Tag: ರಂಪಾಟ

  • ಕಾಸು ಕೊಡದಿದ್ರೆ ಬೀದಿ ರಂಪಾಟ- ಕಾರನ್ನು ಅಡ್ಡಗಟ್ಟಿ ಕಾಟ ಕೊಟ್ಟ ಕುಡುಕ

    ಕಾಸು ಕೊಡದಿದ್ರೆ ಬೀದಿ ರಂಪಾಟ- ಕಾರನ್ನು ಅಡ್ಡಗಟ್ಟಿ ಕಾಟ ಕೊಟ್ಟ ಕುಡುಕ

    ಬೆಂಗಳೂರು: ಗಾಂಜಾ, ಮದ್ಯ ಹೀಗೆ ದುಷ್ಚಟಗಳಿಗೆ ದಾಸನಾಗಿರುವ ವ್ಯಕ್ತಿಯೋರ್ವ ರಸ್ತೆ ಮಧ್ಯೆ ಮಲಗಿ, ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ಹಣ ನೀಡುವಂತೆ ಕಾಟ ಕೊಟ್ಟ ಘಟನೆ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ.

    ನೆಲಮಂಗಲ ಪಟ್ಟಣದ ಕೆಇಬಿ ಆಂಜನೇಯ ದೇವಾಲಯದ ರಸ್ತೆಯಲ್ಲಿ ಕುಡುಕ ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದಾನೆ. ರಸ್ತೆಯಲ್ಲಿ ಬರುವ ಕಾರು, ಬೈಕ್‍ಗಳಿಗೆ ಅಡ್ಡ ಮಲಗಿ ಹಣಕ್ಕೆ ಬೇಡಿಕೆ ಇಟ್ಟು ತೊಂದರೆ ಕೊಡುತ್ತಾ, 100 ರೂ. ಕೊಡುವವರೆಗೂ ಬಿಡದೇ ರಂಪಾಟ ಮಾಡಿ ಹಣ ತೆಗೆದುಕೊಳ್ಳುತ್ತಾನೆ. ಒಂದು ವೇಳೆ ಆತ ಕೇಳಿದಾಗ ಹಣ ನೀಡದಿದ್ದರೆ ಬೀದಿ ರಂಪಾಟ ಮಾಡಿ ಗಲಾಟೆ ಮಾಡುತ್ತಾನೆ. ಹೀಗಾಗಿ ಈತನ ಕಾಟ ತಾಳಲಾರದೆ ಜನರು ಹಣ ಕೊಟ್ಟು ದಯವಿಟ್ಟು ಕಾಟ ಕೊಡಬೇಡಪ್ಪ ಎಂದು ಜಾಗ ಖಾಲಿ ಮಾಡುತ್ತಾರೆ.

    ಪ್ರತಿನಿತ್ಯ ಈ ವ್ಯಕ್ತಿಯದ್ದು ಇದೇ ಗೋಳಾಗಿ ಬಿಟ್ಟಿದೆ. ಈತನ ಪುಂಡಾಟದಿಂದ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಗಾಂಜಾ ಇನ್ನಿತರ ಮಾದಕವಸ್ತುಗೆ ಯುವಕರು ಮಾರು ಹೋಗಿದ್ದು, ನಶೆಯಲ್ಲಿ ಈ ರೀತಿ ಬೀದಿ ರಂಪಾಟ ಮಾಡಿ ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದಾರೆ.

  • ಮದ್ವೆ ಮನೆಯಲ್ಲಿ ಮಾಜಿ ಪ್ರಿಯಕರನ ಕಾಲು ಹಿಡಿದು ಗೋಳಾಡಿ ಯುವತಿಯಿಂದ ಹೈಡ್ರಾಮಾ – ವಿಡಿಯೋ

    ಮದ್ವೆ ಮನೆಯಲ್ಲಿ ಮಾಜಿ ಪ್ರಿಯಕರನ ಕಾಲು ಹಿಡಿದು ಗೋಳಾಡಿ ಯುವತಿಯಿಂದ ಹೈಡ್ರಾಮಾ – ವಿಡಿಯೋ

    ಬೀಜಿಂಗ್: ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಮದುವೆಗೆ ವಧುವಿನ ರೀತಿ ಬಂದು, ಆತನ ಕಾಲು ಹಿಡಿದು ಗೋಳಾಡಿ ಹೈಡ್ರಾಮಾ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಚೀನಾದ ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಮದುವೆಗೆ ಬಂದು ಹೈಡ್ರಾಮಾ ಮಾಡಿದ್ದಾಳೆ. ಮದುವೆಯ ಶುಭಕಾರ್ಯ ನಡೆಯುತ್ತಿದ್ದ ವೇಳೆ ವಧು-ವರರು ನಿಂತಿದ್ದ ವೇದಿಕೆಯಲ್ಲೇ ರಂಪಾಟ ಮಾಡಿದ್ದಾಳೆ. ತನ್ನ ಮಾಜಿ ಪ್ರಿಯಕರ ಬೇರೊಬ್ಬ ಯುವತಿಯೊಂದಿಗೆ ಮದುವೆ ಮಾಡಿಕೊಳ್ಳುವುದನ್ನು ಸಹಿಸಲಾಗದೇ ಯುವತಿ ಈ ರೀತಿ ಮಾಡಿದ್ದಾಳೆ. ತಾನೂ ಕೂಡ ಮದುಮಗಳ ರೀತಿ ರೆಡಿಯಾಗಿ ಬಂದಿದ್ದ ಯುವತಿ, ಮದುವೆ ಸಮಾರಂಭದಲ್ಲಿ ಎಲ್ಲರ ಮುಂದೆಯೇ ಪ್ರಿಯಕರನ ಕಾಲು ಹಿಡಿದು ತಪ್ಪಾಯ್ತು ಕ್ಷಮಿಸು, ನನ್ನನ್ನೇ ಮದುವೆಯಾಗು ಎಂದು ಗೋಳಾಡಿದ್ದಾಳೆ.

    ಈ ವೇಳೆ ವಧು ಕೋಪಗೊಂಡು ವೇದಿಕೆಯಿಂದ ಹೋಗಿದ್ದಕ್ಕೆ, ಯುವಕನು ಕೂಡ ಆಕೆಯ ಹಿಂದೆಯೇ ಸಮಾಧಾನ ಪಡಿಸಲು ಹೋಗಿದ್ದಾನೆ. ತನ್ನ ಮಾಜಿ ಪ್ರೇಯಸಿಯ ಗೋಳಾಟಕ್ಕೆ ಕ್ಯಾರೆ ಅನ್ನದೆ ಯುವಕ ಹೋಗಿದ್ದನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದಾರೆ.

    ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಲೈಕ್ ಕೊಟ್ಟಿದ್ದಾರೆ.

    https://www.youtube.com/watch?v=YeofeaxiN1c#action=share

  • ಪೊಲೀಸ್ ಠಾಣೆಯ ಎದುರು ಮಲಗಿ ಬಿಜೆಪಿ ನಾಯಕನ ರಂಪಾಟ!

    ಪೊಲೀಸ್ ಠಾಣೆಯ ಎದುರು ಮಲಗಿ ಬಿಜೆಪಿ ನಾಯಕನ ರಂಪಾಟ!

    ತುಮಕೂರು: ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡರು ಪೊಲೀಸ್ ಠಾಣೆಯ ಮುಂದೆ ಮಲಗಿ ಪ್ರತಿಭಟನೆ ಮಾಡಿದ್ದು, ಚಿಕ್ಕಪುಟ್ಟ ವಿಚಾರಕ್ಕೆಲ್ಲ ಪ್ರತಿಭಟನೆ ನಡೆಸಿ ಪೊಲೀಸರಿಗೆ ತೊಂದರೆ ಮಾಡಿದ್ದಾರೆ.

    ಬಿಜೆಪಿ ಮುಖಂಡನನ್ನು ಜಿಲ್ಲೆಯ ಕ್ಯಾತಸಂದ್ರದ ಪೊಲೀಸರು ದೂರೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆತಂದಿದ್ದರು. ಇದರಿಂದ ಸಿಡಿಮಿಡಿಗೊಂಡ ಬಿ. ಸುರೇಶ್ ಗೌಡ, ಕ್ಯಾತಸಂದ್ರದ ಪೊಲೀಸ್ ಠಾಣೆಯ ದ್ವಾರದ ಮೆಟ್ಟಿಲಿನಲ್ಲಿ ಮಲಗಿ ಅತಿರೇಕದ ಪ್ರತಿಭಟನೆ ಮಾಡಿದ್ದಾರೆ.

    ದ್ವಾರದಲ್ಲಿ ಮಲಗಿದಲ್ಲದೆ ಪಿಎಸ್‍ಐ ರಾಜು ಅವರನ್ನು ಒಳಗೆ ಬಿಡದೆ ಕೆಲಕಾಲ ಹೊರಗಡೆಯೇ ನಿಲ್ಲುವಂತೆ ಮಾಡಿ ಪೊಲೀಸರಿಗೆ ತೊಂದರೆಯನ್ನು ನೀಡಿದ್ದಾರೆ. ಬಳಿಕ ಬಿಜೆಪಿ ಕಾರ್ಯಕರ್ತ ಹನುಮಂತರಾಜು ಅವರನ್ನು ಬಿಟ್ಟುಕಳಿಸುವ ಭರವಸೆ ನೀಡಿದಾಗ ಮಲಗಿದ್ದ ಗೌಡರು ಎದ್ದು ಪಿಎಸ್‍ಐ ಅವರನ್ನು ಒಳಗಡೆ ಬಿಟ್ಟಿದ್ದಾರೆ.

    ತಾಲೂಕು ಪಂಚಾಯ್ತಿಯ ಬಿಜೆಪಿ ಮಾಜಿ ಸದಸ್ಯ ಹನುಮಂತರಾಜು ವಿರುದ್ಧ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಶಿವು ಎಂಬವರ ನಡುವೆ ಪೈಪ್ ಲೈನ್ ವಿಚಾರದಲ್ಲಿ ಗಲಾಟೆ ನಡೆದಿತ್ತು. ಆದ್ದರಿಂದ ಶಿವು ಅವರು ಹನುಮಂತರಾಜು ಅವರ ಮೇಲೆ ದೂರು ನೀಡಿದ್ದರು. ಹೀಗಾಗಿ ಹನುಮಂತರಾಜು ಅವರನ್ನು ಪೊಲೀಸರು ವಿಚಾರಣೆಗೆ ಠಾಣೆಗೆ ಕರೆದುಕೊಂಡು ಹೋಗಿದ್ದರು.

    ಜೆಡಿಎಸ್ ಶಾಸಕ ಗೌರಿಶಂಕರ್ ಒತ್ತಡದಿಂದ ಬಿಜೆಪಿ ಮುಖಂಡನ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ ಅನ್ನೋದು ಸುರೇಶ್ ಗೌಡರ ಆರೋಪವಾಗಿತ್ತು. ಅದಕ್ಕಾಗಿಯೆ ತಮ್ಮ ಪಕ್ಷದವರನ್ನು ಬಿಡಿಸಲು ಸುರೇಶ್ ಗೌಡ ಅವರು ಈ ರೀತಿ ರಂಪಾಟ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳಾ ಕಂಡಕ್ಟರ್‌ಗಳ ಅರ್ಧ ಗಂಟೆ ಬೀದಿ ರಂಪಾಟ- ವಿಡಿಯೋ ವೈರಲ್

    ಮಹಿಳಾ ಕಂಡಕ್ಟರ್‌ಗಳ ಅರ್ಧ ಗಂಟೆ ಬೀದಿ ರಂಪಾಟ- ವಿಡಿಯೋ ವೈರಲ್

    ಗದಗ: ಪಾಳಿ ವಿಷಯಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳಾ ಕಂಡಕ್ಟರ್‌ಗಳು  ಬೀದಿ ರಂಪಾಟ ಮಾಡಿಕೊಂಡ ಘಟನೆ ಗದಗನ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆ ನಡೆದ ಈ ಬೀದಿ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ಸಾರ್ವಜನಿಕರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ನಗರ ಸಾರಿಗೆಯ ಇಬ್ಬರು ನಿರ್ವಾಹಕಿಯರು ಪಾಳಿಯ ವಿಷಯಕ್ಕೆ ಬಾಯಿಗೆ ಬಂದಂತೆ ಅವಾಚ್ಯ ಪದಗಳನ್ನು ಬಳಸಿ ಬೈದಾಡಿಕೊಂಡಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಿತ್ತಾಡಿಕೊಂಡ ಮಹಿಳಾ ಕಂಡಕ್ಟರ್‌ಗಳ ಈ ಬೀದಿ ರಂಪಾಟಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಅಷ್ಟೇ ಅಲ್ಲದೆ ಎರಡು ಬಸ್ಸುಗಳಲ್ಲಿ ಇದ್ದ ಪ್ರಯಾಣಿಕರು ಯಾಕಾದರೂ ಈ ಸರ್ಕಾರಿ ಬಸ್ ಏರಿದೆ ಅಂತ ಕಿಡಿಕಾರಿದ್ದಾರೆ. ನಿರ್ವಾಹಕಿಯರ ಹಾದಿ ರಂಪಾಟ ನೋಡಿದ ಮೇಲಾಧಿಕಾರಿಗಳು ಇಬ್ಬರಿಗೂ ಕ್ಲಾಸ್ ತೆಗೆದುಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

    https://www.youtube.com/watch?v=efo0zDEVT-w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಿಯುಸಿಯಲ್ಲಿ ಮಗ ಫೇಲಾಗಿದ್ದಕ್ಕೆ ಕಾಲೇಜ್ ಪ್ರಾಂಶುಪಾಲರ ಚೆಂಬರ್ ನಲ್ಲಿ ತಾಯಿ ರಂಪಾಟ!

    ಪಿಯುಸಿಯಲ್ಲಿ ಮಗ ಫೇಲಾಗಿದ್ದಕ್ಕೆ ಕಾಲೇಜ್ ಪ್ರಾಂಶುಪಾಲರ ಚೆಂಬರ್ ನಲ್ಲಿ ತಾಯಿ ರಂಪಾಟ!

    ಧಾರವಾಡ: ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಮಗ ಅನುತ್ತೀರ್ಣನಾದ ಕಾರಣ ತಾಯಿ ಕಾಲೇಜ್ ಪ್ರಾಂಶುಪಾಲರ ಚೆಂಬರ್ ನಲ್ಲಿ ರಂಪಾಟ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ರಾಹುಲ್ ಕುಲಕರ್ಣಿ ಎಂಬ ವಿದ್ಯಾರ್ಥಿಯ ತಾಯಿ ರಮಾ ಕುಲಕರ್ಣಿಯೇ ರಂಪಾಟ ಮಾಡಿದವರು. ಧಾರವಾಡ ಕೆಸಿಡಿ ಕಾಲೇಜಿನ ಪ್ರಥಮ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ರಾಹುಲ್ ಎರಡು ವಿಷಯದಲ್ಲಿ ಫೇಲಾಗಿದ್ದಾನೆ.

    ಇದನ್ನೇ ನೆಪ ಇಟ್ಟುಕೊಂಡು ರಾಹುಲ್ ತಾಯಿ ರಮಾ ಕುಲಕರ್ಣಿ ಅವರು ಗುರುವಾರ ಕೆಸಿಡಿ ಕಾಲೇಜಿನ ಪ್ರಾಂಶುಪಾಲರ ಕಚೇರಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ಪ್ರಾಂಶುಪಾಲರಿಗೆ ಬೈದಿದ್ದಾರೆ. ಇನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಕೂಡಾ ಅಪಮಾನ ಮಾಡಿರುವ ರಮಾ ಕುಲಕರ್ಣಿ ತನ್ನ ಮಗನನ್ನ ಪಾಸ್ ಮಾಡುವಂತೆ ಬೇಡಿಕೆಯಿಟ್ಟು ರದ್ದಾಂತ ಮಾಡಿದ್ದಾರೆ.

    ಘಟನೆ ಸಂಬಂಧ ರಮಾ ಕುಲಕರ್ಣಿ ಮೇಲೆ ಉಪನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿರುವ ಕರ್ನಾಟಕ ವಿವಿ ಅಧಿಕಾರಿ ಮಂಡಳಿ, ಅವರ ಮೇಲೆ ಕ್ರಮ ಕೈಗೊಳ್ಳಲು ಕೋರಿದ್ದಾರೆ. ಸದ್ಯ ಪೊಲೀಸರು ರಮಾ ಅವರನ್ನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ.

    ಇನ್ನು ಈ ರಮಾ ಕುಲಕರ್ಣಿ ಚುನಾವಣೆಯಲ್ಲಿ ಧಾರವಾಡ ಪಶ್ಚಿಮ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಕೂಡಾ ಆಗಿದ್ದಾರೆ ಎನ್ನಲಾಗಿದೆ.

  • ರಸ್ತೆಯಲ್ಲೇ ರಂಪಾಟ ನಡೆಸಿ ಜನರಲ್ಲಿ ಆತಂಕ ಮೂಡಿಸಿದ್ದ ಹುಚ್ಚು ಕುದುರೆಗಳು ಸೆರೆ

    ರಸ್ತೆಯಲ್ಲೇ ರಂಪಾಟ ನಡೆಸಿ ಜನರಲ್ಲಿ ಆತಂಕ ಮೂಡಿಸಿದ್ದ ಹುಚ್ಚು ಕುದುರೆಗಳು ಸೆರೆ

    ಮೈಸೂರು: ಜೋಡಿ ಹುಚ್ಚು ಕುದುರೆಗಳು ರಂಪಾಟ ಮಾಡಿ ಜನರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ಈ ಜೋಡಿ ಕುದುರೆಗಳು ಅರಸು ರಸ್ತೆಯಿಂದ ಚಾಮರಾಜ ಜೋಡಿ ರಸ್ತೆವರೆಗೆ ಹುಚ್ಚೆದ್ದು ಓಡಾಡಲು ಪ್ರಾರಂಭಿಸಿವೆ. ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆಲ್ಲಾ ಕಚ್ಚುತ್ತಾ ರಂಪಾಟ ಮಾಡಿವೆ. ಇನ್ನು ಜನರು ಕುದುರೆಗಳ ಹುಚ್ಚಾಟಕ್ಕೆ ಭಯಭೀತರಾಗಿ ದಿಕ್ಕು ಪಾಲಾಗಿ ಓಡಿದ್ದಾರೆ. ಕುದರೆ ದಾಳಿಯಿಂದ ಕೆಲವರು ಗಾಯಗೊಂಡಿದ್ದಾರೆ.

    ಸ್ಥಳೀಯರು ತಕ್ಷಣ ಎಚ್ಚೆತ್ತುಕೊಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಪೊಲೀಸರು ಹಾಗೂ ಪಾಲಿಕೆ ಸಿಬ್ಬಂದಿ ಮಾಹಿತಿ ತಿಳಿದು ಕಾರ್ಯಚರಣೆ ಆರಂಭಿಸಿದ್ದಾರೆ. ಆ ಜೋಡಿ ಹುಚ್ಚು ಕುದುರೆಗಳನ್ನು ಸೆರೆ ಹಿಡಿಯಲು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಪಾಲಿಕೆಯ ಅಭಯ ತಂಡದವರು ಜೋಡಿ ಕುದುರೆಗಳನ್ನು ಸೆರೆ ಹಿಡಿದು ಸಾರ್ವಜನಿಕರ ಆತಂಕವನ್ನು ದೂರು ಮಾಡಿದ್ದಾರೆ.