Tag: ರಾಖಿ ಸಾವಂತ್

  • ಮದುವೆಗೂ ಮುನ್ನ ನಟಿ ರಾಖಿ ಸಾವಂತ್ ಪ್ರಗ್ನೆಂಟ್ : ಏನಿದು ಹುಚ್ಚಾಟ ಎಂದ ನೆಟ್ಟಿಗರು

    ಮದುವೆಗೂ ಮುನ್ನ ನಟಿ ರಾಖಿ ಸಾವಂತ್ ಪ್ರಗ್ನೆಂಟ್ : ಏನಿದು ಹುಚ್ಚಾಟ ಎಂದ ನೆಟ್ಟಿಗರು

    ಕೆಲ ತಿಂಗಳ ಹಿಂದೆಯಷ್ಟೇ ಮೈಸೂರು ಮೂಲದ ಆದಿಲ್ ಎಂಬ ಹುಡುಗನ ಜೊತೆ ಸುತ್ತಾಡುತ್ತಿದ್ದ ಬಾಲಿವುಡ್ ನಟಿ ರಾಖಿ ಸಾವಂತ್, ದಿಢೀರ್ ಅಂತ ಬೇಬಿ ಬಂಪ್ ಜೊತೆ ಕಾಣಿಸಿಕೊಂಡಿದ್ದಾರೆ. ಏಕಾಏಕಿ ಬೇಬಿ ಬಂಪ್ ಕಂಡ ಜನರು ಈ ಹುಚ್ಚಾಟಕ್ಕೆ ಉಗಿದಿದ್ದಾರೆ. ಪ್ರಚಾರ ಮತ್ತು ವಿವಾದಕ್ಕಾಗಿ ಈಕೆ ಏನೆಲ್ಲ ಮಾಡುವುದಕ್ಕೆ ರೆಡಿ ಎಂದು ಜರಿದಿದ್ದಾರೆ. ಅಷ್ಟಕ್ಕೂ ರಾಖಿ ಸಾವಂತ್ ಹಾಗೆ ಮಾಡಿದ್ದು ಮತ್ತು ತಾವು ಪೈಗಂಬರ್ ಮತ್ತು ಬಾಹುಬಲಿಗೆ ಜನ್ಮ ನೀಡುವೆ ಅಂತ ಹೇಳಿದ್ದಕ್ಕೂ ಕಾರಣವಿದೆ.

    ರಾಕಿ ಸಾವಂತ್ ಹೊಟ್ಟೆಗೆ ಬಲೂನ್ ಕಟ್ಟಿಕೊಂಡು ಅದು ಬೇಬಿ ಬಂಪ್ ಎಂದು ತೋರಿಸಲು ಹೋಗಿದ್ದಾರೆ. ತಮ್ಮ ಅಕ್ಕಪಕ್ಕದ ಮನೆಯವರನ್ನು ಸೇರಿಸಿ, ನೀವೆಲ್ಲ ಪಾಪ ಮಾಡಿದ್ದೀರಿ. ಪಾಪ ಪರಿಹಾರಕ್ಕಾಗಿ ನಾನು ಪೈಗಂಬರ್ ಮತ್ತು ಬಾಹುಬಲಿಗೆ ಜನ್ಮ ನೀಡುತ್ತೇನೆ. ಆಗ ನಿಮಗೆಲ್ಲ ಪಾಪದಿಂದ ಮುಕ್ತಿ ಸಿಗಲಿದೆ ಎಂದೆಲ್ಲ ಭಾಷಣ ಮಾಡಿದ್ದಾರೆ. ಅಂದರೆ, ತಾವು ಮುಸ್ಲಿಂ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಎಂದು ಅವನಿಂದ ಮಗುವನ್ನೂ ಪಡೆಯುತ್ತೇನೆ ಎನ್ನುವ ಅರ್ಥದಲ್ಲಿ ಅವರು ಪೈಗಂಬರಿಗೆ ಜನ್ಮ ನೀಡುತ್ತೇನೆ ಅಂದಿದ್ದಾರೆ. ಇದನ್ನೂ ಓದಿ:ಕನ್ನಡ, ಕನ್ನಡಿಗರನ್ನೇ ಮರೆತು ಬಿಟ್ಟರಾ ‘ಕೆಜಿಎಫ್ 2’ ನಿರ್ದೇಶಕ ಪ್ರಶಾಂತ್ ನೀಲ್ : ಏನಿದು ಹೊಸ ಆರೋಪ?

    ಇಷ್ಟೆಲ್ಲ ಭಾಷಣ ಮುಗಿದ ನಂತರ ತಾವೇ ಹೊಟ್ಟೆಗೆ ಸುತ್ತಿಕೊಂಡಿದ್ದ ಬಲೂನ್ ಒಡೆದು ನಗುತ್ತಾರೆ. ಈ ಹುಚ್ಚಾಟಕ್ಕೆ ದಾರಿ ಹೋಕರೆಲ್ಲ ನಕ್ಕು ಮುಂದೆ ಸಾಗುತ್ತಾರೆ. ಈ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಕೂಡ ಆಗಿದೆ. ಪಾಸಿಟಿವ್ ಗಿಂತ ನೆಗೆಟಿವ್ ಕಾಮೆಂಟ್ ಗಳೇ ಹೆಚ್ಚು ಬಂದಿವೆ.

    Live Tv
    [brid partner=56869869 player=32851 video=960834 autoplay=true]

  • ಕಾರಿಗಾಗಿ ಗಂಡನನ್ನೇ ಬಿಟ್ಟರಾ ರಾಖಿ ಸಾವಂತ್?:  ಸೇಡು ತೀರಿಸಿಕೊಳ್ತೀನಿ ಅಂದ ಮಾಜಿಪತಿ

    ಕಾರಿಗಾಗಿ ಗಂಡನನ್ನೇ ಬಿಟ್ಟರಾ ರಾಖಿ ಸಾವಂತ್?: ಸೇಡು ತೀರಿಸಿಕೊಳ್ತೀನಿ ಅಂದ ಮಾಜಿಪತಿ

    ಮೈಸೂರು ಹುಡುಗ ಆದಿಲ್ ತಮಗೊಂದು ಕಾರು ಕೊಟ್ಟರು ಎಂದು ಹೇಳುವ ಮೂಲಕ ಹೊಸ ಬಾಯ್ ಫ್ರೆಂಡ್ ನನ್ನು ಪರಿಚಯಿಸಿದ್ದರು ಬಾಲಿವುಡ್ ವಿವಾದಿತ ತಾರೆ ರಾಖಿ ಸಾವಂತ್. ಕಾರು ಕೊಡುವ ಮೂಲಕವೇ ತನಗೆ ಆದಿಲ್ ಪ್ರಪೋಸ್ ಮಾಡಿದರು ಎಂದೂ ಹೇಳಿಕೆ ನೀಡಿದ್ದರು. ಆದರೆ, ಇದೀಗ ರಾಖಿ ಮಾಜಿಪತಿ ರಿತೇಶ್, ಇದೇ ಕಾರಿನ ವಿಚಾರವನ್ನು ಹೊರಗೆಡವಿದ್ದಾರೆ. ತಾವು ರಾಖಿಗೆ ಕಾರು ಕೊಡಿಸಲಿಲ್ಲ ಎನ್ನುವ ಕಾರಣಕ್ಕಾಗಿ ತನ್ನನ್ನು ಬಿಟ್ಟು ಹೋದಳು ಎಂದು ಆರೋಪಿಸಿದ್ದಾರೆ.

    ಎರಡು ದಿನಗಳ ಹಿಂದೆಯಷ್ಟೇ ರಾಖಿ ಸಾವಂತ್ ಮಾಜಿ ಪತಿಯ ವಿರುದ್ಧ ಮುಂಬೈನಲ್ಲಿ ದೂರು ನೀಡಿದ್ದರು. ತಮ್ಮ ಮಾಜಿಪತಿಯಿಂದಾಗಿ ತಮಗೆ ಕಿರುಕುಳ ಆಗುತ್ತಿದೆ ಎಂದು ಮತ್ತು ತಮ್ಮ ಸೋಷಿಯಲ್ ಮೀಡಿಯಾಗಳನ್ನು ಅವರೇ ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ರಿತೇಶ್ ಕಿರುಕುಳವನ್ನು ನನ್ನಿಂದ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಗಳಗಳನೆ ಅತ್ತಿದ್ದರು. ಇದೀಗ ರಿತೀಶ್ ಮಾಜಿ ಪತ್ನಿಯ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ : ಶಿವರಾಜ್ ಕುಮಾರ್ ಗಾಗಿ ಚಿತ್ರ ಮಾಡಲಿದೆ ಹೊಂಬಾಳೆ ಫಿಲ್ಮ್ಸ್: ನಿರ್ದೇಶಕರು ಯಾರು?

    ರಾಖಿ ತುಂಬಾ ದುಬಾರಿ ಕಾರು ಕೊಡಿಸುವಂತೆ ಪೀಡಿಸುತ್ತಿದ್ದರು. ಹಣದಾಹ ಹೆಚ್ಚಾಗಿತ್ತು. ನಾನು ಅವಳು ಕೇಳಿದ ಕಾರನ್ನು ಕೊಡಿಸಲಿಲ್ಲ. ಹಾಗಾಗಿ ಅವರು ನನ್ನ ಜೊತೆಗಿನ ಸಂಬಂಧವನ್ನು ಕಡಿದುಕೊಂಡರು. ಇದೀಗ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ ಮತ್ತು ಸೇಡು ತೀರಿಸಿಕೊಳ್ಳುವೆ ಎಂದು ರಿತೇಶ್ ಹೇಳಿದ್ದಾರೆ. ರಾಖಿ  ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ರಿತೀಶ್, “ಈಗಲೂ ರಾಕಿ ನನ್ನ ಹಣದಲ್ಲೇ ಬದುಕುತ್ತಿದ್ದಾಳೆ. ಸಾಕಷ್ಟು ದುಬಾರಿ ವಸ್ತುಗಳನ್ನು ಕೊಡಿಸಿಕೊಂಡಿದ್ದಾಳೆ. ಕಾರು ಯಾರು ಕೊಡಿಸುತ್ತಾರೋ ಅವರ ಹಿಂದೆ ಆಕೆ ಹೋಗುತ್ತಾಳೆ. ಈಗ ಆದಿಲ್ ಎನ್ನುವವನು ಕೊಡಿಸಿರುವ ಕಾರು ಅದು ಹೊಸದಲ್ಲ, ಸೆಕೆಂಡ್ ಹ್ಯಾಂಡ್’ ಎಂದು ಟಾಂಗ್ ಕೊಟ್ಟಿದ್ದಾರೆ ರಿತೀಶ್.

  • ಪೊಲೀಸ್ ಠಾಣೆ ಮುಂದೆ ಗಳಗಳನೆ ಅತ್ತ ರಾಖಿ ಸಾವಂತ್, ಹೊಸ ಬಾಯ್ ಫ್ರೆಂಡ್ ಹೈರಾಣ

    ಪೊಲೀಸ್ ಠಾಣೆ ಮುಂದೆ ಗಳಗಳನೆ ಅತ್ತ ರಾಖಿ ಸಾವಂತ್, ಹೊಸ ಬಾಯ್ ಫ್ರೆಂಡ್ ಹೈರಾಣ

    ಮೈಸೂರಿನ ಹುಡುಗನನ್ನು ಬಾಯ್ ಫ‍್ರೆಂಡ್ ಮಾಡಿಕೊಂಡ ನಂತರ ರಾಖಿ ಸಾವಂತ್ ಖುಷಿಯಾಗಿದ್ದರು. ದುಬೈ, ಶಾಪಿಂಗ್, ಸಿನಿಮಾ ಅಂತೆಲ್ಲ ಸುತ್ತಾಟ ನಡೆಸಿದ್ದರು. ಸಂಭ್ರಮದಿಂದ ದಿನಗಳನ್ನು ದೂಡುತ್ತಿದ್ದ ರಾಖಿ ನಿನ್ನೆ ಏಕಾಏಕಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಪೊಲೀಸ್ ಠಾಣೆಯಿಂದ ವಾಪಸ್ಸು ಬಂದಾಗ ಸ್ಟೇಶನ್ ಮುಂದೆಯೇ ಗಳಗಳನೇ ಅತ್ತಿದ್ದಾರೆ. ಹೊಸ ಬಾಯ್ ಫ್ರೆಂಡ್ ಆದಿಲ್ ಅದೆಷ್ಟೇ ಸಮಾಧಾನ ಮಾಡಿದರೂ, ರಾಖಿ ಅಳುವು ಮಾತ್ರ ನಿಂತಿಲ್ಲ.

    ನಿನ್ನೆ ರಾಖಿ ಸಾವಂತ್, ತನ್ನ ಹೊಸ ಬಾಯ್ ಫ‍್ರೆಂಡ್ ಆದಿಲ್ ಜೊತೆ ಮುಂಬೈನ ಓಶಿವಾರಾ ಪೊಲೀಸ್ ಠಾಣೆಗೆ ಆಗಮಿಸಿದ್ದರು. ತನ್ನ ಮಾಜಿ ಪತಿ ರಿತೇಶ್ ತುಂಬಾ ಹಿಂಸೆ ನೀಡುತ್ತಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳನ್ನು ರಿತೇಶ್ ಹ್ಯಾಕ್ ಮಾಡಿ ಮಿಸ್ ಯ್ಯೂಸ್ ಮಾಡಿಕೊಳ್ಳುತ್ತಿದ್ದಾನೆ ಎಂದು ದೂರಿದ್ದಾರೆ. ಅಲ್ಲದೇ, ಆದಿಲ್ ಮತ್ತು ತಮ್ಮ ನಡುವಿನ ಸಂಬಂಧವನ್ನು ರಿತೀಶ್ ಹಾಳು ಮಾಡುತ್ತಿದ್ದಾನೆ ಎಂದಿದ್ದಾರೆ ರಾಖಿ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭರ್ಜರಿ ಡ್ರಗ್ಸ್ ಪಾರ್ಟಿ – ಬಾಲಿವುಡ್ ನಟನ ಪುತ್ರ ಸೇರಿ 50ಕ್ಕೂ ಹೆಚ್ಚು ಮಂದಿ ವಶ

    ದೂರುಕೊಟ್ಟು ಠಾಣೆಯಿಂದ ಹೊರಗೆ ಬರುತ್ತಿರುವಾಗ ರಾಖಿ ಮತ್ತು ಆದಿಲ್ ಅನ್ನು ಕ್ಯಾಮೆರಾಗಳು ಸುತ್ತುವರೆಯುತ್ತವೆ. ಆಗ ದುಃಖವನ್ನು ತಡೆದುಕೊಳ್ಳಲಾಗಿದೆ. ಬಿಟ್ಟೂಬಿಡದೇ ಅಳುತ್ತಾರೆ ರಾಖಿ. ಪಕ್ಕದಲ್ಲಿಯೇ ಇದ್ದ ಆದಿಲ್ ಸಮಾಧಾನ ಮಾಡಲು ಯತ್ನಿಸಿ ಸೋಲುತ್ತಾರೆ. ಆದಿಲ್ ಅದೆಷ್ಟೇ ಸಮಾಧಾನ ಮಾಡಿದರೂ, ರಾಖಿ ಮಾತ್ರ ಅಳುವುದನ್ನು ನಿಲ್ಲಿಸುವುದಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ.

  • ಬಾಯ್ ಫ್ರೆಂಡ್ ಆದಿಲ್ ಕಡೆಯಿಂದ ರಾಖಿ ಸಾವಂತ್‌ಗೆ ಭರ್ಜರಿ ಗಿಫ್ಟ್

    ಬಾಯ್ ಫ್ರೆಂಡ್ ಆದಿಲ್ ಕಡೆಯಿಂದ ರಾಖಿ ಸಾವಂತ್‌ಗೆ ಭರ್ಜರಿ ಗಿಫ್ಟ್

    ಬಾಲಿವುಡ್‌ನ ವಿವಾದಗಳ ನಟಿ ರಾಖಿ ಸಾವಂತ್ ಇದೀಗ ತನ್ನ ಬಾಯ್ ಫ್ರೆಂಡ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ರಾಖಿಯ ಹೊಸ ಬಾಯ್ ಫ್ರೆಂಡ್ ಕೆಲ ದಿನಗಳ ಹಿಂದೆ ಬಿಎಂಡಬ್ಲ್ಯೂ ಕಾರ್ ಕೊಟ್ಟು ಸಖತ್ ಸುದ್ದಿಯಾಗಿದ್ದರು. ಈಗ ಮತ್ತೊಮ್ಮೆ ನಟಿ ರಾಖಿಗೆ ದುಬಾರಿ ಗಿಫ್ಟ್ ಕೊಡುವುದರ ಮೂಲಕ ಸುದ್ದಿಯಾಗಿದ್ದಾರೆ.

    ಇತ್ತೀಚೆಗಷ್ಟೇ ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ದುರಾನಿ ಜತೆ ಪ್ರೀತಿಯಲ್ಲಿದ್ದು, ಇಬ್ಬರ ಡೇಟಿಂಗ್ ವಿಚಾರಗಳ ಬಗ್ಗೆ ಸ್ವತಃ ರಾಖಿನೇ ಹೇಳಿಕೊಂಡಿದ್ದರು. ಮೈಸೂರು ಮೂಲದ ಆದಿಲ್ ಮುಂಬೈನಲ್ಲಿ ನೆಲೆಸಿದ್ದು, ಕಾರಿನ ಬ್ಯುಸಿನೆಸ್ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದರು. ಇನ್ನು ಈ ಹಿಂದೆ ಬಿಎಂಡಬ್ಲ್ಯೂ ಕಾರ್ ಅನ್ನು ಪ್ರೇಯಸಿ ರಾಖಿಗೆ ಉದ್ಯಮಿ ಆದಿಲ್ ಪ್ರಪೋಸ್ ಮಾಡಿ ಗಿಫ್ಟ್‌ ಮಾಡಿದ್ದರು. ಈ ಬೆನ್ನಲ್ಲೇ ಮತ್ತೊಂದು ದುಬಾರಿ ಗಿಫ್ಟ್ ಅನ್ನು ರಾಖಿಗೆ ಕೊಟ್ಟಿದ್ದಾರೆ. ದುಬೈನಲ್ಲಿ ರಾಖಿಗೆ ದುಬಾರಿ ಮನೆ ಖರೀದಿಸಿ ಗಿಫ್ಟ್ ಮಾಡಿದ್ದಾರೆ.

    ಈ ಕುರಿತು ಸಂದರ್ಶನವೊಂದರಲ್ಲಿ ರಾಖಿ ಹೇಳಿಕೊಂಡಿದ್ದಾರೆ. ಆದಿಲ್ ಪ್ರೇಯಸಿ ರಾಖಿ ಸಾವಂತ್‌ಗೆ ಮನೆ ಗಿಫ್ಟ್ ಮಾಡಿದ್ದಾರಂತೆ. ಈ ಬಗ್ಗೆ ಸ್ವತಃ ರಾಖಿ ಸಾವಂತ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಆದಿಲ್ ನನ್ನ ಹೆಸರಿನಲ್ಲಿ ದುಬೈನಲ್ಲಿ ಮನೆ ಖರೀದಿಸಿದ್ದಾರೆ. ಈ ಮೊದಲು ನನಗೆ ಬಿಎಂಡ್ಲ್ಯೂ ಉಡುಗೊರೆ ನೀಡಿದ್ದರು. ಅವನ ಪ್ರೀತಿಯೇ ನನ್ನ ಸಂಪತ್ತು. ಅವನ ಪ್ರೀತಿ ನಿಜ. ಅವನು ನಿಷ್ಠಾವಂತ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಸಹಸ್ರಲಿಂಗ ಸನ್ನಿಧಾನಕ್ಕೆ ಭೇಟಿ ಕೊಟ್ಟ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್

    ಇನ್ನು ಆದಿಲ್ ತನ್ನ ಪ್ರೇಯಸಿ ರಾಖಿ ಸಾವಂತ್ ಬಗ್ಗೆ ಮಾತನಾಡಿ, ಹೆಚ್ಚು ಏನು ಹೇಳುವುದಿಲ್ಲ. ಕಡಿಮೆ ಗ್ಲಾಮರಸ್ ಮತ್ತು ಹೆಚ್ಚು ಕವರ್ ಆಗಿರುವ ಡ್ರೆಸ್ ಹಾಕಬೇಕು ಎಂದು ಭಾವಿಸಬೇಕು ಎಂದು ಹೇಳುತ್ತೀನಿ ಎಂದು ಹೇಳಿದ್ದಾರೆ. ರಾಖಿ ಸಾವಂತ್‌ಗಿಂತ 6 ವರ್ಷದ ಚಿಕ್ಕವರಾದ ಆದಿಲ್ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಸದ್ಯ ರಾಖಿ ಮತ್ತು ರಾಖಿಯ ಬಾಯ್ ಫ್ರೇಂಡ್ ವಿಚಾರ ಬಿಟೌನ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.

  • ರಾಖಿ ಸಾವಂತ್- ಉರ್ಫಿ ಜಾವೇದ್ ಮಸ್ತ್ ಡ್ಯಾನ್ಸ್‌ಗೆ ಫ್ಯಾನ್ಸ್ ಏನಂದ್ರು ಗೊತ್ತಾ?

    ರಾಖಿ ಸಾವಂತ್- ಉರ್ಫಿ ಜಾವೇದ್ ಮಸ್ತ್ ಡ್ಯಾನ್ಸ್‌ಗೆ ಫ್ಯಾನ್ಸ್ ಏನಂದ್ರು ಗೊತ್ತಾ?

    ಬಾಲಿವುಡ್ ನಟಿಯರಾದ ರಾಖಿ ಸಾವಂತ್ ಮತ್ತು ಉರ್ಫಿ ಜಾವೇದ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಪಾರ್ಟಿಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡು ಹಾಡೊಂದಕ್ಕೆ ಸ್ಟೆಪ್ ಹಾಕಿರೋ ವಿಡಿಯೋ ಭಾರೀ ವೈರಲ್ ಆಗ್ತಿದೆ. ಅಷ್ಟೇ ಅಲ್ಲ, ಇವರಿಬ್ಬರ ಡ್ಯಾನ್ಸ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

     

    View this post on Instagram

     

    A post shared by Instant Bollywood (@instantbollywood)

    ಇಂಟರ್‌ನೆಟ್ ಸೆನ್ಸೇಷನಲ್ ಸ್ಟಾರ್‌ಗಳಾದ ರಾಖಿ ಸಾವಂತ್ ಮತ್ತು ಉರ್ಫಿ ತಮ್ಮದೇ ಆದ ರೀತಿಯಲ್ಲಿ ಅಭಿಮಾನಿ ಬಳಗ ಹೊಂದಿರುವವರು. ಇವರಿಬ್ಬರು ಒಟ್ಟಾದರೇ ಹೇಗಿರುತ್ತೆ ಅನ್ನೋದಕ್ಕೆ ಇವರಿಬ್ಬರು ಜತೆಯಿರೋ ವಿಡಿಯೋವೊಂದು ವೈರಲ್ ಆಗಿದೆ. `ಚೋಲಿ ಕೇ ಪೀಚೆ ಕ್ಯಾ ಹೇ’ ಸಾಂಗ್‌ಗೆ ರಾಖಿ ಮತ್ತು ಉರ್ಫಿ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಇದನ್ನೂ ಓದಿ: ಪತಿ ಜೊತೆ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ ಪ್ರಣಿತಾ

    ಬಿಟೌನ್‌ನ ಪಾರ್ಟಿಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿರೋ ರಾಖಿ ಮತ್ತು ಉರ್ಫಿ `ಚೋಲಿ ಕೇ ಪೀಚೆ ಕ್ಯಾ ಹೇ’ ಸಾಂಗ್‌ಗೆ ಸಖತ್ ಹಾಟ್ ಆಗಿ ಕುಣಿದಿದ್ದಾರೆ. ಸದಾ ಡಿಫರೆಂಟ್ ಡ್ರೆಸ್‌ನಿಂದ ಟ್ರೋಲ್ ಆಗ್ತಿದ್ದ ಉರ್ಫಿ, ಇದೀಗ ರಾಖಿ ಸಾವಂತ್ ಜತೆಗಿನ ವಿಡಿಯೋಗೆ ಭರ್ಜರಿ ಲೈಕ್ಸ್ ಗಿಟ್ಟಿಸಿಕೊಳ್ತಿದ್ದಾರೆ. ರಾಖಿ ಮತ್ತು ಉರ್ಫಿ ಬಾಂಡಿಂಗ್ ನೋಡಿ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ.

  • ಡಾಕ್ಟರ್‌ಗೆ ಡಿಗ್ರಿ ಕೊಟ್ಟವರು ಯಾರು – ಚೇತನಾ ರಾಜ್ ಸಾವಿಗೆ ಮರುಕ ವ್ಯಕ್ತಪಡಿಸಿದ ರಾಖಿ

    ಡಾಕ್ಟರ್‌ಗೆ ಡಿಗ್ರಿ ಕೊಟ್ಟವರು ಯಾರು – ಚೇತನಾ ರಾಜ್ ಸಾವಿಗೆ ಮರುಕ ವ್ಯಕ್ತಪಡಿಸಿದ ರಾಖಿ

    ನ್ನಡ ಕಿರುತೆರೆ ನಟಿ ಚೇತನಾ ರಾಜ್ ಅವರು ಮೇ 16 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಚೇತನಾ ಅವರು ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿದ್ದು, ಶ್ವಾಸಕೋಶದಲ್ಲಿ ನೀರು ಶೇಖರಣೆಯಾಗಿದೆ. ಈ ಹಿನ್ನೆಲೆ ಚೇತನಾ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಪರಿಣಾಮ ಸೆಲೆಬ್ರಿಟಿಗಳು ಚೇತನಾ ಸಾವಿಗೆ ಸಂತಾಪ ಸೂಚಿಸಿದರು. ಬಾಲಿವುಡ್ ನಟಿ ರಾಖಿ ಸಾವಂತ್ ಕೂಡ ಚೇತನಾ ಅವರ ಹಠಾತ್ ಸಾವಿನಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಶೇರ್ ಮಾಡಿದ್ದಾರೆ.

    ಇನ್‍ಸ್ಟಾದಲ್ಲಿ ರಾಖಿ, ಗೆಳೆಯರೇ, ಫ್ಯಾಟ್ ಸರ್ಜರಿಯಿಂದ ಸಾವನ್ನಪ್ಪಿದ ಕನ್ನಡ ನಟಿ ಚೇತನಾ ರಾಜ್ ಅವರ ಸುದ್ದಿ ಕೇಳಿ ನನಗೆ ತುಂಬಾ ಆಘಾತವಾಗಿದೆ. ಈ ರೀತಿ ಮಾಡುವ ಯಾವ ಆಸ್ಪತ್ರೆ ಮತ್ತು ವೈದ್ಯರಿದ್ದಾರೆ ಎಂಬುದನ್ನು ನಾನು ತಿಳಿದುಕೊಳ್ಳಬೇಕು. ಆಕೆಗೆ ಕೇವಲ 21 ವರ್ಷ. ಆಕೆಗೆ ಯಾರು ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳವುದಕ್ಕೆ ಹೇಳಿದ್ದು. ಆ ಡಾಕ್ಟರ್‌ಗೆ ಡಿಗ್ರಿ ಕೊಟ್ಟವರು ಯಾರು ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿನಿಮಾ ಮೇಕರ್ಸ್ ನಟಿಯರ ಬಾಡಿ ಬಗ್ಗೆ ಕಾಮೆಂಟ್ ಮಾಡುವುದನ್ನ ಬಿಡಿ: ಪ್ರಿಯಾಂಕಾ ಉಪೇಂದ್ರ

    ನಿಮಗೆ ಯಾವುದೇ ಸರಿಯಾದ ಮಾಹಿತಿ ಇಲ್ಲದೇ ಹೋಗಿದ್ರೆ, ಒಳ್ಳೆಯ ಬಾಲಿವುಡ್ ಜನರನ್ನು ಕೇಳಬೇಕು. ನೀವು ನನ್ನನ್ನು ಕೇಳಬೇಕು, ನೀವು ಯಾವ ವೈದ್ಯರ ಬಳಿಗೆ ಹೋಗಬೇಕು ಎಂದು ನಾವು ನಿಮಗೆ ಮಾರ್ಗದರ್ಶನ ನೀಡುತ್ತೇವೆ. ಯಾರ ಬಳಿಯೂ ಹೋಗಿ ಈ ರೀತಿ ಸಾಯಬೇಡಿ. 21 ವರ್ಷದ ಹುಡುಗಿ ಯಾವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆಂದು ನನಗೆ ತಿಳಿದಿಲ್ಲ ಎಂದು ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

    ಚೇತನಾ ಸಾವಿಗೆ ಪ್ರಿಯಾಂಕಾ ಉಪೇಂದ್ರ, ಮೋಹಕ ತಾರೆ ರಮ್ಯಾ, ಚಂದನವನದ ಆಶ್ವಿತಿ ಶೆಟ್ಟಿ ಮರುಕ ವ್ಯಕ್ತಪಡಿಸಿದ್ದಾರೆ.

  • ರಾಖಿ ಸಾವಂತ್ ಬಾಯ್‌ಫ್ರೆಂಡ್‌ ಮೈಸೂರಿನವ, 6 ವರ್ಷ ಚಿಕ್ಕವ – ರೋಚಕ ವಿಷಯ ಬಾಯ್ಬಿಟ್ಟ ರಾಖಿ

    ರಾಖಿ ಸಾವಂತ್ ಬಾಯ್‌ಫ್ರೆಂಡ್‌ ಮೈಸೂರಿನವ, 6 ವರ್ಷ ಚಿಕ್ಕವ – ರೋಚಕ ವಿಷಯ ಬಾಯ್ಬಿಟ್ಟ ರಾಖಿ

    ತಿ ರಿತೇಶ್‌ರಿಂದ ದೂರವಾದ ನಂತರ ರಾಖಿ ಸಾವಂತ್ ಇದೀಗ ಮತ್ತೊಬ್ಬ ಬಾಯ್‌ಫ್ರೆಂಡ್‌ ಅನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಈ ಬಾರಿ ಅವರು ಕರ್ನಾಟಕ ಮೂಲದ ಹುಡುಗನ ಜೊತೆ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ. ತಾವಿಬ್ಬರೂ ಪ್ರೀತಿಸುತ್ತಿರುವ ವಿಚಾರವನ್ನು ಒಪ್ಪಿಕೊಂಡಿರುವ ರಾಖಿ, ಆ ಹುಡುಗನ ಬಗ್ಗೆ ಹಲವು ಮಾತುಗಳನ್ನು ಆಡಿದ್ದಾರೆ. ಇದನ್ನೂ ಓದಿ : ಹೊಂಬಾಳೆ ಫಿಲ್ಮಸ್ ಬಘೀರನಿಗೆ ಮೇ 20ಕ್ಕೆ ಮುಹೂರ್ತ : ಶ್ರೀಮುರುಳಿ ನಾಯಕ

    ಪತಿ ರಿತೇಶ್ ಅವರಿಂದ ದೂರವಾದ ನಂತರ ಸಂಪರ್ಕಕ್ಕೆ ಬಂದನಂತೆ ಮೈಸೂರು ಮೂಲದ ಹುಡುಗ ಆದಿಲ್ ಖಾನ್. ಪರಸ್ಪರ ಇಬ್ಬರೂ ಪರಿಚಯವಾದ ನಂತರ ಕೇವಲ ಒಂದೇ ಒಂದು ತಿಂಗಳಿಗೆ ರಿತೇಶ್ ಪ್ರೇಮ ನಿವೇದನೆ ಮಾಡಿಕೊಂಡಂತೆ. ಮೊದಲು ಪ್ರಪೋಸ್ ಮಾಡಿದ್ದು ಆದಿಲ್ ಎಂದು ರಾಖಿ ಹೇಳಿಕೊಂಡಿದ್ದಾರೆ. ಅವನು ಪ್ರೇಮ ನಿವೇದನೆ ಮಾಡಿಕೊಂಡಿದ್ದು ವಿಶೇಷವಾಗಿತ್ತು. ಹಾಗಾಗಿ ಒಪ್ಪಿಕೊಂಡೆ ಅಂದಿದ್ದಾರೆ. ಇದನ್ನೂ ಓದಿ : ಮನೆಗೆ ಕರೆಯಿಸಿಕೊಳ್ಳುವಂಥ ಅರ್ಹತೆ ಬಾಲಿವುಡ್ ನಲ್ಲಿ ಯಾರಿಗೂ ಇಲ್ಲ : ಕಂಗನಾ ರಣಾವತ್

    ಆದಿಲ್ ಖಾನ್‌ಗೂ ಮತ್ತು ರಾಖಿ ಸಾವಂತ್ ಅವರಿಗೆ ವಯಸ್ಸಿನ ಅಂತರ ಆರು ವರ್ಷವಂತೆ. ಕೇವಲ  ಆರು ವರ್ಷ ವಯಸ್ಸಿನ ಅಂತರದ ಹುಡುಗನ ಜೊತೆ ಪ್ರೀತಿ ಮಾಡುತ್ತಿರುವೆ. ಬಾಲಿವುಡ್‌ನಲ್ಲೂ ಹದಿನೈದು ಇಪ್ಪತ್ತು ವರ್ಷ ಅಂತರದ ಜೋಡಿಗಳು ಇದ್ದಾವೆ. ಹಾಗಾಗಿ ಪ್ರೀತಿಗೆ ವಯಸ್ಸಿಲ್ಲ ಎಂದು ಘೋಷಿಸಿದ್ದಾರೆ. ಅದು ಇವರಿಬ್ಬರ ಮಧ್ಯದ ಹೊಂದಾಣಿಕೆಗೆ ಯಾವುದೇ ತೊಡಕಾಗುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ : ಕಾನ್ ಫೆಸ್ಟಿವಲ್‌ನಲ್ಲಿ ತಾರೆಯರ ದಂಡು

    ರಾಖಿ ಅವರಿಗೆ ಆದಿಲ್ ಸಿಕ್ಕಿದ್ದೇ ಒಂದು ರೋಚಕ ಕಥೆಯಂತೆ. ರಾಖಿ ಅವರ ಬಿಸ್ನೆಸ್ ಪಾರ್ಟ್ನರ್‌ ಶೈಲೆ ಅವರ ಸಹೋದರ ಆದಿಲ್. ಬಿಸ್ನೆಸ್ ಭೇಟಿಗಾಗಿ ಆಗಾಗ್ಗೆ ರಾಖಿ ಮತ್ತು ಶೈಲೆ ಸೇರುತ್ತಿದ್ದರಂತೆ. ಆಗ ತನ್ನ ಮೊಬೈಲ್ ನಂಬರ್ ಪಡೆದು ಆದಿಲ್ ಸ್ನೇಹ ಬಯಸಿದ ಎಂದು ರಾಖಿ ಹೇಳಿಕೊಂಡಿದ್ದಾರೆ. ಆದಿಲ್ ಮಾತಿಗೆ ಬೇಡ ಎನ್ನಲಾಗದೇ ಮೈಸೂರಿಗೆ ರಾಖಿ ಬಂದಿದ್ದರಂತೆ. ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರಂತೆ. ಆಗ ಆದಿಲ್ ತೋರಿದ ಆತಿಥ್ಯಕ್ಕೆ ಫಿದಾ ಆದರಂತೆ ರಾಖಿ. ಇದನ್ನೂ ಓದಿ : ಇಂಡಸ್ಟ್ರಿಯಲ್ಲಿ ನಟಿಯರು ಎದುರಿಸುವ ಸವಾಲು ಬಿಚ್ಚಿಟ್ಟ ರಮ್ಯಾ

    ಮದುವೆಗೆ ಮುನ್ನವೇ ಆದಿಲ್ ಕುಟುಂಬದ ಬಗ್ಗೆ ಬಾಂಬ್ ಸಿಡಿಸಿದ್ದಾರೆ ರಾಖಿ ಸಾವಂತ್. ತಾವು ಧರಿಸುವ ಬಟ್ಟೆಗಳು ಆದಿಲ್ ಕುಟುಂಬಕ್ಕೆ ಇಷ್ಟವಾಗುವುದಿಲ್ಲವಂತೆ. ಹಾಗಾಗಿ ಕಾಸ್ಟ್ಯೂಮ್‌ನಲ್ಲಿ ಬದಲಾವಣೆ ಮಾಡಿಕೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ.

  • ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ಗಾಗಲೇ ಪತಿಯಿಂದ ದೂರವಾಗಿರುವ ಬಾಲಿವುಡ್ ವಿವಾದಿತ ನಟಿ ರಾಖಿ, ಇದೀಗ ಮತ್ತೊಂದು ಹೊಸ ಸುದ್ದಿಕೊಟ್ಟಿದ್ದಾರೆ. ತಮ್ಮ ಹೊಸ ಬಾಯ್‌ಫ್ರೆಂಡ್‌ ಅನ್ನು ಅಭಿಮಾನಿಗಳಿಗಾಗಿ ಪರಿಚಯಿಸಿದ್ದಾರೆ. ಅದು ವಿನೂತನ ರೀತಿಯಲ್ಲಿ ಎನ್ನುವುದು ವಿಶೇಷ. ಇದನ್ನೂ ಓದಿ: ಮಂಡ್ಯ ಹುಡುಗರ ಪ್ರೀತಿಗೆ ಸನ್ನಿ ಲಿಯೋನ್ ಫಿದಾ

    ಪ್ರೀತಿ, ಗೀತಿ ಇತ್ಯಾದಿ ರಾಖಿಗೆ ಹೊಸದೇನೂ ಅಲ್ಲ. ಬಟ್ಟೆ ಬದಲಿಸಿದಷ್ಟೇ ಬಾಯ್‌ಫ್ರೆಂಡ್‌ಗಳನ್ನು ಅವರು ಬದಲಾಯಿಸುತ್ತಾ ಬಂದಿದ್ದಾರೆ. ಆದರೆ, ಈ ಬಾರಿ ಬಾಯ್‌ಫ್ರೆಂಡ್ ಜೀವ ಇರುವತನಕ ಇರಲಿದ್ದಾನೆ ಎಂದು ಪ್ರಾಮಿಸ್ ಮಾಡಿದ್ದಾರೆ. ಹೀಗಾಗಿಯೇ ಆ ಬಾಯ್‌ಫ್ರೆಂಡ್‌ನಿಂದ ಮೊದಲ ಉಡುಗೊರೆಯಾಗಿ ಬಿ.ಎಂ.ಡಬ್ಲ್ಯೂ ಕಾರನ್ನು ಪಡೆದುಕೊಂಡಿದ್ದಾರೆ. ಆದಿಲ್ ಮೂಲತಃ ಮೈಸೂರಿನವನು ಎನ್ನಲಾಗುತ್ತಿದೆ. ಇದನ್ನೂ ಓದಿ: ಕಿಚ್ಚನ `ವಿಕ್ರಾಂತ್ ರೋಣ’ ಚಿತ್ರದ ಜವಾಬ್ದಾರಿ ಹೊತ್ತ ಸಲ್ಮಾನ್ ಖಾನ್

    ಈ ಕುರಿತು ರಾಖಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆ ಹೊಸ ಬಾಯ್‌ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಂಡಿರುವ ರಾಖಿ, ‘ಸ್ವೀಟ್ ಹಾರ್ಟ್, ನನ್ನ ಜೀವನ’ ಎಂದು ಸೊಗಸಾಗಿ ಬರೆದುಕೊಂಡಿದ್ದಾರೆ. ಈ ಮೂಲಕ ತಾವು ಸಿಂಗಲ್ ಅಲ್ಲ ಎನ್ನುವುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ಹುಡುಗ ಯಾರು ಅಂತೀರಾ? ಅವನ ಹೆಸರು ಆದಿಲ್ ಖಾನ್ ದುರಾನಿ. ಅವನನ್ನು ಪರಿಚಯ ಮಾಡಿಕೊಡುತ್ತಾ, ಅವನನ್ನು ಮುದ್ದು ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ರಾಖಿ ಬಾಯ್ ಫ್ರೆಂಡ್ ಕೂಡ ಪ್ರೀತಿಯ ಹುಡುಗಿಯನ್ನು ಹೊಗಳುವುದರಲ್ಲಿ ಹಿಂದೆ ಬಿದ್ದಿಲ್ಲ. ರಾಖಿಯ ಬಗ್ಗೆ ಹಾಡಿ ಹೊಗಳಿದ್ದಾರೆ. ಅವಳ ಸರಳತೆ ಮತ್ತು ಎಂತಹ ವ್ಯಕ್ತಿತ್ವ ಎನ್ನುವುದನ್ನು ಬರೆದುಕೊಂಡಿದ್ದಾರೆ. ಈ ಹಿಂದೆಯೂ ತಾವು ಬಿಎಂಡಬ್ಲ್ಯೂ ಕಾರನ್ನು ರಾಖಿಗೆ ಕೊಡುಗೆಯಾಗಿ ನೀಡಿದಾಗಲೂ ರಾಖಿ ಬಗ್ಗೆ ಒಳ್ಳೆಯ ಮಾತುಗಳನ್ನೇ ಅವರು ಆಡಿದ್ದರು.

    ತಾವೀಗ ಬ್ರೇಕ್ ಅಪ್ ಖಿನ್ನತೆಯಿಂದ ಹೊರಗೆ ಬಂದಿದ್ದು, ಅದಕ್ಕೆ ಕಾರಣ ಆದಿಲ್ ಅಂತಾನೂ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಆದಿಲ್ ಬಗ್ಗೆ ಸಾಕಷ್ಟು ಮಾಹಿತಿಯನ್ನೂ ಅವರು ಕೊಡಲಿದ್ದಾರಂತೆ. ಹಾಗಂತ ಇಬ್ಬರೂ ಸೀರಿಯಸ್ ಆಗಿ ಲವ್ ಮಾಡುತ್ತಿದ್ದಾರಾ ಅಥವಾ ಇದೂ ಕೂಡ ಗಿಮಿಕ್ಕಾ? ಎಂದು ರಾಖಿಗೆ ಹಲವರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರಾಖಿ ಯಾವುದೇ ಉತ್ತರ ನೀಡಿಲ್ಲ.

  • ರಾಖಿ ಸಾವಂತ್‌ಗೆ ದುಬಾರಿ ಕಾರು ಕೊಡಿಸಿದ್ದು ಯಾರು? ವೀಡಿಯೋ ಸಮೇತ ಸಾಕ್ಷಿ ಇದೆ

    ರಾಖಿ ಸಾವಂತ್‌ಗೆ ದುಬಾರಿ ಕಾರು ಕೊಡಿಸಿದ್ದು ಯಾರು? ವೀಡಿಯೋ ಸಮೇತ ಸಾಕ್ಷಿ ಇದೆ

    ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ ಕಾಂಟ್ರವರ್ಸಿ ಕ್ವೀನ್ ಎಂದೇ ಫೇಮಸ್. ಈಕೆ ಹೋದ ಕಡೆಯಲ್ಲ ಕಾಂಟ್ರವರ್ಸಿ ಇದ್ದೆ ಇರುತ್ತೆ. ಕೆಲವೊಮ್ಮೆ ಅಭಿಮಾನಿಗಳಿಗೆ ಅವರೇ ಗಾಸಿಪ್ ಮೈ ಮೇಲೆ ಎಳೆದುಕೊಳ್ಳುತ್ತಾರೆ ಎಂದು ಅನ್ನಿಸಿದೆ. ಈ ನಡುವೆ ಈಗ ರಾಖಿ ಹೊಸ ದುಬಾರಿ ಕಾರನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ. ಈ ಸುದ್ದಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

    ಕೆಲವು ತಿಂಗಳ ಹಿಂದೆ ರಾಖಿ ಕಾರ್ ಶೋರೋಮ್‌ನ ಹೊರಗೆ ಕಾಣಿಸಿಕೊಂಡಾಗ, ಆಕೆಯನ್ನು ಮಾಧ್ಯಮಗಳು ನೀವು ಹೊಸ ಕಾರನ್ನು ಖರೀದಿಸುತ್ತಿರಾ ಎಂದು ಪ್ರಶ್ನಿಸಿದ್ದವು ಆಗ ಈ ನಟಿ, ಇಂತಹ ಐಷಾರಾಮಿ ಕಾರನ್ನು ಖರೀದಿಸಲು ನಾನು ಸಲ್ಮಾನ್ ಖಾನ್ ಅಲ್ಲ ಎಂದು ಪ್ರಾಮಾಣಿಕವಾಗಿ ಉತ್ತರಿಸಿದ್ದರು. ಆದರೆ ಈಗ ರಾಖಿ ಬಿಎಂಡಬ್ಲ್ಯು ಎಕ್ಸ್ 1 ನ ಮಾಲೀಕರಾಗಿದ್ದಾರೆ. ಈ ಕಾರನ್ನು ರಾಖಿ ಅವರಿಗೆ ಸ್ನೇಹಿತರಾದ ಆದಿಲ್ ಖಾನ್ ದುರಾನಿ ಮತ್ತು ಹೇರ್ ಅಂಡ್ ಸ್ಕೀನ್ ತಜ್ಞ ಶೆಲ್ಲಿ ಲಾಥರ್ ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತು ರಾಖಿ ಫೋಟೋ ಜೊತೆ ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by Rakhi Sawant (@rakhisawant2511)

    ಪೋಸ್ಟ್‌ನಲ್ಲಿ ಏನಿದೆ?
    ರಾಖಿ ತನಗೆ ಬಂದ ಗ್ರೇಟ್ ಸಪ್ರ್ರೈಸ್ ಗಿಫ್ಟ್ ಕುರಿತು ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಸರ್ ಪ್ರೈಸ್ ಉಡುಗೊರೆಗಾಗಿ ತನ್ನ ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ. ವೀಡಿಯೋದಲ್ಲಿ, ನಟ ಆದಿಲ್ ಮತ್ತು ಶೆಲ್ಲಿಯೊಂದಿಗೆ ಹೊಸ ಐಷಾರಾಮಿ ಕಾರಿನ ಮುಂದೆ ರಾಖಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ:  ಗರ್ಭಿಣಿ ಮಹಿಳೆಯ ಮೊದಲ ಕೆಲಸದ ರಹಸ್ಯ ಬಿಚ್ಚಿಟ್ಟ ನಟಿ ಪ್ರಣಿತಾ

     

    View this post on Instagram

     

    A post shared by Rakhi Sawant (@rakhisawant2511)

    ನನಗೆ ಇಂತಹ ದೊಡ್ಡ ಆಶ್ಚರ್ಯವನ್ನು ನೀಡಿದ ನನ್ನ ಆತ್ಮೀಯ ಸ್ನೇಹಿತ ಶೆಲ್ಲಿ ಲಾಥರ್ ಮತ್ತು ಆದಿಲ್ ಅವರಿಗೆ ತುಂಬಾ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿಸದ್ದಾರೆ. ವೀಡಿಯೋದಲ್ಲಿ ಹೊಸ ಕಾರಿನ ಮುಂದೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿರುವ ವೀಡಿಯೋದಲ್ಲಿ ಕಾಣಬಹುದು.

  • ‘ಯಾವುದನ್ನು’ ರಾಖಿ ಸಾವಂತ್ ವಾಟರ್ ಬಲೂನ್ ಅಂದ್ಕೊಂಡಿದ್ದು?

    ‘ಯಾವುದನ್ನು’ ರಾಖಿ ಸಾವಂತ್ ವಾಟರ್ ಬಲೂನ್ ಅಂದ್ಕೊಂಡಿದ್ದು?

    ದಾ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುವ ಬಾಲಿವುಡ್ ನಟಿ ರಾಖಿ ಸಾವಂತ್, ಇದೀಗ ಮತ್ತೊಂದು ಕಥೆ ಬಿಚ್ಚಿಟ್ಟಿದ್ದಾರೆ. ಅದು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ, ಪ್ರತಿಷ್ಠಿತ ವೇದಿಕೆಯ ಮೇಲೆ ಅಂಥದ್ದೊಂದು ಘಟನೆಯನ್ನು ನೆನಪಿಸಿಕೊಂಡಿದ್ದರಿಂದ ಅದೀಗ ಭಾರೀ ಸದ್ದು ಮಾಡುತ್ತಿದೆ. ಬೋಲ್ಡ್ ರಾಕಿ ಬೋಲ್ಡ್ ಎಂಬ ಟ್ಯಾಗ್ ಲೈನ್‍ನಲ್ಲಿ ಸುದ್ದಿ ಹರಿದಾಡುತ್ತಿದೆ.

    ಇತ್ತೀಚೆಗಷ್ಟೇ ನಡೆದ ಇಂಡಿಯನ್ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿ ಸಮಾರಂಭದ ಸಂದರ್ಶನ ವೇಳೆ ಮಾತನಾಡಿದ ಅವರು, ತಮ್ಮ ಬಾಲ್ಯದಲ್ಲಿ ಮಾಡಿದ್ದ ಕೆಲವು ಚೇಷ್ಟೆಗಳನ್ನು ನೆನಪಿಸಿಕೊಂಡಿದ್ದಾರೆ. ನಾನು ಚಿಕ್ಕವಳಾಗಿದ್ದಾಗ ನನ್ನ ಮನೆಯಲ್ಲಿರುವುದನ್ನು ವಾಟರ್ ಬಲೂನ್ ಎಂದು ತಿಳಿದು ಕಾಂಡೋಮ್ ಒಳಗೆ ಬಣ್ಣದ ನೀರನ್ನು ತುಂಬಿ ಜನರ ಮುಖದ ಮೇಲೆ ಎಸೆಯುತ್ತಿದ್ದೆ. ಆದರೆ ನನಗೆ ಅದು ಕಾಂಡೋಮ್ ಎಂದು ತಿಳಿದಿರಲಿಲ್ಲ. ಎಲ್ಲರೂ ನನ್ನನ್ನು ನಿಂದಿಸುತ್ತಿದ್ದರು. ಆಗ ನಾನು ಕೋಪ ಮಾಡಿಕೊಳ್ಳಬೇಡಿ ಕೇವಲ ಹೋಳಿಯಷ್ಟೇ ಎಂದು ಹೇಳುತ್ತಿದ್ದೆ. ಹೀಗಿದ್ದರೂ ಜನ ಈಡಿಯಟ್, ನಿನ್ನನ್ನು ಕೊಂದು ಬಿಡುತ್ತೇನೆ ಎಂದು ಬೈಯ್ಯುತ್ತಿದ್ದರು. ನಾನು ಯಾಕೆ ನನ್ನನ್ನು ನಿಂದಿಸುತ್ತಿದ್ದಾರೆ, ಅದು ಕೇವಲ ಹೋಳಿ ಅಂದುಕೊಳ್ಳುತ್ತಿದ್ದೆ. ಆದರೆ ನಂತರ ಅದು ವಾಟರ್ ಬಲೂನ್ ಅಲ್ಲ, ಕಾಂಡೋಮ್ ಅಂತ ತಿಳಿದುಬಂದಿತು ಎಂದಿದ್ದಾರೆ. ಇದನ್ನೂ ಓದಿ : ಇನ್ಮುಂದೆ ಬಾಲಿವುಡ್ ನಿರ್ದೇಶಕರಿಗೆ ಸಿಗಲ್ಲ ಆಲಿಯಾ ಭಟ್

     

    View this post on Instagram

     

    A post shared by Rajeev Khinchi (@the_rajeevkhinchi)

    ಭಾನುವಾರ ಐಟಿಎ 2022 ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮುಂಬೈನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅನೇಕ ಬಾಲಿವುಡ್ ತಾರೆಯರು ಪಾಲ್ಗೊಂಡಿದ್ದರು. ಇದೇ ವೇಳೆ ರೆಡ್ ಕಾರ್ಪೆಟ್ ಮೇಲೆ ಭೇಟಿಯಾದ ನಟ ರಣ್‍ವೀರ್ ಸಿಂಗ್ ಅವರನ್ನು ರಾಖಿ ಸಾವಂತ್ ಕ್ಯಾಮೆರಾ ಮುಂದೆ ಎತ್ತಿಕೊಂಡು ಸಾಹಸ ಪ್ರದರ್ಶಿಸಿದರು. ಇನ್ನೂ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ : ರಾಧಿಕಾ ಪಂಡಿತ್ ಬರ್ತಡೇ ಸೆಲೆಬ್ರೆಷನ್: ಫೋಟೋ ಗ್ಯಾಲರಿ