Tag: ರಜಿನಿ

  • ‘ಅಂಬುಜ’ ಗೋಸ್ಕರ ಕ್ರೈಮ್ ರಿಪೋರ್ಟರ್ ಆದ ‘ದಾಸ ಪುರಂದರ’ ಶ್ರೀನಿವಾಸ

    ‘ಅಂಬುಜ’ ಗೋಸ್ಕರ ಕ್ರೈಮ್ ರಿಪೋರ್ಟರ್ ಆದ ‘ದಾಸ ಪುರಂದರ’ ಶ್ರೀನಿವಾಸ

    ದಾಸ ಪುರಂದರ ಶ್ರೀನಿವಾಸರ ಬಗ್ಗೆ ನಿಮಗೆಲ್ಲ ತಿಳಿದಿರುತ್ತೆ. ಇತ್ತೀಚೆಗೆ ಕಲರ್ಸ್ ಕನ್ನಡ ಸಂಸ್ಥೆ ಕೂಡ ನವಕೋಟಿ ನಾರಾಯಣ ದಾಸರಾದ ಕತೆಯನ್ನ `ದಾಸ ಪುರಂದರ’ ಧಾರವಾಹಿ ಮೂಲಕ ಇಡೀ ಕರುನಾಡಿಗೆ ತಿಳಿಸುವ ಪ್ರಯತ್ನ ಮಾಡಿತ್ತು. ಈ ಧಾರಾವಾಹಿ ಮೂಲಕ ಕರ್ನಾಟಕದ ತುಂಬೆಲ್ಲಾ ಮೆರವಣಿಗೆ ಹೊರಡುವ ಅವಕಾಶ ರಂಗಭೂಮಿಯ ಅಪ್ಪಟ ಪ್ರತಿಭೆ ದೀಪಕ್ ಸುಬ್ರಹ್ಮಣ್ಯಗೆ (Deepak Subrahmanya) ಸಿಕ್ಕಿತ್ತು. ಶ್ರೀನಿವಾಸನ ಅವತಾರವೆತ್ತಿ ಕನ್ನಡಿಗರಿಂದ ಬಹುಪರಾಕ್ ಹಾಕಿಸಿಕೊಂಡ ದೀಪಕ್ ಈಗ ಅಂಬುಜಗೋಸ್ಕರ ಕ್ರೈಮ್ ರಿಪೋರ್ಟರ್ ಆಗಿದ್ದಾರೆ. ಹಿಂದೆಂದೂ ಕಂಡು ಕೇಳರಿಯರ ವಿಚಿತ್ರ ಕಥಾಹಂದರವನ್ನ ಬಿಚ್ಚಿಟ್ಟು ಕನ್ನಡ ಕಲಾಭಿಮಾನಿಗಳನ್ನು ಬೆಚ್ಚಿಬೀಳಿಸಬೇಕು ಅಂತ ಹೊರಟಿರೋ ಅಂಬುಜಾಗೆ ಅರ್ಜುನ್ ಅಲಿಯಾಸ್ ದೀಪಕ್ ಸುಬ್ರಹ್ಮಣ್ಯ ಸಾಥ್ ಕೊಟ್ಟಿದ್ದಾರೆ.

    ಅಂಬುಜ (Ambuja) ಒಂದು ನೈಜ ಘಟನೆಯಾಧಾರಿತ ಚಿತ್ರ. ಇಲ್ಲಿ ಭೀಕರ ಮತ್ತು ರಣಭಯಂಕರ ಮರ್ಡರ್ ಮಿಸ್ಟ್ರಿಯಿದೆ. ಹಾರರ್-ಥ್ರಿಲ್ಲರ್ ಎಲಿಮೆಂಟ್ಸ್‍ಗಳಿದೆ. ಕಾಶೀನಾಥ್ ಡಿ ಮಡಿವಾಳರ್ (Kashinath Madiwalar) ಎಂಬುವವರು ಆ ಜಾಗದಲ್ಲಿ ಹುದುಗಿದ್ದ ಸಾವಿನ ಸತ್ಯವನ್ನ ಹೊರತೆಗೆದಿದ್ದಾರೆ. ಅನ್‍ಟೋಲ್ಡ್ ಕ್ರೈಮ್ ಸ್ಟೋರಿಯನ್ನ ನಿರ್ದೇಶಕ ಶ್ರೀನಿ ಹನುಮಂತರಾಜು ಅವರು ರಿವರ್ಸ್ ಸ್ಕ್ರೀನ್ ಪ್ಲೇ ಮೂಲಕ ತೆರೆಮೇಲೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್, ಟ್ರೈಲರ್ ನೋಡಿದರೆ ಇದೊಂದು ಯೂನಿಕ್ ಕ್ರೈಮ್ ಸ್ಟೋರಿ ಎಂಬುದು ತಿಳಿಯುತ್ತೆ. ಅಂಬುಜ ಚಿತ್ರದ ಮೇಲೆ ಹೊಸದೊಂದು ಭರವಸೆ ಮೂಡುತ್ತೆ, ಪಾತ್ರವರ್ಗ ಗಮನ ಸೆಳೆಯುತ್ತೆ.

    ಹೌದು, ಅಂಬುಜ ಚಿತ್ರದಲ್ಲಿ ಲಂಬಾಣಿ ವೇಷಭೂಷಣದಲ್ಲಿರುವ ರಜನಿ ಹಾಗೂ ಬೇಬಿ ಆಕಾಂಕ್ಷ ಚಿತ್ರಪ್ರೇಮಿಗಳನ್ನ ಚಿಂತನೆಯ ಓರೆಗೆ ಹಚ್ಚಿದ್ದಾರೆ. ಮಾದಕ ಮದನಾರಿಯಾಗಿ ಕಾಡ್ತಿದ್ದ ಶುಭಪುಂಜಾ ಏಕಾಏಕಿ ಚೂರಿ ಕೈಗೆತ್ತಿಕೊಂಡಿರುವುದನ್ನ ನೋಡಿ ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ. ಕಾಮಿಡಿ ಖಿಲಾಡಿಗಳು ಜಿಜಿ ಶುಭ ಕೇರ್ ಟೇಕರ್ ಅನ್ನೋ ಕಾರಣಕ್ಕೂ ಕುತೂಹಲ ಹೆಚ್ಚಿದೆ. ಪದ್ಮಜ ರಾವ್, ಶರಣಯ್ಯ, ಜಗದೀಶ್ ಹಲ್ಕುಡೆ, ನಿಶಾ ಹೆಗ್ಡೆ, ಗುರುದೇವ ನಾಗರಾಜ್, ಸಂದೇಶ್ ಶೆಟ್ಟಿ ಅಜ್ರಿ ತಾರಾಗಣದಲ್ಲಿದ್ದಾರೆ. ಅಪರಾಧ ವಿಭಾಗದ ವರದಿಗಾರನಾಗಿ ಮುಖ್ಯಭೂಮಿಕೆಯಲ್ಲಿರುವ ದೀಪಕ್ ಸುಬ್ರಹ್ಮಣ್ಯ, ಅಂಬುಜ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುವಾಗೆಲ್ಲಾ ನಾನು ಅದನ್ನು ಥ್ರಿಲ್ಲಿಂಗ್ ಪಾಯಿಂಟ್‍ಗೆ ತಂದು ನಿಲ್ಲಿಸ್ತೇನೆ ಅಂತೇಳುವ ಮೂಲಕ ನಿರೀಕ್ಷೆ ಹೆಚ್ಚಿಸಿದ್ದಾರೆ. ಇದನ್ನೂ ಓದಿ:‘ಲೈಗರ್‌’ ನಟಿ ಜೊತೆ ಆದಿತ್ಯ ಕಪೂರ್ ಕಣ್ ಕಣ್ ಸಲಿಗೆ

    ಅಂದ್ಹಾಗೇ, ದೀಪಕ್ ಇಲ್ಲಿತನಕ ಮಾಡಿರುವುದು ಏಳೇ ಸಿನಿಮಾ. ಆದರೆ, ಪ್ರತಿ ಪಾತ್ರವೂ ವಿಭಿನ್ನ ಮತ್ತು ವಿಶಿಷ್ಟ. ನೀವು ಶುದ್ದಿ ಸಿನಿಮಾದಿಂದ ಈಗೀನ ಅಂಬುಜ ಚಿತ್ರವರೆಗೆ ದೀಪಕ್ ಪಾತ್ರಗಳನ್ನ ಗಮನಿಸಿದರೆ ಗೊತ್ತಾಗುತ್ತೆ ಸಿನಿಮಾದಿಂದ ಸಿನಿಮಾಗೆ ಎಷ್ಟು ಪ್ರಯೋಗ ಮಾಡಿದ್ದಾರೆ ಅಂತ. ಸದಾ ಚಾಲೆಂಜಿಂಗ್ ಕ್ಯಾರೆಕ್ಟರ್ ಗಳನ್ನೇ ಆಯ್ಕೆಮಾಡಿಕೊಳ್ಳುವ ದೀಪಕ್, ತಮಗೆ ಸಿಕ್ಕಂತಹ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡ್ತಾರೆ. ಪಾತ್ರಕ್ಕಾಗಿ ಗುರುತೇ ಸಿಗದಷ್ಟು ಬದಲಾಗ್ತಾರೆ. ಅದು ಸೀರಿಯಲ್ ಆದ್ರೂ ಸರೀ ಸಿನಿಮಾ ಆದ್ರೂ ಸರೀ. ತಮ್ಮನ್ನ ಅರಸಿಕೊಂಡು ಬಂದ ಪಾತ್ರಕ್ಕೆ ನೂರಕ್ಕೆ ನೂರಷ್ಟು ನ್ಯಾಯ ಒದಗಿಸಲು ಶ್ರಮಿಸ್ತಾರೆ. ನಟನೆಗೆ ಪಾತ್ರ ಸೀಮಿತವಾಗದೇ ಬರಹಗಾರನಾಗಿ, ಕಿರುಚಿತ್ರ ನಿರ್ದೇಶಕನಾಗಿ ತಮ್ಮನ್ನ ತಾವು ತೊಡಗಿಸಿಕೊಳ್ತಿದ್ದಾರೆ. ಸಿನಿಮಾ, ಸೀರಿಯಲ್ ಜೊತೆಗೆ ರಂಗಭೂಮಿಯಲ್ಲೂ ದೀಪಕ್ ಸಕ್ರಿಯರಾಗಿದ್ದಾರೆ.

    ಸದ್ಯ ಅಂಬುಜ ಚಿತ್ರದಲ್ಲಿ ಲವ್ವರ್ ಬಾಯ್ ಹಾಗೂ ಕ್ರೈಮ್ ರಿಪೋರ್ಟರ್ ಎರಡು ಪಾತ್ರಗಳನ್ನೂ ಪೋಷಿಸಿದ್ದಾರೆ. ರಿಯಲ್ ಇನ್ಸಿಡೆಂಟ್ ಬೇಸ್ಡ್ ಸಿನಿಮಾ ಇದಾಗಿರುವ ಕಾರಣಕ್ಕೆ ಕ್ರೈಮ್ ರಿಪೋರ್ಟಿಂಗ್ ಕುರಿತು ಅಧ್ಯಯನ ಮಾಡಿಯೇ ಪಾತ್ರಕ್ಕೆ ಬಣ್ಣ ಹಚ್ಚಿರುವುದಾಗಿ ಹೇಳಿಕೊಂಡಿದ್ದಾರೆ. ಶುದ್ದಿ, ಅಯನ, ದಿನಚರಿ, ಪಿಂಕಿ ಎಲ್ಲಿ ಸಿನಿಮಾಗಳಲ್ಲಿ ದೀಪಕ್ ಮಿಂಚಿದ್ದಾರೆ. ಲೈಫೋ ಲೈಫೋ, ಸಾರಾಂಶ, ಮಿಸ್ಟರ್ ರಾಣಿ, ಅಂಬುಜ ಚಿತ್ರಗಳ ಬಿಡುಗಡೆಗಾಗಿ ಕಾಯ್ತಿದ್ದಾರೆ. ಇದೇ ಜುಲೈ 21ರಂದು ಅಂಬುಜ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸಾಗಿದೆ. ಕಾಶಿನಾಥ್, ಲೋಕೇಶ್ ಭೈರವ, ಶಿವಪ್ರಕಾಶ್.ಎನ್ ಸಹಯೋಗದಲ್ಲಿ ಅಂಬುಜ ಅದ್ದೂರಿಯಾಗಿ ಮೂಡಿಬಂದಿದೆ. ವಿಜಯ್ ಎಂ ಕುಮಾರ್ ಸಂಕಲನ, ಮುರುಳೀಧರ್ ಎಂ. ಛಾಯಾಗ್ರಹಣ ಚಿತ್ರಕ್ಕಿದ್ದು, ಪ್ರಸನ್ನ ಕುಮಾರ್ ಮ್ಯೂಸಿಕ್ ಮಾಡಿದ್ದಾರೆ. ತ್ಯಾಗರಾಜ್ ಅವ್ರು ಹಿನ್ನಲೆ ಸಂಗೀತ ಒದಗಿಸಿದ್ದಾರೆ. ಲೈಟಿಂಗ್ ಅಂಡ್ ಕಲರ್ ಗ್ರೇಡಿಂಗ್‍ನಲ್ಲಿ ಪ್ರಯೋಗ ಮಾಡಿದ್ದು, ಅಂಬುಜ ಚಿತ್ರ ತೆರೆಮೇಲೆ ವಿಭಿನ್ನವಾಗಿ ಕಾಣಲಿದೆ. ಮಾರ್ಸ್ ಸುರೇಶ್ ಅವ್ರು ರಾಜಾದ್ಯಂತ ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ. ಗ್ರ್ಯಾಂಡ್ ಆಗಿಯೇ ರಿಲೀಸ್ ಮಾಡೋದಕ್ಕೆ ಮುಂದಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಅಂಬುಜ’ ಅದೃಷ್ಟ ಹೊತ್ತು ತರುವ ನಿರೀಕ್ಷೆ, ಸರ್ಜರಿಗೆ ಸೆಡ್ಡು ಹೊಡೆದ ನಟಿ ರಜಿನಿ ಹೇಳಿದ್ದಿಷ್ಟು?

    ‘ಅಂಬುಜ’ ಅದೃಷ್ಟ ಹೊತ್ತು ತರುವ ನಿರೀಕ್ಷೆ, ಸರ್ಜರಿಗೆ ಸೆಡ್ಡು ಹೊಡೆದ ನಟಿ ರಜಿನಿ ಹೇಳಿದ್ದಿಷ್ಟು?

    ಘಾದವಾದ ಪ್ರತಿಭೆಯಿದ್ದರೂ, ಎಷ್ಟೇ ಹಾರ್ಡ್ ವರ್ಕ್ ಮಾಡಿದ್ರೂ ಕೂಡ ಅದೃಷ್ಟ ಅನ್ನೋ ಮೂರಕ್ಷರ ಕೈ ಹಿಡಿಯೋವರೆಗೂ ಕಾಯ್ಲೆಬೇಕು. ಅದ್ರಂತೆ ಕಾಯ್ತಾ, ಕೊನೆಗೂ ಬೆಳ್ಳಿತೆರೆ ಮೇಲೆ ಮಿನುಗೋಕೆ ರೆಡಿಯಾಗಿರುವ ಅಮೃತವರ್ಷಿಣಿ ಖ್ಯಾತಿಯ ರಜಿನಿ (Rajini) , ಅಂಬುಜ (Ambuja) ಅದೃಷ್ಟ ಹೊತ್ತು ತರುವ ನಿರೀಕ್ಷೆಯ ಬಗ್ಗೆ, ಸರ್ಜರಿಗೆ ಸೆಡ್ಡು ಹೊಡೆದು ಬಣ್ಣ ಹಚ್ಚಿದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

    ಅಂಬುಜ ಹಿರಿತೆರೆ ನಟಿಯಾಗಿ ನನ್ನ ಡೆಬ್ಯೂ ಚಿತ್ರ. ಲಂಬಾಣಿ ಹೆಣ್ಣುಮಗಳ ಪಾತ್ರ. ಚೊಚ್ಚಲ ಸಿನಿಮಾದಲ್ಲೇ ಫರ್ಪಾಮೆನ್ಸ್ ಗೆ ಸ್ಕೋಪ್ ಇರುವಂತಹ ರೋಲ್ ಸಿಗ್ತು. ಸಿಕ್ಕಾಪಟ್ಟೆ ಚಾಲೆಂಜಿಂಗ್ ಆಗಿತ್ತು. ಟಿಪಿಕಲ್ ಲಂಬಾಣಿ ಹೆಣ್ಣುಮಗಳಂತೆ ಕಾಣಬೇಕು ಅಂತ ನಿರ್ದೇಶಕರು ಗದಗದ ಕಳಸಾಪುರದ ತಾಂಡಾದಲ್ಲೇ ಲಂಬಾಣಿ ಕಾಸ್ಟ್ಯೂಮ್ ತಯ್ಯಾರು ಮಾಡಿಸಿಕೊಟ್ಟಿದ್ದರು. ಸುಮಾರು 20 ರಿಂದ 25 ಕೆಜಿ ತೂಕದ ಆ ಕಾಸ್ಟ್ಯೂಮ್ ತೊಟ್ಟು ಪರ್ಫಾಮ್ ಮಾಡಿದ್ದೇನೆ. ಐದಾರು ದಿನ ಸಾಂಗ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದೇನೆ. ಇಡೀ ರಾತ್ರಿ ಅಷ್ಟು ಭಾರವಾದ ಉಡುಗೆ ತೊಟ್ಟು ನಟಿಸಿದ್ದು ಕಷ್ಟ ಆದ್ರೂ ಮನಸ್ಸಿಗೆ ಖುಷಿಕೊಟ್ಟಿದೆ. ಹೀಗೆ ಅಂಬುಜ ಸಿನಿಮಾ, ತನ್ನ ಪಾತ್ರದ ಬಗ್ಗೆ ವಿವರಿಸುತ್ತಾ ಹೋದ ನಟಿ ರಜಿನಿ, ಅಪಘಾತ, ಆಪರೇಷನ್ ಕಥೆ ಬಿಚ್ಚಿಟ್ಟು ಅಚ್ಚರಿ ಪಡುವಂತೆ ಮಾಡಿದರು.

    ಅಂಬುಜಾ ಸಿನಿಮಾ ಮಾಡೋದಕ್ಕೂ ಮುನ್ನ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದೆ. ಆಗ ಸಂಭವಿಸಿದಂತಹ ಅಪಘಾತದಿಂದ ಎರಡು ಕಾಲುಗಳಿಗೆ ಬಲವಾದ ಹೊಡೆತ ಬಿದ್ದಿತ್ತು. ಕೊನೆಗೆ ಸರ್ಜರಿ ಮಾಡಿಸಿಕೊಂಡು ಮೂರು ತಿಂಗಳ‌ ಕಾಲ ಬೆಡ್ ರೆಸ್ಟ್ ನಲ್ಲಿದ್ದೆ.‌ ಆಗ ವೈದ್ಯರು ಯಾವುದೇ ಕಾರಣಕ್ಕೂ ಇನ್ಮೇಲೆ ರಿಸ್ಕಿ ಡ್ಯಾನ್ಸ್ ಮೂಮೆಂಟ್ಸ್ ಮಾಡಬೇಡಿ‌ ಅಂತ ಸಲಹೆ ನೀಡಿದ್ರಂತೆ. ಆದರೆ, ಅಂಬುಜಾ ಸಿನಿಮಾದಲ್ಲಿ ಡ್ಯಾನ್ಸ್ ನಂಬರ್ ಸಾಂಗ್ ಇದ್ದಿದ್ದರಿಂದ ಮೂಮೆಂಟ್ಸ್ ಮಾಡ್ಲೆಬೇಕಾಗಿ ಬಂತು. ಆಗ ಅರಸಿಕೊಂಡು ಬಂದ ಅವಕಾಶವನ್ನ ಎಡಗೈನಲ್ಲಿ ಸರಿಸಲು ಒಲ್ಲೇ ಎನ್ನದ ರಜಿನಿ,  ಆತ್ಮವಿಶ್ವಾಸವ ತುಂಬಿಕೊಂಡು ಡ್ಯಾನ್ಸ್ ಫ್ಲೋರ್ ಗೆ ಧುಮ್ಕಿದ್ದರು. ಫಿಲ್ಮ್‌ಟೀಮ್ ಮಾತ್ರವಲ್ಲ ವೈದ್ಯ ಲೋಕವೇ ಅಚ್ಚರಿ ಪಡುವಂತೆ ಡ್ಯಾನ್ಸ್ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಳ್ಳಿ ತೆರೆಮೇಲೆ ರಜಿನಿ ಡ್ಯಾನ್ಸ್ ಧಮಾಕವನ್ನ ಕಣ್ತುಂಬಿಕೊಳ್ಳಬಹುದು.

    ರಜಿನಿಯವರ ಅಭಿನಯ ಎಂತಹದ್ದು ಅನ್ನೋದು ಕಿರುತೆರೆ ಪ್ರೇಕ್ಷಕರಿಗೆ ಗೊತ್ತಿದೆ. ಮೂಲತಃ ತುಮಕೂರಿನವರಾದ ರಜಿನಿ, ಅಮೃತವರ್ಷಿಣಿ ಸೀರಿಯಲ್ ಮೂಲಕ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿಕೊಟ್ಟು ಕರು‌ನಾಡಲ್ಲಿ ಮೆರವಣಿಗೆ ಹೊರಟರು. ಆದರೆ, ಕಳೆದ 12 ವರ್ಷದ ಸಿನಿಜರ್ನಿಯಲ್ಲಿ ರಜಿನಿಗೆ ಬೆಳ್ಳಿಭೂಮಿ ಮೇಲೆ ದಿಬ್ಬಣ ಹೊರಡುವ ಚಾನ್ಸ್ ಸಿಕ್ಕಿತ್ತಾದ್ರೂ ಕಾಲ‌ ಕೂಡಿಬಂದಿರಲಿಲ್ಲ. ಫೈನಲೀ‌, ಅಂಬುಜ ಸಿನಿಮಾದಿಂದ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ನನ್ನ ಪಾತ್ರವನ್ನ ಪ್ರೇಕ್ಷಕರು ಮೆಚ್ಚಿಕೊಳ್ತಾರೆ, ಈ ಸಿನಿಮಾದಿಂದ ನನ್ನ ಕರಿಯರ್ ಬದಲಾಗುತ್ತೆ. ಒಳ್ಳೊಳ್ಳೆ ಪಾತ್ರಗಳು ತನ್ನನ್ನು ಅರಸಿಕೊಂಡು ಬರುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಅವರ ಆಸೆಯಂತೆ ಅಂಬುಜ ಪಾತ್ರ ಅವರ ವೃತ್ತಿಬದುಕಿಗೆ ತಿರುವು ನೀಡಲಿ.

    ಅಂದ್ಹಾಗೇ, ಅಂಬುಜ ಒಂದು ಮಹಿಳಾ ಪ್ರಧಾನ ಸಿನಿಮಾ. ಕೆಲವು ದಿನಗಳ ನಂತರ ಹೆಸರಲ್ಲಿ‌ ಕನ್ನಡದಲ್ಲೊಂದು ಸಿನಿಮಾ ಮಾಡಿ‌ ಭರವಸೆ ಮೂಡಿಸಿದ್ದ ನಿರ್ದೇಶಕ ಶ್ರೀನಿ ಹನುಮಂತ ರಾಜು (Srini Hanuntharaju) ಈಗ ಅಂಬುಜ  ಮೂಲಕ ಮತ್ತೆ ಬಂದಿದ್ದಾರೆ.  ಮರ್ಡರ್ ಮಿಸ್ಟ್ರಿ, ಹಾರರ್, ಥ್ರಿಲ್ಲರ್ ಎಲಿಮೆಂಟ್ಸ್ ಗಳನ್ನೆಲ್ಲಾ ಸೇರಿಸಿ ಪಕ್ಕಾ ಕಮರ್ಷಿಯಲ್ ಸಿನಿಮಾ ಸಿದ್ದಪಡಿಸಿದ್ದಾರೆ. ಹಿಂದೆಂದೂ ಕಂಡು ಕೇಳರಿಯದ ಬೆಚ್ಚಿಬೀಳಿಸುವ ವಿಚಿತ್ರ ಕಥಾಹಂದರ ಎಣೆದಿರುವ ಕಾಶಿನಾಥ್ ಡಿ‌ ಮಡಿವಾಳರ್ ಅವರು ನಿರ್ಮಾಣದ ಜವಬ್ದಾರಿ ಹೊತ್ತಿದ್ದಾರೆ. ಇವರಿಗೆ ಲೋಕೇಶ್ ಭೈರವ, ಶಿವಪ್ರಕಾಶ್. ಎನ್  ಕೈ ಜೋಡಿಸಿದ್ದಾರೆ. ನಟಿ ಶುಭಪುಂಜಾ, ದೀಪಕ್ ಸುಬ್ರಹ್ಮಣ್ಯ, ಪದ್ಮಜ ರಾವ್, ಗೋವಿಂದೇಗೌಡ, ಬೇಬಿ ಆಕಾಂಕ್ಷ, ಶರಣಯ್ಯ, ಜಗದೀಶ್ ಹಲ್ಕುಡೆ, ನಿಶಾಹೆಗ್ಡೆ, ಗುರುದೇವ ನಾಗರಾಜ್, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವು ಕಲಾವಿದರು ಪಾತ್ರವರ್ಗದಲ್ಲಿದ್ದಾರೆ. ಈಗಾಗಲೇ ಟೀಸರ್, ಸಾಂಗ್ಸ್ ಮೂಲಕ ಸೌಂಡ್ ಮಾಡಿರುವ ಅಂಬುಜ ಚಿತ್ರ ಜುಲೈ 21ರಂದು ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಚಿತ್ರ ಕಥಾಹಂದರದ ಜೊತೆ ಬೆಚ್ಚಿ ಬೀಳಿಸಲು ಬರ್ತಿದ್ದಾಳೆ ಅಂಬುಜ : ನಿರ್ದೇಶಕ ಶ್ರೀನಿ

    ವಿಚಿತ್ರ ಕಥಾಹಂದರದ ಜೊತೆ ಬೆಚ್ಚಿ ಬೀಳಿಸಲು ಬರ್ತಿದ್ದಾಳೆ ಅಂಬುಜ : ನಿರ್ದೇಶಕ ಶ್ರೀನಿ

    ನೀವೆಂದೂ ಕಂಡು ಕೇಳರಿಯದ ವಿಚಿತ್ರ ಕಥಾಹಂದರದ ಜೊತೆ ನಿಮ್ಮನ್ನೆಲ್ಲಾ ಬೆಚ್ಚಿ ಬೀಳಿಸಲು ಬರ್ತಿದ್ದಾಳೆ ಅಂಬುಜ, ಶ್ರೀನಿ ಹನುಮಂತರಾಜು ಹೊಸ ಸಾಹಸ, ಚಿತ್ರ ಪ್ರೇಮಿಗಳನ್ನು ಬೆರಗುಗೊಳಿಸಲಿದೆ ಎತ್ತಿನ ಭುಜ!

    ಕನ್ನಡ ಚಿತ್ರರಂಗದಲ್ಲಿ ಕ್ರೈಮ್ ಸ್ಟೋರಿ ಕುರಿತಾದ ನೂರೆಂಟು ಸಿನಿಮಾಗಳು ಬಂದಿವೆ. ಇದೀಗ ಅನ್‍ಟೋಲ್ಡ್ ಕ್ರೈಮ್ ಸ್ಟೋರಿ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಲು ಅಂಬುಜ (Ambuja) ರೆಡಿಯಾಗಿದ್ದಾಳೆ. ನೈಜ ಘಟನೆಯನ್ನ ಆಧಾರವಾಗಿಟ್ಟುಕೊಂಡು ನಿರ್ದೇಶಕ ಶ್ರೀನಿ ಹನುಮಂತರಾಜು ಅಂಬುಜ ಸಿನಿಮಾವನ್ನ ತೆರೆಮೇಲೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲ ನೋಟದಲ್ಲೇ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿ,  ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಭರವಸೆ ಹುಟ್ಟಿಸಿರುವ ಅಂಬುಜ, ಅಂಬಾರಿ ಮೇಲೆ ಕೂತು ಬೆಳ್ಳಿಭೂಮಿ ಮೇಲೆ ಮೆರವಣಿಗೆ ಹೊರಡುವ ಸಮಯ ಸನ್ನಿಹಿತವಾಗಿದೆ. ಇದೇ ಹೊತ್ತಿಗೆ ಎತ್ತಿನ ಭುಜದ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ನಿರ್ದೇಶಕ ಶ್ರೀನಿ (Srini Hanumantharaju) ಹಲವು ನಿಗೂಢಗಳನ್ನು ಹೊರಹಾಕಿ ಕುತೂಹಲ ಕೆರಳಿಸಿದ್ದಾರೆ.

    ಎತ್ತಿನ ಭುಜ ಚಿಕ್ಕಮಂಗಳೂರಿನ ಬಳಿಯಿರುವ ಅತೀ ಎತ್ತರದ ಬೆಟ್ಟ. ಈ ಬೆಟ್ಟದ ಸುತ್ತಮುತ್ತ ಕೆಲವು ಸಿನಿಮಾ ಮಂದಿ ಶೂಟಿಂಗ್ ಮಾಡಿದ್ದಾರೆ. ಆದರೆ, ಬರೋಬ್ಬರಿ ಮೂರು ಕಿಲೋಮೀಟರ್ ಗಳಷ್ಟು ಎತ್ತರವಿರುವ ಎತ್ತಿನ ಭುಜ ಬೆಟ್ಟವನ್ನೇರುವ ಸಾಹಸವನ್ನು ಯಾರೊಬ್ಬರು ಮಾಡಿರಲಿಲ್ಲ. ಇದೇ ಮೊದಲ ಭಾರಿಗೆ ಅಂಬುಜ ಸಿನಿಮಾ ತಂಡ ಎತ್ತಿನ ಭುಜದ ತುತ್ತ ತುದಿಯನ್ನೇರಿ ಹಾಡೊಂದನ್ನು ಚಿತ್ರೀಕರಿಸಿದೆ. ಸ್ಯಾಂಡಲ್‍ವುಡ್‍ನ ಸಪೌಷ್ಠಿಕ ಸುಂದರಿ ಶುಭಪುಂಜಾ ಹಾಗೂ ದೀಪಕ್ ಸುಬ್ರಮಣ್ಯ ಕಾಂಬಿನೇಷನ್‍ನಲ್ಲಿ ಈ ಹಾಡು ಸುಂದರವಾಗಿ ಮೂಡಿಬಂದಿದೆ.

    ಹೀಗೆ ಎತ್ತಿನ ಭುಜದ ಬೆಟ್ಟದಲ್ಲಿ ಶೂಟಿಂಗ್ ಮಾಡಿ ಹೊಸದೊಂದು ದಾಖಲೆ ಬರೆದ ಚಿತ್ರತಂಡ, `ಮಗು ತಾಯಿಗೆ ಲಾಲಿ ಹಾಡುವ’ ಹಾಡೊಂದನ್ನು ರಚನೆ ಮಾಡುವುದರ ಮೂಲಕ ಗಂಧದಗುಡಿಯಲ್ಲಿ ಇತಿಹಾಸ ನಿರ್ಮಿಸಿದೆ. ಚಿತ್ರದ ನಿರ್ಮಾಪಕರಾದ ಕಾಶಿನಾಥ್ ಅವ್ರು ಸಾಹಿತ್ಯ ಬರೆದಿರುವ, ಪ್ರಸನ್ನ ಕುಮಾರ್ ಸಂಗೀತ ಸಂಯೋಜಿಸಿರುವ ಈ ಹಾಡು, ಈಗಾಗಲೇ ಯೂಟ್ಯೂಬ್‍ನಲ್ಲಿ ರಿಲೀಸ್ ಆಗಿದ್ದು, ಕನ್ನಡ ಕಲಾಭಿಮಾನಿಗಳಿಂದ ಪ್ರಶಂಸೆ ಗಿಟ್ಟಿಸಿಕೊಂಡಿದೆ. ತಾಯಿ ಪಾತ್ರದಲ್ಲಿ ಅಮೃತ ವರ್ಷಿಣಿ ಖ್ಯಾತಿಯ ರಜಿನಿ ಕಾಣಿಸಿಕೊಂಡಿದ್ದು, ಮಗಳ ಪಾತ್ರದಲ್ಲಿ ಬೇಬಿ ಆಕಾಂಕ್ಷ ಮಿಂಚಿದ್ದಾಳೆ. ಇಬ್ಬರು ಲಂಬಾಣಿ ವೇಷಭೂಷಣ ತೊಟ್ಟು ಲಾಲಿ ಹಾಡಿಗೆ ಮೆರಗು ತುಂಬಿದ್ದಾರೆ.

    ಅಂಬುಜ ಒಂದು ಮಹಿಳಾ ಪ್ರಧಾನ ಚಿತ್ರ. ಇಲ್ಲಿ ಅಮೃತ ವರ್ಷಿಣಿ ಖ್ಯಾತಿಯ ರಜಿನಿ (Rajini)ಹಾಗೂ ಶುಭಾ ಪುಂಜಾ (Shubha Punja) ಇಬ್ಬರು ಮುಖ್ಯಭೂಮಿಕೆಯಲ್ಲಿದ್ದಾರೆ. ಕ್ರೈಮ್ ರಿಪೋರ್ಟರ್ ಪಾತ್ರದಲ್ಲಿ ಶುಭ ಪುಂಜಾ ಕಾಣಸಿಗ್ತಾರೆ. ಪದ್ಮಜ ರಾವ್, ದೀಪಕ್ ಸುಬ್ರಮಣ್ಯ, ಗೋವಿಂದೇಗೌಡ, ಶರಣಯ್ಯ, ಜಗದೀಶ್ ಹಲ್ಕುಡೆ, ನಿಶಾ ಹೆಗ್ಡೆ, ಗುರುದೇವ ನಾಗರಾಜ್,  ಬೇಬಿ ಆಕಾಂಕ್ಷ, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಈ ಹಿಂದೆ ನಿರ್ದೇಶಕ ಶ್ರೀನಿಯವರು ‘ಕೆಲವು ದಿನಗಳ ನಂತರ’ ಹೆಸ್ರಲ್ಲೊಂದು ಸಿನಿಮಾ ಮಾಡಿದ್ದರು. ಹಾರರ್ ಕಥೆ ಮೂಲಕ ಕಣಕ್ಕಿಳಿದಿದ್ದ ಇವ್ರು ಪ್ರೇಕ್ಷಕ ಮಹಾಷಯರನ್ನ ಸೀಟಿನ ತುದಿಗೆ ತಂದು ಕೂರಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಅಂಬುಜ ಚಿತ್ರದ ಮೂಲಕ ಕಂಬ್ಯಾಕ್ ಆಗಿದ್ದಾರೆ. ಮರ್ಡರ್ ಮಿಸ್ಟ್ರಿ, ಹಾರರ್, ಥ್ರಿಲ್ಲರ್ ಎಲಿಮೆಂಟ್ಸ್ ಒಳಗೊಂಡಿರುವ ಅಂಬುಜ ಚಿತ್ರವನ್ನ ಪ್ರೇಕ್ಷಕರ ಮಡಿಲಿಗೆ ಹಾಕೋದಕ್ಕೆ ಹೊರಟಿದ್ದಾರೆ. ಈ ಕುರಿತು ಮಾತನಾಡಿದ ಡೈರೆಕ್ಟರ್ ಶ್ರೀನಿಯವರು, ಹಾರರ್ ದೃಶ್ಯಗಳ ಚಿತ್ರೀಕರಣದ ಸಮಯದಲ್ಲಿ ಕ್ಯಾಮರಾ ಸಡನ್ನಾಗಿ ಆಫ್ ಆಗ್ತಿತ್ತು, ಸಿನಿಮಾ ಟೀಮ್‍ನ ಸದಸ್ಯರಿಗೆ ಆರೋಗ್ಯ ಹದಗೆಡುತ್ತಿತ್ತು ಅಂತೇಳಿ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ಕಾರಣ ನೆಗಟೀವ್ ಎನರ್ಜಿನಾ ಅನ್ನೋದು ಪ್ರಶ್ನೆ.

    ಅಂದ್ಹಾಗೇ, ಬೆಂಗಳೂರು, ಚಿಕ್ಕಮಂಗಳೂರು, ಗದಗದಲ್ಲಿ ಅಂಬುಜ ಸಿನಿಮಾ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಒದಗಿಸುವುದರ ಜೊತೆಗೆ ನಿರ್ಮಾಣದ ಜವಬ್ದಾರಿ ಹೊತ್ತ ಕಾಶಿನಾಥ್ ಡಿ ಮಡಿವಾಳರ್ (Kashinath Madiwalar) ಅವರು ಎಸ್.ಕೆ.ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಅಂಬುಜ ಚಿತ್ರವನ್ನ ತೆರೆಗೆ ತರುತ್ತಿದ್ದಾರೆ. ಲೋಕೇಶ್ ಭೈರವ, ಶಿವಪ್ರಕಾಶ್. ಎನ್ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣಗೊಂಡಿದ್ದು ವಿಜಯ್ ಎಂ ಕುಮಾರ್ ಸಂಕಲನ, ಮುರುಳೀಧರ್ ಎಂ. ಛಾಯಾಗ್ರಹಣ, ಪ್ರಸನ್ನ ಕುಮಾರ್ ಮ್ಯೂಸಿಕ್, ತ್ಯಾಗರಾಜ್ ಹಿನ್ನಲೆ ಸಂಗೀತ ಚಿತ್ರಕ್ಕಿದೆ. ಆಧುನಿಕ ತಂತ್ರಜ್ಞಾನವನ್ನ ಬಳಸಿಕೊಂಡು ಲೈಟಿಂಗ್ ಅಂಡ್ ಕಲರ್ ಗ್ರೇಡಿಂಗ್‍ನಲ್ಲಿ ಹೊಸತನ ತೋರಿಸಿದ್ದಾರೆ.  ಜುಲೈ 21ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆಯಾಗಲಿದ್ದು, ಮಾರ್ಸ್  ಸುರೇಶ್ ವಿತರಣೆ ಜವವ್ದಾರಿ ಹೊತ್ತಿದ್ದಾರೆ. ಎನಿವೇ ನಿರ್ದೇಶಕರ ಡೆಬ್ಯೂ ಚಿತ್ರ ಕೆಲವು ದಿನಗಳ ನಂತರ ಕಮಾಯಿ ಮಾಡಿದಂತೆ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಗೆ ಡಬ್ ಆದಂತೆ ಈ ಸಿನಿಮಾವೂ ಪರಭಾಷೆಗೆ ಹೋಗಲಿ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಅಂಬುಜ’ ಕಾಶಿನಾಥ್ ಕೈ ಹಿಡೀತಾಳಾ?:  ಇಲ್ಲಿದೆ `ಅಂಬುಜ’ ಅನ್ನದಾತನ ಅಂತರಾಳ

    `ಅಂಬುಜ’ ಕಾಶಿನಾಥ್ ಕೈ ಹಿಡೀತಾಳಾ?: ಇಲ್ಲಿದೆ `ಅಂಬುಜ’ ಅನ್ನದಾತನ ಅಂತರಾಳ

    ನ್ನಡ ಚಿತ್ರರಂಗ ಕಂಡ ಅಪರೂಪದ ನಟ ಮತ್ತು ನಿರ್ದೇಶಕ ಕಾಶೀನಾಥ್ ಅವರ ಬಗ್ಗೆ ನಿಮಗೆಲ್ಲ ಗೊತ್ತೆಯಿದೆ. ಇದೀಗ ಅದೇ ಹೆಸರಿನ ನಿರ್ಮಾಪಕರೊಬ್ಬರು ಗಂಧದಗುಡಿ ಪ್ರವೇಶ ಮಾಡಿದ್ದಾರೆ. ಅಂಬುಜ ಹೆಸರಿನ ಚಿತ್ರಕ್ಕೆ ಕಥೆ ಬರೆದು, ಸಾಹಿತ್ಯ ರಚಿಸುವುದರ ಜೊತೆಗೆ ಬಂಡವಾಳ ಸುರಿದಿದ್ದಾರೆ. ಅಪರಿಚಿತ, ಅನುಭವ, ಅನಂತನ ಅವಾಂತರ ಸೇರಿದಂತೆ ಅ ಅಕ್ಷರದಿಂದ ಶುರುವಾಗುವ ಸಿನಿಮಾಗಳು ನಟ, ನಿರ್ದೇಶಕ ಕಾಶಿನಾಥ್ ಅವ್ರನ್ನ ಕೈ ಹಿಡಿದಿದ್ವು. ಅದರಂತೆ, ಅ ಅಕ್ಷರದ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿರುವ ಕಾಶಿನಾಥ್ ಡಿ ಮಡಿವಾಳರ್ ಅವ್ರನ್ನ ಅಂಬುಜ (Ambuja) ಚಿತ್ರ ಕೈ ಹಿಡಿಯುತ್ತಾ? ಅನ್ನದಾತನಿಗೆ ಈ ಚಿತ್ರ ವರವಾಗುತ್ತಾ? ಹೀಗೊಂದು ಕುತೂಹಲದ ಪ್ರಶ್ನೆ ಕೆಲವರಲ್ಲಿ ಮೂಡಿದೆ. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್ (Kashinath Madiwalar) ತಮ್ಮ ಅಂತರಾಳ ಬಿಚ್ಚಿಟ್ಟಿದ್ದಾರೆ.

    ಅಂಬುಜ ನನ್ನ ನಿರ್ಮಾಣದ ಮೊದಲ ಚಿತ್ರ. ಬಿಜಾಪುರ ಮೂಲದ ತಾಳಿಕೋಟೆ ನಮ್ಮ ನೆಲೆಮೂಲ. ಬಾಲ್ಯದಿಂದಲೂ ಸಿನಿಮಾ ಹಾಗೂ ಸಾಹಿತ್ಯದಲ್ಲಿ ಆಸಕ್ತಿಯಿತ್ತು. ಬಿಡುವಿದ್ದಾಗಲೆಲ್ಲಾ ಬರವಣಿಗೆಯಲ್ಲಿ ತೊಡಗಿಸಿಕೊಳ್ತಿದ್ದೆ. ಆದರೆ, ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ನಿರತನಾಗಿದ್ದರಿಂದ ಸಿನಿಮಾಲೋಕಕ್ಕೆ ಎಂಟ್ರಿಕೊಡಲಿಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೂ ಕಾಲ ಕೂಡಿಬಂದಿದ್ದು ನಾನು ಕೆತ್ತಿದ ಕಥೆ ಶಿಲೆಯಾಗಿ ಬೆಳ್ಳಿಭೂಮಿ ಮೇಲೆ ಮೆರವಣಿಗೆ ಹೊರಟಿದೆ. ಇದೊಂದು ನೈಜ ಘಟನೆಯಾಧರಿತ ಚಿತ್ರ. ಹಿಂದೆಂದೂ ಕೂಡ ನೀವು ಇಂತಹದ್ದೊಂದು ಕಥೆಯುಳ್ಳ ಸಿನಿಮಾವನ್ನ ಬಿಗ್ಸ್ಕ್ರೀನ್ ಮೇಲೆ ನೋಡಿರಲಿಕ್ಕೆ ಸಾಧ್ಯವಿಲ್ಲ. ಫಾರ್ ದಿ ಫಸ್ಟ್ ಟೈಮ್ ನಾನೇ ಈ ಅನ್ಟೋಲ್ಡ್ ಕ್ರೈಮ್ ಸ್ಟೋರಿಯನ್ನ ಕರುನಾಡ ಜನತೆಗೆ ತಿಳಿಸಲಿಕ್ಕೆ ಹೊರಟಿದ್ದೇನೆ. ಲವ್ವು, ಸೆಂಟಿಮೆಂಟ್, ಹಾರರ್, ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಪ್ಲಸ್ ಕಾಮಿಡಿ ಎಲಿಮೆಂಟ್ಸ್ ಚಿತ್ರದಲ್ಲಿದ್ದು, ನಿರ್ದೇಶಕ ಶ್ರೀನಿ ಹನುಮಂತರಾಜು ಅದ್ಭುತವಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ. ಶುಭ ಪೂಂಜಾ (Shubha Poonja), ರಜಿನಿ (Rajini), ಆಕಾಂಕ್ಷ, ಗೋವಿಂದೇಗೌಡ, ದೀಪಕ್ ಸುಬ್ರಹ್ಮಣ್ಯ, ಪದ್ಮಜರಾವ್, ಶರಣಯ್ಯ, ಜಗದೀಶ್ ಹಲ್ಕುಡೆ, ನಿಶಾಹೆಗ್ಡೆ, ಗುರುದೇವ ನಾಗರಾಜ್, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ.

    ಇತ್ತೀಚಿಗಿನ ದಿನಗಳಲ್ಲಿ ಜನ ಥಿಯೇಟರ್ ಗೆ ಬರೋದು ಕಡಿಮೆಯಾಗಿದೆ. ಅದಕ್ಕೆ ಕಾರಣ ನೂರೆಂಟು ಇರಬಹುದು ಆದರೆ ಸಿನಿಮಾಪ್ರೇಮಿಗಳು ದೊಡ್ಡಮನಸ್ಸು ಮಾಡಿ ಚಿತ್ರಮಂದಿರಕ್ಕೆ ಬರಬೇಕು. ಒಂದೇ ಒಂದು ಭಾರಿ ಪಿಕ್ಚರ್ ಟಾಕೀಸ್ಗೆ ಬಂದು ಸಿನಿಮಾ ನೋಡಿದರೆ, ಗ್ಯಾರಂಟಿ ನಮ್ಮ `ಅಂಬುಜ’ ಚಿತ್ರ ಅವರಿಗೆ ಇಷ್ಟವಾಗುತ್ತೆ. ಅದಕ್ಕೆ ನಾನು ಶ್ಯೂರಿಟಿ ಕೊಡ್ತೀನಿ ಎನ್ನುತ್ತಾರೆ ನಿರ್ಮಾಪಕರು. ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸ ಆಗಲ್ಲ. ಮನರಂಜನೆಗೆ ನಮ್ಮ ಚಿತ್ರದಲ್ಲಿ ಬರ ಇಲ್ಲ. ಎಂಟರ್ ಟೈನ್ಮೆಂಟ್ ಜೊತೆಗೆ ಸಂದೇಶ ಕೂಡ ಅಡಗಿದ್ದು, ನಮ್ಮ ಸುತ್ತಮುತ್ತ ಈ ರೀತಿಯ ಘಟನೆಗಳು ನಡೆಯುತ್ತಿದೆಯಾ ಅಂತ ಪ್ರೇಕ್ಷಕರು ಬೆಚ್ಚಿಬೀಳೋದು, ದಿಗ್ದಿಗ್ಭ್ರಾಂತಗೊಳ್ಳೋದು ಮಾತ್ರ ನೂರಕ್ಕೆ ನೂರರಷ್ಟು ಸತ್ಯ ಎನ್ನುತ್ತಾರೆ ನಿರ್ಮಾಪಕ ಕಾಶಿನಾಥ್. ಇದನ್ನೂ ಓದಿ:ಕೊನೆಗೂ ಮದುವೆ ಬಗ್ಗೆ ಸಿಕ್ರೇಟ್ ಬಿಟ್ಟುಕೊಟ್ಟ ವಿಜಯ್ ದೇವರಕೊಂಡ

    ಈಗಾಗಲೇ ರಿಲೀಸ್ ಆಗಿರುವ ಟೀಸರ್, ಹಾಗೂ ಟ್ರೇಲರ್ ಅಂಬುಜ ಚಿತ್ರದ ಮೇಲೆ ನಿರೀಕ್ಷೆ ಹುಟ್ಟಿಸಿರೋದಂತೂ ಸತ್ಯ. ರಜನಿ ಹಾಗೂ ಬೇಬಿ ಆಕಾಂಕ್ಷಾಳ ಲಂಬಾಣಿ ವೇಷಭೂಷಣ. ಸರಣಿ ಕೊಲೆ, ಆ ಕೊಲೆ ಹಿಂದಿರೋದು ಮೆಡಿಕಲ್ ಮಾಫಿಯಾನಾ ಅಥವಾ ಸೈಕಲಾಜಿಕಲ್ ಡಿಸಾರ್ಡರ್ ಇರುವ ವ್ಯಕ್ತಿಯಾ ಎನ್ನುವ ಸಂಶಯ. ಕಾವಿ ತೊಟ್ಟಿರುವ ವ್ಯಕ್ತಿ, ಕಾಳಿರೂಪವೆತ್ತಿ ಕೆಂಡಕಾರುವ ಮಹಿಳೆ ಹೀಗೆ ಹಲವು ಪಾತ್ರಗಳು ಅಂಬುಜ ಕಡೆ ಕಣ್ಣರಳಿಸಿ ನೋಡುವಂತೆ ಮಾಡಿವೆ. ಬೆಂಗಳೂರು, ಚಿಕ್ಕಮಂಗಳೂರು, ಗದಗ ಭಾಗದಲ್ಲಿ ಚಿತ್ರೀಕರಣ ನಡೆದಿದ್ದು, ಎತ್ತಿನ ಭುಜ ಬೆಟ್ಟದ ಮೇಲೆ ಹಾಡೊಂದನ್ನ ಕ್ಯಾಪ್ಚರ್ ಮಾಡಿಕೊಳ್ಳುವ ಮೂಲಕ ಅಂಬುಜ ಚಿತ್ರತಂಡ ದಾಖಲೆ ಮಾಡಿದೆ. ಮಗಳು ಅಮ್ಮನಿಗಾಗಿ ಲಾಲಿ ಹಾಡುವ ಗೀತೆ ಸ್ಯಾಂಡಲ್ವುಡ್ ಅಂಗಳದಲ್ಲಿ ಚರಿತ್ರೆ ಸೃಷ್ಟಿಸಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ನಿರ್ಮಾಪಕ ಕಾಶಿನಾಥ್ ಅವರೇ ಸಾಹಿತ್ಯ ರಚಿಸಿದ್ದಾರೆ. ಪ್ರಸನ್ನ ಕುಮಾರ್ ಕ್ಯಾಚಿ ಟ್ಯೂನ್ ಕಂಪೋಸ್ ಮಾಡಿದ್ದು, ತ್ಯಾಗರಾಜ್ ಹಿನ್ನಲೆ ಸಂಗೀತ ಒದಗಿಸಿದ್ದಾರೆ. ಮುರುಲೀಧರ್ ಎನ್ ಕ್ಯಾಮೆರಾ ಕೈಚಳಕ, ವಿಜಯ್ ಎಂ. ಕುಮಾರ್ ಸಂಕಲನ `ಅಂಬುಜಾ’ನ ಅದ್ಭುತವನ್ನಾಗಿಸಿದೆ.

    ಅಂದ್ಹಾಗೇ, ನಿರ್ಮಾಪಕ ಕಾಶಿನಾಥ್ ಅವರು ದುಡ್ಡು ಮಾಡಬೇಕು ಅಂತ ಚಿತ್ರರಂಗಕ್ಕೆ ಬಂದಿಲ್ಲ. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಇವರು, ಎಲೆಕ್ಟ್ರಿಕಲ್ ಅಂಡ್ ಮೆಕ್ಯಾನಿಕಲ್ ಇಂಡಸ್ಟ್ರಿಯಲ್ಲಿ `ಎಸ್ಕೆ ಹೈವೋಲ್ಟೇಜ್ ಎಕ್ವಿಪ್ಮೆಂಟ್, ಎಸ್ ಕೆ ಗ್ರೂಪ್ಸ್, ಪಿಎಸ್ಕೆ, ವಿಎಸ್ಕೆ ಕಂಪೆನಿಗಳನ್ನ ಕಟ್ಟಿ ಬೆಳೆಸಿದ್ದಾರೆ. ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಈಗ ಎಸ್ಕೆ ಸಿನಿಮಾಸ್ ಬ್ಯಾನರ್ ಅಡಿ ಅಂಬುಜ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಹನಿರ್ಮಾಣದಲ್ಲಿ ಲೋಕೇಶ್ ಭೈರವ, ಶಿವಪ್ರಕಾಶ್ ಕೈ ಜೋಡಿಸಿದ್ದಾರೆ. ಮಾರ್ಸ್ ಸುರೇಶ್ ಅವರು ವಿತರಣೆ ಜವಾಬ್ದಾರಿ ಹೊತ್ತಿದ್ದು, ಜುಲೈ 21ರಂದು ಸುಮಾರು 70 ಚಿತ್ರಮಂದಿರಗಳಲ್ಲಿ ಅಂಬುಜಾನ ಬಿಡುಗಡೆ ಮಾಡ್ತಿದ್ದಾರೆ. ಅಂಬುಜ ಕೈ ಹಿಡಿದರೆ ಹತ್ತಾರು ಸಿನಿಮಾ ನಿರ್ಮಿಸುವ ಕನಸು ಕಂಡಿದ್ದೇನೆ. ಕನ್ನಡ ಕಲಾಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡುತ್ತಾ, ಬಣ್ಣದ ಲೋಕವನ್ನ ನಂಬಿ ಬದುಕುತ್ತಿರುವವರಿಗೆ ಕೆಲಸ ಕೊಡುವ ಅಭಿಲಾಷೆ ಹೊಂದಿರುವುದಾಗಿ ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್ ಹೇಳಿಕೊಂಡಿದ್ದಾರೆ. ಅವರಿಗೆ ಒಳ್ಳೆದಾಗಲಿ, ಅಂಬುಜ ಚಿತ್ರ ಅನ್ನದಾತ ಕಾಶಿನಾಥ್ ಅವರ ಕೈಹಿಡಿಯಲಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]