Tag: ರಘು

  • ರೀಲ್ ಹುಡ್ಗನ ಜೊತೆಗೆ ರಿಯಲ್ ಆಗಿ ಸಪ್ತಪದಿ ತುಳಿಯಲಿದ್ದಾರೆ ಕುಲವಧು ಖ್ಯಾತಿಯ ವಚನಾ

    ರೀಲ್ ಹುಡ್ಗನ ಜೊತೆಗೆ ರಿಯಲ್ ಆಗಿ ಸಪ್ತಪದಿ ತುಳಿಯಲಿದ್ದಾರೆ ಕುಲವಧು ಖ್ಯಾತಿಯ ವಚನಾ

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಿರುತೆರೆ ಮತ್ತು ಬೆಳ್ಳಿತೆರೆಯ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ‘ಕುಲವಧು’ ಧಾರಾವಾಹಿಯ ವಚನಾ ಖ್ಯಾತಿಯ ಅಮೃತಾ ಸೀರಿಯಲ್ ಹುಡುಗನ ಜೊತೆಗೆ ಮದುವೆಯಾಗುತ್ತಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯಲ್ಲಿ ಅಮೃತಾ ಅವರು, ವಚನಾ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಈಗ ಕಿರುತೆರೆಯಲ್ಲಿ ಅಭಿನಯಿಸಿದ್ದ ನಟ ರಘು ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ರಘು ಮತ್ತು ಅಮೃತಾ ಇತ್ತೀಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೇ ವರ್ಷ ಮೇ 12 ಮತ್ತು 13 ರಂದು ಮದುವೆಯಾಗುವ ಸಾಧ್ಯತೆ ಇದೆ. ಮದುವೆಯ ಬಗ್ಗೆ ರಘು ಅವರೇ ತಮ್ಮ ಫೇಸ್‍ಬುಕ್ ನಲ್ಲಿ ತಿಳಿಸಿದ್ದಾರೆ.

    ರಘು ಮತ್ತು ಅಮೃತಾ ಅವರು ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಇವರಿಬ್ಬರು ಈ ಹಿಂದೆ ಒಟ್ಟಿಗೆ ‘ಮಿ. ಆ್ಯಂಡ್ ಮಿಸಸ್ ರಂಗೇಗೌಡ’ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿ ಪ್ರೇಕ್ಷಕರ ಮನೆ ಗೆದ್ದಿದ್ದರು. ಜೋಡಿ ಐಶ್ವರ್ಯ ಮತ್ತು ರಂಗೇಗೌಡ ಪಾತ್ರವನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಇವರಿಬ್ಬರಿಗೆ ‘ಬೆಸ್ಟ್ ಜೋಡಿ’ ಅವಾರ್ಡ್ ಕೂಡ ಬಂದಿತ್ತು.

    ನಾವಿಬ್ಬರು ಒಟ್ಟಿಗೆ ‘ಮಿ. ಆ್ಯಂಡ್ ಮಿಸಸ್ ರಂಗೇಗೌಡ’ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದು, ದಂಪತಿಯ ಪಾತ್ರ ಮಾಡಿದ್ದೇವೆ. ಶೂಟಿಂಗ್ ವೇಳೆ ಸಮಯ ಸಿಕ್ಕಾಗ ಮಾತನಾಡುತ್ತಿದ್ದೇವು. ನಾವು ಹಲವು ವರ್ಷಗಳ ಕಾಲ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದೆವು. ಆದರೆ ಧಾರಾವಾಹಿ ಮುಗಿದ ಬಳಿಕ ಇಬ್ಬರು ಬೇರೆ ಬೇರೆ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದೆವು. ಕೊನೆಗೆ ಒಂದು ದಿನ ಇಬ್ಬರು ಭೇಟಿಯಾಗಿ ಪರಸ್ಪರ ನಮ್ಮ ಭಾವನೆಗಳನ್ನು ಹಂಚಿಕೊಂಡಿದ್ದೆವು ಎಂದು ರಘು ಹೇಳಿದ್ದಾರೆ.

    ನನ್ನ ಜೀವನದಲ್ಲಿ ಅಮೃತಾ ಬರುತ್ತಾರೆ ಎಂದುಕೊಂಡಿರಲಿಲ್ಲ. ಅವರು ವೃತ್ತಿ ಜೀವನದಲ್ಲಿ, ವೈಯಕ್ತಿಕ ಜೀವನದಲ್ಲೂ ಸದಾ ನನ್ನ ಬೆಂಬಲಕ್ಕೆ ನಿಂತಿದ್ದರು. ನಾವಿಬ್ಬರು ಪರಸ್ಪರ ಒಬ್ಬೊಬ್ಬರನ್ನು ಅರ್ಥ ಮಾಡಿಕೊಂಡ ಬಳಿಕ ಮದುವೆಯಾಗಬೇಕು ಎಂದು ನಿರ್ಧಾರ ಮಾಡಿದ್ದೆವು. ಕೊನೆಗೆ ನಮ್ಮ ಕುಟುಂಬಕ್ಕೆ ಪ್ರೀತಿ ವಿಚಾರವನ್ನು ತಿಳಿಸಿ ಅವರಿಂದ ಒಪ್ಪಿಗೆ ಪಡೆದು ಗುರು-ಹಿರಿಯ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ರಘು ತಮ್ಮ ಪ್ರೀತಿ ಪಯಣದ ಬಗ್ಗೆ ತಿಳಿಸಿದ್ದಾರೆ.

    ಸದ್ಯಕ್ಕೆ ಇಬ್ಬರು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಒಂದು ವೇಳೆ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರೆ ನಟನೆ ಮಾಡುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಲಘಟಗಿಯಲ್ಲಿ ಲಾಡ್‍ಗೆ ಮತ್ತೆ ತರಾಟೆ – ಮೈಸೂರಿನಲ್ಲಿ ಖರ್ಗೆಗೆ ಪ್ರಶ್ನೆಗಳ ಸುರಿಮಳೆ – ಸಿವಿ ರಾಮನ್‍ನಗರ ಶಾಸಕರಿಗೆ ಫುಲ್ ಕ್ಲಾಸ್

    ಕಲಘಟಗಿಯಲ್ಲಿ ಲಾಡ್‍ಗೆ ಮತ್ತೆ ತರಾಟೆ – ಮೈಸೂರಿನಲ್ಲಿ ಖರ್ಗೆಗೆ ಪ್ರಶ್ನೆಗಳ ಸುರಿಮಳೆ – ಸಿವಿ ರಾಮನ್‍ನಗರ ಶಾಸಕರಿಗೆ ಫುಲ್ ಕ್ಲಾಸ್

    ಮೋದಿ 15 ಲಕ್ಷ ಅಕೌಂಟ್‍ಗೆ ಹಾಕಿದ್ನಾ- ಏಕವಚನದಲ್ಲೇ ಗ್ರಾಮಸ್ಥರಿಂದ ಸಂತೋಷ್ ಲಾಡ್ ಗೆ ಪ್ರಶ್ನೆ

    ಬೆಂಗಳೂರು: ಸಚಿವ ಸಂತೋಷ್ ಲಾಡ್ ಕಲಘಟಗಿ ಕ್ಷೇತ್ರದ ಪ್ರಚಾರಕ್ಕೆ ಹೋದಾಗಲೆಲ್ಲಾ ತೀವ್ರ ಮುಖಭಂಗ ಅನುಭವಿಸ್ತಿದ್ದಾರೆ. ಗ್ರಾಮದ ಸಮಸ್ಯೆಗಳನ್ನ ಇತ್ಯಥ್ರ್ಯ ಮಾಡಿಲ್ಲ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಮೋದಿ ಮೋದಿ ಅಂತ ಘೋಷಣೆ ಕೂಗಿದ್ದಕ್ಕೆ ಸಿಟ್ಟಾದ ಲಾಡ್, ಮೋದಿ 15 ಲಕ್ಷ ಅಕೌಂಟ್‍ಗೆ ಹಾಕಿದ್ನಾ ಎಂದು ಏಕವಚನದಲ್ಲೇ ಪ್ರಶ್ನಿಸಿದ್ರು. ಈ ವೇಳೆ ಲಾಡ್ ಹಾಗೂ ಗ್ರಾಮಸ್ಥರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

    ಮೈಸೂರಿನಲ್ಲಿ ರೋಡ್‍ಶೋ ನಡೆಸುತ್ತಿದ್ದ ಮಲ್ಲಿಕಾರ್ಜುನ್ ಖರ್ಗೆಗೆ ಸ್ಥಳೀಯ ದಲಿತ ಮುಖಂಡರು ಪ್ರಶ್ನೆಗಳ ಸುರಿಮಳೆಗೈದ್ರು. ಎಲ್ಲಾ ಕ್ಷೇತ್ರದಲ್ಲಿ ದಲಿತರು ಕಾಂಗ್ರೆಸ್‍ಗೆ ವೋಟ್ ಹಾಕ್ತೀವಿ. ಆದ್ರೆ ಪರಮೇಶ್ವರ್ ಕ್ಷೇತ್ರದಲ್ಲಿ ಸಿಎಂ ಸಮುದಾಯದವರು ಯಾಕೆ ಕಾಂಗ್ರೆಸ್‍ಗೆ ವೋಟ್ ಹಾಕಲ್ಲ ಅಂತ ಪ್ರಶ್ನಿಸಿದ್ರು. ಅಶೋಕಪುರಂನಲ್ಲಿ ಖರ್ಗೆ ಪ್ರಚಾರ ವಾಹನ ತಡೆದ ಯುವಕನೊಬ್ಬ ದಲಿತ ಮುಖ್ಯಮಂತ್ರಿಗಾಗಿ ಆಗ್ರಹಿಸಿದ್ರು.

    ಇತ್ತ ಬೆಂಗಳೂರಿನ ಸಿವಿ ರಾಮನ್‍ನಗರದಲ್ಲಿ ವೋಟ್ ಕೇಳಲು ಹೋದ ಬಿಜೆಪಿ ಅಭ್ಯರ್ಥಿ, ಶಾಸಕ ರಘು ಅವರಿಗೆ ಜನ ಚಳಿ ಬಿಡಿಸಿದ್ರು. ಎಲೆಕ್ಷನ್ ಟೈಂನಲ್ಲಿ ಮನೆ ಹುಡ್ಕೊಂಡು ಬರ್ತೀರಾ, ಬೇರೆ ಟೈಂನಲ್ಲಿ ಕೈಗೆ ಸಿಗಲ್ಲ ಅಂತಾ ಜನ ಗರಂ ಆದ್ರು. ಈ ವೇಳೆ ಶಾಸಕರು ಬಾಯ್ತಪ್ಪಿ ವೋಟು ಬೇಡ ಹೋಗ್ರಿ ಅಂದಿದ್ದಾರೆ. ಕೊನೆಗೆ ಜನ್ರ ಆಕ್ರೋಶಕ್ಕೆ ಬೆದರಿದ ಶಾಸಕರು ಸ್ಥಳದಿಂದ ಕಾಲ್ಕಿತ್ತರು.

  • ಜಾಹಿರಾತು ಫಲಕಕ್ಕೆ ಬೈಕ್ ಡಿಕ್ಕಿಯಾಗಿ ಟೆಕ್ಕಿ ಸಾವು- Who Killed Ragu? ಈಗ ವೈರಲ್

    ಜಾಹಿರಾತು ಫಲಕಕ್ಕೆ ಬೈಕ್ ಡಿಕ್ಕಿಯಾಗಿ ಟೆಕ್ಕಿ ಸಾವು- Who Killed Ragu? ಈಗ ವೈರಲ್

     

    ಚೆನ್ನೈ: ಜಾಹಿರಾತು ಫಲಕಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ 30 ವರ್ಷದ ಟೆಕ್ಕಿಯೊಬ್ಬರು ಸಾವನ್ನಪ್ಪಿದ ಘಟನೆ ಕಳೆದ ಶುಕ್ರವಾರ ತಮಿಳುನಾಡಿನಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಹೂ ಕಿಲ್ಡ್ ರಘು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಎದ್ದಿದ್ದು, ಇದೀಗ ವೈರಲ್ ಆಗಿದೆ.

    ಮದುವೆಗೆ ಹುಡುಗಿಯನ್ನ ನೋಡಲು ಅಮೆರಿಕದಿಂದ ತಮಿಳುನಾಡಿನ ಕೊಯಮತ್ತೂರಿನ ತನ್ನ ಮನೆಗೆ ಹಿಂದಿರುಗಿದ್ದ 30 ವರ್ಷದ ಸಾಫ್ಟ್‍ವೇರ್ ಎಂಜಿನಿಯರ್ ರಘುಪತಿ ಕಂದಸ್ವಾಮಿ ಮೃತ ದುರ್ದೈವಿ. ಎಂಜಿಆರ್ ಶತಮಾನೋತ್ಸವ ಆಚರಣೆಗಾಗಿ ಎಐಎಡಿಎಂಕೆ ಪಕ್ಷದವರು ದೊಡ್ಡದಾದ ಜಾಹಿರಾತು ಫಲಕವನ್ನು ಹಾಕಿದ್ದರು. ಇದಕ್ಕಾಗಿ ಮರದ ಕೋಲುಗಳಿಂದ ಕಮಾನಿನಂತೆ ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಗುದ್ದಿದ ಪರಿಣಾಮ ರಘು ಬೈಕಿನಿಂದ ಕೆಳಗೆ ಬಿದ್ದಿದ್ದು, ಅವರ ಮೇಲೆ ಟ್ರಕ್ ಹರಿದು ಸಾವನ್ನಪ್ಪಿದ್ದರು.

    ವಾರಾಂತ್ಯದ ವೇಳೆಗೆ ರಘು ಅಮೆರಿಕಗೆ ಹಿಂದಿರುಗಬೇಕಿತ್ತು. ಘಟನೆ ನಡೆದ ವೇಳೆ ರಘು ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ರಘು ತನ್ನ ಬೈಕ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಅಲ್ಲಿಂದ ಬಸ್‍ನಲ್ಲಿ ದೇವಸ್ಥಾನಕ್ಕೆ ಹೋಗಬೇಕೆಂದಿದ್ದರು ಎಂದು ವರದಿಯಾಗಿದೆ.

    ಅಪಘಾತ ನಡೆದ ಕೆಲವು ಗಂಟೆಗಳ ನಂತರ ಯಾರೋ ಒಬ್ಬರು ಘಟನಾ ಸ್ಥಳದಲ್ಲಿ “ಹೂ ಕಿಲ್ಡ್ ರಘು” ಎಂದು ಬಿಳಿ ಪೇಂಟ್‍ನಿಂದ ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ರಘು ಅವರ ಬೈಕ್ ಗುದ್ದಿದ ಮರದ ಕಮಾನು ರಸ್ತೆಯ ಎರಡೂ ಬದಿಯಲ್ಲಿ ಸ್ಥಳವನ್ನ ಆವರಿಸಿತ್ತು. ಅದರ ಒಂದು ಭಾಗಕ್ಕೆ ಬೈಕ್ ಗುದ್ದಿದ್ದು, ರಘು ಬೈಕಿನಿಂದ ಕೆಳಗೆ ಬಿದ್ದಿದ್ದಾರೆ. ಕೊಯಮತ್ತೂರಿನ ಅವಿನಾಶಿ ರಸ್ತೆಯಲ್ಲಿ ಹಾಕಲಾಗಿದ್ದ ಈ ಜಾಹಿರಾತು ಫಲಕ ರಸ್ತೆಯ 30% ಜಾಗವನ್ನ ಆವರಿಸಿತ್ತು ಎಂದು ಹೋರಾಟಗಾರರು ಆರೋಪಿಸಿದ್ದಾರೆ.

    ಶನಿವಾರದಂದು ಕೊಯಮತ್ತೂರು ಕಾರ್ಪೊರೇಷನ್‍ನ ಕಮಿಷಕನರ್ ಎಲ್ಲಾ ಫಲಕಗಳನ್ನ ತೆಗೆದುಹಾಕುವಂತೆ ಸೂಚಿಸಿದ್ದಾರೆ. ಫಲಕಗಳನ್ನ ಹಾಕಲು ಯಾವುದೇ ಅನುಮತಿ ಇರಲಿಲ್ಲ. ಇದು ಅಕ್ರಮ ಎಂದು ಹೇಳಿದ್ದಾರೆ.

    ರಾಜ್ಯ ಸರ್ಕಾರ ಹಾಗೂ ಎಐಎಡಿಎಂಕೆ ಕಾರ್ಯಕರ್ತರು ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಿಎಂ ಎಂಜಿ ರಾಮಚಂದ್ರನ್ ಅವರ 100ನೇ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದ್ದಾರೆ.