Tag: ರಹಾನೆ

  • ಭಾರತಕ್ಕೆ 82 ರನ್‌ಗಳ ಮುನ್ನಡೆ – ರಹಾನೆಯ ಶತಕದಾಟಕ್ಕೆ ಜೈಹೋ ಎಂದ ಕೊಹ್ಲಿ, ಸೆಹ್ವಾಗ್‌

    ಭಾರತಕ್ಕೆ 82 ರನ್‌ಗಳ ಮುನ್ನಡೆ – ರಹಾನೆಯ ಶತಕದಾಟಕ್ಕೆ ಜೈಹೋ ಎಂದ ಕೊಹ್ಲಿ, ಸೆಹ್ವಾಗ್‌

    ಮೆಲ್ಬರ್ನ್: ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆಯ ಅಜೇಯ ಶತಕದ ಆಟವಾಡಿ ಟೀಂ ಇಂಡಿಯಾಗೆ ಮುನ್ನಡೆ ತಂದುಕೊಟ್ಟಿದ್ದಾರೆ.

    ಎರಡನೇ ದಿನದಾಟಕ್ಕೆ 5 ವಿಕೆಟ್‌ ಕಳೆದುಕೊಂಡು ಭಾರತ 277 ರನ್‌ ಹೊಡೆಯುವ ಮೂಲಕ 82 ರನ್‌ಗಳ ಮುನ್ನಡೆಯಲ್ಲಿದೆ.

    ನಿನ್ನೆ 28 ರನ್‌ ಗಳಿಸಿದ್ದ ಶುಭ್‌ಮನ್‌ ಗಿಲ್‌ ಇಂದು 45 ರನ್‌(65 ಎಸೆತ, 8 ಬೌಂಡರಿ) ಹೊಡೆದು ಔಟಾದರು. ಚೇತೇಶ್ವರ ಪೂಜಾರ 17 ರನ್‌, ಹನುಮ ವಿಹಾರಿ 21 ರನ್‌, ರಿಷಭ್‌ ಪಂತ್‌ 29 ರನ್‌ ಹೊಡೆದು ಔಟಾದರು.

    ವಿಕೆಟ್‌ ಉರುಳುತ್ತಿದ್ದಾಗ ಮುರಿಯದ 6ನೇ ವಿಕೆಟ್‌ಗೆ ಜೊತೆಯಾದ ಜಡೇಜಾ ಜೊತೆ ಸೇರಿ ರಹಾನೆ 179 ಎಸೆತದಲ್ಲಿ 100 ರನ್‌ ಜೊತೆಯಾಟವಾಡಿದರು. ರಹಾನೆ 104 ರನ್‌(200 ಎಸೆತ, 12 ಬೌಂಡರಿ) ಹೊಡೆದರೆ ಜಡೇಜಾ 40 ರನ್‌(104 ಎಸೆತ, 1 ಬೌಂಡರಿ) ಹೊಡೆದಿದ್ದಾರೆ.

    ಟ್ವೀಟ್‌ ಮಾಡಿ ರಹನೆಯ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೊಹ್ಲಿ, ನಮಗೆ ಮತ್ತೊಂದು ಉತ್ತಮ ದಿನ. ಸರಿಯಾದ ಟೆಸ್ಟ್ ಕ್ರಿಕೆಟ್. ಜಿಂಕ್ಸ್‌ನಿಂದ ಮತ್ತೊಂದು ಶತಕ ಎಂದು ಶ್ಲಾಘಿಸಿದ್ದಾರೆ.

    ವೀರೇಂದ್ರ ಸೆಹ್ವಾಗ್‌ ಬ್ರಿಲಿಯಂಟ್‌ ಸೆಂಚೂರಿ ಎಂದು ಹೇಳಿದರೆ, ನಾಯಕನ ಶತಕದಾಟ, ಗಿಲ್, ಪಂತ್ ಮತ್ತು ಜಡೇಜಾ ಅವರಿಂದ ಉಪಯುಕ್ತ ಕೊಡುಗೆಗಳು ಎಂದು ವಿವಿಎಸ್‌ ಲಕ್ಷ್ಮಣ್‌ ಟ್ವೀಟ್‌ ಮಾಡಿದ್ದಾರೆ.

  • ಬರೋಬ್ಬರಿ 3 ವರ್ಷಗಳ ಬಳಿಕ ತವರಿನಲ್ಲಿ ಶತಕ ಸಿಡಿಸಿದ ರಹಾನೆ

    ಬರೋಬ್ಬರಿ 3 ವರ್ಷಗಳ ಬಳಿಕ ತವರಿನಲ್ಲಿ ಶತಕ ಸಿಡಿಸಿದ ರಹಾನೆ

    ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಉಪನಾಯಕ ರಹಾನೆ ಶತಕ ಸಿಡಿಸಿದ್ದಾರೆ. 169 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ನೆರವಿನಿಂದ ರಹಾನೆ ಶತಕ ಪೂರ್ಣಗೊಳಿಸಿದರು.

    ನಿನ್ನೆಯ ಆಟದಲ್ಲಿ ಅರ್ಧ ಶತಕ (83 ರನ್)ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ರಹಾನೆ, ಇಂದು ರೋಹಿತ್ ಶರ್ಮಾ ಅವರೊಂದಿಗೆ ಕೂಡಿ ಇನ್ನಿಂಗ್ಸ್ ಮುಂದುವರಿಸಿದರು. ರಹಾನೆ ತವರಿನಲ್ಲಿ ಗಳಿಸಿದ 4ನೇ ಶತಕ ಇದಾಗಿದ್ದು, ಟೆಸ್ಟ್ ವೃತ್ತಿ ಜೀವನದ 11ನೇ ಶತಕವನ್ನು ಪೂರೈಸಿದ್ದಾರೆ. 2016 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂದೋರ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ರಹಾನೆ ಶತಕ ಸಿಡಿಸಿದ್ದರು. ಆ ಬಳಿಕ 16 ಟೆಸ್ಟ್ ಪಂದ್ಯ ಆಡಿದ್ದರೂ ರಹಾನೆ ಶತಕ ಗಳಿಸಲು ವಿಫಲರಾಗಿದ್ದರು.

    ಅಂದಹಾಗೇ ವೆಸ್ಟ್ ಇಂಡೀಸ್ ಸರಣಿಯಲ್ಲಿ ಶತಕ ಗಳಿಸಿದ್ದ ರಹಾನೆ 2 ವರ್ಷಗಳ ಬಳಿಕ ಶತಕ ಸಾಧನೆ ಮಾಡಿದ್ದರು. 2 ವರ್ಷದ ಅವಧಿಯಲ್ಲಿ ರಹಾನೆ 29 ಇನ್ನಿಂಗ್ಸ್ ಆಡಿದ್ದರೂ ಯಾವುದೇ ಶತಕ ಗಳಿಸಿರಲಿಲ್ಲ.

    ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದು, ರಹಾನೆ ತಾಳ್ಮೆಯ ಬ್ಯಾಟಿಂಗ್ ಮೂಲಕ ಉತ್ತಮ ಸಾಥ್ ನೀಡಿ ಪಂದ್ಯದಲ್ಲಿ ತಂಡ ಮೇಲುಗೈ ಸಾಧಿಸಲು ಕಾರಣರಾದರು. 39 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿದ್ದ ತಂಡಕ್ಕೆ ಆಸರೆಯಾದ ಈ ಜೋಡಿ 4ನೇ ವಿಕೆಟ್‍ಗೆ 265 ಎಸೆತಗಳಲ್ಲಿ 267 ರನ್ ಗಳ ಜೊತೆಯಾಟ ನೀಡಿದೆ. 115 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ರಹಾನೆ ಜಾರ್ಜ್ ಲಿಂಡೆ ಬೌಲಿಂಗ್‍ನಲ್ಲಿ ಔಟಾಗುವ ಮೂಲಕ ನಿರ್ಗಮಿಸಿದರು.

  • ಬಾರ್ಡರ್ – ಗವಾಸ್ಕರ್ ಟೂರ್ನಿಯ ಟಾಪ್ 5 ಕ್ಯಾಚ್ – ವಿಡಿಯೋ

    ಬಾರ್ಡರ್ – ಗವಾಸ್ಕರ್ ಟೂರ್ನಿಯ ಟಾಪ್ 5 ಕ್ಯಾಚ್ – ವಿಡಿಯೋ

    ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಇತಿಹಾಸ ಸೃಷ್ಟಿ ಮಾಡಿದೆ. ಇದೇ ವೇಳೆ ನಾಯಕ ವಿರಾಟ್ ಕೊಹ್ಲಿ ಸರಣಿ ಗೆಲುವಿಗೆ ತಂಡದ ಆಟಗಾರ ಸಂಘಟಿತ ಹೋರಾಟ ಕಾರಣ ಎಂದು ತಿಳಿಸಿದ್ದು, ಈ ಸರಣಿಯಲ್ಲಿ ದಾಖಲಾದ ಐದು ಅತ್ಯುತ್ತಮ ಕ್ಯಾಚ್ ಗಳ ಮಾಹಿತಿ ಇಲ್ಲಿದೆ.

    ರಹಾನೆ: ಟೀಂ ಇಂಡಿಯಾ ಉಪ ನಾಯಕ ಸಿಡ್ನಿ ಟೆಸ್ಟ್ ಪಂದ್ಯ ವೇಳೆ ಮೊದಲ ಇನ್ನಿಂಗ್ಸ್ ನ ಶಮಿ ಎಸೆದ 52ನೇ ಓವರಿನ ನಾಲ್ಕನೇಯ ಎಸೆತದಲ್ಲಿ ಮಾರ್ನಸ್ ಲ್ಯಾಬುಶಾನೆ ಕ್ಯಾಚ್ ಪಡೆದು ಗಮನ ಸೆಳೆದರು. ಶಾರ್ಟ್ ಮಿಡ್ ವಿಕೆಟ್‍ನತ್ತ ಸಿಡಿದ ಚೆಂಡನ್ನು ರಹಾನೆ ಅತ್ಯುತ್ತಮವಾಗಿ ಕ್ಯಾಚ್ ಹಿಡಿದು ಆಸ್ಟ್ರೇಲಿಯಾದ ಹಿನ್ನಡೆಗೆ ಕಾರಣರಾಗಿದ್ದರು. ಈ ವೇಳೆ 38 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಮಾರ್ನಸ್ ಲ್ಯಾಬುಶಾನೆ ಪೆವಿಲಿಯನ್ ಸೇರಿದರು.

    ಮಯಾಂಕ್ ಅಗರ್ವಾಲ್: ಆಸೀಸ್ ಟೆಸ್ಟ್ ಸರಣಿಗೆ ಆಯ್ಕೆ ಆಗಿ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಫೀಲ್ಡಿಂಗ್‍ನಲ್ಲೂ ಕಮಲ್ ಮಾಡಿದ್ದರು. 3ನೇ ಟೆಸ್ಟ್ ಪಂದ್ಯದ ಆಸೀಸ್ ಇನ್ನಿಂಗ್ಸ್ ವೇಳೆ 11ನೇ ಓವರ್ ಎಸೆದಿದ್ದ ಇಶಾಂತ್ ಶರ್ಮಾ ಬೌಲಿಂಗ್ ನಲ್ಲಿ 8 ರನ್ ಗಳಿಸಿದ್ದ ಫಿಂಚ್, ಶಾರ್ಟ್ ಮಿಡ್‍ವಿಕೆಟ್ ನತ್ತ ಸಿಡಿಸಿದ್ದ ಚೆಂಡನ್ನು ಮಯಾಂಕ್ ಡೈವ್ ಮಾಡಿ ಕ್ಯಾಚ್ ಪಡೆದಿದ್ದರು.

    https://twitter.com/telegraph_sport/status/1078441138674167809?

    ವಿರಾಟ್ ಕೊಹ್ಲಿ: ಟೆಸ್ಟ್ ಸರಣಿಯ ಉದ್ದಕ್ಕೂ ಆಕ್ರಮಣಕಾರಿ ಪ್ರವೃತ್ತಿಯಿಂದೇ ಆಸೀಸ್ ವಿರುದ್ಧ ಸವಾರಿ ಮಾಡಿದ್ದ ನಾಯಕ ವಿರಾಟ್ ಕೊಹ್ಲಿ, 2ನೇ ಟೆಸ್ಟ್ ಪಂದ್ಯದ ವೇಳೆ ಹ್ಯಾಡ್ಸ್‍ಕಾಂಬ್ ಕ್ಯಾಚ್ ಪಡೆದು ಮಿಂಚಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್ ನ ಇಶಾಂತ್ ಶರ್ಮಾ ಎಸೆದ 54ನೇ ಓವರ್ ನಲ್ಲಿ 7 ರನ್ ಗಳಿಸಿದ್ದ ಹ್ಯಾಡ್ಸ್ ಕಾಂಬ್ ಸ್ಲಿಪ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ್ದರು.

    ಹ್ಯಾಂಡ್ಸ್ ಕಾಂಬ್: ಯುವ ವಿಕೆಟ್ ಕೀಪರ್ ರಿಷಬ್ ಪಂತ್ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ನಾಥನ್ ಲಯನ್ ಬ್ಯಾಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ್ದರು. 54ನೇ ಓವರ್ ನ 3ನೇ ಎಸೆತದಲ್ಲಿ ನಾಥನ್ ಲಯನ್ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ ಪಂತ್‍ರನ್ನು ಹ್ಯಾಂಡ್ಸ್ ಕಾಂಬ್ ಉತ್ತಮವಾಗಿ ಕ್ಯಾಚ್ ಹಿಡಿದು ಔಟ್ ಮಾಡಿಸಿದರು.

    ಖವಾಜಾ: ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ನಾಯಕ ವಿರಾಟ್ ಕೊಹ್ಲಿ ಅವರನ್ನು ಕಟ್ಟಿ ಹಾಕಲು ಪ್ರಯತ್ನಿಸಿದ್ದ ಆಸೀಸ್ ಬೌಲರ್ ಗಳು ಕೊಹ್ಲಿ ವಿಕೆಟ್ ಪಡೆಯಲು ಪೈಪೋಟಿ ನಡೆಸಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಪಡೆದ ಕಮ್ಮಿನ್ಸ್ ಸಾಧನೆಗೆ ಗಲ್ಲಿಯಲ್ಲಿ ನಿಂತಿದ್ದ ಖವಾಜಾ ಕಾರಣರಾಗಿದ್ದರು. 10ನೇ ಓವರ್ ನ 3ನೇ ಎಸೆತದಲ್ಲಿ ಡ್ರೈವ್ ಮಾಡಲು ಕೊಹ್ಲಿ ಯತ್ನಿಸುತ್ತಿದ್ದಂತೆ ಸಿಡಿದ ಚೆಂಡನ್ನು ಖವಾಜಾ ಒಂದೇ ಕೈಯಲ್ಲಿ ಹಿಡಿದಿದ್ದರು.

    ಸರಣಿಯಲ್ಲಿ ಟೀಂ ಇಂಡಿಯಾ ತಂಡವನ್ನು ಆಕ್ರಮಣಕಾರಿಯಾಗಿ ಮುನ್ನಡೆಸಿದ್ದ ಕೊಹ್ಲಿ ಫಿಲ್ಡಿಂಗ್ ನಲ್ಲೂ ಇದೇ ತಂತ್ರವನ್ನು ಬಳಸಿದ್ದರು. ಎದುರಾಳಿ ಆಟಗಾರರಿಗೆ ಬ್ಯಾಟ್ ಬೀಸಲು ಅವಕಾಶ ನೀಡಿ ಕ್ಯಾಚ್ ಆಗುವಂತಹ ಸನ್ನಿವೇಶ ಸೃಷ್ಟಿಸಿ ವಿಕೆಟ್ ಪಡೆಯುತ್ತಿದ್ದರು. ಹಲವು ಬಾರಿ ಪಂದ್ಯದ ನಡುವೆ ಕೊಹ್ಲಿ ಫಿಲ್ಡಿಂಗ್ ನಲ್ಲಿ ಮಾಡಿದ್ದ ಬದಲಾವಣೆಗಳು ತಂಡಕ್ಕೆ ವರವಾಗಿ ಪರಿಣಮಿಸಿದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪರ್ತ್ ಟೆಸ್ಟ್: ಟೀಂ ಇಂಡಿಯಾಗೆ ಕೊಹ್ಲಿ, ರಹಾನೆ ಅರ್ಧಶತಕದ ಆಸರೆ

    ಪರ್ತ್ ಟೆಸ್ಟ್: ಟೀಂ ಇಂಡಿಯಾಗೆ ಕೊಹ್ಲಿ, ರಹಾನೆ ಅರ್ಧಶತಕದ ಆಸರೆ

    ಪರ್ತ್: ಆಸೀಸ್ ವಿರುದ್ಧ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಆರಂಭಿಕ ಅಘಾತ ಎದುರಿಸಿದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಭವಿ ಆಟಗಾರ ರಹಾನೆ ತಲಾ ಅರ್ಧ ಶತಕ ಸಿಡಿಸಿ ಆಸರೆಯಾಗಿದ್ದಾರೆ.

    ಎರಡನೇ ದಿನ ಟೀಂ ಇಂಡಿಯಾ ಬೌಲರ್ ಗಳು ಎದುರಾಳಿ ತಂಡವನ್ನು 326 ರನ್ ಗಳಿಗೆ ಕಟ್ಟಿಹಾಕಿದ ಬಳಿಕ ಆರಂಭದಲ್ಲಿ ಆಸೀಸ್ ಬೌಲರ್ ಗಳು ಮೇಲುಗೈ ಸಾಧಿಸಿದ್ದರು. ಆದರೆ ನಂತರ ಕೊಹ್ಲಿ, ರಹಾನೆ ದಿಟ್ಟ ಪ್ರತಿರೋಧದಿಂದಾಗಿ 69 ಓವರ್ ಗಳಲ್ಲಿ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ.

    ಕೊಹ್ಲಿ ಅರ್ಧಶತಕ: ತಂಡ ರನ್ ಗಳಿಸಿದ್ದಾಗ ಆಂಭಿಕರಾದ ಮುರಳಿ ವಿಜಯ್ ಹಾಗೂ ಕೆಎಲ್ ರಾಹುಲ್ ಔಟಾದಾಗ ಭಾರತಕ್ಕೆ ಆಘಾತವಾಗಿತ್ತು. ಈ ಹಂತದಲ್ಲಿ ಜವಾಬ್ದಾರಿಯುತ ಆಟವಾಡಿದ ನಾಯಕ ವಿರಾಟ್ ಕೊಹ್ಲಿ ಮತ್ತು ಪೂಜಾರ 3ನೇ ವಿಕೆಟ್‍ಗೆ 74 ರನ್ ಗಳ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಸ್ಟಾರ್ಕ್ ಬೇರ್ಪಡಿಸಿದರು. 103 ಎಸೆತಗಳಲ್ಲಿ 24 ರನ್ ಗಳಿಸಿದ್ದ ಪೂಜಾರ, ಸ್ಟಾರ್ಕ್ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

    ಇತ್ತ ನಾಯಕ ವಿರಾಟ್ ಕೊಹ್ಲಿ ತಾಳ್ಮೆ ಆಟವಾಡಿ 109 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಸಂಭ್ರಮಿಸಿದರು. ಬಳಿಕ ಬಂದ ರಹಾನೆ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಸೇರಿ ಇನ್ನಿಂಗ್ಸ್ ಕಟ್ಟಲು ನೆರವಾದರು. ಈ ಜೋಡಿ ಮುರಿಯದ 4ನೇ ವಿಕೆಟ್‍ಗೆ 90 ರನ್ ಜೊತೆಯಾಟವಾಡಿದೆ. 95 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಹಾನೆ ಅಂತಿಮವಾಗಿ 103 ಎಸೆತಗಳಲ್ಲಿ 51 ರನ್ ಗಳಿಸಿದ್ದು, ಕೊಹ್ಲಿ 181 ಎಸೆತಗಳಲ್ಲಿ 82 ರನ್ ಗಳಿಸಿದ್ದಾರೆ. 69 ಓವರ್ ಗಳಲ್ಲಿ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ.

    6 ವಿಕೆಟ್ ಕಳೆದುಕೊಂಡು 277 ರನ್ ಗಳಿಸಿದ್ದ ಆಸ್ಟ್ರೇಲಿಯಾ ಇಂದು ಕೊನೆಯ 4 ವಿಕೆಟ್ ಗಳ ಸಹಾಯದಿಂದ 49 ರನ್‍ಗಳಿಸಿ ಸರ್ವಪತನ ಕಂಡಿತು. ಆಸೀಸ್‍ಗೆ ನಾಯಕ ಪೈನ್ ಹಾಗೂ ಪ್ಯಾಟ್ ಕಮ್ಮಿನ್ಸ್ ಉತ್ತರ ಆರಂಭ ನೀಡಿ 7ನೇ ವಿಕೆಟ್ ಗೆ 59 ರನ್‍ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ದಾಳಿಗಿಳಿದ ಉಮೇಶ್ ಯಾದವ್ 19 ರನ್ ಗಳಿಸಿದ್ದ ಕಮ್ಮಿನ್ಸ್ ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಬುಮ್ರಾ 38 ಗಳಿಸಿದ್ದ ಪೈನ್ ವಿಕೆಟ್ ಪಡೆದು ಆಸೀಸ್ ತಂಡಕ್ಕೆ ಆಘಾತ ನೀಡಿದರು. ಬಳಿಕ ಬಂದ ಸ್ಟಾರ್ಕ್ 6 ರನ್ ಹಾಗೂ ಜೋಶ್ ಹೇಜಲ್‍ವುಡ್ ಶೂನ್ಯ ಸುತ್ತುವ ಮೂಲಕ ಬಂದಷ್ಟೇ ವೇಗದಲ್ಲಿ ಹಿಂದಿರುಗಿದರು. ಇದರೊಂದಿಗೆ ಆಸೀಸ್ 326 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.

    ಭಾರತದ ಪರ ಇಶಾಂತ್ ಶರ್ಮಾ 4 ವಿಕೆಟ್ ಪಡೆದು ಮಿಂಚಿದರೆ ಬುಮ್ರಾ, ಉಮೇಶ್ ಯಾದವ್ ಹಾಗೂ ಹನುಮ ವಿಹಾರಿ ತಲಾ ಎರಡು ವಿಕೆಟ್ ಪಡೆದರು. ಇದಕ್ಕೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸೀಸ್ ಹ್ಯಾರಿಸ್ 70 ರನ್, ಆ್ಯರೋನ್ ಫಿಂಚ್ 50 ಹಾಗೂ ಟ್ರಾವಿಸ್ ಹೆಡ್‍ರ ಅರ್ಧ ಶತಕದ ನೆರವಿನಿಂದ ಮೊದಲ ದಿನ 90 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತ್ತು.

    ಪಂದ್ಯದ ಮೊದಲ ಅವಧಿಯ 21.3 ಓವರ್ ಗಳಿಗೆ 55 ಹರಿದು ಬಂತು. ಆದರೆ ಮೊದಲ 14.5 ಓವರ್ ಗಳಲ್ಲಿ ವಿಕೆಟ್ ಲಭಿಸದೆ 33 ರನ್ ಗಳಿಸಿದರೆ, ಅಂತಿಮ 6.4 ಓವರ್ ಗಳಲ್ಲಿ 22 ರನ್ ಗಳಿಗೆ 5 ವಿಕೆಟ್ ಉರುಳಿತು. ಉಳಿದಂತೆ ಕೊಹ್ಲಿ ಈ ಸರಣಿಯಲ್ಲಿ ಇನ್ನು 274 ರನ್ ಗಳಿಸಿದರೆ ಶ್ರೀಲಂಕಾ ಆಟಗಾರ ಕುಮಾರ ಸಂಗಕ್ಕರ ದಾಖಲೆಯನ್ನು ಮುರಿಯಲಿದ್ದಾರೆ. ಸಂಗಕ್ಕರ ವರ್ಷವೊಂದರಲ್ಲಿ 2,868 ರನ್ ಸಿಡಿಸಿ ಅತ್ಯಧಿಕ ರನ್ ಸಿಡಿಸಿದ ದಾಖಲೆ ಹೊಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರೋಚಕ ಹಂತದಲ್ಲಿ ಪ್ರಥಮ ಟೆಸ್ಟ್ – ಟೀಂ ಇಂಡಿಯಾ ಗೆಲುವಿಗೆ 6 ವಿಕೆಟ್ ಮಾತ್ರ ಬಾಕಿ

    ರೋಚಕ ಹಂತದಲ್ಲಿ ಪ್ರಥಮ ಟೆಸ್ಟ್ – ಟೀಂ ಇಂಡಿಯಾ ಗೆಲುವಿಗೆ 6 ವಿಕೆಟ್ ಮಾತ್ರ ಬಾಕಿ

    ಅಡಿಲೇಡ್: ಓವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೇಲೆ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದ್ದು, ಗೆಲುವಿಗೆ ಕೇವಲ 6 ವಿಕೆಟ್ ಮಾತ್ರ ಬಾಕಿ ಇದೆ.

    4ನೇ ದಿನದಾಟದ ವೇಳೆ ಗೆಲ್ಲಲು 323 ಗೆಲುವಿನ ಗುರಿ ಪಡೆದ ಆಸ್ಟ್ರೇಲಿಯಾ 4ನೇ ದಿನದಾಟದ ಅಂತ್ಯಕ್ಕೆ 49 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದೆ. ಆಸೀಸ್ ತಂಡಕ್ಕೆ ಗೆಲ್ಲಲು 219 ರನ್ ಗಳ ಅವಶ್ಯಕತೆ ಇದ್ದು, ಟೀಂ ಇಂಡಿಯಾ ಸರಣಿಯಲ್ಲಿ ಮೊದಲ ಗೆಲುವಿನ ವಿಶ್ವಾಸದಲ್ಲಿದೆ.

    ಟೀಂ ಇಂಡಿಯಾ ನೀಡಿದ ಸವಾಲಿನ ಮೊತ್ತ ಬೆನ್ನಟ್ಟಿದ ಆಸೀಸ್‍ಗೆ ಉತ್ತಮ ಆರಂಭ ಪಡೆಯಲಿಲ್ಲ. ಆಸೀಸ್ ಆರಂಭಿಕ ಆಟಗಾರ ಫಿಂಚ್ 11 ರನ್ ಗಳಿಸಿದ್ದ ವೇಳೆ ಟೀಂ ಇಂಡಿಯಾ ಸ್ಪಿನ್ನರ್ ಅಶ್ವಿನ್‍ಗೆ ಬಲಿ ಪಡೆದರು. ಇತ್ತ ಮಾರ್ಕಸ್ ಹ್ಯಾರಿಸ್ ಕೂಡ 26 ರನ್ ಗಳಿಸಿ ಶಮಿಗೆ ವಿಕೆಟ್ ಒಪ್ಪಸಿ ಪೆವಿಲಿಯನ್ ಸೇರಿದರು. ಇದರೊಂದಿಗೆ ಆಸೀಸ್ 44 ರನ್ ಗಳಿಗೆ ಆರಂಭಿಕ 2 ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ಉಸ್ಮಾನ್ ಖವಾಜಾ ಆರ್ ಅಶ್ವಿನ್ ಬೌಲಿಂಗ್ ದಾಳಿಯಲ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾಗಿ 8 ರನ್ ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಆಸೀಸ್ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದ ಪೀಟರ್ ಹ್ಯಾಂಡ್ಸ್ ಕಾಂಬ್ (14 ರನ್) ವಿಕೆಟ್ ಪಡೆಯಲು ಶಮಿ ಯಶಸ್ವಿಯಾದರು.

    ತಂಡದ ಪ್ರಮುಖ 4 ವಿಕೆಟ್ ಉರುಳುತ್ತಿದಂತೆ ರಕ್ಷಣಾತ್ಮಕ ಆಟಕ್ಕೆ ಮುಂದಾದ ಮಾರ್ಷ್ 92 ಎಸೆಗಳಲ್ಲಿ 31 ರನ್ ಹಾಗೂ ಹೆಡ್ 37 ಎಸೆತಗಳಲ್ಲಿ 11 ರನ್ ಗಳಿಸಿ ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 4ನೇ ದಿನದಾಟದ ಅಂತ್ಯಕ್ಕೆ ಆಸೀಸ್ 49 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿತು. ಇನ್ನು ಒಂದು ದಿನದ ಆಟ ಮಾತ್ರ ಬಾಕಿ ಇದ್ದು, ಆಸೀಸ್ ಗೆಲುವಿಗೆ 219 ರನ್, ಟೀಂ ಇಂಡಿಯಾ ಗೆಲುವಿಗೆ 6 ವಿಕೆಟ್ ಬಾಕಿ ಇದೆ. ಉಳಿದಂತೆ ಟೀಂ ಇಂಡಿಯಾ ಪರ ಶಮಿ, ಆರ್ ಅಶ್ವಿನ್ ತಲಾ ಎರಡು ಪಡೆದು ಮಿಂಚಿದರು.

    ಇದಕ್ಕೂ ಮುನ್ನ 4ನೇ ದಿನದಾಟ ಆರಭಿಸಿದ ಟೀಂ ಇಂಡಿಯಾಗೆ ಪೂಜಾರ 71 ರನ್, ರಹಾನೆ 70 ರನ್ ಸಿಡಿಸಿ ಔಟಾದರು. ಜೋಡಿ 4ನೇ ವಿಕೆಟ್‍ಗೆ ಮಹತ್ವದ 87 ರನ್ ಕಾಣಿಕೆ ನೀಡಿತು. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿ ಮಿಂಚಿದ್ದ ಪೂಜಾರ ಅರ್ಧ ಶತಕ ಸಿಡಿಸಿದರೆ, ಇತ್ತ ಟೀಂ ಇಂಡಿಯಾ ಉಪನಾಯಕ ರಹಾನೆ ಕೂಡ ಅರ್ಧಶತಕ ಗಳಿಸಿದರು. ಈ ಹಂತದಲ್ಲಿ ಕೊಹ್ಲಿ, ಪೂಜಾರ ಜೋಡಿಯನ್ನು ಬೇರ್ಪಡಿಸಿದ್ದ ಆಸೀಸ್‍ಗೆ ಬಿಗ್ ರಿಲೀಫ್ ನೀಡಿದರು.

    ರೋಹಿತ್ ವಿಫಲ: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕಮ್ ಬ್ಯಾಕ್ ಮಾಡಿ ಮೊದಲ ಇನ್ನಿಂಗ್ಸ್ ನಲ್ಲಿ 37 ರನ್ ಸಿಡಿಸಿದ್ದ ರೋಹಿತ್ ಶರ್ಮಾ 2ನೇ ಇನ್ನಿಂಗ್ಸ್ ಕೇವಲ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಬಂದ ರಿಷಬ್ ಪಂತ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರಿಸಿ ಕೇವಲ 16 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 28 ರನ್ ಗಳಿಸಿ ನಿರ್ಗಮಿಸಿದರು.

    ಈ ನಡುವೆ ಉತ್ತಮವಾಗಿ ಆಡುತ್ತಿದ್ದ ರಹಾನೆ ರಿವರ್ಸ್ ಸ್ವಿಪ್ ಮಾಡಲು ಯತ್ನಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಟೀಂ ಇಂಡಿಯಾ ಬಾಲಂಗೊಚಿಗಳಾದ ಆರ್ ಅಶ್ವಿನ್ 5 ರನ್, ಇಶಾಂತ್ ಶರ್ಮಾ ಮತ್ತು ಶಮಿ ಬಂದಷ್ಟೇ ವೇಗದಲ್ಲಿ ನಿರ್ಗಮಿಸಿದರು. ಅಂತಿಮವಾಗಿ ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ನಲ್ಲಿ 106.5 ಓವರ್ ಗಳಲ್ಲಿ 307 ರನ್ ಗಳಿಗೆ ಅಲೌಟ್ ಆಯ್ತು. ಆಸೀಸ್ ಪರ ಲಯನ್ ಮಿಂಚಿನ ಬೌಲಿಂಗ್ ದಾಳಿ ನಡೆಸಿ 6 ವಿಕೆಟ್ ಪಡೆದರೆ, ಸ್ಟಾರ್ಕ್ 3 ಹಾಗೂ ಹೆಜಲ್‍ವುಡ್ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜಸ್ಥಾನ ರಾಯಲ್ಸ್ ನಾಯಕತ್ವ ಸ್ಥಾನದಿಂದ ಸ್ಮಿತ್ ಔಟ್ – ರಹಾನೆಗೆ ಪಟ್ಟ

    ರಾಜಸ್ಥಾನ ರಾಯಲ್ಸ್ ನಾಯಕತ್ವ ಸ್ಥಾನದಿಂದ ಸ್ಮಿತ್ ಔಟ್ – ರಹಾನೆಗೆ ಪಟ್ಟ

    ಮುಂಬೈ: ಚೆಂಡು ವಿರೂಪಗೊಳಿಸುವ ಪ್ರಕರಣದಲ್ಲಿ ಸಿಲುಕಿ ಆಸೀಸ್ ತಂಡದ ನಾಯಕತ್ವ ಸ್ಥಾನ ಕಳೆದುಕೊಂಡಿದ್ದ ಸ್ಮಿತ್, ಇಂಡಿಯನ್ ಪ್ರೀಮಿಯರ್ ಲೀಗ್‍ನ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವ ಸ್ಥಾನವನ್ನು ಕಳೆದುಕೊಂಡಿದ್ದಾರೆ.

    ಈ ಕುರಿತು ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕರು ಸ್ಪಷ್ಟನೆ ನೀಡಿದ್ದು, ಟೀಂ ಇಂಡಿಯಾ ಆಟಗಾರರ ರಹಾನೆ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಿರುವುದಾಗಿ ತಿಳಿಸಿದ್ದಾರೆ.

    ಕೇಪ್‍ಟೌನ್‍ನಲ್ಲಿ ನಡೆದಿರುವ ಘಟನೆ ಕ್ರಿಕೆಟ್ ಪ್ರಪಂಚವನ್ನು ತಲ್ಲಣಗೊಳಿಸಿದೆ. ನಾವು ಬಿಸಿಸಿಐ, ಐಸಿಸಿ ಹಾಗೂ ಸ್ಮಿತ್ ರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಎಂದು ರಾಜಸ್ಥಾನ ರಾಯಲ್ಸ್ ತಂಡದ ಅಧಿಕಾರಿ ಝಬಿನ್ ಭರೂಚಾ ಮಾಹಿತಿ ನೀಡಿದ್ದಾರೆ.

    ತಂಡದ ಹಿತಾದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಐಪಿಎಲ್ ಟೂರ್ನಿಯಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲು ತಯಾರಿ ನಡೆಸಲು ಇದು ಸಹಕಾರಿಯಾಗಿರುತ್ತದೆ. ಅಲ್ಲದೇ ನಮ್ಮ ತಂಡ ಕ್ರಿಕೆಟ್ ಮೌಲ್ಯ ಹಾಗೂ ಗೌರವವನ್ನು ಉಳಿಸಲು ಪ್ರಯತ್ನಿಸುತ್ತದೆ. ರಹಾನೆ ರಾಯಲ್ಸ್ ಕುಟುಂಬ ಸದಸ್ಯರಾಗಿದ್ದು, ತಂಡದ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಅರಿತುಕೊಂಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಚೆಂಡು ವಿರೂಪಗೊಳಿಸಿದ ಪ್ರಕರಣ: ಐಸಿಸಿ ನೀತಿ ವಿರುದ್ಧ ಹರ್ಭಜನ್ ಕಿಡಿ

    ಐಪಿಎಲ್ ನಲ್ಲಿ ಫಿಕ್ಸಿಂಗ್ ಆರೋಪದಡಿ 2 ವರ್ಷ ನಿಷೇಧಕ್ಕೆ ಒಳಗಾಗಿದ್ದ ರಾಜಸ್ಥಾನ ರಾಯಲ್ಸ್ ತಂಡ 11ನೇ ಅವೃತ್ತಿಯ ಐಪಿಎಲ್‍ಗೆ ಕಮ್ ಬ್ಯಾಕ್ ಮಾಡಿತ್ತು. ಇನ್ನು 2008 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಅಜಿಂಕ್ಯಾ ರಹಾನೆ, 2011 ರಿಂದ 2015 ರವರೆಗೆ ರಾಯಲ್ಸ್ ತಂಡದ ಪರ ಆಡಿದ್ದರು. ಇದನ್ನೂ ಓದಿ: ಚೆಂಡನ್ನು ವಿರೂಪಗೊಳಿಸಿದ್ದು ಯಾಕೆ? ಸ್ಪಿತ್ ಹೇಳಿದ್ದು ಏನು?