Tag: ರಥಸಪ್ತಮಿ

  • ಮಂಗಳೂರಿನ ಕಾರ್ ಸ್ಟ್ರೀಟ್ ವೆಂಕಟರಮಣನ ಕಲರ್‌ಫುಲ್ ಓಕುಳಿ

    ಮಂಗಳೂರಿನ ಕಾರ್ ಸ್ಟ್ರೀಟ್ ವೆಂಕಟರಮಣನ ಕಲರ್‌ಫುಲ್ ಓಕುಳಿ

    ಮಂಗಳೂರು: ರಥಸಪ್ತಮಿಯ ಪ್ರಯುಕ್ತ ಕಳೆದ ನಾಲ್ಕು ದಿನಗಳಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ವಂಕಟರಮಣ ದೇವರ ಉತ್ಸವದಲ್ಲಿ ಭಾನುವಾರ ಕಲರ್ ಫುಲ್ ವಾತಾವರಣ ಸೃಷ್ಟಿಯಾಗಿತ್ತು. ಭಾನುವಾರ ಮಂಗಳೂರಿನ ರಥಬೀದಿಯಲ್ಲಿ ಸಂಪೂರ್ಣ ಹಬ್ಬದ ವಾತಾವರಣ ಮನೆ ಮಾಡಿತ್ತು.

    ಗೌಡ ಸಾರಸತ್ವ ಬ್ರಾಹ್ಮಣ ಸಮಾಜಕ್ಕೆ ಸೇರಿರುವ ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ನಡೆದಿದ್ದ ರಥೋತ್ಸವಕ್ಕೆ ನಡೆದ ಓಕುಳಿ ಆಟ ಇದಾಗಿತ್ತು. ಭಾನುವಾರ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ವೆಂಕಟರಮಣ ದೇವರನ್ನು ರಥದಲ್ಲಿ ಕೂರಿಸಿ ರಥೋತ್ಸವ ಸೇವೆ ನೀಡಿದ್ದರು. ಭಾನುವಾರ ಈ ದೇವರ ಅವಭೃತ ಸ್ನಾನ ನಡೆದು ಆ ಬಳಿಕ ದೇವರು ಗರ್ಭಗುಡಿಯನ್ನು ಸೇರಲಿದ್ದಾರೆ. ಹೀಗಾಗಿ ದೇವರ ಈ ಸ್ನಾನವನ್ನು ಬಣ್ಣದ ಹಬ್ಬವನ್ನಾಗಿ ಆಚರಿಸುವ ಮೂಲಕ ಮುಂಜಾನೆಯಿಂದ ಸಂಜೆಯವರೆಗೂ ಎಲ್ಲಾ ಭಕ್ತರೂ ಈ ರೀತಿ ಬಣ್ಣದ ಆಟದಲ್ಲೇ ಮುಳುಗಿ ಫುಲ್ ಎಂಜಾಯ್ ಮಾಡುತ್ತಾರೆ. ಚಂಡೆ ವಾದ್ಯಕ್ಕೆ ಸ್ಟೆಪ್ ಹಾಕುತ್ತಾ ಕುಣಿದು ಕುಪ್ಪಳಿಸಿದ್ದರು. ಹೆಣ್ಮಕ್ಕಳು, ಯುವಕರು ಸೇರಿದಂತೆ ಹಿರಿಯರು ಕೂಡ ಓಕುಲಿ ಆಟದಲ್ಲಿ ಮಿಂದೆದ್ದು ಸಖತ್ ಎಂಜಾಯ್ ಮಾಡಿದರು.

    ವೆಂಕಟರಮಣ ದೇವರ ರಥೋತ್ಸವ ಎಂದರೆ ಅದು ಪರವೂರಲ್ಲಿ ಇದ್ದ ಸಮಾಜ ಬಾಂಧವರು ಕೂಡ ಆಗಮಿಸಿ ಪಾಲ್ಗೊಳ್ಳುತ್ತಾರೆ. ಹೀಗಾಗಿ ವರ್ಷಕ್ಕೊಮ್ಮೆ ತಮ್ಮ ಆತ್ಮೀಯರನ್ನು ಭೇಟಿಯಾಗುವ ಒಂದು ಸದಾವಕಾಶವೂ ಸಿಕ್ಕಂತಾಗುತ್ತೆ. ಇದೇ ವೇಳೆ ನಡೆಯುವ ಈ ಓಕುಳಿ ಹಬ್ಬ ವರ್ಷಕ್ಕೊಮ್ಮೆ ಆತ್ಮೀಯರು ಹಾಗೂ ತಮ್ಮ ಕುಟುಂಬ ಸದಸ್ಯರೊಂದಿಗೆ ಎಂಜಾಯ್ ಮಾಡುವುದಕ್ಕೂ ಒಂದು ಅವಕಾಶ. ಹೀಗಾಗಿ ರಥೋತ್ಸವನ್ನು ಮಿಸ್ ಮಾಡಿಕೊಂಡರೂ ಈ ಓಕುಳಿ ಹಬ್ಬವನ್ನು ಹಲವರು ಮಿಸ್ ಮಾಡಿಕೊಳ್ಳುವುದಿಲ್ಲ. ಮುಂಜಾನೆಯಿಂದ ಸಂಜೆ ದೇವರ ಅವಭೃತ ಸ್ನಾನ ನಡೆಯುವವರೆಗೂ ಈ ರೀತಿ ಬಣ್ಣದ ಎರಚಾಟ, ಹಾಡು, ಕುಣಿತ ನಿರಂತರವಾಗಿ ಸಾಗುತ್ತೆ. ಯಾವುದೇ ಬೇದಭಾವ ಇಲ್ಲದೆ ಎಲ್ಲರೂ ಒಟ್ಟಾಗಿ ಆಚರಿಸುವ ಈ ಓಕುಳಿ ಹಬ್ಬ ಒಗ್ಗಟ್ಟಿನ ಸಂಕೇತ ಕೂಡ ಆಗಿದೆ.

    ದೇವರನ್ನು ಸಂತೋಷ ಪಡಿಸಬೇಕು ಎನ್ನುವ ಕಾರಣಕ್ಕೆ ಎಲ್ಲರೂ ಸಂತೋಷದಿಂದ ಬಣ್ಣ ಎರಚಾಡಿ ಖುಷಿ ಪಡುವ ಈ ಓಕುಳಿ ಇತ್ತೀಚಿನ ದಿನಗಳಲ್ಲಿ ಬಾರಿ ಫೇಮಸ್. ಹೀಗಾಗಿ ಪರವೂರಿನ ಜನರೂ ಕೂಡ ಈ ಹಬ್ಬದಲ್ಲಿ ಪಾಲ್ಗೊಳ್ಳೊದಿಕ್ಕೆ ಅಂತಾನೆ ಆಗಮಿಸ್ತಾರೆ. ಅದರಲ್ಲೂ ಹೆಣ್ಮಕ್ಕಳು ಹುಡುಗರ ಜೊತೆ ಸೇರಿಕೊಂಡು ಒಂದೇ ಮನೆಯ ಮಕ್ಕಳಂತೆ ರಥಬೀದಿಯ ಗಲ್ಲಿಗಲ್ಲಿಗಳಲ್ಲೂ ಸಂಭ್ರಮಿಸುವುದನ್ನು ಕಣ್ತುಂಬಿಕೊಳ್ಳುವುದೇ ಚೆಂದ.

    ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ) ಸಮಾಜದ ರಥೋತ್ಸವ ಎಂದರೆ ಅದು ಅದ್ಧೂರಿ ಹಾಗೂ ಆಡಂಭರದಿಂದ ಕೂಡಿರುತ್ತೆ. ಅದೇ ರೀತಿ ಈ ಓಕುಳಿ ಕೂಡ ಬಹಳಷ್ಟು ಕಲರ್ ಫುಲ್ ಆಗಿದ್ದು, ನೋಡುಗರಿಗೆ ಕೂಡ ಬಹಳಷ್ಟು ಖುಷಿ ನೀಡುತ್ತೆ. ಅಸಲಿಗೆ ಈ ಓಕಳಿಯಲ್ಲಿ ಗುಲಾಬಿ ಬಣ್ಣ ಮಾತ್ರ ಬಳಸಬೇಕು ಎನ್ನುವ ನಿಯಮ ಇದ್ರೂ ಈಗ ಹಲವು ಬಣ್ಣಗಳು ಬಳಕೆಯಾಗುತ್ತಿದೆ. ಕಳೆದ ವರ್ಷದಿಂದ ಬ್ಯಾಂಡ್ ಡಿಜೆಗೆ ಬ್ರೇಕ್ ಹಾಕಲಾಗಿತ್ತು. ಆದರಿಂದ ಪಡ್ಡೆಗಳಿಗೆ ಸ್ವಲ್ಪ ಬೇಸರ ಮೂಡಿಸಿದರು ಎಲ್ಲರು ಎಂಜಾಯ್ ಮಾಡಿದ್ದಾರೆ.

  • ಶನಿವಾರ ನಡೆಯಲಿದೆ ವಿಶೇಷ ರಥಸಪ್ತಮಿ- ಅಂದು ಏನು ಮಾಡಬೇಕು?

    ಶನಿವಾರ ನಡೆಯಲಿದೆ ವಿಶೇಷ ರಥಸಪ್ತಮಿ- ಅಂದು ಏನು ಮಾಡಬೇಕು?

    ಬೆಂಗಳೂರು: ದೀರ್ಘಕಾಲದ ಸೂರ್ಯ ಗ್ರಹಣದ ಬಳಿಕ ಬಂದಿರುವ ಶನಿವಾರದ ರಥಸಪ್ತಮಿ ಭಕ್ತರ ಪಾಲಿಗೆ ದೋಷವನ್ನು ಮುಕ್ತ ಮಾಡಿಕೊಳ್ಳುವ ದಿನವಾಗಲಿದೆ.

    ಗ್ರಹಣದ ಬಳಿಕ ಅಲ್ಪಸ್ವಲ್ಪ ದೋಷ ಎಲ್ಲರಿಗೂ ಇರಲಿದೆ. ಹಾಗಾಗಿ ನಾಳೆ ಗ್ರಹಣದ ದೋಷ ಪರಿಪೂರ್ಣ ನಿವಾರಣೆಗೆ ರಥಸಪ್ತಮಿಯನ್ನು ಆಚರಿಸಬೇಕಾಗುತ್ತದೆ. ರಥಸಪ್ತಮಿಯ ದಿನ ಸೂರ್ಯ ಏಕಚಕ್ರಾದಿಪತ್ಯ ಸಾಧಿಸುತ್ತಾನೆ. ಗ್ರಹಣ ಮುಕ್ತನಾದ ಸೂರ್ಯ ಶನಿವಾರದಿಂದ ಇನ್ನಷ್ಟು ಪ್ರಜ್ವಲಿಸುತ್ತಾನೆ.

    ರಥಸಪ್ತಮಿಯ ದಿನ ಏನು ಮಾಡಬೇಕು?
    ಶನಿವಾರದ ಸುದೀರ್ಘ ಸೂರ್ಯಗ್ರಹಣವನ್ನು ನೋಡಿದ್ದರಿಂದ ಈ ಬಾರಿ ರಥಸಪ್ತಮಿ ಬಹಳ ವಿಶೇಷವಾಗಲಿದೆ. ನಾಳೆ ಬೆಳಗ್ಗೆ ಸೂರ್ಯೋದಯದ ಬಳಿಕ ಅರ್ಕ ಪತ್ರವನ್ನು ಹಾಗೂ ಅಕ್ಷತೆಯ ಕಾಳನ್ನು ತಲೆಯ ಮೇಲಿಟ್ಟು ಸ್ನಾನ ಮಾಡಬೇಕು. ಸೂರ್ಯನ ಮುಂದೆ ಗೋಧಿಯನ್ನಿಟ್ಟು ಪೂಜೆ ಮಾಡಬೇಕು. ಬಳಿಕ ಸೂರ್ಯನಿಗೆ ನಮಸ್ಕರಿಸಬೇಕು. ಈ ರೀತಿ ಮಾಡುವುದಿಂದ ಗ್ರಹಣದ ದೋಷವೆಲ್ಲವೂ ನಿವಾರಣೆಯಾಗಲಿದೆ. ಅರ್ಕವನ್ನಿಟ್ಟು ಸ್ನಾನ ಮಾಡುವುದರಿಂದ ಆರೋಗ್ಯ ಭಾಗ್ಯವೂ ಲಭಿಸಲಿದೆ. ಇದಾದ ಬಳಿಕ ಶಿವದರ್ಶನ ಮಾಡಿದರೆ ರಥಸಪ್ತಮಿ ದಿನ ಒಳ್ಳೆಯದಾಗಲಿದೆ ಎಂದು ಅರ್ಚಕರು ಹೇಳಿದ್ದಾರೆ.

    ರಥಸಪ್ತಮಿ ವಿಶೇಷ:
    ಮಾಘ ಮಾಸದ ಶುಕ್ಲ ಪಕ್ಷದ ಉತ್ತರಾಯಣದ ಸಪ್ತಮಿಯಂದು ಬೆಳಕು ನೀಡುವ ಶ್ರೀ ಸೂರ್ಯದೇವರನ್ನು ವಿಶೇಷವಾಗಿ ಆರಾಧಿಸುವ ದಿನವಾಗಿದೆ. ರಥ ಸಪ್ತಮಿ ಅಂದ್ರೇ ಸೂರ್ಯದೇವರ ಜನ್ಮದಿನ. ಈ ದಿನ ಶುಭ ಕಾರ್ಯ ಮಾಡಿದರೆ ಒಳ್ಳೆಯದಾಗಲಿದೆ ಎನ್ನುವ ನಂಬಿಕೆ.

    ಸೂರ್ಯದೇವನು ನಾಳೆ ಉತ್ತರಾಯಣನಾಗಿ ಸಪ್ತ ಕುದುರೆಗಳನ್ನು ಹೊಂದಿದ ರಥವನ್ನೇರಿ ಉತ್ತರ ದಿಕ್ಕಿಗೆ ಪ್ರಯಾಣಿಸುತ್ತಾನೆ ಎನ್ನುವ ನಂಬಿಕೆ. ಈ ರಥಸಪ್ತಮಿಯಂದು ಸೂರ್ಯೋದಯದ ಸಮಯದಲ್ಲಿ ಸಮುದ್ರ ಸ್ನಾನ ಉತ್ತಮ. ಎಕ್ಕೆ ಎಲೆಯನ್ನಿರಿಸಿಕೊಂಡು ಮಾಡುವ ಸ್ನಾನದಿಂದ ಏಳೇಳು ಜನ್ಮದ ಪಾಪ ನಾಶದ ಜತೆ ಮನುಷ್ಯನ ದೇಹದಲ್ಲಿರುವ ಚರ್ಮ ರೋಗವೂ ವಾಸಿಯಾಗಿ ಆರೋಗ್ಯ ವೃದ್ಧಿಸುತ್ತೆ ಎನ್ನುವ ನಂಬಿಕೆ ಇದೆ. ಸೂರ್ಯನಿಗೆ ಪ್ರಿಯವಾದ ಎಕ್ಕೆ ಗಿಡದಿಂದ ಏಳು ಎಕ್ಕೆ ಎಲೆಗಳನ್ನು ತೆಗೆದುಕೊಂಡು ಸೂರ್ಯ ಪಠಣೆ ಮಾಡಿ ಸ್ನಾನಮಾಡಿದರೆ ಇನ್ನು ಉತ್ತಮ.