Tag: ರಂಗನಾಯಕ ಸಿನಿಮಾ

  • ಸ್ನೇಹಿತರ ನಿವೃತ್ತಿ ನೆನಪಿಸಿ, ಆರೋಗ್ಯದಿಂದಿರಲು ಟಿಪ್ಸ್ ಕೊಟ್ಟ ಜಗ್ಗೇಶ್

    ಸ್ನೇಹಿತರ ನಿವೃತ್ತಿ ನೆನಪಿಸಿ, ಆರೋಗ್ಯದಿಂದಿರಲು ಟಿಪ್ಸ್ ಕೊಟ್ಟ ಜಗ್ಗೇಶ್

    ಹಿರಿಯ ನಟ ಜಗ್ಗೇಶ್ ಅವರಿಗೆ 59 ವರ್ಷ ವಯಸ್ಸಾಗಿದೆ. ಅವರ ಸ್ನೇಹಿತರು ಒಂದು ವರ್ಷದ ಹಿಂದಿಯೇ ನಿವೃತ್ತಿಯಾಗಿದ್ದಾರೆ. ಹೀಗೊಂದು ಅಚ್ಚರಿಯ ಬರಹವನ್ನು ಪ್ರಕಟಿಸಿ ಮಾನಸಿಕ ನೆಮ್ಮದಿಯ ಬಗ್ಗೆ ಹಲವು ಟಿಪ್ಸ್ ಕೊಟ್ಟಿದ್ದಾರೆ ನಟ ಜಗ್ಗೇಶ್. ಇದನ್ನೂ ಓದಿ : ಮೇ 11ಕ್ಕೆ ನಟಿ ಮಮತಾ ರಾವುತ್ ಮದುವೆ : ಡಾಕ್ಟರ್ ಜತೆ ಸಪ್ತಪದಿ ತುಳಿಯಲಿರುವ ನಟಿ

    ಸದಾ ನಗಿಸುತ್ತಲೇ ಜಗತ್ತಿನ ಜಂಜಡ ಮರೆಯುವಂತೆ ಮಾಡುವ ಜಗ್ಗೇಶ್, ಈ ವಯಸ್ಸಿನಲ್ಲೂ ಜಿಮ್ ನಲ್ಲಿ ಕೆಲವು ಹೊತ್ತು ಕಳೆಯುತ್ತಾರೆ. ಅದೆಷ್ಟೇ ಶೂಟಿಂಗ್ ಒತ್ತಡವಿದ್ದರೂ, ವ್ಯಾಯಾಮ ಮರೆಯುವುದಿಲ್ಲ. ಹಲವು ಕಿಲೋ ಮೀಟರ್ ನಡೆದುಕೊಂಡೇ ಹೋಗಿ ಬಿಡುತ್ತಾರೆ. ಜತೆಗೆ ತಾವು ಕಂಡುಕೊಂಡ ಆರೋಗ್ಯ ಪದ್ಧತಿಯನ್ನು ಅಭಿಮಾನಿಗಳಿಗೆ ಹೇಳುತ್ತಲೇ ಇರುತ್ತಾರೆ. ಈ ಬಾರಿಯೂ ಅದನ್ನೇ ಮಾಡಿದ್ದಾರೆ. ಇದನ್ನೂ ಓದಿ : ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

    ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಜಗ್ಗೇಶ್, ‘ನನ್ನ ಅನೇಕ ಸ್ನೇಹಿತರು ಅವರ ಕಾರ್ಯಕ್ಷೇತ್ರದಿಂದ ನಿವೃತ್ತಿಯಾಗಿ 1 ವರ್ಷ ಆಗಿದೆ. 59 ವರ್ಷದಕ್ಕೆ ಅವರವರ ಮಕ್ಕಳು ಅವರವರ ಮಕ್ಕಳು ಸಂಸಾರ ಎಂದು ಪಕ್ಕ ಸರಿದು ಬದುಕುತ್ತಿದ್ದಾರೆ. ಅದು ಜಗತ್ತಿನ ನಿಯಮ. ಇಷ್ಟಕ್ಕೆ ಜಗತ್ತು ಶೂನ್ಯವಾದಂತೆ 59 ನೇ ವಯಸ್ಸಿಗೆ ಮಾನಸಿಕ ಒತ್ತಡದಿಂದ ಬಳಲಿ ಬಿಪಿ, ಡಯಾಬಿಟಿಸ್ ಬರಮಾಡಿಕೊಂಡು ನರಳುತ್ತಿದ್ದಾರೆ. ಅನೇಕ ಸ್ನೇಹಿತರು, ಬಂಧುಗಳು ಮರಣ ಹೊಂದಿದ್ದಾರೆ. ಇದನ್ನು ನೋಡಿದಾಗ, ಕೇಳಿದಾಗ ದುಃಖವಾಗುತ್ತದೆ. ನನ್ನ ಅನಿಸಿಕೆ ಒಪ್ಪುವವರಿಗೆ ಪ್ರೀತಿಯಿಂದ ಒಂದು ಕಿವಿಮಾತು, ಬರುವಾಗ ಒಬ್ಬರೆ, ಹೋಗುವಾಗ ಒಬ್ಬರೆ. ಮತ್ತೆ ಈ ಜಗತ್ತಿಗೆ ಬರುತ್ತೇವೋ ಇಲ್ಲವೋ ಗೊತ್ತಿಲ್ಲ. ಆದರೆ, ಇರುವಾಗ ಇಲ್ಲದರ ಬಗ್ಗೆ ದುಃಖಿಸಿ ಕೊರಗಿ ರೋಗ ಆಹ್ವಾನಿಸಿ ಬದುಕುವ ಬದಲು ಕೆಲಸಕ್ಕೆ ಬಾರದ ಚಿಂತೆಗೆ ಜಾಗ ಕೊಡದೆ ಇದ್ದಿದ್ದರಲ್ಲಿ ಸುಖಿಸಿ, ರಮಿಸಿ, ಆನಂದಿಸಿ’ ಎಂದು ಸುದೀರ್ಘವಾಗಿ ಜಗ್ಗೇಶ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಿಯಲ್ ಸ್ಟಾರ್ ಉಪೇಂದ್ರ ಅಂದರೆ ಸುಮ್ನೇನಾ? ಟಾಲಿವುಡ್ ಸೂಪರ್ ಸ್ಟಾರ್ ಗೆ ಅಣ್ಣನಾದ ಉಪ್ಪಿ

    ಜಗ್ಗೇಶ್ ಸದ್ಯ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮೂರು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಗುರು ಪ್ರಸಾದ್ ನಿರ್ದೇಶನದಲ್ಲಿ ‘ರಂಗನಾಯಕ’, ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ‘ರಾಘವೇಂದ್ರ ಸ್ಟೋರ್ಸ್’ ಮತ್ತು ವಿಜಯ ಪ್ರಸಾದ್ ನಿರ್ದೇಶನದಲ್ಲಿ ‘ತೋತಾಪುರಿ’ ಚಿತ್ರಗಳು ಸಿದ್ಧವಾಗಿವೆ. ಮೂರು ಸಿನಿಮಾದಲ್ಲೂ ಅವರು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ.

  • ಜಗ್ಗೇಶ್ ಹುಟ್ಟು ಹಬ್ಬಕ್ಕೆ ಮೂರು ಸಿನಿಮಾಗಳ ಪೋಸ್ಟರ್ ರಿಲೀಸ್

    ಜಗ್ಗೇಶ್ ಹುಟ್ಟು ಹಬ್ಬಕ್ಕೆ ಮೂರು ಸಿನಿಮಾಗಳ ಪೋಸ್ಟರ್ ರಿಲೀಸ್

    ಪುನೀತ್ ರಾಜ್ ಕುಮಾರ್ ಮತ್ತು ನವರಸ ನಾಯಕ ಜಗ್ಗೇಶ್ ಒಂದೇ ದಿನ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷವೂ ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು ಪುನೀತ್ ಮತ್ತು ಜಗ್ಗೇಶ್. ಈ ವರ್ಷ ಪುನೀತ್ ನಿಧನದಿಂದಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದಿದ್ದಾರೆ ಜಗ್ಗೇಶ್. ಹಾಗಾಗಿ ಇಂದು ಅವರು ಮಂತ್ರಾಲಯದ ರಾಯರ ಮಠದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ.

    ಜಗ್ಗೇಶ್ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದೇ ಇದ್ದರೂ, ಅವರ ಮೂರು ಸಿನಿಮಾಗಳ ಪೋಸ್ಟರ್ ಗಳು ಇಂದು ಬಿಡುಗಡೆ ಆಗಿವೆ. ಮೂರು ವಿಭಿನ್ನ ರೀತಿಯಲ್ಲಿ ಡಿಸೈನ್ ಆಗಿದ್ದು ವಿಶೇಷ. ಸದ್ಯ ಜಗ್ಗೇಶ್ ‘ತೋತಾಪುರಿ’, ‘ರಂಗನಾಯಕ’ ಮತ್ತು ‘ರಾಘವೇಂದ್ರ ಸ್ಟೋರ್ಸ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೂ ಸಿನಿಮಾಗಳ ಪೋಸ್ಟರ್ ಇಂದು ರಿಲೀಸ್ ಆಗಿವೆ.

    ತೋತಾಪುರಿ

    ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ನಗಿಸುತ್ತಲೇ ಒಂದೊಳ್ಳೆ ಭಾವನಾತ್ಮಕ ಕಥೆಯನ್ನು ಈ ಸಿನಿಮಾ ಹೇಳಲಿದೆಯಂತೆ. ಹಿಂದೂ ಮುಸ್ಲಿಂ ಸಾಮರಸ್ಯವನ್ನು ಸಾರುವಂತಹ ಚಿತ್ರ ಕೂಡ ಇದಾಗಿದೆ. ಜಗ್ಗೇಶ್ ಹೀರೋ ಆಗಿ ನಟಿಸಿದ್ದರೆ, ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದಿತಿ ಪ್ರಭುದೇವ್ ನಾಯಕಿ. ಈ ಸಿನಿಮಾ ಎರಡು ಭಾಗದಲ್ಲಿ ಮೂಡಿ ಬರುತ್ತಿರುವುದು ವಿಶೇಷ. ಕೆ.ಎ. ಸುರೇಶ್ ಇದರ ನಿರ್ಮಾಪಕರು. ಇದನ್ನೂ ಓದಿ : ವಿಭಿನ್ನ, ವಿಶಿಷ್ಟ, ಭಾವನಾತ್ಮಕ ಡಿಪಿಗಳಲ್ಲಿ ಪುನೀತ್ ರಾಜ್ ಕುಮಾರ್

    ರಂಗನಾಯಕ

    ಮಠದ ಗುರು ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ನ ಮೂರನೇ ಸಿನಿಮಾ ‘ರಂಗನಾಯಕ’. ಈಗಾಗಲೇ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದೆ. ನಟನೊಬ್ಬನ ಬದುಕಿನ ಕುರಿತಾದ ಸಿನಿಮಾ ಇದಾಗಿದ್ದು, ಜಗ್ಗೇಶ್ ರಂಗನಾಯಕನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಜಗ್ಗೇಶ್ ಮತ್ತು ಗುರು ಪ್ರಸಾದ್ ಮತ್ತೆ ಸಿನಿಮಾ ಮಾಡುವುದಿಲ್ಲ ಎಂಬ ಗಾಂಧಿನಗರದ ಮಾತನ್ನು ಸುಳ್ಳು ಮಾಡಿದ ಚಿತ್ರವಿದು. ವಿಖ್ಯಾತ ಈ ಚಿತ್ರದ ನಿರ್ಮಾಪಕರು. ಇದನ್ನೂ ಓದಿ : ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ

    ರಾಘವೇಂದ್ರ ಸ್ಟೋರ್ಸ್

    ‘ರಾಜಕುಮಾರ’ ಸಿನಿಮಾ ಖ್ಯಾತಿಯ ಸಂತೋಷ್ ಆನಂದ್ ರಾಮ್, ಇದೇ ಮೊದಲ ಬಾರಿಗೆ ಜಗ್ಗೇಶ್ ಗಾಗಿ ಮಾಡಿದ ಚಿತ್ರ ‘ರಾಘವೇಂದ್ರ ಸ್ಟೋರ್ಸ್’. ಅನ್ನದ ಮಹತ್ವವನ್ನು ಇಟ್ಟುಕೊಂಡು ಕಥೆ ಬರೆದಿದ್ದಾರಂತೆ ನಿರ್ದಶಕರು. ಜಗ್ಗೇಶ್ ನಾಯಕನಾದರೆ, ಶ್ವೇತಾ ಶ್ರೀವಾತ್ಸವ್ ನಾಯಕಿ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದ, ಡಬ್ಬಿಂಗ್ ಕೆಲಸವನ್ನೂ ಮುಗಿಸಿದೆ ಚಿತ್ರತಂಡ. ಹೊಂಬಾಳೆ ಫಿಲ್ಮ್ಸ್ ಇದರ ನಿರ್ಮಾಪಕರು.