Tag: ರವೀಂದರ್‌

  • ಮಗನನ್ನು ಪರಿಚಯಿಸಿದ ಮಿಸ್ ಮ್ಯಾಚ್ ನಟಿ ಮಹಾಲಕ್ಷ್ಮಿ

    ಮಗನನ್ನು ಪರಿಚಯಿಸಿದ ಮಿಸ್ ಮ್ಯಾಚ್ ನಟಿ ಮಹಾಲಕ್ಷ್ಮಿ

    ಡೂತಿ ನಿರ್ಮಾಪಕ ರವೀಂದರ್ ಅವರನ್ನು ಮದುವೆ ಆಗುವ ಮೂಲಕ ಸಖತ್ ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮೀ (Mahalakshmi), ಇದೀಗ ಮಗನ (son) ಕಾರಣದಿಂದಾಗಿ ಮತ್ತೆ ಟ್ರೋಲ್ ಆಗಿದ್ದಾರೆ. ಮೊದಲ ಗಂಡನೊಂದಿಗೆ ಇದ್ದಾಗ ಆಗಿದ್ದ ಮಗನನ್ನು ಸೋಷಿಯಲ್ ಮೀಡಿಯಾ ಮೂಲಕ ಪರಿಚಯಿಸಿದ್ದಾರೆ ಮಹಾಲಕ್ಷ್ಮಿ. ಮಗನನ್ನು ನೋಡಿದ ನೆಟ್ಟಿಗರು ಇಷ್ಟು ದೊಡ್ಡ ಮಗನಾ ನಿಮಗೆ ಎಂದು ಉದ್ಘಾರ ತೆಗೆದಿದ್ದಾರೆ.

    ಪ್ರೀತಿ ಕುರುಡು ಅಂತಾರೆ. ನಿರ್ಮಾಪಕ ರವೀಂದರ್ (Ravinder) ಮತ್ತು ನಟಿ ಮಹಾಲಕ್ಷ್ಮೀ ಬದುಕಿನಲ್ಲಿ ಅಕ್ಷರಶಃ ಅದು ನಿಜವಾಗಿದೆ. ವಯಸ್ಸಿನ ಅಂತರ, ಬ್ಯೂಟಿ, ತೂಕ ಎಲ್ಲವನ್ನೂ ಮೀರಿ ಇಬ್ಬರ ಬದುಕಿನಲ್ಲಿ ಪ್ರೇಮ್ ಕಹಾನಿ ಗೆದ್ದಿದೆ. ಹಾಗಾಗಿಯೇ ಇಬ್ಬರೂ ಸಪ್ತಪದಿ ತುಳಿದು ಸತಿಪತಿಯಾಗಿದ್ದಾರೆ. ಕೆಲವರಂತೂ ಈ ಮದುವೆಯ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಇದೊಂದು ಮಿಸ್ ಮ್ಯಾಚ್ (miss match) ಮದುವೆ ಎಂದು ಗೇಲಿ ಮಾಡಿದ್ದರು. ಈ ಬಗ್ಗೆ ಮಹಾಲಕ್ಷ್ಮಿಯಾಗಲಿ, ರವೀಂದರ್ ಆಗಲಿ ತಲೆ ಕೆಡಿಸಿಕೊಂಡಿಲ್ಲ. ಇದನ್ನೂ ಓದಿ:ತಮಿಳಿನ ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ಮುಗಿಸಿದ ಶಿವಣ್ಣ

    ರತಿಯಂತಿರುವ ಮಹಾಲಕ್ಷ್ಮೀ, ಸಮ ತೂಗುವ ರವೀಂದರ್ ಜೊತೆ ಮದುವೆ ಆಗಿದ್ದು ಹೇಗೆ? ಇಬ್ಬರೂ ಒಪ್ಪಿಗೆ ಸೂಚಿಸಿದ್ದು ಯಾವಾಗ? ಯಾರು ಮೊದಲು ಪ್ರಪೋಸ್ ಮಾಡಿದ್ದು ಹೀಗೆ ಹಲವಾರು ಪ್ರಶ್ನೆಗಳು ಜನರಲ್ಲಿ ಮೂಡಿದ್ದವು. ಈ ಎಲ್ಲದಕ್ಕೂ ಮಹಾಲಕ್ಷ್ಮಿ ಉತ್ತರ ಕೊಟ್ಟಿದ್ದರು. ನನ್ನ ಹೃದಯ ಕದ್ದಿದ್ದೀಯಾ, ಜೋಪಾನವಾಗಿಟ್ಟುಕೊ ಎಂದು ಹೇಳುವ ಮೂಲಕ ಮೊದಲು ಪ್ರಪೋಸ್ ಮಾಡಿದ್ದು ರವೀಂದರ್ ಎನ್ನುವುದನ್ನು ಗುಟ್ಟು ರಟ್ಟು ಮಾಡಿದ್ದರು.

    ಈ ಜೋಡಿಯ ಲವ್ ಕಹಾನಿ ಶುರುವಾಗಿದ್ದೇ ಒಂದು ಇಂಟ್ರಸ್ಟಿಂಗ್ ಸ್ಟೋರಿ. ಮಹಾಲಕ್ಷ್ಮಿ ಕೇವಲ ನಿರೂಪಕಿ ಮಾತ್ರವಲ್ಲ, ಕಿರುತೆರೆ ನಟಿ ಕೂಡ. ರವೀಂದರ್ ಕೂಡ ಕಿರುತೆರೆಯ ಲೋಕದಲ್ಲಿ ಅನೇಕ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ರವೀಂದರ್ ನಿರ್ಮಾಣ ಮಾಡಿದ ಧಾರಾವಾಹಿಯಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಮೊದಲ ಪ್ರೇಮ ಶುರುವಾಗಿದ್ದೇ ಈ ಧಾರಾವಾಹಿಯ ಮೂಲಕ. ಮೊದಲು ನಟಿಯಾಗಿ ಪರಿಚಯ. ಆಮೇಲೆ ಸ್ನೇಹ. ಸ್ನೇಹ ವಿಶ್ವಾಸವಾಗಿ, ಅದು ಸಂದೇಶವಾಗಿ ಹರಿದು ಬಂದು ಇಬ್ಬರನ್ನೂ ಒಂದಾಗಿಸಿದೆ.

     

    ಅದೊಂದು ರಾತ್ರಿ ಮಹಾಲಕ್ಷ್ಮಿ ಮೊಬೈಲ್ ಗೆ ಬಂದ ಸಂದೇಶ ಸ್ವತಃ ಅವರನ್ನೇ ಅಚ್ಚರಿಗೆ ನೂಕಿದೆ. ಆ ಕಡೆಯಿಂದ ಸಂದೇಶ ಕಳುಹಿಸಿದ್ದು ರವೀಂದರ್. ನೀವು ನನಗೆ ಇಷ್ಟವಾಗಿದ್ದೀರಿ. ಮದುವೆ ಯಾಕೆ ಆಗಬಾರದು ಎನ್ನುವ ರವೀಂದರ್ ಕೋರಿಕೆಯನ್ನು ಕೆಲವು ದಿನಗಳ ನಂತರ ಮಹಾಲಕ್ಷ್ಮಿ ಒಪ್ಪಿಕೊಂಡಿದ್ದಾರೆ. ಅಲ್ಲಿಂದ ಶುರುವಾದ ಪ್ರೇಮಕಾವ್ಯ ಮದುವೆಯಲ್ಲಿ ಅಂತ್ಯಗೊಂಡಿದೆ.

  • ಬಿಗ್ ಬಾಸ್ ಮನೆಗೆ ಮಹಾಲಕ್ಷ್ಮಿ ರವೀಂದರ್ ಜೋಡಿ ಎಂಟ್ರಿ: ಕಾಯ್ತೀವಿ ಎಂದ ಫ್ಯಾನ್ಸ್

    ಬಿಗ್ ಬಾಸ್ ಮನೆಗೆ ಮಹಾಲಕ್ಷ್ಮಿ ರವೀಂದರ್ ಜೋಡಿ ಎಂಟ್ರಿ: ಕಾಯ್ತೀವಿ ಎಂದ ಫ್ಯಾನ್ಸ್

    ಮಿಸ್ ಮ್ಯಾಚ್ (Miss Match) ಜೋಡಿ ಎಂದೇ ಟ್ರೋಲ್ ಆದ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಅಡ್ಡಾದಿಂದ ಹೊಸ ಸುದ್ದಿಯೊಂದು ಬಂದಿದೆ. ಅಕ್ಟೋಬರ್ ನಿಂದ ಶುರುವಾಗಲಿರುವ ತಮಿಳಿನ ಬಿಗ್ ಬಾಸ್ ಮನೆಗೆ (Bigg Boss) ಈ ಜೋಡಿ ಎಂಟ್ರಿ ಕೊಡಲಿದೆ ಎನ್ನುವುದು ತಾಜಾ ವರ್ತಮಾನ. ಈಗಾಗಲೇ ದಸರಾ ಹಬ್ಬಕ್ಕಾಗಿ ವಾಹಿನಿಯೊಂದು ವಿಶೇಷ ಸಂದರ್ಶನ ಮಾಡಿದ್ದು, ಅಲ್ಲಿ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

    ಮಹಾಲಕ್ಷ್ಮಿ (Mahalakshmi) ಮತ್ತು ರವೀಂದರ್  (Ravinder) ದಂಪತಿ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎನ್ನುವ ಸುದ್ದಿಯೇ ತಮಿಳು ಚಿತ್ರೋದ್ಯಮದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ರವೀಂದರ್ ಈ ಕುರಿತು ರಿಯಾಕ್ಟ್ ಮಾಡಿರುವುದರಿಂದ ಕುತೂಹಲ ಮೂಡಿದೆ. ಮಹಾಲಕ್ಷ್ಮಿ ಮತ್ತು ರವೀಂದರ್ ಬಿಗ್ ಬಾಸ್ ಮನೆಯಲ್ಲಿ ಹೇಗೆ ಇರುತ್ತಾರೆ ಎನ್ನುವ ಕುರಿತು ಈಗಿನಿಂದಲೇ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ನಟಿ ಸಮಂತಾ ಆರೋಗ್ಯದ ಬಗ್ಗೆ ಮತ್ತೆ ಆತಂಕ: ‘ಶಾಕುಂತಲಾ’ ಸಿನಿಮಾ ರಿಲೀಸ್ ಮುಂದಕ್ಕೆ

    ಮದುವೆ ನಂತರ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿರುವ ಮಹಾಲಕ್ಷ್ಮಿ ಮತ್ತು ರವೀಂದರ್, ದೇವರ ದರ್ಶನದ ನಂತರ ಅಮೆರಿಕಾಗೆ ಹಾರಿದ್ದರು. ಅಮೆರಿಕಾದಲ್ಲಿ ಹನಿಮೂನ್ (Honeymoon) ಮುಗಿಸಿಕೊಂಡು ಮತ್ತೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಮಹಾಲಕ್ಷ್ಮಿ. ಪತ್ನಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರೆ, ಅವರಿಗೆ ಊಟ ತಗೆದುಕೊಂಡು ಹೋಗುವುದು ನನ್ನ ಕೆಲಸವಾಗಿದೆ ಎಂದು ರವೀಂದರ್ ಮೊನ್ನೆಯಷ್ಟೇ ಬರೆದುಕೊಂಡಿದ್ದರು.

    ಮಹಾಲಕ್ಷ್ಮಿ ಮತ್ತು ರವೀಂದರ್ ಮದುವೆ ಆಗುತ್ತಿದ್ದಂತೆಯೇ ಈ ಜೋಡಿ ಸಖತ್ ಟ್ರೆಂಡ್ ಆಗಿತ್ತು. ರವೀಂದರ್ ತೂಕವನ್ನಿಟ್ಟುಕೊಂಡು ಅನೇಕರು ಮಹಾಲಕ್ಷ್ಮಿಗೆ ಕಾಲೆಳೆದರು. ದುಡ್ಡಿಗಾಗಿ ಅವರು ಮದುವೆಯಾಗಿದ್ದಾರೆ ಎಂದು ಮಹಾಲಕ್ಷ್ಮಿ ಕುರಿತು ಕಾಮೆಂಟ್ ಮಾಡಿದ್ದರು. ಯಾರು ಏನೇ ಹೇಳಿದರೂ, ಈ ಜೋಡಿ ಮಾತ್ರ ನೆಮ್ಮದಿಯಿಂದ ದಿನಗಳನ್ನು ದೂಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಲೈಫ್ ಇಸ್ ಬ್ಯುಟಿಫುಲ್’ ಹನಿಮೂನ್ ಮೂಡ್ ನಲ್ಲಿ ಮಹಾಲಕ್ಷ್ಮಿ ಮತ್ತು ರವೀಂದರ್

    ‘ಲೈಫ್ ಇಸ್ ಬ್ಯುಟಿಫುಲ್’ ಹನಿಮೂನ್ ಮೂಡ್ ನಲ್ಲಿ ಮಹಾಲಕ್ಷ್ಮಿ ಮತ್ತು ರವೀಂದರ್

    ಹಾಲಕ್ಷ್ಮಿ ಮತ್ತು ರವೀಂದರ್ (Ravinder) ಜೋಡಿ ಮೇಲೆ ಸಾಕಷ್ಟು ಜೋಕ್ ಗಳು ಹರಿದಾಡುತ್ತಿದ್ದರೂ, ಗಾಸಿಪ್ ಗಳು ಸೃಷ್ಟಿ ಆಗುತ್ತಿದ್ದರೂ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ಹನಿಮೂನ್ ಎಂಜಾಯ್ ಮಾಡುತ್ತಿದೆ ಈ ಜೋಡಿ. ಸದ್ಯ ಈ ದಂಪತಿ ಮಹಾಬಲಿಪುರಂ ಇಂಟರ್ ಕಾಂಟಿನೆಂಟಲ್ ರೆಸಾರ್ಟ್ ನಲ್ಲಿ ತಂಗಿದ್ದು, ಅಲ್ಲಿಂದಲೇ ಅಭಿಮಾನಿಗಳು ಸಂದೇಶ ರವಾನಿಸಿದ್ದಾರೆ. ಮಹಾಲಕ್ಷ್ಮಿ ‘ಲೈಫ್ ಇಸ್ ಬ್ಯೂಟಿಫುಲ್’ (Life is Beautiful) ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರೆ, ರವೀಂದರ್ ‘ಲೈಫ್‍ ಗೆ ಪ್ರೀತಿ ಬೇಕು, ಈ ಪ್ರೀತಿಗೆ ಮಹಾಲಕ್ಷ್ಮಿ ಇರಬೇಕು’ ಎಂದು ಕಾವ್ಯಾತ್ಮಕವಾಗಿ ಭಾವನೆ ಹೊರ ಹಾಕಿದ್ದಾರೆ.

    ಮಹಾಲಕ್ಷ್ಮಿ (Mahalakshmi) ಮತ್ತು ರವೀಂದರ್ ಜೋಡಿ ಹನಿಮೂನ್ (Honeymoon) ಅನ್ನು ಎಂಜಾಯ್ ಮಾಡುತ್ತಿದ್ದರೆ ಈ ನಡುವೆ ಮತ್ತೊಂದು ಸ್ಪೂಟಕ ಸುದ್ದಿ ಹೊರ ಬಂದಿದ್ದು, ಮಹಾಲಕ್ಷ್ಮಿಗೆ ಈ ಮೊದಲೇ ಮದುವೆ ಆಗಿತ್ತು. ಎರಡು ಮಕ್ಕಳು ಕೂಡ ಇವೆ. ಮೊದಲ ಗಂಡನಿಂದ ಡಿವೋರ್ಸ್ ಪಡೆದ ನಂತರ ತಮ್ಮೊಂದಿಗೆ ನಟಿಸುತ್ತಿದ್ದ ಸಹ ನಟ ಈಶ್ವರ್ ಎನ್ನುವವರ ಜತೆ ಅಫೇರ್ ಇಟ್ಟುಕೊಂಡಿದ್ದರು ಎಂದು ಸ್ವತಃ ಈಶ್ವರ್ ಅವರ ಪತ್ನಿಯೇ ಆರೋಪ ಮಾಡಿದ್ದಾರೆ. ನನ್ನ ಗಂಡನ ಜೊತೆ ಮಹಾಲಕ್ಷ್ಮಿ ದಿನ ರಾತ್ರಿಯೂ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಳು. ಅದಕ್ಕೆ ಬೇಕಾದ ಸಾಕ್ಷಿ ನನ್ನ ಬಳಿ ಇದೆ ಎಂದು ಈಶ್ವರ್ ಪತ್ನಿ ಜಯಶ್ರೀ ಆರೋಪ ಮಾಡಿದ್ದರು. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್

    ರವೀಂದರ್ ಚಂದ್ರಶೇಖರನ್ ಜೊತೆ ಮಹಾಲಕ್ಷ್ಮಿ ಮದುವೆ (Marriage) ಆಗುತ್ತಿದ್ದಂತೆಯೇ ಈ ವಿಷಯ ತಮಿಳು ಮಾಧ್ಯಮದಲ್ಲಿ ಮತ್ತೆ ಪ್ರಮುಖ ಸುದ್ದಿಯಾಗಿದೆ. ಮಹಾಲಕ್ಷ್ಮಿ ಮತ್ತು ಈಶ್ವರ್ ಲವ್ವಿ ಡವ್ವಿ ವಿಚಾರ ರವೀಂದರ್ ಅವರಿಗೂ ಗೊತ್ತಿತ್ತು ಎಂದು ವರದಿಯಾಗಿದೆ. ಎಲ್ಲ ಗೊತ್ತಿದ್ದರೂ ಮಹಾಲಕ್ಷ್ಮಿಯನ್ನು ರವೀಂದರ್ ಮದುವೆ ಆಗಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗುತ್ತಿದೆ. ಮದುವೆ ಅವರ ಸ್ವಂತ ವಿಚಾರ. ಅಷ್ಟಕ್ಕೂ ಇಬ್ಬರೂ ಕಾನೂನು ಬದ್ಧವಾಗಿಯೇ ಮದುವೆಯಾಗಿದ್ದಾರೆ. ಆದರೂ, ಜಯಶ್ರೀ ಆರೋಪ ಇದೀಗ ಮುನ್ನೆಲೆಗೆ ಬಂದಿದೆ.

    ರವೀಂದರ್ ಮತ್ತು ಮಹಾಲಕ್ಷ್ಮಿ ಮದುವೆ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದರೂ, ಈ ಜೋಡಿ ಇದೀಗ ಹನಿಮೂನ್ ಗೆ ಹೊಗಲು ಸಿದ್ಧತೆ ಮಾಡಿಕೊಂಡಿದೆ. ಪರಸ್ಪರ ಇಬ್ಬರೂ ಗೌರವದ ಮಾತುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಹೊಸ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿರ್ಮಾಪಕ ರವೀಂದರ್‌ ಕೈ ಹಿಡಿದ ನಟಿ, ಖ್ಯಾತ ನಿರೂಪಕಿ ಮಹಾಲಕ್ಷ್ಮೀ

    ನಿರ್ಮಾಪಕ ರವೀಂದರ್‌ ಕೈ ಹಿಡಿದ ನಟಿ, ಖ್ಯಾತ ನಿರೂಪಕಿ ಮಹಾಲಕ್ಷ್ಮೀ

    ಮಿಳು ಚಿತ್ರರಂಗದಲ್ಲಿ ನಟಿ, ನಿರೂಪಕಿಯಾಗಿ ಗಮನ ಸೆಳೆದಿದ್ದ ಮಹಾಲಕ್ಷ್ಮೀ ಮತ್ತು ಖ್ಯಾತ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌ ಇಬ್ಬರೂ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ತಿರುಪತಿ ಸನ್ನಿಧಿಯಲ್ಲಿ ಇಬ್ಬರ ವಿವಾಹ ಮಹೋತ್ಸವ ಜರುಗಿದ್ದು, ಮದುವೆ ಚಿತ್ರಗಳು ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡ್ತಿವೆ. ಆದರೆ ಇವರಿಬ್ಬರಿಗೂ ಇದು 2ನೇ ಮದುವೆ ಎಂಬುದು ವಿಶೇಷ. ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿ: ಆರ್ಯವರ್ಧನ್ ಅಲ್ಲ, ಅವನ ಸಹೋದರನ ಪಾತ್ರದಲ್ಲಿ ಹರೀಶ್ ರಾಜ್

    ನಿರೂಪಕಿಯಾಗಿ ಮಾತ್ರವಲ್ಲದೆ, ನಟಿಯಾಗಿಯೂ ಗಮನ ಸೆಳೆದಿದ್ದ ಮಹಾಲಕ್ಷ್ಮೀ, ರವೀಂದರ್‌ ಚಂದ್ರಶೇಖರ್ ನಿರ್ಮಿಸಿದ್ದ ‘ವಿಡಿಯುಮ್‌ ವಾರೈ ಕಾಥಿರು’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ವಿದಾರ್ಥ್‌ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿದ್ದರು. ಧಾರಾವಾಹಿ ಕ್ಷೇತ್ರದಲ್ಲೂ ಮಹಾಲಕ್ಷ್ಮೀ ಹೆಸರು ಮಾಡಿದ್ದಾರೆ. ವಾಣಿ ರಾಣಿ, ಆಫೀಸ್‌, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಮಹಾಲಕ್ಷ್ಮೀ ನಟಿಸಿದ್ದಾರೆ. ಪ್ರಸ್ತುತ ಅವರು ನಟಿಸಿರುವ ಮಹಾರಸಿ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ. ಇದನ್ನೂ ಓದಿ: ‘ಲೈಗರ್’ ಸಿನಿಮಾದಲ್ಲಿ ನಟಿಸಲು 25 ಕೋಟಿ ಸಂಭಾವನೆ ಪಡೆದರೂ, ಸಿನಿಮಾನೇ ಮರೆತಿದ್ದರಾ ಮೈಕ್ ಟೈಸನ್

    ರವೀಂದರ್‌ ಚಂದ್ರಶೇಖರನ್‌ ಅವರು ಕೂಡ `ನಟ್ಪುನ ಎನ್ನಡು ಥೆರಿಯುಮ’, ‘ಮುರುಂಗೈಕೈ ಚಿಪ್ಸ್’, ‘ವಿಡಿಯುಮ್‌ ವಾರೈ ಕಾಥಿರು’ ಮುಂತಾದ ಸಿನಿಮಾಗಳನ್ನು ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

    ಇಬ್ಬರೂ ಸಹ ತಮ್ಮ ವಿವಾಹಮಹೋತ್ಸವದ ಫೋಟೋಗಳನ್ನ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಮಹಾಲಕ್ಷ್ಮೀ ಅವರು, ‘ನಿಮ್ಮನ್ನು ನನ್ನ ಬದುಕಿನಲ್ಲಿ ಪಡೆಯಲು ನಾನು ತುಂಬ ಅದೃಷ್ಟ ಮಾಡಿದ್ದೇನೆ. ಬೆಚ್ಚನೆಯ ಪ್ರೀತಿಯಿಂದ ನೀವು ನನ್ನ ಬದುಕನ್ನು ಪರಿಪೂರ್ಣಗೊಳಿಸಿದ್ದೀರಿ. ಲವ್ ಯೂ ಅಮ್ಮು..’ ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]