Tag: ರಾಕೇಶ್

  • ‘ಪತಿಬೇಕು ಡಾಟ್ ಕಾಮ್’ ನಿಜವಾದ ನಾಯಕಿ ಭಾಗ್ಯ ಅಂದರು ಶೀತಲ್ ಶೆಟ್ಟಿ!

    ‘ಪತಿಬೇಕು ಡಾಟ್ ಕಾಮ್’ ನಿಜವಾದ ನಾಯಕಿ ಭಾಗ್ಯ ಅಂದರು ಶೀತಲ್ ಶೆಟ್ಟಿ!

    ಪತಿಬೇಕು ಡಾಟ್ ಕಾಮ್ ಚಿತ್ರಕ್ಕೆ ಶೀತಲ್ ಶೆಟ್ಟಿ ನಾಯಕಿಯೂ ಹೌದು, ನಾಯಕನೂ ಹೌದು ಅಂತ ಖುದ್ದು ನಿರ್ದೇಶಕ ರಾಕೇಶ್ ಅವರೇ ಹೇಳಿಕೊಂಡಿದ್ದಾರೆ. ಆದರೆ ಶೀತಲ್ ಶೆಟ್ಟಿ ಹೇಳೋ ಪ್ರಕಾರ ಈ ಚಿತ್ರದ ನಿಜವಾದ ನಾಯಕಿ ಭಾಗ್ಯ ಅಂತೆ!

    ಭಾಗ್ಯ ಈ ಇಡೀ ಚಿತ್ರದ ಕೇಂದ್ರ ಬಿಂದುವಾಗಿರೋ ಪಾತ್ರ. ಅದು ಕೆಳ ಮಧ್ಯಮವರ್ಗದಿಂದ ಬಂದ ಮೂವತ್ತು ದಾಟಿದ ಹೆಣ್ಣುಮಗಳೊಬ್ಬಳ ಭಾವಕೋಶವನ್ನು ಬಿಚ್ಚಿಡುವ ಪಾತ್ರ. ಅದು ಸಮಸ್ತ ಹೆಣ್ಮಕ್ಕಳ ಮನೋಭೂಮಿಕೆಯನ್ನು ಪ್ರತಿನಿಧಿಸುವ ಪಾತ್ರವೂ ಹೌದು. ಆ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸಿದ ಖುಷಿಯಷ್ಟೇ ತಮ್ಮದು ಅನ್ನುವ ಶೀತಲ್ ಶೆಟ್ಟಿ ಒಟ್ಟಾರೆ ಚಿತ್ರದ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಭರವಸೆ ಹೊಂದಿದ್ದಾರೆ.

    ಖಾಸಗಿ ವಾಹಿನಿಯೊಂದರಲ್ಲಿ ಖ್ಯಾತ ನಿರೂಪಕಿಯಾಗಿದ್ದುಕೊಂಡು ಕನ್ನಡಿಗರೆಲ್ಲರ ಮನ ಗೆದ್ದವರು ಶೀತಲ್ ಶೆಟ್ಟಿ. ವರ್ಷಗಟ್ಟಲೆ ಅದೇ ಕೆಲಸ ಮಾಡಿ ಏಕತಾನತೆ ಕಾಡಿಸಿಕೊಂಡಿದ್ದ ಅವರ ಪಾಲಿಗೆ ಸಿನಿಮಾ ಎಂಬುದು ತಾವು ಬಯಸಿದ ಬದಲಾವಣೆಗೊಂದು ದಾರಿ. ಆ ದಾರಿಯಲ್ಲಿ ಹಂತ ಹಂತವಾಗಿ ಬಹುದೂರ ಸಾಗಿ ಬಂದಿರುವ ಅವರ ಪಾಲಿಗೆ ಪತಿಬೇಕು ಡಾಟ್ ಕಾಮ್ ಚಿತ್ರ ಮಹತ್ವದ ಮೈಲಿಗಲ್ಲು.

    ನಟಿಸುವ ನಿರ್ಧಾರ ಮಾಡಿದ ಶೀತಲ್ ಶೆಟ್ಟಿಯವರಿಗೆ ಹೀರೋಯಿನ್ ಆಗಿ ಮಿಂಚುವ ಇರಾದೆ ಇಲ್ಲದಿದ್ದರೂ ಒಂದೊಳ್ಳೆ ಕಥೆ ಹೊಂದಿರೋ ಚಿತ್ರದಲ್ಲಿ ನಟಿಸೋ ಆಸೆಯಂತೂ ಇದ್ದೇ ಇತ್ತು. ನಿರ್ದೇಶಕ ರಾಕೇಶ್ ಮೊದಲ ಸಲ ಬಂದು ಕಥೆ ಹೇಳಿದಾಗ ಆ ಆಸೆ ನೆರವೇರಿದ ಸೂಚನೆ ಪಡೆದುಕೊಂಡಿದ್ದ ಶೀತಲ್‍ಗೆ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿರೋ ಈ ಕ್ಷಣದಲ್ಲೊಂದು ಆತ್ಮತೃಪ್ತಿಯಿದೆಯಂತೆ.

    ಈಗಾಗಲೇ ಈ ಚಿತ್ರ ಟ್ರೈಲರ್, ಸಂಭಾಷಣೆ ಮತ್ತು ಹಾಡುಗಳ ಮೂಲಕ ಎಲ್ಲ ವರ್ಗದವರನ್ನೂ ತಲುಪಿಕೊಂಡಿದೆ. ‘ಯಾಕಪ್ಪ ದೇವರೆ ಆಡಿಸ್ತಿ ಕ್ಯಾಬರೆ’ ಹಾಡಂತೂ ಅದೆಷ್ಟೋ ಹೆಣ್ಣು ಜೀವಗಳನ್ನು ಪ್ರಾತಿನಿಧಿಕ ಗೀತೆಯಂತೆಯೇ ಕಾಡಿದೆ. ಅದುವೇ ಹೆಂಗಳೆಯರನ್ನೆಲ್ಲ ಥೇಟರಿನತ್ತಲೂ ಸೆಳೆದುಕೊಳ್ಳೋದು ಖಚಿತ. ಬರೀ ಹೆಣ್ಣುಮಕ್ಕಳು ಮಾತ್ರವಲ್ಲದೇ ಎಲ್ಲ ವರ್ಗದ ಪ್ರೇಕ್ಷಕರಿಗೂ ಕಚಗುಳಿ ಇಟ್ಟಿರೋ ಈ ಚಿತ್ರ ಶೀತಲ್ ಶೆಟ್ಟಿಯವರ ಪಾಲಿಗೆ ಅತ್ಯಂತ ಮಹತ್ವದ್ದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹುಡುಗೀರಿಗೆ ಹುಚ್ಚು ಹಿಡಿಸಿತು ಶೀತಲ್ ಡೈಲಾಗ್!

    ಹುಡುಗೀರಿಗೆ ಹುಚ್ಚು ಹಿಡಿಸಿತು ಶೀತಲ್ ಡೈಲಾಗ್!

    ‘ಊರೋರಿಗೆಲ್ಲ ಹೆದರ್ಕೊಂಡು ಇಬ್ರು ರೂಮೊಳಗೆ ಸೇರ್ಕೊಂಡ್ರೆ ಲವ್ ಮ್ಯಾರೇಜ್. ಊರೋರೆಲ್ಲ ಸೇರಿ ಇಬ್ರನ್ನ ರೂಮೊಳಗೆ ಬಿಟ್ರೆ ಅದು ಅರೇಂಜ್ಡ್ ಮ್ಯಾರೇಜ್’…….. ಒಂದು ಚಿತ್ರದ ಡೈಲಾಗು, ಹಾಡು ಜನರಿಗಿಷ್ಟವಾಗಿ ಅವರ ನಡುವೆ ಹರಿದಾಡಿದರೆ ಅದಕ್ಕಿಂತಲೂ ಅದ್ಭುತವಾದ ಪ್ರಚಾರ ಬೇರೊಂದಿಲ್ಲ. ಅಂಥಾದ್ದೊಂದು ಭರಪೂರ ಪ್ರಚಾರ ಶೀತಲ್ ಶೆಟ್ಟಿ ಅಭಿನಯದ ಪತಿಬೇಕು ಡಾಟ್ ಕಾಮ್ ಚಿತ್ರಕ್ಕೀಗ ಸಿಗಲಾರಂಭಿಸಿದೆ!

    ರಾಕೇಶ್ ನಿರ್ದೇಶನದ ಪತಿಬೇಕು ಡಾಟ್ ಕಾಮ್ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಅದನ್ನು ಜನ ಮೆಚ್ಚಿಕೊಂಡಿದ್ದೂ ಆಗಿದೆ. ಇದರಲ್ಲಿ ಶೀತಲ್ ಶೆಟ್ಟಿ ಹೇಳಿರೋ ಬಿಂದಾಸ್ ಡೈಲಾಗೊಂದೀಗ ಹುಡುಗೀರಿಗೆಲ್ಲ ಹುಚ್ಚು ಹಿಡಿಸಿಬಿಟ್ಟಿದೆ. ಡಬ್ ಸ್ಮ್ಯಾಶ್ ರೂಪದಲ್ಲಿ ಈ ಡೈಲಾಗು ಎಲ್ಲೆಡೆ ಹರಡಿಕೊಂಡು ಪತಿಬೇಕು ಡಾಟ್ ಕಾಮ್ ಚಿತ್ರ ಮಿಂಚಲಾರಂಭಿಸಿದೆ.

    ‘ಊರೋರಿಗೆಲ್ಲ ಹೆದರ್ಕೊಂಡು ಇಬ್ರು ರೂಮೊಳಗೆ ಸೇರ್ಕೊಂಡ್ರೆ ಲವ್ ಮ್ಯಾರೇಜ್. ಊರೋರೆಲ್ಲ ಸೇರಿ ಇಬ್ರನ್ನ ರೂಮೊಳಗೆ ಬಿಟ್ರೆ ಅದು ಅರೇಂಜ್ಡ್ ಮ್ಯಾರೇಜ್’ ಎಂಬ ಡೈಲಾಗನ್ನು 1300ಕ್ಕೂ ಹೆಚ್ಚು ಹುಡುಗಿಯರು ಡಬ್ ಸ್ಮ್ಯಾಶ್ ಮಾಡಿ ಸಂಭ್ರಮಿಸಿದ್ದಾರೆ. ಡಬ್ ಸ್ಮ್ಯಾಶ್ ನಲ್ಲಿ ಪ್ರಸಿದ್ಧಿ ಪಡೆದುಕೊಂಡಿರೋ ಮ್ಯೂಸಿಕಲಿ ಸೇರಿದಂತೆ ನಾನಾ ಆಪ್ ಗಳಲ್ಲೀಗ ಪತಿಬೇಕು ಡಾಟ್ ಕಾಮ್ ಚಿತ್ರದ ಈ ಡೈಲಾಗೇ ರಿಂಗಣಿಸಲಾರಂಭಿಸಿದೆ!

    ಶೀತಲ್ ಶೆಟ್ಟಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿರುವ ಈ ಚಿತ್ರದ ಟ್ರೇಲರಿಗೆ ಎಲ್ಲರೂ ಫಿದಾ ಆಗಿದ್ದಾರೆ. ಆದರೆ ಇದೊಂದೇ ಒಂದು ಮಜಾಕಾದ ಡೈಲಾಗಿನಿಂದ ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಗುತ್ತಿರೋದರಿಂದ ಚಿತ್ರ ತಂಡ ಹ್ಯಾಪಿ ಮೂಡಿನಲ್ಲಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ನಾಳೆ ‘ಪತಿ ಬೇಕು ಡಾಟ್ ಕಾಮ್’ ಟ್ರೇಲರ್ ರಿಲೀಸ್ ಮಾಡ್ತಾರೆ ಕಿಚ್ಚ ಸುದೀಪ್!

    ನಾಳೆ ‘ಪತಿ ಬೇಕು ಡಾಟ್ ಕಾಮ್’ ಟ್ರೇಲರ್ ರಿಲೀಸ್ ಮಾಡ್ತಾರೆ ಕಿಚ್ಚ ಸುದೀಪ್!

    – ಇದು ಶೀತಲ್ ಶೆಟ್ಟಿಯ ಕಾಮಿಡಿ ಟ್ರ್ಯಾಕ್!

    ಆಂಕರ್ ಆಗಿ ತನ್ನ ಸ್ಫುಟವಾದ ಕನ್ನಡ ಉಚ್ಛಾರದಿಂದಲೇ ಖ್ಯಾತರಾಗಿದ್ದವರು ಶೀತಲ್ ಶೆಟ್ಟಿ. ಆಂಕರಿಂಗ್ ಗೆ ಗುಡ್ ಬೈ ಹೇಳಿದ ನಂತರ ಬಿಗ್ ಬಾಸ್ ಪ್ರವೇಶ ಮಾಡಿದ್ದ ಶೀತಲ್ ಇದೀಗ ನಟನೆಯತ್ತಲೇ ಗಮನ ಕೇಂದ್ರೀಕರಿಸಿದ್ದಾರೆ. ಸದ್ಯ ಅವರು ವಿಶಿಷ್ಟವಾದ ಪಾತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುತ್ತಿರುವ ಚಿತ್ರ `ಪತಿಬೇಕು ಡಾಟ್ ಕಾಮ್’!

    ಈ ಚಿತ್ರದ ಕಡೆಯಿಂದ ಇದೀಗ ಖುಷಿಯ ವಿಚಾರವೊಂದು ಹೊರ ಬಿದ್ದಿದೆ. ಸೆನ್ಸಾರ್ ಮುಗಿಸಿಕೊಂಡ ಬೆನ್ನಲ್ಲಿಯೇ ನಾಳೆ ಈ ಚಿತ್ರದ ಟ್ರೈಲರ್ ಕಿಚ್ಚ ಸುದೀಪ್ ಅವರಿಂದಲೇ ಬಿಡುಗಡೆಯಾಗಲಿದೆ. ರಾಕೇಶ್ ನಿರ್ದೇಶನ ಮಾಡಿ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿರುವ ಪತಿ ಬೇಕು ಡಾಟ್ ಕಾಮ್ ಚಿತ್ರ ಈ ಹಿಂದೆ ಟೀಸರ್ ಮೂಲಕವೇ ಅಲೆಯೆಬ್ಬಿಸಿತ್ತು. ಆದ್ದರಿಂದಲೇ ನಾಳೆ ಬಿಡುಗಡೆಯಾಗಲಿರುವ ಟ್ರೇಲರ್ ಬಗ್ಗೆ ಸಹಜವಾಗಿಯೇ ಕುತೂಹಲವಿದೆ.

    ರಾಕೇಶ್ ಒಂದು ಸರಳವಾದ ಆದರೆ ಸಂಕೀರ್ಣವಾದ, ಬದುಕಿಗೆ ಹತ್ತಿರಾದ ಕಥಾ ಹಂದರವೊಂದನ್ನು ಹಾಸ್ಯದ ಶೈಲಿಯಲ್ಲಿ ಪ್ರೇಕ್ಷಕರಿಗೆ ದಾಟಿಸಲು ಸನ್ನದ್ಧರಾಗಿದ್ದಾರೆ. ಮಧ್ಯಮ ವರ್ಗದ ಪೋಷಕರ ಪಾಲಿಗೆ ಮಗಳಿಗೆ ಮದುವೆ ಮಾಡೋದೆಂದರೆ ಜೀವನದ ಪ್ರಮುಖ ಘಟ್ಟ. ಅದರಲ್ಲಿಯೂ ಮಗಳು ಮೂವತ್ತು ವರ್ಷ ದಾಟಿಸಿದರೆ ಅದರ ಪಡಿಪಾಟಲುಗಳನ್ನು ಹೇಳಲಾಗೋದಿಲ್ಲ. ಅಂಥಾ ಮೂವತ್ತು ವರ್ಷ ದಾಟಿದ ಮದುವೆಗೆ ತಯಾರಾದ ಹುಡುಗಿಯ ಪಾತ್ರದಲ್ಲಿ ಶೀತಲ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೂ ಶೀತಲ್ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅದೆಲ್ಲವೂ ಗಂಭೀರವಾದ ಪಾತ್ರಗಳೇ. ಆದರೆ ಈ ಚಿತ್ರದಲ್ಲಿ ಶೀತಲ್ ನಗಿಸುವಂಥಾ ನಟನೆಯನ್ನು ನೀಡಲಿದ್ದಾರಂತೆ.

  • ಪ್ರಚಾರದ ವೇಳೆ ಮಗನನ್ನು ನೆನೆದು ಭಾವುಕರಾದ ಸಿಎಂ

    ಪ್ರಚಾರದ ವೇಳೆ ಮಗನನ್ನು ನೆನೆದು ಭಾವುಕರಾದ ಸಿಎಂ

    ಮೈಸೂರು: ವರುಣಾದಲ್ಲಿ ತಮ್ಮ ಮಗ ಡಾ. ಯತೀಂದ್ರ ಪರ ಪ್ರಚಾರ ಮಾಡ್ತಿರೋ ಸಿಎಂ ಸಿದ್ದರಾಮಯ್ಯ ಇಂದು ಭಾವುಕರಾದ್ರು.

    ನನ್ನ ಮಗ ರಾಕೇಶ್ ನೆನೆಪಾಗ್ತಿದ್ದಾನೆ. ಅವನಿದ್ದಿದ್ರೆ ಪ್ರಚಾರಕ್ಕೆ ಬರ್ತಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರವನ್ನು ಅವನೇ ನೋಡಿಕೊಳ್ಳುತ್ತಿದ್ದ. ಆದ್ರೆ ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು. ಅವನು ಕಾಯಿಲೆ ಇತ್ತು, ಸತ್ತು ಹೋದ ಅಂತ ಮಗನನ್ನು ನೆನೆಪಿಸಿಕೊಂಡು ಕಣ್ಣೀರು ಹಾಕಿದ್ರು.

    ನಾನು ವರುಣಾದಲ್ಲಿ 30 ಸಾವಿರ ವೋಟುಗಳ ಅಂತರದಿಂದ ಗೆದ್ದಿದ್ದೇನೆ. ಅದಕ್ಕಿಂತ ಹೆಚ್ಚು ಮತಗಳಿಂದ ಯತೀಂದ್ರ ಗೆಲ್ತಾನೆ ಅಂತ ಮುಖ್ಯಮಂತ್ರಿ ಭಾವುಕ ಭಾಷಣ ಮಾಡಿದ್ರು.

    ಮಣ್ಣಿನ ಮಗನಿಗೆ ಮತ ಹಾಕ್ತಿರೋ? ಅವನ್ಯಾರಿಗೋ ಮತ ಹಾಕ್ತೀರಾ? ಅವನಿಗೂ ಕ್ಷೇತ್ರಕ್ಕೂ ಸಂಬಂಧ ಏನು? ಅವರ ಮಗ, ಇವರ ಮಗ ಅಂದವ್ರಿಗೆ ಮತ ಹಾಕ್ತೀರಾ? ವರುಣಾ ಮತ್ತು ಚಾಮುಂಡೇಶ್ವರಿ ನನ್ನ ಕಣ್ಣು ಅಂತ ಸಿದ್ದರಾಮಯ್ಯ ಯಡಿಯೂರಪ್ಪರ ಕಿರಿಯ ಮಗ ವಿಜಯೇಂದ್ರ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ರು.

  • ಚೆಲುವಿನ ಚಿತ್ತಾರದಲ್ಲಿ ಬುಲ್ಲಿ ಆಗಿ ನಟಿಸಿದ್ದ ರಾಕೇಶ್ ಇನ್ನಿಲ್ಲ

    ಚೆಲುವಿನ ಚಿತ್ತಾರದಲ್ಲಿ ಬುಲ್ಲಿ ಆಗಿ ನಟಿಸಿದ್ದ ರಾಕೇಶ್ ಇನ್ನಿಲ್ಲ

    ಬೆಂಗಳೂರು: ಚೆಲುವಿನ ಚಿತ್ತಾರದಲ್ಲಿ ಬುಲ್ಲಿ ಆಗಿ ಕಾಣಿಸಿಕೊಂಡಿದ್ದ ಹಿರಿಯ ನಟಿ ಆಶಾರಾಣಿ ಪುತ್ರ ರಾಕೇಶ್ ಮೃತಪಟ್ಟಿದ್ದಾರೆ. ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಾಕೇಶ್ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾಗಿದ್ದಾರೆ.

    ಎರಡು ತಿಂಗಳ ಹಿಂದೆ ರಾಕೇಶ್ ಅವರಿಗೆ ಆಪರೇಷನ್ ಮಾಡಲಾಗಿತ್ತು. ತದನಂತರ ಕೋರಮಂಗಲದ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರಾಕೇಶ್ ಚಿಕಿತ್ಸೆ ಫಲಕಾರಿಯಾಗದೇ 7.30ರ ವೇಳೆಗೆ ಮೃತಪಟ್ಟಿದ್ದಾರೆ.

    ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಸಿನಿಮಾ ಬುಲ್ಲಿ – ಪಪ್ಪುಸಿ ಎನ್ನುವ ಹೆಸರಿನಿಂದ ರಾಕೇಶ್ ಫೇಮಸ್ ಆಗಿದ್ದರು. ಸದ್ಯ ಧೂಮಪಾನ ಸಿನಿಮಾದಲ್ಲಿ ನಾಯಕ ನಟನಾಗಿ ರಾಕೇಶ್ ನಟಿಸುತ್ತಿದ್ದರು.

     ಶಿವರಾಜ್ ಕುಮಾರ್ ಅಭಿನಯದ ಬಂಧು ಬಳಗ, ದುನಿಯಾ ವಿಜಯ್ ಅಭಿನಯದ ಚಂಡ, ದರ್ಶನ್ ಜೊತೆ ಚಿತ್ರಗಳಲ್ಲಿ ರಾಕೇಶ್ ಅಭಿನಯಿಸಿದ್ದರು.

  • ಪ್ರಿಯಕರನ ಜೊತೆ ಸೇರಿ  ಗಂಡನನ್ನೇ ಕೊಲೆ ಮಾಡಿದ್ಳು ಪತ್ನಿ

    ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ಳು ಪತ್ನಿ

    ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿಸಿದ್ದ ಹೆಂಡತಿ ಮತ್ತು ಆಕೆಯ ಪ್ರಿಯಕರನನ್ನು ಗಂಗಮ್ಮಗುಡಿ ಪೊಲೀಸರು ಬಂಧಿಸಿದ್ದಾರೆ.

    ವರಲಕ್ಷ್ಮಿ ಮತ್ತು ರಾಕೇಶ್ ಬಂಧಿತ ಆರೋಪಿಗಳು. ಸೆಪ್ಟೆಂಬರ್ 3 ರಂದು ಅನೈತಿಕ ಸಂಬಂಧಕ್ಕೆ ಬಾಬು ಅಡ್ಡಿಯಾಗಿದ್ದಾನೆ ಅಂತ ಹೇಳಿ ವರಲಕ್ಷ್ಮಿ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿಸಿದ್ದಳು.

    ಕುಡಿದು ಬಂದಿದ್ದ ತನ್ನ ಪತಿ ಬಾಬು ಜೊತೆ ವರಲಕ್ಷ್ಮಿ ಜಗಳ ತೆಗೆದು ಹೊರ ಹೋಗಿದ ಬಳಿಕ ಪ್ರಿಯಕರನಿಗೆ ಹೇಳಿ ತನ್ನ ಗಂಡನನ್ನು ಕೊಲೆ ಮಾಡಿಸಿದ್ದಾಳೆ. ನಂತರ ಪೊಲೀಸರಿಗೆ ಪತಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದಾನೆ ಎಂದು ದೂರು ನೀಡಿದ್ದಳು.

    ವರಲಕ್ಷ್ಮಿ ಮೇಲೆ ಸಂಶಯ ವ್ಯಕ್ತಪಡಿಸಿದ್ದ ಪೊಲೀಸರು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯವನ್ನು ಬಗ್ಗೆ ಬಾಯಿ ಬಿಟ್ಟಿದ್ದಾಳೆ.