Tag: ರಾಖಿ ಸಾವಂತ್

  • ರಾಖಿ ಮತ್ತು ಆಕೆಯ ಕಡೆಯವರು ನನ್ನ ಟ್ರ್ಯಾಪ್ ಮಾಡಿದ್ದರು: ಆದಿಲ್ ಹೇಳಿಕೆ

    ರಾಖಿ ಮತ್ತು ಆಕೆಯ ಕಡೆಯವರು ನನ್ನ ಟ್ರ್ಯಾಪ್ ಮಾಡಿದ್ದರು: ಆದಿಲ್ ಹೇಳಿಕೆ

    ಬಾಲಿವುಡ್ (Bollywood) ನಟಿ ರಾಖಿ ಸಾವಂತ್ ಮೇಲೆ ಆಕೆಯ ಪತಿ, ಮೈಸೂರಿನ (Mysore) ಹುಡುಗ ಆದಿಲ್ (Adil) ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಜೈಲಿನಿಂದ ಆಚೆ ಬಂದಿರುವ ಆದಿಲ್, ತನ್ನನ್ನು ರಾಖಿ (Rakhi Sawant) ಮತ್ತು ಆಕೆಯ ಕಡೆಯವರು ಟ್ರ್ಯಾಪ್ ಮಾಡಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. ಶೀಘ್ರದಲ್ಲೇ ಮಾಧ್ಯಗೋಷ್ಠಿ ಕರೆದು ಎಲ್ಲವನ್ನೂ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

    ರಾಖಿ ಸಾವಂತ್ ನೀಡಿದ್ದ ದೂರಿನನ್ವಯ ಆದಿಲ್ ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ನಿಲ್ಲಿಸಿದ್ದರು. ನ್ಯಾಯಾಲಯ ಆದಿಲ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದೀಗ ಆದಿಲ್ ಜೈಲಿನಿಂದ ಹೊರ ಬಂದಿದ್ದಾರೆ. ಮಾಧ್ಯಮಗಳ ಕಣ್ಣಿಗೂ ಬಿದ್ದಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶೀಘ್ರದಲ್ಲೇ ಎಲ್ಲದಕ್ಕೂ ಉತ್ತರ ನೀಡುವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ನ್ಯೂಯಾರ್ಕ್ ವೆಕೇಷನ್ ಮೂಡ್‌ನಲ್ಲಿದ್ದಾರೆ ಸಮಂತಾ

    ರಾಖಿಯೇ ತನಗೆ ಮೋಸ ಮಾಡಿದ್ದು. ಅದೊಂದು ರೀತಿಯಲ್ಲಿ ನನ್ನನ್ನು ಟ್ರ್ಯಾಪ್ ಮಾಡಲಾಗಿತ್ತು. ಯಾರು, ಯಾರಿಗೆ ಮೋಸ ಮಾಡಿದರು ಎನ್ನುವುದನ್ನು ನಾನು ಸಾಕ್ಷಿ ಸಮೇತ ತೆರೆದಿಡುತ್ತೇನೆ. ಈ ಪ್ರಕರಣದಿಂದ ನಾನು ಹಿಂದೆ ಸರಿಯುವ ಮಾತೇ ಇಲ್ಲ. ನನಗೆ ಇಲ್ಲಿ ಮೋಸವಾಗಿದ್ದು ಎಂದಿದ್ದಾರೆ ಆದಿಲ್.

     

    ಆದಿಲ್ ಧರ್ಮಕ್ಕೆ ತಾನು ಮತಾಂತರವಾಗಿ ಮದುವೆ ಆಗಿದ್ದಾಗಿ ರಾಖಿ ಸಾವಂತ್ ಹೇಳಿದ್ದರು. ಆದಿಲ್ ಜೊತೆಗೆ ಮದುವೆಯಾಗಿದ್ದ ಫೋಟೋವನ್ನೂ ಅವರು ರಿಲೀಸ್ ಮಾಡಿದ್ದರು. ಆನಂತರ ರಾಖಿ ಪತಿಯ ಮೇಲೆಯೇ ಗುರುತರ ಆರೋಪ ಮಾಡಿ ಜೈಲಿಗೂ ಕಳುಹಿಸಿದ್ದರು. ಇದೀಗ ಆದಿಲ್ ಬೇಲ್ ಮೇಲೆ ಆಚೆ ಬಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತ್ನಿ ರಾಖಿ ಸಾವಂತ್ ವಿರುದ್ಧ ಗುಡುಗಿದ ಮೈಸೂರು ಹುಡುಗ ಆದಿಲ್

    ಪತ್ನಿ ರಾಖಿ ಸಾವಂತ್ ವಿರುದ್ಧ ಗುಡುಗಿದ ಮೈಸೂರು ಹುಡುಗ ಆದಿಲ್

    ಬಾಲಿವುಡ್ (Bollywood) ನಟಿ ರಾಖಿ ಸಾವಂತ್ ವಿರುದ್ಧ ಮೈಸೂರು (Mysore) ಹುಡುಗ ಆದಿಲ್ (Adil) ಗುಡುಗಿದ್ದಾರೆ. ರಾಖಿ ಮಾಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ಆದಿಲ್, ತಮಗೆ ರಾಖಿಯಿಂದ ಆದ ತೊಂದರೆಯನ್ನು ಎಳೆ ಎಳೆಯಾಗಿ ಬಿಚ್ಚಿಡುವುದಾಗಿ ಹೇಳಿಕೊಂಡಿದ್ದಾರೆ. ರಾಖಿಯಿಂದ ತಮಗೆ ಏನೆಲ್ಲ ಮೋಸ (Cheating) ಆಗಿದೆ ಎಂದು ಪತ್ರಿಕಾಗೋಷ್ಠಿ ಮಾಡಿಯೇ ಹೇಳುತ್ತೇನೆ ಎಂದಿದ್ದಾರೆ.

    ಆದಿಲ್ ತನ್ನನ್ನು ಮದುವೆಯಾಗಿ ವಂಚಿಸಿದ್ದಾನೆ. ಹಿಂಸೆ ನೀಡಿದ್ದಾನೆ. ಅಲ್ಲದೇ, ತನ್ನ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾನೆ ಎಂದು ರಾಖಿ (Rakhi Sawant) ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿಲ್ ಬಂಧನವಾಗಿತ್ತು. ಆನಂತರ ಜೈಲಿನಿಂದಲೇ  ತನ್ನನ್ನು ಕೊಲ್ಲುವುದಾಗಿ ಆದಿಲ್ ಹೆದರಿಸುತ್ತಿದ್ದಾನೆ ಎಂದೂ ರಾಖಿ ಮಾತನಾಡಿದ್ದರು.

     

    ನಾನು ಯಾರಿಗೂ ಮೋಸ ಮಾಡಿಲ್ಲ. ನನಗೆ ಮೋಸವಾಗಿದೆ. ಕೋಟ್ಯಾಂತರ ರೂಪಾಯಿ ಯಾರು, ಯಾರಿಗೆ ಕೊಡಬೇಕು ಎನ್ನುವುದನ್ನು ಸಾಕ್ಷಿ ಸಮೇತ ತರುತ್ತೇನೆ. ಖಾಸಗಿ ವಿಚಾರಗಳನ್ನು ಹಂಚಿಕೊಳ್ಳಬಾರದು ಎಂದು ಸುಮ್ಮನಿದ್ದೆ. ಅದು ತಪ್ಪು ಅನಿಸುತ್ತಿದೆ. ಎಲ್ಲವನ್ನೂ ಮಾಧ್ಯಮಗೋಷ್ಠಿ ಮಾಡಿಯೇ ಹೇಳುತ್ತೇನೆ ಎಂದು ಆದಿಲ್ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂದು ಪತಿ, ಇಂದು ಕಾರು ಡ್ರೈವರ್ ನ ಜೈಲಿಗೆ ಕಳಿಸ್ತೀನಿ ಎಂದ ರಾಖಿ ಸಾವಂತ್

    ಅಂದು ಪತಿ, ಇಂದು ಕಾರು ಡ್ರೈವರ್ ನ ಜೈಲಿಗೆ ಕಳಿಸ್ತೀನಿ ಎಂದ ರಾಖಿ ಸಾವಂತ್

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant)ಗೆ ಪತಿಯಿಂದ ಮಾತ್ರವಲ್ಲ, ತಮ್ಮ ಕಾರು ಡ್ರೈವರ್ ನಿಂದಲೂ ಮೋಸವಾಗಿದೆಯಂತೆ. ಹಾಗಾಗಿ ಅವನ ವಿರುದ್ಧ ದೂರು ದಾಖಲಿಸಿದ್ದಾರೆ. ಆತನನ್ನು ಜೈಲಿಗೆ (Jail) ಕಳುಹಿಸಿ ಬುದ್ದಿ ಕಲಿಸುವುದಾಗಿ ರಾಖಿ ಹೇಳಿಕೊಂಡಿದ್ದಾರೆ. ಅಂದು ಪತಿ, ಇಂದು ಕಾರ್ ಡ್ರೈವರ್ ನನ್ನೂ ಕಂಬಿ ಹಿಂದೆ ಕಳುಹಿಸಲು ರಾಖಿ ಶಪಥ ಮಾಡಿದ್ದಾರೆ.

    ಈಗಾಗಲೇ ಪತಿ ಆದಿಲ್ (Adil) ತಮಗೆ ಮೋಸ (Cheating) ಮಾಡಿದ್ದಾರೆ ಎಂದು ರಾಖಿ ಆತನನ್ನು ಜೈಲಿಗೆ ಕಳುಹಿಸಿದ್ದಾರೆ. ಹಲವು ತಿಂಗಳಿಂದ ಆದಿಲ್ ಮೈಸೂರು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಆ ನೋವಿನಿಂದ ರಾಖಿ ಆಚೆ ಬರುವ ಮುನ್ನವೇ ತಮ್ಮ ಕಾರು ಡ್ರೈವರ್ ನಿಂದಲೂ ತಮಗೆ ಮೋಸವಾಗಿದೆ ಎಂದು ಕ್ಯಾಮೆರಾ ಎದುರು ಹೇಳಿಕೊಂಡಿದ್ದಾರೆ. ಅಲ್ಲದೇ, ಕಣ್ಣೀರು ಕೂಡ ಹಾಕಿದ್ದಾರೆ. ಇದನ್ನೂ ಓದಿ:‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಪ್ರಕಾಶ್ ರೈ- ರಮ್ಯಾಕೃಷ್ಣ

    ‘ನನ್ನ ಕಾರು ಡ್ರೈವರ್ (Car Driver) ಬಡವ ಎಂದು ಅವನನ್ನು ನೇಮಿಸಿಕೊಂಡೆ. ಅವನು ಕೂಡ ನನಗೆ ಮೋಸ ಮಾಡಿದ್ದಾನೆ. ಕಾರು ಚಾಲಕ ಓಡಿ ಹೋಗಿದ್ದಾನೆ. ಹಣ, ಕಾರು ಕೀ ಜೊತೆ ಪರಾರಿಯಾಗಿದ್ದಾನೆ. ಕಾರು ಚಾಲಕ ಉತ್ತರ ಪ್ರದೇಶದ ಪಪ್ಪು ಯಾದವ್ ಆಗಿದ್ದು, ಅವನ ವಿರುದ್ಧ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ’ ಎಂದಿದ್ದಾರೆ ರಾಖಿ.

     

    ತಮಗೆ ಈ ಜಗತ್ತಿನಲ್ಲಿ ಬದುಕಬೇಕೋ ಅಥವಾ ಬೇರೆ ಗ್ರಹದಲ್ಲಿ ವಾಸವಾಗಬೇಕೊ ಗೊತ್ತಾಗುತ್ತಿಲ್ಲ. ನನ್ನ ಜೀವನದಲ್ಲಿ ಬಂದವರೆಲ್ಲ ನನಗೆ ಮೋಸ ಮಾಡುತ್ತಿದ್ದಾರೆ ಎಂದು ರಾಖಿ ದುಃಖಿಸಿದ್ದಾರೆ. ಈ ನಡೆಯಿಂದ ತಮಗೆ ಸಾಕಷ್ಟು ಬೇಸರವಾಗಿರುವುದಾಗಿ ಸೋಷಿಯಲ್ ಮೀಡಿಯಾದಲ್ಲೂ ಅವರು ಬರೆದುಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಂಡನಿಂದ ಮಾತ್ರವಲ್ಲ, ಡ್ರೈವರ್ ನಿಂದಲೂ ನಟಿ ರಾಖಿಗೆ ಮೋಸ : ಕಣ್ಣೀರಿಟ್ಟ ನಟಿ

    ಗಂಡನಿಂದ ಮಾತ್ರವಲ್ಲ, ಡ್ರೈವರ್ ನಿಂದಲೂ ನಟಿ ರಾಖಿಗೆ ಮೋಸ : ಕಣ್ಣೀರಿಟ್ಟ ನಟಿ

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಬೀದಿಯಲ್ಲಿ ಮತ್ತೆ ಕಣ್ಣೀರಿಟ್ಟಿದ್ದಾರೆ. ನನಗೆ ಪತಿಯಿಂದ ಮಾತ್ರವಲ್ಲ, ನನ್ನ ಕಾರು ಡ್ರೈವರ್ ನಿಂದಲೂ ಮೋಸವಾಗಿದೆ (Cheating). ಅವನ ವಿರುದ್ಧ ದೂರು  (Complaint)ನೀಡಲು ಆಟೋದಲ್ಲಿ ಹೊರಟಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಬೆಲೆಬಾಳುವ ಬಟ್ಟೆಗಳನ್ನು ಹಾಕಿಕೊಂಡು ಆಟೋದಲ್ಲಿ ರಾಖಿ ಹೊರಟಿದ್ದ ವಿಡಿಯೋ ವೈರಲ್ ಆಗಿವೆ.

    ಈಗಾಗಲೇ ಪತಿ ಆದಿಲ್ (Adil) ತಮಗೆ ಮೋಸ ಮಾಡಿದ್ದಾರೆ ಎಂದು ರಾಖಿ ಆತನನ್ನು ಜೈಲಿಗೆ ಕಳುಹಿಸಿದ್ದಾರೆ. ಹಲವು ತಿಂಗಳಿಂದ ಆದಿಲ್ ಮೈಸೂರು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಆ ನೋವಿನಿಂದ ರಾಖಿ ಆಚೆ ಬರುವ ಮುನ್ನವೇ ತಮ್ಮ ಕಾರು ಡ್ರೈವರ್ ನಿಂದಲೂ ತಮಗೆ ಮೋಸವಾಗಿದೆ ಎಂದು ಕ್ಯಾಮೆರಾ ಎದುರು ಹೇಳಿಕೊಂಡಿದ್ದಾರೆ. ಅಲ್ಲದೇ, ಕಣ್ಣೀರು ಕೂಡ ಹಾಕಿದ್ದಾರೆ. ಇದನ್ನೂ ಓದಿ:ಅಜ್ಜಿಯನ್ನು ಕಳೆದುಕೊಂಡ ನೋವಿನಲ್ಲಿ ನಟಿ- ಕಣ್ಣೀರಿಟ್ಟ ನಿತ್ಯಾ ಮೆನನ್

    ‘ನನ್ನ ಕಾರು ಡ್ರೈವರ್ (Car Driver) ಬಡವ ಎಂದು ಅವನನ್ನು ನೇಮಿಸಿಕೊಂಡೆ. ಅವನು ಕೂಡ ನನಗೆ ಮೋಸ ಮಾಡಿದ್ದಾರೆ. ಕಾರು ಚಾಲಕ ಓಡಿ ಹೋಗಿದ್ದಾನೆ. ಹಣ, ಕಾರು ಕೀ ಜೊತೆ ಅವರು ಪರಾರಿಯಾಗಿದ್ದಾನೆ. ಕಾರು ಚಾಲಕ ಉತ್ತರ ಪ್ರದೇಶದ ಪಪ್ಪು ಯಾದವ್ ಆಗಿದ್ದು, ಅವನ ವಿರುದ್ಧ ದೂರು ನೀಡಲು ಓಶಿವಾರ ಪೊಲೀಸ್ ಠಾಣೆಗೆ ದೂರು ಕೊಡಲು ಆಟೋದಲ್ಲಿ ಹೋಗುತ್ತಿದ್ದೇನೆ’ ಎಂದಿದ್ದಾರೆ ರಾಖಿ.

     

    ತಮಗೆ ಈ ಜಗತ್ತಿನಲ್ಲಿ ಬದುಕಬೇಕೋ ಅಥವಾ ಬೇರೆ ಗ್ರಹದಲ್ಲಿ ವಾಸವಾಗಬೇಕೊ ಗೊತ್ತಾಗುತ್ತಿಲ್ಲ. ನನ್ನ ಜೀವನದಲ್ಲಿ ಬಂದವರೆಲ್ಲ ನನಗೆ ಮೋಸ ಮಾಡುತ್ತಿದ್ದಾರೆ ಎಂದು ರಾಖಿ ದುಃಖಿಸಿದ್ದಾರೆ. ಈ ನಡೆಯಿಂದ ತಮಗೆ ಸಾಕಷ್ಟು ಬೇಸರವಾಗಿರುವುದಾಗಿ ಸೋಷಿಯಲ್ ಮೀಡಿಯಾದಲ್ಲೂ ಅವರು ಬರೆದುಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹದಿನೈದೇ ದಿನದಲ್ಲಿ ಟೊಮ್ಯಾಟೋ ಬೆಳೆಯೋದು ಹೇಗೆ? : ರಾಖಿ ಸಾವಂತ್ ಪಾಠ

    ಹದಿನೈದೇ ದಿನದಲ್ಲಿ ಟೊಮ್ಯಾಟೋ ಬೆಳೆಯೋದು ಹೇಗೆ? : ರಾಖಿ ಸಾವಂತ್ ಪಾಠ

    ನಸಲ್ಲೂ ಬೆಚ್ಚಿ ಬೀಳಿಸುತ್ತಿದೆ ಟೊಮ್ಯಾಟೋ ದರ.  ಬೆಲೆ ಗಗನಕ್ಕೇರಿ ಹಲವು ದಿನಗಳೇ ಕಳೆದರೂ, ಈ ಹೊತ್ತಿಗೂ ದರ ಇಳಿಯುತ್ತಿಲ್ಲ. ಟೊಮ್ಯಾಟೋ ಕುರಿತಾಗಿ ಸಾಕಷ್ಟು ಜೋಕ್ ಗಳು ಹುಟ್ಟಿಕೊಂಡಿವೆ. ಟೊಮ್ಯಾಟೋ ಕಾಯಲು ಸಿಸಿಟಿವಿ ಕ್ಯಾಮೆರಾ ಅಳವಡಿಸುವುದರಿಂದ ಹಿಡಿದು ಬೌನ್ಸರ್ ಹಾಕಿ ಕಾಯುವಲ್ಲಿಗೆ ವಿಡಿಯೋಗಳು ಹರಿದಾಡುತ್ತಿದೆ. ಆದರೆ ಬಾಲಿವುಡ್ (Bollywood) ನಟಿ ರಾಖಿ ಸಾವಂತ್ , ಈ ಕುರಿತು ತಲೆ ಕೆಡಿಸಿಕೊಂಡಿಲ್ಲ.

    ಹೌದು, ರಾಖಿ ಸಾವಂತ್ ((Rakhi Sawant)) ಟೊಮ್ಯಾಟೋ ಬೆಲೆ ಗಗನಕ್ಕೇರಿದ ಕುರಿತಾಗಿ ತಲೆಬಿಸಿ ಮಾಡಿಕೊಂಡಿಲ್ಲ. ಬದಲಾಗಿ ಕೇವಲ ಹದಿನೈದೇ ದಿನದಲ್ಲಿ ಟೊಮ್ಯಾಟೋ ಬೆಳೆಯುವುದು ಹೇಗೆ ಎನ್ನುವುದನ್ನು ಕಲಿತಿದ್ದಾರೆ. ಅದನ್ನು ವಿಡಿಯೋ ಮಾಡಿ, ಇತರರಿಗೂ ಟೊಮ್ಯಾಟೋ ಬೆಳೆಯುವಂತೆ ವಿನಂತಿಸಿದ್ದಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ

    ಮೊದಲು ಪುಟ್ಟದೊಂದು ಪಾಟ್ ತಗೆದುಕೊಂಡು ಅದರಲ್ಲಿ ಕಾಲು ಭಾಗ ಮಣ್ಣು ತುಂಬಿದ್ದಾರೆ. ಆ ಮಣ್ಣಿನಲ್ಲಿ ನಾಲ್ಕೈದು ಟೊಮ್ಯಾಟೋ ಹಾಕುತ್ತಾರೆ. ಅದರ ಮೇಲೆ ಟೊಮ್ಯಾಟೋ ಗಿಡಿ ನೆಡುತ್ತಾರೆ. ಅದು ಕೇವಲ 15 ದಿನದಲ್ಲಿ ಟೊಮ್ಯಾಟೋ (Tomato) ಕೊಡುತ್ತದೆ ಎಂದು ಅವರು ಹೇಳುತ್ತಾರೆ. ಈ ಗಿಡವನ್ನು ಆರೈಕೆ ಮಾಡಲೆಂದು ಒಬ್ಬ ಹುಡುಗನನ್ನು ರಾಖಿ ನೇಮಿಸಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.

     

    ಹದಿನೈದು ದಿನಕ್ಕೆ ಟೊಮ್ಯಾಟೋ ಬೆಳೆ (Crop) ಬರತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ರಾಖಿ ರಂಪಾಟ ಮಾಡದೇ ಮೊದಲ ಬಾರಿಗೆ ವಿಡಿಯೋ ಮಾಡಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ. ಜೊತೆಗೆ ಟೊಮ್ಯಾಟೋ ಬೆಳೆಯನ್ನು ಆರೈಕೆ ಮಾಡಲು ನೇಮಿಸಿಕೊಂಡಿರುವ ಹುಡುಗನ ಸಂಬಳದಲ್ಲಿ ಅದೆಷ್ಟೋ ಕೆಜಿ ಟೊಮ್ಯಾಟೋ ಖರೀದಿಸಬಹುದಿತ್ತು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಹುಲ್ ಗಾಂಧಿ ಬಿಗ್ ಬಾಸ್ ಶೋಗೆ ಹೋದರೆ ಪ್ರಧಾನಿ ಆಗ್ತಾರೆ : ನಟಿ ರಾಖಿ ಭವಿಷ್ಯ

    ರಾಹುಲ್ ಗಾಂಧಿ ಬಿಗ್ ಬಾಸ್ ಶೋಗೆ ಹೋದರೆ ಪ್ರಧಾನಿ ಆಗ್ತಾರೆ : ನಟಿ ರಾಖಿ ಭವಿಷ್ಯ

    ವರೆಗೂ ಸಿನಿಮಾ ರಂಗದ ಬಗ್ಗೆ ಮಾತ್ರ ಕಾಮೆಂಟ್ ಮಾಡುತ್ತಿದ್ದ ವಿವಾದಿತ ತಾರೆ ರಾಖಿ ಸಾವಂತ್ (Rakhi Sawant), ಈ ಬಾರಿ ರಾಜಕಾರಣಿಯ ಕುರಿತು ಭವಿಷ್ಯ ನುಡಿದಿದ್ದಾರೆ. ಅದರಲ್ಲೂ ರಾಹುಲ್ ಗಾಂಧಿ (Rahul Gandhi) ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅವರು ಪ್ರಧಾನಿ ಆಗಬೇಕು ಎನ್ನುವ ಕನಸಿನೊಂದಿಗೆ ಒಂದಷ್ಟು ಸಲಹೆಯನ್ನೂ ರಾಖಿ ಸಾವಂತ್ ನೀಡಿದ್ದಾರೆ.

    ರಾಹುಲ್ ಪ್ರಧಾನಿ ಆಗಬೇಕು ಎನ್ನುವುದು ಕೇವಲ ಕಾಂಗ್ರೆಸ್ಸಿಗರ ಕನಸು ಮಾತ್ರವಲ್ಲ, ರಾಖಿ ಕೂಡ ಅಂಥದ್ದೊಂದು ಕನಸು ಕಂಡಿದ್ದಾರೆ. ಹಾಗಾಗಿಯೇ ರಾಹುಲ್ ಪ್ರಧಾನಿ ಆಗಬೇಕು ಎಂದರೆ ಅವರು ಬಿಗ್ ಬಾಸ್ ಮನೆಗೆ ಹೋಗಬೇಕು ಎಂದಿದ್ದಾರೆ. ಬಿಗ್ ಬಾಸ್ (Bigg Boss) ಗೆ ಹೋದರೆ ಮತ್ತಷ್ಟು ಪಾಪ್ಯುಲರ್ ಆಗುತ್ತಾರೆ. ಆನಂತರ ಪ್ರಧಾನಿ (Prime Minister) ಕೂಡ ಆಗಬಹುದು ಎಂದು ರಾಖಿ ಬರೆದುಕೊಂಡಿದ್ದಾರೆ.

    ರಾಖಿ ಮತ್ತೆ ಮದುವೆ ಆಗಲ್ವಂತೆ..

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಮತ್ತೆ ಪತಿ ಆದಿಲ್ ಖಾನ್ (Adil Khan) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೈಲಿನಿಂದ ಅವನು ಮೆಸೇಜ್ ಕಳುಹಿಸಿರುವ ಕುರಿತು ಮಾತನಾಡಿದ್ದಾರೆ. ಅಲ್ಲದೇ, ಆತನ ವಿರುದ್ಧ ಮತ್ತಷ್ಟು ಆರೋಪಗಳನ್ನೂ ಮಾಡಿದ್ದು, ಮತ್ತೆಂದೂ ತಾವು ಮದುವೆ (Marriage) ಆಗುವುದಿಲ್ಲ ಎಂದು ಘೋಷಿಸಿದ್ದಾರೆ. ಆದಿಲ್ ಗೆ ಬುದ್ಧಿ ಕಲಿಸದೇ ತಾವು ಬಿಡುವುದಿಲ್ಲ ಎಂದಿದ್ದಾರೆ ರಾಖಿ.

    ಸದ್ಯ ಆದಿಲ್ ಮೈಸೂರು ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ರಾಖಿಗೆ ಸಂದೇಶವನ್ನೂ ಕಳುಹಿಸಿದ್ದಾನಂತೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ರಾಖಿ, ‘ನನ್ನಿಂದ ತಪ್ಪಾಗಿದೆ. ಮತ್ತೆ ನಾನು ನಿನ್ನೊಂದಿಗೆ ಬದುಕುವೆ. ನನ್ನ ಮೇಲಿನ ದೂರನ್ನು ವಾಪಸ್ಸು ತೆಗೆದುಕೊ. ಒಟ್ಟಿಗೆ ಖುಷಿಯಾಗಿ ಬದುಕೋಣ’ ಅಂತ ಆದಿಲ್ ಮಸೇಜ್ ಕಳುಹಿಸಿದ್ದಾನಂತೆ. ಆದರೆ, ಆದಿಲ್ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂದಿದ್ದಾರೆ ರಾಖಿ. ಇದನ್ನೂ ಓದಿ:ಜುಲೈ 12ಕ್ಕೆ ಸೆಂಚುರಿ ಸ್ಟಾರ್ ಬರ್ತ್‌ಡೇಗೆ ಸಿದ್ಧತೆ ಹೇಗಿದೆ ಗೊತ್ತಾ?

    ‘ನಾನು ಆದಿಲ್ ಗೆ ಡಿವೋರ್ಸ್ ಕೊಡುವುದಿಲ್ಲ. ಅವನು ನನ್ನಂತೆ ಇನ್ನ್ಯಾರಿಗೂ ಮೋಸ ಮಾಡಬಾರದು. ನಾನೂ ಕೂಡ ಮದುವೆಯಾಗಲಾರೆ. ಮತ್ತೆ ಅವನು ನನ್ನೊಂದಿಗೆ ಬದುಕುತ್ತೇನೆ ಎನ್ನುತ್ತಾನೆ. ಬಹುಶಃ, ಅವನು ನನ್ನನ್ನು ಸಾಯಿಸೋದಕ್ಕೆ ಪ್ಲ್ಯಾನ್ ಮಾಡಿರಬಹುದು. ಹಾಗಾಗಿ ಅವನು ನನ್ನ ಜೊತೆ ಇರುತ್ತೇನೆ ಎಂದು ಹೇಳುತ್ತಿದ್ದಾನೆ. ಆದರೆ, ಅವನನ್ನು ನಾನು ನಂಬುವುದಿಲ್ಲ. ಮತ್ತೆ ಒಟ್ಟಿಗೆ ಬದುಕುವುದಿಲ್ಲ’ ಎನ್ನುತ್ತಾರೆ ರಾಖಿ.

     

    ಆದಿಲ್ ಜೊತೆ ಬೇರೆ ಯಾರೂ ಮದುವೆ ಆಗಬಾರದು ಎನ್ನುವ ಕಾರಣಕ್ಕಾಗಿ ಡಿವೋರ್ಸ್ ನೀಡುವುದಿಲ್ಲ ಎಂದೂ ರಾಖಿ ಘೋಷಣೆ ಮಾಡಿದ್ದಾರೆ. ಡಿವೋರ್ಸ್ ನೀಡಿದರೆ ಅವನು ಮತ್ತೊಂದು ಮದುವೆ ಆಗುತ್ತಾನೆ. ಮತ್ತೆ ಅವನ ಬಾಳಲ್ಲಿ ಯಾವ ಹುಡುಗಿಯೂ ಬರುವುದು ಬೇಡ ಎನ್ನುವುದು ರಾಖಿ ಸಾವಂತ್ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಲ್ಮಾನ್ ಮದ್ವೆ ಆಗೋವರೆಗೂ ಚಪ್ಪಲಿ ಹಾಕಲ್ಲ ಎಂದ ರಾಖಿ ಸಾವಂತ್

    ಸಲ್ಮಾನ್ ಮದ್ವೆ ಆಗೋವರೆಗೂ ಚಪ್ಪಲಿ ಹಾಕಲ್ಲ ಎಂದ ರಾಖಿ ಸಾವಂತ್

    ಬಾಲಿವುಡ್ ನಟ ಸಲ್ಮಾನ್ ಖಾನ್ ಮೇಲೆ ನಟಿ ರಾಖಿ ಸಾವಂತ್ (Rakhi Sawant) ಗೆ ಎಲ್ಲಿಲ್ಲದ ಅಭಿಮಾನ ಮತ್ತು ಪ್ರೀತಿ. ರಾಖಿಯ ಕಷ್ಟದ ದಿನಗಳಲ್ಲಿ ಸಲ್ಮಾನ್ (Salman Khan) ಕೈ ಹಿಡಿದಿದ್ದರು ಎನ್ನುವ ಕಾರಣಕ್ಕಾಗಿ ಸಲ್ಮಾನ್ ಪರ ಬ್ಯಾಟಿಂಗ್ ಮಾಡುತ್ತಲೇ ಇರುತ್ತಾರೆ. ಈ ಬಾರಿ ಸಲ್ಮಾನ್ ಮದುವೆ ಕುರಿತಾಗಿ ರಾಖಿ ಮಾತನಾಡಿದ್ದಾರೆ.

    ವಿಮಾನ ನಿಲ್ದಾಣಕ್ಕೆ ಬರಿಗಾಲಿನಲ್ಲಿ ಆಗಮಿಸಿದ್ದ ರಾಖಿ ಸಾವಂತ್, ಏಕೆ ಹೀಗೆ ಎಂಬ ಪ್ರಶ್ನೆ ಎದುರಾಯಿತು. ಯಾಕೆ ಚಪ್ಪಲಿ (Chappali) ಹಾಕಿಲ್ಲ ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿರುವ ರಾಖಿ, ‘ನಾನು ಸಲ್ಮಾನ್ ಖಾನ್ ಮದುವೆ ಆಗೋವರೆಗೂ ಚಪ್ಪಲಿ ಹಾಕಬಾರದು ಎನ್ನುವ ನಿರ್ಧಾರಕ್ಕೆ ಬಂದಿರುವೆ.  ಆ ರೀತಿ ಶಪಥ ಮಾಡಿರುವೆ’ ಎಂದಿದ್ದಾರೆ. ಈ ಮೂಲಕ ಅಚ್ಚರಿ ಮೂಡಿಸಿದ್ದಾರೆ.  ಇದನ್ನೂ ಓದಿ:ಕೊನೆಗೂ ತನ್ನ ಮಗುವಿನ ತಂದೆ ಬಗ್ಗೆ ಗುಟ್ಟು ರಟ್ಟು ಮಾಡಿದ ಇಲಿಯಾನಾ

    ಸಲ್ಮಾನ್ ಖಾನ್ ಪರವಾಗಿ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ ಎನ್ನುವ ಕಾರಣಕ್ಕಾಗಿ ಲಾರೆನ್ಸ್ ಬಿಷ್ಣೋಯ್ ಟೀಮ್ ನಿಂದ ತಮಗೆ ಬೆದರಿಕೆ ಕರೆ ಬಂದಿದೆ ಎಂದು ರಾಖಿ ಹೇಳಿದ್ದರು. ಈ ಕುರಿತು  ಅವರು ಮಾಹಿತಿಯನ್ನು ಹಂಚಿಕೊಂಡಿದ್ದರು. ಸಲ್ಮಾನ್ ವಿಚಾರವಾಗಿ ಮೂಗು ತೂರಿಸಿದಂತೆ ರಾಖಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಎಚ್ಚರಿಕೆ ನೀಡಿದೆ ಎಂದು ರಾಖಿ ಹೇಳಿಕೊಂಡಿದ್ದರು.

     

    ಸಲ್ಮಾನ್ ಖಾನ್ ಬೆಂಬಲಿಸಿದ್ದರ ಪರಿಣಾಮ ತಮಗೆ ಜೀವ ಬೆದರಿಕೆಯಿದ್ದು, ತಾವು ಹೆಲ್ಮೆಟ್ ಧರಿಸಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ ಎಂದು ರಾಖಿ ಹೇಳಿಕೊಂಡಿದ್ದರು. ಹೆಲ್ಮೆಟ್ ಧರಿಸಿಯು ರಸ್ತೆಗೆ ಇಳಿದಿದ್ದರು. ಇದೀಗ ಮದುವೆ ವಿಚಾರವಾಗಿ ಮಾತನಾಡಿದ್ದಾರೆ. ಈ ಮಾತನ್ನು ಎಷ್ಟು ದಿನ ಉಳಿಸಿಕೊಳ್ಳುತ್ತಾರೋ ಸಲ್ಮಾನ್ ಖಾನ್‍ ನೇ ಬಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತಿ ಆದಿಲ್ ನನ್ನು ಜೈಲಿಗೆ ಕಳುಹಿಸಿ, ಮತ್ತೊಬ್ಬ ಹುಡುಗನಿಗೆ ಮನಸೋತ ರಾಖಿ

    ಪತಿ ಆದಿಲ್ ನನ್ನು ಜೈಲಿಗೆ ಕಳುಹಿಸಿ, ಮತ್ತೊಬ್ಬ ಹುಡುಗನಿಗೆ ಮನಸೋತ ರಾಖಿ

    ಕೆಲ ದಿನಗಳ ಕಾಲ ದುಬೈಗೆ ಹಾರಿ ಹೋಗಿದ್ದ ಡ್ರಾಮಾ ಕ್ವೀನ್ ರಾಖಿ ಸಾವಂತ್ (Rakhi Sawant), ಇದೀಗ ಭಾರತಕ್ಕೆ ವಾಪಸ್ಸಾಗಿದ್ದಾರೆ. ದುಬೈನಿಂದ ಬರುತ್ತಾ ಹೊಸ ಹುಡುಗನ ಸುದ್ದಿಯೊಂದನ್ನು ತಂದಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಘಟನೆಗಳಿಂದಾಗಿ ರಾಖಿ ಖಿನ್ನತೆಗೆ ಒಳಗಾಗಿದ್ದರಂತೆ. ಹಾಗಾಗಿ ದುಬೈಗೆ (Dubai) ಅವರು ಹಾರಿದ್ದರು. ಈ ಸಮಯದಲ್ಲಿ ರಾಖಿ ಜೀವನದಲ್ಲಿ ಹುಡುಗನೊಬ್ಬನು ಪ್ರವೇಶ ಮಾಡಿದ್ದಾನಂತೆ. ಈ ವಿಷಯದಲ್ಲಿ ನನಗೆ ಭಯವಾಗುತ್ತಿದೆ ಎಂದು ರಾಖಿ ಹೇಳಿಕೊಂಡಿದ್ದಾರೆ.

    ನನ್ನ ಜೀವನಕ್ಕೆ ಒಳ್ಳೆಯ ಹುಡುಗನ ಪ್ರವೇಶವಾಗಿದೆ. ಆದರೆ, ಈ ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರೆ, ಈ ಹುಡುಗನ ಬಗ್ಗೆಯೂ ಭಯವಾಗುತ್ತಿದೆ. ಆದರೆ, ನನ್ನ ಜೀವನಕ್ಕೆ ಇವನು ಔಷಧಿ ರೂಪದಲ್ಲಿ ಬಂದಿದ್ದಾನೆ ಅನಿಸುತ್ತಿದೆ. ಕೆಲವರು ಗಾಯಕ್ಕೆ ಉಪ್ಪು ಹಾಕುತ್ತಾರೆ. ನೋಯಿಸುತ್ತಾರೆ. ಈ ಹುಡುಗನ ಅಂಥವನಲ್ಲ ಎಂದು ರಾಖಿ ಸಾವಂತ್ ಹುಡುಗನ ಬಗ್ಗೆ ಹಾಡಿಹೊಗಳಿದ್ದಾರೆ. ಇದನ್ನೂ ಓದಿ:ಈ ವಿಚಾರಕ್ಕೆ ನಟನೆಗೆ ಗುಡ್ ಬೈ ಹೇಳ್ತಾರಾ ‌’ಮಗಧೀರ’ ನಟಿ ಕಾಜಲ್?‌

    ಪತಿ ಆದಿಲ್ ಖಾನ್ (Adil Khan) ವಿರುದ್ಧ ರಾಖಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆ ಆದಿಲ್ ಜೈಲಿಂದ (Jail) ಮಸೇಜ್ ಮಾಡಿರುವ ಕುರಿತು ಮಾತನಾಡಿದ್ದರು. ಆತನನ್ನು ಕ್ಷಮಿಸಿದರೆ ಬಹುಶಃ ನನ್ನನ್ನು ಅವನು ಕೊಲ್ಲಬಹುದು ಎಂದು ಹೇಳಿಕೆ ನೀಡಿದ್ದರು. ಜೈಲಿನಿಂದ ಕಳುಹಿಸಿರುವ ಸಂದೇಶದಲ್ಲಿ ‘ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡಿದ್ದಾನೆ ಎಂದೂ ರಾಖಿ ತಿಳಿಸಿದ್ದರು.

    ಕೆಲ ದಿನಗಳ ಹಿಂದೆ ಪತಿ ಆದಿಲ್ ಕುರಿತಾಗಿ ಮತ್ತಷ್ಟು ಆರೋಪಗಳನ್ನೂ ಮಾಡಿದ್ದು, ಮತ್ತೆಂದೂ ತಾವು ಮದುವೆ ಆಗುವುದಿಲ್ಲ ಎಂದು ಘೋಷಿಸಿದ್ದರು ರಾಖಿ. ಆದಿಲ್ ಗೆ ಬುದ್ಧಿ ಕಲಿಸದೇ ತಾವು ಬಿಡುವುದಿಲ್ಲ. ಸದ್ಯ ಆದಿಲ್ ಮೈಸೂರು ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ರಾಖಿಗೆ ಸಂದೇಶವನ್ನೂ ಕಳುಹಿಸಿದ್ದಾನಂತೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ರಾಖಿ, ‘ನನ್ನಿಂದ ತಪ್ಪಾಗಿದೆ. ಮತ್ತೆ ನಾನು ನಿನ್ನೊಂದಿಗೆ ಬದುಕುವೆ. ನನ್ನ ಮೇಲಿನ ದೂರನ್ನು ವಾಪಸ್ಸು ತಗೆದುಕೊ. ಒಟ್ಟಿಗೆ ಖುಷಿಯಾಗಿ ಬದುಕೋಣ’ ಅಂತ ಆದಿಲ್ ಮಸೇಜ್ ಕಳುಹಿಸಿದ್ದಾನಂತೆ. ಆದರೆ, ಆದಿಲ್ ಬಗ್ಗೆ ತಮಗೆ ನಂಬಿಕೆ ಇಲ್ಲ ಎಂದಿದ್ದರು ರಾಖಿ.

    ‘ನಾನು ಆದಿಲ್ ಗೆ ಡಿವೋರ್ಸ್ ಕೊಡುವುದಿಲ್ಲ. ಅವನು ನನ್ನಂತೆ ಇನ್ನ್ಯಾರಿಗೂ ಮೋಸ ಮಾಡಬಾರದು. ನಾನೂ ಕೂಡ ಮದುವೆಯಾಗಲಾರೆ. ಮತ್ತೆ ಅವನು ನನ್ನೊಂದಿಗೆ ಬದುಕುತ್ತೇನೆ ಎನ್ನುತ್ತಾನೆ. ಬಹುಶಃ, ಅವನು ನನ್ನನ್ನು ಸಾಯಿಸೋದಕ್ಕೆ ಪ್ಲ್ಯಾನ್ ಮಾಡಿರಬಹುದು. ಹಾಗಾಗಿ ಅವನು ನನ್ನ ಜೊತೆ ಇರುತ್ತೇನೆ ಎಂದು ಹೇಳುತ್ತಿದ್ದಾನೆ. ಆದರೆ, ಅವನನ್ನು ನಾನು ನಂಬುವುದಿಲ್ಲ. ಮತ್ತೆ ಒಟ್ಟಿಗೆ ಬದುಕುವುದಿಲ್ಲ’ ಎನ್ನುತ್ತಾರೆ ರಾಖಿ.

     

    ಆದಿಲ್ ಜೊತೆ ಬೇರೆ ಯಾರೂ ಮದುವೆ ಆಗಬಾರದು ಎನ್ನುವ ಕಾರಣಕ್ಕಾಗಿ ಡಿವೋರ್ಸ್ ನೀಡುವುದಿಲ್ಲ ಎಂದೂ ರಾಖಿ ಘೋಷಣೆ ಮಾಡಿದ್ದಾರೆ. ಡಿವೋರ್ಸ್ ನೀಡಿದರೆ ಅವನು ಮತ್ತೊಂದು ಮದುವೆ ಆಗುತ್ತಾನೆ. ಮತ್ತೆ ಅವನ ಬಾಳಲ್ಲಿ ಯಾವ ಹುಡುಗಿಯೂ ಬರುವುದು ಬೇಡ ಎನ್ನುವುದು ರಾಖಿ ಸಾವಂತ್ ಮಾತಾಗಿತ್ತು. ಇದೀಗ ತಮ್ಮ ಜೀವನದಲ್ಲೇ ಹೊಸ ಹುಡುಗನನ್ನು ಬಿಟ್ಟುಕೊಂಡಿದ್ದಾರೆ ಬಾಲಿವುಡ್ ನಟಿ.

  • ಜೈಲಿನಿಂದಲೇ ಕೊಲ್ಲಲು ಆದಿಲ್ ಪ್ಲ್ಯಾನ್ ಮಾಡಿದ್ದಾನೆ: ರಾಖಿ ಸಿಡಿಸಿದ ಹೊಸ ಬಾಂಬ್

    ಜೈಲಿನಿಂದಲೇ ಕೊಲ್ಲಲು ಆದಿಲ್ ಪ್ಲ್ಯಾನ್ ಮಾಡಿದ್ದಾನೆ: ರಾಖಿ ಸಿಡಿಸಿದ ಹೊಸ ಬಾಂಬ್

    ಬಾಲಿವುಡ್ ವಿವಾದಿತ ತಾರೆ ರಾಖಿ ಸಾವಂತ್ ತನ್ನ ಪತಿ ಆದಿಲ್ (Adil) ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ಮೈಸೂರು (Mysore) ಜೈಲಿನಿಂದಲೇ ತನ್ನನ್ನು ಕೊಲ್ಲಲು ಆದಿಲ್ ಸ್ಕೆಚ್ ಹಾಕಿದ್ದಾನೆ ಎಂದು ತಿಳಿಸಿದ್ದಾರೆ. ‘ಅವನು ನನ್ನನ್ನು ಕೊಲ್ಲಲು ಯಾಕೆ ಪ್ಲ್ಯಾನ್ ಮಾಡಿದ್ದಾನೋ ಗೊತ್ತಿಲ್ಲ. ಹಣಕ್ಕಾಗಿಯಾ ಅಥವಾ ದ್ವೇಷಕ್ಕಾಗಿಯಾ’ ಎಂದು ರಾಖಿ (Rakhi Sawant) ಪ್ರಶ್ನೆ ಮಾಡಿದ್ದಾರೆ. ಅವನು ಏನೇ ಪ್ಲ್ಯಾನ್ ಮಾಡಿದರೂ ನನ್ನನ್ನು ಕೊಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ.

    ಕೊಲ್ಲುವ (Murder)ವಿಚಾರ ಒಂದು ಕಡೆಯಾದರೆ, ಮತ್ತೊಂದು ಕಡೆ ತನಗೆ ಆದಿಲ್ ಕರೆ ಮಾಡಿ ‘ಐ ಲವ್ ಯೂ’ ಅಂತ ಹೇಳುತ್ತಿರುವ ವಿಚಾರವನ್ನೂ ಹೇಳಿಕೊಂಡಿದ್ದಾರೆ ರಾಖಿ. ಆಗಾಗ್ಗೆ ಆದಿಲ್ ಕರೆ ಮಾಡುತ್ತಾನೆ. ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ಮತ್ತೆ ಜೊತೆಯಾಗಿ ಬದುಕೋಣ ಎಂದು ಹೇಳುತ್ತಾನೆ. ಆದರೆ, ಅವನನ್ನು ನಾನು ಕ್ಷಮಿಸಬಹುದು. ಮತ್ತೆ ಅವನೊಂದಿಗೆ ಬದುಕಲು ಸಾಧ್ಯವಿಲ್ಲ’ ಎಂದಿದ್ದಾರೆ. ಇದನ್ನೂ ಓದಿ:‘ಏಜೆಂಟ್’ ಸಿನಿಮಾ ಸೋಲಿನ ಬೆನ್ನಲ್ಲೇ ಪತ್ರ ಬರೆದ ಅಖಿಲ್ ಅಕ್ಕಿನೇನಿ

    ಫೆಬ್ರವರಿ 7 ರಂದು ಪತಿ ಆದಿಲ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು ರಾಖಿ ಸಾವಂತ್. ಮದುವೆಯಾಗಿ ಮೋಸ ಮಾಡಿದ್ದಾನೆ ಎಂದು ದೂರು ನೀಡಿದ್ದರು. ಆ ದೂರನ್ನು ಆಧರಿಸಿ ಮುಂಬೈನಲ್ಲಿ ಆದಿಲ್ ನನ್ನು ಅರೆಸ್ಟ್ ಮಾಡಲಾಗಿತ್ತು. ನಂತರ ಮೈಸೂರಿನಲ್ಲೂ ಆದಿಲ್ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಾಗಿದ್ದರಿಂದ ಆತನನ್ನು ಮೈಸೂರು ಜೈಲಿನಲ್ಲಿ ಇರಿಸಲಾಗಿದೆ.  ಸ್ವತಃ ರಾಖಿ ಕೂಡ ಮೈಸೂರಿಗೆ ಬಂದು ಕೋರ್ಟಿನಲ್ಲಿ ಸಾಕ್ಷ್ಯ ನುಡಿದಿದ್ದರು.

    ಹಲವು ದಿನಗಳಿಂದ ಆದಿಲ್ ಬಗ್ಗೆ ಮೌನವಹಿಸಿದ್ದ ರಾಖಿ, ಇದೀಗ ಮತ್ತೆ ಅವನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಆದಿಲ್ ಆದಷ್ಟು ಬೇಗ ಜೈಲಿನಿಂದ (jail) ಆಚೆ ಬರಲಿ ಎಂದು ಪ್ರಾರ್ಥನೆ ಮಾಡಿದ್ದ ಇದೇ ರಾಖಿ, ಇದೀಗ ಕೊಲ್ಲುವ ಮಾತುಗಳನ್ನು ಆಡುತ್ತಿದ್ದಾರೆ. ಈ ಕುರಿತು ಅವರು ದೂರು ನೀಡಿದರೆ ಆದಿಲ್ ಭವಿಷ್ಯ ಇನ್ನೂ ಕತ್ತಲಲ್ಲೇ ಇರಲಿದೆ.

  • ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ನಟಿ ರಾಖಿ ಸಾವಂತ್ ಹೆಲ್ಮೆಟ್ ಧರಿಸಿ ಓಡಾಟ

    ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ನಟಿ ರಾಖಿ ಸಾವಂತ್ ಹೆಲ್ಮೆಟ್ ಧರಿಸಿ ಓಡಾಟ

    ಟಿ ರಾಖಿ ಸಾವಂತ್ ಮುಂಬೈ ಬೀದಿಯಲ್ಲಿ ಹೆಲ್ಮೆಟ್ (Helmet) ಧರಿಸಿ ಓಡಾಡುತ್ತಿದ್ದಾರೆ. ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ರಾಖಿ ಹೆಲ್ಮೆಟ್ ಹಾಕಿಕೊಳ್ಳುತ್ತಾರೆ. ಕಾರಣ ಅವರಿಗೆ ಕೊಲೆ ಬೆದರಿಕೆ ಇದೆಯಂತೆ. ನಟ ಸಲ್ಮಾನ್ ಖಾನ್ ಪರವಾಗಿ ನಿಂತಿರುವ ಮತ್ತು ಸಲ್ಮಾನ್ ಕುರಿತಾಗಿ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಆಡುವ ರಾಖಿ ಸಾವಂತ್ (Rakhi Sawant) ಗೆ ಲಾರೆನ್ಸ್ ಬಿಷ್ಣೋಯ್ ಟೀಮ್ ನಿಂದ ಬೆದರಿಕೆ ಕರೆ ಬಂದಿದೆಯಂತೆ. ಸಲ್ಮಾನ್ ವಿಚಾರವಾಗಿ ಮೂಗು ತೂರಿದಂತೆ ರಾಖಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಎಚ್ಚರಿಕೆ ನೀಡಿದೆಯಂತೆ. ಹಾಗಾಗಿ ಅವರನ್ನು ಯಾರೂ ಗುರುತು ಹಿಡಿಯಬಾರದು ಎನ್ನುವ ಕಾರಣಕ್ಕಾಗಿ ಹೆಲ್ಮೆಟ್ ಧರಿಸಿಕೊಂಡು ಓಡಾಡುತ್ತಿದ್ದಾರೆ.

    ಈ ಹಿಂದೆ ಇದೇ ಗ್ಯಾಂಗ್ ನಿರಂತರವಾಗಿ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಾಕುತ್ತಲೇ ಇದೆ. ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ  ಗ್ಯಾಲಕ್ಸಿ ಅಪಾರ್ಟ್ಮೆಂಟ್ ಗೆ ಮುಂಬೈ (Mumbai) ಪೊಲೀಸರು (Police) ಟೈಟ್ ಸೆಕ್ಯೂರಿಟಿ ನೀಡಿದ್ದಾರೆ. ಅಲ್ಲದೇ, ಸುಖಾಸುಮ್ಮನೆ ಅವರ ಮನೆ ಸುತ್ತ ಓಡಾಡುವಂತಿಲ್ಲ ಹಾಗೂ ಮನೆಯ ಮುಂದೆ ನಿಲ್ಲುವಂತಿಲ್ಲ ಎಂದು ಮುಂಬೈ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಇದನ್ನೂ ಓದಿ:ಜುಲೈನಲ್ಲಿ ಹೆರಿಗೆ : ಗುಟ್ಟು ಬಿಟ್ಟುಕೊಟ್ಟ ರಾಮ್ ಚರಣ್ ಪತ್ನಿ ಉಪಾಸನಾ

    ಈಗಾಗಲೇ ಮನೆ ಸುತ್ತಮುತ್ತ ತಪಾಸಣೆ ಕಾರ್ಯವನ್ನೂ ಪೊಲೀಸರು ಆರಂಭಿಸಿದ್ದು, ಯಾವುದೇ ಬಹಿರಂಗ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರನ್ನು ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮಗಳನ್ನು ತಗೆದುಕೊಳ್ಳಲು ಮುಂದಾಗಿದ್ದಾರೆ.

    ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ (gangster) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ನಡುವಿನ ಕಾಳಗ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು (Death Threats) ಬಿಷ್ಣೋಯ್ ಮತ್ತು ಟೀಮ್  ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಅನೇಕರು ಬಂಧನ ಕೂಡ ಆಗಿದ್ದಾರೆ. ಸ್ವತಃ ಬಿಷ್ಣೋಯ್ ಜೈಲಿನಲ್ಲೇ ಇದ್ದಾನೆ. ಜೈಲಿನಿಂದಲೇ ಮತ್ತೆ ಸಲ್ಮಾನ್ ಬಗ್ಗೆ ಮಾತನಾಡಿದ್ದಾನೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಲಾರೆನ್ಸ್ ಬಿಷ್ಣೋಯ್ ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ. ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ. ಅವನ ಈ ಮಾತು ಬಾಲಿವುಡ್ ನಲ್ಲಿ ಭಾರೀ ಆತಂಕ ಸೃಷ್ಟಿ ಮಾಡಿದೆ.