Tag: ರಾಕೇಶ್

  • 50 ದಿನ ಪ್ರೀತಿಸಿದ್ದ ಅಕ್ಷತಾ-ರಾಕಿ ಬ್ರೇಕಪ್ ಆಗಿದ್ದೇಕೆ? ಮುರಳಿ ಉತ್ತರ ಹೀಗಿತ್ತು

    50 ದಿನ ಪ್ರೀತಿಸಿದ್ದ ಅಕ್ಷತಾ-ರಾಕಿ ಬ್ರೇಕಪ್ ಆಗಿದ್ದೇಕೆ? ಮುರಳಿ ಉತ್ತರ ಹೀಗಿತ್ತು

    ಬೆಂಗಳೂರು: 15 ವಿವಿಧ ಮನಸ್ಸುಗಳನ್ನು ಒಂದೇ ಮನೆಯಲ್ಲಿರಿಸುವುದು. ಬಾಹ್ಯ ಜಗತ್ತಿನೊಂದಿಗೆ ಸಂಪರ್ಕವಿಲ್ಲದೆ ಅಲ್ಲಿರುವ ವಿಭಿನ್ನ ಜನರೊಂದಿಗೆ ಜೀವನ ನಡೆಸುವ ರಿಯಾಲಿಟಿ ಶೋ ಬಿಗ್‍ಬಾಸ್. ಈ ಕಾರ್ಯಕ್ರಮ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕನ್ನಡದ ಬಿಗ್‍ಬಾಸ್ ಸಹ 6ನೇ ಆವೃತ್ತಿಯ ಅಂತಿಮ ಘಟ್ಟಕ್ಕೆ ತಲುಪಿದೆ. ಶೋ ಆರಂಭವಾದಗಿನಿಂದಲೂ ಮನೆಯಲ್ಲಿರುವ ಅಕ್ಷತಾ ಪಾಂಡವಪುರ ಮತ್ತು ಎಂ.ಜೆ.ರಾಕೇಶ್ ಇಬ್ಬರ ಪ್ರೇಮ ಕಹಾನಿ ಬಹು ಜನರನ್ನು ಆಕರ್ಷಿಸಿತ್ತು.

    ಆರಂಭದ 50 ದಿನಗಳಲ್ಲಿ ಇಬ್ಬರ ಮಧ್ಯೆ ಪ್ರೀತಿ ಇತ್ತು ಎಂಬುದನ್ನು 11ನೇ ವಾರ ಮನೆಯಿಂದ ಹೊರ ಬಂದಿರುವ ಮುರಳಿ ಸಹ ಒಪ್ಪಿಕೊಳ್ಳುತ್ತಾರೆ. ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಕೆಲವು ವಿಚಾರಗಳನ್ನು ಹೊರಹಾಕಿರುವ ಮುರಳಿ, ಕೆಲ ಸ್ಪರ್ಧಿಗಳ ವರ್ತನೆ ಮತ್ತು ನಡವಳಿಕೆ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಕ್ಷತಾ ಬಗ್ಗೆ ಮಾತನಾಡುತ್ತಾ ಆಕೆ ಹುಡುಗಿ ಅಲ್ಲ ಹೆಂಗಸು ಎಂದು ಮಾತು ಆರಂಭಿಸಿದ ಮುರಳಿ, ಆಕೆ ಮಾಡ್ತೀರೋದು ಸರಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಅಮ್ಮ ರಾಕಿಯನ್ನ ಮಾತಾಡ್ಸು-ತಾಯಿ ಬಳಿ ಅಕ್ಷತಾ ಮನವಿ

    ಬ್ರೇಕಪ್ ಆಗಿದ್ದೇಕೆ?
    ಮೊದಲ 50 ದಿನ ಇಬ್ಬರು ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದರು. ಒಂದು ವಾರ ರಾಕೇಶ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾಗ ಬಿಗ್‍ಬಾಸ್ ಅಧಿಕಾರ ನೀಡಿತ್ತು. ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಒಬ್ಬರನ್ನು ಸೇವ್ ಮಾಡಬಹುದು ಎಂದು ಹೇಳಿತ್ತು. ಆ ವಾರ ನಾಮಿನೇಟ್ ಆದವರಲ್ಲಿ ಅಕ್ಷತಾ ಮತ್ತು ಮುರಳಿ ಸಹ ಇದ್ದರು. ಎಲ್ಲರೂ ಅಕ್ಷತಾಳನ್ನು ರಾಕೇಶ್ ಸೇವ್ ಮಾಡುತ್ತಾನೆ ಅಂದುಕೊಂಡಿದ್ದರು. ಆದ್ರೆ ಈ ಮನೆಗೆ ಮುರಳಿ ಅವರು ಅವಶ್ಯವಾಗಿದ್ದರು. ಹಾಗಾಗಿ ಮುರಳಿ ಅವರನ್ನು ಸೇವ್ ಮಾಡ್ತೀನಿ ಅಂತಾ ಹೇಳಿದ್ದರಿಂದ ಸಹಜವಾಗಿಯೇ ಅಕ್ಷತಾಗೆ ಬೇಸರವಾಯ್ತು ಅಂತಾ ಮುರಳಿ ಹೇಳಿದರು. ಇದನ್ನೂ ಓದಿ: ಬಿಗ್‍ಬಾಸ್ ಸ್ಪರ್ಧಿಗಳ ರಹಸ್ಯ ಬಿಚ್ಚಿಟ್ಟ ಮುರಳಿ

    ಇದಕ್ಕೂ ಮೊದಲು ಜೋಡಿ ನಾಮಿನೇಷನ್ ವೇಳೆ ಅಕ್ಷತಾ ತಾನು ನಾಮಿನೇಟ್ ಆಗುವ ಮೂಲಕ ರಾಕಿಯನ್ನು ಸೇವ್ ಮಾಡಿದ್ದಳು. ಒಂದು ರೀತಿ ಇಬ್ಬರ ಬ್ರೇಕಪ್ ಗೆ ನಾನೇ ಕಾರಣ ಅಂತ ಹೇಳಿ ಮುರಳಿ ನಕ್ಕರು. ಇದನ್ನೂ ಓದಿ:  ರಾಕೇಶ್ ಕೊಟ್ಟ ಗಿಫ್ಟನ್ನು ಲೈಟ್ ಆಫ್ ಆದ್ಮೇಲೆ ಪಡೆದ ಅಕ್ಷತಾ

    ದಿನವಿಡೀ ರಾಕೇಶ್ ಮತ್ತು ಅಕ್ಷತಾ ಜಗಳ ಆಡುತ್ತಾರೆ. ಬಿಗ್‍ಬಾಸ್ ಮನೆಯ ಲೈಟ್ ಆಫ್ ಆದಾಗ ಮಾತನಾಡಲು ಶುರು ಮಾಡುತ್ತಾರೆ. ಕೆಲವರು ತಮ್ಮ ಮುಖಕ್ಕೆ ತಾವೇ ಬಣ್ಣ ಬಳಿದುಕೊಂಡು ಆಟ ಆಡುತ್ತಿದ್ದಾರೆ. ಆದ್ರೆ ಮನೆಯಿಂದ ಹೊರ ಬಂದ ಮೇಲೆ ಜಗತ್ತು ಅದೇ ಬಣ್ಣವನ್ನು ನಂಬುತ್ತೆ. ಅಷ್ಟು ಬೇಗ ತಾವಾಗಿಯೇ ಹಾಕಿಕೊಂಡ ಬಣ್ಣವನ್ನು ತಾವೇ ಬೇಡ ಅಂದರೂ ಕಳಚಲ್ಲ. ರಿಯಲ್ ಮತ್ತು ರಿಯಾಲಿಟಿಗೂ ತುಂಬಾನೇ ವ್ಯತ್ಯಾಸವಿದೆ ಎಂಬುದನ್ನು ಅಲ್ಲಿರುವವರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಮುರಳಿ ಹೇಳಿದ್ದಾರೆ. ಇದನ್ನೂ ಓದಿ: ರಾಕೇಶ್ ಮೇಲೆ ಗುಡುಗಿದ ಅಕ್ಷತಾ – ಮೋಸ ಹೋದೆ ಎಂದು ಬಾತ್‍ರೂಮಿನಲ್ಲಿ ಚೀರಾಟ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮ್ಮ ರಾಕಿಯನ್ನ ಮಾತಾಡ್ಸು-ತಾಯಿ ಬಳಿ ಅಕ್ಷತಾ ಮನವಿ

    ಅಮ್ಮ ರಾಕಿಯನ್ನ ಮಾತಾಡ್ಸು-ತಾಯಿ ಬಳಿ ಅಕ್ಷತಾ ಮನವಿ

    -ಅಕ್ಷತಾ ತಾಯಿ ಕೊಟ್ಟ ಉತ್ತರ ಹೀಗಿತ್ತು
    -ಅಕ್ಷತಾ ತಾಯಿ ಬಳಿ ಕ್ಷಮೆಯಾಚಿದ ರಾಕೇಶ್

    ಬೆಂಗಳೂರು: ಬಿಗ್‍ಬಾಸ್ ಶೋಗೆ ಪ್ರತಿ ಸೀಸನ್ ನಲ್ಲೂ ಬಿಗ್ ಮನೆಗೆ ಸ್ಪರ್ಧಿಗಳ ಕುಟುಂಬದವರಲ್ಲಿ ಒಬ್ಬರನ್ನು ಕಳುಹಿಸಿ ಎಲ್ಲರಿಗೂ ಸರ್ಪ್ರೈಸ್ ಕೊಡುತ್ತಾರೆ. ಅದೇ ರೀತಿ ಬಿಗ್‍ಬಾಸ್ ಸೀಸನ್ 6ರಲ್ಲೂ ಮಂಗಳವಾರ ಪ್ರಸಾರವಾದ ಸಂಚಿಕೆಯಲ್ಲಿ ಸ್ಪರ್ಧಿಗಳ ಕುಟುಂಬದವರನ್ನು ಬಿಗ್ ಮನೆಗೆ ಕಳುಹಿಸಿದ್ದರು.

    ಮೊದಲಿಗೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಪಾಸ್ ಟಾಸ್ಕ್ ಕೊಟ್ಟಿರುತ್ತಾರೆ. ಅಂದರೆ ಬಿಗ್ ಬಾಸ್ ಪಾಸ್ ಎಂದು ಹೇಳಿದಾಗ ಸ್ಪರ್ಧಿಗಳು ಯಾರೇ ಬಂದರೂ ಮಾತನಾಡದೇ, ಅಲುಗಾಡದೇ ಸುಮ್ಮನೆ ನಿಲ್ಲಬೇಕಾಗುತ್ತದೆ. ಈ ವೇಳೆ ಮೊದಲ ಬಾರಿಗೆ ನವೀನ್ ಅವರ ಅಮ್ಮ ಬರುತ್ತಾರೆ. ನಂತರ ಶಶಿ ಮನೆಯವರು ಬರುತ್ತಾರೆ. ಅವರನ್ನು ಮನೆಯವರೆಲ್ಲಾ ಮಾತನಾಡಿಸಿ ಕಳುಹಿಸುತ್ತಾರೆ.

    ಮೂರನೇಯದಾಗಿ ಅಕ್ಷತಾ ಅಮ್ಮ ಬಿಗ್ ಮನೆಗೆ ಬರುತ್ತಾರೆ. ಅಮ್ಮನನ್ನು ನೋಡಿದ ಅಕ್ಷತಾ ತಕ್ಷಣ ಅವರನ್ನು ಅಪ್ಪಿಕೊಂಡು ಅಳುತ್ತಾರೆ. ಅಕ್ಷತಾ ತಾಯಿ ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ನೀನು ಚೆನ್ನಾಗಿ ಆಟವಾಡುತ್ತಿದ್ದೀಯಾ, ಗೆದ್ದು ಬಾ ಎಂದು ಅಕ್ಷತಾ ಕೈ ಹಿಡಿದುಕೊಂಡು ಹೇಳುತ್ತಾರೆ. ಆದರೆ ರಾಕೇಶ್ ಯಿಂದ ದೂರವಿರು ಎಂದು ಸಲಹೆ ನೀಡಿದ್ದಾರೆ.

    ಆಗ ಅಕ್ಷತಾ, ರಾಕೇಶ್ ಕೂಡ ಅಮ್ಮಂದಿರಿಗೆ ತುಂಬಾ ಗೌರವ ಕೊಡುತ್ತಾರೆ ಮಾತನಾಡಿಸು ಎಂದು ಹೇಳುತ್ತಾರೆ. ಆದರೂ ಅಕ್ಷತಾ ಅಮ್ಮ ಎಲ್ಲರನ್ನು ಮಾತನಾಡಿಸಿ ರಾಕೇಶ್ ಅವರನ್ನು ಮಾತನಾಡಿಸುವುದಿಲ್ಲ. ಈ ವೇಳೆ ರಾಕೇಶ್ ಅಲ್ಲೇ ಪಕ್ಕದಲ್ಲಿಯೇ ಕುಳಿತಿರುತ್ತಾರೆ. ಆಗ ಅಕ್ಷತಾ ರಾಕೇಶ್‍ ನ ಮಾತನಾಡಿಸಿ, ಇಲ್ಲಂದ್ರೆ ಬೇಜಾರ್ ಮಾಡಿಕೊಳ್ಳುತ್ತಾರೆ ಮಾತನಾಡಿಸಿ, ಸಮೀಪ ಕರೀಲಾ ಎಂದು ಕೇಳುತ್ತಾರೆ. ಆಗ ಅವರ ತಾಯಿ ಬೇಡ ಎಂದು ಸುಮ್ಮನಾಗುತ್ತಾರೆ.

    ಕೊನೆಗೆ ರಾಕೇಶ್ ಬಂದು ನನ್ನ ಮೇಲೆ ಕೋಪನಾ ಎಂದು ಅಕ್ಷತಾ ತಾಯಿಯನ್ನು ಮಾತನಾಡಿಸುತ್ತಾರೆ. ಆಗ ಅಕ್ಷತಾ ಅಮ್ಮ ಹಾಗೇನು ಇಲ್ಲ, ಆದರೆ ಹೊರಗಡೆ ಜನರು ಸುಮ್ಮನೆ ಮಾತನಾಡಿಕೊಳ್ಳುತ್ತಾರೆ. ನೀನು ನನ್ನ ಮಗನ ತರ ಎಂದು ಹೇಳುತ್ತಾರೆ. ಬಳಿಕ ರಾಕೇಶ್ ನನ್ನಿಂದ ಏನಾದರೂ ತಪ್ಪಾಗಿದ್ದರೆ  ಕ್ಷಮಿಸಿ ಎಂದು ಕೇಳಿದ್ದಾರೆ.

    ಇದೇ ವೇಳೆ ಅಕ್ಷತಾ ತಾಯಿ ಬಿಗ್ ಮನೆಯಿಂದ ಹೊರ ಬಂದಮೇಲೆ ಎಲ್ಲರನ್ನು ಕರೆದುಕೊಂಡು ಮನೆಗೆ ಬಾ ಎಂದು ಹೇಳಿರುತ್ತಾರೆ. ಆಗ ಅಕ್ಷತಾ ಎಲ್ಲರನ್ನೂ ಮನೆಗೆ ಕರೆದಿದ್ದಾರೆ. ನೀನು ಬಾ ಎಂದು ಹೇಳಿದ್ದಾರೆ.

    ಯಾರ ಜೊತೆ ಕಿರಿಕ್ ಮಾಡಬೇಡ, ಕೋಪ ಕಡಿಮೆ ಮಾಡಿಕೋ ಎಂದು ಬಿಗ್‍ಬಾಸ್ ಮನೆಯಲ್ಲಿ ಮಾಡಿದ್ದ ಟಾಸ್ಕ್ ಬಗ್ಗೆ ಮಾತನಾಡುತ್ತಾರೆ. ಕೊನೆಗೆ ಅವರ ಕೈಯಾರೆ ಮಟನ್ ಅಡುಗೆ ಮಾಡಿ ಎಲ್ಲರಿಗೂ ಕೊಟ್ಟು ಬಿಗ್ ಮನೆಯಿಂದ ಹೊರಹೋಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಕೇಶ್ ಕೊಟ್ಟ ಗಿಫ್ಟನ್ನು ಲೈಟ್ ಆಫ್ ಆದ್ಮೇಲೆ ಪಡೆದ ಅಕ್ಷತಾ

    ರಾಕೇಶ್ ಕೊಟ್ಟ ಗಿಫ್ಟನ್ನು ಲೈಟ್ ಆಫ್ ಆದ್ಮೇಲೆ ಪಡೆದ ಅಕ್ಷತಾ

    -ಬಿಗ್ ಮನೆಯಲ್ಲಿ ಯಾರಿಗೂ ಗೊತ್ತಾಗಲಿಲ್ಲ!

    ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಅಕ್ಷತಾ ಮತ್ತು ರಾಕೇಶ್ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅಕ್ಷತಾ ಅವರು ಕ್ರಿಸ್ ಮಸ್ ಪ್ರಯುಕ್ತ ರಾಕೇಶ್ ಕೊಟ್ಟ ಉಡುಗೊರೆಯನ್ನು ಮೊದಲು ನಿರಾಕರಿಸಿ ಬಳಿಕ ಎಲ್ಲರೂ ಮಲಗಿದ ನಂತರ ತೆಗೆದುಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಕ್ರಿಸ್‍ಮಸ್ ಪ್ರಯುಕ್ತ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆಲ್ಲರೂ ಸಾಂತಾ ಆಗಿದ್ದರು. ಆದ್ದರಿಂದ ಬಿಗ್‍ಬಾಸ್ ಸ್ಪರ್ಧಿಗಳೆಲ್ಲರಿಗೂ ಒಂದು ಟಾಸ್ಕ್ ಕೊಟ್ಟಿದ್ದರು. ಆ ಟಾಸ್ಕ್ ಎಂದರೆ ತಮ್ಮ ಬಳಿ ಇರುವ ಅಮೂಲ್ಯ ವಸ್ತುವನ್ನು ಇತರೆ ಸ್ಪರ್ಧಿಯೊಬ್ಬರಿಗೆ ಉಡುಗೊರೆ ರೂಪದಲ್ಲಿ ಕೊಡಬೇಕಿತ್ತು. ಉಡುಗೊರೆ ಕೊಟ್ಟ ಕಾರಣವನ್ನು ಎಲ್ಲರ ಮುಂದೆ ಹೇಳಿ ಕೊಡಬೇಕಿತ್ತು.

    ಅದೇ ರೀತಿ ಎಲ್ಲರೂ ತಮ್ಮ ಅಮೂಲ್ಯ ವಸ್ತುಗಳನ್ನು ಸ್ಪರ್ಧಿಗಳಿಗೆ ಕೊಟ್ಟಿದ್ದಾರೆ. ರಾಕೇಶ್, ರಶ್ಮಿ ಅವರಿಗೆ ಕ್ರಿಸ್‍ಮಸ್ ಗಿಫ್ಟ್ ಆಗಿ ಒಂದು ಬೆಲ್ಟ್ ಕೊಟ್ಟಿದ್ದರು. ಎಲ್ಲ ಸ್ಪರ್ಧಿಗಳಿಗೂ ಉಡುಗೊರೆ ಸಿಕ್ಕಿತ್ತು. ಆದರೆ ಅಕ್ಷತಾಗೆ ಯಾರಿಂದಲೂ ಉಡುಗೊರೆ ಸಿಗಲಿಲ್ಲ. ಇದರಿಂದ ಅಕ್ಷತಾ ಬೇಸರ ಮಾಡಿಕೊಂಡಿದ್ದರು. ಕೊನೆಗೆ ರಾಕೇಶ್ ಮೇಕಪ್ ರೂಮಿಗೆ ತೆರಳಿ ಅಕ್ಷತಾ ಸೂಟ್‍ಕೇಸ್ ಮೇಲೆ ಗಿಫ್ಟ್ ಇಟ್ಟು ಬಂದಿದ್ದರು.

    ಮೇಕಪ್ ರೂಮಿನಲ್ಲಿ ಇರಿಸಿದ ಗಿಫ್ಟ್ ನ್ನು ನಿವೇದಿತಾ ಗೌಡ ನೋಡಿದರು. ಗಿಫ್ಟ್ ಮೇಲೆ ಅಕ್ಷತಾ ಅಂತ ಬರೆಯಲಾಗಿತ್ತು. ಹಾಗಾಗಿ ನಿವೇದಿತಾ ಗೌಡ ನೇರವಾಗಿ ಅಕ್ಷತಾಗೆ ನೀಡಿದರು. ಆದರೆ ಅಕ್ಷತಾ ಉಡುಗೊರೆ ಮೇಲೆ ಬರೆದಿದ್ದ ಸಂದೇಶವನ್ನು ಇಟ್ಟುಕೊಂಡು ಕಾಣಿಕೆಯನ್ನು ರಾಕೇಶ್ ಸೂಟ್‍ಕೇಸ್ ನಲ್ಲಿ ವಾಪಸ್ ಇಟ್ಟಿದ್ದರು. ರಾಕೇಶ್ ತಮ್ಮ ಸ್ವೆಟರ್ ನ್ನು ಉಡುಗೊರೆಯಾಗಿ ಕೊಟ್ಟಿದ್ದರು.

    ಇದನ್ನು ನೋಡಿದ ರಾಕೇಶ್, ಇದು ಕ್ರಿಸ್ ಮಸ್ ಗಿಫ್ಟ್, ಯಾರು ಉಡುಗೊರೆಯನ್ನ ವಾಪಸ್ ಕೊಡಬಾರದು ಅಂತ ಪದೇ ಪದೇ ಅಕ್ಷತಾಗೆ ಹೇಳಿದರು. ಆದರೆ ಅಕ್ಷತಾ ನೀವು ಕನ್ನಡದಲ್ಲಿ ಬರೆದಿರುವ ಸಂದೇಶ ಸಾಕು ಎಂದು ಗಿಫ್ಟ್ ಪಡೆಯದೆ ಹೋದರು. ಬಳಿಕ ಬಿಗ್ ಮನೆಯಲ್ಲಿ ಲೈಟ್ ಆಫ್ ಆದ ಮೇಲೆ ಅಕ್ಷತಾ ರಾಕೇಶ್ ಕೊಟ್ಟ ಉಡುಗೊರೆಯನ್ನು ಪಡೆದುಕೊಂಡಿದ್ದಾರೆ.

    ರಾತ್ರಿ ವೇಳೆ ಅಕ್ಷತಾ ಗಿಫ್ಟ್ ತೆಗೆದುಕೊಂಡು ರಾಕೇಶ್ ಬರೆದ ಸಂದೇಶವನ್ನು ಬಿಗ್ ಬಾಸ್ ಕ್ಯಾಮೆರಾ ಮುಂದೆ ಓದಿ ಹೇಳಿದ್ದಾರೆ. “ಅಕ್ಷತಾ ನನಗೆ ಗೊತ್ತು, ಇದು ನಿನಗೆ ಬೇಕು ಅಂತ, ನೀನು ಇದನ್ನು ಕ್ಯಾಮೆರಾ ಮುಂದೆ ಬೇಕು ಎಂದು ಕೇಳುತ್ತಿದ್ದೆ. ನಮ್ಮ ಮಧ್ಯೆ ನಡೆಯುತ್ತಿರುವ ಕೋಲ್ಡ್ ವಾರ್ ಗೆ ಈ ಉಡುಗೊರೆಯಿಂದ ವಾವ್ ಸಿಗಲಿದೆ’ ಎಂದು ರಾಕೇಶ್ ಬರೆದಿದ್ದರು.

    ಅಕ್ಷತಾ ಬಿಗ್ ಮನೆಯಲ್ಲಿ ಕ್ಯಾಮೆರಾ ಮುಂದೆ ಹೋಗಿ ನನಗೆ ಸ್ವೆಟರ್ ಬೇಕು ಎಂದು ಕೇಳುತ್ತಿದ್ದರು. ಆದ್ದರಿಂದ ರಾಕೇಶ್ ಕ್ರಿಸ್‍ಮಸ್ ಪ್ರಯುಕ್ತ ಅಕ್ಷತಾಗೆ ಸ್ವೆಟರ್ ಕೊಟ್ಟಿದ್ದಾರೆ. ಕೊನೆಗೆ ಸ್ವೆಟರ್ ಕೊಟ್ಟ ರಾಕೇಶ್ ಗೆ ಅಕ್ಷತಾ ಧನ್ಯವಾದ ತಿಳಿಸಿದ್ದಾರೆ. ರಾತ್ರಿ ವೇಳೆ ಗಿಫ್ಟ್ ಪಡೆದುಕೊಂಡ ಕಾರಣ ಉಳಿದ ಸ್ಪರ್ಧಿಗಳಿಗೆ ಗೊತ್ತಾಗಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಕಿ-ಅಕ್ಷತಾ ನಡುವೆ ಜ್ವಾಲಾಮುಖಿ ಸ್ಫೋಟ

    ರಾಕಿ-ಅಕ್ಷತಾ ನಡುವೆ ಜ್ವಾಲಾಮುಖಿ ಸ್ಫೋಟ

    -ಹೋಗಲೋ ನಿನ್ನನ್ನ ಯಾರ್ ಮಾತಾಡಾಸ್ತಾರೆ: ಅಕ್ಷತಾ
    -ಅಯ್ಯೋ ಇದೇನಾಯ್ತು? ಇತರೆ ಸ್ಪರ್ಧಿಗಳೆಲ್ಲಾ ಕನ್ಫ್ಯೂಸ್

    ಬೆಂಗಳೂರು: ಬಿಗ್ ಬಾಸ್ 6ನೇ ಆವೃತ್ತಿಯ ಪ್ರೇಮ ಜೋಡಿಗಳೆಂದು ಗುರುತಿಸಿಕೊಂಡಿರುವ ಅಕ್ಷತಾ ಮತ್ತು ರಾಕೇಶ್ ನಡುವೆ ಮಹಾಯುದ್ಧವೇ ನಡೆದಿದೆ. ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ಅಕ್ಷತಾ ಮತ್ತು ರಾಕೇಶ್ ನಡುವೆ ದೊಡ್ಡ ಜಗಳವೇ ನಡೆದಿದೆ.

    ಈ ವಾರದ ಕ್ಯಾಪ್ಟನ್ ಆಗಿ ರಾಕೇಶ್ ಆಯ್ಕೆಯಾಗಿದ್ದರು. ನಾಮಿನೇಷನ್ ವೇಳೆ ಬಿಗ್‍ಬಾಸ್ ರಾಕೇಶ್ ಗೆ ವಿಶೇಷ ಅಧಿಕಾರ ನೀಡಿತ್ತು. ಅಕ್ಷತಾರನ್ನು ಉಳಿಸದೇ ಮುರುಳಿ ಅವರನ್ನು ರಾಕೇಶ್ ಸೇವ್ ಮಾಡಿದ್ದರು. ಇದರಿಂದ ಸಹಜವಾಗಿಯೇ ಅಕ್ಷತಾ ಜೋರಾಗಿ ಕೂಗಿ ಕಣ್ಣೀರು ಹಾಕಿದ್ದರು. ಕಳೆದ ಎರಡು ದಿನಗಳಿಂದ ಆರಂಭದ ದಿನಗಳಿಂದಲೂ ಅಕ್ಷತಾ ಅಡುಗೆ ಮನೆಯಲ್ಲಿ ಕೆಲಸ ಮಾಡ್ತಿದ್ದಾಳೆ. ಹಾಗಾಗಿ ಬೇರೆಯವರು ಅಡುಗೆ ಮಾಡಿ ಎಂದು ರಾಕೇಶ್ ಆದೇಶಿಸಿದ್ದರು. ಈ ವೇಳೆ ರಾಕೇಶ್, ಇದು ನನ್ನ ನಿರ್ಣಯ ಅಲ್ಲ, ಮನೆಯ ಇತರೆ ಸದಸ್ಯರ ಮನವಿಯ ಮೇರೆಗೆ ಅಡುಗೆ ಬೇರೆಯವರ ಮಾಡಲಿ ಎಂದು ಹೇಳ್ತಿದ್ದೇನೆ ಎಂದರು.

    ಇಷ್ಟಕ್ಕೆ ಸುಮ್ಮನಾಗದ ಅಕ್ಷತಾ ಎಲ್ಲರ ಬಳಿಯೂ ಹೋಗಿ, ನಾನು ಅಡುಗೆ ಯಾರು ಮಾಡಬಾರದೆಂದು ಎಂದು ಪ್ರಶ್ನೆ ಮಾಡಿದರು. ಈ ವೇಳೆ ಎಲ್ಲರೂ ನಾವು ಹೇಳಿಲ್ಲ, ನಿಮ್ಮ ಅಡುಗೆಯೇ ನಮಗಿಷ್ಟ ಅಂತಾ ಉತ್ತರ ನೀಡಿದ್ದಾರೆ. ಎಲ್ಲರ ಬಳಿ ಸ್ಪಷ್ಟನೆ ಪಡೆದುಕೊಂಡ ಅಕ್ಷತಾ, ನಾನು ಅಡುಗೆ ಮಾಡಬಾರದೆಂದು ಹೇಳಿದ್ಯಾರು ಎಂದು ರಾಕೇಶ್ ನನ್ನು ಪ್ರಶ್ನಿಸಿದರು. ನಾನು ಹೆಸರು ಹೇಳಲ್ಲ ಎಂದು ರಾಕೇಶ್ ವಾದಿಸಿದರು.

    ಹೀಗೆ ಇಬ್ಬರ ಮಾತುಕತೆ ಕೆಲ ಸಮಯ ನಡೆಯಿತು. ಕೊನೆಗೆ ನೀವು ನನ್ನನ್ನು ಬಿಟ್ಟುಬಿಡಿ. ನಿಮ್ಮಿಂದ ಹೊರಗಡೆ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬ ಅನುಮಾನ ಬರುತ್ತಿದೆ. ಈಗಾಗಲೇ ನಮ್ಮಿಬ್ಬರ ಸಂಬಂಧದ ಬಗ್ಗೆ ನಿಮ್ಮ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ. ದಯವಿಟ್ಟು ನನ್ನೊಂದಿಗೆ ಪದೇ ಪದೇ ಮಾತನಾಡಬೇಡಿ ಎಂದು ರಾಕೇಶ್ ಮನವಿ ಮಾಡಿಕೊಂಡರು.

    ರಾಕೇಶ್ ಮನವಿಗೆ ಪ್ರತಿಕ್ರಿಯಿಸಿದ ಅಕ್ಷತಾ, ನನಗೆ ನಿಮ್ಮಿಂದ ಪರ್ಸನಲ್ ಡ್ಯಾಮೇಜ್ ಆಗ್ತಿದೆಯೇ ಹೊರತು ನಿಮಗೆ ಅಲ್ಲ. ಮೊದಲಿನಿಂದಲೂ ಬಿಗ್ ಬಾಸ್ ಮನೆಯ ಹೊರಗೆ ಒಳ್ಳೆಯ ಫ್ರೆಂಡ್ಸ್ ಎಂದು ಹೇಳಿದ್ದೇನೆ. ಕೂಡಲೇ ರಾಕೇಶ್ ನಾವಿಬ್ಬರು ಫ್ರೆಂಡ್ಸ್ ಅಲ್ಲ ಎಂದು ಜೋರಾಗಿ ಹೇಳಿದರು. ಕೋಪಗೊಂಡ ಅಕ್ಷತಾ, ಹೋಗಲೋ ನಿನ್ನನ್ನು ಯಾರ್ ಮಾತಾಡಾಸ್ತಾರೆ ಎಂದು ಗಾರ್ಡನ್ ಏರಿಯಾದಿಂದ ಮನೆಯೊಳಗೆ ಹೋದ್ರು.

    ಮನೆಯಲ್ಲಿದ್ದ ಇತರೆ ಸದಸ್ಯರು ಮೂಕವಿಸ್ಮಿತರಾಗಿ ಎಲ್ಲವನ್ನು ನೋಡಿ ಒಂದು ಕ್ಷಣ ಶಾಕ್ ಆದಂತೆ ತಬ್ಬಿಬಾದರು. ಅದ್ರೆ ಯಾವ ಸದಸ್ಯರು ಇಬ್ಬರನ್ನು ರಾಜಿ ಮಾಡಿಸುವ ಕೆಲಸಕ್ಕೆ ಮುಂದಾಗಲಿಲ್ಲ. ಮುರುಳಿ ಅವರನ್ನು ಸೇವ್ ಮಾಡಿದಾಗಲೂ ಇಬ್ಬರು ಇದೇ ರೀತಿ ಜಗಳ ಮಾಡಿಕೊಂಡು ದಿನವಿಡೀ ಕಿಡಿಕಾರಿ, ಮನೆಯ ಲೈಟ್ ಆಫ್ ಆಗ್ತಿದ್ದಂತೆ ಅಕ್ಷತಾ ಮತ್ತು ರಾಕೇಶ್ ತಮ್ಮ ಮಾತುಗಳನ್ನು ಆರಂಭಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಕೇಶ್ ಮೇಲೆ ಗುಡುಗಿದ ಅಕ್ಷತಾ – ಮೋಸ ಹೋದೆ ಎಂದು ಬಾತ್‍ರೂಮಿನಲ್ಲಿ ಚೀರಾಟ

    ರಾಕೇಶ್ ಮೇಲೆ ಗುಡುಗಿದ ಅಕ್ಷತಾ – ಮೋಸ ಹೋದೆ ಎಂದು ಬಾತ್‍ರೂಮಿನಲ್ಲಿ ಚೀರಾಟ

    ಬೆಂಗಳೂರು: ಬಿಗ್ ಬಾಸ್ ಸೀಸನ್ 6ರಲ್ಲಿ ರಾಕೇಶ್ ಮತ್ತು ಅಕ್ಷತಾ ಇಬ್ಬರ ನಡುವೆ ಪ್ರೀತಿ ಇದೆ ಎಂದು ಗಾಸಿಪ್ ಹರಿದಾಡುತ್ತಿದೆ. ಅದರಂತೆಯೇ ಅವರಿಬ್ಬರು ಬಿಗ್ ಬಾಸ್ ಮೆನಯಲ್ಲಿ ಯಾವಾಗಲೂ ಒಟ್ಟಿಗೆ ಇದ್ದು ಟಾಸ್ಕ್ ಮಾಡುತ್ತಿರುತ್ತಾರೆ.

    ಈ ವಾರ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅವರು ಕ್ಯಾಪ್ಟನ್ ಆಗಿದ್ದರು. ಆದರೆ ಮನೆಯಿಂದ ಹೊರ ಹೋಗಲು ರಾಕೇಶ್ ಕೂಡ ನಾಮಿನೇಟ್ ಆಗಿದ್ದರು. ಆದ ಕಾರಣ ಬಿಗ್ ಬಾಸ್ ಒಂದು ವಿಶೇಷವಾದ ಅಧಿಕಾರವನ್ನು ರಾಕೇಶ್‍ಗೆ ಕೊಟ್ಟಿದ್ದರು.

    ಈ ವಾರ ಜಯಶ್ರೀ, ಕವಿತಾ, ಆ್ಯಂಡಿ, ಮುರಳಿ, ಅಕ್ಷತಾ, ರಶ್ಮಿ ಮತ್ತು ರಾಕೇಶ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಬಿಗ್‍ಬಾಸ್ ಕೊಟ್ಟ ವಿಶೇಷ ಅಧಿಕಾರದಲ್ಲಿ ರಾಕೇಶ್, ನಾಮಿನೇಟ್ ಯಿಂದ ತಮ್ಮನ್ನು ಸೇವ್ ಮಾಡಿಕೊಳ್ಳಬಹುದಿತ್ತು ಅಥವಾ ನಾಮಿನೇಟ್ ಆಗಿದ್ದ ಸ್ಪರ್ಧಿಗಳಲ್ಲಿ ಒಬ್ಬರನ್ನು ಉಳಿಸಿಕೊಳ್ಳಬೇಕಿತ್ತು. ಆಗ ರಾಕೇಶ್ ಮುರಳಿ ಅವರನ್ನು ಸೇವ್ ಮಾಡಿದರು.

    ರಾಕೇಶ್ ಮುರಳಿಯನ್ನು ಸೇವ್ ಮಾಡಿದ ತಕ್ಷಣ ಬೇಸರ ಮಾಡಿಕೊಂಡ ಅಕ್ಷತಾ ಕೋಪಗೊಂಡು ಬಾತ್‍ರೂಮಿಗೆ ಹೋಗಿ ಜಯಶ್ರೀ ಅವರನ್ನು ಅಪ್ಪಿಕೊಂಡು ಗಳಗಳನೇ ಅತ್ತಿದ್ದಾರೆ. ಈ ವೇಳೆ ನಾನಾಗಿದ್ದರೆ ಅವರನ್ನೇ ಉಳಿಸುತ್ತಿದ್ದೆ ಎಂದು ಹೇಳಿಕೊಂಡು ಅತ್ತಿದ್ದಾರೆ.

    ರಾಕೇಶ್ ಸ್ಪರ್ಧಿಗಳಿಗಾಗಿ ಒಂದು ಆಟ ಆಡಿಸಲು ಎಲ್ಲರನ್ನು ಕರೆದಿದ್ದರು. ಆಗ ಅಕ್ಷತಾ ಸ್ನಾನಕ್ಕೆಂದು ಬಾತ್‍ರೂಮಿಗೆ ಹೋಗಿದ್ದರು. ರಾಕೇಶ್ ಕರೆಯಲು ಹೋಗಿದ್ದಾರೆ. ಆಗ ರಾಕೇಶ್ ಮೇಲೆ ಕೋಪಗೊಂಡು ಗುಡುಗಿದ್ದಾರೆ. ಕೆಲ ಸಮಯ ಬಾತ್‍ರೂಮಿನಲ್ಲಿಯೇ ಕುಳಿತ ಅಕ್ಷತಾ ಜೋರು ಜೋರಾಗಿ ಕೂಗಿ ಅತ್ತರು. ಕೊನೆಗೆ ಅಕ್ಷತಾ ಬಳಿ ಹೋದ ಆ್ಯಂಡಿ ಸಮಾಧಾನ ಮಾಡಿ ಹೊರ ತಂದರು. ನಾನು ಮನೆಯವರ ವಿರೋಧ ಕಟ್ಟಿಕೊಂಡಿದ್ದೇನೆ. ಒಮ್ಮೆ ಅಮ್ಮನನ್ನು ತಬ್ಬಿಕೊಂಡು ಕ್ಷಮೆ ಕೇಳಬೇಕು ಎಂದು ಬಿಗ್‍ಬಾಸ್ ಬಳಿ ಕೇಳಿಕೊಂಡರು.

    ದಿನಪೂರ್ತಿ ರಾಕೇಶ್ ಮೇಲೆ ಮುನಿಸಿಕೊಂಡಿದ್ದ ಅಕ್ಷತಾ, ಮನೆಯ ಲೈಟ್ ಆಫ್ ಆಗುತ್ತಿದ್ದಂತೆ ಮತ್ತೆ ಆತನೊಂದಿಗೆ ಗುಸು ಗುಸು ಚರ್ಚೆಯಲ್ಲಿ ಭಾಗಿಯಾದ್ರು. ನನ್ನನ್ನು ಯಾಕೆ ಸೇವ್ ಮಾಡಿಲ್ಲ ಅಂತ ಸೂಕ್ತವಾದ ಕಾರಣ ಕೊಡು ಎಂದು ಅಕ್ಷತಾ ಕೇಳಿದ್ರು. ತನ್ನ ನಿರ್ಣಯವನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನು ಬೆಳಗ್ಗೆಯಿಂದ ರಾಕೇಶ್ ಮಾಡತೊಡಗಿದ್ದು ಸಂಚಿಕೆಯಲ್ಲಿ ನೋಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೈ ಮುಗಿದು ತಪ್ಪಾಯ್ತೆಂದು ರಾಕೇಶ್ ಕಾಲಿಗೆ ಬಿದ್ದ ಅಕ್ಷತಾ

    ಕೈ ಮುಗಿದು ತಪ್ಪಾಯ್ತೆಂದು ರಾಕೇಶ್ ಕಾಲಿಗೆ ಬಿದ್ದ ಅಕ್ಷತಾ

    ಬೆಂಗಳೂರು: ಬಿಸ್‍ಬಾಸ್ ರಿಯಾಲಿಟಿ ಶೋ ಸ್ಪರ್ಧಿಗಳಾದ ರಾಕೇಶ್ ಮತ್ತು ಅಕ್ಷತಾ ಪ್ರತಿದಿನ ಸುದ್ದಿಯಲ್ಲಿರುತ್ತಾರೆ. ಈಗ ಮತ್ತೆ ಅಕ್ಷತಾ ರಾಕೇಶ್ ಕಾಲಿಗೆ ಬಿದ್ದು ಕ್ಷಮೆ ಕೇಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಬಿಗ್ ಮನೆಯ ಮಂದಿಗೆ ಬಿಗ್‍ಬಾಸ್ ಲಕ್ಷುರಿ ಬಜೆಟ್ ಟಾಸ್ಕ್ ಕೊಟ್ಟಿದ್ದರು. ಆ ಟಾಸ್ಕ್ ಹೆಸರು ‘ಮಡಿಕೆ ಒಡಿ, ಲಕ್ಷುರಿ ಪಡಿ’. ಇದರ ಅರ್ಥ ಮಡಿಕೆಯನ್ನು ಒಡೆದು ಬಜೆಟ್ ಗಳಿಸುವುದಾಗಿದೆ. ಈ ಟಾಸ್ಕ್ ನಲ್ಲಿ ಮಡಿಕೆ ಒಡೆಯುವ ಜವಾಬ್ದಾರಿಯನ್ನು ರಶ್ಮಿ ಪಡೆದಿದ್ದು, ಮಡಿಕೆ ಒಡೆದ ಬಳಿಕ ಅದರಲ್ಲಿರುವ ಚೀಟಿಗಳನ್ನು ಓದಿ ಅಕ್ಷತಾ ಹೇಳಬೇಕಾಗಿತ್ತು.

    ಕೃಪೆ: ಕಲರ್ಸ್ ಸೂಪರ್

    ಟಾಸ್ಕ್ ಶುರುವಾಗಿ ರಶ್ಮಿ ಕಣ್ಣಿಗೆ ಬಟ್ಟೆ ಕಟ್ಟಲಾಗಿದ್ದು, ಮಡಿಕೆ ಒಡೆಯುತ್ತಿದ್ದರು. ಉಳಿದ ಸ್ಪರ್ಧಿಗಳು ಅವರಿಗೆ ಗೈಡ್ ಮಾಡಲು ಎಲ್ಲರೂ ಕೂಗಾಡುತ್ತಿದ್ದರು. ಈ ನಡುವೆ ಅಕ್ಷತಾ ಮಡಿಕೆಯಲ್ಲಿ ಸಿಕ್ಕ ಚೀಟಿಗಳನ್ನು ಓದಿ ಪದಾರ್ಥಗಳ ಹೆಸರನ್ನು ಹೇಳುತ್ತಿದ್ದರು. ಅಕ್ಷತಾ ಹೇಳುವ ಪದಾರ್ಥವನ್ನು ಆಂಡಿ ಬರೆಯುತ್ತಿದ್ದರು. ಆದರೆ ಎಲ್ಲರೂ ಕೂಗಾಡುತ್ತಿದ್ದ ಕಾರಣ ಅಕ್ಷತಾ ಹೇಳುತ್ತಿದ್ದ ಪದಾರ್ಥಗಳ ಹೆಸರು ಕೇಳಿಸುತ್ತಿರಲಿಲ್ಲ.

    ಕೆಲವು ಬಾರಿ ಅಕ್ಷತಾ, ಆಂಡಿ ಬಳಿ ಬಂದು ಹೇಳುತ್ತಿದ್ದರು. ಈ ವೇಳೆ ಬಝರ್ ಶಬ್ಧ ಬಂತು. ಆಗ ಪಾಯಿಂಟ್ಸ್ ಇನ್ನೂ ಉಳಿದಿತ್ತು. ಹೀಗಾಗಿ ಕೋಪಗೊಂಡ ರಾಕೇಶ್, ಅಕ್ಷತಾ ವಿರುದ್ಧ ಕೂಗಾಡುತ್ತಿದ್ದರು. ಆಗ ರಾಕೇಶ್, ನೀನು ಹತ್ತಿರ ಬಂದು ಹೇಳಬೇಕಿತ್ತು. ಯಾಕಂದ್ರೆ ಇನ್ನು ಪಾಯಿಂಟ್ಸ್ ಇತ್ತು ಅಂತ ಅಕ್ಷತಾಗೆ ಹೇಳಿದ್ರು. ಆಗ ಅಕ್ಷತಾ, ಎಲ್ಲರೂ ಕೂಡಾಗುತ್ತಿದ್ದರು ಆದ್ದರಿಂದ ನನ್ನ ಧ್ವನಿ ಕೇಳಿಸುತ್ತಿರಲಿಲ್ಲ ಎಂದು ರಾಕೇಶ್‍ಗೆ ಉತ್ತರ ಕೊಟ್ಟರು.

    ಮಾತು ಮುಂದುವರಿಸಿದ ರಾಕೇಶ್, ನೀನು ಎಲ್ಲರ ಧ್ವನಿಗಿಂತ ಜೋರಾಗಿ ಕೇಳಿಸುವ ರೀತಿ ಹೇಳಬೇಕಿತ್ತು ಎಂದು ಅಕ್ಷತಾಗೆ ಹೇಳಿದರು. ಇದರಿಂದ ಬೇಸರಗೊಂಡ ಅಕ್ಷತಾ ತಪ್ಪು ನನ್ನದೆ, ಕ್ಷಮಿಸಿ ಎಂದು ಹೇಳಿ ಕೈ ಮುಗಿದು ರಾಕೇಶ್ ಕಾಲಿಗೆ ಬಿದ್ದಿದ್ದಾರೆ. ಬಳಿಕ ಇದೇ ವಿಚಾರಕ್ಕೆ ಅಕ್ಷತಾ ಮತ್ತು ರಾಕೇಶ್ ನಡುವೆ ಮಾತಿನ ಚಕಮಕಿ ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಮಿನೇಟ್ ಆಗಿ ಕೆಲ ಹೊತ್ತಿನಲ್ಲೇ ಸೇಫ್ ಆದ ರಾಕೇಶ್

    ನಾಮಿನೇಟ್ ಆಗಿ ಕೆಲ ಹೊತ್ತಿನಲ್ಲೇ ಸೇಫ್ ಆದ ರಾಕೇಶ್

    ಬೆಂಗಳೂರು: ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-6ರಲ್ಲಿ ಈ ವಾರ ಸ್ಪರ್ಧಿ ರಾಕೇಶ್ ನಾಮಿನೇಟ್ ಆಗಿ ಕೆಲ ಹೊತ್ತಿನಲ್ಲೇ ಸೇಫ್ ಆಗಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ನಾಮಿನೇಶನ್ ನಡೆಯುತ್ತೆ. ಈ ವಾರ ಕೂಡ ನಾಮಿನೇಶನ್ ನಡೆದಿದ್ದು, ಆಂಡ್ರ್ಯೂ, ಶಶಿ ಹಾಗೂ ಧನರಾಜ್ ಮೂವರು ರಾಕೇಶ್ ಅವರನ್ನು ನಾಮಿನೇಟ್ ಮಾಡಿದರು. 3 ವೋಟ್ ಪಡೆದು ರಾಕೇಶ್ ನಾಮಿನೇಟ್ ಆಗಿದ್ದರು.

    ನಾಮಿನೇಶನ್ ನಂತರ ಬಿಗ್ ಬಾಸ್ ನಾಮಿನೇಟ್ ಆದ ಸ್ಪರ್ಧಿಗಳಿಗೆ ಚಟುವಟಿಕೆಯನ್ನು ನೀಡಿದರು. `ನನ್ ಬಲೂನೇ ಸ್ಟ್ರಾಂಗು ಗುರು’ ಎಂದು ಟಾಸ್ಕ್ ನೀಡಿ ಯಾರ ಬಲೂನ್ ಕೊನೆಯವರೆಗೂ ಒಡೆಯದೇ ಹಾಗೇ ಇರುತ್ತದೆಯೋ ಅವರು ಸೇಫ್ ಆಗಬಹುದು. ಅಷ್ಟೇ ಅಲ್ಲದೇ ಸೇಫ್ ಆಗಿರುವ ಸ್ಪರ್ಧಿಯನ್ನು ನಾಮಿನೇಟ್ ಮಾಡಬಹುದು ಎಂದು ಬಿಗ್‍ಬಾಸ್ ಕಡೆಯಿಂದ ಆದೇಶ ಬಂತು.

    ರಾಕೇಶ್ ಈ ಟಾಸ್ಕ್ ನಲ್ಲಿ ಭಾಗವಹಿಸಿ ಕೊನೆಯವರೆಗೂ ಬಲೂನ್ ಒಡೆಯದೇ ನೋಡಿಕೊಂಡರು. ಬಳಿಕ ಈ ಟಾಸ್ಕ್ ನಲ್ಲಿ ಗೆದ್ದು ಅವರು ಸೇಫ್ ಆದರು. ಸೇಫ್ ಆದ ನಂತರ ರಾಕೇಶ್ ಅವರು ಜಯಶ್ರೀಯನ್ನು ನಾಮಿನೇಟ್ ಮಾಡಿದರು.

    ಈ ವಾರ ಬಿಗ್‍ಬಾಸ್ ಮನೆಯಲ್ಲಿ ಜಯಶ್ರೀ, ಆಂಡ್ರ್ಯೂ, ಸೋನು, ಅಕ್ಷತಾ, ಧನರಾಜ್, ನವೀನ್, ರ‍್ಯಾಪಿಡ್ ರಶ್ಮಿ ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಯಿಂದ ಯಾರೂ ಹೊರಬೀಳಲಿದ್ದಾರೆ ಎಂಬುದು ಶನಿವಾರ ಕಿಚ್ಚ ಸುದೀಪ್ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಹೇಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೃಜಾಗೆ ಹರಿಪ್ರಿಯಾ ನಾಯಕಿ!

    ಸೃಜಾಗೆ ಹರಿಪ್ರಿಯಾ ನಾಯಕಿ!

    ಬೆಂಗಳೂರು: ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮೂಲಕವೇ ಖ್ಯಾತಿ ಗಳಿಸಿಕೊಂಡಿರುವ ಸೃಜನ್ ಲೋಕೇಶ್ ಒಂದಷ್ಟು ಕಾಲದಿಂದ ಚಿತ್ರರಂಗದಿಂದ, ನಟನೆಯಿಂದ ದೂರವಿದ್ದಂತಿದ್ದರು. ಆದರೀಗ ಅವರು ಮತ್ತೆ ನಾಯಕನಾಗಿ ಮರಳಿದ್ದಾರೆ.

    ‘ಎಲ್ಲಿದ್ದೆ ಇಲ್ಲಿ ತನಕ’ ಎಂಬುದು ಅವರು ನಟಿಸಲಿರೋ ಹೊಸ ಚಿತ್ರದ ಶೀರ್ಷಿಕೆ. ಈ ಚಿತ್ರವನ್ನು ಮಜಾ ಟಾಕೀಸ್ ಶೋ ನಿರ್ದೇಶಕ ತೇಜಸ್ವಿ ಅವರೇ ಮಾಡಲಿದ್ದಾರಂತೆ. ಈ ಚಿತ್ರಕ್ಕೀಗ ಹರಿಪ್ರಿಯಾ ನಾಯಕಿಯಾಗಿ ನಿಕ್ಕಿಯಾಗಿದ್ದಾರೆ.

    ಸೃಜನ್ ತಂದೆ ಲೋಕೇಶ್ ಅವರು ನಟಿಸಿದ್ದ ಪ್ರಸಿದ್ಧ ಚಿತ್ರ ಪರಸಂಗದ ಗೆಂಡೆತಿಮ್ಮ. ಎಲ್ಲಿದ್ದೆ ಇಲ್ಲೀ ತನಕ ಎಂಬುದು ಅದರ ಜನಪ್ರಿಯ ಹಾಡಿನ ಸಾಲು. ತಮ್ಮ ತಂದೆಯ ಹಾಡಿನ ಸಾಲುಗಳನ್ನೇ ಸೃಜನ್ ತಮ್ಮ ಚಿತ್ರದ ಶೀರ್ಷಿಕೆಯಾಗಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಮಜಾ ಟಾಕೀಸ್ ಕಂತುಗಳಿಗೆ ಸಂಭಾಷಣೆ ಬರೆಯುತ್ತಾ ಬಂದಿರೋ ರಾಕೇಶ್ ಸಂಭಾಷಣೆ ಬರೆಯಲಿದ್ದಾರೆ.

    ಸೃಜನ್ ಲೋಕೇಶ್ ಸ್ವತಃ ನಿರ್ಮಾಣ ಮಾಡಲಿರೋ ಇದು ಪಕ್ಕಾ ಕಮರ್ಶಿಯಲ್ ಕಥನ ಹೊಂದಿರೋ ಚಿತ್ರವಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್ ಮನೆಯಲ್ಲಿಯೇ ಹಾರ ಬದ್ಲಾಯಿಸಿಕೊಂಡ್ರು ಕವಿತಾ-ರಾಕೇಶ್!

    ಬಿಗ್ ಮನೆಯಲ್ಲಿಯೇ ಹಾರ ಬದ್ಲಾಯಿಸಿಕೊಂಡ್ರು ಕವಿತಾ-ರಾಕೇಶ್!

    ಬೆಂಗಳೂರು: ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಯಾವಾಗಲೂ ಒಂದು ಜೋಡಿ ಮಧ್ಯೆ ಗಾಸಿಪ್ ಹರಿದಾಡುತ್ತಿದೆ. ಅದೇ ರೀತಿ ಬಿಗ್‍ಬಾಸ್ ಸೀನಸ್ 6ರಲ್ಲಿ ರಾಕೇಶ್ ಮತ್ತು ಅಕ್ಷತಾ ಯಾವಾಗಲೂ ಜೊತೆಯಲ್ಲಿರುತ್ತಾರೆ. ಆದ್ದರಿಂದ ಇವರಿಬ್ಬರ ಬಗ್ಗೆ ಗಾಸಿಪ್ ಇದೆ. ಆದರೆ ಈಗ ಸ್ಪರ್ಧಿ ಕವಿತಾ ಮತ್ತು ರಾಕೇಶ್ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ.

    ಬಿಗ್‍ಬಾಸ್ ಮನೆಯ ಎಲ್ಲ ಸ್ಪರ್ಧಿಗಳಿಗೂ ಒಂದು ಟಾಸ್ಕ್ ನೀಡಿತ್ತು. ಅದೆನೆಂದರೆ ‘ಇಷ್ಟ ಕಷ್ಟ’. ಈ ಟಾಸ್ಕ್ ನ ಪ್ರಕಾರ ತಮಗೆ ಇಷ್ಟ ಆಗುವ ಒಬ್ಬರಿಗೆ ಸ್ಪರ್ಧಿಗಳು ಹಾರ ಹಾಕಬೇಕಿತ್ತು. ಇಷ್ಟ ಪಡದ ಇಬ್ಬರು ಸದಸ್ಯರ ಮುಖಕ್ಕೆ ಸ್ಪರ್ಧಿಗಳು ಮಸಿ ಬಳಿಯಬೇಕಿತ್ತು.

    ಕಳೆದ ವಾರ ಆಂಡ್ರ್ಯೂ ಮತ್ತು ಕವಿತಾ ಮಧ್ಯೆ ಜಗಳವಾಗಿತ್ತು. ಇದರಿಂದ ಮನೆಯಲ್ಲಿ ಎಲ್ಲರಿಗೂ ಬೇಸರವಾಗಿತ್ತು. ಕೊನೆಗೆ ಕವಿತಾ ಅವರು ಆಂಡ್ರ್ಯೂ ಬಳಿ ಕ್ಷಮೆ ಕೇಳಿದ್ದರು. ಇದರಿಂದ ರಾಕೇಶ್ ಕವಿತಾ ಗುಣವನ್ನು ಅಭಿನಂದಿಸಿ ಹಾರ ಹಾಕಿದರು. ಇತ್ತ ಬೇಸರದಿಂದ ಇದ್ದ ಕವಿತಾ ಜೊತೆ ಸಂತೋಷದಿಂದ ಮಾತನಾಡಿದ್ದಕ್ಕೆ ಕವಿತಾ ಕೂಡ ರಾಕೇಶ್‍ಗೆ ಹಾರ ಹಾಕಿದರು. ಹೀಗಾಗಿ ‘ಇಷ್ಟ ಕಷ್ಟ’ ಟಾಸ್ಕ್ ನಲ್ಲಿ ಕವಿತಾ-ರಾಕೇಶ್ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ.

    ‘ಇಷ್ಟ ಕಷ್ಟ’ ಟಾಸ್ಕ್ ನಲ್ಲಿ ಬರೀ ಕವಿತಾ-ರಾಕೇಶ್ ಮಾತ್ರ ಹಾರ ಹಾಕಿಲ್ಲ. ಶಶಿ-ಧನರಾಜ್ ಹಾಗೂ ರಶ್ಮಿ-ಮುರಳಿ ಕೂಡ ಪರಸ್ಪರ ಹಾರ ಹಾಕಿಕೊಂಡಿದ್ದಾರೆ.

    ರಾಕೇಶ್ ಮತ್ತು ಅಕ್ಷತಾ ಇಬ್ಬರ ನಡುವೆ ಗಾಸಿಪ್ ಇದೆ ಎಂದು ಮಾತನಾಡಿಕೊಳ್ಳುತ್ತಿದಾಗ, ‘ನಾವಿಬ್ಬರು ಒಳ್ಳೆಯ ಗೆಳೆಯರು’ ಎಂದು ರಾಕೇಶ್ ಎಲ್ಲರ ಮುಂದೆ ಸ್ಪಷ್ಟಪಡಿಸಿದ್ದರು. ಆಗ ಕೂಡಲೇ ಅಕ್ಷತಾ ‘ಐ ಲವ್ ಯು ರಾಕಿ” ಅಂತ ಬಹಿರಂಗವಾಗಿ ಹೇಳಿದ್ದರು. ಇದರಿಂದ ಸ್ಪರ್ಧಿಗಳು ಗೊಂದಲಕ್ಕೀಡಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗನ ಸಾವಿನ ಕುರಿತು ರೆಡ್ಡಿ ಮಾತಿಗೆ ಸಿದ್ದರಾಮಯ್ಯ ತಿರುಗೇಟು

    ಮಗನ ಸಾವಿನ ಕುರಿತು ರೆಡ್ಡಿ ಮಾತಿಗೆ ಸಿದ್ದರಾಮಯ್ಯ ತಿರುಗೇಟು

    ಬೆಂಗಳೂರು: ಹಿರಿಯ ಮಗ ರಾಕೇಶ್ ಸಾವು ಸಿದ್ದರಾಮಯ್ಯಗೆ ದೇವರು ಕೊಟ್ಟ ಶಿಕ್ಷೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿದ ಮಾಜಿ ಸಿಎಂ, ನಿಮ್ಮ ಪಾಪದ ಶಿಕ್ಷೆಯನ್ನು ಮಕ್ಕಳಿಗೆ ದೇವರು ನೀಡದಿರಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಈ ಟ್ವೀಟ್ ಅನ್ನು ಐಎನ್‍ಸಿ ಕರ್ನಾಟಕ ಎಂಬ ಅಕೌಂಟ್ ಗೆ ಟ್ಯಾಗ್ ಮಾಡಿದ್ದಾರೆ.

    ಮಾಜಿ ಸಿಎಂ ಟ್ವೀಟ್ ನಲ್ಲೇನಿದೆ?:
    ನನ್ನ ಮಗನ ಸಾವು ನನಗೆ ದೇವರುಕೊಟ್ಟ ಶಿಕ್ಷೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ.

    ಜನಾರ್ದನ ರೆಡ್ಡಿ ಹೇಳಿದ್ದೇನು?:
    ಸಿದ್ದರಾಮಯ್ಯ ಅವರು 4 ವರ್ಷ ನನ್ನ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದಾರೆ. ಅದಕ್ಕೆ ದೇವರು ಅವರ ಹಿರಿಯ ಮಗ ರಾಕೇಶ್ ಸಾವಿನ ಮುಖಾಂತರ ಶಿಕ್ಷೆ ಕೊಟ್ಟಿದ್ದಾರೆ ಅಂತ ಪಬ್ಲಿಕ್ ಟಿವಿಯ ಸಂದರ್ಶನದ ವೇಳೆ ಹೇಳಿದ್ದರು.

    ಕೆಟ್ಟವರಿಗೆ ಭಗವಂತ ಬುದ್ಧಿ ಕಲಿಸ್ತಾನೆ. ನನ್ನನ್ನು ನನ್ನ ಮಕ್ಕಳಿಂದ 4 ವರ್ಷ ದೂರ ಇರುವಂತೆ ಮಾಡಿದ ಸಿದ್ದರಾಮಯ್ಯಗೆ ದೇವರು ಅದೇ ರೀತಿ ಸರಿಯಾಗಿ ಬುದ್ಧಿ ಕಲಿಸಿದ್ದಾನೆ. ಶ್ರವಣ ಕುಮಾರನನ್ನು ದಶರಥ ಮಹರಾಜ ಕೊಂದಾಗ ವೃದ್ಧ ತಂದೆ-ತಾಯಿ ನಿನಗೂ ಮಗನ ಅಗಲಿಕೆ ನೋವು ಗೊತ್ತಾಗಲಿ ಅಂತ ಶಾಪ ಕೊಟ್ಟಿದ್ರು. ನಾಲ್ಕು ವರ್ಷ ನನ್ನಿಂದ ದೂರಾಗಿ ನನ್ನ ಮಕ್ಕಳು ಏನೆಲ್ಲ ಕಷ್ಟ ಅನುಭವಿಸಿದ್ರು ಅದನ್ನ ಕಾರಣವಾದ ಎಲ್ಲರು ಅನುಭವಿಸ್ತಾರೆ ಎಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=KUjH3iqmpEM