾಸಗಿ ಚಾನೆಲ್‍ಗಳ ರಿಯಾಲಿಟಿ ಶೋಗಳು ಇಲ್ಲಿಯೇ ನಡೆಯುತ್ತವೆ.

    ಸ್ಥಳದಲ್ಲಿ 6 ಅಗ್ನಿಶಾಮಕ ವಾಹನಗಳು ಮತ್ತು 5 ನೀರಿನ ಟ್ಯಾಂಕರಗಳು ಬೆಂಕಿ ನಂದಿಸುವಲ್ಲಿ ನಿರತವಾಗಿವೆ. ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಆರ್.ಕೆ ಫಿಲ್ಮ್ ನಿರ್ಮಾಣ ಕಂಪನಿ ಈ ಸ್ಟುಡಿಯೋವನ್ನು ನಿರ್ವಹಣೆ ಮಾಡುತ್ತಿತ್ತು. ಸ್ಟುಡಿಯೋಗೆ ಬಾಲಿವುಡ್ ಹಿರಿಯ ನಟ ರಾಜ್ ಕಪೂರ್ ಅವರ ಹೆಸರನ್ನು ಇಡಲಾಗಿದೆ.

    ಮಧ್ಯಾಹ್ನ ಸುಮಾರು 2 ಗಂಟೆಗೆ ನಮ್ಮ ಇಲಾಖೆಗೆ ಕರೆ ಬಂತು. ಕೂಡಲೇ ನಮ್ಮ ಸಿಬ್ಬಂದಿ ತಲುಪಿ ಬೆಂಕಿ ನಿಂದಿಸುವಲ್ಲಿ ನಿರತರಾಗಿದ್ದಾರೆ ಎಂದು ಮುಂಬೈನ ಅಗ್ನಿಶಾಮಕ ದಳದ ಮುಖ್ಯಸ್ಥ ಪಿ.ಎಸ್ ರಹಂಗ್‍ದಾಲೆ ತಿಳಿಸಿದ್ದಾರೆ.

    ಕಟ್ಟಡದ ನೆಲ ಮಹಡಿಯಲ್ಲಿರುವ 100*80 ಚದರ ಅಡಿ ಪ್ರದೇಶದಲ್ಲಿ ಎಲೆಕ್ಟ್ರಿಕ್ ವೈರಿಂಗ್, ಎಲೆಕ್ಟ್ರಿಕಲ್ ಇನ್ಸ್ಟಾಲೇಷನ್, ಅಲಂಕಾರ ಉಪಕರಣಗಳಿಗೆ ಮಾತ್ರ ತಗುಲಿದೆ ಎಂದು ಹೇಳಲಾಗುತ್ತಿದೆ. ಆದರೆ ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.