Tag: ರಾಗಿ

  • ಚುಚ್ತೀನಿ ಅಂದು ವ್ಯಕ್ತಿಯ ಹಿಂಬದಿಗೆ ಚುಚ್ಚಿಯೇಬಿಟ್ಟ!

    ಚುಚ್ತೀನಿ ಅಂದು ವ್ಯಕ್ತಿಯ ಹಿಂಬದಿಗೆ ಚುಚ್ಚಿಯೇಬಿಟ್ಟ!

    ಚಿಕ್ಕಬಳ್ಳಾಪುರ: ಜಮೀನು ಹಾಗೂ ರಾಗಿ ಫಸಲಿಗಾಗಿ ನಡೆದ ಕಾದಾಟದಲ್ಲಿ ಗ್ರಾಮಪಂಚಾಯ್ತಿ ಸದಸ್ಯೆಯ ಪತಿಗೆ ಗ್ರಾಮಸ್ಥನೊರ್ವ ಚಾಕುವಿನಿಂದ ಇರಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜರಬಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ವೆಂಕಟರೋಣ, ಕೃಷ್ಣ ಎಂಬಾತನಿಗೆ ಚಾಕುವಿನಿಂದ ಇರಿದಿದ್ದಾನೆ. ಆರೋಪಿ ವೆಂಕಟರೋಣನನ್ನ ಮಂಚೇನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಕು ಇರಿತಕ್ಕೊಳಗಾದ ಕೃಷ್ಣ ಮಂಚೇನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.

    ಸರ್ಕಾರಿ ಕರಾಬು ಜಾಗದಲ್ಲಿ ವೆಂಕಟರೋಣ ಹಾಗೂ ಗ್ರಾಮದ ಮತ್ತೋರ್ವ ಮಹಿಳೆ ಭದ್ರಮ್ಮ ಎಂಬವರು ಅಕ್ಕಪಕ್ಕದಲ್ಲೇ ಉಳುಮೆ ಮಾಡಿ ರಾಗಿ ಬೆಳೆ ಬೆಳೆದಿದ್ದರು. ಆದರೆ ವೆಂಕಟರೋಣ ತಾನು ಬೆಳೆದ ರಾಗಿ ಫಸಲಿನ ಜೊತೆ ಭದ್ರಮ್ಮ ಬೆಳೆದ ರಾಗಿ ಬೆಳೆಯನ್ನೂ ಕಟಾವು ಮಾಡಿಕೊಂಡಿದ್ದಾನಂತೆ. ಹೀಗಾಗಿ ಗ್ರಾಮಪಂಚಾಯ್ತಿ ಸದಸ್ಯೆ ಪತಿ ಕೃಷ್ಣ ಬಳಿ ಭದ್ರಮ್ಮ ಆಳಲು ತೋಡಿಕೊಂಡಿದ್ದಾರೆ. ಈ ವೇಳೆ ಗುಂಪು ಕಟ್ಟಿಕೊಂಡ ಹೋದ ಕೃಷ್ಣ ತನ್ನದೇ ಟ್ರ್ಯಾಕ್ಟರ್ ಮೂಲಕ ವೆಂಕಟರೋಣ ಕಟಾವು ಮಾಡಿದ್ದ ರಾಗಿತೆನೆ ತುಂಬಿಕೊಂಡು ಬಂದಿದ್ದಾನೆ.

    ಇದರಿಂದ ಕುಪಿತಗೊಂಡ ವೆಂಕಟರೋಣ ಟ್ರ್ಯಾಕ್ಟರ್ ಅಡ್ಡಗಟ್ಡಿ ಕೃಷ್ಣನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದವೇ ನಡೆದು ಹೋಗಿ ಏಕಾಏಕಿ ಕೃಷ್ಣ ಹಿಂಬದಿಗೆ ವೆಂಕಟರೋಣ ಚಾಕುವಿನಿಂದ ಇರಿದೇ ಬಿಟ್ಟಿದ್ದಾನೆ.

  • ಪೈಲ್ವಾನ್ ಚಾಲೆಂಜ್ ಆಯ್ತು, ಫಿಟ್‍ನೆಸ್ ಚಾಲೆಂಜ್ ಆಯ್ತು ಈಗ ಮುದ್ದೆ ತಿನ್ನೋ ಚಾಲೆಂಜ್!

    ಪೈಲ್ವಾನ್ ಚಾಲೆಂಜ್ ಆಯ್ತು, ಫಿಟ್‍ನೆಸ್ ಚಾಲೆಂಜ್ ಆಯ್ತು ಈಗ ಮುದ್ದೆ ತಿನ್ನೋ ಚಾಲೆಂಜ್!

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಹಾಗೂ ಆಹಾರ ಸಚಿವ ಜಮೀರ್ ಅವರಿಗೆ ಮುದ್ದೆ ತಿನ್ನುವ ಚಾಲೆಂಜ್ ಅನ್ನು ಬೆಂಗಳೂರಿನ ಕುರುಬರಹಳ್ಳಿ ಜನ ಹಾಕಿದ್ದಾರೆ.

    ಪಡಿತರ ಚೀಟಿಯಲ್ಲಿ ವಿತರಿಸುವ ರಾಗಿಯಲ್ಲಿ ಬರೀ ಟೊಳ್ಳು ರಾಗಿ, ಕಲ್ಲು, ಮಣ್ಣು ತುಂಬಿದ್ದು, ಮನುಷ್ಯರು ತಿನ್ನಲು ಸಾಧ್ಯವಾಗದ ರೀತಿಯಲ್ಲಿ ಈ ಕಳಪೆ ಗುಣಮಟ್ಟದ ರಾಗಿಯನ್ನು ವಿತರಣೆ ಮಾಡಲಾಗಿದೆ. ಇದರಿಂದ ಸಿಟ್ಟಿಗೆದ್ದ ಜನ ಈ ಕಳಪೆ ರಾಗಿಯನ್ನು ಸಿಎಂ ಕುಮಾರಸ್ವಾಮಿ ಹಾಗೂ ಜಮೀರ್ ಅವರ ವಿಳಾಸಕ್ಕೆ ಕಳುಹಿಸಿ ನೀವು ಮುದ್ದೆ ಮಾಡ್ಕೊಂಡು ತಿನ್ನಿ, ನೀವು ತಿಂದ ಮೇಲೆ ನಾವು ತಿನ್ನುತ್ತೆವೆ ಎಂದು ಚಾಲೆಂಜ್ ಮಾಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ ಪರಮೇಶ್ ಎಂಬವರು ಪಡಿತರ ವ್ಯವಸ್ಥೆಯಲ್ಲಿ ಹೆಚ್ಚಿನ ಗೋಲ್ ಮಾಲ್ ನಡೆಯುತ್ತಿದ್ದು, ಕಳಪೆ ಆಹಾರ ವಿತರಣೆ ಮಾಡುತ್ತಿದ್ದಾರೆ. ಅದ್ದರಿಂದ ಮುಖ್ಯಮಂತ್ರಿಗಳು ಹಾಗೂ ಆಹಾರ ಸಚಿವರು ಸಹ ಈ ಕುರಿತು ಗಮನ ಹರಿಸಬೇಕಿದೆ. ನ್ಯಾಯ ಬೆಲೆ ಅಂಗಡಿಯಲ್ಲಿ ಈ ಕುರಿತು ಪ್ರಶ್ನೆ ಮಾಡಿದರೆ ಅಗತ್ಯವಿದ್ದರೆ ತೆಗೆದುಕೊಂಡು ಹೋಗಿ ಇಲ್ಲವಾದರೆ ಬಿಡಿ ಎಂದು ಬೇಜಾವಾಬ್ದಾರಿ ಉತ್ತರ ನೀಡುತ್ತಾರೆ. ಅದ್ದರಿಂದ ಈ ಆಹಾರವನ್ನು ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಜಮೀರ್ ಅವರಿಗೆ ಕಳುಹಿಸಿ ಕೊಡುತ್ತಿದ್ದೇವೆ. ಅವರು ಈ ರಾಗಿಯಿಂದ ಮುದ್ದೆ ಮಾಡಿ ತಿಂದು ತೋರಿಸಲಿ, ಬಳಿಕ ನಾವು ಸೇವಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ರಾಗಿ ಕಟಾವು ಮಾಡಿ ರಾಶಿ ಪೂಜೆ ಮಾಡಬೇಕೆಂದಿದ್ದ ರೈತರಿಗೆ ಓಖಿ ಚಂಡಮಾರುತದ ಆತಂಕ

    ರಾಗಿ ಕಟಾವು ಮಾಡಿ ರಾಶಿ ಪೂಜೆ ಮಾಡಬೇಕೆಂದಿದ್ದ ರೈತರಿಗೆ ಓಖಿ ಚಂಡಮಾರುತದ ಆತಂಕ

    ಕೋಲಾರ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚೆನ್ನೈನಲ್ಲಿ ಅಪ್ಪಳಿಸಿರುವ ಓಖಿ ಚಂಡಮಾರುತದ ಎಫೆಕ್ಟ್ ನಿಂದ ಗಡಿ ಜಿಲ್ಲೆ ಕೋಲಾರದ ರೈತರು ಆತಂಕ ಎದುರಿಸುವಂತಾಗಿದೆ.

    ವರ್ಷಪೂರ್ತಿ ಕಷ್ಟ ಪಟ್ಟು ಬೆಳೆದ ರಾಗಿ ಕಟಾವು ಮಾಡಿ ರಾಶಿ ಪೂಜೆ ಮಾಡಬೇಕೆಂದಿದ್ದ ರೈತನಿಗೆ ಓಖಿ ಚಂಡಮಾರುತ ಆತಂಕ ತಂದೊಡ್ಡಿದೆ. ಕೋಲಾರ ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣವಿದ್ದು, ಬೆಂಬಿಡದೆ ತುಂತುರು ಮಳೆ ಸುರಿಯುತ್ತಿದೆ. ಪರಿಣಾಮ ಕೋಲಾರ ಜಿಲ್ಲೆಯ ರೈತರು ಆತಂಕಕ್ಕೊಳಗಾಗಿದ್ದಾರೆ.

    ಈ ಬಾರಿ ಮುಂಗಾರು ಉತ್ತಮ ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ಒಳ್ಳೆಯ ರಾಗಿ ಬೆಳೆಯಾಗಿತ್ತು. ಕೋಟ್ಯಾಂತರ ರೂಪಾಯಿ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರು ರಾಗಿ ಪೈರು ಕಟಾವು ಮಾಡುವ ಹಾಗೂ ಕಟಾವು ಮಾಡಿದ ರಾಗಿ ತೆನೆಯನ್ನ ಒಕ್ಕಣೆ ಮಾಡುವ ಕೆಲಸದಲ್ಲಿ ತೊಡಗಿದ್ದರು. ಹೀಗಿರುವಾಗಲೇ ಓಖಿ ಚಂಡಮಾರುತದ ಎಫೆಕ್ಟ್ ರಾಗಿ ಪೈರೆಲ್ಲಾ ನೆಲ ಕಚ್ಚಿ ಹಾಳಾಗುವಂತೆ ಮಾಡಿದೆ. ಅಲ್ಲದೇ ಒಕ್ಕಣೆಗೆ ಸಿದ್ಧಮಾಡಿಕೊಂಡಿದ್ದ ರೈತರ ರಾಗಿ ತೆನೆ ಮಳೆಯಲ್ಲಿ ನೆನದು ರಾಗಿ ಹಾಳಾಗಿದೆ, ಇದರಿಂದ ಕೋಲಾರದಲ್ಲಿ ರಾಗಿ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ.

    ಮಳೆ ಇನ್ನು ಮೂರು ದಿನಗಳ ಕಾಲ ಮುಂದುವರೆಯುವ ಹಿನ್ನೆಲೆಯಲ್ಲಿ ರಾಗಿ ಬೆಳೆ ಮಳೆಯಲ್ಲಿ ನೆನೆದು ಮೊಳಕೆ ಹೊಡೆಯಲಾರಂಭಿಸುತ್ತದೆ ಎನ್ನುವ ಆತಂಕ ಕೂಡಾ ರೈತರಲ್ಲಿದೆ. ಅಲ್ಲದೆ ಅವರೆ ಹಾಗೂ ತೊಗರಿ ಬೆಳೆಯೂ ಸಹ ಹೂವು ಬಿಟ್ಟಿದ್ದರಿಂದ ಹೂವೆಲ್ಲಾ ಉದುರಿಹೋಗುತ್ತದೆ ಅನ್ನೊ ಅಳಲು ರೈತರದ್ದು. ಸಣ್ಣದಾಗಿ ಸುರಿಯುತ್ತಿರುವ ಜಡಿ ಮಳೆಯೇ ಆದರೂ ಇದರಿಂದ ರೈತರಿಗೆ ಅಗುತ್ತಿರುವ ಹಾನಿ ಮಾತ್ರ ಅಪಾರ ಪ್ರಮಾಣದ್ದಾಗಿದೆ.

  • ಬೇಳೆ, ಬೆಲ್ಲ, ಅಕ್ಕಿ ಬೆಲೆ ಗಗನಕ್ಕೆ: ಏರಿಕೆಯಾಗಿದ್ದು ಯಾಕೆ?

    ಬೇಳೆ, ಬೆಲ್ಲ, ಅಕ್ಕಿ ಬೆಲೆ ಗಗನಕ್ಕೆ: ಏರಿಕೆಯಾಗಿದ್ದು ಯಾಕೆ?

    ಬೆಂಗಳೂರು: ಜಿಎಸ್‍ಟಿ ಬಳಿಕ ಕೊಂಚ ಕಡಿಮೆಯಾಗಿದ್ದ ಬೇಳೆ ಕಾಳು, ಬೆಲ್ಲ, ರಾಗಿ ಬೆಲೆ ಏರಿಕೆಯಾಗಿದೆ.

    ಬೇಳೆ ಕಾಳು ಈಗ ಕೆಜಿಗೆ ನೂರರ ಗಡಿ ದಾಟಿದೆ. ಬಹುತೇಕ ಎಲ್ಲಾ ಬೇಳೆ ಕಾಳುಗಳ ಬೆಲೆ ಹತ್ತು ರೂಪಾಯಿಗೆ ಏರಿಕೆಯಾಗಿದ್ದು, ದಿನಸಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

    ಬೆಲ್ಲ ಕೆಜಿಗೆ ಬರೋಬ್ಬರಿ ಇಪ್ಪತ್ತು ರೂ ಏರಿಕೆಯಾಗಿದ್ದು, ರಾಗಿ ಹಿಟ್ಟು ದರವೂ ಕೆಜಿಗೆ ಐದರಿಂದ ಆರರಿಂದ ಏಳು ರೂಪಾಯಿಗೆ ಏರಿಕೆಯಾಗಿದೆ. ಮೈದಾ, ರವೆ, ಗೋಧಿ ಹಿಟ್ಟು ಅಕ್ಕಿ ದರವೂ ಏರಿಕೆಯಾಗಿದೆ.

    ಮಳೆ ಅಭಾವದ ಜೊತೆ ಕೃತಕ ಅಭಾವ ಸೃಷ್ಟಿಯಾಗಿರುವ ಕಾರಣ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಮಾರಾಟಗಾರರು ಹೇಳಿದ್ದಾರೆ.

  • ಭತ್ತ ಬೆಳೆಯೋಕೆ ಸಿದ್ಧರಾದ ರೈತರಿಗೆ ರಾಗಿ ಬೆಳೆಯಿರಿ ಎಂದ ಸರ್ಕಾರ

    ಭತ್ತ ಬೆಳೆಯೋಕೆ ಸಿದ್ಧರಾದ ರೈತರಿಗೆ ರಾಗಿ ಬೆಳೆಯಿರಿ ಎಂದ ಸರ್ಕಾರ

    ಮೈಸೂರು: ಭತ್ತ ಬೆಳಯೋಕೆ ಸಿದ್ಧವಾಗಿದ್ದವರಿಗೆ ಸರ್ಕಾರ ರಾಗಿ ಬೆಳೆಯಿರಿ ಎಂದು ಹೇಳಿದ್ದರಿಂದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಜಿಲ್ಲೆಯ ಕೆ.ಆರ್. ನಗರ ತಾಲೂಕು ಭತ್ತದ ಕಣಜ. ಇಲ್ಲಿ ಬರೋಬ್ಬರಿ 17 ಸಾವಿರ ಹೆಕ್ಟೇರ್‍ನಲ್ಲಿ ರೈತರು ಭತ್ತ ಬೆಳೆಯುತ್ತಾರೆ. ಭತ್ತದ ಕೃಷಿಗಾಗಿ ರೈತರು ಭೂಮಿಯನ್ನು ಹದ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ದಿಢೀರನೆ ರೈತರಿಗೆ ಈ ಬಾರಿ ಭತ್ತ ಬೆಳೆಯಬೇಡಿ ಬದಲಾಗಿ ರಾಗಿ ದ್ವಿಧಳ ಧಾನ್ಯಗಳನ್ನು ಬೆಳೆಯಿರಿ ಎಂದು ಆದೇಶ ನೀಡಿದೆ.

    ಒಂದು ವೇಳೆ ಭತ್ತ ಬೆಳೆದು ನೀರಿನ ಅಭಾವದಿಂದ ಬೆಳೆ ನಷ್ಟವಾದರೆ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ವಾಸ್ತವಾವಾಗಿ ಅಣೆಕಟ್ಟು ಸಮೀಪ ಇರುವ ಜಮೀನಿನಲ್ಲಿ ತೇವಾಂಶದ ಕಾರಣ ರಾಗಿ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯಲು ಆಗದು. ಹಾಗಂತ ಭತ್ತ ಬೆಳೆದು ಅದು ನಷ್ಟವಾದರೆ ಪರಿಹಾರ ಕೊಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಧಿಕಾರಿಗಳ ಈ ಹೇಳಿಕೆಯಿಂದ ರೈತರು ಏನು ಮಾಡಬೇಕು ಎಂದು ತಿಳಿಯದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಇದನ್ನೂ ಓದಿ: ರೈತರೇ ಈಗಲೇ ಬಿತ್ತನೆ ಮಾಡಿ ಇಲ್ಲವಾದ್ರೆ ಸೂಕ್ತ ಕ್ರಮ: ಚಾಮರಾಜನಗರ ಡಿಸಿ ಆದೇಶ

     

  • ರೈತನಿಗೆ ಕಳಪೆ ಬಿತ್ತನೆ ಬೀಜ ನೀಡಿದ ಜಿಕೆವಿಕೆ – 3 ತಿಂಗಳಾದ್ರೂ ರಾಗಿ ತೆನೆ ಕಾಳು ಕಟ್ಟಲೇ ಇಲ್ಲ

    ರೈತನಿಗೆ ಕಳಪೆ ಬಿತ್ತನೆ ಬೀಜ ನೀಡಿದ ಜಿಕೆವಿಕೆ – 3 ತಿಂಗಳಾದ್ರೂ ರಾಗಿ ತೆನೆ ಕಾಳು ಕಟ್ಟಲೇ ಇಲ್ಲ

    – ಕೇಳಲು ಹೋದ ರೈತನಿಗೆ ನಿನ್ನ ಹಣೆ ಬರಹ ಅಂತ ಹಾರಿಕೆ ಉತ್ತರ

    ಚಿಕ್ಕಬಳ್ಳಾಪುರ: ಕಡಿಮೆ ಅವಧಿಯಲ್ಲೇ ಅತ್ಯಧಿಕ ಇಳುವರಿ ಅಂತ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧಕರ ಸಲಹೆಯಂತೆ ಖರೀದಿಸಿದ ರಾಗಿ ಬಿತ್ತನೆ ಬೀಜಗಳಿಂದ ನಾಟಿ ಮಾಡಿದ ಪೈರಿನ ತೆನೆಯಲ್ಲಿ ರಾಗಿ ಕಾಳು ಕಟ್ಟದೆ ರೈತರೊಬ್ಬರು ಕಣ್ಣೀರುಡುತ್ತಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕೊಯಿರಾ ಹೊಸೂರು ಗ್ರಾಮದ ರೈತ ಮುನಿ ಆಂಜಿನಪ್ಪ ಪ್ರತಷ್ಠಿತ ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೆಎಂಆರ್ 31305 ಅನ್ನೋ ತಳಿಯ ರಾಗಿ ಬಿತ್ತನೆ ಬೀಜ ಖರೀದಿಸಿ ನಾಟಿ ಮಾಡಿದ್ದರು. ಆದ್ರೆ ಈ ರಾಗಿ ಪೈರು ಬೆಳೆದು 3 ತಿಂಗಳಾದ್ರೂ ರಾಗಿ ತೆನೆ ಕಾಳು ಕಟ್ಟಲೇ ಇಲ್ಲ. ಈ ಬಗ್ಗೆ ಕೇಳಿದ್ರೆ ಜಿಕೆವಿಕೆ ಯವರು “ನಿನ್ನ ಹಣೆಬರಹ, ನಾವು ಏನೂ ಮಾಡಲಾಗುವುದಿಲ್ಲ ಎನ್ನುವ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಅಂಜಿನಪ್ಪ ಹೇಳಿದ್ದಾರೆ.

    ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೆಜಿಗೆ 35 ರೂಪಾಯಿಯಂತೆ ಬರೋಬ್ಬರಿ 15 ಕಜಿ ರಾಗಿ ಖರೀದಿ ಮಾಡಿ ಎರಡು ಎಕರೆಯಲ್ಲಿ ರಾಗಿ ಬಿತ್ತನೆ ಮಾಡಿದ್ದಾರೆ. ಒಂದು ಕಡೆ ಬರಗಾಲ ಮತ್ತೊಂದೆಡೆ ವಿದ್ಯುತ್ ಗೆ ಬರ. ಈ ನಡುವೆ ಪಾತಾಳಕ್ಕೆ ಕುಸಿದಿರುವ ಅಂರ್ತಜಲದ ನಡುವೆ ಕೊಳವೆ ಬಾವಿಯ ನೀರು ಬಳಸಿ ಎರಡು ಎಕರೆಯಲ್ಲಿ ರಾಗಿ ಬೆಳೆಯಲಾಗಿದೆ. ಎರಡು ಎಕರೆ ರಾಗಿ ಬೆಳೆಯಲು ಬಿತ್ತನೆ ಬೀಜ, ಸಾವಯುವ ಗೊಬ್ಬರ, ಸೇರಿದಂತೆ ಅಂದಾಜು 50 ಸಾವಿರ ರೂ. ಹಣ ಖರ್ಚು ಮಾಡಿ 3 ತಿಂಗಳು ಕಾದಿದ್ದಾರೆ. ಆದ್ರೆ ರಾಗಿ ಪೈರು 3 ರಿಂದ ಮೂರೂವರೆ ಅಡಿ ಎತ್ತರಕ್ಕೆ ಸೊಂಪಾಗಿ ಬೆಳೆದಿದ್ರೂ ರಾಗಿ ತೆನೆಯಲ್ಲಿ ಮಾತ್ರ ರಾಗಿ ಕಾಳುಗಳೇ ಇಲ್ಲ.

    ಪ್ರತಿ ಎಕರೆಗೆ 35 ಕ್ವಿಂಟಾಲ್ ಇಳುವರಿ ಬರುತ್ತೆ ಅಂತ ಹೇಳಿದ ಜಿಕೆವಿಕೆ ಸಂಶೋಧಕರು ಈಗ ಕನಿಷ್ಠ ಬೆಳೆ ನೋಡಲು ಬರುತ್ತಿಲ್ಲ. ಸ್ಥಳೀಯ ಕೃಷಿ ಅಧಿಕಾರಿ ಕೂಡ ರಾಗಿ ತೆನೆ ಕಾಳು ಕಟ್ಟದಿರುವ ಬಗ್ಗೆ ಧೃಡೀಕರಣ ಮಾಡಿದ್ದಾರೆ. ಸಂಶೋಧನೆ ಮಾಡಿ ಹೊಚ್ಚ ಹೊಸ ಅತ್ಯುತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನ ಅಭಿವೃದ್ಧಿಪಡಿಸೋ ಜಿಕೆವಿಕೆ ನವರು ಕೊಟ್ಟ ಬಿತ್ತನೆ ಬೀಜಗಳೇ ಈ ಪರಿಯಾದ್ರೇ ಮತ್ಯಾರನ್ನ ನಂಬೋದು ಸ್ವಾಮಿ ಅಂತಿದ್ದಾರೆ ನೊಂದ ರೈತ.