Tag: ರವಿ ಹಿಸ್ಟರಿ

  • ಗ್ರಾಮೀಣ ಸೊಗಡಿನ ರಣಹೇಡಿ!

    ಗ್ರಾಮೀಣ ಸೊಗಡಿನ ರಣಹೇಡಿ!

    ಬೆಂಗಳೂರು: ಪಕ್ಕಾ ಕಮರ್ಶಿಯಲ್ ಜಾಡಿನ ಮಾಸ್ ಸಿನಿಮಾಗಳ ಜೊತೆ ಜೊತೆಗೆ ಗ್ರಾಮೀಣ ಸೊಗಡಿನ ಸಿನಿಮಾಗಳೂ ಆಗಾಗ ರೂಪುಗೊಳ್ಳುತ್ತಿರುತ್ತವೆ. ಅದರಲ್ಲಿಯೂ ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುತ್ತಲೇ ಆ ಭಾಗದ ಜನಜೀವನವನ್ನು ಅನಾವರಣಗೊಳಿಸುವ ಸಾಕಷ್ಟು ಸಿನಿಮಾಗಳು ಅಪರೂಪಕ್ಕಾದರೂ ನಿರ್ಮಾಣಗೊಳ್ಳುತ್ತಿರುತ್ತವೆ. ಅದೇ ಸಾಲಿನಲ್ಲಿ ತಯಾರಾಗಿ ಈಗ ಬಿಡುಗಡೆಗೆ ಸಜ್ಜುಗೊಂಡಿರೋ ಚಿತ್ರ ‘ರಣಹೇಡಿ’. ಒಂದಷ್ಟು ಕಾಲದಿಂದ ನಾನಾ ಬಗೆಯಲ್ಲಿ ಸುದ್ದಿ ಕೇಂದ್ರದಲ್ಲಿರುವ, ಪ್ರೇಕ್ಷಕರೆಲ್ಲರ ಕುತೂಹಲಕ್ಕೆ ಕಾರಣವಾಗಿರುವ ಈ ಚಿತ್ರವೀಗ ಇದೇ ನವೆಂಬರ್ 22ರಂದು ಬಿಡುಗಡೆಗೆ ರೆಡಿಯಾಗಿದೆ.

    ಮನು ಕೆ ಶೆಟ್ಟಿಹಳ್ಳಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಪ್ರಯಾಣಿಕರ ಗಮನಕ್ಕೆ ಎಂಬ ಸಿನಿಮಾ ನಿರ್ಮಾಣ ಮಾಡಿದ್ದ ಸುರೇಶ್ ಅವರೇ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಇಲ್ಲಿ ಈ ಹಿಂದೆ ಸಾಕಷ್ಟು ಪಾತ್ರಗಳಲ್ಲಿ ನಟಿಸಿರೋ ಕರ್ಣ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರವಿ ಹಿಸ್ಟರಿ, ಬಡ್ಡಿಮಗನ್ ಲೈಫು ಮುಂತಾದ ಸಿನಿಮಾಗಳಲ್ಲಿ ನಾಯಕಿಯಾಗಿದ್ದ ಐಶ್ವರ್ಯಾ ರಾವ್ ಇಲ್ಲಿ ಕೂಲಿ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆಯಾಗಿ ಅಪ್ಪಟ ಗ್ರಾಮೀಣ ಸೊಗಡಿನೊಂದಿಗೆ ಈ ಚಿತ್ರ ಮೂಡಿ ಬಂದಿದೆ.

    ಹೊಸತನದ ಕಥೆಗಳಿಗೇ ಪ್ರಧಾನವಾಗಿ ಪ್ರಾಶಸ್ತ್ಯ ಕೊಡುವ ಸುರೇಶ್ ಅವರು ಈ ಹಿಂದೆ ಪ್ರಯಾಣಿಕರ ಗಮನಕ್ಕೆ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ನಂತರದಲ್ಲಿ ಗ್ರಾಮ್ಯ ಕಥನಕ್ಕೆ ಮನಸೋತು ಈ ಚಿತ್ರವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದಾರೆ. ಇದು ಕೇವಲ ಗ್ರಾಮೀಣ ಸೊಗಡಿನ ಕಥೆ ಮಾತ್ರವಲ್ಲ. ಇಲ್ಲಿ ರೈತರ ಸಮಸ್ಯೆಗಳತ್ತ ಬೆಳಕು ಹರಿಸಲಾಗಿದೆ. ನಿಜವಾಗಿಯೂ ಬೆಳೆಯನ್ನೇ ನಂಬಿ ಬದುಕೋ ರೈತ ಯಾವ್ಯಾವ ಸಮಸ್ಯೆಗಳನ್ನು ಎದುರಿಸಿ ನಲುಗುತ್ತಾನೆಂಬುದರ ಚಿತ್ರಣವೂ ಇಲ್ಲಿದೆಯಂತೆ. ಇದೆಲ್ಲವನ್ನೂ ಕಮರ್ಶಿಯಲ್ ಹಾದಿಯಲ್ಲಿ ಹೇಳುತ್ತಲೇ ಮಜವಾದ ಹೂರಣವನ್ನು ಬಿಚ್ಚಿಡಲಿರೋ ಈ ಸಿನಿಮಾ ಇನ್ನು ವಾರದೊಪ್ಪತ್ತಿನಲ್ಲಿಯೇ ಚಿತ್ರಮಂದಿರ ತಲುಪಿಕೊಳ್ಳಲಿದೆ.

  • ರವಿ ಹಿಸ್ಟರಿ: ನಾಯಕಿ ಪಲ್ಲವಿ ರಾಜು ಬಗ್ಗೆ ನಿಮಗೆ ಗೊತ್ತಿಲ್ಲದ ಸ್ಟೋರಿ!

    ರವಿ ಹಿಸ್ಟರಿ: ನಾಯಕಿ ಪಲ್ಲವಿ ರಾಜು ಬಗ್ಗೆ ನಿಮಗೆ ಗೊತ್ತಿಲ್ಲದ ಸ್ಟೋರಿ!

    ಮಧುಚಂದ್ರ ನಿರ್ದೇಶನ ಮಾಡಿರುವ ರವಿ ಹಿಸ್ಟರಿ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಬರಿಗಣ್ಣಿಗೆ ಕಾಣಿಸದ ಭೂಗತ ಜಗತ್ತಿನ ಕಥಾ ಹಂದರದ ಸುಳಿವಿನೊಂದಿಗೆ ಹೊಸತೇನೋ ಇದೆ ಅನ್ನೋ ಆಕರ್ಷಣೆಯನ್ನು ಈ ಚಿತ್ರ ಪ್ರೇಕ್ಷಕರಲ್ಲಿ ಹುಟ್ಟಿಸಿದೆ. ಇಂಥಾದ್ದೊಂದು ಹೊಸಾ ಅಲೆಯ ಚಿತ್ರದ ನಾಯಕಿಯಾಗಿ ವಿಭಿನ್ನವಾದೊಂದು ಪಾತ್ರದ ಮೂಲಕ ಪಲ್ಲವಿ ರಾಜು ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

    ಪಲ್ಲವಿ ರಾಜು ಅಂದರೆ ಪ್ರೇಕ್ಷಕರು ಮಂತ್ರಂ ಎಂಬ ಚಿತ್ರದಲ್ಲಿನ ಮನಸೆಳೆಯುವ ನಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಮತ್ತೊಂದಷ್ಟು ಭಿನ್ನ ಪಾತ್ರಗಳು ಕಣ್ಮುಂದೆ ಕದಲುತ್ತವೆ. ಒಟ್ಟಾರೆಯಾಗಿ ಪಲ್ಲವಿ ಎಂಥಾ ಪಾತ್ರಗಳಿಗಾದರೂ ಜೀವ ತುಂಬಬಲ್ಲ ಪ್ರತಿಭಾವಂತ ನಟಿಯಾಗಿ ಕನ್ನಡದ ಪ್ರೇಕ್ಷಕರ ಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈವರೆಗೂ ಪ್ರಯೋಗಾತ್ಮಕವಾದ ಚಿತ್ರಗಳಲ್ಲಿಯೇ ನಟಿಸುತ್ತಾ ಬಂದಿರುವ ಪಲ್ಲವಿ ರವಿ ಹಿಸ್ಟರಿಯ ಮೂಲಕ ಕಮರ್ಶಿಯಲ್ ಸಿನಿಮಾ ಮೂಲಕವೂ ಸೈ ಅನ್ನಿಸಿಕೊಳ್ಳೋ ಕಾತರದಿಂದಿದ್ದಾರೆ.

    ರವಿ ಹಿಸ್ಟರಿ ಚಿತ್ರದಲ್ಲಿಯೂ ಪಲ್ಲವಿ ರಾಜು ಅವರಿಗೆ ನಟನೆಗೆ ಅವಕಾಶವಿರುವ ಸವಾಲಿನ ಪಾತ್ರವೇ ಸಿಕ್ಕಿದೆ. ಅವರಿಲ್ಲಿ ಎಸ್‍ಐ ಅನಿತ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖುದ್ದು ಅವರಿಗೇ ಅಚ್ಚರಿ ಹುಟ್ಟಿಸಿದ್ದ ಪಾತ್ರವಿದು. ಹಾಗಿದ್ದ ಮೇಲೆ ಈ ಪಾತ್ರವೇ ಪ್ರೇಕ್ಷಕರನ್ನೂ ಕೂಡಾ ಬೆರಗಾಗಿಸೋದರಲ್ಲಿ ಯಾವ ಸಂದೇಹವೂ ಇಲ್ಲ.

    ಪಲ್ಲವಿ ರಾಜು ಕ ಎಂಬ ಸಿನಿಮಾದ ಮೂಲಕವೇ ನಟಿಯಾಗಿ ಪಾದಾರ್ಪಣೆ ಮಾಡಿದ್ದವರು. ಆರಂಭ ಕಾಲದಿಂದಲೂ ನಟಿಯಾಗ ಬೇಕೆಂಬ ಆಸೆ ಹೊಂದಿದ್ದ ಪಲ್ಲವಿಗೆ ಪೂರಕ ವಾತಾವರಣವನ್ನು ಸೃಷ್ಟಿಸಿದ್ದದ್ದು ಅವರ ತಂದೆ. ಅವರಿಗೂ ಕೂಡಾ ಸಿನಿಮಾ ನೋಡೋ ಹವ್ಯಾಸವಿತ್ತು. ಈ ಕಾರಣದಿಂದಲೇ ಪಲ್ಲವಿ ಅವರಿಗೂ ಒಳ್ಳೊಳ್ಳೆ ಚಿತ್ರಗಳನ್ನು ಕಣ್ತುಂಬಿಕೊಳ್ಳೋ ಅವಕಾಶವೂ ಸಿಗುತ್ತಿತ್ತು. ಈ ಮೂಲಕವೇ ಕಲ್ಪನಾ, ಆರತಿ, ಮಂಜುಳಾ, ಲಕ್ಷ್ಮಿ ಮುಂತಾದ ನಟಿಯರನ್ನು ಆರಾಧಿಸಲಾರಂಭಿಸಿದ್ದ ಅವರಿಗೆ ತಾನೂ ಈ ನಟಿಯರಂತಾಗಬೇಕೆಂಬ ಕನಸು ಮೊಳೆತುಕೊಂಡಿತ್ತು. ಈ ಕಾರಣದಿಂದಲೇ ಈವತ್ತಿಗೂ ರಂಗನಾಯಕಿಯಂಥಾ ಸಿನಿಮಾದಲ್ಲಿ ನಟಿಸಬೇಕೆಂಬ ಮಹದಾಸೆ ಪಲ್ಲವಿಯವರಲ್ಲಿದೆ.

    ಆದರೆ ಇಂಥಾ ಆಸಕ್ತಿಗಳಿಗೆ ಅನುಗುಣವಾಗಿಯೇ ಬದುಕು ಸಾಗೋದಿಲ್ಲ. ಪರೀಕ್ಷೆಯೆಂಬಂತೆ ಜೀವನ ಬೇರಾವುದೋ ಕ್ಷೇತ್ರಕ್ಕೆ ಎತ್ತಿ ಒಗೆದು ಬಿಡುತ್ತೆ. ಒಳಗಿರೋ ಆಸಕ್ತಿ ಬಲವಾಗಿದ್ದರೆ ಖಂಡಿತಾ ಅದುವೇ ಸೆಳೆದುಕೊಂಡು ಬಿಡುತ್ತೆ. ಈ ಮಾತಿಗೆ ಪಲ್ಲವಿ ತಾಜಾ ಉದಾಹರಣೆ. ಯಾಕೆಂದರೆ ನಟಿಯಾಗಬೇಕೆಂಬ ಆಸೆ ಇದ್ದರೂ ಅವರು ಓದಿಕೊಂಡಿದ್ದು, ಕೆಲಸ ದಕ್ಕಿಸಿಕೊಂಡಿದ್ದು ತದ್ವಿರುದ್ಧ ಕ್ಷೇತ್ರದಲ್ಲಿ. ಬಿಕಾಂ ಓದಿಯಾದ ಮೇಲೆ ಬ್ಯಾಂಕೊಂದರಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದ ಪಲ್ಲವಿ ರಾಜು, ಅದರ ನಡುವೆಯೂ ನಾಟಕ ತಂಡವೊಂದರಲ್ಲಿ ಸಕ್ರಿಯರಾಗಿದ್ದರು. ರಂಗಭೂಮಿಯಲ್ಲಿಯೇ ನಟಿಯಾಗಿ ರೂಪುಗೊಂಡಿದ್ದರು.

    ಅದರ ನಡುವಲ್ಲಿಯೇ ಕ ಎಂಬ ಸಿನಿಮಾದಲ್ಲಿ ಅವಕಾಶ ಸಿಕ್ಕಿ ಕೆಲಸದ ಜೊತೆಗೇ ಚಿತ್ರೀಕರಣ ಮುಗಿಸಿಕೊಂಡಿದ್ದ ಪಲ್ಲವಿ, ಆ ಬಳಿಕ ಕೆಲಸ ಬಿಟ್ಟು ಪೂರ್ಣವಾಗಿ ನಟನೆಯಲ್ಲಿಯೇ ತೊಡಗಿಸಿಕೊಂಡಿದ್ದರು. ಅವರೀಗ ಹತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೊಂದಷ್ಟು ಬಿಡುಗಡೆಗೆ ರೆಡಿಯಾಗಿವೆ. ರವಿ ಹಿಸ್ಟರಿ ಈ ವಾರವೇ ಬಿಡುಗಡೆಯಾಗಲಿದೆ. ಈ ಚಿತ್ರ ಈಗಾಗಲೇ ಜನರಲ್ಲೊಂದು ನಿರೀಕ್ಷೆ ಚಿಗುರಿಸಿದೆ. ದೊಡ್ಡ ಮಟ್ಟದಲ್ಲಿಯೇ ಕ್ರೇಜ್ ಸೃಷ್ಟಿಸಿದೆ. ಈ ಮೂಲಕವೇ ಪಲ್ಲವಿಯವರ ಪಾಲಿಗೆ ಇನ್ನಷ್ಟು ಅವಕಾಶಗಳು ಕೂಡಿ ಬರುವುದು ಖಂಡಿತ!

     

  • ರವಿ ಹಿಸ್ಟರಿ: ಪಲ್ಲವಿ ರಾಜು ಈಗ ಎಸ್.ಐ. ಅನಿತ!

    ರವಿ ಹಿಸ್ಟರಿ: ಪಲ್ಲವಿ ರಾಜು ಈಗ ಎಸ್.ಐ. ಅನಿತ!

    ಬೆಂಗಳೂರು: ಬೇಗನೆ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಾ ಮುಖ್ಯ ನಾಯಕಿಯಾಗಿ ನೆಲೆನಿಲ್ಲಬೇಕೆಂಬ ಆಸೆ ಇದೀಗ ತಾನೇ ಬಣ್ಣ ಹಚ್ಚಿದ ಹೊಸಾ ಹುಡುಗಿಯರಲ್ಲೂ ಇರುತ್ತೆ. ಆದರೆ ನಟಿಸೋ ಚಿತ್ರಗಳ ಸಂಖ್ಯೆ ಕಡಿಮೆಯಾದರೂ, ತೀರಾ ಕಮರ್ಷಿಯಲ್ ಸಿನಿಮಾಗಳಲ್ಲದೇ ಹೋದರೂ ನಟಿಸೋ ಪಾತ್ರದ ಮೂಲಕವೇ ಗುರುತಾಗ ಬೇಕೆಂಬ ಹಂಬಲ ಹೊಂದಿರುವವರು ವಿರಳ. ಅಂಥಾ ವಿರಳ ಮನಸ್ಥಿತಿ ಹೊಂದಿರೋ ಅಪರೂಪದ ನಟಿ ಪಲ್ಲವಿ ರಾಜು. ಅವರೀಗ ಈ ವಾರ ತೆರೆ ಕಾಣಲಿರುವ ರವಿ ಹಿಸ್ಟರಿ ಚಿತ್ರದ ನಾಯಕಿಯಾಗಿ ವಿಶೇಷ ಗೆಟಪ್ಪೊಂದರ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ.

    ಸಿನಿಮಾ ಯಾವ ಜಾನರಿನದ್ದೇ ಆಗಿದ್ದರೂ ತನ್ನ ಪಾತ್ರ ಸವಾಲಿನದ್ದಾಗಿರಬೇಕೆಂಬ ಹಂಬಲ ಹೊಂದಿರುವವರು ಪಲ್ಲವಿ ರಾಜು. ಆ ಕಾರಣದಿಂದಲೇ ಅವರಿಂದು ವಿಶಿಷ್ಟ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಕ’ ಎಂಬ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು ಈಗ ಬಿಡುಗಡೆಗೆ ಸಜ್ಜಾಗಿರೋ ರವಿ ಹಿಸ್ಟರಿ ಸಿನಿಮಾದ ನಾಯಕಿ. ಈ ಪಾತ್ರದ ಬಗ್ಗೆ ಅವರಿಗೆ ಈ ಹಿಂದೆಂದಿಗಿಂತಲೂ ಹೆಚ್ಚಿನ ಭರವಸೆ ಇದೆ.

    ಇದುವರೆಗೂ ಪಲ್ಲವಿ ಸವಾಲಿನ ಪಾತ್ರಗಳಿಗೇ ಜೀವ ತುಂಬಿದ್ದಾರೆ. ಈ ಹಿಂದೆ ತೆರೆ ಕಂಡಿದ್ದ ಮಂತ್ರಂ ಚಿತದಲ್ಲಿನ ಇವರ ನಟನೆಯೇ ಪಲ್ಲವಿ ಓರ್ವ ಅಸಾಮಾನ್ಯ ನಟಿ ಅನ್ನೋದಕ್ಕೆ ಸ್ಪಷ್ಟ ಉದಾಹರಣೆ. ಅವರೊಳಗಿನ ನಟನಾ ಚಾತುರ್ಯಕ್ಕೆ ಸವಾಲಿನಂಥಾ ಪಾತ್ರವೇ ರವಿ ಹಿಸ್ಟರಿ ಚಿತ್ರದಲ್ಲಿ ಸಿಕ್ಕಿದೆಯಂತೆ. ಅಂದಹಾಗೆ ಇಲ್ಲವರು ಎಸ್‍ಐ ಅನಿತಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

    ಆರಂಭದಲ್ಲಿ ನಿರ್ದೇಶಕ ಮಧು ಚಂದ್ರ ಕಥೆ ಹೇಳಿದ್ದಾಗ ಪಲ್ಲವಿ ರಾಜು ಅವರ ಪಾತ್ರದ ಒಂದು ಪದರವನ್ನಷ್ಟೇ ಬಿಚ್ಚಿಟ್ಟಿದ್ದರಂತೆ. ಆದರೆ ರಿಹರ್ಸಲ್ ಸಂದರ್ಭದಲ್ಲಿ ಇವರ ಪಾತ್ರದ ಎರಡು ಪುಟ ತಿರುವುತ್ತಲೇ ಅಚ್ಚರಿ ಕಾದಿತ್ತಂತೆ. ಅದಕ್ಕೆ ಕಾರಣ ಅವರ ಪಾತ್ರಕ್ಕಿರೋ ಸಮ್ಮೋಹಕವಾದ ತಿರುವು ಮತ್ತು ಶೇಡುಗಳು!

    ರವಿ ಹಿಸ್ಟರಿ ಎಂಬುದೇ ಈಗ ವಿಭಿನ್ನ ಜಾಡಿನ ಚಿತ್ರವಾಗಿ ಪ್ರೇಕ್ಷಕರನ್ನ ಸೆಳೆದುಕೊಂಡಿದೆ. ಅದರಲ್ಲಿ ನಾಯಕಿಯಾಗಿರೋ ಪಲ್ಲವಿ ಎಸ್‍ಐ ಅನಿತ ಆಗಿ ಕಾಣಿಸಿಕೊಂಡಿದ್ದಾರೆ. ಎಸ್‍ಐ ಅಂದಾಕ್ಷಣ ಗಾಗಲ್ಸ್ ಹಾಕಿಕೊಂಡು ಬಿಲ್ಡಪ್ಪು ಕೊಡೋ ಪಾತ್ರದ ಕಲ್ಪನೆ ಬರೋದು ಸಹಜ. ಆದರೆ ಈ ಪಾತ್ರ ವಾಸ್ತವಕ್ಕೆ ಹತ್ತಿರವಾಗಿದೆಯಂತೆ. ಮಧ್ಯಮವರ್ಗದಿಂದ ಬಂದ ಹುಡುಗಿಯಾಗಿ, ಕಷ್ಟಪಟ್ಟು ಎಸ್‍ಐ ಆಗೋ ಶೇಡಿನ ಪಾತ್ರ ಪಲ್ಲವಿ ರಾಜು ವೃತ್ತಿ ಬದುಕಿಗೆ ಹೊಸಾ ದಿಕ್ಕು ತೋರಿಸೋ ಸಾಧ್ಯತೆಗಳೇ ಢಾಳಾಗಿವೆ.

    ಪಲ್ಲವಿ ರಾಜು ಇದುವರೆಗೂ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವೆಲ್ಲವೂ ಪ್ರಯೋಗಾತ್ಮಕ ಚಿತ್ರಗಳೇ. ಆದರೆ ರವಿ ಹಿಸ್ಟರಿ ಪ್ರಯೋಗಗಳನ್ನ ಹೊಂದಿರೋ ಕಮರ್ಷಿಯಲ್ ಮೂವಿ. ಇದರ ಮೂಲಕವೇ ಎಸ್.ಐ. ಅನಿತಾ ಆಗಿ ಹೊಸ ಕಮಾಲ್ ಸೃಷ್ಟಿಸೋ ಭರವಸೆ ಪಲ್ಲವಿ ರಾಜು ಅವರದ್ದು.

  • ರವಿ ಹಿಸ್ಟರಿಯಲ್ಲಿ ಸಿಕ್ಕ ಕನ್ನಡದ ‘ಐಶ್ವರ್ಯ’!

    ರವಿ ಹಿಸ್ಟರಿಯಲ್ಲಿ ಸಿಕ್ಕ ಕನ್ನಡದ ‘ಐಶ್ವರ್ಯ’!

    ಬೆಂಗಳೂರು: ಒಂದು ಹೊಸಾ ಬಗೆಯ ಚಿತ್ರ ಹಲವಾರು ಹೊಸಾ ಪ್ರತಿಭೆಗಳನ್ನೂ ಪರಿಚಯಿಸುತ್ತೆ. ಇದೇ ವಾರ ಬಿಡುಗಡೆಯಾಗುತ್ತಿರೋ ಮಧುಚಂದ್ರ ನಿರ್ದೇಶನದ ರವಿ ಹಿಸ್ಟರಿ ಚಿತ್ರವೂ ಈ ಸಾಲಿನಲ್ಲಿ ಸೇರಿಕೊಳ್ಳುತ್ತೆ. ಈ ಸಿನಿಮಾದ ನಾಯಕಿಯಾಗಿ ನಟಿರುವ ಐಶ್ವರ್ಯಾ ರಾವ್ ಕೂಡಾ ಹೊಸಾ ಪ್ರತಿಭೆಯೇ. ಕಾಲೇಜು ದಿನಗಳಲ್ಲಿ ನೃತ್ಯದತ್ತ ಕದಲಿದ ಹೆಜ್ಜೆಗಳೇ ಐಶ್ವರ್ಯಾರನ್ನು ನಟಿಯಾಗಿ ರೂಪುಗೊಳ್ಳುವಂತೆ ಮಾಡಿದ್ದೊಂದು ಚೆಂದದ ಕಥೆ. ಅದನ್ನು ರವಿ ಹಿಸ್ಟರಿಯಲ್ಲಿನ ಪಾತ್ರವೇ ಮತ್ತಷ್ಟು ರೋಚಕವಾಗಿಸೋ ಭರವಸೆ ಐಶ್ವರ್ಯಾರದ್ದು.

    ಹೀಗೆ ರವಿಹಿಸ್ಟರಿಯ ನಾಯಕಿಯಾಗಿ ಎಂಟ್ರಿ ಕೊಡುತ್ತಿರೋ ಐಶ್ವರ್ಯಾ ಮೂಲವಿರೋದು ಉಡುಪಿಯಲ್ಲಿ. ಕನ್ನಡದ ಕವಯತ್ರಿ ಸುಜಾತಾ ಅವರ ಪುತ್ರಿಯಾದ ಐಶ್ವರ್ಯಾ ಬೆಳೆದದ್ದೆಲ್ಲ ಮೈಸೂರಿನಲ್ಲಿಯೇ. ಡಾಲಿ ಧನಂಜಯ್ ಥರದ ಪ್ರತಿಭೆಗಳು ಅರಳಿಕೊಂಡ ಸಂಸ್ಥೆಯಲ್ಲಿಯೇ ನಟನಾ ತರಬೇತಿಯನ್ನೂ ಪಡೆದುಕೊಂಡಿರೋ ಐಶ್ವರ್ಯಾ ಮೂಲತಃ ನೃತ್ಯಗಾರ್ತಿ. ಇವರ ಪಾಲಿಗೆ ರವಿ ಹಿಸ್ಟರಿಯ ನಾಯಕಿಯಾಗೋ ಅವಕಾಶ ಕೂಡಿ ಬಂದಿದ್ದೇ ಆಕಸ್ಮಿಕವಾಗಿ.

    ರವಿ ಹಿಸ್ಟರಿ ಚಿತ್ರಕ್ಕೆ ಐಶ್ವರ್ಯಾ ಆಡಿಷನ್ ಮೂಲಕವೇ ಆಯ್ಕೆಯಾಗಿದ್ದರು. ಚಿತ್ರೀಕರಣಕ್ಕೂ ಮುಂಚೆ ವರ್ಕ್ ಶಾಪ್ ಗೆ ಹಾಜರಾಗಿ ಅಲ್ಲಿ ಸಂಪೂರ್ಣ ತರಬೇತಿಯನ್ನೂ ಕೂಡಾ ಐಶ್ವರ್ಯಾ ಪಡೆದುಕೊಂಡಿದ್ದರು. ನಿರ್ದೇಶಕರು ಸೇರಿದಂತೆ ಎಲ್ಲರೂ ಪ್ರತೀ ಹಂತದಲ್ಲಿಯೂ ಆತ್ಮೀಯವಾಗಿಯೇ ತಿದ್ದುತ್ತಾ ಈ ಪಾತ್ರಕ್ಕೆ ಪರಿಣಾಮಕಾರಿಯಾಗಿ ಜೀವ ತುಂಬಲು ಸಹಕರಿಸಿದರೆಂಬ ಧನ್ಯತಾಭಾವ ಐಶ್ವರ್ಯಾಗಿದೆ.

    ಈ ಚಿತ್ರದಲ್ಲಿ ಐಶ್ವರ್ಯಾರದ್ದು ಕಾಲೇಜು ಹುಡುಗಿಯ ಪಾತ್ರ. ಇಂಜಿನಿಯರಿಂಗ್ ಓದುತ್ತಿರೋ ಹುಡುಗಿಯಾಗಿ ಅವರು ನಟಿಸಿದ್ದಾರೆ. ಪಕ್ಕಾ ಬೋಲ್ಡ್ ಶೇಡಿನ ಈ ಪಾತ್ರ ಯಾವುದೇ ಸನ್ನಿವೇಶಕ್ಕಾದರೂ ಹಿಂದೆ ಮುಂದೆ ನೋಡದೇ ರಿಯಾಕ್ಟ್ ಮಾಡುತ್ತೆ. ಎಂಥಾ ಸಂದರ್ಭವಿದ್ದರೂ ಮುನ್ನುಗ್ಗುತ್ತೆ. ಅಂಥಾದ್ದೊಂದು ಪಾತ್ರವನ್ನು ಎಂಜಾಯ್ ಮಾಡುತ್ತಲೇ ನಿಭಾಯಿಸಿರುವ ಐಶ್ವರ್ಯಾ ಈ ಮೂಲಕ ಮತ್ತಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವ ನಿರೀಕ್ಷೆ ಹೊಂದಿದ್ದಾರೆ.

    ಸಾಮಾನ್ಯವಾಗಿ ಯಾರೇ ಹೆಣ್ಣುಮಕ್ಕಳು ನಟಿಯಾಗ ಬೇಕೆಂಬ ಆಸೆಯಿಟ್ಟುಕೊಂಡರೆ ಮೊದಲು ವಿರೋಧ ವ್ಯಕ್ತವಾಗೋದೇ ಮನೆ ಮಂದಿಯಿಂದ. ಆದರೆ ಈ ವಿಚಾರದಲ್ಲಿ ಐಶ್ವರ್ಯಾ ಅದೃಷ್ಟವಂತೆ. ಯಾಕೆಂದರೆ ಬಾಲ್ಯದಿಂದಲೂ ಮಗಳಿಗೆ ಅಪ್ಪಟ ಸಾಹಿತ್ಯಕ ವಾತಾವರಣವನ್ನು ಸೃಷ್ಟಿ ಮಾಡಿಕೊಟ್ಟಿದ್ದವರು ಅವರಮ್ಮ ಸುಜಾತ. ಸ್ವತಃ ಕವಯತ್ರಿ, ಕಥೆಗಾರ್ತಿಯೂ ಆಗಿರುವ ಸುಜಾತಾ ಅವರು ಚೌಕಟ್ಟುಗಳಾಚೆಗೆ ಆಲೋಚಿಸುತ್ತಾ ಬದುಕುವ ಕ್ರಮವನ್ನು ಮಗಳಿಗೂ ಕಲಿಸಿದ್ದರು. ಸ್ವತಃ ನಟಿಯಾಗಬೇಕೆಂದು ಆಸೆ ಹೊಂದಿದ್ದ ಸುಜಾತಾರಿಗೆ ಕೆಲ ಕಟ್ಟುಪಾಡುಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದ್ದರಿಂದಲೇ ಮಗಳ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಇರಾದೆಯಿಂದಲೇ ಐಶ್ವರ್ಯಾರ ಆಸಕ್ತಿಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದರು.

    ಅಮ್ಮನ ಇಂಥಾ ಪ್ರೋತ್ಸಾಹದಿಂದಲೇ ಮರಿಮಲ್ಲಪ್ಪ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗಲೇ ಐಶ್ವರ್ಯಾ ನೃತ್ಯಪಟುವಾಗಿ ಹೊರಹೊಮ್ಮಿದ್ದರು. ಸಾಲ್ಸಾ, ಬೆಲ್ಲಿ ಡ್ಯಾನ್ಸ್ ಮುಂತಾದ ನೃತ್ಯ ಪ್ರಾಕಾರಗಳಲ್ಲಿ ಪಾರಂಗತೆಯಾಗಿರುವ ಐಶ್ವರ್ಯಾ ಇದುವರೆಗೂ ಐವತ್ತಕ್ಕೂ ಹೆಚ್ಚು ಯಶಸ್ವೀ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಕಾಲೇಜು ದಿನಗಳಲ್ಲಿಯೇ ಐಶ್ವರ್ಯಾ ನೃತ್ಯ ಪ್ರದರ್ಶನವೊಂದನ್ನು ನೋಡಿದವರೊಬ್ಬರು ಸಿನಿಮಾ ಆಫರ್ ಕೊಟ್ಟಿದ್ದರಂತೆ. ಐಶ್ವರ್ಯಾ ಮನೇಲಿ ಬಂದು ಮಾತಾಡಿ ಅಂದಾಗ ಅಮ್ಮ ಸುಜಾತಾರಿಗೂ ಕಥೆ ಹೇಳಿದ್ದರಂತೆ. ಆ ಮೂಲಕವೇ ಐಶ್ವರ್ಯಾ ನಟಿಯಾಗಿ ಪಾದಾರ್ಪಣೆ ಮಾಡಿದ್ದರು. ವಿಶೇಷವೆಂದರೆ, ರವಿ ಹಿಸ್ಟರಿಗಿಂತಲೂ ಮೊದಲೇ ಅವರು ಒಂದಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರಣಹೇಡಿ, ಬಡ್ಡಿ ಮಗಂದ್ ಲೈಫು, ಮೈಸೂರ್ ಡೈರೀಸ್ ಮುಂತಾದ ಚಿತ್ರಗಳಲ್ಲಿ ಐಶ್ವರ್ಯಾ ನಾಯಕಿಯಾಗಿದ್ದಾರೆ.

    ಆದರೆ ರವಿ ಹಿಸ್ಟರಿಯೇ ಅವರ ಮೊದಲ ಚಿತ್ರವಾಗಿ ದಾಖಲಾಗೋ ಲಕ್ಷಣಗಳಿವೆ. ರಣಹೇಡಿ ಮುಂತಾದ ಚಿತ್ರಗಳಲ್ಲಿ ಸವಾಲಿನ ಪಾತ್ರಗಳಲ್ಲಿ ನಟಿಸಿರೋ ಐಶ್ವರ್ಯಾಗೆ ಅಂಥಾ ಪಾತ್ರಗಳ ಮೂಲಕವೇ ಜನರ ಮನಸು ಗೆಲ್ಲೋ ಆಸೆ. ಈಗಾಗಲೇ ಅವರ ಮುಂದೆ ಸಾಲು ಸಾಲು ಅವಕಾಶಗಳಿವೆ. ಅದೆಲ್ಲವನ್ನೂ ಎಚ್ಚರದಿಂದಲೇ ಪರಾಮರ್ಶಿಸಿ ಒಪ್ಪಿಕೊಳ್ಳುತ್ತಿರೋ ಐಶ್ವರ್ಯಾ ಕನ್ನಡ ಚಿತ್ರರಂಗದ ಐಶ್ವರ್ಯದಂಥಾ ನಟಿಯಾಗೋ ಲಕ್ಷಣಗಳೇ ಹೆಚ್ಚಾಗಿವೆ.

  • ಹಾಡಿನ ಮೂಲಕ ಬಯಲಾಯ್ತು ರವಿ ಹಿಸ್ಟರಿಯ ಲವ್ ಸ್ಟೋರಿ!

    ಹಾಡಿನ ಮೂಲಕ ಬಯಲಾಯ್ತು ರವಿ ಹಿಸ್ಟರಿಯ ಲವ್ ಸ್ಟೋರಿ!

    ಬೆಂಗಳೂರು: ಮಿಸ್ಟರಿವಿಶಿಷ್ಟವಾದ ಭೂಗತ ಜಗತ್ತಿನ ಕಥೆ ಹೊಂದಿರೋ ಚಿತ್ರವಾಗಿ ಈಗಾಗಲೇ ಜನರ ನಡುವೆ ಚರ್ಚೆಗೀಡಾಗುತ್ತಿರೋ ಚಿತ್ರ ರವಿ ಹಿಸ್ಟರಿ. ಇದೇ ಮಾರ್ಚ್ ಇಪ್ಪತ್ತೊಂಬತ್ತರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ವೀಡಿಯೋ ಸದಾಂಗ್ ಒಂದು ಬಿಡುಗಡೆಯಾಗಿದೆ. ಈ ಮೆಲೋಡಿ ಹಾಡಿನ ಮಾಧುರ್ಯಕ್ಕೀಗ ಸಿನಿಪ್ರೇಮಿಗಳು ಮರುಳಾಗಿದ್ದಾರೆ.

    ಮಧುಚಂದ್ರ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಕಾರ್ತಿಕ್ ಚಂದ್ರ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿದ್ದಾರೆ. ಈ ಸಿನಿಮಾಗ ಒಂದಾಗುವ ಆಸೆ ಎಂಬ ಹಾಡು ಅನುರಾಧಾ ಭಟ್ ಕಂಠಸಿರಿಯಲ್ಲಿ ಮೂಡಿ ಬಂದಿದೆ. ಸ್ಫೂರ್ತಿ ಗಿರೀಶ್ ಸಾಹಿತ್ಯದ ಈ ಹಾಡಿಗೆ ವಿಜೇತ್ ಮತ್ತು ಸೂರಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.

    ಕಾರ್ತಿಕ್ಗ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರೋ ಈ ಚಿತ್ರ ಈಗಾಗಲೇ ಟ್ರೈಲರ್, ಪ್ರೋಮೋಗಳ ಮೂಲಕವೇ ಸಖತ್ ಹವಾ ಸೃಷ್ಟಿಸಿದೆ. ಭೂಗತ ಜಗತ್ತೆಂಬುದು ಯಾವತ್ತಿದ್ದರೂ ಸಿನಿಮಾ ಕಣ್ಣಿಗೆ ಅಚ್ಚರಿ. ಅಲ್ಲಿನ ವಿಸ್ಮಯಗಳ ನೂರಾರು ಚಿತ್ರಗಳ ಸರಕಾದರೂ ಕೂಡಾ ಯಾವತ್ತಿಗೂ ಹಳತಾಗೋದಿಲ್ಲವೇನೋ. ವಿಭಿನ್ನ ಹಾದಿಯ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಮಧುಚಂದ್ರ ಈ ಸಿನಿಮಾ ಮೂಲಕ ಯಾರ ಕಣ್ಣಿಗೂ ಕಾಣಿಸದಿದ್ದ ಭೂಗತ ಜಗತ್ತಿನ ಹಿಸ್ಟರಿಯೊಂದನ್ನು ಹೇಳ ಹೊರಟಿರೋ ಸೂಚನೆಗಳಿವೆ.

    ಇಂಥಾ ಭೂಗತ ಸ್ಟೋರಿಯಲ್ಲಿ ನವಿರಾದೊಂದು ಪ್ರೇಮ ಕಥಾನಕವೂ ಇದೆ ಎಂಬ ಸುಳಿವು ಈ ಮಧುರವಾದ ಹಾಡಿನಿಂದಲೇ ಸಿಕ್ಕಿ ಬಿಟ್ಟಿದೆ. ಈ ಚಿತ್ರದಲ್ಲಿ ಪ್ರತಿಭಾವಂತ ನಟಿ ಪಲ್ಲವಿ ರಾಜು ಮತ್ತು ಐಶ್ವರ್ಯಾ ರಾವ್ ನಾಯಕಿಯರಾಗಿ ನಟಿಸಿದ್ದಾರೆ. ಈಗ ಬಿಡುಗಡೆಯಾಗಿರುವ ಹಾಡಿನಲ್ಲಿ ಪಲ್ಲವಿ ಮತ್ತು ಕಾರ್ತಿಕ್ ಕಾಂಬಿನೇಷನ್ನಿನ ನವಿರುಪ್ರೇಮದ ಕಥನವೊಂದು ಅನಾವರಣಗೊಂಡಿದೆ. ಇದರಲ್ಲಿ ಐಶ್ವರ್ಯಾ ರಾವ್ ಕೂಡಾ ಬಬ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.