Tag: ರಾಜರಥ

  • ಫಿಲ್ಮ್ ಚೇಂಬರ್ ಗೆ  ತೆರಳಿ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಆರ್‌ಜೆ ರಶ್ಮಿ

    ಫಿಲ್ಮ್ ಚೇಂಬರ್ ಗೆ  ತೆರಳಿ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಆರ್‌ಜೆ ರಶ್ಮಿ

    ಬೆಂಗಳೂರು: ರಾಜರಥ ತಂಡ ಸಂದರ್ಶನದ ವೇಳೆ ಮಾತನಾಡಿದ ಪದಗಳಿಂದ ಕನ್ನಡಿಗರಿಗೆ ಆಗಿರುವ ನೋವಿಗೆ ಆರ್‌ಜೆ ರಶ್ಮಿ ಕನ್ನಡಿಗರ ಕ್ಷಮೆ ಕೇಳಿದ್ದಾರೆ.

    ಚಿತ್ರ ತಂಡ ಬಳಸಿದ ಪದಗಳು ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡಿದೆ. ಪ್ರತಿ ದಿನ ಒಂದೊಂದು ತಿರುವು ಪಡೆದುಕೊಂಡು ಕನ್ನಡಿಗರಿಗೆ ಬೇಸರ ಉಂಟು ಮಾಡಿದೆ. ಹಾಗಾಗಿ ಇವತ್ತು ನಾನೆ ಖುದ್ದು ಸಾರಾ ಗೋವಿಂದ್ ಅವರನ್ನು ಹುಡುಕಿ ಕೊಂಡು ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಬಂದಿದ್ದೇನೆ. ಭೇಟಿಗೆ ಅವಕಾಶ ಮಾಡಿಕೊಟ್ಟ ಸಾರಾ ಗೋವಿಂದ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    ನಮ್ಮ ಕಾಯಕ್ರಮದಿಂದ ಕನ್ನಡಿಗರಿಗೆ ನೋವಾಗಿದೆ ನಮ್ಮ ಕಡೆಯಿಂದ ಕ್ಷಮೆ ಇರಲಿ. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕ್ರಮದಲ್ಲಿ ಈ ರೀತಿ ಘಟನೆಗಳಿಗೆ ಅವಕಾಶ ಮಾಡಿಕೊಡವುದಿಲ್ಲ ಎಂದು ಭರವಸೆ ನೀಡಿದ್ದಾರೆ.

    ನನ್ನ ಪ್ರಶ್ನೆಗೆ ಆ ರೀತಿ ಉತ್ತರ ಕೊಟ್ಟರು ಯಾಕೆ ಪ್ರತಿಕ್ರಿಯಿಸಿಲ್ಲ ಅಂತ ನನ್ನನ್ನು ಜನ ಪ್ರಶ್ನೆ ಮಾಡುತ್ತಿದ್ದಾರೆ. ಆ ಕ್ಷಣದಲ್ಲಿ ಹೊಳೆದಿಲ್ಲ ಕ್ಷಮಿಸಿ ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳುತ್ತೇನೆ. ಹೀಗಾದಲ್ಲಿ ತಕ್ಷಣವೇ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

    ಕನ್ನಡಿಗರ ಮನಸ್ಸಿಗೆ ನೊವಾಗುವಂತಹ ವಿಚಾರ ಬಂದಾಗ ಎಚ್ಚರದಿಂದ ಇರುತ್ತೇನೆ. ಇಷ್ಟು ವರ್ಷಗಳ ಕಾಲ ಆರ್‍ಜೆ ಆಗಿದ್ದೇನೆ. ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ಕೊಡುವಂತಹ ಕಾರ್ಯಕ್ರಮಗಳನ್ನು ಹುಟ್ಟು ಹಾಕಿದ್ದೇನೆ. ಕಳೆದ ಒಂದು ವರ್ಷದಲ್ಲಿ ನಮ್ಮ ಕಾರ್ಯಕ್ರಮಕ್ಕೆ ನಹಳಷ್ಟು ಚಿತ್ರ ತಂಡದವರು ಬಂದಿದ್ದಾರೆ. ಇನ್ನಮುಂದೆ ಕೂಡ ನಿಮ್ಮ ಸಹಕಾರ ಹೀಗೆ ಇರಲಿ. ನಮ್ಮ ಕಾರ್ಯಕ್ರಮದ ಉದ್ದೇಶ ಚಿತ್ರದ ಪ್ರಚಾರಕ್ಕಷ್ಟೇ ಸೀಮಿತ ವಾಗಿರುತ್ತದೆ ಎಂದು ಮತ್ತೊಮ್ಮೆ ಹೇಳಿ ಕನ್ನಡಿಗರಲ್ಲಿ ರಶ್ಮಿ ಅವರು ಕ್ಷಮಾಪಣೆ ಕೇಳಿದ್ದಾರೆ. ಇದನ್ನೂ ಓದಿ: ರಾಜರಥ ಸಿನಿಮಾ ತಂಡದ ವಿರುದ್ಧ ಮತ್ತೊಂದು ದೂರು ದಾಖಲು

    ಸಾರಾ ಗೋವಿಂದ್ ಮಾತನಾಡಿ ಒಂದು ಹೆಣ್ಣು ಮಗಳು ಖುದ್ದು ಬಂದು ಮೊದಲ ಬಾರಿ ಆಗಿರುವ ತಪ್ಪಿಗೆ ಕ್ಷಮಾಪಣೆ ಕೇಳುತ್ತಿದ್ದಾರೆ. ಕನ್ನಡಿಗರು ಔದಾರ್ಯದಿಂದ ಕ್ಷಮಿಸಬೇಕೆಂದು ತಿಳಿಸಿದರು. ಇದನ್ನೂ ಓದಿ: ದಯವಿಟ್ಟು ಕ್ಷಮಿಸಿ, ಇನ್ನು ಮುಂದೆ ಹೀಗೆ ಆಗಲ್ಲ: ಅನೂಪ್ ಭಂಡಾರಿ

  • ರಾಜರಥ ಸಿನಿಮಾ ತಂಡದ ವಿರುದ್ಧ ಮತ್ತೊಂದು ದೂರು ದಾಖಲು

    ರಾಜರಥ ಸಿನಿಮಾ ತಂಡದ ವಿರುದ್ಧ ಮತ್ತೊಂದು ದೂರು ದಾಖಲು

    ಬೆಂಗಳೂರು: ರಾಜರಥ ಸಿನಿಮಾ ತಂಡದ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.

    ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ರಾಜರಥ ಸಿನಿಮಾ ತಂಡದ ವಿರುದ್ಧ ದೂರು ನೀಡಿದ್ದು, ತಕ್ಷಣ ರಾಜರಥ ಸಿನಿಮಾ ಪ್ರದರ್ಶನ ನಿಲ್ಲಿಸದೆ ಇದ್ದರೆ ಪ್ರತಿಭಟನೆ ನಡೆಸುವ ಕುರಿತು ಎಚ್ಚರಿಕೆ ನೀಡಿದೆ. ಅಲ್ಲದೇ ರಾಜರಥ ಸಿನಿಮಾ ನಟ ನಟಿ ಮತ್ತು ನಿರ್ದೇಶಕರನ್ನು ಆರು ತಿಂಗಳ ಕಾಲ ಚಿತ್ರೋದ್ಯಮದಿಂದ ಅಮಾನತು ಮಾಡಬೇಕು ಎಂದು ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಂದರ್ಶನದಲ್ಲಿ ಕನ್ನಡ ಸಿನಿಮಾವನ್ನ ನೋಡದೇ ಇರುವರು ಅಂತ ಹೇಳಿಲ್ಲ, ರಾಜರಥ ಸಿನಿಮಾವನ್ನ ನೋಡದೇ ಇರುವವರು ಕಚಡಾಗಳು ಎಂದು ಹೇಳಿಕೆ ಕೊಟ್ಟಿರುವುದು ನೋವುಂಟು ಮಾಡಿದೆ ಎಂದು ದೂರಿನಲ್ಲಿ ಸಂಘಟನೆ ಆರೋಪಿಸಿದೆ.

    ಕರ್ನಾಟಕ ಸಂಘಟನೆಗಳ ಒಕ್ಕೂಟ ಇದೇ ಕಾರಣಕ್ಕಾಗಿ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಚಿತ್ರ ತಂಡದ ವಿರುದ್ಧ ಮಂಗಳವಾರ ದೂರು ದಾಖಲಿಸಿತ್ತು.

    ಖಾಸಗಿ ರೇಡಿಯೋ ಕಾರ್ಯಕ್ರಮದಲ್ಲಿ ಭಾಗಿವಹಿಸಿದ್ದ ರಾಜರಥ ಸಿನಿಮಾ ತಂಡ, ರಾಜರಥ ಸಿನಿಮಾ ನೋಡದ ಪ್ರೇಕ್ಷಕ “ಕಚಡ ನನ್ಮಕ್ಳು” ಎನ್ನುವ ಹೇಳಿಕೆ ನೀಡಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಸಾರ್ವಜನಿಕ ವಲಯದಿಂದ ತೀವ್ರ ಅಕ್ರೋಶ ವ್ಯಕ್ತವಾಗಿತ್ತು.  ಇದನ್ನೂ ಓದಿ: ರಾಜರಥ ಸಿನಿಮಾ ವಿವಾದದ ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ ರ‍್ಯಾಪಿಡ್ ರಶ್ಮಿ

    ಈ ಕುರಿತು ಮಂಗಳವಾರ ಫೀಲ್ಮ ಚೇಂಬರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿತ್ರದ ನಿರ್ದೇಶಕ ಹಾಗೂ ನಾಯಕರಾದ ಭಂಡಾರಿ ಸಹೋದದರು ಚಿತ್ರರಂಗ ಹಾಗೂ ಕನ್ನಡ ಅಭಿಮನಿಗಳ ಕ್ಷಮೆ ಕೋರಿದ್ದರು. ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗು ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಸಂದರ್ಶನಕ್ಕು ಮುನ್ನ, ಹಲವರು ಕನ್ನಡ ಸಿನಿಮಾ ನೋಡುವುದಿಲ್ಲ, ಹಲವಾರು ಒಳ್ಳೆ ಚಿತ್ರಗಳು ಬರುತ್ತಿವೆ ಆದರು ಏಕೆ ಹೀಗೆ, ಎಂದು ಚರ್ಚಿಸಿದ್ದೆವು. ಹಾಗೆ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರವದು. ಇದು ಖಂಡಿತವಾಗಿಯು ಕನ್ನಡ ಪ್ರೇಕ್ಷಕರನ್ನುದ್ದೇಶಿಸಿ ಹೇಳಿದ ಮಾತಲ್ಲ. ನಾವು ಏನೇ ಯಶಸ್ಸು ಕಂಡಿದ್ದರೂ ಅದಕ್ಕೆ ಪ್ರೇಕ್ಷಕರೇ ಕಾರಣ. ನಮ್ಮ ಯಾವುದೇ ಬೇರೆ ಸಂದರ್ಶನಗಳನ್ನು ನೋಡಿದರೂ ನಮ್ಮ ಗೆಲುವಿಗೆ ಪ್ರೇಕ್ಷಕರೆ ಕಾರಣ ಎಂದು ಹಲವು ಬಾರಿ ಹೇಳಿದ್ದೇವೆ. ಕನ್ನಡ ಮತ್ತು ಕನ್ನಡ ಸಿನಿಮಾದ ಬಗ್ಗೆ ನಮಗೆ ಅಪಾರ ಅಭಿಮಾನ, ಅದಕ್ಕಾಗಿಯೇ ಪ್ರತಿ ಹಾಡಿನಲ್ಲೂ ಅಚ್ಚ ಕನ್ನಡವನ್ನೇ ಬಳಸುತ್ತೇವೆ. ಕಾರ್ಯಕ್ರಮದಲ್ಲಿ ತಪ್ಪಾಗಿ ಆಡಿದ ಮಾತುಗಳನ್ನು ದಯವಿಟ್ಟು ಮನ್ನಿಸಿ. ಯಾರಿಗೂ ನೋವುಂಟು ಮಾಡಬೇಕು ಅನ್ನುವ ಉದ್ದೇಶ ನಮ್ಮದಲ್ಲ. ನಿಮ್ಮ ಆಶಿರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಬರೆದು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

  • ರಾಜರಥ ಸಿನಿಮಾ ವಿವಾದದ ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ ರ‍್ಯಾಪಿಡ್ ರಶ್ಮಿ

    ರಾಜರಥ ಸಿನಿಮಾ ವಿವಾದದ ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ ರ‍್ಯಾಪಿಡ್ ರಶ್ಮಿ

    ಬೆಂಗಳೂರು: ಇತ್ತೀಚೆಗೆ ರಾಜರಥ ಸಿನಿಮಾದ ವಿವಾದವೊಂದು ಅಂತ್ಯವಾಗಿದೆ. ವಿವಾದಕ್ಕೆ ಸಂಬಂಧಿಸಿದಂತೆ ರಾಜರಥ ಸಿನಿಮಾ ನಿರ್ದೇಶಕ ನಿರೂಪ್ ಭಂಡಾರಿ ಮತ್ತು ನಟ ಅನೂಪ್ ಭಂಡಾರಿ ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ಜನತೆಯಲ್ಲಿ ಕ್ಷಮೆ ಕೇಳಿದ್ದಾರೆ.

    ರ‍್ಯಾಪಿಡ್ ರಶ್ಮಿ ನಡೆಸಿದ ಸಂದರ್ಶನದಲ್ಲಿ ನಿರೂಪ್ ಭಂಡಾರಿ, ತಮ್ಮ `ರಾಜರಥ’ ಸಿನಿಮಾ ನೋಡದೇ ಇರುವರು ಕಚಡಾ ನನ್ಮಕ್ಕಳು ಅಂತಾ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ರು. ಇದರ ಜೊತೆಗೆ ಅವಂತಿಕಾ ಶೆಟ್ಟಿ ಮತ್ತು ನಿರೂಪ್ ಭಂಡಾರಿ ಸಹ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಕಾರ್ಯಕ್ರಮ ನಿರೂಪಕಿ ರ್ಯಾಪಿಡ್ ರಶ್ಮಿ ರಾಜರಥ ಸಿನಿಮಾದ ಬಗ್ಗೆ ತಮ್ಮ ಫೇಸ್‍ಬುಕ್ ಪೇಜ್ ನಲ್ಲಿ ಪೂರ್ಣ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡು ಸ್ಪಷ್ಟನೆ ನೀಡಿದ್ದಾರೆ.

    ರ‍್ಯಾಪಿಡ್ ರಶ್ಮಿ ಹೇಳಿದ್ದು ಹೀಗೆ:
    ಎಲ್ಲರಿಗು ನಮಸ್ಕಾರ – ರಾಜರಥ ವಿವಾದದ ಬಗ್ಗೆ ನನ್ನ ಉತ್ತರ ವನ್ನ ಎದುರು ನೋಡ್ತಿರೋರಿಗೆ ನನ್ನ ಆಲೋಚನೆಗಳು ಹೀಗೆ… ಈ ಸಮಯದಲ್ಲಿ ಕೆಲವರು ಏನು ಹೇಳಿದ್ರು ಹೇಳದಿದ್ರೂ ತಪ್ಪನ್ನೇ ಹುಡುಕದೆ natural ಆಗಿದೆ. ನೀವು ಒಬ್ಬ ತಪ್ಪು ಒಪ್ಪುಗಳನ್ನ ಸಮವಾಗಿ ಪರಿಶೀಲಿಸುವ ಪ್ರೇಕ್ಷಕ/ಪ್ರೇಕ್ಷಕಿ ಯಾಗಿ ಓದುವಿರಿ ಅಂತ ಭರವಸೆ ಇದೆ.

    ರ‍್ಯಾಪಿಡ್ ರಶ್ಮಿ ಆರ್‍ಜೆ ಆಗಿ, ಈಗ ನಿರೂಪಕಿ, ಗಾಯಕಿ ಮತ್ತು ನಟಿ ಹೀಗೆ ಇಷ್ಟು ವರುಷ ಪ್ರೀತಿ ಕೊಟ್ಟು ನನ್ನ ಬೆಳೆಸಿದ್ದೀರಾ 11 ವರುಷದ ಈ ಕೆರಿಯರ್ ನಲ್ಲಿ ನನ್ನ ಮಾತಿನ ದಾಟಿ, ಹಾಸ್ಯ ಮನೋಭಾವ, ತರಲೆ ಮಾತು, ಬೋಲ್ಡ್ ಆಗಿ ಮಾತಾಡಿದಾಗ ಬೆನ್ನು ತಟ್ಟಿದ್ದೀರಾ.. ಕೆಲವರು ಏನು ಹಿಂಗೇ ಮಾತಾಡ್ತಾರೆ ಅಂತ ಕಣ್ಣು ಬಾಯಿ ಬಿಟ್ಟಿದ್ದೀರಾ.. ಒಬ್ಬರ ಶೈಲಿ ಇಷ್ಟ ಪಡೋದು, ಪಡದೆ ಇರೋದು ಅದಕ್ಕೆ ನೀವು ಸ್ವತಂತ್ರರು. ಪ್ರೇಕ್ಷಕರೇ ಯಾವತ್ತೂ ಬೆಳೆಸೋದು, ಇನ್ನು ಯಾವುದೋ ವಿವಾದ ಆದಾಗ ತಪ್ಪಿದ್ದರೆ ಬೀಳಿಸಿ ಎಚ್ಚರಿಸೋದು. ಇದನ್ನೂ ಓದಿ: ದಯವಿಟ್ಟು ಕ್ಷಮಿಸಿ, ಇನ್ನು ಮುಂದೆ ಹೀಗೆ ಆಗಲ್ಲ: ಅನೂಪ್ ಭಂಡಾರಿ

    ಈಗ ರಾಜರಥ ಸಂದರ್ಶನ ನಡೆದ ಘಟನೆ ಎಲ್ಲ ತಿರುವನ್ನು ತೆಗೆದುಕೊಂಡು ಕೆಲವರು ನನ್ನ ಕಡೆ ತಿರುಗಿ ಪ್ರಶ್ನೆ ಕೇಳಿ, ಎಡುವಿದ್ದಿಯ, ಪ್ರಚೋದಿಸಿದ್ದೀಯಾ ತಿದ್ಕೋ ಅಂತ ಕೆಲವು ಕಮೆಂಟ್ ಬರೆದಿದ್ದಾರೆ. ಎಲ್ಲವನ್ನು ಗೌರವಿಸಿ ಕೂಲಂಕುಷವಾಗಿ ಎಲ್ಲ ಆಯಾಮ ದಲ್ಲೂ ನೋಡಿ ತಿದ್ದುಕೊಂಡು ಮುಂದೆ ನಡೀತಾ ನಡೆದ ವಿಚಾರದ ಬಗ್ಗೆ ನನಗಿರುವ ಕೆಲವು ವಿಚಾರಗಳು/ ಪ್ರಶ್ನೆ ಹೀಗಿದೆ.

    ನಿನ್ನೆ ಪೂರಾ ಹರಿದು ಬಂದ ಮೆಸೇಜ್, ಈ ಸಮಯದಲ್ಲಿ ನನಗೆ ನಗಿಸಿದ ಒಂದು ಜೋಕ್.. ಕೆಲವರ ಮೀಮ್ಸ್, ಟ್ರೋಲ್!! – 1 ಲಕ್ಷ ಕೊಟ್ಟು ಕಾರ್ಯಕ್ರಮಕ್ಕೆ ಬರಬೇಕು, ರೊಚ್ಚಿಗೆಬ್ಬಿಸುವ ಪ್ರಶ್ನೆ!! ಇಷ್ಟು ಹಣ ಮೂವಿ ಪ್ರಮೋಶನ್ ಕೊಟ್ಟಿರೋ ಒಬ್ಬರು ಬರಲಿ ಸಾಕ್ಷಿಗೆ.. ಇಲ್ಲದ ಸಲ್ಲದ ಕಸ ಕಡ್ಡಿ ಎಲ್ಲ ಸೇರಿಸೋದೇ ಸಿಕ್ಕಿದ್ದೇ ಚಾನ್ಸ್ ಅಂತಾ?

    ವತ್ತಿಗೂ ಕೇಳಿರುವ ಪ್ರಶ್ನೆಯ್ ನನಗೆ ತಪ್ಪನಿಸಿಲ್ಲ, ಕುಣೀಲಾರದವರು ನೆಲ —- ಅಂದ್ರಂತೆ ಕಥೆ ಇದು.

    “ಡ್ಯಾಶಿಂಗ್ ಪ್ರಶ್ನೆಯ “ಸೆಗಮಂಟ್ ಕೇಳಿದ ಪ್ರಶ್ನೆ – ರಾಜರಥ ಸಿನಿಮಾ ನೋಡದವರು —– , ಅವರು ಕೊಟ್ಟ ಉತ್ತರ ನನ್ನ ಕಂಟ್ರೋಲ್ ನಲ್ಲಿ ಇರಲಿಲ್ಲ.. ವಿಷಯ ಲಕ್ಷಾಂತರ ಕನ್ನಡ ಪದಗಳಿವೆ ತುಂಬಿಸಲಿಕ್ಕೆ. ಉದಾಹರಣೆ- ಒಳ್ಳೆ ಸಿನಿಮಾ ಮಿಸ್ ಮಾಡಿಕೊಳ್ಳೋರು ,ಬ್ಯುಸಿ ಇರೋರು , ಕನ್ನಡ ಬರದಿದ್ದವರು, ಕನ್ನಡ ಸಿನಿಮಾಗಳನ್ನ ಬೆಳಸದೆ ಇರೋರು ..ಇತ್ಯಾದಿ ಇತ್ಯಾದಿ .. ಆದ ತಪ್ಪಿಗೆ ಅವರು ಅವರ ಸಮರ್ಥನೆ ಕೊಟ್ರು.. ನನ್ನ ಕಡೆಯಿಂದ ಎಡಿಟೆಡ್ ವಿಡಿಯೋ ನಲ್ಲಿ ತಪ್ಪಾಗಿ ಪೊರಟೆರಿ ಗೊಂಡದ್ದು ನಕ್ಕಿದ್ದು ಮತ್ತು ಚಪ್ಪಾಳೆ ಹೊಡೆದದ್ದು ಅದಕ್ಕೆ ಕ್ಷಮಿಸಿ.. ಆ ಸಂಪೂರ್ಣ ವಿಡಿಯೋ ನೋಡಿ ಏನಾಯಿತು ಆ ಫ್ಲೋ ನಲ್ಲಿ ಗೊತ್ತಾಗತ್ತೆ . ನಾನು ಯಾರಿಗೂ ಹಾಗೆ ಉತ್ತರ ಕೊಡಕ್ಕೆ ಪ್ರಚೋದಿಸಿಲ್ಲ, ಅವರವರ ಮಾತಿಗೆ ಅಭಿಪ್ರಾಯಕ್ಕೆ ಅವರೇ ಜವಾಬ್ದಾರರು . ಇನ್ನು ಅದೇ ರೌಂಡ್ ಅಲ್ಲಿ -ರಾಜರಥ ಸಿನಿಮಾ ಫಸ್ಟ್ ಡೇ, ಫಸ್ಟ್ ಶೋ ನೋಡೋರು —— ಅಂತ ಕೇಳಿದಾಗ ಅವರೇ ದೇವತೆ ಗಳು/ ದೇವರುಗಳು ಅಂತ ಅದೇ ಸಂದರ್ಶನದಲ್ಲಿ ಹೇಳಿದ್ದಾರೆ .. ಎರಡನ್ನು ನೀವೇ ನೋಡಿ. ಇಷ್ಟೆಲ್ಲಾ ಆಗಿ ಬೇಕು ಬೇಕು ಅಂತ ಆಗಿದ್ದಲ್ಲ .. ಎಡವಟ್ಟಾಗಿ ಊಹಿಸದೇ ಗೊತ್ತಿಲದೇ ತೊಗೊಂಡ ತಿರುವಿಗೆ ಕ್ಷಮೆ ಇರಲಿ. ಈ ಘಟನೆ ಇಂದ ಪಾಠ ಕಲಿತು, ತಿದ್ದುಕೊಂಡು ಇನ್ನು ಮುಂದಿನ ದಿನದಲ್ಲೂ ನಿಮ್ಮ ಹೆಮ್ಮೆಯ ರಶ್ಮಿ ನಡೆಸೋ ಜವಾಬ್ದಾರಿ ಇರೋ ಶೋ ಆಗಿ ಮುಂದಿನ ದಿನಗಳಲ್ಲೂ ಇರುವೆ.

    2 ವಾರದ ಹಿಂದೆ ಮಾಡಿದ ರಾಜರಥ ಎಫ್ ಬಿ ಲೈವ್ .. ರಿಲೀಸ್ ಆಗೋ ಮುಂಚೆ ನಡೆದ ಎಫ್ ಬಿ ಲೈವ್ , ಎಡಿಟ್ ಆಗಿರೋ ವಿಡಿಯೋ ವೈರಲ್ ಆಗಿ ಇಷ್ಟೆಲ್ಲ ಆಗಿದೆ, ಈಗ ಒರಿಜಿನಲ್ ವಿಡಿಯೋ ಅಪ್ಲೋಡ್ ಮಾಡ್ತೀವಿ ನೋಡಿ.

    ಮತ್ತೆ ಸಂದರ್ಶನದಲ್ಲಿ ಅವರಿಂದ ಬಾಯಿ ತಪ್ಪಿ ಬಂದ ಪದ ಬಳಕೆ ಬಗ್ಗೆ ಬೇಸರ ನನಗೂ ಇದೆ, ಮಾತಾಡಿದವರೇ ಕ್ಷಮೆ ಕೇಳಿದ್ದಾರೆ.. ನನ್ನ ರಿಯಾಕ್ಷನ್ ಬಗ್ಗೆ ನನಗೂ ಪ್ರಶ್ನೆ ಇದೆ.. ಯಾಕೆ ಹೀಗೆ ಮಾತಾಡಿದ್ರಿ ಅಂತ ಎದುರು ಬೀಳಕ್ಕೆ – ರಾಜರಾಥ ಕನ್ನಡ ಮತ್ತು ತೆಲಗು ಎರಡು ಭಾಷೆ ಸಿನಿಮಾ, ಇವರು ಉತ್ತರ ಆ ಫ್ಲೋ ನಲ್ಲಿ ಯಾರಿಗೆ ಹಿಂಗೇ ಹೇಳಿದ್ರು ಅಂತ ರೀ ಆಯ್ಯಕ್ಷನ್ ನ ಅರಗಿಸ್ಕೊಂಡು ಮತ್ತೆ ಅದು ಮುಂದೊಂದು ದಿನ ಕನ್ನಡಿಗರಿಗೆ ಹಿಂಗೇ ತಿರುಗಿಸಿರೋದು ಅಂತ ಟ್ರೋಲ್ ಆಗತ್ತೆ ಆ ಕ್ಷಣ ಹೊಳಿಯಲಿಲ್ಲ .. ಮುಂದಿನ ದಿನ ಪ್ರಶ್ನೆಯ ಕೇಳೋ ಭರದಲ್ಲಿ ಉತ್ತರಕ್ಕೂ ಏನು ಹೇಳಿದ್ರು ಯೋಚಿಸಿ ತಪ್ಪಿದ್ದರೆ ತಿದ್ದಿ ಮುಂದೆ ಪ್ರಶ್ನೆಗೆ ಹೋಗುವೆ .ಈಗ ನಾನು ಕನ್ನಡದವಳೇ ಆಗಿ, ನಾನು ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಎಲ್ಲೂ ತಪ್ಪಾಗಿ ಮಾತಾಡಿಲ್ಲ ಇಲ್ಲಿವರೆಗೂ .. ಮುಂದೇನೂ ಸಾಧ್ಯವೇ ಇಲ್ಲ.. ಮತ್ತೆ ಈ ವಿಡಿಯೋ ನೋಡಿ. ನಮ್ಮ ಶೋ ಇಂದ ಏನಾದ್ರು ತಪ್ಪಾಗಿದ್ಯಾ?? ಈ ವಿಡಿಯೋ ನೋಡಿ ನೀವೇ ನಿರ್ಧಾರ ಮಾಡಿ, ತಪ್ಪು ಆಗಿದ್ದರೆ ಮತ್ತೆ ಕ್ಷಮಿಸಿ?? 80 ಸಿನಿಮಾಗಳನ್ನು ಜವಾಬ್ದಾರಿ ಇಂದ ಪ್ರಮೋಟ್ ಮಾಡಿದ್ದೀವಿ , ಮುಂದೆ ಇನ್ನ್ನು ಹೆಚ್ಚು ಜಾಗರೂಕರಾಗಿ ಇನ್ನು ನಿಭಾಯಿಸ್ತೀವಿ. ಅಲ್ಲಿದ್ದ ಸ್ಟುಡಿಯೋ ಆಡಿಯೆನ್ಸ್ ಚಪ್ಪಾಳೆ ಹೊಡಿದಿದ್ದಾರೆ ಎಲ್ಲಾ ಉತ್ತರಕ್ಕೂ ಮತ್ತೆ ಕೆಲವು ಪ್ರಶ್ನೆ ಗೆ ನಾನು ಚಪ್ಪಾಳೆ ಹೊದೆದಿದ್ದೀನಿ, ಉದ್ದೇಶ ಪೂರ್ವಕ ಪ್ರತಿಕ್ರಿಯ ಅಲ್ಲ ಅದು ಮತ್ತು ನಾವು ಕೊಟ್ಟಿರೋ ಓರಿಜಿನಲ್ ವಿಡಿಯೋ ನೋಡಿ

    ಈ ಮಧ್ಯೆ ನಾವಿದ್ದೀವಿ, ಕೇಳಿದ ಪ್ರಶ್ನೆ ತಪ್ಪಿಲ್ಲ ಅಂದವರಿಗೆ…, ಇಲ್ಲ ಬೇರೆ ಪ್ರಶ್ನೆಇರಲಿಲ್ಲವಾ ಕೆಳಕ್ಕೆ ಅಂದವರಿಗೆ …

    ಬೇಸರ ಅಂದರೆ , ಸಂಪೂರ್ಣ ಸಂದರ್ಶನ ನೋಡಿ, ತಮಗೆ ಬೇಕಾಗಿರೋ ಹಾಗೆ 40 -50 ಸೆಕೆಂಡ್ ವಿವಾದಾತ್ಮಕ ಹೇಳಿಗೆ ಆಗಿ ಕತ್ತರಿ ಹಾಕಿರೋ ಎಡಿಟೆಡ್ ವಿಡಿಯೋ ಓಡಾಡಿದೆ. ಕನ್ನಡಿಗರು ವಿಶಾಲ ಹೃದಯದವರು ಹಾಗೆ ಪ್ರಜ್ಞಾವಂತರು, ಅವರ ಭಾವನೆಗಳ ಜೊತೆ ಆಟಾಡೋ ಹಾಗೆ ಎಡಿಟ್ ಮಾಡಿರೋರಿಗೆ ಕನ್ನಡಿಗರೇ ಉತ್ತರ ಕೊಡಲಿ. ಕೊನೆ ತೀರ್ಪು ನಿಮ್ಮದೇ ..ಆದರೂ ಫುಲ್- ವಿಡಿಯೋ ಯಾಕೆ ಸ್ವಾಮಿ ಹಾಕಿಲ್ಲ ! !!??

    ಈಗ ಲೈಕ್ ಮಾಡಿ, ಒರಿಜಿನಲ್ ವಿಡಿಯೋ ಶೇರ್ ಮಾಡಿ, ಮತ್ತು ಇಷ್ಟೊತ್ತು ಹಂಚಿಕೆ ಆಗಿರೋ ಎಡಿಟೆಗ್ ಮಾಡಿದ ತಮಾಷೆಗೆ ——-?????

    ಮುಂದಿನ ದಿನದಲ್ಲೂ ನಿಮ್ಮ ಪ್ರೀತಿ, ಅಭಿಮಾನಕ್ಕೆ ಧಕ್ಕೆ ಬಾರದ ಹಾಗೆ ನಡೆಯುವೆ.
    ಇಂತಿ ನಿಮ್ಮ ರ‍್ಯಾಪಿಡ್ ರಶ್ಮಿ.

    ಅನೂಪ್ ಭಂಡಾರಿ ಫೇಸ್‍ಬುಕ್ ನಲ್ಲಿ ಕ್ಷಮೆ:
    ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗು ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಸಂದರ್ಶನಕ್ಕೂ ಮುನ್ನ, ಹಲವರು ಕನ್ನಡ ಸಿನಿಮಾ ನೋಡುವುದಿಲ್ಲ, ಹಲವಾರು ಒಳ್ಳೆ ಚಿತ್ರಗಳು ಬರುತ್ತಿವೆ ಆದರು ಏಕೆ ಹೀಗೆ, ಎಂದು ಚರ್ಚಿಸಿದ್ದೆವು. ಹಾಗೆ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರವದು. ಇದು ಖಂಡಿತವಾಗಿಯು ಕನ್ನಡ ಪ್ರೇಕ್ಷಕರನ್ನುದ್ದೇಶಿಸಿ ಹೇಳಿದ ಮಾತಲ್ಲ. ನಾವು ಏನೇ ಯಶಸ್ಸು ಕಂಡಿದ್ದರೂ ಅದಕ್ಕೆ ಪ್ರೇಕ್ಷಕರೇ ಕಾರಣ. ನಮ್ಮ ಯಾವುದೇ ಬೇರೆ ಸಂದರ್ಶನಗಳನ್ನು ನೋಡಿದರೂ ನಮ್ಮ ಗೆಲುವಿಗೆ ಪ್ರೇಕ್ಷಕರೇ ಕಾರಣ ಎಂದು ಹಲವು ಬಾರಿ ಹೇಳಿದ್ದೇವೆ. ಕನ್ನಡ ಮತ್ತು ಕನ್ನಡ ಸಿನಿಮಾದ ಬಗ್ಗೆ ನಮಗೆ ಅಪಾರ ಅಭಿಮಾನ, ಅದಕ್ಕಾಗಿಯೇ ಪ್ರತಿ ಹಾಡಿನಲ್ಲೂ ಅಚ್ಚ ಕನ್ನಡವನ್ನೇ ಬಳಸುತ್ತೇವೆ. ಕಾರ್ಯಕ್ರಮದಲ್ಲಿ ತಪ್ಪಾಗಿ ಆಡಿದ ಮಾತುಗಳನ್ನು ದಯವಿಟ್ಟು ಮನ್ನಿಸಿ. ಯಾರಿಗೂ ನೋವುಂಟು ಮಾಡಬೇಕು ಅನ್ನುವ ಉದ್ದೇಶ ನಮ್ಮದಲ್ಲ. ನಿಮ್ಮ ಆಶಿರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಬರೆದು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

  • ದಯವಿಟ್ಟು ಕ್ಷಮಿಸಿ, ಇನ್ನು ಮುಂದೆ ಹೀಗೆ ಆಗಲ್ಲ: ಅನೂಪ್ ಭಂಡಾರಿ

    ದಯವಿಟ್ಟು ಕ್ಷಮಿಸಿ, ಇನ್ನು ಮುಂದೆ ಹೀಗೆ ಆಗಲ್ಲ: ಅನೂಪ್ ಭಂಡಾರಿ

    ಬೆಂಗಳೂರು: ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ನಮಗೆ ಇದರಿಂದ ತುಂಬ ನೋವಾಗಿದೆ ಇನ್ಮುಂದೆ ಹೀಗೆ ಆಗುವುದಿಲ್ಲ. ನಾವು ಕನ್ನಡಿಗರಿಗೆ ನೋಯಿಸಬೇಕು ಅಂತ ಆ ರೀತಿ ಮಾತನಾಡಲಿಲ್ಲ ಎಂದು ಹೇಳಿ ರಾಜರಥ ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ.

    ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರ್ಯಾಪಿಡ್ ರಶ್ಮಿ ಅವರಲ್ಲಿ ಆ ವಿಡೀಯೊವನ್ನ ಡಿಲೀಟ್ ಮಾಡಲು ತಿಳಿಸಿದ್ದೇವೆ. ಯಾವುದೋ ಸಮಯದಲ್ಲಿ ಹೀಗೆ ಆಗಿ ಹೋಗಿದೆ ಎಂದು ಹೇಳಿದರು. ಈ ವೇಳೆ ರಾಜರಥ ಚಿತ್ರ ತಂಡ ಎದ್ದುನಿಂತು ಕನ್ನಡಿಗರ ಕ್ಷಮೆ ಯಾಚಿಸಿತು.

    ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದ್ ಮಾತನಾಡಿ, ನಿನ್ನೆ ಸಂಜೆಯಿಂದ ದೂರವಾಣಿ ಕರೆಗಳು ಬರುತ್ತಿದೆ. ಸಾರ್ವಜನಿಕವಾಗಿ ತಪ್ಪು ನಡೆದಿದೆ ನೀವೇ ಕ್ಷಮೆ ಕೇಳಬೇಕು ಅಂತ ಹೇಳಿದಾಗ ಚಿತ್ರ ತಂಡದವರು ಬಂದಿದ್ದಾರೆ. ಚಿತ್ರ ರಿಲೀಸ್ ಆಗುವ ಮೊದಲೇ ಈ ರೀತಿ ಮಾತನಾಡಿದ್ದಾರೆ. ಕೆಲವರು ಕೇಳುವ ಪ್ರಶ್ನೆಗಳು ಉದ್ರೇಕಗೊಳಿಸುತ್ತದೆ. ಎಂತಹವರಿಗಾದರು ಸಿಟ್ಟು ತರಿಸುತ್ತೆ ಎಂದು ಹೇಳಿದರು.

    ಮಾಡಿದ ಸಿನಿಮಾಗಳೆಲ್ಲಾ ಹಿಟ್ ಆಗಲೇ ಬೇಕು ಅಂತ ಇಲ್ಲ. ಕೆಟ್ಟ ಪದವನ್ನು ಯಾರು ಬಳಸಿರಲಿಲ್ಲ. ರಾಜ್ ಕುಮಾರ್ ಆಗಿರಲಿ, ವಿಷ್ಣುವರ್ಧನ್, ಅಂಬರೀಶ್ ಯಾರೂ ಸಹ ಕೆಟ್ಟದಾಗಿ ಮಾತನಾಡಿರಲಿಲ್ಲ ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಚಿತ್ರತಂಡ ಪೂರ್ತಿ ಕನ್ನಡದವರು, ಕನ್ನಡಿಗರ ಬಗ್ಗೆ ಈ ರೀತಿಯ ಮಾತು ಸರಿಯಲ್ಲ ಎಂದರು.

    ಭಂಡಾರಿ ಸಹೋದರರು ಹೇಳಿದ್ದು ಏನು?
    ಸಂದರ್ಶನದ ನಡುವೆ ರ್ಯಾಪಿಡ್ ರಶ್ಮಿ “ರಾಜರಥ ಸಿನಿಮಾ ನೋಡದ ಪ್ರೇಕ್ಷಕರು______” ಎಂದು ಬಿಟ್ಟ ಸ್ಥಳವನ್ನು ತುಂಬಿಸುವಂತೆ ಕೇಳುತ್ತಾರೆ. ಮೊದಲು ಉತ್ತರಿಸಿದ ಅನೂಪ್ ಭಂಡಾರಿ ರಾಜರಥ ಸಿನಿಮಾ ನೋಡದ ಪ್ರೇಕ್ಷಕರು “ಕಚಡ ನನ್ ಮಕ್ಳು” ಎಂದು ಹೇಳುತ್ತಾರೆ. ನಂತರ ಆ ಪ್ರಶ್ನೆ ನಟಿ ಅವಾಂತಿಕಾ ಶೆಟ್ಟಿಗೆ ಹೋಗುತ್ತದೆ. ಅವರೂ ಸಹ ಅನೂಪ್ ಅವರ ಉತ್ತರವನ್ನೇ ಮತ್ತೆ ಹೇಳುತ್ತಾರೆ. ಕೊನೆಗೆ ನಿರೂಪ್ ಭಂಡಾರಿ ಕೂಡ ರಾಜರಥ ಸಿನಿಮಾ ನೋಡದ ಪ್ರೇಕ್ಷಕರು “ಕಚಡ ಮಾತ್ರವಲ್ಲ ಲೋಫರ್ ನನ್ ಮಕ್ಳು” ಎಂದು ಹೇಳಿದ್ದಾರೆ.

    ಫೇಸ್‍ಬುಕ್ ನಲ್ಲಿ ಕ್ಷಮೆ:
    ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗು ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಸಂದರ್ಶನಕ್ಕೂ ಮುನ್ನ, ಹಲವರು ಕನ್ನಡ ಸಿನಿಮಾ ನೋಡುವುದಿಲ್ಲ, ಹಲವಾರು ಒಳ್ಳೆ ಚಿತ್ರಗಳು ಬರುತ್ತಿವೆ ಆದರು ಏಕೆ ಹೀಗೆ, ಎಂದು ಚರ್ಚಿಸಿದ್ದೆವು. ಹಾಗೆ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರವದು. ಇದು ಖಂಡಿತವಾಗಿಯು ಕನ್ನಡ ಪ್ರೇಕ್ಷಕರನ್ನುದ್ದೇಶಿಸಿ ಹೇಳಿದ ಮಾತಲ್ಲ. ನಾವು ಏನೇ ಯಶಸ್ಸು ಕಂಡಿದ್ದರೂ ಅದಕ್ಕೆ ಪ್ರೇಕ್ಷಕರೇ ಕಾರಣ. ನಮ್ಮ ಯಾವುದೇ ಬೇರೆ ಸಂದರ್ಶನಗಳನ್ನು ನೋಡಿದರೂ ನಮ್ಮ ಗೆಲುವಿಗೆ ಪ್ರೇಕ್ಷಕರೇ ಕಾರಣ ಎಂದು ಹಲವು ಬಾರಿ ಹೇಳಿದ್ದೇವೆ. ಕನ್ನಡ ಮತ್ತು ಕನ್ನಡ ಸಿನಿಮಾದ ಬಗ್ಗೆ ನಮಗೆ ಅಪಾರ ಅಭಿಮಾನ, ಅದಕ್ಕಾಗಿಯೇ ಪ್ರತಿ ಹಾಡಿನಲ್ಲೂ ಅಚ್ಚ ಕನ್ನಡವನ್ನೇ ಬಳಸುತ್ತೇವೆ. ಕಾರ್ಯಕ್ರಮದಲ್ಲಿ ತಪ್ಪಾಗಿ ಆಡಿದ ಮಾತುಗಳನ್ನು ದಯವಿಟ್ಟು ಮನ್ನಿಸಿ. ಯಾರಿಗೂ ನೋವುಂಟು ಮಾಡಬೇಕು ಅನ್ನುವ ಉದ್ದೇಶ ನಮ್ಮದಲ್ಲ. ನಿಮ್ಮ ಆಶಿರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಬರೆದು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

  • ರಾಜರಥ ನೋಡದೇ ಇರೋರು ಕಚಡಾ ನನ್ಮಕ್ಳು – ಕ್ಷಮೆ ಕೇಳಿದ ಅನೂಪ್ ಭಂಡಾರಿ

    ರಾಜರಥ ನೋಡದೇ ಇರೋರು ಕಚಡಾ ನನ್ಮಕ್ಳು – ಕ್ಷಮೆ ಕೇಳಿದ ಅನೂಪ್ ಭಂಡಾರಿ

    ಬೆಂಗಳೂರು: ರಾಜರಥ ನೋಡದೇ ಇರೋರು ಕಚಡಾ ನನ್ಮಕ್ಳು ಎಂದಿದ್ದ ನಿರ್ದೇಶಕ ಅನೂಪ್ ಭಂಡಾರಿ ಈಗ ಕ್ಷಮೆ ಕೇಳಿದ್ದಾರೆ.

    ರಾಜರಥ ಸಿನಿಮಾದ ಸಂಬಂಧ ಮಹಿಳಾ ರೇಡಿಯೋ ಜಾಕಿಯೊಬ್ಬರು ನಡೆಸಿದ ಕಾರ್ಯಕ್ರಮದಲ್ಲಿ ನಿರ್ದೇಶಕ ಅನೂಪ್ ಭಂಡಾರಿ, ನಾಯಕ ನಿರೂಪ್ ಭಂಡಾರಿ ಮತ್ತು ಚಿತ್ರದ ನಾಯಕಿ ಅವಾಂತಿಕಾ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ರಾಜರಥ ಸಿನಿಮಾ ನೋಡದವರು “ಕಚಡ ನನ್ ಮಕ್ಳು” ಎಂದು ಮೂವರು ಹೇಳಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.

    ರಂಗಿತರಂಗ ಸಿನಿಮಾ ನಿರ್ದೇಶಿಸಿದ ಬಳಿಕ ಅನೂಪ್ ಭಂಡಾರಿ ರಾಜರಥವನ್ನು ನಿರ್ಮಿಸಿದ್ದರು. ಈ ಸಿನಿಮಾ ಎರಡು ವಾರಗಳ ಹಿಂದೆ ಬಿಡುಗಡೆಯಾಗಿತ್ತು. ಆದರೆ ‘ರಂಗಿತರಂಗ’ ರೇಂಜ್ ಗೆ ಈ ಸಿನಿಮಾ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಈಗ ‘ರಾಜರಥ’ ಸಿನಿಮಾ ನೋಡದ ಪ್ರೇಕ್ಷಕರಿಗೆ ಅಣ್ಣ-ತಮ್ಮ ಇಬ್ಬರೂ “ಕಚಡ ನನ್ ಮಕ್ಳು” ಎಂದು ಬೈದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಟೀಕೆ ವ್ಯಕ್ತವಾಗಿದೆ.

    ಭಂಡಾರಿ ಸಹೋದರರು ಹೇಳಿದ್ದು ಏನು?
    ಸಂದರ್ಶನದ ನಡುವೆ ನಿರೂಪಕಿ “ರಾಜರಥ ಸಿನಿಮಾ ನೋಡದ ಪ್ರೇಕ್ಷಕರು______” ಎಂದು ಬಿಟ್ಟ ಸ್ಥಳವನ್ನು ತುಂಬಿಸುವಂತೆ ಕೇಳುತ್ತಾರೆ. ಮೊದಲು ಉತ್ತರಿಸಿದ ಅನೂಪ್ ಭಂಡಾರಿ ರಾಜರಥ ಸಿನಿಮಾ ನೋಡದ ಪ್ರೇಕ್ಷಕರು “ಕಚಡ ನನ್ ಮಕ್ಳು” ಎಂದು ಹೇಳುತ್ತಾರೆ. ನಂತರ ಆ ಪ್ರಶ್ನೆ ನಟಿ ಅವಾಂತಿಕಾ ಶೆಟ್ಟಿಗೆ ಹೋಗುತ್ತದೆ. ಅವರೂ ಸಹ ಅನೂಪ್ ಅವರ ಉತ್ತರವನ್ನೇ ಮತ್ತೆ ಹೇಳುತ್ತಾರೆ. ಕೊನೆಗೆ ನಿರೂಪ್ ಭಂಡಾರಿ ಕೂಡ ರಾಜರಥ ಸಿನಿಮಾ ನೋಡದ ಪ್ರೇಕ್ಷಕರು “ಕಚಡ ಮಾತ್ರವಲ್ಲ ಲೋಫರ್ ನನ್ ಮಕ್ಳು” ಎಂದು ಹೇಳಿದ್ದಾರೆ.

    ಕ್ಷಮೆ ಕೇಳಿದ ಅನೂಪ್ ಭಂಡಾರಿ:
    ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗು ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಸಂದರ್ಶನಕ್ಕು ಮುನ್ನ, ಹಲವರು ಕನ್ನಡ ಸಿನಿಮಾ ನೋಡುವುದಿಲ್ಲ, ಹಲವಾರು ಒಳ್ಳೆ ಚಿತ್ರಗಳು ಬರುತ್ತಿವೆ ಆದರು ಏಕೆ ಹೀಗೆ, ಎಂದು ಚರ್ಚಿಸಿದ್ದೆವು. ಹಾಗೆ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರವದು. ಇದು ಖಂಡಿತವಾಗಿಯು ಕನ್ನಡ ಪ್ರೇಕ್ಷಕರನ್ನುದ್ದೇಶಿಸಿ ಹೇಳಿದ ಮಾತಲ್ಲ. ನಾವು ಏನೇ ಯಶಸ್ಸು ಕಂಡಿದ್ದರೂ ಅದಕ್ಕೆ ಪ್ರೇಕ್ಷಕರೇ ಕಾರಣ. ನಮ್ಮ ಯಾವುದೇ ಬೇರೆ ಸಂದರ್ಶನಗಳನ್ನು ನೋಡಿದರೂ ನಮ್ಮ ಗೆಲುವಿಗೆ ಪ್ರೇಕ್ಷಕರೆ ಕಾರಣ ಎಂದು ಹಲವು ಬಾರಿ ಹೇಳಿದ್ದೇವೆ. ಕನ್ನಡ ಮತ್ತು ಕನ್ನಡ ಸಿನಿಮಾದ ಬಗ್ಗೆ ನಮಗೆ ಅಪಾರ ಅಭಿಮಾನ, ಅದಕ್ಕಾಗಿಯೇ ಪ್ರತಿ ಹಾಡಿನಲ್ಲೂ ಅಚ್ಚ ಕನ್ನಡವನ್ನೇ ಬಳಸುತ್ತೇವೆ. ಕಾರ್ಯಕ್ರಮದಲ್ಲಿ ತಪ್ಪಾಗಿ ಆಡಿದ ಮಾತುಗಳನ್ನು ದಯವಿಟ್ಟು ಮನ್ನಿಸಿ. ಯಾರಿಗೂ ನೋವುಂಟು ಮಾಡಬೇಕು ಅನ್ನುವ ಉದ್ದೇಶ ನಮ್ಮದಲ್ಲ. ನಿಮ್ಮ ಆಶಿರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಬರೆದು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    https://twitter.com/anupsbhandari/status/980852507319574528

  • ರಾಜರಥ ಸಿನಿಮಾ ವಿರೋಧಿಗಳಿಗೆ 2 ಪುಟ ರಿವ್ಯೂ ಬರೆದು ತರಾಟೆಗೆ ತೆಗೆದುಕೊಂಡ ರಕ್ಷಿತ್ ಶೆಟ್ಟಿ

    ರಾಜರಥ ಸಿನಿಮಾ ವಿರೋಧಿಗಳಿಗೆ 2 ಪುಟ ರಿವ್ಯೂ ಬರೆದು ತರಾಟೆಗೆ ತೆಗೆದುಕೊಂಡ ರಕ್ಷಿತ್ ಶೆಟ್ಟಿ

    ಬೆಂಗಳೂರು: ಅನೂಪ್ ಭಂಡಾರಿ ನಿರ್ದೇಶನದ ‘ರಾಜರಥ’ ಚಿತ್ರ ಕಳೆದ ವಾರ ಬಿಡುಗಡೆಯಾಗಿದೆ. ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದ ಈ ಚಿತ್ರದ ರಿವ್ಯೂ ಮಾತ್ರ ಉತ್ತಮವಾಗಿ ಬಂದಿರಲಿಲ್ಲ.

    ಈ ಚಿತ್ರಕ್ಕೆ ಬಹುತೇಕ ನೆಗಟೀವ್ ರಿವ್ಯೂ ಸಿಕ್ಕಿದ್ದು ಒಂದೆಡೆಯಾದರೆ, ಇನ್ನೊಂದು ಕಡೆ ಟ್ವಿಟರ್ ನಲ್ಲೂ ಬಹಳಷ್ಟು ಮಂದಿ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಇಲ್ಲ ಎಂದಿದ್ದರು. ಇದೆಲ್ಲದರ ಪರಿಣಾಮ ಪ್ರೇಕ್ಷಕರು ಚಿತ್ರಮಂದಿರದ ಕಡೆ ತಲೆ ಹಾಕಿರಲಿಲ್ಲ. ಇದೀಗ ಕನ್ನಡದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿ ‘ರಾಜರಥ’ ಚಿತ್ರವನ್ನು ವೀಕ್ಷಿಸಿದ್ದಾರೆ. ಬಳಿಕ ಸ್ವತಃ ಈ ಚಿತ್ರದ ರಿವ್ಯೂ ಬರೆದು ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ರಕ್ಷಿತ್ ಬರದಿರುವ ರಿವ್ಯೂ:
    ನಾನು ನಿನ್ನೆ ಸಂಜೆ ಚಿತ್ರ ನೋಡಿದ್ದೇನೆ. ಕೆಲವು ದೋಷಗಳ ನಡುವೆಯೂ ಈ ಚಿತ್ರ ಇಷ್ಟವಾಗುತ್ತೆ. ರಿವ್ಯೂಗಳು ಏನು ಹೇಳಿವೆ ಅನ್ನೋದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಹಲವು ಭಾವನೆಗಳ ಮೂಲಕ ಈ ಚಿತ್ರವನ್ನು ನಿರ್ಮಿಸಿರುವ ನಿರ್ದೇಶಕ ಅನೂಪ್ ಭಂಡಾರಿ ಪ್ರತಿಭೆಯನ್ನು ನಾವು ಮೆಚ್ಚಲೇಬೇಕು. ನಾನು ಥಿಯೇಟರ್‍ಗೆ ಎಂಟ್ರಿ ಕೊಟ್ಟಾಗ ನನ್ನ ಮೈಂಡ್‍ನಲ್ಲಿ ಈ ಚಿತ್ರದಲ್ಲಿಯ ತಪ್ಪಗಳೇನು? ಯಾಕೆ ಈ ರೀತಿ ಕೆಟ್ಟ ರಿವ್ಯೂ ಬರೆದಿದ್ದಾರೆ? ಒಬ್ಬ ಫಿಲ್ಮ್ ಮೇಕಿಂಗ್‍ನ ವಿದ್ಯಾರ್ಥಿಯಾಗಿ ಇದನ್ನು ಕಲಿಯಲು ನಾನು ಬಯಸಿದ್ದೆ. ಆದರೆ, ಈ ಚಿತ್ರ ನೋಡಿದ ಮೇಲೆ ಅನೂಪ್ ಭಂಡಾರಿಯ ಟಾಲೆಂಟ್ ಬಗ್ಗೆ ಮೆಚ್ಚುಗೆಯಾಯಿತು ಎಂದಿದ್ದಾರೆ.

    ಅನೂಪ್ ಒಬ್ಬ ಪ್ರತಿಭಾವಂತ ನಿರ್ದೇಶಕ ಅನ್ನೋದರಲ್ಲಿ ಎರಡನೇ ಮಾತು ಬೇಡ. ಬಾಲಿವುಡ್‍ನ ಚಿತ್ರಗಳ ನಿರ್ದೇಶನಕ್ಕೆ ಅವರಿಗೆ ಆಫರ್‍ಗಳು ಬಂದಿದ್ದವು. ಆದರೆ, ಅವುಗಳನ್ನು ತಿರಸ್ಕರಿಸಿ ಕನ್ನಡಕ್ಕಾಗಿ ಅವರು ಇಲ್ಲೆ ಉಳಿದುಕೊಂಡರು. ಕನ್ನಡ ಚಿತ್ರರಂಗ ಬೆಳೆಸಲು ನಮ್ಮ ಜತೆ ನಿಂತರು. ಇದೀಗ ಅವರ ಜತೆ ನಾವು ನಿಲ್ಲಬೇಕಾಗಿದೆ.

    ಒಬ್ಬ ನಿರ್ದೇಶಕ ಸುಂದರವಾದ ಕಲ್ಪನೆಯೊಂದಿಗೆ ಚಿತ್ರ ಮಾಡುತ್ತಾನೆ. ನೀವು ಒಂದು ಚಿತ್ರದ ಬಗ್ಗೆ ಕಳಪೆ ರಿವ್ಯೂ ಬರೆಯಲು ಕೇವಲ 10 ನಿಮಿಷ ತೆಗೆದುಕೊಳ್ಳುತ್ತೀರಿ. ಆದರೆ, ಒಂದು ಚಿತ್ರವನ್ನು ರೆಡಿ ಮಾಡಲು ಒಂದು ವರ್ಷ ಬೇಕಾಗುತ್ತೆ. ನಾನು ಅನೂಪ್ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಅವರು ನನಗೆ ಅಷ್ಟು ಆತ್ಮಿಯರೂ ಅಲ್ಲ. ಆದರೆ, ಅವರ ಟಾಲೆಂಟ್‍ಗೆ ಬಗ್ಗೆ ನಾನು ಮಾತನಾಡುತ್ತಿದ್ದೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

    ಅನೂಪ್ ನನ್ನ ಗೆಳೆಯ ಇರಬಹುದು. ಹೆಚ್ಚು ಎಂದರೆ ನಾವು 5 ರಿಂದ 10 ಸಲ ಭೇಟಿಯಾಗಿರುತ್ತೇವೆ. ಇದಕ್ಕಾಗಿ ಅವರನ್ನು ಬೆನ್ನುತಟ್ಟುತ್ತಿದ್ದೇನೆ ಎಂದು ಭಾವಿಸುವುದು ಬೇಡ ಎಂದು ಸ್ಪಷ್ಟಪಡಿಸಿರುವ ರಕ್ಷಿತ್, ರಾಜರಥ ಚಿತ್ರವನ್ನು ಅತ್ಯಂತ ಉತ್ಸಾಹ, ಕಠಿಣ ಪರಿಶ್ರಮದಿಂದ ನಿರ್ಮಿಸಲಾಗಿದೆ. ಚಿತ್ರದ ಬಗ್ಗೆ ಕಾಮೆಂಟ್ ಮಾಡುವುದು ತಪ್ಪಲ್ಲ. ಇದೊಂದು ಕೆಟ್ಟ ಚಿತ್ರ ಎನ್ನುವುದಾದರೆ ಓಕೆ. ಆದರೆ ಅನೂಪ್ ಪ್ರತಿಭೆ ಬಗ್ಗೆ ಕಾಮೆಂಟ್ ಮಾಡುವ ಹಕ್ಕು ನಮಗ್ಯಾರಿಗೂ ಇಲ್ಲ ಎಂದಿದ್ದಾರೆ.

    ಅನೂಪ್ ಸ್ಯಾಂಡಲ್‍ವುಡ್‍ನ ಅಮೂಲ್ಯ ರತ್ನ ಇದ್ದಂತೆ. ಅವರೊಬ್ಬ ಆಸ್ತಿ. ಇಂತಹ ಪ್ರತಿಭೆಗಳನ್ನು ಹುರುದುಂಬಿಸಬೇಕಾಗಿದೆ. ಬಾಲಿವುಡ್ ಚಿತ್ರ ನಿರ್ದೇಶನಕ್ಕೂ ಅವರಿಗೆ ಅವಕಾಶ ಬಂದಿತ್ತು. ಆದರೆ ಅವರ ಒಲವು ಕನ್ನಡ ಚಿತ್ರಗಳ ಕಡೆಗಿತ್ತು. ಅಂದು ಅವರು ನಮ್ಮ ಪರವಾಗಿ ನಿಂತರು, ಇಂದು ನಾವು ಅವರ ಪರವಾಗಿ ನಿಲ್ಲೋಣ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

    https://twitter.com/rakshitshetty/status/979222138837061632

  • ಬೆಳ್ಳಿತೆರೆ ಮೇಲೆ ರಾಜರಥ ದರ್ಬಾರ್ ಶುರು

    ಬೆಳ್ಳಿತೆರೆ ಮೇಲೆ ರಾಜರಥ ದರ್ಬಾರ್ ಶುರು

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ ರಾಜರಥ ಇಂದು ಬಿಡುಗಡೆಗೊಂಡಿದೆ. ರಂಗಿತರಂಗ ಎಂಬ ಸೂಪರ್ ಹಿಟ್ ಸಿನಿಮಾ ನೀಡಿದ ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬಂದಿರುವ ರಾಜರಾಥ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ.

    ವಿಭಿನ್ನ ಕಥಾ ಹಂದರವುಳ್ಳ ರಂಗಿತರಂಗ ಸಿನಿಮಾ ನೀಡಿದ ಬಳಿಕ ಅನೂಪ್ ಭಂಡಾರಿ ರಾಜರಥದಲ್ಲಿ ಸಾಗುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸಿನಿಮಾ ಮೂಡಿದ್ದು, ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದ್ದಾರೆ. ನಿರೂಪ್ ಗೆ ಜೊತೆಯಾಗಿ ನಟಿ ಆವಂತಿಕಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ತಮಿಳು ನಟ ಆರ್ಯ, ರವಿಶಂಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

    ರಾಜರಥ ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಂದ ಗಾಂಧಿನಗರದಲ್ಲಿ ಭರವಸೆಯನ್ನು ಮೂಡಿಸಿದೆ. ಕಾಲೇಜು, ಸ್ವೀಟ್ ಲವ್ ಸ್ಟೋರಿಯನ್ನು ಸಿನಿಮಾ ಹೊಂದಿದೆ ಎಂಬುದನ್ನು ಹಾಡುಗಳು ಈಗಾಗಲೇ ಹೇಳ್ತಿವೆ. ಆದ್ರೆ ಚಿತ್ರದ ಸಂಪೂರ್ಣ ಕಥಾ ಹಂದರವನ್ನು ಎಲ್ಲಿಯೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಈ ಹಿಂದೆ ಅನೂಪ್ ಭಂಡಾರಿ ರಂಗಿತರಂಗ ಸಿನಿಮಾದಲ್ಲಿ ನೋಡುಗರನ್ನು ಕೊನೆಯವರೆಗೂ ಹಿಡಿದಿಟ್ಟುಕೊಂಡಿದ್ದರು.

    ಸಿನಿಮಾದ ಕಥೆ ಕಣ್ಣಮುಂದೆಯೇ ಬರುವಂತೆ ಚಿತ್ರೀಕರಿಸಲಾಗಿದೆ. ಜನರು ಏನು ನೋಡಬೇಕೆಂದು ಥಿಯೇಟರ್ ಗೆ ಬರುತ್ತಾರೆ ಅದಕ್ಕಿಂತ ಹೆಚ್ಚಿನದನ್ನು ರಾಜರಥ ನೀಡಲಿದೆ. ಒಂದು ಸಿನಿಮಾ ಯಶಸ್ಸಿನ ಬಳಿಕ ಅಂತಹ ಚಿತ್ರವನ್ನು ಮಾಡಬೇಕೆಂದು ಮಾಡಿಲ್ಲ. ಇದು ರಂಗಿತರಂಗ ಚಿತ್ರಕ್ಕಿಂತ ವಿಭಿನ್ನವಾದ ಹೊಸತನದ ಕಥೆಯನ್ನು ಹೊಂದಿದೆ. ಈ ಹಿಂದೆ ಸರಳ ಹುಡಗನಾಗಿ ಕಾಣಿಸಿದ್ದ ನಿರೂಪ್ ಈ ಬಾರಿ ತರಲೆ ಕಾಲೇಜು ಹುಡಗನಾಗಿ ವಿಭಿನ್ನ ಲುಕ್ ನಲ್ಲಿ ಮಿಂಚಿದ್ದಾರೆ ಅಂತಾ ಚಿತ್ರತಂಡ ತಿಳಿಸಿದೆ.

    ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತವನ್ನು ಚಿತ್ರ ಹೊಂದಿದೆ. ಜಾನಿ ಮಾಸ್ಟರ್ ಮತ್ತು ಬೋಸ್ಕೋ ಕೇಸರ್ ಕ್ಯಾಮೆರಾ ಕಾರ್ಯ ನಿರ್ವಹಿಸಿದ್ದಾರೆ. ಮೊದಲ ಟ್ರೇಲರ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಿನ್ನೆಲೆ ಧ್ವನಿಯಲ್ಲಿ ಬಿಡುಗಡೆಯಾಗಿತ್ತು. ಸಿನಿಮಾ ಕನ್ನಡ ಮತ್ತು ತೆಲಗುನಲ್ಲಿಯೂ ಮೂಡಿಬಂದಿದೆ.

    ಕರ್ನಾಟಕದ 150 ಥಿಯೇಟರ್‍ಗಳಲ್ಲಿ ಹಾಗೂ ಆಂಧ್ರಪ್ರದೇಶದ 200 ಥಿಯೇಟರ್‍ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಯುಎಸ್‍ನಲ್ಲಿ 200 ಶೋಗಳು, ಯೂರೋಪ್ ಹಾಗೂ ಯುಕೆಯಲ್ಲಿ 15 ದಿನಗಳ ನಂತರ ಸಿನಿಮಾ ಬಿಡುಗಡೆಯಾಗಲಿದೆ.

  • ರಂಗಿತರಂಗದ ನಂತ್ರ ಮತ್ತೊಮ್ಮೆ ಮೋಡಿ ಮಾಡಲು ತೆರೆಗೆ ಬರ್ತಿದೆ ‘ರಾಜರಥ’

    ರಂಗಿತರಂಗದ ನಂತ್ರ ಮತ್ತೊಮ್ಮೆ ಮೋಡಿ ಮಾಡಲು ತೆರೆಗೆ ಬರ್ತಿದೆ ‘ರಾಜರಥ’

    ಬೆಂಗಳೂರು: ರಂಗಿತರಂಗ ಎಂಬ ಸೂಪರ್ ಹಿಟ್ ಸಿನಿಮಾ ನೀಡಿದ ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿ ಬಂದಿರುವ ರಾಜರಾಥ ಸಿನಿಮಾ ಇದೇ ಶುಕ್ರವಾರ ಅಂದರೆ ಮಾರ್ಚ್ 23ರಂದು ತೆರೆಕಾಣಲಿದೆ.

    ವಿಭಿನ್ನ ಕಥಾ ಹಂದರವುಳ್ಳ ರಂಗಿತರಂಗ ಸಿನಿಮಾ ನೀಡಿದ ಬಳಿಕ ಅನೂಪ್ ಭಂಡಾರಿ ರಾಜರಥದಲ್ಲಿ ಸಾಗುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸಿನಿಮಾ ಮೂಡಿದ್ದು, ನಿರೂಪ ಭಂಡಾರಿ ನಾಯಕನಾಗಿ ನಟಿಸಿದ್ದಾರೆ. ನಿರೂಪ್ ಗೆ ಜೊತೆಯಾಗಿ ನಟಿ ಆವಂತಿಕಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಇನ್ನೂ ತಮಿಳು ನಟ ಆರ್ಯ, ರವಿಶಂಕರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

    ರಾಜರಥ ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಂದ ಗಾಂಧಿನಗರದಲ್ಲಿ ಭರವಸೆಯನ್ನು ಮೂಡಿಸಿದೆ. ಕಾಲೇಜು, ಸ್ವೀಟ್ ಲವ್ ಸ್ಟೋರಿಯನ್ನು ಸಿನಿಮಾ ಕಥೆ ಎಂಬುದನ್ನು ಹಾಡುಗಳು ಈಗಾಗಲೇ ಹೇಳ್ತಿವೆ. ಆದ್ರೆ ಚಿತ್ರದ ಸಂಪೂರ್ಣ ಕಥಾ ಹಂದರವನ್ನು ಎಲ್ಲಿಯೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಈ ಹಿಂದೆ ಅನೂಪ್ ಭಂಡಾರಿ ರಂಗಿತರಂಗ ಸಿನಿಮಾದಲ್ಲಿ ನೋಡುಗರನ್ನು ಕೊನೆಯವರೆಗೂ ಹಿಡಿದಿಟ್ಟಿಕೊಂಡಿದ್ದರು. ಇದನ್ನೂ ಓದಿ: ಮತ್ತೆ ಬರ್ತಿದೆ ರಂಗಿತರಂಗ ಜೋಡಿ- ಇದು ಅವರ ಕಥೆಯಲ್ಲ, ನನ್ನ ಕಥೆ ಅಂತಿದೆ ರಾಜರಥ ನೋಡಿ

    ಸಿನಿಮಾದ ಕಥೆ ಕಣ್ಣಮುಂದೆಯೇ ಬರುವಂತೆ ಚಿತ್ರೀಕರಿಸಲಾಗಿದೆ. ಜನರು ಏನು ನೋಡಬೇಕೆಂದು ಥಿಯೇಟರ್ ಗೆ ಬರುತ್ತಾರೆ ಅದಕ್ಕಿಂತ ಹೆಚ್ಚಿನದನ್ನು ರಾಜರಥ ನೀಡಲಿದೆ. ಒಂದು ಸಿನಿಮಾ ಯಶಸ್ಸಿನ ಬಳಿಕ ಅಂತಹ ಚಿತ್ರವನ್ನು ಮಾಡಬೇಕೆಂದು ಮಾಡಿಲ್ಲ. ಇದು ರಂಗಿತರಂಗ ಚಿತ್ರಕ್ಕಿಂತ ವಿಭಿನ್ನವಾದ ಹೊಸತನದ ಕಥೆಯನ್ನು ಹೊಂದಿದೆ. ಈ ಹಿಂದೆ ಸರಳ ಹುಡಗನಾಗಿ ಕಾಣಿಸಿದ್ದ ನಿರೂಪ್ ಈ ಬಾರಿ ತರಲೆ ಕಾಲೇಜು ಹುಡಗನಾಗಿ ವಿಭಿನ್ನ ಲುಕ್ ನಲ್ಲಿ ಮಿಂಚಿದ್ದಾರೆ ಅಂತಾ ಚಿತ್ರತಂಡ ತಿಳಿಸಿದೆ.

    ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತವನ್ನು ಚಿತ್ರ ಹೊಂದಿದೆ. ಜಾನಿ ಮಾಸ್ಟರ್ ಮತ್ತು ಬೋಸ್ಕೋ ಕೇಸರ್ ಕ್ಯಾಮೆರಾ ಕಾರ್ಯ ನಿರ್ವಹಿಸಿದ್ದಾರೆ. ಮೊದಲ ಟ್ರೇಲರ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಿನ್ನೆಲೆ ಧ್ವನಿಯಲ್ಲಿ ಬಿಡುಗಡೆಯಾಗಿತ್ತು. ಸಿನಿಮಾ ಕನ್ನಡ ಮತ್ತು ತೆಲಗುವಿನಲ್ಲಿಯೂ ಮೂಡಿಬಂದಿದೆ.

  • ಇಂದಿನಿಂದ ಗೋಲ್ಡನ್ ಸ್ಟಾರ್ `ಚಮಕ್’- ಒಂದೇ ದಿನ ರಾಜರಥ ಟ್ರೇಲರ್ ವೀಕ್ಷಿಸಿದ 3 ಲಕ್ಷ ಮಂದಿ

    ಇಂದಿನಿಂದ ಗೋಲ್ಡನ್ ಸ್ಟಾರ್ `ಚಮಕ್’- ಒಂದೇ ದಿನ ರಾಜರಥ ಟ್ರೇಲರ್ ವೀಕ್ಷಿಸಿದ 3 ಲಕ್ಷ ಮಂದಿ

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ಚಮಕ್’ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗ್ತಿದೆ.

    ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬಂದಿರೋ ಸಿನಿಮಾದಲ್ಲಿ ಕಿರಿಕ್ ಪಾರ್ಟಿ ಚಿತ್ರದ ರಶ್ಮಿಕಾ ಮಂದಣ್ಣ ಗಣೇಶ್‍ಗೆ ಜೋಡಿಯಾಗಿ ನಟಿಸಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ಮೊದಲ ಬಾರಿ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದಾರೆ.

    ಇನ್ನೂ ಗುರುವಾರ ರಾಜರಥ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಕೇವಲ ಒಂದೇ ದಿನದಲ್ಲಿ ಬರೋಬ್ಬರಿ 3 ಲಕ್ಷದ 80 ಸಾವಿರ ಮಂದಿ ವೀಕ್ಷಿಸಿದ್ದಾರೆ. ಈ ಚಿತ್ರವನ್ನು ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶಿಸಿದ್ದು, ಅನೂಪ್ ತಮ್ಮ ನಿರೂಪ್ ನಾಯಕನಾಗಿ ಅಭಿನಯಿಸಿದ್ದಾರೆ.

    ಚಿತ್ರದಲ್ಲಿ ತೆಲುಗು ನಟ ಆರ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆವಂತಿಕಾ ಶೆಟ್ಟಿ ನಿರೂಪ್‍ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ರಾಜರಥ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಜನವರಿ 25ರಂದು ರಿಲೀಸ್ ಆಗ್ತಿದೆ.

  • ಮತ್ತೆ ಬರ್ತಿದೆ ರಂಗಿತರಂಗ ಜೋಡಿ- ಇದು ಅವರ ಕಥೆಯಲ್ಲ, ನನ್ನ ಕಥೆ ಅಂತಿದೆ ರಾಜರಥ ನೋಡಿ

    ಮತ್ತೆ ಬರ್ತಿದೆ ರಂಗಿತರಂಗ ಜೋಡಿ- ಇದು ಅವರ ಕಥೆಯಲ್ಲ, ನನ್ನ ಕಥೆ ಅಂತಿದೆ ರಾಜರಥ ನೋಡಿ

    ಬೆಂಗಳೂರು: ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ರಾಜರಥ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

    ಒಂದಾನೊಂದು ಊರಲ್ಲಿ, ಒಂದಾನೊಂದು ಕಾಲೇಜಲ್ಲಿ ಒಬ್ಬ ಸುಂದರವಾಗಿ ಹುಡುಗಿ ಇದ್ಳು. ಅವ್ಳಿಗೆ ಒಬ್ಬ ಹೀರೋ ಇದ್ದ. ಆದ್ರೆ ಇವ್ನು ಹೀರೋ ಅಲ್ಲ ಅಂತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಧ್ವನಿಯಲ್ಲಿ ಟ್ರೇಲರ್ ಆರಂಭವಾಗುತ್ತೆ. ಮುಂದೆ ಪುನೀತ್ ಪಾತ್ರಗಳ ಪರಿಚಯ ಮಾಡಿಸ್ತಾರೆ. ಇದು ಇವರ ಕಥೆಯಲ್ಲ, ನನ್ನ ಕಥೆ. ನನ್ನ ಹೆಸರು ರಾಜರಥ ಅಂತ ಟ್ರೇಲರ್ ಅಂತ್ಯವಾಗುತ್ತೆ ಟ್ರೇಲರ್ ನಿಂದಲೇ ಚಿತ್ರದ ಕಥೆ ಬಗ್ಗೆ ನಿರೀಕ್ಷೆ ಹುಟ್ಟಿಸಿದೆ.

    ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಚಿತ್ರೀಕರಣವಾದ ರಾಜರಥಕ್ಕೆ ತೆಲುಗಿನಲ್ಲಿ ರಾಣಾ ದಗ್ಗುಬಾಟಿ ಬ್ಯಾಗ್ರೌಂಡ್ ಧ್ವನಿ ನೀಡಿದ್ದಾರೆ. ಈ ಚಿತ್ರದ ಟ್ರೇಲರ್ ನಲ್ಲಿ ಪುನೀತ್ ರಾಜ್‍ಕುಮಾರ್ ಅವರ ಧ್ವನಿ ಆಕರ್ಷಣೀಯವಾಗಿದೆ.

    ಈ ಚಿತ್ರದಲ್ಲಿ ಅನೂಪ್ ಭಂಡಾರಿ ಅವರ ತಮ್ಮ ನಿರೂಪ್ ಭಂಡಾರಿ ನಾಯಕನಾಗಿದ್ದು, ತಮಿಳು ನಟ ಆರ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿರೂಪ್ ಭಂಡಾರಿಗೆ ನಾಯಕಿಯಾಗಿ ಅವಂತಿಕಾ ಶೆಟ್ಟಿ ಅಭಿನಯಿಸಿದ್ದಾರೆ. ರವಿಶಂಕರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದು, ಹಾಸ್ಯನಟನಾಗಿ ಕಾಣಿಸಿಕೊಂಡಿದ್ದಾರೆ.