Tag: ರಾಜಗುರು ದ್ವಾರಕಾನಾಥ್

  • ಡಿಕೆಶಿ ಸಜ್ಜನರ ಸಹವಾಸ ಮಾಡಲಿ: ರಾಜಗುರು ದ್ವಾರಕಾನಾಥ್

    ಡಿಕೆಶಿ ಸಜ್ಜನರ ಸಹವಾಸ ಮಾಡಲಿ: ರಾಜಗುರು ದ್ವಾರಕಾನಾಥ್

    – ಅಹರ್ನ ಶಾಸಕರಿಗೆ ಶಿಕ್ಷೆ ಫಿಕ್ಸ್

    ಹಾಸನ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಜ್ಜನರ ಸಹವಾಸ ಮಾಡಲಿ ಎಂದು ರಾಜಗುರು ದ್ವಾರಕಾನಾಥ್ ಸಲಹೆ ನೀಡಿದ್ದಾರೆ.

    ಹುಟ್ಟೂರು ರಾಮನಗರ ಜಿಲ್ಲೆಯ ಚನ್ನರಾಯಪಟ್ಟಣದ ಅಣತಿ ಗ್ರಾಮದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ನಮ್ಮ ಮನೆ ಬಾಗಿಲು ತೆರೆದಿದೆ. ಅವರಿಗೆ ಈಗ ಎದುರಾಗಿರುವುದು ಕಂಟಂಕ ಅಲ್ಲ. ರಾಮ ವನವಾಸ ಮುಗಿಸಿದ ಮೇಲೆ ಅಯೋಧ್ಯೆಗೆ ಬಂದು ಕೂರಲಿಲ್ಲವೆ? ಅಂತೆ ಡಿ.ಕೆ.ಶಿವಕುಮಾರ್ ಅವರು ಹೊರ ಬಂದಿದ್ದಾರೆ. ಇನ್ನು ಮುಂದೆ ಸಜ್ಜನರ ಸಹವಾಸ ಮಾಡಲಿ ಎಂದು ತಿಳಿಸಿದ್ದಾರೆ.

    ಡಿ.ಕೆ.ಶಿವಕುಮಾರ್ ಅವರು ಇಲ್ಲಿವರೆಗೂ ನನ್ನ ಬಳಿ ಬಂದಿಲ್ಲ. ಅವರು ಅಲ್ಲೆಲ್ಲೋ ಹೋಗಿದ್ದಾರೆ ಎನ್ನುತ್ತಾರೆ. ನಾನು ಅವರನ್ನ ಸಂಪರ್ಕಿಸಿಲ್ಲ. ಅವರೊಂದಿಗೆ ಯಾರೂ ಇಲ್ಲದಿದ್ದಾಗ ನಾನಿದ್ದೆ. ಅವರ ಜೀವನದಲ್ಲಿ ಮೊದಲು ಬಂದವನು ನಾನು. ಬಂಗಾರಪ್ಪ ಮಂತ್ರಿಮಂಡಲದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವರಾಗಿ ಮಾಡಿದ್ದೆ. ಮಾಜಿ ಸಚಿವರ ಜೀವನದಲ್ಲಿ ನನ್ನ ಪಾತ್ರ ಬಹಳ ಇದೆ. ನಮ್ಮ ಮನೆಗೆ ಬರುವರೆಲ್ಲಾ ದೇವರೆ. ಡಿ.ಕೆ.ಶಿವಕುಮಾರ್ ಗಂಧದ ಜೊತೆಗೆ ಗುದ್ದಾಡಲಿ. ಉತ್ತಮರೊಂದಿಗೆ ಹೋರಾಡಲಿ ಎಂದು ಹೇಳಿದರು.

    ಉಪ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಆಘಾತ ಕಾದಿದೆ. ಅನರ್ಹ ಶಾಸಕರಿಗೆ ದೇವರೇ ಶಿಕ್ಷೆ ಕೊಡುತ್ತಾನೆ. ತಂದೆ-ತಾಯಿ ಬೈದರೆಂದು ಮನೆ ಬಿಟ್ಟು ಹೋಗಲು ಸಾಧ್ಯವೆ? ಪಕ್ಷ ತಾಯಿ ಸಮಾನ. ಸರಿ ಹೊಂದದೆ ಇದ್ದರೆ ಗೆದ್ದ ಪಕ್ಷದಿಂದ ಐದು ವರ್ಷ ಪೂರೈಸಿ ಬಿಡಬೇಕು. ಹೀಗೆ ಮಧ್ಯದಲ್ಲಿ ಪಕ್ಷ ಬಿಟ್ಟು ಹೋದರೆ ಸಾರ್ವಜನಿಕರ ಸಮಯ, ಹಣ ವ್ಯರ್ಥವಾಗುತ್ತದೆ ಎಂದು ಅನರ್ಹ ಶಾಸಕರ ವಿಚಾರದಲ್ಲಿ ಮಾರ್ಮಿಕವಾಗಿ ಭವಿಷ್ಯ ನುಡಿದರು.

    ನವೆಂಬರ್ 4ರಂದು ಗುರು ಮುಂದೆ ಚಲಿಸಿದ್ದಾನೆ. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾರ್ಚ್ ವರೆಗೆ ಆಘಾತಗಳಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹುಷಾರಾಗಿ ಸರ್ಕಾರ ನಡೆಸಬೇಕು ಎಂದು ತಿಳಿಸಿದರು.

  • ರಾಜಗುರು ದ್ವಾರಕಾನಾಥ್ ಮನೆಗೆ ಸಿಎಂ ಎಚ್‍ಡಿಕೆ ದೌಡು

    ರಾಜಗುರು ದ್ವಾರಕಾನಾಥ್ ಮನೆಗೆ ಸಿಎಂ ಎಚ್‍ಡಿಕೆ ದೌಡು

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರೆಸಾರ್ಟಿಗೂ ಹೋಗುವ ಮುನ್ನ ರಾಜಗುರು ದ್ವಾರಕಾನಾಥ್ ಮನೆಗೆ ಭೇಟಿ ನೀಡಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರು ಹೊಸ ಐಬಿ ರಿಪೋರ್ಟ್ ಬಂದ ಬಳಿಕ ಟೆನ್ಶನ್ ಮಾಡಿಕೊಂಡು ಪುತ್ರ ನಿಖಿಲ್ ಕುಮಾರಸ್ವಾಮಿ ಬಗ್ಗೆ ಕೇಳಲು ರಾಜಗುರು ಮನೆಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ಪೊಲೀಸರು ಯಾವುದೇ ದೃಶ್ಯಗಳನ್ನು ಸೆರೆ ಹಿಡಿಯದಂತೆ ಮಾಧ್ಯಮದವರಿಗೆ ಅಡ್ಡಿ ಉಂಟು ಮಾಡಿದ್ದಾರೆ.

    ಮಾಧ್ಯಮದವರಿಗೆ ಮಾತ್ರವಲ್ಲದೇ ಜನರನ್ನು ಕೂಡ ರಾಜಗುರುವಿನ ಮನೆಯ ಅಕ್ಕಪಕ್ಕ ಓಡಾಡುವುದಕ್ಕೆ ನಿರ್ಬಂಧ ಮಾಡಲಾಗಿದೆ. ವಾಹನಗಳು ಬರದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಶುಭ ಶುಕ್ರವಾರ ದ್ವಾರಕನಾಥ್ ಗುರುಗಳ ನಿವಾಸದಲ್ಲಿ ಪೂಜೆ ಇರುತ್ತದೆ. ಈ ಪೂಜೆಗೆ ಸಿಎಂ ಕುಮಾರಸ್ವಾಮಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

    ಉಡುಪಿಯ ಕಾಪು ತಾಲೂಕು ಮೂಳೂರಿನ ಸಾಯಿರಾಧಾ ರೆಸಾರ್ಟ್ ನಲ್ಲಿ ಮಾಜಿ ಪ್ರಧಾನಿ ದೇವೇಗೌಡ ದಂಪತಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದರು. ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಮಧ್ಯಾಹ್ನದ ಮಹಾಪೂಜೆ ಸಂದರ್ಭದಲ್ಲಿ ತೆರಳಿದ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಹಾಪೂಜೆಗೆ ಕೊಟ್ಟ ಹಣ್ಣುಕಾಯಿ ತಟ್ಟೆಯಲ್ಲಿ ಮೊಮ್ಮಗನ ಮದುವೆಯ ಆಮಂತ್ರಣ ಪತ್ರಿಕೆ ಇಟ್ಟು ಕೊಟ್ಟಿದ್ದಾರೆ.

    ದೇವಿಯ ಮುಂದಿಟ್ಟು ಆಮಂತ್ರಣ ಪತ್ರಿಕೆಗೆ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ದೇವೇಗೌಡರ ಪುತ್ರಿ ಶೈಲಜ ಅವರ ಮಗ ಡಾ.ಅಮೋಗ್ ಅವರ ಮದುವೆ ಪತ್ರಿಕೆ ಇದಾಗಿದ್ದು, ಭೇಟಿ ಕೊಟ್ಟ ಕ್ಷೇತ್ರದಲ್ಲಿ ಅಜ್ಜ ಮೊಮ್ಮಗನಿಗಾಗಿ ಪೂಜೆ ಸಲ್ಲಿಸುತ್ತಿದ್ದಾರೆ. ಮೇ 16ರ ವರೆಗೆ ಕಾಪುವಿನಲ್ಲಿ ತಂಗಲಿರುವ ದೇವೇಗೌಡ ದಂಪತಿ ಉಡುಪಿಯ ಧಾರ್ಮಿಕ ಕ್ಷೇತ್ರಗಳ ಪ್ರವಾಸ ಮಾಡಲಿದ್ದಾರೆ.