Tag: ರಣಧೀರ

  • ‘ರಣಧೀರ’ ಚಿತ್ರದ ನಟಿ ಖುಷ್ಬೂ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ‘ರಣಧೀರ’ ಚಿತ್ರದ ನಟಿ ಖುಷ್ಬೂ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ಣಧೀರ, ಹೃದಯ ಗೀತೆ, ಮ್ಯಾಜಿಕ್ ಅಜ್ಜಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಖುಷ್ಬೂ (Kushboo Sundar) ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತೆಗೆ ದಾಖಲಾಗಿರುವ ನಟಿ, ಬೆಡ್ ಮಲಗಿರುವ ಫೋಟೋವನ್ನ ಶೇರ್ ಮಾಡಿ ತಮ್ಮ ಆರೋಗ್ಯದ (Health) ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬರ್ತ್‌ಡೇ ದಿನ ಹತ್ತಿರ ಬರುತ್ತಿದ್ದಂತೆ ಫ್ಯಾನ್ಸ್‌ಗೆ ಪ್ರಜ್ವಲ್ ದೇವರಾಜ್ ವಿಶೇಷ ಮನವಿ

    ಸದ್ಯ ಅನಾರೋಗ್ಯದ ಬಗ್ಗೆ ಆಸ್ಪತ್ರೆಗೆ ದಾಖಲಾಗಿರುವುದರ ಬಗ್ಗೆ ಟ್ವೀಟ್ ಮಾಡಿರುವ ನಟಿ ಖುಷ್ಬೂ, ಟೇಲ್ ಬೋನ್ ಚಿಕಿತ್ಸೆ ಪಡೆಯುವುದರ ಸಲುವಾಗಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಹಿಂದೆಯೂ ಈ ಸಮಸ್ಯೆ ಖುಷ್ಬೂ ಅವರನ್ನು ಬಾಧಿಸಿತ್ತು. ಇದೀಗ ಅದೇ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಮತ್ತೆ ಚಿಕಿತ್ಸೆ ಮುಂದುವರಿಸಿದ್ದಾರೆ.

    ನಾನೀಗ ಚೇತರಿಕೆಯ ಹಂತದಲ್ಲಿದ್ದೇನೆ. ಕೋಕ್ಸಿಕ್ಸ್ ಅಥವಾ ಟೇಲ್ ಮೂಳೆ ಚಿಕಿತ್ಸೆಯ ಸಲುವಾಗಿ ನಾನು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಈ ಹಿಂದೆಯೂ ಈ ಸಮಸ್ಯೆ ಕಾಡಿತ್ತು. ಆದಷ್ಟು ಬೇಗ ಗುಣಮುಖಳಾಗಿ ಹೊರಬರುವೆ ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಟಿಯ ಪೋಸ್ಟ್‌ಗೆ ಅವರ ಅಭಿಮಾನಿಗಳು ಮತ್ತು ಸಿನಿಮಾ ಸ್ನೇಹಿತರು ಟ್ವಿಟ್ ಮಾಡಿ, ಬೇಗ ಗುಣಮುಖರಾಗಿ ಬನ್ನಿ ಎಂದು ಹರಸಿದ್ದಾರೆ.

    ಕಳೆದ ಏಪ್ರಿಲ್‌ನಲ್ಲಿಯೂ ಖುಷ್ಬೂ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆವತ್ತು ಶಾಕಿಂಗ್ ಎಂಬಂತೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಬಂದು ಜ್ವರ, ತಲೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಗ್ಗೆ ಖುಷ್ಬೂ ಹೇಳಿಕೊಂಡಿದ್ದರು. ಈಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

  • ನಿಮ್ಮ ಮಗಳ ಹುಚ್ಚಾಟಕ್ಕೆ ಬ್ರೇಕ್‌ ಹಾಕಿ ಎಂದು ಖುಷ್ಬೂಗೆ ನೆಟ್ಟಿಗರಿಂದ ತರಾಟೆ

    ನಿಮ್ಮ ಮಗಳ ಹುಚ್ಚಾಟಕ್ಕೆ ಬ್ರೇಕ್‌ ಹಾಕಿ ಎಂದು ಖುಷ್ಬೂಗೆ ನೆಟ್ಟಿಗರಿಂದ ತರಾಟೆ

    ಖ್ಯಾತ ನಟಿ ಖುಷ್ಬೂ (Kushboo Sundar) ಅವರು ಸಿನಿಮಾ- ರಾಜಕೀಯ (Politics) ಎರಡರಲ್ಲೂ ಆಕ್ಟೀವ್ ಆಗಿದ್ದಾರೆ. ಸದ್ಯ ಖುಷ್ಬೂ ಅವರು ಮಗಳ ನಡೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಮಗಳನ್ನು ಸರಿಯಾಗಿ ಬೆಳೆಸೋಕೆ ಆಗಲ್ವಾ? ಅಂತಾ ಖುಷ್ಬೂಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು.?

    ನಟಿ ಖುಷ್ಬೂ ಸುಂದರ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆವಂತಿಕಾ (Avantika) ಮತ್ತು ಆನಂದಿತಾ (Ananditha)  ಎಂಬ ಮಕ್ಕಳಿದ್ದಾರೆ. ಇಬ್ಬರೂ ರಾಜಕೀಯ- ಸಿನಿಮಾರಂಗದಿಂದ ದೂರವಿದ್ದಾರೆ. ಇದನ್ನೂ ಓದಿ:ಹೊಸ ಹೇರ್‌ ಸ್ಟೈಲ್‌ ಮಾಡಿಸಿಕೊಂಡ ನಟಿ ಮೇಘನಾ ರಾಜ್

    ಇದೀಗ ಆವಂತಿಕಾ ಅವರು ಬೋಲ್ಡ್ ಬಟ್ಟೆ, ಒಳಉಡುಪು ಧರಿಸದೇ ಬಟ್ಟೆ ತೊಟ್ಟಿರೋದು, ಮೈ ಮೇಲೆ ಹಾಕಿಸಿಕೊಂಡಿರುವ ಹಚ್ಚೆ, ಕೂದಲಿಗೆ ಕಲರ್ ಮಾಡಿಸಿರೋದು ಇವೆಲ್ಲವೂ ನೋಡಿ ನಟಿ ಖುಷ್ಬೂಗೆ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಖುಷ್ಬೂ ಪುತ್ರಿ ಆವಂತಿಕಾ ತನ್ನ ಬಟ್ಟೆಯ ವಿಷ್ಯವಾಗಿ ಸಖತ್‌ ಟ್ರೋಲ್‌ ಕೂಡ ಆಗ್ತೀದ್ದಾರೆ.

     

    View this post on Instagram

     

    A post shared by avantika (@avantikasundar)

    ನಿಮ್ಮ ಮಗಳ ಬಗ್ಗೆ ನೀವು ಗಮನ ವಹಿಸುತ್ತಿಲ್ಲ, ಮಗಳನ್ನು ಸರಿಯಾಗಿ ಬೆಳೆಸಿಲ್ಲ ನಿಮ್ಮ ಮಗಳ ಹುಚ್ಚಾಟಕ್ಕೆ ಬ್ರೇಕ್‌ ಹಾಕಿ ಎಂದು ನೆಟ್ಟಿಗರು ಖುಷ್ಬೂಗೆ ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಆವಂತಿಕಾಗೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿ, ನಿಮ್ಮ ಅಮ್ಮನ ಘನತೆಗೆ ಧಕ್ಕೆ ತರುತ್ತಿದ್ದೀರಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

  • ರವಿಚಂದ್ರನ್ ಗಾಗಿ ಮತ್ತೆ ಕನ್ನಡಕ್ಕೆ ಬರಲಿದ್ದಾರಂತೆ ಖುಷ್ಬೂ

    ರವಿಚಂದ್ರನ್ ಗಾಗಿ ಮತ್ತೆ ಕನ್ನಡಕ್ಕೆ ಬರಲಿದ್ದಾರಂತೆ ಖುಷ್ಬೂ

    ಣಧೀರ ಸಿನಿಮಾ ಅಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು ರವಿಚಂದ್ರನ್ (Ravichandran) ಮತ್ತು ಖುಷ್ಭೂ (Khushbhu) ಅವರದ್ದು. ಈ ಸಿನಿಮಾದ ನಂತರ ಇದೇ ಜೋಡಿ ಅನೇಕ ಸಿನಿಮಾಗಳನ್ನೂ ಮಾಡಿದೆ. ನಂತರದ ದಿನಗಳಲ್ಲಿ ಮತ್ತೆ ಕಾಣಿಸಿಕೊಂಡಿಲ್ಲ. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ ಮತ್ತೆ ರವಿಚಂದ್ರನ್ ಹಾಗೂ ಖುಷ್ಭೂ ಒಟ್ಟಾಗಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ನಿರ್ದೇಶಕ ಗುರುರಾಜ್ ಕುಲಕರ್ಣಿ (Gururaj Kulkarni) ಎನ್ನುವವರು ರವಿಚಂದ್ರನ್ ಗಾಗಿ ಸಿನಿಮಾವೊಂದನ್ನು ಮಾಡುತ್ತಿದ್ದು, ಈ ಸಿನಿಮಾದ ನಾಯಕಿಯನ್ನಾಗಿ ಖುಷ್ಬೂ ಅವರನ್ನೇ ಆಯ್ಕೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದಾರೆ. ಒಂದು ಸುತ್ತಿನ ಮಾತುಕತೆ ಕೂಡ ಆಗಿದೆ ಎನ್ನುವ ಸುದ್ದಿಯಿದೆ. ಸದ್ಯ ಖುಷ್ಭೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪಾತ್ರ ಒಪ್ಪಬಹುದು ಎನ್ನಲಾಗುತ್ತಿದೆ.

    ಇದೊಂದು ಥ್ರಿಲ್ಲರ್ ಮಾದರಿಯ ಚಿತ್ರವಾಗಿದ್ದು, ರವಿಚಂದ್ರನ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಖುಷ್ಭೂ ಅವರನ್ನು ಮತ್ತೆ ತೆರೆಯ ಮೇಲೆ ತೋರಿಸಬೇಕು ಎನ್ನುವ ಆಸೆ ನಿರ್ದೇಶಕರದ್ದು. ಇದೇ ತಿಂಗಳು 21ರಂದು ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಆಗಲಿದೆಯಂತೆ. ಅಂದುಕೊಂಡಂತೆ ಆದರೆ, ಆ ದಿನದೊಳಗೆ ಖುಷ್ಭೂ ಅವರನ್ನು ಮಾತನಾಡಿಸುವ ಪ್ರಯತ್ನ ಕೂಡ ಮಾಡಲಿದ್ದಾರಂತೆ. ಇದನ್ನೂ ಓದಿ: ಮದುವೆ ಆಗುವ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಶರ್ಮಿಳಾ ಮಾಂಡ್ರೆ

    ರವಿಚಂದ್ರನ್ ಅವರೇ ಸಿನಿಮಾದ ಹೀರೋ ಆಗಿರುವಾಗ ಖುಷ್ಭೂ ಬರಬಹುದು ಎನ್ನುವ ಅಂದಾಜಿದೆ. ಅದರ ಜೊತೆಗೆ ರಾಜಕಾರಣದಲ್ಲೂ ಅವರು ಬ್ಯುಸಿಯಾಗಿರುವುದರಿಂದ ಮತ್ತೆ ಸಿನಿಮಾ ಒಪ್ಪಿಕೊಳ್ಳುತ್ತಾರಾ ಎನ್ನುವ ಅನುಮಾನವೂ ಇದೆ. ಸದ್ಯಕ್ಕೆ ಖುಷ್ಭೂ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡವೇ ಕೊಡಬಹುದು.

  • ತಂದೆಯ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಕ್ಕೆ ಖುಷ್ಬೂಗೆ ನೆಟ್ಟಿಗರಿಂದ ಕ್ಲಾಸ್

    ತಂದೆಯ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಕ್ಕೆ ಖುಷ್ಬೂಗೆ ನೆಟ್ಟಿಗರಿಂದ ಕ್ಲಾಸ್

    ಅಂಜದ ಗಂಡು, ಯುಗಪುರುಷ, ರಣಧೀರ ಸೇರಿದಂತೆ ಕನ್ನಡದ ಸಾಕಷ್ಟು ಸಿನಿಮಾದಲ್ಲಿ ನಟಿಸಿರುವ ಖುಷ್ಬೂ ಸುಂದರ್ (Kushboo Sundar) ಇತ್ತೀಚಿಗೆ ತನ್ನ ತಂದೆಯಿಂದಲೇ ಎದುರಿಸಿದ ದೌರ್ಜನ್ಯದ ಬಗ್ಗೆ ನಟಿ ಹೇಳಿಕೊಂಡಿದ್ದರು. ಈಗ ನಟಿ ಈ ರೀತಿ ಮಾತನಾಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಮಾತುಗಳು ಕೇಳಿ ಬಂದಿದೆ. ಈ ಬಗ್ಗೆ ಖುಷ್ಬೂ ಮೌನ ಮುರಿದಿದ್ದಾರೆ.

    ತಮ್ಮ 8ನೇ ವಯಸ್ಸಿಗೆ ಖುಷ್ಬೂ ತಮ್ಮ ತಂದೆಯಿಂದಲೇ (Father) ದೌರ್ಜನ್ಯ ಎದುರಿಸಿದ್ದರು. ತಾಯಿಗೂ ಹೇಳದೇ ಇರುವಂತಹ ವಾತಾವರಣ ನಿರ್ಮಾಣವಾಗಿತ್ತು. ಇದರ ಬಗ್ಗೆ ಇತ್ತೀಚಿಗೆ ಸಂದರ್ಶನದಲ್ಲಿ ನಟಿ ಬಾಯ್ಬಿಟ್ಟಿದ್ದರು. ಈ ಕುರಿತು ಸಾಕಷ್ಟು ವಿರೋಧ ಬಂದಿರುವ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಆಶ್ಚರ್ಯಕರ ಹೇಳಿಕೆಯೇನೂ ನೀಡಿಲ್ಲ. ನಾನು ಪ್ರಾಮಾಣಿಕತೆಯಿಂದ ಈ ಮಾತು ಹೇಳಿದ್ದೇನೆ. ನನ್ನ ಜೊತೆ ಈ ರೀತಿ ಆಯ್ತು, ಅಪರಾಧ ಮಾಡಿದವರು ನಾಚಿಕೆ ಪಡಬೇಕು ಎಂದು ಖುಷ್ಬೂ ಸುಂದರ್ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಧ್ವನಿಯಿಂದ ಎದುರಿಸಿದ ಟೀಕೆ ಬಗ್ಗೆ ಬಾಯ್ಬಿಟ್ಟ ರಾಣಿ ಮುಖರ್ಜಿ

    ಗಟ್ಟಿಯಾಗಿ ನಿಲ್ಲಿ ಇದೇ ರಸ್ತೆಯ ಅಂತ್ಯ ಎಂದು ಭಾವಿಸಬೇಡಿ ಎಂದು ಎಲ್ಲರಿಗೂ ನಾನು ಸಂದೇಶ ಕಳಿಸಬೇಕಿದೆ. ನಾನು ಈ ಮಾತು ಹೇಳಿರೋದಿಕ್ಕೆ ಇಷ್ಟು ವರ್ಷ ತೆಗೆದುಕೊಂಡೆ ಎಂದರೆ ಮಹಿಳೆಯರು ಈ ಬಗ್ಗೆ ಮಾತನಾಡಲೇಬೇಕಾದ ಅಗತ್ಯವಿದೆ. ನನ್ನ ಜೊತೆ ಈ ರೀತಿ ಆಯ್ತು, ಏನೇ ಆಗಲಿ ನಾನು ನನ್ನ ಜರ್ನಿಯನ್ನು ಮುಂದುವರೆಸುತ್ತೇನೆ ಎಂದು ಖುಷ್ಬೂ ಹೇಳಿದ್ದಾರೆ.

    ನನ್ನ ಹೆಣ್ಣು ಮಕ್ಕಳಿಗೆ, ಪತಿಗೆ ಈ ವಿಷಯ ಮೊದಲೇ ಗೊತ್ತಿತ್ತು. ಪ್ರತಿ ಸಲ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆದರೆ ನೀನು ಯಾವ ರೀತಿ ಬಟ್ಟೆ ಹಾಕಿದ್ದೆ? ಏನು ಮಾಡುತ್ತಿದ್ದೆ ಎಂದು ಪ್ರಶ್ನೆ ಮಾಡಲಾಗುತ್ತದೆ. ನನ್ನ ಮೇಲೆ ದೌರ್ಜನ್ಯ ಆದಾಗ ನನಗೆ 8 ವರ್ಷ. ನನಗೆ ಆ ವಯಸ್ಸಿನಲ್ಲಿ ಏನು ಗೊತ್ತಾಗುತ್ತದೆ? ನಾನು ಈಗ ಈ ದೌರ್ಜನ್ಯದ ಬಗ್ಗೆ ಮಾತನಾಡಿದ್ದರಿಂದ ನನ್ನ ಪತಿ, ನೀನು ಈಗ ಇದರಿಂದ ಹೊರಗಡೆ ಬಂದಿದ್ದೀಯಾ ಅಲ್ವಾ, ಈಗ ನೀನು ಓಕೆನಾ ಎಂದು ಕೇಳಿದ್ದರು. ಈ ವೇಳೆ ತಮ್ಮ ಕುಟುಂಬದ ಬೆಂಬಲದ ಬಗ್ಗೆ ಖುಷ್ಬೂ ಮಾತನಾಡಿದ್ದಾರೆ. ಈ ಮೂಲಕ ತನ್ನ ಹೇಳಿಕೆಗೆ ವಿರೋಧಿಸಿವರಿಗೆ ತಕ್ಕ ಉತ್ತರ ನೀಡಿದ್ದಾರೆ.